Homeಮುಖಪುಟಆರ್‌ಎಸ್‌ಎಸ್‌ ಮುಖ್ಯಸ್ಥರ ಮಾತನ್ನು ಪಾಲಿಸುತ್ತವೆಯೇ ಬಜರಂಗದಳ, ಬಿಜೆಪಿ, ಎಬಿವಿಪಿ, ವಿಎಚ್‌ಪಿ ಇತ್ಯಾದಿ?

ಆರ್‌ಎಸ್‌ಎಸ್‌ ಮುಖ್ಯಸ್ಥರ ಮಾತನ್ನು ಪಾಲಿಸುತ್ತವೆಯೇ ಬಜರಂಗದಳ, ಬಿಜೆಪಿ, ಎಬಿವಿಪಿ, ವಿಎಚ್‌ಪಿ ಇತ್ಯಾದಿ?

ಮಸೀದಿ ಕೆಡವಿ ಮಂದಿರ ಹುಡುಕುವ ಹೋರಾಟದಲ್ಲಿ ಆರ್‌ಎಸ್‌ಎಸ್‌ ಇಲ್ಲ ಎಂದು ಮೋಹನ್‌ ಭಾಗವತ್‌ ಹೇಳಿದರೆ, ಮತ್ತೊಂದೆಡೆ ಪ್ರವಾದಿ ಮುಹಮ್ಮದ್‌ ಅವರನ್ನು ಅವಹೇಳನ ಮಾಡಿದ ವಕ್ತಾರರನ್ನು ಬಿಜೆಪಿ ಉಚ್ಚಾಟನೆ ಮಾಡಿದೆ. ಈ ವಿದ್ಯಮಾನಗಳನ್ನು ಹೇಗೆ ನೋಡಬೇಕು?

- Advertisement -
- Advertisement -

ಎರಡು ಸುದ್ದಿಗಳು. ಮೊದಲನೆಯದು, ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕುವುದು ಬೇಡ. ಆ ಹೋರಾಟದಲ್ಲಿ ಆರ್‌ಎಸ್‌ಎಸ್‌ ಇಲ್ಲ: ಮೋಹನ್ ಭಾಗವತ್. ಎರಡನೆಯದು, ಮೊಹಮ್ಮದ್ ಪೈಗಂಬರ್ ಅವರನ್ನು ಅವಮಾನಿಸಿದ, ಬಿಜೆಪಿ ಓರ್ವ ವಕ್ತಾರೆ ಅಮಾನತು, ಓರ್ವ ವಕ್ತಾರ ಉಚ್ಛಾಟನೆ.

ಅಯೋಧ್ಯೆ ರಾಮಮಂದಿರದ ನಂತರ ಕಾಶಿ ಜ್ಞಾನವ್ಯಾಪಿ ಮಸೀದಿ, ಮಥುರಾ ಶ್ರೀಕೃಷ್ಣ ದೇವಸ್ಥಾನಗಳನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು ಎಂಬ ಕೂಗು ಇತ್ತು. ನಂತರ ಅದು ತಾಜಮಹಲ್, ಕುತುಬ್ ಮೀನಾರ್ ನಂತಹ ಜಾಗತಿಕ ಪ್ರಸಿದ್ಧ ಸ್ಥಳವೂ ಸೇರಿ, ಶ್ರೀರಂಗಪಟ್ಟಣ, ಮಂಗಳೂರು ಬಳಿ ಮಳಲಿ ಮಸೀದಿ ಸೇರಿದಂತೆ ದೇಶದ ಹಲವೆಡೆ ಮಸೀದಿ ದೇವಸ್ಥಾನವಾಗಿತ್ತು. ಅದರ ಸರ್ವೇ ಆಗಲಿ ಎಂಬ ಕೂಗು ವ್ಯಾಪಿಸಿತು.
ಇದೀಗ ಆರ್‌ಎಸ್‌ಎಸ್‌ನ ಸುಪ್ರೀಂ ಮೋಹನ್ ಭಾಗವತ್ ಸ್ಪಷ್ಟವಾಗಿ, “ಪ್ರತೀ ಮಸೀದಿಯಲ್ಲೂ ಹಿಂದೂ ದೇವರನ್ನು ಹುಡುಕುವ ಹೋರಾಟದಲ್ಲಿ ನಾವಿಲ್ಲ. ಇತಿಹಾಸದ ತಪ್ಪುಗಳನ್ನು ನಾವೂ ಮಾಡಿದ್ದಲ್ಲ, ಮುಸ್ಲಿಮರೂ ಮಾಡಿದ್ದಲ್ಲ. ಒಂದೆರಡು ಪ್ರಮುಖ ಕ್ಷೇತ್ರದ ಕುರಿತು ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳಬೇಕು. ಉಳಿದಂತೆ ಹೋರಾಟಕ್ಕೆ ನಾವಿಲ್ಲ” ಎಂದು ಹೇಳಿಬಿಟ್ಟಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಆರ್‌ಎಸ್‌ಎಸ್‌ನಲ್ಲಿ ಒಂದಿಷ್ಟು ನಿಯಮವಿದೆ. ಅದರಲ್ಲಿ ಒಂದು “ಸೂಚನೆ” ಇದೆ. ಅಂದರೆ ಸಂಘದ ಸ್ವಯಂ ಸೇವಕರಿಗೆ ಮೇಲಿನಿಂದ ಬರುವ ಸೂಚನೆ ಪಾಲಿಸುವುದು ಕಡ್ಡಾಯ. ಅದನ್ನು ಪ್ರಶ್ನಿಸುವಂತಿಲ್ಲ, ಉಲ್ಲಂಘಿಸುವಂತಿಲ್ಲ. ಹಾಗೇ ಮಾಡಿದವರನ್ನು ‘ಉಪೇಕ್ಷೆ’ ಮಾಡುವ ಮೂಲಕ ನಿರ್ಲಕ್ಷ್ಯ ಮಾಡುತ್ತಾರೆ. ಯಾವುದೇ ಜವಾಬ್ದಾರಿ ಕೊಡುವುದಿಲ್ಲ. ತನ್ನಿಂದ ತಾನೇ ಆತ ಮೂಲೆಗೆ ಸರಿಯಬೇಕಾದ ಪರಿಸ್ಥಿತಿ.

ಇದನ್ನೂ ಓದಿರಿ: ಕಾರ್ಕಳ: ಗೋಡ್ಸೆ ಬೋರ್ಡ್ ತೆರವು; ರಸ್ತೆಗೆ ನಾರಾಯಣಗುರುಗಳ ಹೆಸರಿಡುವಂತೆ ಕಾಂಗ್ರೆಸ್ ಆಗ್ರಹ

ಈಗ ಸಂಘದ ಸಂಯೋಜನೆಯಲ್ಲಿ (ಸಹ ಸಂಘಟನೆಗಳು) ಅನೇಕವಿವೆ. ವಿಹೆಚ್‌ಪಿ, ಬಿಜೆಪಿ, ಅಭಾವಿಪ, ಭಜರಂಗದಳ, ದುರ್ಗಾವಾಹಿನಿ ಇತ್ಯಾದಿ. (ರಾಮ ಸೇನೆ, ಹಿಂದೂ ಮಹಾಸಭಾ ಇದರ ಒಳಗಿರದ ಸ್ವತಂತ್ರ ಸಂಘಟನೆಗಳು. ಆದರೂ ಅವರು ಆರ್‌ಎಸ್‌ಎಸ್‌ಅನ್ನು ವಿರೋಧಿಸುವುದಿಲ್ಲ.)

ಈ ಸಹ ಸಂಘಟನೆಗಳು ಸರ ಸಂಘಚಾಲಕರ ಸೂಚನೆಯನ್ನು ಬೈಠಕ್ ಗಳ ಮೂಲಕ ಪ್ರತೀ ಕಾರ್ಯಕರ್ತರಿಗೆ ತಲುಪಿಸಲೇಬೇಕು. ಅದು ಅನುಶಾಸನದ ನೆಲೆಗಟ್ಟಿನಲ್ಲಿ. (ನಾನು ಸಂಘದಲ್ಲಿ ಇದ್ದಾಗ ಈ ಪದ್ಧತಿ ಇತ್ತು. ಇದೆಲ್ಲಾ ಬದಲಾಗಿರಲಿಕ್ಕಿಲ್ಲವೆಂದು ಭಾವಿಸಿದ್ದೇನೆ.)

ಈಗ ಮೋಹನ್ ಭಾಗವತರ ಮಾತನ್ನು ಸಂಘದ ಪ್ರತಿಯೊಬ್ಬನೂ ಕಡ್ಡಾಯವಾಗಿ ಪಾಲಿಸಲೇಬೇಕು. ಆತ ಬಿಜೆಪಿಯಲ್ಲಿರಲಿ, ಭಜರಂಗದಳದಲ್ಲಿರಲಿ. ಆತ ತಾನು ಆರ್‌ಎಸ್‌ಎಸ್‌ ಅಲ್ಲ, ಕೇವಲ ಬಿಜೆಪಿ ಅಥವಾ ಅಭಾವಿಪ ಎಂದು ಹೇಳಿಕೊಳ್ಳಬಹುದು. ಆಗ ಆತನ ನಿಲುವು ಸಂಘದ್ದು ಆಗಿರುವುದಿಲ್ಲ. ಅದಕ್ಕೆ ಬೆಲೆಯೂ ಇಲ್ಲ. ಸಂಘದ ಹೆಸರು ದುರುಪಯೋಗ ಮಾಡಿಕೊಂಡರೆ ಸಂಘದವರು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.

ಕೇಂದ್ರ ಮತ್ತು ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ. ಅದರ ಬಹುತೇಕ ನಾಯಕರು ತಾವು ಆರ್‌ಎಸ್‌ಎಸ್‌ ಎಂದೇ ಹೇಳುವುದು. (ಶಾಖೆಗೆ ಹೋಗದವರೂ ಹಾಗೇ ಹೇಳಿಕೊಳ್ಳುತ್ತಿರುವುದೂ ಇದೆ.)

ಇದನ್ನೂ ಓದಿರಿ: ಬಿಜೆಪಿ ನಾಯಕರಿಂದ ಪ್ರವಾದಿ ನಿಂದನೆ ಪ್ರಕರಣ: ಕತಾರ್‌, ಕುವೈತ್‌, ಇರಾನ್‌ ದೇಶಗಳಿಂದ ಭಾರತ ರಾಯಭಾರಿಗೆ ಸಮನ್ಸ್‌

ಈಶ್ವರಪ್ಪನವರು “ಹೌದ್ರೀ, ಸಂಘದ ಆದೇಶದಂತೆ ನಾವು ನಡೆಯುವುದು… ಏನೀಗ?” ಎಂದು ವಿಧಾನಸೌಧದಲ್ಲೇ ಗುಡುಗಿರುವುದು ದಾಖಲಾಗಿದೆ. ಸಿ.ಟಿ.ರವಿ, ಯತ್ನಾಳ್‌, ಅಶೋಕ್‌, ನಳೀನ್‌ ಇತ್ಯಾದಿ ನಾಯಕರು ತಾವು ಆರ್‌ಎಸ್‌ಎಸ್‌ ಎಂದೇ ಹೇಳುವುದು. ಅದು ನಿಜ ಕೂಡಾ.

ಆರ್‌ಎಸ್‌ಎಸ್‌ನ ಕೆಳ ಹಂತದಿಂದ ರಾಷ್ಟ್ರ ಮಟ್ಟದವರಗೆ ನಿರಂತರವಾಗಿ ಪರಿವಾರ ಬೈಠಕ್ ನಡೆಯುತ್ತದೆ. ಅಲ್ಲಿ ಕೆಲವು ವಿಷಯಗಳಲ್ಲಿ ಅಭಿಪ್ರಾಯ ಕ್ರೂಢೀಕರಿಸಿ ಬೈಠಕ್ ಆಗುತ್ತದೆ. ಏಕ ಅಭಿಪ್ರಾಯ ಘೋಷಣೆಯಾಗುತ್ತದೆ. ಜಿಲ್ಲಾಮಟ್ಟದಿಂದ ರಾಷ್ಟ್ರ ಮಟ್ಟದತನಕ ಆರ್‌ಎಸ್‌ಎಸ್‌ನ ಓರ್ವ ವ್ಯಕ್ತಿಯನ್ನು ಸಂಘಟನಾ ಕಾರ್ಯದರ್ಶಿ ಎಂದು ಬಿಜೆಪಿಗೆ ನೀಡಲಾಗುತ್ತದೆ. ಆತ ಸಂಘ ಮತ್ತು ಬಿಜೆಪಿ ನಡುವೆ co-ordinator ಆಗಿ ಕಾರ್ಯ ನಿರ್ವಹಿಸುತ್ತಾನೆ. ಬಿಜೆಪಿಗೆ ಸಂಘ ಕೇವಲ ಸಲಹೆ ಕೊಡುವುದಲ್ಲ, ಆದೇಶ ಅಥವಾ ಸೂಚನೆಯನ್ನೂ ಕೊಡುತ್ತದೆ. ಅಲ್ಲಿಗೆ ಸಂಘ ಪಕ್ಷ ರಾಜಕಾರಣದಲ್ಲಿ ನೇರ ಪಾತ್ರ ವಹಿಸುತ್ತದೆ.

ಸಂಘ ಒಂದು ಸಂಘಟನೆಯಾಗಿ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿದೆ. ಅದು ಸಾರ್ವಜನಿಕವಾಗಿ ತನ್ನನ್ನು ತಾನು ತೆರೆದುಕೊಂಡಿದೆ. ಹೀಗಿರುವಾಗ ನೀವು ಸಂಘದ ವಿಮರ್ಶೆ ಮಾಡಬಾರದು, ಪ್ರಶ್ನೆ ಕೇಳಬಾರದು ಅನ್ನುವುದು ಸರಿಯಲ್ಲ. ಅದು ವ್ಯಕ್ತಿತ್ವ ನಿರ್ಮಾಣ ಮತ್ತು ರಾಷ್ಟ್ರೀಯತೆಯನ್ನು ಬೆಳೆಸುವ ಪಾರದರ್ಶಕ ಸಂಸ್ಥೆ ಎಂದು ಘೋಷಣೆ ಮಾಡಿಕೊಂಡಿರುವಾಗ ಮತ್ತು ದಿನನಿತ್ಯ ಒಂದಿಲ್ಲ ಒಂದು ದೇಶದ ಸಾರ್ವಜನಿಕ ಬದುಕಿನ ಸಂಗತಿಗಳಲ್ಲಿ ಪಾಲ್ಗೊಳ್ಳುವಾಗ ಅದರ ಕುರಿತು ಚರ್ಚೆ ತೀರಾ ಸಹಜ ಪ್ರತಿಕ್ರಿಯೆ ಆಗಿದೆ.

ಸಂಘದಿಂದಲೇ ಬಂದ ಮತ್ತು ಖಡಕ್ಕಾಗಿ ಹಾಗೇ ಹೇಳಿಕೊಳ್ಳುವ ಮಂತ್ರಿಗಳ ಭ್ರಷ್ಟಾಚಾರ ಅಥವಾ ಯಾವುದಾರೂ ತಪ್ಪು ಆದಾಗ ಅದು ವೈಯಕ್ತಿಕ ಎಂದು ಹೇಳಿ ಮುಗಿಸಲಾಗದು. ಅದು ಸಂಘದ product. ಕಾಂಗ್ರೆಸ್ ಕಮ್ಯುನಿಸ್ಟ್‌ನ productಗಳು ಸರಿ ಇಲ್ಲದಿದ್ದರೆ ಹೇಗೆ ಉತ್ತರದಾಯಿತ್ವವಾಗುತ್ತದೋ ಹಾಗೇ ಸಂಘವೂ ಉತ್ತರದಾಯಿತ್ವವಾಗುತ್ತದೆ.

ನಾವು ಸಂಘಕ್ಕೆ ಹೋಗುತ್ತಿದ್ದಾಗ, ನೀವು ಯಾವ ಪಕ್ಷಕ್ಕೇ ಬೇಕಾದರೂ ಹೋಗಿ, ಒಳ್ಳೆಯವರಾಗಿರಿ, ರಾಷ್ಟ್ರೀಯವಾದಿಗಳಾಗಿರಿ ಅಂತಿತ್ತು. 1989ರ ನಂತರ ಅದು ಹಿಂದುತ್ವ ಆಧರಿತ ಬಿಜೆಪಿಯನ್ನು ಬೆಂಬಲಿಸಿತು. ಈಗ ಸಂಘದವರು ನೇರ ಬಿಜೆಪಿಯೇ ಆಗಿರಬೇಕು ಅನ್ನುವ ಅಲಿಖಿತ ನಿಯಮ ಬಂದಾಗಿದೆ. ಹಾಗಾಗಿ ಬಿಜೆಪಿ ಅಂದರೆ ಸಂಘ. ಸಂಘದವರು ಬಿಜೆಪಿಯಾಗಿದೆ. ಇಲ್ಲಿ ರಾಜಕೀಯವಾಗಿ ಬೇರೆ ಪಕ್ಷದ ಪ್ರವೇಶವಾಗುವುದಿಲ್ಲ. ಬಿಜೆಪಿ ಪ್ರಮುಖ ನಾಯಕ ತಾನು ಆರ್‌ಎಸ್‌ಎಸ್‌ ಎಂದು ಪದೇ ಪದೇ ಹೇಳುತ್ತ, ರಾಜಕಾರಣದಲ್ಲಿ ಮಾತನಾಡುವಾಗ ಅದು ಆರ್‌ಎಸ್‌ಎಸ್‌ ಹೊರತುಪಡಿಸಿ ಅನ್ನುವುದು ಕಷ್ಟಸಾಧ್ಯ.

ಈಗ ಬಿಜೆಪಿ ಮುಸ್ಲಿಂ ಧರ್ಮಕ್ಕೆ ಅಪಮಾನ ಮಾಡಿದೆ ಎಂದು ವಕ್ತಾರರನ್ನು ತೆಗೆದಿದೆ. ಭಾಗವತ್ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ. ತಾವು ಆರ್‌ಎಸ್‌ಎಸ್‌ ಎಂದು ಹೇಳಿಕೊಳ್ಳುವ ಸ್ವಯಂ ಸೇವಕ ಬಿಜೆಪಿ ಅಥವಾ ಭಜರಂಗದಳ ಅಥವಾ ಜಾಗರಣ ವೇದಿಕೆ ಎಲ್ಲಿಯೇ ಇರಲಿ ಆತ ಇನ್ನು ಮುಂದೆ ಹೊಸ ಹೊಸ ಮಸೀದಿಯಲ್ಲಿ ದೇವರನ್ನು ಹುಡುಕುವಂತಿಲ್ಲ, ಇಸ್ಲಾಂ ಧರ್ಮವನ್ನು ಅವಹೇಳನ ಮಾಡುವಂತಿಲ್ಲ. ಹಾಗೆ ಮಾಡುವುದು ಮಾತೃ ದ್ರೋಹವಾಗುತ್ತದೆ. ಪರಿವಾರದಲ್ಲಿರದ, ಆದರೆ ಆರ್‌ಎಸ್‌ಎಸ್‌ ತನ್ನ ತಾಯಿ ಅನ್ನುವ ಮುತಾಲಿಕರಂಥವರೂ ಕೂಡಾ ತಮ್ಮ ನಿಲುವು ಬದಲಿಸಬೇಕು ಅಥವಾ ಆರ್‌ಎಸ್‌ಎಸ್‌ಗೆ ವಿರುದ್ದ ನಿಲ್ಲಬೇಕು.

ಜಗತ್ತಿನ ಹಳೆಯ ಇತಿಹಾಸ ಯುದ್ಧ ಯುಗ. ಹಿಂದೂಗಳ ಮೇಲೆ ಮೊಘಲರು, ಡಚ್ಚರು, ಪೋರ್ಚುಗೀಸರು, ಬ್ರಿಟಿಷರು, ಗ್ರೀಕರು ಹೀಗೆ ಹಲವರ ಆಕ್ರಮಣವಾಗಿದೆ. ಹಿಂದೂ ರಾಜರ ಮೇಲೆ ಹಿಂದೂ ರಾಜರ, ಮುಸ್ಲಿಂ ರಾಜನ ಮೇಲೆ ಮುಸ್ಲಿಂ ರಾಜನ, ಬೌದ್ಧರ ಮೇಲೆ ಹಿಂದೂಗಳ, ಜೈನರ ಮೇಲೆ ಹಿಂದೂಗಳ, ಹಿಂದೂಗಳ ಮೇಲೆ ಬೌದ್ಧರ ಹೀಗೆ ಯಾವುದೂ ಆಗಿಲ್ಲ ಅನ್ನುವಂತಿಲ್ಲ. ಅನೇಕ ದೇಶಗಳ ಇತಿಹಾಸವೂ ಇದೇ ರೀತಿ. ನಮ್ಮದು ಮಾತ್ರವಲ್ಲ. ಯಾಕೆಂದರೆ ಅದು ಯುದ್ಧ ಯಗ. ಹಾಗಾಗಿ ಭಾಗವತ್ ಅವರ ನಿರ್ಧಾರ ಸರಿ. ಅದನ್ನು ಜಾರಿಗೆ ತರಬೇಕಾದುದು ಮತ್ತು ಸಂಘದವರಲ್ಲದಿದ್ದರೂ ಸಂಘದ ಹೆಸರು ಹೇಳಿ, ಹಾದಿ ಬೀದಿಯಲ್ಲಿ ಹಿಂದುತ್ವದ ಗಲಾಟೆ ಮಾಡುವವರನ್ನು ನಿಯಂತ್ರಣ ಮಾಡಬೇಕಾದುದೂ ಅವರೇ. ಯಾಕೆಂದರೆ ಅವರದೇ ಸರ್ಕಾರ ಈಗ ಇರುವುದು.

ಇದನ್ನೂ ಓದಿರಿ: ಪಠ್ಯ ಪುಸ್ತಕದಲ್ಲಿ ‘ಆಡಿಸಿ ನೋಡು ಬೀಳಿಸಿ ನೋಡು’ ಹಾಡು: ಬರೆದವರ ಹೆಸರನ್ನೇ ಬದಲಿಸಿದ ಚಕ್ರತೀರ್ಥ ಸಮಿತಿ!

ಹಳೆಯದನ್ನೆಲ್ಲ, ಈಗ ಸರಿ ಮಾಡುತ್ತೇನೆ. ಭಾರತದ 30 ಸಾವಿರ ಮಸೀದಿ ಒಳಗಡೆ ಹುಡುಕುತ್ತೇನೆ, ಬೌದ್ಧರ ಸ್ತೂಪಗಳು, ಜೈನರ ಬಸದಿಗಳು ದೇವಸ್ಥಾನವಾಗಿದೆ ಅದನ್ನೂ ಅಗೆದು ನೋಡುತ್ತೇನೆ ಎನ್ನುವುದು ಹೊಸ ಜಗತ್ತಿನಲ್ಲಿ ಅಸಾಧ್ಯವಾದುದು. ಇಂದಿನ ಜಗತ್ತು ಪರಸ್ಪರ ತಳುಕು ಹಾಕಿಕೊಂಡಾಗಿದೆ. ಒಬ್ಬರನ್ನೊಬ್ಬರು ಬಿಟ್ಟು ಬದುಕದ ನಿಸರ್ಗ ನಿಯಮವೊಂದು ನಮ್ಮನ್ನು ಆವರಿಸಿಯಾಗಿದೆ. ಅದಕ್ಕೆ ಬಿಜೆಪಿ ವಕ್ತಾರರು ಹುದ್ದೆ ಕಳೆದುಕೊಂಡದ್ದು. ಮುಸ್ಲಿಂ ವ್ಯಾಪಾರಿಯೊಂದಿಗೆ ಕೋಟ್ಯಾಂತರ ವ್ಯವಹಾರ ಕುದುರಿಸಿದ ಮೋದಿ ಸರ್ಕಾರ, ಏಕಾಏಕಿ ಮುಸ್ಲಿಂ ಧರ್ಮ ಅವಹೇಳನ ಆಗುವಾಗ ಮೌನಕ್ಕೆ ಸರಿಯುವಂತಿಲ್ಲ. ಮುಸ್ಲಿಂ ರಾಷ್ಟ್ರಗಳಲ್ಲಿ ನಮ್ಮವರ ವರ್ತನೆಗಳನ್ನು ಗಂಭೀರವಾಗಿಸಿ, ಅಲ್ಲಿಯೂ ವ್ಯಾಪಾರ ವಹಿವಾಟು ಬಹಿಷ್ಕಾರ , ಭಾರತೀಯ ಉದ್ಯೋಗಿಗಳನ್ನು ಕೈಬಿಡುವ ಚಿಂತನೆ ಜೋರಾಗಿದೆ. ನಾವು ಸಾಮೂಹಿಕವಾಗಿ ಮಸೀದಿ ಅಗೆದರೆ, ನಿಮ್ಮ ದೇವಸ್ಥಾನದಲ್ಲಿ ಬಸದಿಯಿದೆ, ಬೌದ್ಧ ವಿಹಾರವಿದೆ, ಶೈವ ವೈಷ್ಣವ, ಹನುಮನ ಹುಟ್ಟು ಹೀಗೆ ಪಟ್ಟಿ ಬೆಳೆದರೆ ದೇಶ ಛಿದ್ರವಾಗುತ್ತದೆ. ಹಾಗೇ ಆಗಬಾರದು ಅನ್ನುವುದು ರಾಷ್ಟ್ರೀಯವಾದ.

ಇತಿಹಾಸ ಬೇಕು ನಿಜ. ಆದರೆ ಭೌತಿಕವಾಗಿ ಇತಿಹಾಸವನ್ನು ತಿದ್ದುವುದೇ ವರ್ತಮಾನವಾದರೆ ಭವಿಷ್ಯ ಭಯಾನಕವಾಗುತ್ತದೆ. ಯಾಕೆಂದರೆ ಇತಿಹಾಸ ಬಹುತೇಕ ಯುದ್ಧಯಗವಾಗಿತ್ತು. ಅದಕ್ಕೆ ವರ್ತಮಾನದ ನಾವು ಯಾರೂ ಉತ್ತರದಾಯಿಯೂ ಅಲ್ಲ, ಜವಾಬ್ದಾರಿಯೂ ಅಲ್ಲ. ನಾವು ಭವಿಷ್ಯದ ಸುಂದರ ಚಿತ್ರವೊಂದಕ್ಕೆ ನಕ್ಷೆ ಬರೆದು ಬರುವ ನಾಳೆಗೆ ಅದನ್ನು ಕಟ್ಟಿಕೊಡುವುದೇ ವರ್ತಮಾನವಾಗಬೇಕು. ನಮ್ಮ ವರ್ತಮಾನವೇ ನಾಳೆಗೆ ಇತಿಹಾಸ. ಹಳೆಯದನ್ನು ಬಿಟ್ಟು, ಹೊಸತನ್ನು ಕಟ್ಟುವ. ನಮ್ಮ ಮುಂದಿನ ಪೀಳಿಗೆ ನಮ್ಮ ಇತಿಹಾಸವನ್ನು ಕಣ್ಣರಳಿಸಿ ವಾವ್… ಎಂಬ ಉದ್ಗಾರ ತೆಗೆಯುವಂತೆ ಮಾಡೋಣ.

(ಲೇಖಕರು, ಸಂಘ ಪರಿವಾರದ ಮಾಜಿ ನಾಯಕರು, ಕರಾವಳಿಯ ಭಾಗದ ಶಿಕ್ಷಣತಜ್ಞರೂ ಹೌದು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನುಡಿಯು ಸಿರಿಯಲ್ಲ ಬದುಕು’ ಕರಾವಳಿಯಲ್ಲಿ ಮತ್ತೆ ಪ್ರತಿರೋಧದ ಧ್ವನಿ: ನವೆಂಬರ್ 28-29ಕ್ಕೆ ‘ಜನನುಡಿ-2026’

"ನವೆಂಬರ್ ಕೊನೆಯ ಶನಿವಾರ ಮತ್ತು ಭಾನುವಾರ ಮಂಗಳೂರಿನಲ್ಲಿ ಕೇವಲ ವಿಚಾರ ಸಂಕಿರಣ ಮಾತ್ರವಲ್ಲ, ಹರಟೆ, ಚರ್ಚೆ, ಸೌಹಾರ್ದತೆಯ ಮೀನೂಟ ಹಾಗೂ ಪ್ರೀತಿಯೊಂದಿಗೆ ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಹೊಸ ಬೆಳಕನ್ನು ಕಂಡುಕೊಳ್ಳಲಿದ್ದೇವೆ," ಎಂದು 'ಅಭಿಮತ...

‘ಟ್ರಂಪ್’ ಗಾಗಿ ಭಾರತದ ಹಿತವನ್ನು ಬಲಿ ಕೊಟ್ಟ ಕೇಂದ್ರ: E20 ಎಥೆನಾಲ್ ನೀತಿ ಹಿಂಪಡೆಯಲು ಕೇಜ್ರಿವಾಲ್ ಪಟ್ಟು

ವಾಹನಗಳ ಎಂಜಿನ್‌ಗೆ ಹಾನಿಯುಂಟುಮಾಡುತ್ತಿದೆ ಎಂದು ಆರೋಪಿಸಲಾದ ಇ20 (E20) ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ, ದೇಶಾದ್ಯಂತ ಸಂಗ್ರಹಿಸಲಾಗಿದ್ದ 2.30 ಲಕ್ಷಕ್ಕೂ ಅಧಿಕ ಸಾರ್ವಜನಿಕ ಸಹಿಗಳ ಮನವಿ ಪತ್ರದೊಂದಿಗೆ ಪ್ರಧಾನಿ ನರೇಂದ್ರ...

ಗಾಝಾ | ಇಸ್ರೇಲ್ ನರಮೇಧಕ್ಕೆ ಬಲಿಯಾದ ಎರಡು ಕುಟುಂಬಗಳ 112 ಸದಸ್ಯರ ಸಾಮೂಹಿಕ ಅಂತ್ಯಸಂಸ್ಕಾರ: ಸಾವಿರಾರು ಜನರಿಂದ ಕಣ್ಣೀರ ವಿದಾಯ

ಇಸ್ರೇಲ್ ಬಾಂಬ್ ದಾಳಿಯಿಂದ ಧ್ವಂಸಗೊಂಡಿದ್ದ ಮನೆಗಳ ಅವಶೇಷಗಳ ಅಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಗಾಝಾದ ಹಸಾಯ್ನ ಮತ್ತು ಅಬು ಶರಿಯಾ ಕುಟುಂಬಗಳ 112 ಸದಸ್ಯರ ಮೃತದೇಹಗಳ ಅಂತ್ಯ ಸಂಸ್ಕಾರ ಮಂಗಳವಾರ (ಆ.4) ನಡೆಯಿತು. ಸಾವಿರಾರು...

E20 ಇಂಧನ ರಾದ್ಧಾಂತ: ನಾಗ್ಪುರದಲ್ಲಿ ಗಡ್ಕರಿ ಮನೆಗೆ ಮುತ್ತಿಗೆ ಯತ್ನ, ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಎಥೆನಾಲ್ ಮಿಶ್ರಿತ ಇ20 (E20) ಇಂಧನದಿಂದ ದೇಶದ ಲಕ್ಷಾಂತರ ವಾಹನ ಮಾಲೀಕರು ಎಂಜಿನ್ ಹಾನಿ ಮತ್ತು ಮೈಲೇಜ್ ಅಭಾವ ಎದುರಿಸುತ್ತಿದ್ದಾರೆ ಎಂಬ ಆಕ್ರೋಶದ ನಡುವೆಯೇ, ನಾಗ್ಪುರದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್...

ರಾಜ್ಯದಲ್ಲಿ ‘SIR’ ಅವಾಂತರ: 1.ಕೋಟಿಗೂ ಹೆಚ್ಚು ಮತದಾರರನ್ನು ಹೊರಗಿಡಲು ಸಂಚು, ‘SIR ವಿರೋಧಿ ಕರ್ನಾಟಕ’ ಆಕ್ರೋಶ

ಕರ್ನಾಟಕದಲ್ಲಿ ಜಾರಿಯಲ್ಲಿರುವ ಬೂತ್ ಮಟ್ಟದ ಮತದಾರರ ಪಟ್ಟಿ ಸರಿಪಡಿಸುವ 'ಎಸ್‌ಐಆರ್' (SIR) ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ಮತ್ತು ಕಪಟತನ ನಡೆದಿದ್ದು, ರಾಜ್ಯದ ಶೇ. 20 ರಷ್ಟು (ಆಗಸ್ಟ್ 2026ರ ಹೊತ್ತಿಗೆ ಸುಮಾರು 1.10...

‘ಜನರು ಬಿಜೆಪಿಯಿಂದ ಅತೃಪ್ತರಾಗಿದ್ದಾರೆ…’: ದಾಟಿಯಾ ಉಪಚುನಾವಣೆಯಲ್ಲಿ ಗೆಲುವಿನ ನಂತರ ಆಡಳಿತ ಪಕ್ಷದ ವಿರುದ್ಧ ಘನಶ್ಯಾಮ್ ಸಿಂಗ್ ವಾಗ್ದಾಳಿ

ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕ ಘನಶ್ಯಾಮ್ ಸಿಂಗ್ ಅವರು, ತಮ್ಮ ಅಭೂತಪೂರ್ವ ಗೆಲುವನ್ನು ಬಿಜೆಪಿಯ 'ಭ್ರಷ್ಟಾಚಾರ'ಕ್ಕೆ ಸಾರ್ವಜನಿಕರು ನೀಡಿದ ತಕ್ಕ ಹಾಗೂ ಸೂಕ್ತ...

ಇಂದಿನ ವಿಚಾರಣೆ ಬಳಿಕ ಉದಯನಿಧಿ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ

ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತರಾದ ತಮಿಳುನಾಡು ವಿಧಾನಸಭೆಯ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು, ವಿಚಾರಣೆಯಯ ಬಳಿಕ ಸ್ಟೇಷನ್ ಬೇಲ್ (ಠಾಣಾ ಜಾಮೀನು) ಮೇಲೆ ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್...

ರಾಜೀನಾಮೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಅಂಗೀಕರಿಸುವೆ, ಸಚಿವ ಸ್ಥಾನ ವಂಚಿತರ ಬೆದರಿಕೆಗೆ ಸಿಎಂ ಡಿ.ಕೆ. ಶಿವಕುಮಾರ್ ವಾರ್ನಿಂಗ್

ಪಕ್ಷದ ಹಿತವೇ ಎಲ್ಲಕ್ಕಿಂತ ಮುಖ್ಯ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಯಾರಾದರೂ ರಾಜೀನಾಮೆ ಸಲ್ಲಿಸಿದರೆ, ಕೆಲವೇ ನಿಮಿಷಗಳಲ್ಲಿ ಅದನ್ನು ನಾನು ಅಂಗೀಕರಿಸುತ್ತೇನೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಾಸಕರ...

ನಮಗೆ ಚುನಾವಣಾ ರಾಜಕೀಯದ ಉದ್ದೇಶವಿಲ್ಲ, ಜನಾಂದೋಲನವೇ ನಮ್ಮ ಗುರಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ

ಕಾಕ್ರೋಚ್ ಜನತಾ ಪಾರ್ಟಿ (CJP) ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ, ಬದಲಾಗಿ ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಲು ಬೃಹತ್ ಜನಾಂದೋಲನವನ್ನು ಕಟ್ಟುವುದೇ ನಮ್ಮ ಮೂಲ ಗುರಿ...

ನೀಟ್ ಪ್ರತಿಭಟನೆ: ಮಧ್ಯಪ್ರದೇಶ ಪೊಲೀಸರು ಧರ್ಮದ ಕಾರಣಕ್ಕೆ ನನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ: ಜೆಎನ್‌ಯು ವಿದ್ಯಾರ್ಥಿ ನಾಯಕಿ ಡ್ಯಾನಿಶ್ ಅಲಿ ಆರೋಪ

ದೇಶದ ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿಯನ್ನು ಪ್ರಶ್ನಿಸಿ ನಡೆದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ, ಮಧ್ಯಪ್ರದೇಶ ಪೊಲೀಸರು ತಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ...