Homeಮುಖಪುಟಉದಯಪುರ್‌ ಘಟನೆ: ‘ತಾಲಿಬಾನೀಕರಣ’ ಚರ್ಚೆಯ ಜೊತೆಗೆ ಜುಬೈರ್‌‌ ಹೆಸರು ಥಳುಕುಹಾಕಿದ ಮಾಧ್ಯಮಗಳು!

ಉದಯಪುರ್‌ ಘಟನೆ: ‘ತಾಲಿಬಾನೀಕರಣ’ ಚರ್ಚೆಯ ಜೊತೆಗೆ ಜುಬೈರ್‌‌ ಹೆಸರು ಥಳುಕುಹಾಕಿದ ಮಾಧ್ಯಮಗಳು!

- Advertisement -
- Advertisement -

ರಾಜಸ್ಥಾನದ ಉದಯಪುರ್‌ನಲ್ಲಿ ನಡೆದ ಘಟನೆಯನ್ನು ‘ತಾಲೀಬಾನೀಕರಣ’ದ ಭಾಗವಾಗಿ ಚರ್ಚಿಸುತ್ತಿರುವ ಮಾಧ್ಯಮಗಳು, ಖ್ಯಾತ ಪತ್ರಕರ್ತ, ಆಲ್ಟ್‌ನ್ಯೂಸ್‌ ಸಹಸಂಸ್ಥಾಪಕ ಮೊಹಮ್ಮದ್ ಜುಬೇರ್‌ ಹೆಸರನ್ನು ಪ್ರಕರಣಕ್ಕೆ ಥಳುಕುಹಾಕುವ ಪ್ರಯತ್ನವನ್ನು ಮಾಡುತ್ತಿವೆ. ಈ ಕುರಿತು ‘ನ್ಯೂಸ್‌ಲಾಂಡ್ರಿ’ ಜಾಲತಾಣ ವಿಶೇಷ ವರದಿ ಮಾಡಿದೆ.

“ರಾಜಸ್ಥಾನದ ಉದಯಪುರದಲ್ಲಿ ಹಿಂದೂ ಟೈಲರ್‌ನ ಭೀಕರ ಹತ್ಯೆಯನ್ನು ಆಲ್ಟ್ ನ್ಯೂಸ್ ಸಹಸ್ಥಾಪಕ ಮೊಹಮ್ಮದ್ ಜುಬೇರ್ ಸಕ್ರಿಯಗೊಳಿಸಿದ್ದಾರೆ” ಎಂದು ನೀವು ನಂಬಬೇಕೆಂದು ಟೈಮ್ಸ್‌ನೌ ಪತ್ರಕರ್ತ ರಾಹುಲ್ ಶಿವಶಂಕರ್ ಹೇಳಿಬಿಟ್ಟರು.

“ಕಳೆದ ತಿಂಗಳು ಪ್ರವಾದಿ ಮುಹಮ್ಮದ್ ಕುರಿತು ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಹೇಳಿದ್ದನ್ನು ಜುಬೈರ್ ಬೆಳಕಿಗೆ ತಂದಿದ್ದಕ್ಕಾಗಿ ಧನ್ಯವಾದಗಳು. ಅದಕ್ಕಾಗಿ ದಂಡ ತೆರಬೇಕಾಯಿತು. ಆ ದಂಡವನ್ನು ಇಂದು ಕನ್ಹಯ್ಯಾ ಲಾಲ್ ಪಾವತಿಸಿದ್ದಾರೆ” ಎನ್ನುತ್ತಾರೆ ರಾಹುಲ್‌. ಕಳೆದ ರಾತ್ರಿ ಟೈಮ್ಸ್ ನೌ ಪ್ರೈಮ್‌ಟೈಮ್ ಚರ್ಚೆಯು ಹೀಗೆ ನಡೆಯುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಇಬ್ಬರು ಮತಾಂಧರು ಕನ್ಹಯ್ಯಾ ಲಾಲ್‌ ಅವರ ಶಿರಚ್ಛೇದನ ಮಾಡಿದ ಭಯಾನಕ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದವು. ಆ ಇಬ್ಬರು ವ್ಯಕ್ತಿಗಳು (ಗೌಸ್ ಮೊಹಮ್ಮದ್ ಮತ್ತು ಮೊಹಮ್ಮದ್ ರಿಯಾಜ್ ಅಖ್ತರಿ) ಘಟನೆಯನ್ನು ಚಿತ್ರೀಕರಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ನೂಪುರ್ ಶರ್ಮಾ ಅವರಿಗೆ ಬೆದರಿಕೆ ಹಾಕಿದರು.

ಸಾಮಾಜಿಕ ಮಾಧ್ಯಮದಲ್ಲಿ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದರಿಂದ, ಸಹಾಯಕ್ಕಾಗಿ ಪೊಲೀಸರನ್ನು ಸಂಪರ್ಕಿಸಿದ್ದರಿಂದ ಲಾಲ್ ಅವರನ್ನು ಟಾರ್ಗೆಟ್ ಮಾಡಲಾಯಿತು ಎಂದು ವರದಿಗಳು ಹೇಳುತ್ತವೆ.

ಟೈಮ್ಸ್ ನೌನಲ್ಲಿ ಪತ್ರಕರ್ತ ಶಿವಶಂಕರ್ ಇದನ್ನು “ಐಸಿಸ್ ಶೈಲಿಯ ಶಿರಚ್ಛೇದನೆ” ಎಂದು ಕರೆಯುತ್ತಲೇ ಜುಬೇರ್‌ ಹೆಸರನ್ನು ಎಳೆದುತಂದರು.

ಪ್ಯಾನೆಲಿಸ್ಟ್ ತೆಹ್ಸೀನ್ ಪೂನಾವಾಲಾ ಅವರನ್ನು ಉದ್ದೇಶಿಸಿ ಮಾತನಾಡಿದ ಶಿವಶಂಕರ್‌‌, “ಈ ಐಸಿಸ್ ಮಾದರಿಯ ಪ್ರತೀಕಾರಕ್ಕೆ ಸಕ್ರಿಯರು ಇದ್ದಾರೆ. ನೀವು ಇಂದು ರಾತ್ರಿ ಜುಬೈರ್ ಹೆಸರು ತೆಗೆದುಕೊಳ್ಳುತ್ತೀರಾ?… ಇಲ್ಲ, ನೀವು ಅವರ ಹೆಸರನ್ನು ತೆಗೆದುಕೊಳ್ಳಬೇಕು..” – ಹೀಗೆ ಮಾತನಾಡುತ್ತಾರೆ.

ನೂಪುರ್‌‌ ಶರ್ಮಾ ಪ್ರವಾದಿ ವಿರುದ್ಧ ಕಾಮೆಂಟ್ ಮಾಡಿದ ವೀಡಿಯೊ ಕ್ಲಿಪ್ ಜುಬೇರ್‌ ಹಂಚಿಕೊಂಡಿದ್ದನ್ನು ಶಿವಶಂಕರ್‌ ಪ್ರಸ್ತಾಪಿಸುತ್ತಾರೆ. ಶರ್ಮಾ ಅವರು ತಮ್ಮ ಅಭಿಪ್ರಾಯವನ್ನು ಟೈಮ್ಸ್ ನೌನಲ್ಲಿ ಹೇಳಿದರು. ಒಮ್ಮೆ ಹಿನ್ನಡೆ ಪ್ರಾರಂಭವಾದಾಗ, ಚಾನಲ್ ತಕ್ಷಣವೇ ಈ ವಿಷಯದಿಂದ ಅಂತರ ಕಾಯ್ದುಕೊಂಡಿದೆ. “ನಮ್ಮ ಚರ್ಚೆಗಳಲ್ಲಿ ಭಾಗವಹಿಸುವವರು ಸಂಯಮವನ್ನು ಕಾಪಾಡಿಕೊಳ್ಳಲು, ಸಹ ಪ್ಯಾನೆಲಿಸ್ಟ್‌ಗಳ ವಿರುದ್ಧ ಅಸಂಸದೀಯ ಭಾಷೆಯಲ್ಲಿ ಮಾತನಾಡದಂತೆ ನಾವು ಒತ್ತಾಯಿಸುತ್ತೇವೆ” ಎಂದು ಟೈಮ್ಸ್ ನೌ ತಿಳಿಸಿದ್ದನ್ನು ಉಲ್ಲೇಖಿಸಲಾಗಿದೆ.

ಕಳೆದ ರಾತ್ರಿಯ ಚರ್ಚೆಯಲ್ಲಿ ಶಿವಶಂಕರ್, ಜುಬೈರ್ ಅವರ ಈ ಟ್ವೀಟ್ ಅನ್ನು ಉಲ್ಲೇಖಿಸಿದ್ದಾರೆ. “ನೀವು ಪ್ರವಾದಿಯನ್ನು ನಿಂದಿಸಿದಾಗ, ನೀವು ದಂಡ ಕಟ್ಟಬೇಕಾಗುತ್ತದೆ. ಆ ದಂಡವನ್ನು ಇಂದು ಕನ್ಹಯ್ಯಾ ಲಾಲ್ ಪಾವತಿಸಿದ್ದಾರೆ” ಎನ್ನುತ್ತಾರೆ.

ಇಂಡಿಯಾ ಟುಡೇಯಲ್ಲಿ ರಾಜ್‌ದೀಪ್ ಸರ್ದೇಸಾಯಿ ಉದಯ್‌ಪುರ ಹತ್ಯೆಯ ಕುರಿತು ಚರ್ಚೆ ನಡೆಸಿದಾಗ ಅಲ್ಲಿಯೂ ಜುಬೇರ್‌ ಹೆಸರು ಪ್ರಸ್ತಾಪವಾಗಿದೆ. “ರಾಜಸ್ಥಾನದಲ್ಲಿ ಐಸಿಸ್ ಶೈಲಿಯ ಹತ್ಯೆ” ಎಂಬ ಚರ್ಚೆ ನಡೆಯುತ್ತಿದ್ದಾಗ, “ಭಾರತವು ಕೋಮು ಹಿಂಸಾಚಾರವನ್ನು ಹೇಗೆ ನಿಲ್ಲಿಸಬಹುದು” ಎಂದು ಸರ್ದೇಸಾಯಿಯವರು ಬಿಜೆಪಿ ವಕ್ತಾರ ಆರ್‌ಪಿ ಸಿಂಗ್ ಅವರನ್ನು ಕೇಳುತ್ತಾರೆ. ಅದಕ್ಕೆ ಸಿಂಗ್, “ನೀವು ನೂಪುರ್ ಶರ್ಮಾ ಅಥವಾ ಬೇರೆ ಯಾರನ್ನಾದರೂ ಖಂಡಿಸಿದರೆ, ಜುಬೈರ್ ಅವರನ್ನೂ ಸಹ ಖಂಡಿಸಬೇಕು” ಎನ್ನುತ್ತಾರೆ.

ಅದಕ್ಕೆ ಪ್ರತಿಕ್ರಿಯೆ ನೀಡಿದ ಸರ್ದೇಸಾಯಿ, “ಉದಯಪುರ್ ಘಟನೆಯನ್ನು ಎಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕು” ಎಂದು ಸ್ಪಷ್ಟಪಡಿಸುತ್ತಾರೆ.

ತಾಲೀಬಾನೀನಿಕರಣದ ಚರ್ಚೆ

ಈ ಭೀಕರ ಘಟನೆಯನ್ನು ‘ತಾಲೀಬಾನೀಕರಣ’ ಎಂದು ಹೆಸರಿಸಿ ಚರ್ಚೆಗಳು ಮಾಧ್ಯಮಗಳಲ್ಲಿ ನಡೆದಿದೆ.

ಆಜ್ ತಕ್ ಮಾಧ್ಯಮದಲ್ಲಿ ಚಿತ್ರಾ ತ್ರಿಪಾಠಿ, “ರಾಜಸ್ಥಾನದಲ್ಲಿ ತಾಲಿಬಾನ್ ತರಹದ ಪರಿಸ್ಥಿತಿ ಏಕೆ ಸಂಭವಿಸಿದೆ?” ಅಥವಾ “ಇದು ಕ್ರೌರ್ಯದ ಕಥೆ, ತಾಲಿಬಾನಿ ಚಟುವಟಿಕೆ” ಎಂದು ತಿಳಿಸಿದ್ದಾರೆ.

ಚಿತ್ರಾ ತ್ರಿಪಾಠಿಯವರು, “ತಾಲಿಬಾನಿ” ಪದವನ್ನು ಬಳಸುವುದನ್ನು ಕಾಂಗ್ರೆಸ್ ವಕ್ತಾರ ಅಲೋಕ್ ಶರ್ಮಾ ಆಕ್ಷೇಪಿಸಿದಾಗ ಅವರು, “ನಿಮಗೆ ಅವಮಾನವಿಲ್ಲವೇ? ಮೂರು ಮಕ್ಕಳ ತಂದೆಯನ್ನು ಹಗಲಿನಲ್ಲಿ ನಿರ್ದಯವಾಗಿ ಕೊಲ್ಲಲಾಯಿತು. ಇಲ್ಲಿ ನೀವು ಆಂಕರ್‌ ಬಾಯಿಂದ ಯಾವ ರೀತಿಯ ಪದಗಳು ಬರಬೇಕು ಎಂದು ಹೇಳುತ್ತಿದ್ದೀರಿ” ಎನ್ನುತ್ತಾರೆ.

ನ್ಯೂಸ್ 18 ಇಂಡಿಯಾದಲ್ಲಿ, ಅಮಿಶ್ ದೇವಗನ್ ಅವರ ಕಾರ್ಯಕ್ರಮದಲ್ಲೂ ತಾಲೀಬಾನೀಕರಣ ಚರ್ಚೆಯ ವಿಷಯವಾಗಿತ್ತು. “ಉದಯಪುರದಲ್ಲಿ ತಾಲಿಬಾನ್ ಮಾದರಿಯ ಕೊಲೆ ನಡೆದಿದೆ” ಎನ್ನುತ್ತಾರೆ ದೇವಗನ್‌.

ಬಿಜೆಪಿ ಐಟಿ ಮುಖ್ಯಸ್ಥ ಅಮಿತ್ ಮಾಳವೀಯ ಮಾತನಾಡಿ, “ಕಳೆದ ಕೆಲವು ತಿಂಗಳುಗಳಲ್ಲಿ, ಈ ರೀತಿಯ ಹಲವಾರು ಘಟನೆಗಳು ನಡೆದಿವೆ. ಅಲ್ಲಿ ಹಿಂದೂಗಳ ಮೇಲೆ ಇಂತಹ ದಾಳಿಗಳನ್ನು ಮಾಡಲಾಗಿದೆ. ಅದು ರಾಮ ನವಮಿ ಮೆರವಣಿಗೆಯಾಗಲಿ ಅಥವಾ ಹನುಮಾನ್ ಉತ್ಸವ ಮೆರವಣಿಗೆಯಾಗಲಿ, ಮುಸ್ಲಿಮರು ಅವರ ಮೇಲೆ ದಾಳಿ ಮಾಡಿದ್ದಾರೆ” ಎಂದು ದೂರುತ್ತಾರೆ.

ಝೀ ನ್ಯೂಸ್‌ನಲ್ಲಿ ಆಂಕರ್‌ ರೋಹಿತ್ ರಂಜನ್ ‍ಮಾತನಾಡುತ್ತಾ, “ಈ ಘಟನೆಯು ಧಾರ್ಮಿಕ ಯುದ್ಧದ ಭಾಗವಾಗಿದೆ” ಎನ್ನುತ್ತಾರೆ.

2015ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಚಾರ್ಲಿ ಹೆಬ್ಡೊ ದಾಳಿ ಮತ್ತು 2020ರಲ್ಲಿ ಫ್ರೆಂಚ್ ಶಿಕ್ಷಕನ ಶಿರಚ್ಛೇದ ಪ್ರಕರಣವನ್ನು ಪ್ರಸ್ತಾಪಿಸಿದ ರಂಜನ್, “ಯಾರಾದರೂ ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸಿದರೆ ಅವರನ್ನು ಕೊಲ್ಲಲಾಗುತ್ತದೆ. ಅಂತಹ ಹತ್ಯೆಯನ್ನು ಸಮರ್ಥಿಸಲಾಗುತ್ತದೆ ಎಂದು ಇಡೀ ಜಗತ್ತು ಮಾನಸಿಕವಾಗಿ ಒಪ್ಪಿಕೊಳ್ಳುವಂತೆ ಒತ್ತಾಯಿಸಲಾಗಿದೆ” ಎನ್ನುತ್ತಾರೆ. ವಿಚಿತ್ರವೆಂದರೆ, ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ಕಾರ್ಯಕ್ರಮದ ವಿಡಿಯೊವನ್ನು ಯೂಟ್ಯೂಬ್‌ನಲ್ಲಿ ತೆರವು ಮಾಡಲಾಗಿದೆ.

ಇದನ್ನೂ ಓದಿರಿ: ಪತ್ರಕರ್ತ ಜುಬೇರ್‌ ವಿರುದ್ಧ ದೂರು ನೀಡಿದ್ದ ಟ್ವಿಟರ್‌ ಅಕೌಂಟ್‌ ಡಿಲೀಟ್!

ಎಬಿಪಿ ನ್ಯೂಸ್‌ನಲ್ಲಿ ರೂಬಿಕಾ ಲಿಯಾಕತ್, “ರಾ‘ಜಸ್ಥಾನವು ಮತಾಂಧತೆಯ ಪ್ರಯೋಗಾಲಯ ಆಗಿ ಮಾರ್ಪಟ್ಟಿದೆಯೇ?” ಎಂದು ಕೇಳುತ್ತಾರೆ. ಕಾರ್ಯಕ್ರಮದ ವಾಯ್ಸ್‌ವೋವರ್‌ನಲ್ಲಿ, “ಭಾರತದಲ್ಲಿ ತಾಲಿಬಾನ್ ತರಹದ ಮನಸ್ಥಿತಿಯ ಕೆಲವು ಜನರು ಇದ್ದಾರೆ ಎಂಬ ಪ್ರಶ್ನೆಯನ್ನು ಈ ವೀಡಿಯೊ ಎತ್ತುವುದಿಲ್ಲವೇ?” ಎಂದು ಕೇಳಲಾಗುತ್ತದೆ.

NDTVಯಲ್ಲಿ ನಿಧಿ ರಜ್ದಾನ್ ಅವರು ಈ ಕುರಿತು ಚರ್ಚೆಯನ್ನು ನಡೆಸಿದರು. ಕಾಂಗ್ರೆಸ್ ವಕ್ತಾರರಾಗಿರುವ ಪ್ಯಾನೆಲಿಸ್ಟ್ ಗುರುದೀಪ್ ಸಿಂಗ್ ಸಪ್ಪಲ್ ಅವರು ಮಾತನಾಡುತ್ತಾ, “ಈ ಕೊಲೆಯು ಅನಾಗರಿಕವಾದದ್ದು. ತ್ವರಿತವಾಗಿ ತನಿಖೆ ನಡೆಸಲಾಗುವುದು” ಎಂದು ಭರವಸೆ ನೀಡಿದರು.

ಮಾಜಿ ಐಪಿಎಸ್ ಅಧಿಕಾರಿ ಯಶೋವರ್ಧನ್ ಆಜಾದ್ ಅವರು ಮಾತನಾಡಿ, “ಇದು ಐಸಿಸ್ ಶೈಲಿಯ ಮರಣದಂಡನೆ. ನಾವು ಎಚ್ಚರದಿಂದಿರಬೇಕು” ಅವರು ಎಚ್ಚರಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಲೋಫರ್ ಜುಬೇರ್ ನ ಪರ ಮಾತಾಡೋ ಲೋಫರ್ ಗಳನ್ನ ಸರ್ಕಾರವೇ ಗುಂಡುಕ್ಕಿ ಕೊಲ್ಲುವ ಸಮಯ ಹತ್ತಿರದಲ್ಲಿ ಇದೆ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...