Homeಮುಖಪುಟಹಿಂಸೆಯೊಳಗಣ ಕಾರುಣ್ಯ: ಪ.ರಂಜಿತ್‌ ನಿರ್ದೇಶನದ ‘ಧಮ್ಮಮ್‌’ ತೆರೆದಿಟ್ಟ ತಾತ್ವಿಕತೆ

ಹಿಂಸೆಯೊಳಗಣ ಕಾರುಣ್ಯ: ಪ.ರಂಜಿತ್‌ ನಿರ್ದೇಶನದ ‘ಧಮ್ಮಮ್‌’ ತೆರೆದಿಟ್ಟ ತಾತ್ವಿಕತೆ

- Advertisement -
- Advertisement -

ಸೋನಿ ಲೈವ್‌ ಒಟಿಟಿಯಲ್ಲಿ ಬಿಡುಗಡೆಯಾಗಿರುವ ‘ವಿಕ್ಟಿಮ್’ ಎಂಬ ಆಂಥಾಲಜಿಯ ಮೊದಲ ಚಾಪ್ಟರ್‌ ‘ಧಮ್ಮಮ್‌’- ವಿಮರ್ಶಕರ ಮನಗೆದ್ದಿದೆ. ದಲಿತ ಪ್ರತಿರೋಧದ ಕಥನಗಳನ್ನು ತಮಿಳು ನೆಲದಲ್ಲಿ ಕಟ್ಟಿಕೊಡುತ್ತಿರುವ ಪ.ರಂಜಿತ್‌, ‘ಧಮ್ಮಮ್‌’ ನಿರ್ದೇಶಕರೆಂಬುದು ಮತ್ತೊಂದು ಗಮನಾರ್ಹ ಸಂಗತಿ.

ಅರ್ಧ ಗಂಟೆಯಲ್ಲಿ ಮುಗಿದು ಹೋಗುವ ಧಮ್ಮಮ್‌, ಹಿಂಸೆಯಾಚೆ ಅವಿತಿರುವ ಪ್ರೀತಿ ಮತ್ತು ಕಾರುಣ್ಯವನ್ನು ಶೋಧಿಸುವ ಪ್ರಯತ್ನ ಮಾಡಿದೆ. ಮನುಷ್ಯನ ಜಾತಿ ಅಹಂಕಾರದ ಕುರಿತು ಗಂಭೀರವಾದ ಚರ್ಚೆಗೆ ಅವಕಾಶ ನೀಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ಧಮ್ಮಮ್‌’ ಸ್ಟ್ರೀಮ್ ಆಗುತ್ತಿರುವ ಹೊತ್ತಿನಲ್ಲಿಯೇ ತಮಿಳುನಾಡಿನ ಶಿವಗಂಗೈ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿಶೇಷ ನ್ಯಾಯಾಲಯವು, ಮೂವರು ದಲಿತರ ತ್ರಿವಳಿ ಹತ್ಯೆಗೆ ಸಂಬಂಧಿಸಿದಂತೆ 27 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಸುದ್ದಿ ಬಂತು. ದಲಿತರ ಆರ್ಥಿಕ ಸ್ವಾವಲಂಬನೆಯೇ ಸವರ್ಣೀಯರ ಅಸಹನೆಗೆ ಕಾರಣವಾಗಿತ್ತು. ಅಗಮುಡಿಯಾರ್ (ಪ್ರಬಲವಾದ ತೇವರ್ ಜಾತಿ ಸಮೂಹದ ಒಂದು ಭಾಗ) ಸಮುದಾಯದವರ ಮನೆಯ ಮುಂದೆ ದಲಿತ ಯುವಕನೊಬ್ಬ ಜೋರಾಗಿ ಫೋನಿನಲ್ಲಿ ಮಾತನಾಡಿದ ಎಂಬುದಷ್ಟೇ ಸವರ್ಣೀಯರ ಅಹಂಗೆ ಪೆಟ್ಟು ನೀಡಿತ್ತು. ಮಾರಕಾಸ್ತ್ರಗಳಿಂದ ದಾಳಿ ಮಾಡಿದ ಅಗಮುಡಿಯಾರರು ಮೂವರು ದಲಿತರನ್ನು ಕೊಂದು, ಐವರನ್ನು ಭೀಕರವಾಗಿ ಗಾಯಗೊಳಿಸಿದ್ದರು. ಈ ಪ್ರಕರಣದಲ್ಲಿ 27 ಅಪರಾಧಿಗಳಿಗೆ ಇತ್ತೀಚೆಗಷ್ಟೇ ಶಿಕ್ಷೆ ನೀಡಲಾಗಿದೆ. ಪ.ರಂಜಿತ್ ಅವರ ‘ಧಮ್ಮಮ್‌’ ಕೂಡ ಶಿವಗಂಗೈ ಪ್ರಕರಣವನ್ನು ಕೊಂಚ ನೆನಪಿಸುತ್ತದೆ.

ವಿಶಾಲವಾದ ಗದ್ದೆ ಬಯಲು. ಸುತ್ತಲು ಹಸಿರು. ನಡುವೆ ಇನ್ನೂ ನಾಟಿ ಮಾಡದಿರುವ ಗದ್ದೆ. ಅಲ್ಲೊಬ್ಬ ಶೋಷಿತ ಸಮುದಾಯದ ವ್ಯಕ್ತಿ. ಆತನ ಹೆಸರು ‘ಗುಣ’. ಬದುವಿನಲ್ಲಿ ಬುದ್ಧನ ವಿಗ್ರಹ. ಆ ಶೋಷಿತನ ಪುಟ್ಟ ಮಗಳು ‘ಕೇಮ’.

ಬುದ್ಧನ ಮೇಲೆ ಹತ್ತಿ ನಿಂತು ಹಕ್ಕಿಯಂತೆ ಹಾರುತ್ತೇನೆಂಬ ಸೂಚನೆಗಳನ್ನು ನೀಡುತ್ತಿರುವ ಮಗುವಿಗೆ, “ದೇವರ ಮೇಲೆ ನಿಲ್ಲಬಾರದು. ಕೆಳಗಿಳಿ” ಎಂದು ಗುಣ ಎಚ್ಚರಿಸುತ್ತಾನೆ. “ದೇವರೇ ಇಲ್ಲವೆಂದು ಬುದ್ಧ ಹೇಳಿದ್ದಾನೆ. ಆತನನ್ನು ದೇವರು ಅನ್ನುತ್ತೀಯಲ್ಲ” ಎಂದು ಅಪ್ಪನಿಗೆ ಮಗಳು ತಿರುಗೇಟು ನೀಡುತ್ತಾಳೆ. ಅಪ್ಪಾ ಕಕ್ಕಾಬಿಕ್ಕಿ. ಪ್ರಶ್ನಿಸುವ ರೂಪಕವೇ ಬುದ್ಧ. ಹಳೆಯ ಕಾಲಕ್ಕೆ ಜೋತು ಬಿದ್ದಿರುವ ಅಪ್ಪನ ಎದುರು, ಹೊಸದಾರಿಯ ಹುಡುಕಾಟದಲ್ಲಿರುವ ಮಗು!

ಇದನ್ನೂ ಓದಿರಿ: ಡಬ್‌‌ ಸಿನಿಮಾ ‘ಡೊಳ್ಳು’ ಸಿಂಕ್‌ಸೌಂಡ್‌ ವಿಭಾಗದಲ್ಲಿ ಆಯ್ಕೆ: ‘ರಾಷ್ಟ್ರಪ್ರಶಸ್ತಿ ಲಾಬಿ’ ರಾಜಕಾರಣದ ಕಥೆ ಇದು!

ಈ ಶೋಷಿತ ಸಮುದಾಯದ ಹೊಸತಲೆಮಾರಲ್ಲಿ ಅನ್ಯಾಯವನ್ನು ಪ್ರಶ್ನಿಸುವ, ನ್ಯಾಯೋಚಿತವಾಗಿ ಸಿಡಿದೇಳುವ ಗುಣ ಮನೆಮಾಡಿದೆ. ಇದನ್ನು ಇನ್ನೊಂದು ಬದಿಯಲ್ಲಿರುವವರು ತಮ್ಮ ಅಹಂಕಾರಕ್ಕೆ ಪೆಟ್ಟೆಂದು ಭಾವಿಸುತ್ತಾರೆ. ದಲಿತನ ಸಣ್ಣ ಪ್ರತಿರೋಧವೂ ಬಲಾಢ್ಯರಲ್ಲಿ ದೊಡ್ಡ ಅಸಹನೆಯನ್ನು ಹುಟ್ಟಿಹಾಕಿಬಿಡುತ್ತದೆ. ಸವರ್ಣೀಯರು ಎಸಗುವ ದೌರ್ಜನ್ಯದಲ್ಲಿ ನಿತ್ಯವೂ ನಲುಗುತ್ತಿರುವ ದಲಿತ ಎಲ್ಲ ಹಿಂಸೆಗಳಾಚೆಗೆ ಜಿಗಿದು ಪ್ರೀತಿ, ಮಮತೆ, ಕಾರುಣ್ಯವನ್ನು ಶೋಷಕ ಸಮುದಾಯಕ್ಕೂ ತೋರುವ ಗುಣವೇ ಬೌದ್ಧತತ್ವ.

ಮತ್ತೆ ಮತ್ತೆ ಕಿರಿಕಿರಿ ಮಾಡುತ್ತಲೇ ಇರುವ ಬಲಾಢ್ಯ ಜಾತಿಯ ಸೇಕರ, ದಲಿತನಾದ ಗುಣನನ್ನು ಕಿಚಾಯಿಸುತ್ತಲೇ ಇದ್ದಾನೆ.‌ ದಲಿತನೊಬ್ಬ ಭೂಮಿ ಉಳುಮೆ ಮಾಡುತ್ತಿರುವುದೇ ಈ ಬಲಾಢ್ಯನ ಅಸಹನೆಯ ಮೂಲ ಎಂದು ಬಿಡಿಸಿ ಹೇಳಬೇಕಿಲ್ಲ. ದಲಿತನ ಪುಟ್ಟ ಮಗಳು ಕೇಮ ಆ ಗದ್ದೆಯ ಬದುವಿಯಲ್ಲಿ ಆಟವಾಡುತ್ತಿದ್ದಾಳೆ. ಯಾವುದೇ ಹಿಂಸೆ ನೀಡುವ ಗುರಿ ಇಲ್ಲವಾದರೂ ಆ ಮೀನನ್ನು ಹಿಡಿಯುವ ವ್ಯರ್ಥ ಪ್ರಯತ್ನದಲ್ಲಿ ಆ ಮಗು ತೊಡಗಿದೆ.

ಕಾಲು ಕೆರೆದು ಜಗಳ ಮಾಡಲೆತ್ನಿಸುತ್ತಿರುವ ಸೇಕರ, ಬದುವಿನಲ್ಲಿ ನಡೆದು ಬರುವಾಗ ಕೇಮ ಕೂಡ ಅದೇ ದಾರಿಯಲ್ಲಿ ಸಾಗುತ್ತಿದ್ದಾಳೆ. ಕಿರಿದಾದ ಬದು. ಪಕ್ಕಕ್ಕೆ ಹೆಜ್ಜೆ ಇಟ್ಟರೆ ಕೆಸರು. ತಾನು ಮೊದಲು ನಡೆದು ಬಂದ ಕಾರಣ, ನನಗೆ ಅತ್ತ ಹೋಗಲು ದಾರಿ ನೀಡಬೇಕು ಎಂದು ಕೇಮ ವಾದಿಸುತ್ತಾಳೆ. ಇದನ್ನು ಸಹಿಸದ ಸೇಕರ, ಹಿಂದೆ ಹೋಗುವಂತೆ ಮಗುವನ್ನು ಗದರುತ್ತಾನೆ. ಗುಣ ಕೂಡ ಇದನ್ನು ಗಮನಿಸುತ್ತಾ, ಮುಂದಾಗುವ ಅನಾಹುತವನ್ನು ಊಹಿಸಿ, ಹಳೆಯ ತಲೆಮಾರಿನ ವರಸೆಯನ್ನೂ ತೋರುತ್ತಾ, ‘ಕೇಮ ಬದಿಗೆ ಸರಿಯಮ್ಮ’ ಎನ್ನುತ್ತಾನೆ. ಆದರೆ ಮಗು, “ನಾನು ಮೊದಲು ಬಂದಿದ್ದು, ನಾನೇಕೆ ಜಾಗ” ಬಿಡಲಿ ಎಂದು ನ್ಯಾಯೋಚಿತವಾಗಿ ಪ್ರಶ್ನಿಸುತ್ತದೆ.

ಸೇಕರ ಮುಂದೆ ನುಗ್ಗಲು ಬಂದಾಗ, ಆತನನ್ನು ಗದ್ದೆಯ ಕೆಸರಿಗೆ ನೂಕಿ ಕೇಮ ಮುಂದೆ ಸಾಗುತ್ತಾಳೆ. ಆತನ ಬಿಳಿ ಬಟ್ಟೆಗೆ ಕೆಸರು ಮೆತ್ತಿಕೊಳ್ಳುತ್ತದೆ. ಇದನ್ನೆಲ್ಲ ನೋಡುತ್ತಿದ್ದ ಗುಣ, ಮಗಳನ್ನು ಕಾಪಾಡಲು ಬಂದಾಗ ಆಕಸ್ಮಿಕವಾಗಿ ಬಲಾಢ್ಯನ ರಕ್ತ ಹರಿಯುತ್ತದೆ. ಸೇಕರನ ಮನೆಗೆ ವಿಷಯ ತಿಳಿದು ಆತನ ತಂದೆ, ಕಿರಿಯ ಮಗ ಹಾಗೂ ಹಿರಿಯ ಮಗ ಅಲ್ಲಿಗೆ ಧಾವಿಸುತ್ತಾರೆ.

ಸಾವು, ಬದುಕಿನ ನಡುವೆ ಸೇಕರ ಹೊರಳಾಡುತ್ತಿದ್ದರೂ ಆತನನ್ನು ರಕ್ಷಿಸದೆ ಗುಣನ ಹೆಣ ಉರುಳಿಸಬೇಕೆಂಬುದು ಹಪಾಹಪಿಸುತ್ತಾರೆ. ಇವರಿಂದ ತಪ್ಪಿಸಿಕೊಳ್ಳಲೆತ್ನಿಸುವ ದಲಿತ ಅನಿವಾರ್ಯವಾಗಿ ಮಿಕ್ಕವರನ್ನೂ ಗಾಯಗೊಳಿಸಿ ಬಚಾವಾಗುತ್ತಾನೆ. ಆದರೆ ಕೇಮ ತನ್ನ ಅಪ್ಪನಲ್ಲಿ, ಸಾವು ಬದುಕಿನ ನಡುವೆ ಹೊರಳಾಡುತ್ತಿರುವ ಸೇಕರನ್ನು ಆಸ್ಪತ್ರೆಗೆ ಕರೆದೊಯ್ಯೋಣ ಎನ್ನುತ್ತದೆ. ಇದೇ ಕಾರುಣ್ಯ. ಶೋಷಿತ ಸಮುದಾಯದ ಆದಿಮ ಗುಣವದು.

ಇದನ್ನೂ ಓದಿರಿ: ವಿಕ್ರಾಂತ್‌ ರೋಣ ಸಿನಿಮಾ ದಲಿತರನ್ನು ಚಿತ್ರಿಸಿರುವ ರೀತಿ ಅಪಾಯಕಾರಿ ಏಕೆ?

ಯಾರನ್ನೂ ನೋಯಿಸದ, ಅನ್ಯಾಯವನ್ನು ಪ್ರಶ್ನಿಸಿದ ಮಾತ್ರಕ್ಕೆ ದಲಿತ ಸಮುದಾಯ ತಾನೇ ನೋಯುವ ಸಂಕಟ ಇದೆಯಲ್ಲ- ಅದಕ್ಕೆ ಶತಶತಮಾನಗಳ ಚರಿತ್ರೆ ಇದೆ. ಇದರ ಜೊತೆಗೆ ಶೋಷಕ ಸಮುದಾಯದ ಆತ್ಮವಿಮರ್ಶೆಯ ಅಗತ್ಯವನ್ನು ಇಲ್ಲಿ ತೆರೆದಿರುವ ಪ್ರಯತ್ನವನ್ನು ಪ.ರಂಜಿತ್ ಮಾಡಿದ್ದಾರೆ. ಗುದ್ದಾಡಿ ಹೈರಾಣಾಗಿರುವ ಗುಣನ ಮೇಲೆ ಮುಗಿ ಬೀಳಲು ಹೋಗುವ ಸಹೋದರನನ್ನು ಇನ್ನೊಬ್ಬ ಸಹೋದರ ತಡೆಯುವುದು ಕೂಡ ಮನಃ ಪರಿವರ್ತನೆಯ ದಾರಿಯೂ ಹೌದು.

ಶೋಷಿತನ ಕಾರುಣ್ಯವನ್ನು, ಶೋಷಕನ ಮನಃಪರಿವರ್ತನೆಯನ್ನು ರೂಪಕವಾಗಿ ತೆರೆದಿರುವ ಪ್ರಯತ್ನವನ್ನು ಪ.ರಂಜಿತ್ ಮಾಡಿರುವುದು ‘ಧಮ್ಮಮ್‌’ನ ಹೆಗ್ಗಳಿಕೆ. ಧಮ್ಮದ ತಾತ್ವಿಕತೆಯನ್ನು ಹೊಸ ಕಾಲದ ವಿದ್ಯಮಾನಗಳೊಂದಿಗೆ ವಿವರಿಸುವ ಪ್ರಯತ್ನವೂ ಇದಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...