Homeಕರ್ನಾಟಕಮೈಸೂರಿನಲ್ಲಿ ಹೀಗೊಂದು ‘ದ್ರಾವಿಡ ಮಕ್ಕಳ ಸೌಹಾರ್ದ ಇಫ್ತಾರ್‌ ಕೂಟ’!

ಮೈಸೂರಿನಲ್ಲಿ ಹೀಗೊಂದು ‘ದ್ರಾವಿಡ ಮಕ್ಕಳ ಸೌಹಾರ್ದ ಇಫ್ತಾರ್‌ ಕೂಟ’!

- Advertisement -
- Advertisement -

ಮೈಸೂರಿನ ಸೌಹಾರ್ದ ಪ್ರಿಯ ನಾಗರಿಕರು ತಮ್ಮ ಆಸುಪಾಸು ಕೆಲಸ ಮಾಡುತ್ತಿದ್ದ ಶ್ರಮಜೀವಿ ಮುಸ್ಲಿಮರಿಗೆ ಇಫ್ತಾರ್‌ ಕೂಟ ಆಯೋಜಿಸಿ ಶುಕ್ರವಾರ ಸೌಹಾರ್ದತೆ ಮರೆದಿದ್ದಾರೆ. ಈ ವೇಳೆ ಇಫ್ತಾರಿಗೆ ಆಗಮಿಸಿದ್ದ ಅಥಿತಿಯೊಬ್ಬರು, ‘ಇದು ಹಿಂದೂ ಮುಸ್ಲಿಮರ ಇಫ್ತಾರ್‌‌ ಕೂಟವಲ್ಲ, ದ್ರಾವಿಡ ಮಕ್ಕಳ ಇಫ್ತಾರ್‌‌ ಕೂಟ’ ಎಂದು ಬಣ್ಣಿಸಿದ್ದಾರೆ.

ಸೌಹಾರ್ದ ಪ್ರಿಯ ನಾಗರಿಕರ ಈ ‘ದ್ರಾವಿಡ ಮಕ್ಕಳ ಸೌಹಾರ್ದ ಇಫ್ತಾರ್‌ ಕೂಟ’ ಮೈಸೂರು ಬಸ್‌ ನಿಲ್ದಾಣದ ಮುಂದೆ ಇರುವ ‘ಹೋಟೆಲ್‌ ಮಹಾರಾಜಾ’ದಲ್ಲಿ ಆಯೋಜಿಸಲಾಗಿತ್ತು. ನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿ ಸುತ್ತಮುತ್ತ ಇರುವ ಶ್ರಮಜೀವಿ ಮುಸ್ಲಿಮರು ಈ ಇಪ್ತಾರ್‌ ಕೂಟದ ಅಥಿತಿಗಳಾಗಿದ್ದರು. ಗ್ಯಾರೇಜ್‌ಗಳಲ್ಲಿ ಕೆಲಸ ಮಾಡುವವರು, ಪಂಚರ್‌ ಅಂಗಡಿಗಳಲ್ಲಿ ಇರುವವರು ಹಾಗೂ ಹಣ್ಣಿನ ಅಂಗಡಿಗಳನ್ನು ನಡೆಸುವವರು ಸೇರಿದಂತೆ ಹಲವು ಶ್ರಮ ಜೀವಿ ಮುಸ್ಲಿಮರಿಗೆ ಆಹ್ವಾನ ನೀಡಲಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಆಯೋಜಕರು ಅಥಿಗಳಿಗೆ ಹೂವು ನೀಡಿ ಸ್ವಾಗತಿಸಿದರು. ಈ ವೇಳೆ ಆಯೋಜಕರಲ್ಲೊಬ್ಬರಾಗಿರುವ ಅಂಕಣಕಾರ ಕೆ.ಪಿ. ಸುರೇಶ್‌, ದೇಶದ ಪರಂಪರೆ, ಸ್ವಾತಂತ್ರ್ಯ ಹೋರಾಟದ ಕಷ್ಟ ಸುಖವನ್ನು ವಿವರಿಸಿದರು. ಸರಳವಾಗಿ ನಾವೆಲ್ಲರೂ ಜೊತೆಯಾಗಿ ಉಣ್ಣಬೇಕಾದ ಊಟವೆಂಬ ಸಾಮಾನ್ಯ ಸಂಗತಿಯೂ ಅಸೀಮ ಸಾಹಸದ ಸಂಗತಿಯಾಗಿರುವುದು ನಮ್ಮ ದುರಂತ ಎಂದು ಬೇಸರ ವ್ಯಕ್ತಪಡಿಸಿ, ಅಥಿತಿಗಳಿಗೆ ಶುಭ ಹಾರೈಸಿದರು.

ಇದನ್ನೂ ಓದಿ: ಸೌಹಾರ್ದ ಕಥನ: ಹಿಂದೂ ಯುವಕರಿಗೆ ಕೇಸರಿ ಶಾಲು ತೊಡಿಸಿದ ಮುಸ್ಲಿಮರು – ಹಣ್ಣು ತಿನ್ನಿಸಿ ಇಫ್ತಾರ್ ಆಚರಿಸಿದ ರಾಮ ಮಾಲಾ ಭಕ್ತರು

ಬಳಿಕ ಮಾತನಾಡಿದ ಮಹೇಶ್ ಅವರು, “ವ್ಯಾವಹಾರಿಕವಾಗಿ ನಾವೆಲ್ಲ ಪರಸ್ಪರ ಸ್ನೇಹದಲ್ಲಿದ್ದರೂ ನಮಗೆ ನೆರೆಮನೆಯ ಊಟ ಹಬ್ಬದ ಬಗ್ಗೆ ಗೊತ್ತಿಲ್ಲ. ಪರಸ್ಪರ ಊಟ, ಹಬ್ಬದ ಬಗ್ಗೆ ಕುತೂಹಲ, ಮೆಚ್ಚುಗೆ ಇದ್ದರಾಯಿತಲ್ಲ, ವ್ಯತ್ಯಾಸವೇ ಮುಖ್ಯವಾದರೆ ಹೇಗೆ? ಬಾಗಿಲು ಸರಿಸಿ ನಾವು ಒಳ ನುಗ್ಗಬೇಕಿದೆ, ಇದು ಅಂಥಾ ಒಂದು ವಿನೀತ ಪ್ರಯತ್ನ” ಎಂದು ಹೇಳಿದರು.

ಅಥಿತಿಗಳಲ್ಲೊಬ್ಬರಾದ ಮೈಸೂರಿನ ಕನ್ನಡ ಪ್ರೇಮಿ, ಮೆಡಿಕಲ್‌‌ ಅಂಗಡಿಯ ಮಾಲಿಕ ಮನ್ಸೂರ್ ಅಹ್ಮದ್ ಖಾನ್‌ ಅವರು ಮಾತನಾಡಿ, “ಇದು ಹಿಂದೂ-ಮುಸ್ಲಿಂ ಭೋಜನ ಕೂಟವಲ್ಲ. ನಾವೆಲ್ಲರೂ ದ್ರಾವಿಡ ಮಕ್ಕಳು, ಹಾಗಾಗಿ ಇದು ದ್ರಾವಿಡ ಮಕ್ಕಳ ಭೋಜನ ಕೂಟ. ಇದು ಹೆಚ್ಚಿದಷ್ಟೂ ನಮ್ಮ ಬಾಂಧವ್ಯ ಹೆಚ್ಚುತ್ತದೆ” ಎಂದರು.

ಕಾರ್ಯಕ್ರಮದಲ್ಲಿ, “ಕಟ್ಟುತ್ತೇವೆ ನಾವು, ಕಟ್ಟುತ್ತೇವೆ ನಾವು, ಕಟ್ಟೇ ಕಟ್ಟುತ್ತೇವಾ. ಒಡೆದ ಮನಸುಗಳ, ಕಂಡ ಕನಸುಗಳು ಮತ್ತೆ ಕಟ್ಟುತ್ತೇವೆ” ಹಾಡನ್ನು ಹಾಡಲಾಯಿತು. ಊಟವಾದ ಬಳಿಕ ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯ ಭಾವಚಿತ್ರಕ್ಕೆ ಹೂ ಹಾಕಿ ಗೌರವಿಸಲಾಯಿತು.

ಇದನ್ನೂ ಓದಿ: ಬಿಹಾರ: ತೇಜಸ್ವಿ ಯಾದವ್‌‌ ಆಯೋಜಿಸಿದ್ದ ಇಫ್ತಾರ್‌‌ ಕೂಟದಲ್ಲಿ ಸಿಎಂ ನಿತೀಶ್‌ ಕುಮಾರ್‌ ಭಾಗಿ!; ಮತ್ತೊಮ್ಮೆ ‘ಮಹಾಘಟಬಂಧನ್‌’?

ಪ್ರಭು, ಗಣೇಶ, ಬೆಟ್ಟೇಗೌಡ, ಚಂದ್ರಶೇಖರ ಐಜೂರ್, ಉಮೇಶ್, ಕುಮಾರ್, ಲೆಕ್ಕ ಪರಿಶೋಧಕ ಆರಾಧ್ಯ ಮತ್ತು ಗೆಳೆಯರು ಸೌಹಾರ್ದ ಇಫ್ತಾರ್‌ ಕೂಟದ ಆಯೋಜನೆಗೆ ಕೈಜೋಡಿಸಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....