Homeಮುಖಪುಟಉದಯಪುರ್‌ ಘಟನೆ: ‘ತಾಲಿಬಾನೀಕರಣ’ ಚರ್ಚೆಯ ಜೊತೆಗೆ ಜುಬೈರ್‌‌ ಹೆಸರು ಥಳುಕುಹಾಕಿದ ಮಾಧ್ಯಮಗಳು!

ಉದಯಪುರ್‌ ಘಟನೆ: ‘ತಾಲಿಬಾನೀಕರಣ’ ಚರ್ಚೆಯ ಜೊತೆಗೆ ಜುಬೈರ್‌‌ ಹೆಸರು ಥಳುಕುಹಾಕಿದ ಮಾಧ್ಯಮಗಳು!

- Advertisement -
- Advertisement -

ರಾಜಸ್ಥಾನದ ಉದಯಪುರ್‌ನಲ್ಲಿ ನಡೆದ ಘಟನೆಯನ್ನು ‘ತಾಲೀಬಾನೀಕರಣ’ದ ಭಾಗವಾಗಿ ಚರ್ಚಿಸುತ್ತಿರುವ ಮಾಧ್ಯಮಗಳು, ಖ್ಯಾತ ಪತ್ರಕರ್ತ, ಆಲ್ಟ್‌ನ್ಯೂಸ್‌ ಸಹಸಂಸ್ಥಾಪಕ ಮೊಹಮ್ಮದ್ ಜುಬೇರ್‌ ಹೆಸರನ್ನು ಪ್ರಕರಣಕ್ಕೆ ಥಳುಕುಹಾಕುವ ಪ್ರಯತ್ನವನ್ನು ಮಾಡುತ್ತಿವೆ. ಈ ಕುರಿತು ‘ನ್ಯೂಸ್‌ಲಾಂಡ್ರಿ’ ಜಾಲತಾಣ ವಿಶೇಷ ವರದಿ ಮಾಡಿದೆ.

“ರಾಜಸ್ಥಾನದ ಉದಯಪುರದಲ್ಲಿ ಹಿಂದೂ ಟೈಲರ್‌ನ ಭೀಕರ ಹತ್ಯೆಯನ್ನು ಆಲ್ಟ್ ನ್ಯೂಸ್ ಸಹಸ್ಥಾಪಕ ಮೊಹಮ್ಮದ್ ಜುಬೇರ್ ಸಕ್ರಿಯಗೊಳಿಸಿದ್ದಾರೆ” ಎಂದು ನೀವು ನಂಬಬೇಕೆಂದು ಟೈಮ್ಸ್‌ನೌ ಪತ್ರಕರ್ತ ರಾಹುಲ್ ಶಿವಶಂಕರ್ ಹೇಳಿಬಿಟ್ಟರು.

“ಕಳೆದ ತಿಂಗಳು ಪ್ರವಾದಿ ಮುಹಮ್ಮದ್ ಕುರಿತು ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಹೇಳಿದ್ದನ್ನು ಜುಬೈರ್ ಬೆಳಕಿಗೆ ತಂದಿದ್ದಕ್ಕಾಗಿ ಧನ್ಯವಾದಗಳು. ಅದಕ್ಕಾಗಿ ದಂಡ ತೆರಬೇಕಾಯಿತು. ಆ ದಂಡವನ್ನು ಇಂದು ಕನ್ಹಯ್ಯಾ ಲಾಲ್ ಪಾವತಿಸಿದ್ದಾರೆ” ಎನ್ನುತ್ತಾರೆ ರಾಹುಲ್‌. ಕಳೆದ ರಾತ್ರಿ ಟೈಮ್ಸ್ ನೌ ಪ್ರೈಮ್‌ಟೈಮ್ ಚರ್ಚೆಯು ಹೀಗೆ ನಡೆಯುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಇಬ್ಬರು ಮತಾಂಧರು ಕನ್ಹಯ್ಯಾ ಲಾಲ್‌ ಅವರ ಶಿರಚ್ಛೇದನ ಮಾಡಿದ ಭಯಾನಕ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದವು. ಆ ಇಬ್ಬರು ವ್ಯಕ್ತಿಗಳು (ಗೌಸ್ ಮೊಹಮ್ಮದ್ ಮತ್ತು ಮೊಹಮ್ಮದ್ ರಿಯಾಜ್ ಅಖ್ತರಿ) ಘಟನೆಯನ್ನು ಚಿತ್ರೀಕರಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ನೂಪುರ್ ಶರ್ಮಾ ಅವರಿಗೆ ಬೆದರಿಕೆ ಹಾಕಿದರು.

ಸಾಮಾಜಿಕ ಮಾಧ್ಯಮದಲ್ಲಿ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದರಿಂದ, ಸಹಾಯಕ್ಕಾಗಿ ಪೊಲೀಸರನ್ನು ಸಂಪರ್ಕಿಸಿದ್ದರಿಂದ ಲಾಲ್ ಅವರನ್ನು ಟಾರ್ಗೆಟ್ ಮಾಡಲಾಯಿತು ಎಂದು ವರದಿಗಳು ಹೇಳುತ್ತವೆ.

ಟೈಮ್ಸ್ ನೌನಲ್ಲಿ ಪತ್ರಕರ್ತ ಶಿವಶಂಕರ್ ಇದನ್ನು “ಐಸಿಸ್ ಶೈಲಿಯ ಶಿರಚ್ಛೇದನೆ” ಎಂದು ಕರೆಯುತ್ತಲೇ ಜುಬೇರ್‌ ಹೆಸರನ್ನು ಎಳೆದುತಂದರು.

ಪ್ಯಾನೆಲಿಸ್ಟ್ ತೆಹ್ಸೀನ್ ಪೂನಾವಾಲಾ ಅವರನ್ನು ಉದ್ದೇಶಿಸಿ ಮಾತನಾಡಿದ ಶಿವಶಂಕರ್‌‌, “ಈ ಐಸಿಸ್ ಮಾದರಿಯ ಪ್ರತೀಕಾರಕ್ಕೆ ಸಕ್ರಿಯರು ಇದ್ದಾರೆ. ನೀವು ಇಂದು ರಾತ್ರಿ ಜುಬೈರ್ ಹೆಸರು ತೆಗೆದುಕೊಳ್ಳುತ್ತೀರಾ?… ಇಲ್ಲ, ನೀವು ಅವರ ಹೆಸರನ್ನು ತೆಗೆದುಕೊಳ್ಳಬೇಕು..” – ಹೀಗೆ ಮಾತನಾಡುತ್ತಾರೆ.

ನೂಪುರ್‌‌ ಶರ್ಮಾ ಪ್ರವಾದಿ ವಿರುದ್ಧ ಕಾಮೆಂಟ್ ಮಾಡಿದ ವೀಡಿಯೊ ಕ್ಲಿಪ್ ಜುಬೇರ್‌ ಹಂಚಿಕೊಂಡಿದ್ದನ್ನು ಶಿವಶಂಕರ್‌ ಪ್ರಸ್ತಾಪಿಸುತ್ತಾರೆ. ಶರ್ಮಾ ಅವರು ತಮ್ಮ ಅಭಿಪ್ರಾಯವನ್ನು ಟೈಮ್ಸ್ ನೌನಲ್ಲಿ ಹೇಳಿದರು. ಒಮ್ಮೆ ಹಿನ್ನಡೆ ಪ್ರಾರಂಭವಾದಾಗ, ಚಾನಲ್ ತಕ್ಷಣವೇ ಈ ವಿಷಯದಿಂದ ಅಂತರ ಕಾಯ್ದುಕೊಂಡಿದೆ. “ನಮ್ಮ ಚರ್ಚೆಗಳಲ್ಲಿ ಭಾಗವಹಿಸುವವರು ಸಂಯಮವನ್ನು ಕಾಪಾಡಿಕೊಳ್ಳಲು, ಸಹ ಪ್ಯಾನೆಲಿಸ್ಟ್‌ಗಳ ವಿರುದ್ಧ ಅಸಂಸದೀಯ ಭಾಷೆಯಲ್ಲಿ ಮಾತನಾಡದಂತೆ ನಾವು ಒತ್ತಾಯಿಸುತ್ತೇವೆ” ಎಂದು ಟೈಮ್ಸ್ ನೌ ತಿಳಿಸಿದ್ದನ್ನು ಉಲ್ಲೇಖಿಸಲಾಗಿದೆ.

ಕಳೆದ ರಾತ್ರಿಯ ಚರ್ಚೆಯಲ್ಲಿ ಶಿವಶಂಕರ್, ಜುಬೈರ್ ಅವರ ಈ ಟ್ವೀಟ್ ಅನ್ನು ಉಲ್ಲೇಖಿಸಿದ್ದಾರೆ. “ನೀವು ಪ್ರವಾದಿಯನ್ನು ನಿಂದಿಸಿದಾಗ, ನೀವು ದಂಡ ಕಟ್ಟಬೇಕಾಗುತ್ತದೆ. ಆ ದಂಡವನ್ನು ಇಂದು ಕನ್ಹಯ್ಯಾ ಲಾಲ್ ಪಾವತಿಸಿದ್ದಾರೆ” ಎನ್ನುತ್ತಾರೆ.

ಇಂಡಿಯಾ ಟುಡೇಯಲ್ಲಿ ರಾಜ್‌ದೀಪ್ ಸರ್ದೇಸಾಯಿ ಉದಯ್‌ಪುರ ಹತ್ಯೆಯ ಕುರಿತು ಚರ್ಚೆ ನಡೆಸಿದಾಗ ಅಲ್ಲಿಯೂ ಜುಬೇರ್‌ ಹೆಸರು ಪ್ರಸ್ತಾಪವಾಗಿದೆ. “ರಾಜಸ್ಥಾನದಲ್ಲಿ ಐಸಿಸ್ ಶೈಲಿಯ ಹತ್ಯೆ” ಎಂಬ ಚರ್ಚೆ ನಡೆಯುತ್ತಿದ್ದಾಗ, “ಭಾರತವು ಕೋಮು ಹಿಂಸಾಚಾರವನ್ನು ಹೇಗೆ ನಿಲ್ಲಿಸಬಹುದು” ಎಂದು ಸರ್ದೇಸಾಯಿಯವರು ಬಿಜೆಪಿ ವಕ್ತಾರ ಆರ್‌ಪಿ ಸಿಂಗ್ ಅವರನ್ನು ಕೇಳುತ್ತಾರೆ. ಅದಕ್ಕೆ ಸಿಂಗ್, “ನೀವು ನೂಪುರ್ ಶರ್ಮಾ ಅಥವಾ ಬೇರೆ ಯಾರನ್ನಾದರೂ ಖಂಡಿಸಿದರೆ, ಜುಬೈರ್ ಅವರನ್ನೂ ಸಹ ಖಂಡಿಸಬೇಕು” ಎನ್ನುತ್ತಾರೆ.

ಅದಕ್ಕೆ ಪ್ರತಿಕ್ರಿಯೆ ನೀಡಿದ ಸರ್ದೇಸಾಯಿ, “ಉದಯಪುರ್ ಘಟನೆಯನ್ನು ಎಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕು” ಎಂದು ಸ್ಪಷ್ಟಪಡಿಸುತ್ತಾರೆ.

ತಾಲೀಬಾನೀನಿಕರಣದ ಚರ್ಚೆ

ಈ ಭೀಕರ ಘಟನೆಯನ್ನು ‘ತಾಲೀಬಾನೀಕರಣ’ ಎಂದು ಹೆಸರಿಸಿ ಚರ್ಚೆಗಳು ಮಾಧ್ಯಮಗಳಲ್ಲಿ ನಡೆದಿದೆ.

ಆಜ್ ತಕ್ ಮಾಧ್ಯಮದಲ್ಲಿ ಚಿತ್ರಾ ತ್ರಿಪಾಠಿ, “ರಾಜಸ್ಥಾನದಲ್ಲಿ ತಾಲಿಬಾನ್ ತರಹದ ಪರಿಸ್ಥಿತಿ ಏಕೆ ಸಂಭವಿಸಿದೆ?” ಅಥವಾ “ಇದು ಕ್ರೌರ್ಯದ ಕಥೆ, ತಾಲಿಬಾನಿ ಚಟುವಟಿಕೆ” ಎಂದು ತಿಳಿಸಿದ್ದಾರೆ.

ಚಿತ್ರಾ ತ್ರಿಪಾಠಿಯವರು, “ತಾಲಿಬಾನಿ” ಪದವನ್ನು ಬಳಸುವುದನ್ನು ಕಾಂಗ್ರೆಸ್ ವಕ್ತಾರ ಅಲೋಕ್ ಶರ್ಮಾ ಆಕ್ಷೇಪಿಸಿದಾಗ ಅವರು, “ನಿಮಗೆ ಅವಮಾನವಿಲ್ಲವೇ? ಮೂರು ಮಕ್ಕಳ ತಂದೆಯನ್ನು ಹಗಲಿನಲ್ಲಿ ನಿರ್ದಯವಾಗಿ ಕೊಲ್ಲಲಾಯಿತು. ಇಲ್ಲಿ ನೀವು ಆಂಕರ್‌ ಬಾಯಿಂದ ಯಾವ ರೀತಿಯ ಪದಗಳು ಬರಬೇಕು ಎಂದು ಹೇಳುತ್ತಿದ್ದೀರಿ” ಎನ್ನುತ್ತಾರೆ.

ನ್ಯೂಸ್ 18 ಇಂಡಿಯಾದಲ್ಲಿ, ಅಮಿಶ್ ದೇವಗನ್ ಅವರ ಕಾರ್ಯಕ್ರಮದಲ್ಲೂ ತಾಲೀಬಾನೀಕರಣ ಚರ್ಚೆಯ ವಿಷಯವಾಗಿತ್ತು. “ಉದಯಪುರದಲ್ಲಿ ತಾಲಿಬಾನ್ ಮಾದರಿಯ ಕೊಲೆ ನಡೆದಿದೆ” ಎನ್ನುತ್ತಾರೆ ದೇವಗನ್‌.

ಬಿಜೆಪಿ ಐಟಿ ಮುಖ್ಯಸ್ಥ ಅಮಿತ್ ಮಾಳವೀಯ ಮಾತನಾಡಿ, “ಕಳೆದ ಕೆಲವು ತಿಂಗಳುಗಳಲ್ಲಿ, ಈ ರೀತಿಯ ಹಲವಾರು ಘಟನೆಗಳು ನಡೆದಿವೆ. ಅಲ್ಲಿ ಹಿಂದೂಗಳ ಮೇಲೆ ಇಂತಹ ದಾಳಿಗಳನ್ನು ಮಾಡಲಾಗಿದೆ. ಅದು ರಾಮ ನವಮಿ ಮೆರವಣಿಗೆಯಾಗಲಿ ಅಥವಾ ಹನುಮಾನ್ ಉತ್ಸವ ಮೆರವಣಿಗೆಯಾಗಲಿ, ಮುಸ್ಲಿಮರು ಅವರ ಮೇಲೆ ದಾಳಿ ಮಾಡಿದ್ದಾರೆ” ಎಂದು ದೂರುತ್ತಾರೆ.

ಝೀ ನ್ಯೂಸ್‌ನಲ್ಲಿ ಆಂಕರ್‌ ರೋಹಿತ್ ರಂಜನ್ ‍ಮಾತನಾಡುತ್ತಾ, “ಈ ಘಟನೆಯು ಧಾರ್ಮಿಕ ಯುದ್ಧದ ಭಾಗವಾಗಿದೆ” ಎನ್ನುತ್ತಾರೆ.

2015ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಚಾರ್ಲಿ ಹೆಬ್ಡೊ ದಾಳಿ ಮತ್ತು 2020ರಲ್ಲಿ ಫ್ರೆಂಚ್ ಶಿಕ್ಷಕನ ಶಿರಚ್ಛೇದ ಪ್ರಕರಣವನ್ನು ಪ್ರಸ್ತಾಪಿಸಿದ ರಂಜನ್, “ಯಾರಾದರೂ ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸಿದರೆ ಅವರನ್ನು ಕೊಲ್ಲಲಾಗುತ್ತದೆ. ಅಂತಹ ಹತ್ಯೆಯನ್ನು ಸಮರ್ಥಿಸಲಾಗುತ್ತದೆ ಎಂದು ಇಡೀ ಜಗತ್ತು ಮಾನಸಿಕವಾಗಿ ಒಪ್ಪಿಕೊಳ್ಳುವಂತೆ ಒತ್ತಾಯಿಸಲಾಗಿದೆ” ಎನ್ನುತ್ತಾರೆ. ವಿಚಿತ್ರವೆಂದರೆ, ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ಕಾರ್ಯಕ್ರಮದ ವಿಡಿಯೊವನ್ನು ಯೂಟ್ಯೂಬ್‌ನಲ್ಲಿ ತೆರವು ಮಾಡಲಾಗಿದೆ.

ಇದನ್ನೂ ಓದಿರಿ: ಪತ್ರಕರ್ತ ಜುಬೇರ್‌ ವಿರುದ್ಧ ದೂರು ನೀಡಿದ್ದ ಟ್ವಿಟರ್‌ ಅಕೌಂಟ್‌ ಡಿಲೀಟ್!

ಎಬಿಪಿ ನ್ಯೂಸ್‌ನಲ್ಲಿ ರೂಬಿಕಾ ಲಿಯಾಕತ್, “ರಾ‘ಜಸ್ಥಾನವು ಮತಾಂಧತೆಯ ಪ್ರಯೋಗಾಲಯ ಆಗಿ ಮಾರ್ಪಟ್ಟಿದೆಯೇ?” ಎಂದು ಕೇಳುತ್ತಾರೆ. ಕಾರ್ಯಕ್ರಮದ ವಾಯ್ಸ್‌ವೋವರ್‌ನಲ್ಲಿ, “ಭಾರತದಲ್ಲಿ ತಾಲಿಬಾನ್ ತರಹದ ಮನಸ್ಥಿತಿಯ ಕೆಲವು ಜನರು ಇದ್ದಾರೆ ಎಂಬ ಪ್ರಶ್ನೆಯನ್ನು ಈ ವೀಡಿಯೊ ಎತ್ತುವುದಿಲ್ಲವೇ?” ಎಂದು ಕೇಳಲಾಗುತ್ತದೆ.

NDTVಯಲ್ಲಿ ನಿಧಿ ರಜ್ದಾನ್ ಅವರು ಈ ಕುರಿತು ಚರ್ಚೆಯನ್ನು ನಡೆಸಿದರು. ಕಾಂಗ್ರೆಸ್ ವಕ್ತಾರರಾಗಿರುವ ಪ್ಯಾನೆಲಿಸ್ಟ್ ಗುರುದೀಪ್ ಸಿಂಗ್ ಸಪ್ಪಲ್ ಅವರು ಮಾತನಾಡುತ್ತಾ, “ಈ ಕೊಲೆಯು ಅನಾಗರಿಕವಾದದ್ದು. ತ್ವರಿತವಾಗಿ ತನಿಖೆ ನಡೆಸಲಾಗುವುದು” ಎಂದು ಭರವಸೆ ನೀಡಿದರು.

ಮಾಜಿ ಐಪಿಎಸ್ ಅಧಿಕಾರಿ ಯಶೋವರ್ಧನ್ ಆಜಾದ್ ಅವರು ಮಾತನಾಡಿ, “ಇದು ಐಸಿಸ್ ಶೈಲಿಯ ಮರಣದಂಡನೆ. ನಾವು ಎಚ್ಚರದಿಂದಿರಬೇಕು” ಅವರು ಎಚ್ಚರಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಲೋಫರ್ ಜುಬೇರ್ ನ ಪರ ಮಾತಾಡೋ ಲೋಫರ್ ಗಳನ್ನ ಸರ್ಕಾರವೇ ಗುಂಡುಕ್ಕಿ ಕೊಲ್ಲುವ ಸಮಯ ಹತ್ತಿರದಲ್ಲಿ ಇದೆ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...