Homeಅಂಕಣಗಳುಮುರುಘಾ ಶರಣರ ಮರುಳು ಮಾತು ನಿಜವೆ?

ಮುರುಘಾ ಶರಣರ ಮರುಳು ಮಾತು ನಿಜವೆ?

- Advertisement -
- Advertisement -

ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವಕ್ಕೆ ಹರಿದು ಬಂದ ಜನಸಾಗರ ನೋಡಿದ ಬಿಜೆಪಿಗಳು ಅದಕ್ಕೆ ಪ್ರತಿಯಾಗಿ ತಾವೂ ಸಾಗರೋಪಾದಿಯಲ್ಲಿ ಜನರನ್ನು ಸೇರಿಸುವ ಬಗ್ಗೆ ಗಾಢ ಚಿಂತನೆಯಲ್ಲಿ ತೊಡಗಿಸಿಕೊಂಡಿದ್ದಾರಂತಲ್ಲಾ. ಸ್ವತಃ ಎಡೂರಪ್ಪನವರೇ ಇಡೀ ದಿನ ಟಿ.ವಿ. ಮುಂದೆ ಕುಳಿತು ಸಿದ್ದರಾಮೋತ್ಸವ ನೋಡಿ, ಏನೂ ಹೇಳಲಾಗದ ಏನೂ ಮಾಡಲಾಗದ ಅಸಹಾಯಕತೆ ಚಡಪಡಿಕೆ ಪ್ರದರ್ಶಿಸಿದರು. ಕಾರಣ ಅವರೀಗ ಮುಖ್ಯಮಂತ್ರಿಯಲ್ಲಿ. ವಿರೋಧಪಕ್ಷದ ನಾಯಕರೂ ಅಲ್ಲ. ತಮ್ಮ ಅಧಿಕಾರಾವಧಿಯ ಮಧ್ಯದಲ್ಲೇ ಅವರನ್ನು ಕೆಳಗಿಳಿಸಲಾಯ್ತು. ಇಳಿಯುವಾಗಲಾದರೂ ಇಂತಹದೊಂದು ಎಡೂರು ಜಾತ್ರೆ ಮಾಡಿಬಿಡಬಹುದಿತ್ತು. ಆ ಜಾತ್ರೆಗೆ ಸರಕಾರದಿಂದ ಭಿಕ್ಷೆ ಪಡೆದ ಹಲವು ಜಗತ್ತಿನ ಜಗದ್ಗುರುಗಳ ಪರಿಷೆಯೇ ನೆರೆಯುತ್ತಿತ್ತು. ಸಹಜವಾಗಿ ಆ ಮಠಗಳ ಭಕ್ತಾದಿಗಳು, ಸರಕಾರಿ ಮತ್ತು ಖಾಸಗಿಯವರ ಸುವಿಹಾರಿ ಬಸ್ಸಿನಲ್ಲಿ ಬಂದಿಳಿಯುತ್ತಿದ್ದರು. ಅವರಿಗೆಲ್ಲಾ ಹೋಳಿಗೆ ಶೀಖರಣೆ ಊಟ ಹಾಕಿಕಳಿಸಬಹುದಿತ್ತು. ಪೀಠ ಹಿಡಿದು ಕುಳಿತಿರುವ ಸಿರಿವಂತ ಸ್ವಾಮಿಗಳು, ತಮ್ಮ ಎಂದಿನ ನಿಷ್ಠುರ ಮಾತುಗಳನ್ನು ಝಳಪಿಸಿ ಎಡೂರಪ್ಪನವರು ಎಂದಿಗೂ ಸ್ಥಾನ ಬಿಟ್ಟುಕೊಡಬಾರದು, ನನ್ನನ್ನಾದರೂ ನೋಡಿ ಅವರು ಧೈರ್ಯ ತುಂಬಿಕೊಳ್ಳಬೇಕೆಂದು ಅಪ್ಪಣೆ ಕೊಡಿಸಿದರೆ, ಇನ್ನ ಮುರುಘಾ ಮಠದವರು ಎಡೂರಪ್ಪನವರು ಎದೆಗುಂದಬಾರದು, ಸುತ್ತ ಮುತ್ತ ಶತ್ರುಗಳಿರುವಾಗ ಧೈರ್ಯದಿಂದ ರಾಜ್ಯವನ್ನಾಳಬೇಕು ಎಂದು ಹೇಳೇ ಹೇಳುತ್ತಿದ್ದರಂತಲ್ಲಾ, ಥೂತ್ತೆರಿ.

****

ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವಕ್ಕೆ ಬಂದಿದ್ದ ರಾಹುಲಗಾಂಧಿಯನ್ನು ಒಂದರ್ಥದಲ್ಲಿ ಹೈಜಾಕ್ ಮಾಡಿದ ಡಿ.ಕೆ. ಶಿವಕುಮಾರ್ ತಾವು ಮುಂದೆ ಮುಖ್ಯಮಂತ್ರಿಯಾಗಲು ಶರಣ ಸಮೂಹದ ಓಟು ಬೇಕಾದ್ದರಿಂದ, ತಂತ್ರಗಾರಿಕೆ ನಡೆಸಿ, ಅದರಂತೆ ಮುರುಘಾ ಶರಣರಿಂದ ರಾಹುಲಗಾಂಧಿಗೆ ಲಿಂಗದೀಕ್ಷೆ ಕೊಡಿಸೇಬಿಟ್ಟರಂತಲ್ಲಾ. ಮುಖ್ಯವಾಗಿ ದಯವೇ ಧರ್ಮದ ಮೂಲವೆಂದು ಒಪ್ಪಿದವರೆಲ್ಲಾ ಬಸವಣ್ಣನ ಅನುಯಾಯಿಗಳಾಗುತ್ತಾರೆ. ಅವರಿಗೆ ಲಿಂಗದೀಕ್ಷೆಯ ಅಗತ್ಯವೇ ಇರುವುದಿಲ್ಲ. ಇಂತಹ ಸೂಕ್ಷ್ಮ ವಿಚಾರ ಮುರುಘಾ ಶರಣರಿಗೆ ಹೊಳೆಯಬೇಕಿತ್ತು. ನಮ್ಮ ಮುರುಘಾ ಶರಣರು ಬೆಂಬಲಿಸಿದ ಎಡೂರಪ್ಪ ಶರಣ. ಬಸವ ತತ್ವಪ್ರತಿಪಾದಕರಾಗಬೇಕಿತ್ತು. ಆದರೇ ಮಾಡಿದ್ದೆಲ್ಲಾ ಪುರೋಹಿತ ಶಾಹಿಗಳು ಹೇಳಿದ ಕೆಲಸವನ್ನು. ಅವರ ನಂತರ ಮುಖ್ಯಮಂತ್ರಿಯಾದ ಸಾದಲಿಂಗಾಯಿತರ ಬಸವರಾಜ ಬೊಮ್ಮಾಯಿ ಮತ್ತೊಬ್ಬ ಶರಣ. ಲಿಂಗಕಟ್ಟಿಗೊಂಡು ಇವರು ಮಾಡಿದ ಆಡಳಿತವೆಲ್ಲಾ ಕೇಶವಕೃಪಾದ ಆಜ್ಞೆಯ ಪರಿಪಾಲನೆ; ಹಿಜಾಬು, ನಮಾಜು, ಮುಸ್ಲಿಂ ವ್ಯಾಪಾರಿಗಳ ನಿರ್ಬಂಧ ಇತ್ಯಾದಿ ಕೇಶವ ಕೃಪದ ಮನೆಹಾಳು ಕೃತ್ಯಗಳ ಜಾರಿ ಮತ್ತು ಸಮರ್ಥನೆ; ಇದ ಒಬ್ಬ ಲಿಂಗದೀಕ್ಷೆಯ ಶರಣನ ಆಡಳಿತದಲ್ಲಿ ಜರುಗಿದ ದುಸ್ವಪ್ನ. ಸಿದ್ದರಾಮಯ್ಯ ಹುಟ್ಟಿನಿಂದ ಶರಣನಲ್ಲ. ಆದರೆ ಮುಖ್ಯಮಂತ್ರಿಯಾಗಿ ಪ್ರಮಾಣ ಮಾಡಿದ್ದು ಬಸವ ಜಯಂತಿಯಂದು. ನಂತರ ಮಾಡಿದ್ದು ಶರಣರ ದಾಸೋಹ ಕಲ್ಪನೆಯ ಅನನಭಾಗ್ಯ ಮುಂತಾದ ಕೆಲಸ. ಹಾಗೆ ನೋಡಿದರೆ, ಲಿಂಗದೀಕ್ಷೆಗೂ ಶರಣ ತತ್ವ ಪ್ರತಿಪಾದನೆಗೂ ತಾಳಮೇಳವೇ ಇಲ್ಲವೆಂಬುದು ಮುರುಘಾ ಶರಣರಿಗೆ ಹೊಳೆಯಬೇಕಿತ್ತಂತಲ್ಲಾ, ಥೂತ್ತೆರಿ.

*****

ಚಿತ್ರದುರ್ಗದ ಮಠಕ್ಕೆ ಬಂದ ರಾಹುಲಗಾಂಧಿಯನ್ನ ಹಿಡಿದುಕೊಂಡ ಮುರುಘಾ ಶರಣರು, ಮೋದಿ ಒಬ್ಬ ಸಮರ್ಥನಾಯಕ, ಸದ್ಯ ನಮ್ಮ ಸುತ್ತಲೂ ಶತ್ರು ರಾಷ್ಟ್ರಗಳಿದ್ದು, ಅವುಗಳಿಂದ ದೇಶವನ್ನ ರಕ್ಷಿಸಬೇಕಾದರೆ ಮೋದಿಯಂತಹ ಸಮರ್ಥ ನಾಯಕ ಬೇಕೆಂದು ರಾಹುಲಗಾಂಧಿಗೇ ಹೇಳಿದರಂತಲ್ಲಾ. ಆಗ ಮುಗ್ದ ಬಾಲಕನಂತೆ ಮುರುಘಾ ಶರಣರ ಮುಖ ನೋಡಿದ ರಾಹುಲಗಾಂಧಿ, ಶರಣರ ಜ್ಞಾನಕ್ಕೆ ಮರುಕ ಪಟ್ಟಿರಬಹುದಲ್ಲವೆ. ಮುಖ್ಯವಾಗಿ ಕಾಮನ್ ಸೆನ್ಸ್ ಏಂಬುದೊಂದು ಮನಸ್ಥಿತಿ ಇದ್ದಿದ್ದರೆ, ಮೋದಿಯ ಸಮರ್ಥ ನಾಯಕತ್ವದ ಅರಿವಾಗಬೇಕಿತ್ತು. ಚೀನಾ ಅತಿಕ್ರಮಿಸಿರುವ ವಿಷಯವನ್ನು ದೇಶದ ಮುಂದೆ ಅವರು ಈವರೆಗೂ ಹೇಳಿಲ್ಲ. ಕೃಷಿ ಕಾಯ್ದೆ ಜಾರಿಮಾಡಿದ್ದಕ್ಕಾಗಿ ಒಂದು ವರ್ಷ ನಡೆದ ರೈತರ ಧರಣಿಯಲ್ಲಿ ಏಳುನೂರ ರೈತರು ಹತರಾದರು. ಆ ಬಗ್ಗೆ ಮೋದಿ ಈವರೆಗೂ ಪ್ರತಿಕ್ರಿಯಿಸಿಲ್ಲ. ಹೀಗಿರುವಾಗ, ಮೋದಿ ಒಬ್ಬ ಸಮರ್ಥ ಪ್ರಧಾನಿ ಎಂಬ ಅಭಿಪ್ರಾಯವನ್ನು ಹೊಂದಿರುವ ಮುರುಘಾ ಶರಣರು ಚಿತ್ರದುರ್ಗದಾಚೆಗೆ ದೇಶದ ಆಗುಹೋಗುಗಳನ್ನು ಕಣ್ಣುತೆರೆದು ನೋಡಿದರೆ ನಿಜದ ಅರಿವಾಗಬಹುದು ಎಂಬ ಅಭಿಪ್ರಾಯ ರಾಹುಲಗಾಂಧಿಗೆ ಹೊಳೆದಿರಬಹುದಂತಲ್ಲಾ, ಥೂತ್ತೆರಿ.

****

ಇನ್ನ ನಮ್ಮೂರ ಕೆರೆ ಕೋಡಿಯಲ್ಲಿ ಕುಳಿತಿರುವ ಕಾಲಜ್ಞಾನಿ ಸ್ವಾಮೀಜಿಗಳು ಎಂದಿನಂತೆ ಮತ್ತೆ ಜನಗಳನ್ನು ಹೆದರಿಸಿದ್ದಾರೆ. ದುರ್ದೈವವೆಂದರೆ ಅವರ ಮಾತುಗಳಿಗೆ ಯಾರೂ ಹೆದರಿದಂತೆ ಕಾಣದೇ ಇರುವುದರಿಂದ ಮತ್ತೆ ಗುಡಾಗಿದ್ದಾರಂತಲ್ಲಾ. ಆ ಗುಡುಗಿನ ಶಬ್ದ ಯಾವುದೆಂದರೆ ಕರ್ನಾಟಕ ಅತಿವೃಷ್ಠಿಯಿಂದ ಕಂಗೆಟ್ಟು ಹೋಗಲಿದೆ, ದಟ್ಟೈಸಿದ ಮೋಡದಿಂದ ಧಾರಾಕಾರ ಮಳೆಯಾಗುತ್ತದೆ. ಈ ಮಳೆ ದೆಸೆಯಿಂದ ಕೆರೆಕಟ್ಟಿ ತುಂಬಿ ಹರಿಯುತ್ತವೆ. ಆದಕಾರಣ ಕೆರೆಗೆ ಬಿಟ್ಟು ಸಾಕುತ್ತಿರುವ ಮೀನುಗಳು ಕೊಚ್ಚಿಕೊಂಡು ಹೋಗಿ ಕಂಡವರ ಪಾಲಾಗುತ್ತವೆ. ಕೆರೆ ಏರಿ ಹೊಡೆಯುತ್ತದೆ. ಮನೆಗಳ ಗೋಡೆ ಕುಸಿಯುತ್ತದೆ. ಗೋಡೆ ಕೆಳಗೆ ಸಿಕ್ಕವರು ಸತ್ತುಹೋಗುತ್ತಾರೆ. ಜಾನುವಾರುಗಳು ನೀರಲ್ಲಿ ತೇಲುತ್ತ ಹೋಗುತ್ತವೆ. ರಸ್ತೆಯ ಬದಿಯ ಮರಗಳು ರಸ್ತೆಗೇ ಉರುಳುತ್ತವೆ. ಸಂಚಾರಕ್ಕೆ ಅಡ್ಡಿಯಾಗುತ್ತದೆ. ದೇವಸ್ಥಾನ ಮಠಗಳಿಗೆ ಹೋಗುವ ಜನಗಳಿಗೆ ಅನಾನುಕೂಲವಾಗಿ ಪೂಜೆಪುನಸ್ಕಾರಗಳು ನಿಂತುಹೋಗುತ್ತವೆ. ಮಳೆಯಿಂದ ಬೆಳೆಗೆ ಹಾನಿಯಾಗುತ್ತದೆ. ಬೆಳೆಹಾನಿಯಿಂದ ಮಳೆ ಹೆಚ್ಚಾಗುತ್ತದೆ. ದಿನಕ್ಕೊಂದು ಕೊಲೆಯಾಗುತ್ತದೆ. ಕಳ್ಳತನ ಜಾಸ್ತಿಯಾಗುತ್ತದೆ. ಸರಕಾರದ ತನಿಖೆ ನಾಟಕವಾಗುತ್ತದೆ. ರಾಜ್ಯ ಆಳುವ ನಾಯಕನಿಗೆ ಅಪಾಯವಿದೆ. ಅವರಿಗೆ ಅನಾರೋಗ್ಯವುಂಟಾಗಿ ಮಾನಸಿಕ ನೆಮ್ಮದಿ ಕಳೆದುಕೊಂಡು ಏನೇನೂ ಮಾತನಾಡುತ್ತಾರೆ, ಇದಕ್ಕೆ ಪರಿಹಾರವಿದೆ. ಈ ಆಷಾಢ ಮಾಸ ಮುಗಿದ ನಂತರ ಮಠಕ್ಕೆ ಒಂದುನೂರು ದೀಪ ಹಚ್ಚಿ ದಾಸೋಹನಡೆಸಿ ಗುರುವರ್ಯರ ಪಾದ ಹಿಡಿದರೆ ಎಲ್ಲವೂ ಸಾಂಗವಾಗಿ, ಅವರು ನಿರಾತಂಕವಾಗಿ ರಾಜ್ಯದಾಳಬಹುದೆಂಬ ಸಂದೇಶ ಹೊgಟಿದೆಯಂತಲ್ಲಾ, ಥೂಥೂ ಥೂತ್ತೆರಿ.


ಇದನ್ನೂ ಓದಿ: ಭೈರಪ್ಪನವರ ಕೃತಿಗಳಿಗೆ ಒಳ್ಳೆ ವಿಮರ್ಶೆ ಬಂದಿಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...