Homeಕರ್ನಾಟಕಬಳ್ಳಾರಿ| ಸಾಮಾಜಿಕ ಮಾಧ್ಯಮದಲ್ಲಿ ಬಂದ ಸುಳ್ಳು ನಂಬಿ ಬಾಲಕನ ಮೃತದೇಹ ಉಪ್ಪಿನಲ್ಲಿ ಮುಚ್ಚಿಟ್ಟ ಗ್ರಾಮಸ್ಥರು

ಬಳ್ಳಾರಿ| ಸಾಮಾಜಿಕ ಮಾಧ್ಯಮದಲ್ಲಿ ಬಂದ ಸುಳ್ಳು ನಂಬಿ ಬಾಲಕನ ಮೃತದೇಹ ಉಪ್ಪಿನಲ್ಲಿ ಮುಚ್ಚಿಟ್ಟ ಗ್ರಾಮಸ್ಥರು

‘ಜನರು ದಿಕ್ಕು ತಪ್ಪಲು ಕಾರಣವಾಯ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದ ಈ ಸುಳ್ಳು ಸಂದೇಶ’

- Advertisement -
- Advertisement -

ಮತ್ತೆ ಜೀವಬರುವುದೆಂದು ಬಾಲಕನೊಬ್ಬನ ಮೃತದೇಹವನ್ನು ಉಪ್ಪಿನಲ್ಲಿ ಮುಚ್ಚಿಟ್ಟಿದ್ದ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಈ ಬಾಲಕನಿಗೆ ಜೀವ ಬರಲಿದೆ ಕುಟುಂಬ ನಂಬಿತ್ತು. ಗ್ರಾಮಸ್ಥರೂ ಇದೇ ಅಭಿಪ್ರಾಯ ಹೊಂದಿದ್ದರು. ಮುಗ್ದ ಜನರು ನಂಬುವಂತೆ ಈ ಮೌಢ್ಯವನ್ನು ಸಾಮಾಜಿಕ ಮಾಧ್ಯಮದ ಮೂಲಕ ಹರಡಲಾಗಿದೆ.

ಬಳ್ಳಾರಿ ತಾಲೂಕಿನ ಸಿರವರ ಗ್ರಾಮದಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದ್ದು, ಸೋಮವಾರ ಬೆಳಕಿಗೆ ಬಂದಿದೆ. ಸುರೇಶ ಸಿರವರ ಎಂಬ 10 ವರ್ಷದ ಬಾಲಕ ಇತ್ತೀಚೆಗೆ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದನು. ಉಪ್ಪಿನ ರಾಶಿಯಲ್ಲಿಟ್ಟರೆ ಮತ್ತೆ ಬದುಕಬಹುದು ಎಂದು ಭಾವಿಸಿದ್ದ ಗ್ರಾಮಸ್ಥರು, ಆತನ ಮೃತ ದೇಹವನ್ನು ಉಪ್ಪಿನಲ್ಲಿ ಮುಚ್ಚಿಟ್ಟಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಉಪ್ಪಿನಲ್ಲಿ ಮೃತದೇಹವನ್ನು ಮುಚ್ಚಿಟ್ಟರೆ, ಜೀವ ಮರಳಿ ಬರುತ್ತದೆಂಬ ಮೌಢ್ಯದ ಸಂದೇಶವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿತ್ತು. ಆ ಸಂದೇಶವನ್ನು ನಂಬಿದ ಬಾಲಕನ ತಂದೆ ಶೇಖರ್ ಮತ್ತು ತಾಯಿ ಗಂಗಮ್ಮ ಹಾಗೂ ಗ್ರಾಮಸ್ಥರು ಮೃತನ ದೇಹವನ್ನು ಎರಡು ಗಂಟೆಗಳ ಕಾಲ ಉಪ್ಪಿನಲ್ಲಿ ಹುದುಗಿಸಿಡಲು ನಿರ್ಧರಿಸಿದ್ದಾರೆ. ಬಳಿಕ, ದೇಹವನ್ನು ನಾಲ್ಕು ಗಂಟೆಗಳ ಕಾಲ ಉಪ್ಪಿನ ಅಡಿಯಲ್ಲಿ ದೇಹವನ್ನು ಇರಿಸಿದ್ದಾರೆ. ಆದರೆ, ಏನೂ ಆಗಲಿಲ್ಲ. ಬಳಿಕ, ಮೃತದೇಹವನ್ನು ಸುಟ್ಟುಹಾಕಿದ್ದಾರೆ.

ಉಪ್ಪಿನಲ್ಲಿ ಇರಿಸಲಾಗಿದ್ದ ಮೃತದೇಹದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅನೇಕ ಗ್ರಾಮಸ್ಥರು ಈ ವಿಷಯವನ್ನು ಚರ್ಚಿಸಿದ್ದಾರೆ.

“ಸಾವಿನ ಎರಡು ಗಂಟೆಗಳೊಳಗೆ ಅವರ ದೇಹವನ್ನು ಉಪ್ಪಿನ ಅಡಿಯಲ್ಲಿ ಇರಿಸಿದರೆ, ನಾವು ವ್ಯಕ್ತಿಯನ್ನು ಮತ್ತೆ ಬದುಕಿಸಬಹುದು ಎಂಬ ಪೋಸ್ಟ್ ಅನ್ನು ನಾವು ಸಾಮಾಜಿಕ ಮಾಧ್ಯಮದಲ್ಲಿ ನೋಡಿದ್ದೆವು. ಇದರ ನಂತರ, ನಾವು ಬಾಲಕ ಸುರೇಶನ ದೇಹದ ಮೇಲೆ 100 ಕೆಜಿಗಿಂತ ಹೆಚ್ಚು ಉಪ್ಪನ್ನು ಹಾಕಿದ್ದೆವು. ಅವನ ಮುಖವನ್ನು ಮಾತ್ರ ಮುಚ್ಚದೆ ಬಿಡಲಾಗಿತ್ತು. ಅದನ್ನು ನಾವು ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಇರಿಸಿದ್ದೆವು. ನಾವು ಅವನನ್ನು ಮತ್ತೆ ಬದುಕಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ನಾವು ಆತನ ದೇಹವನ್ನು ಸುಟ್ಟು ಹಾಕಿದೆವು” ಎಂದು ಸಿರವರ ಗ್ರಾಮದಲ್ಲಿ ವಾಸಿಸುವ ತಿಪ್ಪೇಸ್ವಾಮಿ ಮತ್ತು ಗಣೇಶ್ ಹೇಳಿದ್ದಾರೆ.

ಮೌಢ್ಯ ಬಿತ್ತಿದ ಸಂದೇಶದಲ್ಲಿ ಏನಿದೆ?

ಮೌಢ್ಯವನ್ನು ಬಿತ್ತುವ ರೀತಿಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿರುವ ಪೋಸ್ಟ್ ಹೀಗಿದೆ:

ಅತಿ ಮುಖ್ಯ ಮಾಹಿತಿ: ಯಾರಾದರೂ ನೀರಿನಲ್ಲಿ ಮುಳುಗಿ ಸತ್ತರೆ ಮತ್ತು ಅವರ ದೇಹವು 3-4 ಗಂಟೆಗಳಲ್ಲಿ ಪತ್ತೆಯಾದರೆ, ನಾವು ಅವನ ಜೀವವನ್ನು ಮರಳಿ ತರಲು ಸಾಧ್ಯವಿದೆ. ಯಾರಾದರೂ ಅಂತಹ ಅಪಘಾತವನ್ನು ನೋಡಿದ್ದರೆ ಅಥವಾ ಕೇಳಿದರೆ, ತಕ್ಷಣ ನಮಗೆ ತಿಳಿಸಿ… ಯಾರದ್ದೋ ಜೀವ ಉಳಿಸಬಹುದು. ನಮ್ಮ ಮೊಬೈಲ್‌ ಸಂಖ್ಯೆ ಪ್ರಶಾಂತ್ ತ್ರಿಪಾಠಿ: 919454311111, 919335673001 ಆಗಿದೆ.

ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ತಲುಪಿಸಬೇಕಾಗಿ ನಿಮ್ಮೆಲ್ಲರಲ್ಲಿ ವಿನಮ್ರ ವಿನಂತಿ. ನಾವು ಯಾರೊಬ್ಬರ ಜೀವವನ್ನು ಉಳಿಸಲು ಸಾಧ್ಯವಾದರೆ, ನಮ್ಮ ಜೀವನದಲ್ಲಿ ನಾವು ಯಶಸ್ವಿಯಾಗುತ್ತೇವೆ. ಧನ್ಯವಾದಗಳು.

ಮುಳುಗುವಿಕೆಯಿಂದ ಪ್ರಾಣ ಕಳೆದುಕೊಂಡವರಿಗೆ ಚಿಕಿತ್ಸೆ:

ಒಂದೂವರೆ ಕ್ವಿಂಟಾಲ್ ಉಪ್ಪನ್ನು ಹಾಸಿಗೆಯಂತೆ ಹಾಕಿ, ರೋಗಿಯನ್ನು ಅದರ ಮೇಲೆ ಬಟ್ಟೆಯೊಂದಿಗೆ ಮಲಗಿಸಿ. ಉಪ್ಪು ನಿಧಾನವಾಗಿ ದೇಹದಿಂದ ನೀರನ್ನು ಹೀರಿಕೊಳ್ಳುತ್ತದೆ. ವ್ಯಕ್ತಿಗೆ ನಿಧಾನವಾಗಿ ಪ್ರಜ್ಞೆ ಬರುತ್ತದೆ. ವ್ಯಕ್ತಿಯು ಪ್ರಜ್ಞೆಯನ್ನು ಮರಳಿ ಪಡೆದಾಗ, ಅವನನ್ನು ಆಸ್ಪತ್ರೆಗೆ ಕರೆದೊಯ್ಯಿರಿ. ಇದಕ್ಕೂ ಮುನ್ನ ಆಸ್ಪತ್ರೆಗೆ ಕರೆದೊಯ್ದು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದ ವ್ಯಕ್ತಿಯನ್ನು ಉಪ್ಪಿನ ಚಿಕಿತ್ಸೆ ಮಾಡಿ ಬದುಕಿಸಿದ್ದೇವೆ. ದೇವರ ದಯೆ ಇದ್ದರೆ ಸತ್ತವನೂ ಕೂಡ ಬದುಕುತ್ತಾನೆ. ಪ್ರಯತ್ನ ಮಾಡುವುದರಲ್ಲಿ ತಪ್ಪೇನಿಲ್ಲ.

ವೈದ್ಯರು ಸತ್ತರು ಎಂದು ಘೋಷಿಸಿದ ನಂತರ ಸಂಸ್ಕಾರ ಮಾಡಲು ಆತುರಪಡಬೇಡಿ. ಸಾಧ್ಯವಾದಷ್ಟು ಬೇಗ ಉಪ್ಪಿನ ಚಿಕಿತ್ಸೆ ಮಾಡಿ. ರಾತ್ರಿಯಾದರೂ ಪರವಾಗಿಲ್ಲ. ನಗರಗಳಲ್ಲಿ ಅಂಗಡಿಗಳ ಮುಂದೆ ಉಪ್ಪಿನ ಚೀಲ ಗಳನ್ನು ಇಟ್ಟಿರುತ್ತಾರೆ. ವ್ಯಕ್ತಿಯನ್ನು ಕೂಡಲೇ ಕಾರ್ ಅಥವಾ ಜೀಪಿನಲ್ಲಿ ಅಲ್ಲಿಗೆ ಕರೆದುಕೊಂಡು ಹೋಗಿ, ಉಪ್ಪಿನ ಮೂಟೆಗಳನ್ನು ಬೇಗಬೇಗನೆ ಸುರಿದು ನೀರಿನಲ್ಲಿ ಮುಳುಗಿ ಸತ್ತ ವ್ಯಕ್ತಿಯನ್ನು ಬೇಗನೆ ಉಪ್ಪಿನ ರಾಶಿಯ ಮೇಲೆ ಮಲಗಿಸಿ. ಅಂಗಡಿಯವನ ಗುರುತನ್ನು ಬೆಳಿಗ್ಗೆ ಪತ್ತೆ ಹಚ್ಚಿ ಆತನಿಗೆ ಹಣ ನೀಡಬಹುದು. ಆದರೆ ಪ್ರಾಣ ಉಳಿಸಲು ಸಿಗುವ ಒಂದು ಅವಕಾಶವನ್ನು ಸಹ ಬಿಡಬೇಡಿ.

ಸೂಚನೆ: ಮುಳುಗಿದ ಸಮಯ ಕಡಿಮೆಯಾದಷ್ಟೂ ಬೇಗ ಆ ವ್ಯಕ್ತಿಗೆ ಪ್ರಜ್ಞೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ, ಪ್ರತಿ ಕೆಲಸವನ್ನು ಯುದ್ಧ ಮಟ್ಟದಲ್ಲಿ ಮಾಡಿ. ಕೆಲವರು ಉಪ್ಪು ತರಲು ಮುಂದಾದರೆ, ಫಲಿತಾಂಶವು ಶೀಘ್ರದಲ್ಲೇ ಲಭ್ಯವಾಗುತ್ತದೆ. ದಯವಿಟ್ಟು ಸಂದೇಶವನ್ನು ಫಾರ್ವರ್ಡ್ ಮಾಡಿ, ಯಾರೊಬ್ಬರ ಜೀವವನ್ನು ಉಳಿಸಲು ಇದು ಉಪಯುಕ್ತವಾಗಬಹುದು.

ಇದನ್ನೂ ಓದಿರಿ: ಬೆಂಗಳೂರು ಮಳೆ: ವಿದ್ಯುತ್‌ ಸ್ಪರ್ಶದಿಂದ ಯುವತಿ ಸಾವು; ಕಾಂಗ್ರೆಸ್ ಕಾರಣ ಎಂದ ಬೊಮ್ಮಯಿ

-ಹೀಗೆ ಮೌಢ್ಯವನ್ನು ಬಿತ್ತಲಾಗಿದೆ. ಇದನ್ನು ಅನೇಕರು ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವುದನ್ನು ಕಾಣಬಹುದು. (‘ನಾನುಗೌರಿ.ಕಾಂ’ ಇಲ್ಲಿನ ನಂಬರ್‌ಗಳಿಗೆ ಕರೆ ಮಾಡಿದಾಗ ಬ್ಯುಸಿ ಬಂದಿದೆ ಹಾಗೂ ಒಂದು ನಂಬರ್‌ ಸ್ವಿಚ್ ಆಫ್ ಆಗಿದೆ. ಯಾರೂ ಕೂಡ ಈ ನಂಬರ್‌ಗಳಿಗೆ ಕರೆ ಮಾಡಬಾರದೆಂದು ವಿನಂತಿಸುತ್ತೇವೆ. ಇದು ಸುಳ್ಳು ಸಂದೇಶವೆಂದು ಕನ್ನಡದ ಫ್ಯಾಕ್ಟ್‌ಚೆಕ್ ಜಾಲತಾಣ ‘ಏನ್‌ಸುದ್ದಿ.ಕಾಂ’ ವರದಿ ಮಾಡಿತ್ತು. ವರದಿಯನ್ನು ‘ಇಲ್ಲಿ’ ಓದಬಹುದು.)

No photo description available.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...