Homeಮುಖಪುಟಹರುಕಿ ಮುರಾಕಮಿ ಕಥೆ ಆಧಾರಿತ ’ಡ್ರೈವ್ ಮೈ ಕಾರ್ ಸಿನಿಮಾಗೆ ಆಸ್ಕರ್ ಮನ್ನಣೆ

ಹರುಕಿ ಮುರಾಕಮಿ ಕಥೆ ಆಧಾರಿತ ’ಡ್ರೈವ್ ಮೈ ಕಾರ್ ಸಿನಿಮಾಗೆ ಆಸ್ಕರ್ ಮನ್ನಣೆ

- Advertisement -
- Advertisement -

’ಒಂದು ಸಾಹಿತ್ಯ ಕೃತಿ ಕೊಡುವ ಅನುಭೂತಿ, ಒಳನೋಟ ಮತ್ತು ತಿಳಿವಳಿಕೆಯನ್ನು ಸಿನಿಮಾ ಕೂಡ ಕೊಡಬೇಕು… ಇದನ್ನು ನಾನು ನನ್ನ ಸಿನಿಮಾಗಳಲ್ಲಿ ಸಾಧಿಸಲು ಪ್ರಯತ್ನಿಸುತ್ತೇನೆ’ – ಇವು ಇವತ್ತಿಗೆ ವಿಷ್ಯುವಲ್ ಮಾಸ್ಟರ್ ಎಂದು ಗುರುತಿಸುವ ಟರ್ಕಿಯ ಪ್ರಸಿದ್ಧ ಸಿನಿಮಾ ನಿರ್ದೇಶಕ ನೂರಿ ಬಿಲ್ಗೆ ಸೆಲಾನ್‌ನ ಮಾತುಗಳು. ಸಿನಿಮಾ ಸಾಹಿತ್ಯಕ್ಕಿಂತ ಹೆಚ್ಚಿನ ಸಾಧ್ಯತೆಗಳನ್ನು ಹೊಂದಿದೆ ಎಂದು ಚರ್ಚಿಸುವಾಗಲೆ ಈ ಮಾತನ್ನು ಬಿಲ್ಗೆ ಹೇಳುತ್ತಾನೆ. ಸಾಹಿತ್ಯ ಸಿನಿಮಾಗೆ ಮುತ್ತಜ್ಜ ಆಗಿರುವುದರಿಂದ, ಸಾಹಿತ್ಯ ಕೃತಿಗಳನ್ನು ಆಧರಿಸಿ ಹಲವಾರು ಸಿನಿಮಾಗಳು ಬಂದಿವೆ. ಆದರೆ ಸುಮಾರು ಸಂದರ್ಭದಲ್ಲಿ ಆ ಕೃತಿ ಕೊಟ್ಟ ಅನುಭೂತಿಯನ್ನ ಸಿನಿಮಾ ಕೊಡುವುದಕ್ಕೆ ಸಾಧ್ಯವಾಗಿರುವುದಿಲ್ಲ. ಇನ್ನೂ ಕೆಲವೊಮ್ಮೆ ಕೃತಿಯ ಆಶಯವನ್ನ ಸಿನಿಮಾ ದಾರಿ ತಪ್ಪಿಸಿರುವುದೂ ಇದೆ. ಹೆಚ್ಚಿನ ಸಂದರ್ಭಗಳಲ್ಲಿ ಸಾಹಿತ್ಯ ಕೃತಿಯನ್ನು ದೃಶ್ಯಕ್ಕೆ ಅಳವಡಿಸುವಾಗ ಮಾಡಿಕೊಳ್ಳಬೇಕಾದ ಬದಲಾವಣೆಗಳೆ ಹಲವರಿಗೆ ಸವಾಲಿನ ಕೆಲಸವಾಗಿರುತ್ತದೆ. ಜಗತ್ತಿನಾದ್ಯಂತ ದೊಡ್ಡ ಮಟ್ಟದ ಓದುಗರನ್ನು ಹೊಂದಿರುವ ಜಪಾನಿ ಸಾಹಿತಿ ಹರುಕಿ ಮುರಾಕಮಿಯ ಸಣ್ಣ ಕಥೆ ‘Drive My Car’ ಆಧರಿಸಿ ಅದೇ ಹೆಸರಿನಲ್ಲಿ ಬಂದ ಈ ಸಿನಿಮಾ, ಒಂದು ಸಾಹಿತ್ಯ ಕೃತಿ ವ್ಯಕ್ತಪಡಿಸುವ ಆಶಯಕ್ಕೆ ಎಳ್ಳಷ್ಟು ಧಕ್ಕೆ ಬರದ ಹಾಗೆ ಮತ್ತು ಅಷ್ಟೇ ಪರಿಣಾಮಕಾರಿಯಾಗಿ ಅಥವಾ ಅದಕ್ಕಿಂತಲೂ ಹೆಚ್ಚು ಪರಿಣಾಮಕಾರಿ ಎಂಬಂತೆ ದೃಶ್ಯರೂಪಕ್ಕೆ ಅಳವಡಿಸಿರುವುದಕ್ಕೆ ಬಹಳ ಒಳ್ಳೆಯ ಉದಾಹರಣೆ. ಉತ್ತಮ ನಿರ್ದೇಶನಕ್ಕಾಗಿ ಆಸ್ಕರ್ ಪ್ರಶಸ್ತಿ ಪಡೆದ ಜಾನಿ ಕ್ಯಾಂಪಿಯನ್‌ಳ ’ದ ಪವರ್ ಆಫ್ ದ ಡಾಗ್’ ಕೂಡ ಮತ್ತೊಂದು ಉದಾಹರಣೆ. (ಇದು ಥಾಮಸ್ ಸಾವೆಜ್ ಬರೆದ ಇದೇ ಹೆಸರಿನ ಕಾದಂಬರಿ ಆಧಾರಿತ ಸಿನಿಮಾ)

ಡ್ರೈವ್ ಮೈ ಕಾರ್ ಸಿನಿಮಾ ಬಿಡುಗಡೆಗೊಂಡ ದಿನದಿಂದ ಹಿಡಿದು ನಿನ್ನೆಯ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭದವರೆಗೂ ಇದರ ಕುರಿತು ಪ್ರಶಂಸೆಯ ಮಾತುಗಳು ಬರುತ್ತಲೇ ಇವೆ. ಕಾನ್‌ನಿಂದ ಆಸ್ಕರ್‌ವರೆಗೂ ಈ ಸಿನಿಮಾ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನ ಬಾಚಿಕೊಂಡಿದೆ. ಒಂದು ಯಶಸ್ವಿ ಸಿನಿಮಾ ಜೊತೆ ಅದಕ್ಕೆ ಪ್ರೇರಣೆಯಾದ ಸಾಹಿತ್ಯ ಕೃತಿ ಮತ್ತು ಅದರ ಕರ್ತೃ ಸಿನಿಮಾದಷ್ಟೆ ಚರ್ಚೆ ಆಗುವುದು ಬಹಳ ಅಪರೂಪ. ಡ್ರೈವ್ ಮೈ ಕಾರ್ ಸಿನಿಮಾ ಇದಕ್ಕೆ ಕೊಂಚ ಅಪವಾದ. ಈ ಮೊದಲು ಮುರಾಕಮಿಯ ಕತೆ ಮತ್ತು ಕಾದಂಬರಿಗಳನ್ನು ಆಧಾರವಾಗಿಟ್ಟುಕೊಂಡು ಬಹಳಷ್ಟು ಸಿನಿಮಾಗಳು ಬಂದಿವೆ. 2017ರಲ್ಲಿ ತೆರೆಕಂಡ ಲೀ ಚಾಂಗ್ ಡಾಂಗ್ ನಿರ್ದೇಶನದ ’ಬರ್ನಿಂಗ್’ ಸಿನಿಮಾ ಹೊರತುಪಡಿಸಿ ಇನ್ಯಾವ ಸಿನಿಮಾಗಳಿಗೂ ಇಷ್ಟು ಚರ್ಚೆ ಆಗಲಿಲ್ಲ ಮತ್ತು ಮನ್ನಣೆಯೂ ಸಿಗಲಿಲ್ಲ. ಬರ್ನಿಂಗ್ ಸಿನಿಮಾ ಚರ್ಚೆ ಸಂದರ್ಭದಲ್ಲೂ ಮುರಾಕಮಿ ಹೆಸರು ಮತ್ತು ಅವನ ಕೃತಿಗಳ ಬಗ್ಗೆ ಚರ್ಚೆ ಆಗಿದ್ದು ಅಷ್ಟಾಗಿ ಇಲ್ಲ. ಡ್ರೈವ್ ಮೈ ಕಾರ್ ಸಿನಿಮಾ, ಸಂಬಂಧಿಸಿದಂತೆ ಮಾತ್ರ ಏಕೆ ಮುರಾಕಮಿಯ ಬಗ್ಗೆ ಇಷ್ಟು ಪ್ರಸ್ತಾಪ, ಚರ್ಚೆಯೆಲ್ಲಾ ಆಗುತ್ತಿದೆ ಎಂದು ಯೋಚಿಸುವಾಗ ನನಗೆ ಅನಿಸಿದ್ದು: ಡ್ರೈವ್ ಮೈ ಕಾರ್ ’ಮೆನ್ ವಿಥೌಟ್ ವುಮೆನ್’ ಕಥಾ ಸಂಕಲನದಲ್ಲಿರುವ ಕೆಲವೆ ಪುಟಗಳ ಒಂದು ಸಣ್ಣ ಕಥೆ. ನಿರ್ದೇಶಕ ರಿಸುಕೆ ಹಮಿಗುಚಿ ಈ ಕಥೆಯನ್ನ ಯಾವ ಪರಿಯಲ್ಲಿ ವಿಸ್ತರಿಸಿಕೊಂಡಿದ್ದಾನೆ ಅಂದರೆ, ಮುರಾಕಮಿಯ ಇತರೆ ಕಥೆಯಲ್ಲಿನ ಹಲವಾರು ಸಂಗತಿಗಳು ಈ ಸಿನಿಮಾದಲ್ಲಿ ಸಾವಯವವಾಗಿ ಮೇಳೈಸಿ ಬಂದಿವೆ. ಮುರಾಕಮಿ ತನ್ನ ಕಥೆಗಳಲ್ಲಿ ಹೇಳಲು ಬಯಸುವ ಅಲೋಚನೆಯ ಸಾರವನ್ನ ಹಮಿಗುಚಿ ಪ್ರೇಕ್ಷಕನಿಗೆ ದಾಟಿಸಿದ್ದಾನೆ. ಕೇವಲ ಒಂದು ಕಥೆಯಲ್ಲಿನ ಘಟನೆ ಮತ್ತು ಸಂಗತಿಯನ್ನು ಹೇಳುವುದು ಮಾತ್ರವಲ್ಲ ಕೃತಿಕಾರನ ಹಲವು ಕೃತಿಗಳ ಮೂಲ ಅಲೋಚನೆಯನ್ನೇ ಪ್ರೇಕ್ಷಕನಿಗೆ ದಾಟಿಸಿದ್ದಾನೆ ಅನಿಸುತ್ತದೆ.

ಡ್ರೈವ್ ಮೈ ಕಾರ್

ಮನುಷ್ಯ ಮನುಷ್ಯನ ನಡುವೆ ಸಂಬಂಧ ಬೆಸೆಯುವುದಾಗಲಿ, ಮನುಷ್ಯ ತನ್ನ ಮುರಿದ ಬದುಕನ್ನು ಮರು ಕಟ್ಟಿಕೊಳ್ಳುವುದಾಗಲಿ- ಅದು ಯಾವ ಕಾಲಕ್ಕೂ ಮನುಷ್ಯ ಸಹಜ ಸ್ಪಂದನೆ ಮತ್ತು ಮಾನವೀಯತೆಯಿಂದ ಮಾತ್ರ ಸಾಧ್ಯ ಅನಿಸುತ್ತದೆ. ಇದನ್ನು ಅರ್ಥ ಮಾಡಿಕೊಳ್ಳುವ ಮತ್ತು ಆ ಹಂತಕ್ಕೆ ತಲುಪುವ ಪ್ರಯಾಣ ಭಿನ್ನವಾಗಿರುತ್ತದೆ ಅಷ್ಟೆ. ಆಧುನಿಕ ಮತ್ತು ನಗರೀಕರಣ ಸಮಾಜದ ಸಂಕೀರ್ಣ ವ್ಯವಸ್ಥೆಯಲ್ಲಿ ಬದುಕು ಅನಿಶ್ಚಿತವಾಗಿದೆ. ಮನುಷ್ಯ ಮನುಷ್ಯನ ನಡುವೆ ಅಂತರ ಹೆಚ್ಚಾಗಿದೆ. ಮನುಷ್ಯ ತನ್ನ ಸಾಮುದಾಯಿಕ ಬದುಕಿನಿಂದ ವಿಮುಖನಾಗಿದ್ದಾನೆ. ಒಮ್ಮೆ ಬಿರುಕುಗೊಂಡ ಬದುಕನ್ನು ಮತ್ತೆ ಕೂಡಿಸಿಕೊಂಡು ಹೊಸ ಚೇತನದೊಂದಿಗೆ ಪರಸ್ಪರ ಗೌರವಗಳೊಂದಿಗೆ ಮರುಕಟ್ಟಿಕೊಳ್ಳುವಲ್ಲಿ ವಿಫಲನಾಗಿದ್ದಾನೆ. ಬಹಳ ಸಂಕೀರ್ಣವಾದ ಈ ಆಧುನಿಕ ಸಮಾಜ ಮತ್ತು ವ್ಯವಸ್ಥೆಯೊಳಗೆ ಮನುಷ್ಯ ತನ್ನನ್ನು ತಾನು ಮರು ಮೌಲ್ಯಮಾಪನ ಮಾಡಿಕೊಳ್ಳುವ, ಪರಸ್ಪರ ಗೌರವಗಳೊಂದಿಗೆ, ಮಾನವೀಯತೆಯ ಮುಖಾಂತರ ತಮ್ಮ ಬದುಕುಗಳನ್ನು ಗಟ್ಟಿಗೊಳಿಸಿಕೊಳ್ಳುವ ಆಳದ ಆಶಯ ಡ್ರೈವ್ ಮೈ ಕಾರ್ ಸಿನಿಮಾದು.

ಈ ಸಿನಿಮಾದಲ್ಲಿ ಎರಡು ಪ್ರಧಾನ ಪಾತ್ರಗಳಾದ ಕಫುಕ ಮತ್ತು ವಟಾರಿ – ಈ ಇಬ್ಬರ ನಡುವೆ ಬೆಳೆಯುವ ಒಂದು ವಿಶೇಷವಾದ ಸಂಬಂಧದ ಪ್ರಯಾಣವಾಗಲಿ, ಸಿನಿಮಾದೊಳಗೆ ಬರುವ ಆಂಟೊನ್ ಚೆಕಾವ್ ರಚಿತ ’ಅಂಕಲ್’ ವನ್ಯ ನಾಟಕದ ಸಂಗತಿ ಮತ್ತು ಪಾತ್ರಗಳಾಗಲಿ, ಮೇಲೆ ಚರ್ಚಿಸಿದ ಆಶಯದ ಪೂರಕವಾಗಿಯೇ ಅಭಿವ್ಯಕ್ತಿಗೊಂಡಿದೆ. ಇದು ದೇಶ ಭಾಷೆಗಳ ಗಡಿಗಳನ್ನು ಮೀರಿದ್ದು. ಅದಕ್ಕಾಗಿಯೇ ಈ ಸಿನಿಮಾದಲ್ಲಿ ಬರುವ ’ಅಂಕಲ್’ ವನ್ಯ ನಾಟಕದಲ್ಲಿ, ಪಾತ್ರಗಳ ದೇಶ ಭಾಷೆ ಭಿನ್ನವಾಗಿದೆ. ನಾಟಕದ ಸಂಭಾಷಣೆಯನ್ನು ಆ ಪಾತ್ರಗಳು ತಮ್ಮದೇ ಭಾಷೆಯಲ್ಲಿ ಪ್ರಸ್ತುತಪಡಿಸುತ್ತವೆ.

ಡ್ರೈವ್ ಮೈ ಕಾರ್ ಕಥೆಯಲ್ಲಿನ, ಬಹಳ ಪ್ರಬುದ್ಧ ಮತ್ತು ಅಷ್ಟೇ ನಿರ್ಲಿಪ್ತವಾಗಿರುವ ವಟಾರಿಯಳ ಪಾತ್ರ ಮತ್ತು ಕಾರ್ ಡ್ರೈವಿಂಗ್‌ನಲ್ಲಿ ಅವಳಿಗಿರುವ ಕೌಶಲ್ಯದ ವಿವರಗಳನ್ನು ಹಮಿಗುಚಿ ದೃಶ್ಯಗಳಲ್ಲಿ ಹೇಗೆ ಕಟ್ಟಿಕೊಟ್ಟಿರಬಹುದೆಂಬುದರ ಬಗ್ಗೆ ತುಂಬಾ ಕುತೂಹಲವಿತ್ತು. ಬಹಳ ಸಶಕ್ತವಾಗಿ ಈ ಪಾತ್ರ ಮೂಡಿಬಂದಿದೆ. ಈ ಪಾತ್ರದಲ್ಲಿ ಟೊಕೊ ಮಿಉರಿ ಬಹಳ ಅದ್ಭುತವಾಗಿ ನಟಿಸಿದ್ದಾಳೆ.

ನಿರ್ದೇಶಕ ರಿಸುಕೆ ಹಮಿಗುಚಿ

ಹಮಿಗುಚಿ ಜಪಾನ್ ದೇಶದ ಹೊಸ ತಲೆಮಾರಿನ ಸಿನಿಮಾ ನಿರ್ದೇಶಕ. ಸಾಕಷ್ಟು ಕಿರು ಚಿತ್ರ ಮತ್ತು ಸಾಕ್ಷ್ಯ ಚಿತ್ರಗಳನ್ನು ನಿರ್ದೇಶನ ಮಾಡಿದ ಅನುಭವ ಇರುವ ಹಮಿಗುಚಿ ಪೂರ್ಣ ಪ್ರಮಾಣದಲ್ಲಿ ನಿರ್ದೇಶನ ಮಾಡಿದ ಮೊದಲ ಸಿನಿಮಾ ‘Asako I & II’ 2018ರಲ್ಲಿ ತೆರೆಕಂಡಿತು. ಇದು ಕಾನ್ ಚಿತ್ರೋತ್ಸವದಲ್ಲಿ ಪಡೆದ ಮನ್ನಣೆ ಒಳಗೊಂಡಂತೆ ಜಾಗತಿಕವಾಗಿ ಹೆಸರು ತಂದುಕೊಟ್ಟಿತು. 2021ರಲ್ಲಿ ತೆರೆಕಂಡ Wheel of Fortune and Fantacy ಕೂಡ ಹಮಿಗುಚಿಗೆ ಜಾಗತಿಕ ಮನ್ನಣೆ ದೊರಕಿಸಿಕೊಟ್ಟಿತು. ಮುರಾಕಮಿ ಕಥೆಯನ್ನು ಇಷ್ಟು ಪರಿಣಾಮಕಾರಿಯಾಗಿ ಚಿತ್ರಕಥೆಗೆ ಒಗ್ಗಿಸಿ ಅದನ್ನು ಇನ್ನೊಂದು ಹಂತಕ್ಕೆ ದಾಟಿಸಿ ದೃಶ್ಯದಲ್ಲಿ ಕಟ್ಟಿರುವ ಹಮಿಗುಚಿಯ ಸಾಮರ್ಥ್ಯ ಮತ್ತು ದೃಶ್ಯ ಮಾಧ್ಯಮದ ಸಾಧ್ಯತೆ ಕುರಿತ ಅವನಿಗಿರುವ ಅರಿವು ಮಾತ್ರ ಅಸಾಧ್ಯವೆಂಬಂತೆ ಕಾಣುತ್ತದೆ. ಹಮಿಗುಚಿಗೆ ತನ್ನದೇ ಆದ ಒಂದು ಶೈಲಿ ಇದೆ.

ರಿಸುಕೆ ಹಮಿಗುಚಿ

2020ರಲ್ಲಿ ದಕ್ಷಿಣ ಕೊರಿಯಾದ ನಿರ್ದೇಶಕ ಬಾಂಗ್ ಜೂನ್-ಹೊನ ’ಪ್ಯಾರಸೈಟ್’ ಸಿನಿಮಾ ಆಸ್ಕರ್ ಪ್ರಶಸ್ತಿಯ ಸಂಪ್ರದಾಯವನ್ನ ಮುರಿದು, ಮೊದಲ ಬಾರಿಗೆ ನಾನ್-ಇಂಗ್ಲಿಷ್ ಸಿನಿಮಾವೊಂದು ಹಲವು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಇದೇ ಇತಿಹಾಸವನ್ನು ಹಮಿಗುಚಿಯ ಡ್ರೈವ್ ಮೈ ಕಾರ್ ಕೂಡ ಮುಂದುವರೆಸುತ್ತದೆ ಎಂಬ ದಟ್ಟವಾದ ನಿರೀಕ್ಷೆ ಎಲ್ಲರಲ್ಲೂ ಇತ್ತು. ಕಾನ್‌ನಂತಹ ಪ್ರತಿಷ್ಠಿತ ಚಿತ್ರೋತ್ಸವದಲ್ಲಿ ಈಗಾಗಲೆ ಮೂರು ಪ್ರಶಸ್ತಿಗಳನ್ನು ಪಡೆದಿದ್ದ ಈ ಸಿನಿಮಾ ಆಸ್ಕರ್‌ನಲ್ಲೂ ನಾಲ್ಕು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತ್ತು. ಕೊನೆಗೆ ಪ್ರಶಸ್ತಿ ದಕ್ಕಿದ್ದು ಮಾತ್ರ ’ಉತ್ತಮ ವಿದೇಶಿ ಚಿತ್ರ’ ಎಂಬ ಒಂದೇ ಒಂದು ಕೆಟಗರಿಯಲ್ಲಿ. ಕನಿಷ್ಟ Best Screenplay Adaptation ವಿಭಾಗದಲ್ಲಾದರೂ ಮತ್ತೊಂದು ಪ್ರಶಸ್ತಿ ಸಿಗಬೇಕಾಗಿತ್ತು.

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು ತೀಕ್ಷ್ಣವಾಗಿ ಶೋಧಿಸುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others

 


ಇದನ್ನೂ ಓದಿ: ಸಿನಿಮಾ ವಿಮರ್ಶೆ; ಪೊಲೀಸ್ ವ್ಯವಸ್ಥೆಯ ಅಂತರಂಗಕ್ಕೆ ಚಿಕಿತ್ಸೆಯ ಅಗತ್ಯವನ್ನು ಮನಗಾಣಿಸುವ ‘ರೈಟರ್’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...

ಬಿಹಾರದ ನಳಂದ ಜಿಲ್ಲೆಯ ಶೀತ್ಲಾ ದೇವಸ್ಥಾನದಲ್ಲಿ ಕಾಲ್ತುಳಿತ: ಎಂಟು ಮಹಿಳೆಯರು ಸಾವು; ಹಲವು ಮಂದಿಗೆ ಗಾಯ 

ಬಿಹಾರದ ನಳಂದ ಜಿಲ್ಲೆಯ ಶೀತ್ಲಾ ದೇವಸ್ಥಾನದಲ್ಲಿ ಮಂಗಳವಾರ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಎಂಟು ಮಹಿಳೆಯರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.  ಪೂಜೆಗಾಗಿ ದೇವಾಲಯದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಜಮಾಯಿಸಿದಾಗ ಈ ಘಟನೆ ಸಂಭವಿಸಿದ್ದು,...

ದಲಿತ ಕ್ರೈಸ್ತರ ಎಸ್‌ಸಿ ಸ್ಥಾನಮಾನ ರದ್ದು ಆದೇಶ; ಸುಪ್ರೀಂ ಕೋರ್ಟ್ ತೀರ್ಪು ಖಂಡಿಸಿದ ಮಂದಕೃಷ್ಣ ಮಾದಿಗ

ದಲಿತರು ಕ್ರೈಸ್ತರಾದರೆ ಅವರ ಎಸ್‌ಸಿ ಸ್ಥಾನಮಾನ ರದ್ದುಗೊಳ್ಳಲಿದೆ ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಬಲವಾಗಿ ಖಂಡಿಸುತ್ತೇವೆ ಎಂದು ಎಂಆರ್‌ಪಿಎಸ್ ಫೌಂಡೇಶನ್ ಅಧ್ಯಕ್ಷ ಮಂದಕೃಷ್ಣ ಮಾದಿಗ ಹೇಳಿದರು. "ದೇಶದಲ್ಲಿ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬೇಕು,...

ಜಾರ್ಖಂಡ್: ರಾಮನವಮಿ ಘರ್ಷಣೆಗೆ ಸಂಬಂಧಿಸಿದ 19 ಜನರನ್ನು ಬಂಧಿಸಿ, ಕೈಕೋಳ ಹಾಕಿ ಸಾರ್ವಜನಿಕ ಮೆರವಣಿಗೆ ಮಾಡಿದ ಪೊಲೀಸರು

ಜಾರ್ಖಂಡ್‌ನ ಗರ್ವಾ ಜಿಲ್ಲೆಯಲ್ಲಿ ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಎರಡು ಸಮುದಾಯಗಳ ನಡುವೆ ನಡೆದ ಘರ್ಷಣೆಯ ನಂತರ ಕನಿಷ್ಠ 19 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಭದ್ರತಾ ಪಡೆಗಳನ್ನು ಭಾರೀ ಪ್ರಮಾಣದಲ್ಲಿ ನಿಯೋಜಿಸಿದ ನಂತರ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ : ಹೊಸ ಮಸೂದೆ ಅಂಗೀಕರಿಸಿದ ಇಸ್ರೇಲ್ ಸಂಸತ್ತು

ಇಸ್ರೇಲ್ ಸಂಸತ್ತು ಸೋಮವಾರ (ಮಾರ್ಚ್ 30, 2026) ಹೊಸ ಮಸೂದೆಯೊಂದನ್ನು ಅಂಗೀಕರಿಸಿದೆ. ಇದರ ಪ್ರಕಾರ, ಮಿಲಿಟರಿ ನ್ಯಾಯಾಲಯದಲ್ಲಿ ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಲಾಗಿದೆ. ಪ್ರಧಾನಿ ಬೆಂಜಮಿನ್...

ಇರಾನ್ ಮೇಲೆ ದಾಳಿ : ಅಮೆರಿಕ ವಿಮಾನಗಳಿಗೆ ತನ್ನ ವಾಯುಪ್ರದೇಶ ಮುಚ್ಚಿದ ಸ್ಪೇನ್

ಇರಾನ್ ಮೇಲಿನ ದಾಳಿಗಳಲ್ಲಿ ಭಾಗಿಯಾಗಿರುವ ಅಮೆರಿಕದ ವಿಮಾನಗಳಿಗೆ ಸ್ಪೇನ್ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ ಎಂದು ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್ (ಮಾ.30) ಸೋಮವಾರ ತಿಳಿಸಿದ್ದಾರೆ. ಜಂಟಿಯಾಗಿ ನಿರ್ವಹಿಸುವ ಸೇನಾ ನೆಲೆಗಳನ್ನು ಬಳಸಲು ಈ...

ಜನಗಣತಿ-2027 : ‘ಸ್ಥಿರ’ ಲಿವ್-ಇನ್ ಜೋಡಿಗೆ ವೈವಾಹಿಕ ಸ್ಥಾನಮಾನ

ತಮ್ಮ ಸಂಬಂಧ 'ಸ್ಥಿರ' ಎಂದು ಹೇಳಿಕೊಳ್ಳುವ ಲಿವ್-ಇನ್ ಜೋಡಿಗಳನ್ನು 2027ರ ಜನಗಣತಿಯಲ್ಲಿ ವಿವಾಹಿತ ದಂಪತಿಯೆಂದು ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ. ಜನಗಣತಿ ವೆಬ್‌ಸೈಟ್‌ನ FAQ (ಪದೇ ಪದೇ ಕೇಳಲಾಗುವ ಪ್ರಶ್ನೆಗಳು) ವಿಭಾಗದಲ್ಲಿ ಈ ಬಗ್ಗೆ ಸ್ಪಷ್ಟನೆ...

ಉನ್ನತ ಸಾಂಸ್ಥಿಕ ಹುದ್ದೆಗಳಲ್ಲಿ ‘ಬಹುಜನ’ ಪ್ರಾತಿನಿಧ್ಯದ ಕೊರತೆ: ವ್ಯವಸ್ಥಿತ ತಾರತಮ್ಯದ ರೂಪ ಎಂದ ರಾಹುಲ್ ಗಾಂಧಿ 

ಉನ್ನತ ಸಂಸ್ಥೆಗಳ ಹಿರಿಯ ನಾಯಕತ್ವದಲ್ಲಿ "ಬಹುಜನ" ಸಮುದಾಯಗಳಿಗೆ ಪ್ರಾತಿನಿಧ್ಯದ ಕೊರತೆಯಿದೆ ಎಂದು ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ಇದು ವ್ಯವಸ್ಥಿತ ತಾರತಮ್ಯದ ಒಂದು ರೂಪವಾಗಿದ್ದು ಅದನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.  ಲೋಕಸಭೆಯ ವಿರೋಧ ಪಕ್ಷದ...

ಗಾಯಗಳ ತೀವ್ರತೆಯಿಂದಾಗಿ ನೌಕಾಪಡೆಯ ಮುಖ್ಯಸ್ಥ ತಂಗ್ಸಿರಿ ಸಾವನ್ನಪ್ಪಿದ್ದಾರೆ: ದೃಢಪಡಿಸಿದ ಇರಾನ್

ತಾನು ನಡೆಸಿದ ದಾಳಿಯಿಂದ ಇರಾನ್‌ ನೌಕಾಪಡೆಯ ರಿಯರ್ ಅಡ್ಮಿರಲ್ ಅಲಿರೆಜಾ ತಂಗ್ಸಿರಿ ಸಾವನ್ನಪ್ಪಿದ್ದಾರೆ ಎಂದು ಕಳೆದ ಗುರುವಾರ (ಮಾ.26) ಇಸ್ರೇಲ್ ಹೇಳಿಕೊಂಡಿತ್ತು. ಸುದ್ದಿ ಖಷಿತಪಡಿಸಿರುವ ಇರಾನ್, ದಾಳಿಯಿಂದ ಸಂಭವಿಸಿದ ತೀವ್ರ ಗಾಯಗಳಿಂದ ತಂಗ್ಸಿರಿ...