Homeಅಂಕಣಗಳುಮುರುಘಾ ಶರಣರ ಮರುಳು ಮಾತು ನಿಜವೆ?

ಮುರುಘಾ ಶರಣರ ಮರುಳು ಮಾತು ನಿಜವೆ?

- Advertisement -
- Advertisement -

ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವಕ್ಕೆ ಹರಿದು ಬಂದ ಜನಸಾಗರ ನೋಡಿದ ಬಿಜೆಪಿಗಳು ಅದಕ್ಕೆ ಪ್ರತಿಯಾಗಿ ತಾವೂ ಸಾಗರೋಪಾದಿಯಲ್ಲಿ ಜನರನ್ನು ಸೇರಿಸುವ ಬಗ್ಗೆ ಗಾಢ ಚಿಂತನೆಯಲ್ಲಿ ತೊಡಗಿಸಿಕೊಂಡಿದ್ದಾರಂತಲ್ಲಾ. ಸ್ವತಃ ಎಡೂರಪ್ಪನವರೇ ಇಡೀ ದಿನ ಟಿ.ವಿ. ಮುಂದೆ ಕುಳಿತು ಸಿದ್ದರಾಮೋತ್ಸವ ನೋಡಿ, ಏನೂ ಹೇಳಲಾಗದ ಏನೂ ಮಾಡಲಾಗದ ಅಸಹಾಯಕತೆ ಚಡಪಡಿಕೆ ಪ್ರದರ್ಶಿಸಿದರು. ಕಾರಣ ಅವರೀಗ ಮುಖ್ಯಮಂತ್ರಿಯಲ್ಲಿ. ವಿರೋಧಪಕ್ಷದ ನಾಯಕರೂ ಅಲ್ಲ. ತಮ್ಮ ಅಧಿಕಾರಾವಧಿಯ ಮಧ್ಯದಲ್ಲೇ ಅವರನ್ನು ಕೆಳಗಿಳಿಸಲಾಯ್ತು. ಇಳಿಯುವಾಗಲಾದರೂ ಇಂತಹದೊಂದು ಎಡೂರು ಜಾತ್ರೆ ಮಾಡಿಬಿಡಬಹುದಿತ್ತು. ಆ ಜಾತ್ರೆಗೆ ಸರಕಾರದಿಂದ ಭಿಕ್ಷೆ ಪಡೆದ ಹಲವು ಜಗತ್ತಿನ ಜಗದ್ಗುರುಗಳ ಪರಿಷೆಯೇ ನೆರೆಯುತ್ತಿತ್ತು. ಸಹಜವಾಗಿ ಆ ಮಠಗಳ ಭಕ್ತಾದಿಗಳು, ಸರಕಾರಿ ಮತ್ತು ಖಾಸಗಿಯವರ ಸುವಿಹಾರಿ ಬಸ್ಸಿನಲ್ಲಿ ಬಂದಿಳಿಯುತ್ತಿದ್ದರು. ಅವರಿಗೆಲ್ಲಾ ಹೋಳಿಗೆ ಶೀಖರಣೆ ಊಟ ಹಾಕಿಕಳಿಸಬಹುದಿತ್ತು. ಪೀಠ ಹಿಡಿದು ಕುಳಿತಿರುವ ಸಿರಿವಂತ ಸ್ವಾಮಿಗಳು, ತಮ್ಮ ಎಂದಿನ ನಿಷ್ಠುರ ಮಾತುಗಳನ್ನು ಝಳಪಿಸಿ ಎಡೂರಪ್ಪನವರು ಎಂದಿಗೂ ಸ್ಥಾನ ಬಿಟ್ಟುಕೊಡಬಾರದು, ನನ್ನನ್ನಾದರೂ ನೋಡಿ ಅವರು ಧೈರ್ಯ ತುಂಬಿಕೊಳ್ಳಬೇಕೆಂದು ಅಪ್ಪಣೆ ಕೊಡಿಸಿದರೆ, ಇನ್ನ ಮುರುಘಾ ಮಠದವರು ಎಡೂರಪ್ಪನವರು ಎದೆಗುಂದಬಾರದು, ಸುತ್ತ ಮುತ್ತ ಶತ್ರುಗಳಿರುವಾಗ ಧೈರ್ಯದಿಂದ ರಾಜ್ಯವನ್ನಾಳಬೇಕು ಎಂದು ಹೇಳೇ ಹೇಳುತ್ತಿದ್ದರಂತಲ್ಲಾ, ಥೂತ್ತೆರಿ.

****

ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವಕ್ಕೆ ಬಂದಿದ್ದ ರಾಹುಲಗಾಂಧಿಯನ್ನು ಒಂದರ್ಥದಲ್ಲಿ ಹೈಜಾಕ್ ಮಾಡಿದ ಡಿ.ಕೆ. ಶಿವಕುಮಾರ್ ತಾವು ಮುಂದೆ ಮುಖ್ಯಮಂತ್ರಿಯಾಗಲು ಶರಣ ಸಮೂಹದ ಓಟು ಬೇಕಾದ್ದರಿಂದ, ತಂತ್ರಗಾರಿಕೆ ನಡೆಸಿ, ಅದರಂತೆ ಮುರುಘಾ ಶರಣರಿಂದ ರಾಹುಲಗಾಂಧಿಗೆ ಲಿಂಗದೀಕ್ಷೆ ಕೊಡಿಸೇಬಿಟ್ಟರಂತಲ್ಲಾ. ಮುಖ್ಯವಾಗಿ ದಯವೇ ಧರ್ಮದ ಮೂಲವೆಂದು ಒಪ್ಪಿದವರೆಲ್ಲಾ ಬಸವಣ್ಣನ ಅನುಯಾಯಿಗಳಾಗುತ್ತಾರೆ. ಅವರಿಗೆ ಲಿಂಗದೀಕ್ಷೆಯ ಅಗತ್ಯವೇ ಇರುವುದಿಲ್ಲ. ಇಂತಹ ಸೂಕ್ಷ್ಮ ವಿಚಾರ ಮುರುಘಾ ಶರಣರಿಗೆ ಹೊಳೆಯಬೇಕಿತ್ತು. ನಮ್ಮ ಮುರುಘಾ ಶರಣರು ಬೆಂಬಲಿಸಿದ ಎಡೂರಪ್ಪ ಶರಣ. ಬಸವ ತತ್ವಪ್ರತಿಪಾದಕರಾಗಬೇಕಿತ್ತು. ಆದರೇ ಮಾಡಿದ್ದೆಲ್ಲಾ ಪುರೋಹಿತ ಶಾಹಿಗಳು ಹೇಳಿದ ಕೆಲಸವನ್ನು. ಅವರ ನಂತರ ಮುಖ್ಯಮಂತ್ರಿಯಾದ ಸಾದಲಿಂಗಾಯಿತರ ಬಸವರಾಜ ಬೊಮ್ಮಾಯಿ ಮತ್ತೊಬ್ಬ ಶರಣ. ಲಿಂಗಕಟ್ಟಿಗೊಂಡು ಇವರು ಮಾಡಿದ ಆಡಳಿತವೆಲ್ಲಾ ಕೇಶವಕೃಪಾದ ಆಜ್ಞೆಯ ಪರಿಪಾಲನೆ; ಹಿಜಾಬು, ನಮಾಜು, ಮುಸ್ಲಿಂ ವ್ಯಾಪಾರಿಗಳ ನಿರ್ಬಂಧ ಇತ್ಯಾದಿ ಕೇಶವ ಕೃಪದ ಮನೆಹಾಳು ಕೃತ್ಯಗಳ ಜಾರಿ ಮತ್ತು ಸಮರ್ಥನೆ; ಇದ ಒಬ್ಬ ಲಿಂಗದೀಕ್ಷೆಯ ಶರಣನ ಆಡಳಿತದಲ್ಲಿ ಜರುಗಿದ ದುಸ್ವಪ್ನ. ಸಿದ್ದರಾಮಯ್ಯ ಹುಟ್ಟಿನಿಂದ ಶರಣನಲ್ಲ. ಆದರೆ ಮುಖ್ಯಮಂತ್ರಿಯಾಗಿ ಪ್ರಮಾಣ ಮಾಡಿದ್ದು ಬಸವ ಜಯಂತಿಯಂದು. ನಂತರ ಮಾಡಿದ್ದು ಶರಣರ ದಾಸೋಹ ಕಲ್ಪನೆಯ ಅನನಭಾಗ್ಯ ಮುಂತಾದ ಕೆಲಸ. ಹಾಗೆ ನೋಡಿದರೆ, ಲಿಂಗದೀಕ್ಷೆಗೂ ಶರಣ ತತ್ವ ಪ್ರತಿಪಾದನೆಗೂ ತಾಳಮೇಳವೇ ಇಲ್ಲವೆಂಬುದು ಮುರುಘಾ ಶರಣರಿಗೆ ಹೊಳೆಯಬೇಕಿತ್ತಂತಲ್ಲಾ, ಥೂತ್ತೆರಿ.

*****

ಚಿತ್ರದುರ್ಗದ ಮಠಕ್ಕೆ ಬಂದ ರಾಹುಲಗಾಂಧಿಯನ್ನ ಹಿಡಿದುಕೊಂಡ ಮುರುಘಾ ಶರಣರು, ಮೋದಿ ಒಬ್ಬ ಸಮರ್ಥನಾಯಕ, ಸದ್ಯ ನಮ್ಮ ಸುತ್ತಲೂ ಶತ್ರು ರಾಷ್ಟ್ರಗಳಿದ್ದು, ಅವುಗಳಿಂದ ದೇಶವನ್ನ ರಕ್ಷಿಸಬೇಕಾದರೆ ಮೋದಿಯಂತಹ ಸಮರ್ಥ ನಾಯಕ ಬೇಕೆಂದು ರಾಹುಲಗಾಂಧಿಗೇ ಹೇಳಿದರಂತಲ್ಲಾ. ಆಗ ಮುಗ್ದ ಬಾಲಕನಂತೆ ಮುರುಘಾ ಶರಣರ ಮುಖ ನೋಡಿದ ರಾಹುಲಗಾಂಧಿ, ಶರಣರ ಜ್ಞಾನಕ್ಕೆ ಮರುಕ ಪಟ್ಟಿರಬಹುದಲ್ಲವೆ. ಮುಖ್ಯವಾಗಿ ಕಾಮನ್ ಸೆನ್ಸ್ ಏಂಬುದೊಂದು ಮನಸ್ಥಿತಿ ಇದ್ದಿದ್ದರೆ, ಮೋದಿಯ ಸಮರ್ಥ ನಾಯಕತ್ವದ ಅರಿವಾಗಬೇಕಿತ್ತು. ಚೀನಾ ಅತಿಕ್ರಮಿಸಿರುವ ವಿಷಯವನ್ನು ದೇಶದ ಮುಂದೆ ಅವರು ಈವರೆಗೂ ಹೇಳಿಲ್ಲ. ಕೃಷಿ ಕಾಯ್ದೆ ಜಾರಿಮಾಡಿದ್ದಕ್ಕಾಗಿ ಒಂದು ವರ್ಷ ನಡೆದ ರೈತರ ಧರಣಿಯಲ್ಲಿ ಏಳುನೂರ ರೈತರು ಹತರಾದರು. ಆ ಬಗ್ಗೆ ಮೋದಿ ಈವರೆಗೂ ಪ್ರತಿಕ್ರಿಯಿಸಿಲ್ಲ. ಹೀಗಿರುವಾಗ, ಮೋದಿ ಒಬ್ಬ ಸಮರ್ಥ ಪ್ರಧಾನಿ ಎಂಬ ಅಭಿಪ್ರಾಯವನ್ನು ಹೊಂದಿರುವ ಮುರುಘಾ ಶರಣರು ಚಿತ್ರದುರ್ಗದಾಚೆಗೆ ದೇಶದ ಆಗುಹೋಗುಗಳನ್ನು ಕಣ್ಣುತೆರೆದು ನೋಡಿದರೆ ನಿಜದ ಅರಿವಾಗಬಹುದು ಎಂಬ ಅಭಿಪ್ರಾಯ ರಾಹುಲಗಾಂಧಿಗೆ ಹೊಳೆದಿರಬಹುದಂತಲ್ಲಾ, ಥೂತ್ತೆರಿ.

****

ಇನ್ನ ನಮ್ಮೂರ ಕೆರೆ ಕೋಡಿಯಲ್ಲಿ ಕುಳಿತಿರುವ ಕಾಲಜ್ಞಾನಿ ಸ್ವಾಮೀಜಿಗಳು ಎಂದಿನಂತೆ ಮತ್ತೆ ಜನಗಳನ್ನು ಹೆದರಿಸಿದ್ದಾರೆ. ದುರ್ದೈವವೆಂದರೆ ಅವರ ಮಾತುಗಳಿಗೆ ಯಾರೂ ಹೆದರಿದಂತೆ ಕಾಣದೇ ಇರುವುದರಿಂದ ಮತ್ತೆ ಗುಡಾಗಿದ್ದಾರಂತಲ್ಲಾ. ಆ ಗುಡುಗಿನ ಶಬ್ದ ಯಾವುದೆಂದರೆ ಕರ್ನಾಟಕ ಅತಿವೃಷ್ಠಿಯಿಂದ ಕಂಗೆಟ್ಟು ಹೋಗಲಿದೆ, ದಟ್ಟೈಸಿದ ಮೋಡದಿಂದ ಧಾರಾಕಾರ ಮಳೆಯಾಗುತ್ತದೆ. ಈ ಮಳೆ ದೆಸೆಯಿಂದ ಕೆರೆಕಟ್ಟಿ ತುಂಬಿ ಹರಿಯುತ್ತವೆ. ಆದಕಾರಣ ಕೆರೆಗೆ ಬಿಟ್ಟು ಸಾಕುತ್ತಿರುವ ಮೀನುಗಳು ಕೊಚ್ಚಿಕೊಂಡು ಹೋಗಿ ಕಂಡವರ ಪಾಲಾಗುತ್ತವೆ. ಕೆರೆ ಏರಿ ಹೊಡೆಯುತ್ತದೆ. ಮನೆಗಳ ಗೋಡೆ ಕುಸಿಯುತ್ತದೆ. ಗೋಡೆ ಕೆಳಗೆ ಸಿಕ್ಕವರು ಸತ್ತುಹೋಗುತ್ತಾರೆ. ಜಾನುವಾರುಗಳು ನೀರಲ್ಲಿ ತೇಲುತ್ತ ಹೋಗುತ್ತವೆ. ರಸ್ತೆಯ ಬದಿಯ ಮರಗಳು ರಸ್ತೆಗೇ ಉರುಳುತ್ತವೆ. ಸಂಚಾರಕ್ಕೆ ಅಡ್ಡಿಯಾಗುತ್ತದೆ. ದೇವಸ್ಥಾನ ಮಠಗಳಿಗೆ ಹೋಗುವ ಜನಗಳಿಗೆ ಅನಾನುಕೂಲವಾಗಿ ಪೂಜೆಪುನಸ್ಕಾರಗಳು ನಿಂತುಹೋಗುತ್ತವೆ. ಮಳೆಯಿಂದ ಬೆಳೆಗೆ ಹಾನಿಯಾಗುತ್ತದೆ. ಬೆಳೆಹಾನಿಯಿಂದ ಮಳೆ ಹೆಚ್ಚಾಗುತ್ತದೆ. ದಿನಕ್ಕೊಂದು ಕೊಲೆಯಾಗುತ್ತದೆ. ಕಳ್ಳತನ ಜಾಸ್ತಿಯಾಗುತ್ತದೆ. ಸರಕಾರದ ತನಿಖೆ ನಾಟಕವಾಗುತ್ತದೆ. ರಾಜ್ಯ ಆಳುವ ನಾಯಕನಿಗೆ ಅಪಾಯವಿದೆ. ಅವರಿಗೆ ಅನಾರೋಗ್ಯವುಂಟಾಗಿ ಮಾನಸಿಕ ನೆಮ್ಮದಿ ಕಳೆದುಕೊಂಡು ಏನೇನೂ ಮಾತನಾಡುತ್ತಾರೆ, ಇದಕ್ಕೆ ಪರಿಹಾರವಿದೆ. ಈ ಆಷಾಢ ಮಾಸ ಮುಗಿದ ನಂತರ ಮಠಕ್ಕೆ ಒಂದುನೂರು ದೀಪ ಹಚ್ಚಿ ದಾಸೋಹನಡೆಸಿ ಗುರುವರ್ಯರ ಪಾದ ಹಿಡಿದರೆ ಎಲ್ಲವೂ ಸಾಂಗವಾಗಿ, ಅವರು ನಿರಾತಂಕವಾಗಿ ರಾಜ್ಯದಾಳಬಹುದೆಂಬ ಸಂದೇಶ ಹೊgಟಿದೆಯಂತಲ್ಲಾ, ಥೂಥೂ ಥೂತ್ತೆರಿ.


ಇದನ್ನೂ ಓದಿ: ಭೈರಪ್ಪನವರ ಕೃತಿಗಳಿಗೆ ಒಳ್ಳೆ ವಿಮರ್ಶೆ ಬಂದಿಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...