Homeಮುಖಪುಟಬಿಜೆಪಿ ಪರ ಪ್ರಚಾರ ಮಾಡುತ್ತಿರುವ NEWJ ಫೇಸ್‌ಬುಕ್ ಪೇಜ್: ದುಡ್ಡು ಮಾತ್ರ ಅಂಬಾನಿಯದ್ದು!

ಬಿಜೆಪಿ ಪರ ಪ್ರಚಾರ ಮಾಡುತ್ತಿರುವ NEWJ ಫೇಸ್‌ಬುಕ್ ಪೇಜ್: ದುಡ್ಡು ಮಾತ್ರ ಅಂಬಾನಿಯದ್ದು!

ಮುಸ್ಲಿಂ ವಿರೋಧಿ ಭಾವನೆ ಪ್ರಚೋದಿಸುವುದು ಮತ್ತು ವಿರೋಧ ಪಕ್ಷಗಳನ್ನು ಅವಹೇಳನ ಮಾಡುವ ಸುದ್ದಿಗಳನ್ನು NEWJ ಜಾಹೀರಾತು ರೂಪದಲ್ಲಿ ಫೇಸ್‌ಬುಕ್‌ನಲ್ಲಿ ಪ್ರಕಟಿಸುತ್ತಿದೆ

- Advertisement -
- Advertisement -

ಭಯೋತ್ಪಾದನೆಯಲ್ಲಿ ಭಾಗಿಯಾದ ಆರೋಪ ಹೊತ್ತಿರುವ, ಹಿಂದೂ ಸಾದ್ವಿ ಎಂದು ಕರೆಯಲ್ಪಡುವ ಪ್ರಗ್ಯಾ ಸಿಂಗ್ ಠಾಕೂರ್‌ರವರನ್ನು ಬಿಜೆಪಿ 2019ರ ಲೋಕಸಭಾ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯೆಂದು ಘೋಷಿಸಿತು. ಅವರು ನಾಮಪತ್ರ ಸಲ್ಲಿಸಿದ ಕೂಡಲೇ ಅವರ ಕುರಿತು ಸುದ್ದಿಯಂತಿರುವ “ತಪ್ಪು ಮಾಹಿತಿಯ” ಹೆಡ್‌ಲೈನ್‌ ಇರುವ ವರದಿಯೊಂದನ್ನು ಜಾಹೀರಾತಿನ ರೂಪದಲ್ಲಿ ಫೇಸ್‌ಬುಕ್‌ ಪ್ರಕಟಿಸಿತು.

ಪಶ್ಚಿಮ ಮಹಾರಾಷ್ಟ್ರದ ಮಲೆಂಗಾವ್ ಎಂಬ ಮುಸ್ಲಿಂ ಬಾಹುಳ್ಯದ ನಗರದ ಮಸೀದಿಯೊಂದಕ್ಕೆ ಸ್ಪೋಟಕಗಳನ್ನು ತುಂಬಿದ್ದ ಮೋಟಾರ್‌ ಸೈಕಲ್ ನುಗ್ಗಿಸಿ ಆರು ಜನರ ಸಾವಿಗೆ ಕಾರಣವಾದ ಭಯೋತ್ಪಾದನೆ ಕೃತ್ಯದ ಎಲ್ಲಾ ಆರೋಪಗಳಿಂದ ಪ್ರಗ್ಯಾ ಸಿಂಗ್ ಠಾಕೂರ್ “ಖುಲಾಸೆಯಾಗಿದ್ದಾರೆ” ಎಂದು ಆ ಜಾಹೀರಾತಿನಲ್ಲಿ ತಪ್ಪಾಗಿ ಹೇಳಲಾಗಿತ್ತು. ಆ ವಿಡಿಯೋ ವರದಿಯನ್ನು ಒಂದೇ ದಿನದಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದರು. ಆದರೆ ವಾಸ್ತವದಲ್ಲಿ ಆ ಭಯೋತ್ಪಾದನಾ ಪ್ರಕರಣದಲ್ಲಿ ಪ್ರಗ್ಯಾ ಸಿಂಗ್ ಇಂದಿಗೂ ವಿಚಾರಣೆ ಎದುರಿಸುತ್ತಿದ್ದಾರೆ ಮತ್ತು ಆರೋಗ್ಯ ಚಿಕಿತ್ಸೆಯ ಕಾರಣದಿಂದ ಜಾಮೀನು ಪಡೆದು ಹೊರಬಂದಿದ್ದಲ್ಲದೆ ಚುನಾವಣೆಯಲ್ಲಿ ಜಯಗಳಿಸಿದ್ದಾರೆ.

2019ರ ಲೋಕಸಭಾ ಚುನಾವಣೆಯ ಮತದಾನ ಆರಂಭವಾಗುವ ಒಂದು ತಿಂಗಳ ಮೊದಲು ಏಪ್ರಿಲ್ 11 ರಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವ್ಯಕ್ತಿತ್ವಕ್ಕೆ ಮಸಿ ಬಳಿಯುವಂತಹ ಜಾಹೀರಾತು ಒಂದು ಫೇಸ್‌ಬುಕ್‌ನಲ್ಲಿ ಹರಿದಾಡಿತು. ಭಾಷಣವೊಂದರಲ್ಲಿ ರಾಹುಲ್ ಗಾಂಧಿ ಮಾತನಾಡುತ್ತಾ, 1990ರ ಸಮಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ “ಭಯೋತ್ಪಾದನೆಯ ಬಗ್ಗೆ ಮೃದು ಧೋರಣೆ” ತೋರಿತ್ತು ಎಂದು ಟೀಕಿಸಿದ್ದರು. ಭಾರತವು ಭಯೋತ್ಪಾದಕ ಎಂದು ಪರಿಗಣಿಸಿರುವ ಮಸೂದ್ ಅಜರ್‌ ಎಂಬಾತನನ್ನು ಬಿಜೆಪಿ ಜೈಲಿನಿಂದ ಬಿಡುಗಡೆ ಮಾಡಿತು. ಆತನನನ್ನು ಅಜರ್ ಜಿ ಎಂದು ಕರೆದು ಬೀಳ್ಕೊಟ್ಟಿತ್ತು ಎಂದು ವ್ಯಂಗ್ಯವಾಡಿದ್ದರು.

ಆದರೆ ರಾಹುಲ್ ಗಾಂಧಿ ಬಿಜೆಪಿಯನ್ನು ಖಂಡಿಸುವ ಭಾಗವನ್ನು ತೆಗೆದುಹಾಕಿ “ರಾಹುಲ್ ಗಾಂಧಿ ಮಸೂದ್ ಅಜರ್‌ಜಿ ಎಂದು ಕರೆದಾಗ” ಎಂಬ ಶೀರ್ಷಿಕೆಯೊಂದಿಗೆ NEWJ ಎಂಬ ಲೋಗೋದೊಂದಿಗೆ ಸುದ್ದಿ ವರದಿಯಂತಹ ತಿರುಚಿದ ಈ ವಿಡಿಯೋ ಫೇಸ್‌ಬುಕ್‌ನಲ್ಲಿ ಜಾಹೀರಾತಿನಂತೆ ಪ್ರಸಾರವಾಯಿತು. ನಾಲ್ಕು ದಿನಗಳಲ್ಲಿ ಸರಿಸುಮಾರು 6,50,000 ಜನರು ಆ ವಿಡಿಯೋ ನೋಡಿದರು ಮತ್ತು ಆ ಮೂಲಕ ರಾಹುಲ್ ಗಾಂಧಿ ಭಯೋತ್ಪಾದಕರನ್ನು ಬೆಂಬಲಿಸುತ್ತಾರೆ ಎಂಬ ಸುಳ್ಳು ಕಥನ ಕಟ್ಟಲಾಯಿತು.

NEWJ ಎಂಬ ಫೇಸ್‌ಬುಕ್ ಪುಟವು ಮೇಲಿನ ಎರಡೂ ಜಾಹೀರಾತುಗಳಿಗೆ ಹಣ ಪಾವತಿಸಿದೆ. ಈ  NEWJ ಎಂಬ ಫೇಸ್‌ಬುಕ್ ಪೇಜ್ ಯಾರದು ಎಂದು ಹುಡುಕುತ್ತಾ ಹೊರಟರೆ ಆಶ್ಚರ್ಯ ಕಾದಿತ್ತು. ನ್ಯೂ ಎಮರ್ಜಿಂಗ್ ವರ್ಲ್ಡ್ ಆಫ್ ಜರ್ನಲಿಸಂ ಲಿಮಿಟೆಡ್‌ನ ಸಂಕ್ಷಿಪ್ತ ರೂಪವಾಗಿರುವ NEWJ ಬಿಲಿಯನೇರ್ ಮುಖೇಶ್ ಅಂಬಾನಿಯವರ ರಿಲಯನ್ಸ್ ಗ್ರೂಪ್ ಒಡೆತನದ ಭಾರತದ ಅತಿದೊಡ್ಡ ಟೆಲಿಕಾಂ ಮತ್ತು ಇಂಟರ್ನೆಟ್ ಕಂಪನಿ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದೆ! ಈ ಫೇಸ್‌ಬುಕ್‌ ಪುಟವು ಹಿಂದಿ, ಇಂಗ್ಲಿಷ್, ಕನ್ನಡ, ತೆಲುಗು ಸೇರಿದಂತೆ ಭಾರತದ ಬಹುತೇಕ ಭಾಷೆಗಳಲ್ಲಿದೆ ಮತ್ತು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಾ ಬಿಜೆಪಿಗೆ ರಾಜಕೀಯ ಅನುಕೂಲ ಮಾಡಿಕೊಡುತ್ತಿದೆ.

ಈ ಮೇಲಿನ ಎರಡು ಜಾಹೀರಾತುಗಳನ್ನು ನಾವು ‘ಬದಲಿ ಜಾಹೀರಾತು’ ಎಂದರೆ ಕರೆಯುತ್ತೇವೆ. ಅಂದರೆ ಈ ಜಾಹೀರಾತು ಬಿಜೆಪಿಗೆ ಅನುಕೂಲ ಮಾಡಿಕೊಡುವ ಉದ್ದೇಶಕ್ಕಾಗಿಯೇ ರಚನೆಯಾಗಿದ್ದರೂ ಸಹ ಅದಕ್ಕೆ ಪಾವತಿ ಮಾಡಿದ್ದು ಬಿಜೆಪಿ ಪಕ್ಷವಲ್ಲ, ಬದಲಿಗೆ ರಿಲಯನ್ಸ್ ಜಿಯೋ ಆಗಿದೆ. ಭಾರತದ ಚುನಾವಣಾ ಆಯೋಗವು ಕಾನೂನನ್ನು ಹೇಗೆ ಅನ್ವಯಿಸುತ್ತದೆ ಮತ್ತು ಫೇಸ್‌ಬುಕ್‌ನ ನಿಯಮಗಳು, ಪ್ರಕ್ರಿಯೆಗಳು ಹೇಗೆ ಬೃಹತ್ ಲೋಪದೋಷದಿಂದ ಕೂಡಿವೆ ಎಂಬುದನ್ನು ಇದು ಎತ್ತಿ ತೋರಿಸುತ್ತದೆ. 2019ರ ಸಂಸತ್ ಚುನಾವಣೆ ಮತ್ತು ಒಂಬತ್ತು ರಾಜ್ಯಗಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಮತ್ತು ನರೇಂದ್ರ ಮೋದಿಯವರ ಪ್ರಚಾರಕ್ಕಾಗಿಯೇ ಈ ಫೇಸ್‌ಬುಕ್ ಬದಲಿ ಜಾಹೀರಾತುಗಳ ಮೂಲಕ ಕೋಟ್ಯಾಂತರ ರೂಗಳನ್ನು ವ್ಯಯಿಸಲಾಗಿದೆ. ಆದರೆ ಆ ಹಣ ಬಿಜೆಪಿಯದ್ದಲ್ಲ ಬದಲಿಗೆ ಅಂಬಾನಿಯದ್ದಾಗಿದೆ.

ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಈ ರೀತಿಯ ಬದಲಿ ಜಾಹೀರಾತುಗಳಿಗೆ ಕಡಿವಾಣ ಹಾಕುವುದಾಗಿ ಫೇಸ್‌ಬುಕ್ ನಾಟಕವಾಡಿತು. ಆದರೆ ಆ ಸಂದರ್ಭದಲ್ಲಿ ಅದು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್‌ ಜಾಹೀರಾತುಗಳನ್ನು ತಡೆ ಹಿಡಿಯಿತು ಮತ್ತು ಅದೇ ಸಂದರ್ಭದಲ್ಲಿ ಬಿಜೆಪಿಗೆ ಸಹಾಯ ಮಾಡುವ NEWJ ನಂತಹ ನೂರಾರು ಪೇಜ್‌ಗಳನ್ನು ಪುರಸ್ಕರಿಸಿತು!

2019ರ ಫೆಬ್ರವರಿ ತಿಂಗಳಿನಿಂದ 2020ರ ನವೆಂಬರ್‌ವರೆಗೆ 22 ತಿಂಗಳ ಅವಧಿಯಲ್ಲಿ 5,36,070 ರಾಜಕೀಯ ಉದ್ದೇಶದ ಜಾಹೀರಾತುಗಳು ಫೇಸ್‌ಬುಕ್‌ ಮತ್ತು ಇನ್ಸ್ಟಗ್ರಾಮ್‌ನಲ್ಲಿ ಪ್ರಕಟಗೊಂಡಿವೆ. ಅವುಗಳನ್ನು ದಿ ರಿಪೋರ್ಟರ್ಸ್ ಕಲೆಕ್ಟಿವ್ (TRC) ಎಂಬ ಲಾಭರಹಿತ ಮಾಧ್ಯಮ ಸಂಸ್ಥೆ ಮತ್ತು ad.watch ಎಂಬ ಸಾಮಾಜಿಕ ಮಾಧ್ಯಮದಲ್ಲಿ ರಾಜಕೀಯ ಜಾಹೀರಾತುಗಳನ್ನು ಅಧ್ಯಯನ ಮಾಡುವ ಸಂಶೋಧನಾ ಸಂಸ್ಥೆಗಳ ಕೂಲಂಕುಷವಾಗಿ ವಿಶ್ಲೇಷಿಸಿವೆ. ಫೇಸ್‌ಬುಕ್‌ನ ಜಾಹೀರಾತು ವೇದಿಕೆಯು ವಿಶ್ವದ ಅತಿದೊಡ್ಡ ಚುನಾವಣಾ ಪ್ರಜಾಪ್ರಭುತ್ವದಲ್ಲಿ ಬಹುದೊಡ್ಡ ತಾರತಮ್ಯವೆಸಗಿದೆ ಮತ್ತು ಉಳಿದ ಪಕ್ಷಗಳನ್ನು ಹಿಂದಕ್ಕೆ ಸರಿಸಿ ಬಿಜೆಪಿಗೆ ಅನ್ಯಾಯಯುತ ಲಾಭವನ್ನುಂಟುಮಾಡಿದೆ ಎಂದು ಈ ಅಧ್ಯಯನದಲ್ಲಿ ಕಂಡುಬಂದಿದೆ.

ಸುದ್ದಿಗಳೆ ಜಾಹೀರಾತು ರೂಪದಲ್ಲಿ ಬಂದಾಗ

NEWJ ಸಾಮಾಜಿಕ ಮಾಧ್ಯಮದ ಮೂಲಕ ಪ್ರತ್ಯೇಕವಾಗಿ ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಲ್ಲಿನ ಜನರಿಗೆ “ಸುದ್ದಿ ವಿಷಯ” ವನ್ನು ಒದಗಿಸುವ ಸ್ಟಾರ್ಟಪ್ ಕಂಪನಿ ಎಂಬ ಸ್ಥಾನ ಪಡೆದಿದೆ. ಆದರೆ ವಾಸ್ತವದಲ್ಲಿ ಆ ಕಂಪನಿಯು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊಗಳನ್ನು ಪ್ರಕಟಿಸಲು ಜಾಹೀರಾತು ಸ್ಥಳವನ್ನು ಖರೀದಿಸುತ್ತದೆ. ಅವುಗಳಲ್ಲಿ ಹಲವು ರಾಜಕೀಯ ಪ್ರಚಾರಗಳಾಗಿರುತ್ತವೆ, ಆದರೆ ಸುದ್ದಿಯ ಮುಖವಾಡ ಧರಿಸಿರುತ್ತವೆ. ಬಿಜೆಪಿಯನ್ನು ಪ್ರಚಾರ ಮಾಡುವುದು, ತಪ್ಪು ಮಾಹಿತಿಗಳನ್ನು ಉತ್ತೇಜಿಸುವುದು, ಮುಸ್ಲಿಂ ವಿರೋಧಿ ಭಾವನೆಗಳನ್ನು ಪ್ರಚೋದಿಸುವುದು ಮತ್ತು ವಿರೋಧ ಪಕ್ಷಗಳನ್ನು ಅವಹೇಳನ ಮಾಡುವುದು ಅದರ ಪ್ರಮುಖ ಗುರಿಯಾಗಿದೆ.

ನಿಮಗೆಲ್ಲ ತಿಳಿದಿರುವ ಹಾಗೆ ವ್ಯಕ್ತಿಗಳು ಮತ್ತು ಪೇಜ್‌ಗಳಿಂದ ಹಾಕುವ ಪೋಸ್ಟ್‌ಗಳು ಅವರ ಸ್ನೇಹಿತರಿಗೆ, ಅವರನ್ನು ಫಾಲೋ ಮಾಡುವವರಿಗೆ ಮಾತ್ರ ಹೆಚ್ಚು ತಲುಪುತ್ತವೆ. ಅದಕ್ಕೊಂದು ಮಿತಿ ಇದ್ದೆ ಇರುತ್ತದೆ. ಆದರೆ ಫೇಸ್‌ಬುಕ್‌ಗೆ ಹಣ ನೀಡಿ ಜಾಹೀರಾತು ಮೂಲಕ ಹಾಕುವ ಪೋಸ್ಟ್‌ಗಳು ಎಲ್ಲಾ ಮಿತಿಗಳನ್ನು ಮೀರಿ ಸ್ನೆಹಿತರಲ್ಲದ, ಫಾಲೋ ಮಾಡದವರನ್ನು ಸಹ ಬೇಕಾದ ಪ್ರದೇಶ, ಜನರ ಆಸಕ್ತಿಯನ್ನು ಆಧರಿಸಿ ಅತಿ ಹೆಚ್ಚು ಜನರಿಗೆ ತಲುಪುತ್ತವೆ. 2019ರಿಂದ ಫೇಸ್‌ಬುಕ್ ತನ್ನ ಆಡ್ ಲೈಬ್ರರಿಯಲ್ಲಿ ರಾಜಕೀಯಕ್ಕೆ ಸಂಬಂಧಿಸಿವೆ ಎಂದು ಪ್ರಕಟಿಸುತ್ತಿದೆ. ಅದರಂತೆ ಈ NEWJ ಫೇಸ್‌ಬುಕ್ ಪುಟವು 2019ರ ಲೋಕಸಭಾ ಚುನಾವಣೆಯ ಮೂರು ತಿಂಗಳಲ್ಲಿ ಸುಮಾರು 170 ರಾಜಕೀಯ ಜಾಹೀರಾತುಗಳನ್ನು ಪ್ರಕಟಿಸಿದೆ. ಅದರಲ್ಲಿ ಹೆಚ್ಚಿನವು ಬಿಜೆಪಿ ನಾಯಕರನ್ನು ವೈಭವೀಕರಿಸುವ, ಮೋದಿಗೆ ಮತದಾರರು ಬೆಂಬಲ ಸೂಚಿಸಿದ್ದಾರೆ ಎಂದು ಕಥೆ ಕಟ್ಟುವ, ರಾಷ್ಟ್ರೀಯತೆ ಮತ್ತು ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವ, ಬಿಜೆಪಿಗೆ ಚುನಾವಣೆಯಲ್ಲಿ ಚಿಮ್ಮು ಹಲಗೆಗಳಾಗುವ – ಅಥವಾ ವಿರೋಧ ಪಕ್ಷದ ನಾಯಕರು ಮತ್ತು ಅವರು ನಡೆಸಿದ ರ್ಯಾಲಿಗಳನ್ನು ಲೇವಡಿ ಮಾಡಿರುವವೆ ತುಂಬಿಕೊಂಡಿವೆ.

ಈ ಜಾಹೀರಾತುಗಳ ನಡುವೆ ಬಹಳ ಪ್ರಜ್ಞಾಪೂರ್ವಕವಾಗಿ ಕೆಲವು ರಾಜಕೀಯ ರಹಿತವಾದ ಮಾನವೀಯ ವಿಡಿಯೋಗಳನ್ನು, ಭಾರತದ ಇತಿಹಾಸ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ವಿಡಿಯೋಗಳನ್ನು ಸಹ ಹರಿಯಬಿಡಲಾಗುತ್ತದೆ. ಉದಾಹರಣೆಗೆ ಅಂಗವಿಕಲ ಮಹಿಳೆಯೊಬ್ಬರು ವಿವಿ ಪರೀಕ್ಷೆಯನ್ನು ಕಾಲಿನಲ್ಲಿ ಬರೆಯುತ್ತಿರುವುದು ಎಂಬ ಪೋಸ್ಟ್‌ಗಳನ್ನು ಹಾಕಿ ಜನರು ಪುಟವನ್ನು ಲೈಕ್ ಮಾಡುವಂತೆಯೂ ಮಾಡಲಾಗುತ್ತದೆ.

ಬದಲಿಗೆ ಜಾಹೀರಾತುಗಳ ಕಾಲ

ಈ NEWJ ಸ್ಥಾಪಕ ಶಲಭ್ ಉಪಾಧ್ಯಾಯ ಅವರು ರಿಲಯನ್ಸ್ ಮತ್ತು ಬಿಜೆಪಿ ಎರಡರೊಂದಿಗೂ ನಿಕಟ ಸಂಬಂಧವನ್ನು ಹೊಂದಿದ್ದಾರೆ. ಅವರ ತಂದೆ ಉಮೇಶ್ ಉಪಾಧ್ಯಾಯ ಅವರು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಲ್ಲಿ ಅಧ್ಯಕ್ಷರು ಮತ್ತು ಮಾಧ್ಯಮ ನಿರ್ದೇಶಕರಾಗಿದ್ದಾರೆ. ಅಲ್ಲದೆ ಈ ಹಿಂದೆ ರಿಲಯನ್ಸ್-ಮಾಲೀಕತ್ವದ ನೆಟ್‌ವರ್ಕ್-18 ಗುಂಪಿನಲ್ಲಿ ಸುದ್ದಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅದು ಭಾರತದಲ್ಲಿ ಹಲವಾರು ಸುದ್ದಿ ವಾಹಿನಿಗಳನ್ನು ನಡೆಸುತ್ತಿದೆ. ಅವರ ಚಿಕ್ಕಪ್ಪ ಸತೀಶ್ ಉಪಾಧ್ಯಾಯ ಬಿಜೆಪಿ ನಾಯಕ ಮತ್ತು ಪಕ್ಷದ ದೆಹಲಿ ಘಟಕದ ಮಾಜಿ ಅಧ್ಯಕ್ಷರು.

ಆದರೂ NEWJ ಬಿಜೆಪಿಯೊಂದಿಗೆ ಔಪಚಾರಿಕ ಸಂಬಂಧ ಹೊಂದಿಲ್ಲ ಮತ್ತು ಸಾರ್ವಜನಿಕವಾಗಿ ಬಿಜೆಪಿ ಅದಕ್ಕೆ ಹಣ ಪಾವತಿಸಿರುವುದು ವರದಿಯಾಗಿಲ್ಲ. 2018ರ ಜನವರಿಯಿಂದ 2020ರ ಮಾರ್ಚ್‌ವರೆಗಿನ NEWJ ನ ಹಣಕಾಸಿನ ವ್ಯವಹಾರಗಳತ್ತ ಕಣ್ಣು ಹಾಯಿಸಿದರೆ ಅದು ಯಾವುದೇ ಲಾಭ ಗಳಿಸಿಲ್ಲ ಬದಲಿಗೆ ಜಾಹೀರಾತಿಗಾಗಿ ಕೋಟ್ಯಾಂತರ ಹಣ ವ್ಯಯಿಸಿದೆ. ಆ ಹಣವನ್ನು ರಿಲಯನ್ಸ್ ಗ್ರೂಪ್ ಪೂರೈಸಿದೆ.

ರಾಜಕೀಯ ಅಭ್ಯರ್ಥಿಯನ್ನು ಬೆಂಬಲಿಸುವ ಆದರೆ ಆ ಅಭ್ಯರ್ಥಿಯಿಂದ ನೇರವಾಗಿ ಹಣ ಪಡೆಯದ ಅಥವಾ ಅಧಿಕೃತಗೊಳಿಸದ ಬದಲಿ ಜಾಹೀರಾತುಗಳು ಅಥವಾ ಹೆಸರುಗಳಿಲ್ಲದ ಜಾಹೀರಾತುಗಳನ್ನು ಪ್ರಕಟಿಸುವುದು ಭಾರತೀಯ ಕಾನೂನಿನ ಅಡಿಯಲ್ಲಿ ಅಪರಾಧವಾಗಿದೆ. ರಾಜಕೀಯ ಪಕ್ಷಗಳು ಅವರು ಜಾಹೀರಾತಿನಲ್ಲಿ ಹಾಕುವ ಎಲ್ಲಾ ಮಾಹಿತಿಗಳಿಗೆ ಜವಾಬ್ದಾರರಾಗಿರುವಂತೆ ಕಾನೂನು ಸೂಚಿಸುತ್ತದೆ. ಚುನಾವಣಾ ಪ್ರಚಾರಕ್ಕಾಗಿ ಜಾಹೀರಾತುಗಳಿಗೆ ಅಪರಿಚಿತ ಮೂಲಗಳ ಮೂಲಕ ಹಣ ಪಾವತಿಸುವುದನ್ನು ಸಹ ನಿಷೇಧಿಸುತ್ತದೆ.

ಆದರೆ ಚುನಾವಣಾ ಆಯೋಗವು ಈ ನಿಷೇಧವನ್ನು ಫೇಸ್‌ಬುಕ್‌ನಂತಹ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಅನ್ವಯಿಸುವುದಿಲ್ಲ. ಆರ್‌ಟಿಐ ಅರ್ಜಿಗಳ ಮಾಹಿತಿಯಿಂದ ಹಲವು ವರ್ಷಗಳಿಂದ ಈ ಲೋಪದೋಷದ ಬಗ್ಗೆ ತಿಳಿದಿದ್ದರೂ ಈ ನಿಯಮಗಳನ್ನು ಫೇಸ್‌ಬುಕ್‌ಗೆ ವಿಸ್ತರಿಸುತ್ತಿಲ್ಲ. ಹಾಗಾಗಿಯೇ ಫೇಸ್‌ಬುಕ್‌ನ ಮೂಲ ಕಂಪನಿ ಮೆಟಾ ಈ ನಿಯಮವನ್ನು ಬಳಸುತ್ತಿಲ್ಲ. NEWJ ಮೂಲಕ ರಿಲಯನ್ಸ್ ಚುನಾವಣಾ ಸಂದರ್ಭದಲ್ಲಿ ಫೇಸ್‌ಬುಕ್ ಮತ್ತು ಇನ್ಸ್ಟಗ್ರಾಮ್‌ಗಳಲ್ಲಿ ಬಿಜೆಪಿ ಪರವಾದ ಜಾಹೀರಾತುಗಳ ಸುರಿಮಳೆಗೈಯುತ್ತದೆ.

ಆದರೆ ಫೇಸ್‌ಬುಕ್‌ ತಾನು ಬದಲಿ ಜಾಹೀರಾತುಗಳನ್ನು ತಡೆಹಿಡಿದಿದ್ದೇವೆ ಎಂದು ಪ್ರತಿಪಾದಿಸಿದೆ. ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪರವಾಗಿ ಜಾಹೀರಾತು ನೀಡುತ್ತಿವೆ ಎಂದು ಆರೋಪಿಸಿ ಕ್ರಮ ತೆಗೆದುಕೊಂಡಿತ್ತು. ಕಾಂಗ್ರೆಸ್‌ನೊಂದಿಗೆ ಸಂಬಂಧ ಹೊಂದಿವೆ ಎಂದು ಆರೋಪಿಸಿ ದೇಶ ವಿದೇಶದ 687 ಫೇಸ್‌ಬುಕ್ ಪೇಜ್‌ ಮತ್ತು ಖಾತೆಗಳನ್ನು ರದ್ದುಗೊಳಿಸಿತ್ತು. ಆದರೆ ಕೇವಲ 1 ಫೇಸ್‌ಬುಕ್ ಪೇಜ್ ಮತ್ತು 14 ಖಾತೆಗಳನ್ನು ಬಿಜೆಪಿಯೊಂದಿಗೆ ಸಂಬಂಧ ಹೊಂದಿವೆ ಎಂದು ರದ್ದುಗೊಳಿಸಿತ್ತು. ಆದರೆ NEWJ ಅಂತಹ ಪೇಜ್‌ಗಳು ಇಂದಿಗೂ ಮುಂದುವರೆಯುತ್ತಿವೆ.

2019ರ ಫೆಬ್ರವರಿಯಿಂದ 2020ರ ನವೆಂಬರ್ ವರೆಗೆ 22 ತಿಂಗಳ ಅವಧಿಯಲ್ಲಿ ಲೋಕಸಭೆ ಸೇರಿ 10 ಚುನಾವಣೆಗಳು ನಡೆದಿವೆ. ಈ ಅವಧಿಯಲ್ಲಿ 718 ಜಾಹೀರಾತುಗಳನ್ನು ನೀಡಿರುವ NEWJ ಅವುಗಳನ್ನು 29 ಕೋಟಿ ಜನ ನೋಡುವಂತೆ ಮಾಡಿದೆ. ಅದಕ್ಕಾಗಿ 52 ಲಕ್ಷ ರೂಗಳನ್ನು ಖರ್ಚು ಮಾಡಿದೆ. ಈ ಜಾಹಿರಾತುಗಳಲ್ಲಿ ಹಲವು ಮೋದಿಯವರ ಸರ್ಕಾರವನ್ನು ಶ್ಲಾಘಿಸುವ, ಮುಸ್ಲಿಂ ವಿರೋಧಿ ಮತ್ತು ಪಾಕಿಸ್ತಾನ ವಿರೋಧಿ ಭಾವನೆಗಳ ಹೊತ್ತಿಸುವಂತ, ಬಿಜೆಪಿಯ ವಿರೋಧಿಗಳು ಮತ್ತು ಟೀಕಾಕಾರರನ್ನು ಹೊಡೆದುರುಳಿಸಿದವಂತವು ಆಗಿದ್ದವು.

ಬದಲಿ ಜಾಹೀರಾತಿಗೆ ದೊಡ್ಡ ಮಟ್ಟದ ಹೂಡಿಕೆ

2018ರಲ್ಲಿ NEWJ ಅನ್ನು 1 ಲಕ್ಷ ಬಂಡವಾಳ ಹಾಕಿ ಆರಂಭಿಸಲಾಗಿತ್ತು. ನವೆಂಬರ್ ಮಧ್ಯದಲ್ಲಿ, ರಿಲಯನ್ಸ್ ಗ್ರೂಪ್ ಕಂಪನಿ ರಿಲಯನ್ಸ್ ಇಂಡಸ್ಟ್ರಿಯಲ್ ಇನ್ವೆಸ್ಟ್‌ಮೆಂಟ್ ಮತ್ತು ಹೋಲ್ಡಿಂಗ್ಸ್ ಲಿಮಿಟೆಡ್ (RIIHL) NEWJ ಅನ್ನು 75 ರಷ್ಟು ಈಕ್ವಿಟಿ ಪಾಲಿನೊಂದಿಗೆ ವಹಿಸಿಕೊಂಡಿತು. ನಂತರ ಅದು ಕಂಪನಿಗೆ 8.4 ಕೋಟಿ ರೂಪಾಯಿಗಳನ್ನು ಕನ್ವರ್ಟಿಬಲ್ ಡಿಬೆಂಚರ್‌ಗಳ ಮೂಲಕ ನೀಡಿತು. ಯಾವುದೇ ಲಾಭ ಗಳಿಸದ NEWJ 2.2 ಕೋಟಿಯನ್ನು ಜಾಹೀರಾತಿಗಾಗಿ ವ್ಯಯಿಸಿತು. ಮುಂದಿನ ವರ್ಷ ರಿಲಯನ್ಸ್ ಮತ್ತೆ 12.5 ಕೋಟಿ ಹಣವನ್ನು ನೀಡಿತು. ಯಾವುದೇ ಲಾಭ ಗಳಿಸದ NEWJ ಜಾಹೀರಾತಿನ ಮೇಲೆ ಮತ್ತೆ 2 ಕೋಟಿ 73 ಲಕ್ಷವನ್ನು ಸುರಿಯಿತು. ನಂತರ ಕಂಪನಿಯನ್ನು ಜಿಯೋ ವಹಿಸಿಕೊಂಡಿತು. ಅಲ್ಲದೆ NEWJ ನಲ್ಲಿ ಯಾವ ಕಂಟೆಂಟ್ ಬರಬೇಕೆಂಬುದನ್ನು ಜಿಯೋ ನಿರ್ಧರಿಸುವಂತೆ ತಿದ್ದುಪಡಿ ಮಾಡಲಾಗಿದೆ. ಜಿಯೋ ಈಗ 8.4 ಕೋಟಿ ಸಾಲವನ್ನು ಕೇವಲ 0.0001% ಬಡ್ಡಿದರದಲ್ಲಿ ನೀಡಿದೆ. ಈಗ ಜಿಯೋ ಫೇಸ್‌ಬುಕ್ ಅನ್ನು ಹೂಡಿಕೆದಾರ ಎಂದು ಪರಿಗಣಿಸುತ್ತದೆ. ಹಾಗಾಗಿ ಫೇಸ್‌ಬುಕ್‌ನಲ್ಲಿ ತನ್ನ ಹೂಡಿಕೆಯ ಜಾಹೀರಾತುಗಳೆ ಬರುತ್ತಿವೆ. ಅವನ್ನು ತಡೆಯುವವರು ಯಾರು??

ಕಣ್ಮುಚ್ಚಿ ಕುಳಿತ ಚುನಾವಣಾ ಆಯೋಗ

ಹಣದ ಬಲದಿಂದ ಚುನಾವಣೆ ನಡೆಯುವುದನ್ನು ತಡೆಯಲು ಸ್ಪರ್ಧಿಸುವ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಚುನಾವಣಾ ಆಯೋಗ ಇಂತಿಷ್ಟು ಎಂದು ಮಿತಿ ವಿಧಿಸುತ್ತದೆ. ಅದನ್ನು ಮೀರಿದವರ ಮೇಲೆ ಕ್ರಮ ಕೈಗೊಳ್ಳುತ್ತದೆ. ಒಂದು ವೇಳೆ ಮೂರನೇ ವ್ಯಕ್ತಿ ತನಗೂ ಅಭ್ಯರ್ಥಿಗೂ ಸಂಬಂಧವಿಲ್ಲ ಎಂದು ಘೋಷಿಸಿಕೊಂಡು ಅಭ್ಯರ್ಥಿಯ ಪರವಾಗಿ ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಜಾಹೀರಾತು ನೀಡಿದರೆ ಅದು ಸಹ ಅಭ್ಯರ್ಥಿಯ ಖರ್ಚು ಎಂತಲೇ ಆಯೋಗ ನಿರ್ಧರಿಸುತ್ತದೆ. ಅಲ್ಲದೆ ಸಾಂಪ್ರಾದಾಯಿಕ ಮಾಧ್ಯಮಗಳಲ್ಲಿ ಸುದ್ದಿಯ ರೂಪದಲ್ಲಿ ಅಭ್ಯರ್ಥಿ ಪರ ಪ್ರಚಾರ ಕಂಡುಬಂದರೆ ಅದನ್ನು ತನಿಖೆ ನಡೆಸುತ್ತದೆ. ಒಂದು ವೇಳೆ ಹಣ ಕೊಟ್ಟು ಸುದ್ದಿ ಪ್ರಕಟಿಸಿದ್ದರೆ ಅದನ್ನು ಸಹ ಚುನಾವಣಾ ಮಿತಿ ವೆಚ್ಚಕ್ಕೆ ಸೇರಿಸಲಾಗುತ್ತದೆ. ಆದರೆ ಈ ನಿಯಮಗಳು ಸಾಮಾಜಿಕ ಮಾಧ್ಯಮಗಳಿಗೆ ಅನ್ವಯಿಸುತ್ತಿಲ್ಲ. ನೇರವಾಗಿ ಅಭ್ಯರ್ಥಿ ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡಿದರೆ ಮಾತ್ರ ಅದು ವೆಚ್ಚದ ಅಡಿ ಬರುತ್ತದೆ. ಮೂರನೇ ವ್ಯಕ್ತಿ ಜಾಹೀರಾತು ನೀಡಿದರೆ ಅದು ಲೆಕ್ಕಕ್ಕೆ ಬರುವುದಿಲ್ಲ. ಹಾಗಾಗಿ ಬದಲಿ ಜಾಹೀರಾತುಗಳು ಹೆಚ್ಚಾಗಿವೆ. ಇದರಿಂದ ಫೇಸ್‌ಬುಕ್‌ಗೆ ಕೋಟ್ಯಾಂತರ ರೂ ಲಾಭವಾಗುತ್ತಿದೆ. ಬಿಜೆಪಿ ತರದ ಪಕ್ಷಗಳಿಗೆ ಮತಗಳು ಬೀಳುತ್ತಿವೆ!

ಹಲವು ಮಾಧ್ಯಮಗಳೆ ನೇರವಾಗಿ ಬಿಜೆಪಿ ತುತ್ತೂರಿಗಳಾಗಿರುವಾಗ ಫೇಸ್‌ಬುಕ್ ಪೇಜ್‌ಗಳು ಏನು ಕಡಿಮೆಯಿಲ್ಲದಂತೆ ಪೈಪೋಟಿ ನೀಡುತ್ತಿವೆ. ಆದರೆ ಮಾಧ್ಯಮಗಳನ್ನು ನೇರವಾಗಿ ಗುರುತಿಸಬಹುದು. ಅವುಗಳನ್ನು ನೋಡದಂತೆ ನಾವು ತಡೆಯಬಹುದು. ಆದರೆ ಫೇಸ್‌ಬುಕ್‌ನಲ್ಲಿ ನಾವು ಆ ಪೇಜ್ ಅನ್ನು ಲೈಕ್/ಫಾಲೋ ಮಾಡದಿದ್ದರೂ ಸಹ ಅವುಗಳ ಪ್ರೊಪಗಂಡಾ ವಿಡಿಯೋಗಳು ನಮಗೆ ಪದೇ ಪದೇ ಕಾಣಿಸುತ್ತಿವೆ. ಆಕರ್ಷಕ ಬಣ್ಣ ಬಣ್ಣದ ಸುಳ್ಳುಗಳು ಜನರನ್ನು ಮರಳು ಮಾಡುತ್ತವೆ. ಇದನ್ನು ತಡೆಯಬೇಕಾಗಿದ್ದ ಫೇಸ್‌ಬುಕ್ ಆ ಕಂಪನಿಗೆ ಮಾಲೀಕನಾಗಿದೆ. ಇಂತಹ ಸಂದರ್ಭದಲ್ಲಿ ನ್ಯಾಯಸಮ್ಮತ ಚುನಾವಣೆನ್ನು ನಿರೀಕ್ಷಿಸುವುದು ತಪ್ಪಾದೀತು ಅಲ್ಲವೇ?

ಕೃಪೆ: ಅಲ್‌ಜಜೀರಾ


ಇದನ್ನೂ ಓದಿ: ಫೇಸ್‌ಬುಕ್ ಎಲ್ಲರಿಗೂ ಗೊತ್ತಿರುವ ಕಳ್ಳ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...