Homeಮುಖಪುಟದಕ್ಲಕಥಾ ದೇವಿ ಕಾವ್ಯ: ಭಾರತವನ್ನುಳಿಸುವ ದಲಿತರ ಐಕ್ಯ ನಡಿಗೆ

ದಕ್ಲಕಥಾ ದೇವಿ ಕಾವ್ಯ: ಭಾರತವನ್ನುಳಿಸುವ ದಲಿತರ ಐಕ್ಯ ನಡಿಗೆ

- Advertisement -
- Advertisement -

ಕನ್ನಡದ ಬಕಾಲ ಮುನಿ ಎಂದೇ ಹೆಸರಾದ ಕೆ.ಬಿ.ಸಿದ್ದಯ್ಯನವರ ’ದಕ್ಲಕಥಾ ದೇವಿ ಕಾವ್ಯ’ ಈಗ ರಂಗಭೂಮಿಯಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ತಳ ಸಮುದಾಯಗಳ ಯುವಜನರೇ ಸೇರಿ ಕಟ್ಟಿರುವ ’ಜಂಗಮ ಕಲೆಕ್ಟಿವ್’ ತಂಡ ಈ ಮಹತ್ತರ ರಂಗಸಾಧ್ಯತೆಯನ್ನು ಆಗುಮಾಡಿದೆ. ನೀನಾಸಂ ಅಲ್ಲಿ ಕಲಿತು ಸಿಂಗಾಪುರದಲ್ಲಿ ಹೆಚ್ಚಿನ ರಂಗಾಧ್ಯಯನ ಮಾಡಿ ಬಂದ ಕನ್ನಡದ ಇವತ್ತಿನ ಸೂಕ್ಷ್ಮ ರಂಗ ನಿರ್ದೇಶಕ ಕೆ.ಪಿ.ಲಕ್ಷ್ಮಣ್ ’ದಕ್ಲಕಥಾ ದೇವಿ ಕಾವ್ಯ’ವನ್ನು ನಾಟಕವಾಗಿಸಿದ್ದಾರೆ.

ಎಲ್ಲಾ ಜಾನಪದ ಕಾವ್ಯಗಳೂ ಅತ್ಯದ್ಭುತವಾದ ರಂಗ ಸಾಧ್ಯತೆಯನ್ನು ಹೊಂದಿರುವಂಥವು. ಅದರಲ್ಲೂ ಪದಕಟ್ಟುವಿಕೆಯಲ್ಲೇ ತಾಳಪ್ರಜ್ಞೆಯನ್ನು ಅಂತರ್ಗತವಾಗಿ ಒಳಗೊಂಡಿರುವ ಸಿದ್ದಯ್ಯನವರ ಬಕಾಲ, ದಕ್ಲಕಥಾ ದೇವಿಯಂತಹ ಕಾವ್ಯಗಳನ್ನು ನಾಟಕ ಮಾಡುವುದೆಂದರೆ, ಅದನ್ನು ಆಗುಮಾಡುವವರಿಗೆ ಕಾವ್ಯದ ಆಳಕ್ಕಿಳಿದು ರೂಪಕಗಳನ್ನು ಕಟ್ಟಿಕೊಳ್ಳುವ ಅಂತಃಶಕ್ತಿ ಬೇಕು. ಇದರ ಜೊತೆಗೆ ತಳ ಸಮುದಾಯಗಳ ಚಲನಶೀಲತೆ, ಸಾಂಸ್ಕೃತಿಕ ಎಚ್ಚರ, ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ಅರಿವು ಮತ್ತು ಇವೆಲ್ಲವುಗಳನ್ನು ನಟರ ನೆರವಿನಿಂದ ರಂಗದ ಮೇಲೆ ತರಬಲ್ಲ ಕಸುವು ಇರಬೇಕು. ಲಕ್ಷ್ಮಣ್ ಈ ಕಸುವನ್ನು ’ದಕ್ಲಕಥಾ ದೇವಿ ಕಾವ್ಯ’ದ ಮೂಲಕ ಕನ್ನಡಿಗರ ಗಮನಕ್ಕೆ ತಂದಿದ್ದಾರೆ.

ಕೆ.ಬಿ.ಸಿದ್ದಯ್ಯ

ಕೆ.ಬಿ.ಸಿದ್ದಯ್ಯನವರ ಮಾತುಗಳ ಮೂಲಕ ಶುರುವಾಗುವ ನಾಟಕ ತಮಟೆ ನುಡಿಸುತ್ತಾ ನೆಲದ ಮೇಲೆ ಬಿದ್ದ ನೋಟನ್ನು ಕಣ್ಣರೆಪ್ಪೆಯಲ್ಲಿ ಎತ್ತಿಕೊಳ್ಳುವ ಪಾತ್ರಧಾರಿಯನ್ನು ಸ್ಪಟಿಕದ ಚೂರುಗಳ ಹಾಗೆ ಒಡೆಯುತ್ತಾ ಸಾಗುತ್ತದೆ. ಹಾಗೆ ಒಡೆದ ಪ್ರತಿಚೂರಿನಲ್ಲೂ ದಲಿತ ಬದುಕಿನ ಬಣ್ಣಗಳು ಪ್ರತಿಫಲಿಸುತ್ತದೆ. ದಕ್ಲಕಥಾ ದೇವಿಯ ಮಾತಿನ ಮಾಯಕಕ್ಕೆ ಇಡೀ ರಂಗಮಂಟಪ ನಾಲಿಗೆಯೊಣಗಿದ ಹಸುಗೂಸಿನ ಒಣ ತುಟಿಗಳ ಹಾಗೆ ನಿಧಾನಕ್ಕೆ ಪಸೆಯಾಡಲು ಶುರುವಿಟ್ಟುಕೊಳ್ಳುತ್ತದೆ. ನಾಟಕ ಘಟಿಸುತ್ತಾ ಘಟಿಸುತ್ತಾ ಪಾತ್ರಗಳೊಳಗೆ ಪಾತ್ರಗಳು ಒಡಮೂಡುತ್ತಾ ಸಮುದಾಯದೊಳಗಿನ ಸಮುದಾಯಗಳನ್ನು ಕಾಣಿಸುವ ಮಾಂತ್ರಿಕತೆ ತೆರೆದುಕೊಳ್ಳುತ್ತದೆ.

ಮಾದಿಗ ಸಮುದಾಯದ ಮಕ್ಕಳೆಂದೇ ನಂಬಿರುವ ದಕ್ಕಲರ ಕುಲಪುರಾಣವನ್ನು ನಿರೂಪಿಸುತ್ತಾ ಸಿದ್ದಯ್ಯನವರು ಮಾದಿಗ ಸಮುದಾಯದ ಕಾರುಣ್ಯದ ಹಾದಿಯನ್ನು ಬಿಚ್ಚಿಡುತ್ತಾರೆ. ಊರ ಹೊರಗೆ ನಿಂತು ಮಾದಿಗರ ಕೇರಿಯಲ್ಲಿ ಮಾತ್ರವೇ ಅನ್ನ ಬೇಡುವ ದಕ್ಕಲರು ಕಣ್ಣಿಗೆ ಕಾಣದಷ್ಟು ಸಣ್ಣ ಸಮುದಾಯವಾದರೂ ತಮ್ಮೊಳಗೆ ಇಡೀ ಜಗತ್ತಿಗೆ ಆಗುವಂಥಾ ಬೃಹತ್ತಾದ ಸಾಂಸ್ಕೃತಿಕ ಸಂಪತ್ತನ್ನು ಇರಿಸಿಕೊಂಡಿದ್ದಾರೆ. ಈ ಸಾಂಸ್ಕೃತಿಕ ಸಂಪತ್ತು ’ದಕ್ಲಕಥಾ ದೇವಿ ಕಾವ್ಯ’ ನಾಟಕದ ಮೂಲಕ ಕನ್ನಡನಾಡಿನ ಸೀಳುರೋಗಕ್ಕೆ ಔಷಧಿಯಾಗಿ ಒದಗಿಬಂದಿದೆ. ಮಾದಿಗ ಸಮುದಾಯದ ಚಿಕ್ಕ ಕುಟುಂಬವೊಂದು ದಕ್ಕಲ ದೇವಿಯ ಕಥೆಯನ್ನು ಹೇಳುತ್ತಾ ಊರೂರು ಅಲೆದು ಬದುಕು ನಡೆಸುವ ಮತ್ತು ಕುಲಗಳನ್ನು ಕೂಡಿಸುತ್ತಾ ಸಾಗುವ ವಿಭಿನ್ನ ರಂಗತಂತ್ರವನ್ನು ನಿರ್ದೇಶಕರು ಕಟ್ಟಿಕೊಂಡಿದ್ದಾರೆ.

ಇದನ್ನೂ ಓದಿ: ತಂದೆ ಮತ್ತು ಮೂವರು ಹೆಣ್ಣುಮಕ್ಕಳು; ದ್ವೇಷದ ರಂಗಭೂಮಿಯಲ್ಲಿ ಒಂದು ಹಳೆಯ ಕಥೆ

ಕರ್ನಾಟಕದಲ್ಲಿ ಅದರಲ್ಲೂ ಬಯಲ ಸೀಮೆಯಲ್ಲಿ ಹೊಲೆಯ ಮಾದಿಗರ ಸಾಂಸ್ಕೃತಿಕ ಚಹರೆಗಳಾದ ತಮಟೆ ಮತ್ತು ಅರೆವಾದ್ಯಗಳನ್ನು ಇಡೀ ನಾಟಕದಲ್ಲಿ ಸೂಜಿ ದಾರದ ಹಾಗೆ ಬಳಸಲಾಗಿದೆ. ದಕ್ಕಲದೇವನು ತನ್ನ ಎಡಭುಜದ ಮೇಲೆ ತಮಟೆಯನ್ನೂ, ಬಲಭುಜದ ಮೇಲೆ ಅರೆಯನ್ನೂ ಹೊತ್ತುಕೊಂಡು ಅವುಗಳನ್ನು ನುಡಿಸುವ ತನ್ನಿಬ್ಬರು ಮಕ್ಕಳನ್ನು ಜೊತೆಗೂಡಿಸಿಕೊಂಡು ಲೋಕಸಂಚಾರ ಹೊರಡುತ್ತಾನೆ. ಇಡೀ ರಂಗಭೂಮಿಯನ್ನೇ ನಾವು ಲೋಕದ ವಿಸ್ತಾರವೆಂದು ಭಾವಿಸಿದರೆ, ಆ ರಂಗದ ಒಂದು ಮೂಲೆಯಲ್ಲಿ ಕೂತ ದಕ್ಕಲದೇವಿ ಇಡೀ ಲೋಕವನ್ನೇ ಆವರಿಸಿಕೊಳ್ಳುತ್ತಾಳೆ ಮತ್ತು ತನ್ನ ಗಂಡ, ಮಕ್ಕಳ ಯಾತ್ರೆ ಅವಳ ಅರಿವಿಗೆ ಬರುತ್ತಲೇ ಇರುತ್ತದೆ. ಈ ವಿಶಿಷ್ಟ ರಂಗತಂತ್ರವನ್ನು ನಿರ್ದೇಶಕರು ದಲಿತ ಸಮುದಾಯದ ಎಡ ಬಲ ಬಣಗಳ ನಡುವಿನ ವಿದ್ಯಮಾನಗಳನ್ನು ಗಮನಿಸುವ ಬಾಬಾಸಾಹೇಬರ ಕಣ್ಣುಗಳಂತೆ ಸೃಷ್ಟಿಸಿದ್ದಾರೆ. ಇದನ್ನು ಹೊಸ ಕಾಲದ ಹೊಸ ಪ್ರಜ್ಞೆಯ ಲಕ್ಷ್ಮಣ್ ಅಂತಹ ನಿರ್ದೇಶಕರು ಮಾತ್ರ ಮಾಡಲು ಸಾಧ್ಯ.

ದಲಿತರ ನೋವುಗಳನ್ನಷ್ಟೇ ಕಲಾತ್ಮಕ ಮಂಡನೆ ಮಾಡುವ ಮೂಲಕ ಕಟ್ಟಲು ಯತ್ನಿಸಿ ಸೋಲುತ್ತಿದ್ದವರ ಎದುರಿಗೆ ಲಕ್ಷ್ಮಣ್ ಗೆದ್ದಿದ್ದಾರೆ. ಅಥವಾ ಹೊಸ ಸಾಧ್ಯತೆಯನ್ನು ತೆರೆದಿಟ್ಟಿದ್ದಾರೆ. ಊರ ಹಬ್ಬಗಳಲ್ಲಿ ಗ್ರಾಮದೇವತೆಗೆಂದು ಬೆಳಗಿನ ಜಾವ ಕಡಿದ ಕೋಣದ ರಕ್ತದಲ್ಲಿ ಅನ್ನವನ್ನು ಕಲೆಸಿ ಊರಿನ ಸುತ್ತಲಿನ ಹೊಲಗಳಿಗೆ ಚೆಲ್ಲುವ ’ರಿಚ್ಯುವಲ್ ಈ ನಾಟಕದ ಕೇಂದ್ರಬಿಂದು.

ಕೆ.ಪಿ.ಲಕ್ಷ್ಮಣ್

ಇದರೊಟ್ಟಿಗೆ ದಕ್ಕಲ ಮಕ್ಕಳು ಊರಬೀದಿಯ ಅಂಚಿನಲ್ಲಿ ಮಾದಿಗರಿಂದ ಸಂಗ್ರಹಿಸುವ ಅನ್ನದ ಮಡಿಕೆಗಳನ್ನು ಒಡೆದು ಅನ್ನವನ್ನು ತಲೆಯ ಮೇಲೆ ಹೊತ್ತೊಯ್ಯುವ ರಿಚ್ಯುವಲ್ ಅನ್ನೂ ಕೂಡಿಸಲಾಗಿದೆ. ನಾಟಕ ಎಲ್ಲವನ್ನೂ ಅಭಿನಯಿಸುತ್ತಾ ಕೊನೆಯ ಘಟ್ಟಕ್ಕೆ ಬರುವಷ್ಟರಲ್ಲಿ ಭಾರತೀಯರು ಅವುಡುಗಚ್ಚಿ ಸಹಿಸಿಕೊಳ್ಳಬೇಕಾದ, ಆ ಮೂಲಕ ತಳ ಸಮುದಾಯಗಳ ನಡಿಗೆಗೆ ಹೆಜ್ಜೆ ಹೊಂದಿಸಬೇಕಾದ ಸಮಯ ಬಂದೇಬಿಡುತ್ತದೆ.

ಆ ಘಟ್ಟದಲ್ಲಿ ದಕ್ಲಕಥಾ ದೇವಿ ಭಾರತಮಾತೆಯಾಗಿಬಿಡುತ್ತಾಳೆ. ಈ ದೃಶ್ಯ ಚಮತ್ಕಾರ ನಡೆಯುವ ಮೊದಲು ಭಾರತೀಯ ಗಂಡಸರು ಮೈಗೂಡಿಸಿಕೊಳ್ಳಲೇಬೇಕಾದ ಹೆಣ್ತನದ ಮಾದರಿಯೊಂದು ನಮ್ಮೆದುರು ಬಿಚ್ಚಿಕೊಳ್ಳುತ್ತದೆ. ಗಂಡನ್ನು ಹೆಣ್ಣಾಗಿಸಿ, ಅವನ ’ಪುರುಷಾಹಂಕಾರವನ್ನು’ ಲಯಗೊಳಿಸಿ ಹೆಣ್ಣ ಕಣ್ಣನ್ನು ಮುಡಿಯುವ ಅದ್ಭುತ ಕಾವ್ಯದಂತೆ ಆ ದೃಶ್ಯ ಮೂಡಿಬಂದಿದೆ.

ಇದನ್ನೂ ಓದಿ: ಡಿಜಿಟಲ್ ವೇದಿಕೆಗಳಲ್ಲಿ ಸೊರಗಿದ ರಂಗಭೂಮಿ; ಆಪ್ತತೆಯ ಸಂವಾದ ಮರುಕಳಿಸಲಿ

ಇನ್ನು ಲಕ್ಷ್ಮಣ್ ಅವರ ಈ ಸಾಹಸಕ್ಕೆ ಕೈಜೋಡಿಸಿರುವ ನಟರು ಇತ್ತೀಚೆಗೆ ಕನ್ನಡ ರಂಗಭೂಮಿಯಲ್ಲಿ ನಾನು ನೋಡಿದ ಅತ್ಯದ್ಭುತ ಕಲಾವಿದರು. ದಕ್ಕಲದೇವನ ಪಾತ್ರ ಮಾಡುತ್ತಾ ಬೆರಗು ಹುಟ್ಟಿಸುವ ಸಂತೋಷ್ ದಿಂಡ್ಲೂರು, ದಕ್ಕಲದೇವಿ ಪಾತ್ರದ ಮೂಲಕ ನೆಲದವ್ವನೇ ಎದ್ದು ಬಂದಂತೆ ನಟಿಸುವ ಬಿಂದು ರಕ್ಷಿದಿ, ತಮಟೆ ಬಡಿಯುತ್ತಾ ಕಣ್ಣ ರೆಪ್ಪೆಯಲ್ಲಿ ನೋಟು ಎತ್ತುವ ಡಿಂಗ್ರಿ ಭರತ್, ಅರೆವಾದ್ಯದ ಮೂಲಕ ಮಾಂತ್ರಿಕ ಲೋಕವನ್ನೇ ಸೃಷ್ಟಿಸುವ ನರಸಿಂಹರಾಜು, ಗಂಗಮ್ಮನಾಗಿ ಧುಮ್ಮಿಕ್ಕುವ ರಮಿಕಾ ಚೈತ್ರ- ಈ ಎಲ್ಲರೂ ಅದ್ಬುತ ನಟರು. ಎಲ್ಲರೂ ನುರಿತ ಹಾಡುಗಾರರಾಗಿರುವುದು ಈ ನಾಟಕದ ಇನ್ನೊಂದು ಶಕ್ತಿ. ಇವರೆಲ್ಲರೊಂದಿಗೆ ಬೆಳಕಿನ ಮಂಜು ನಾರಾಯಣ್, ಡ್ರಾಮಟರ್ಜಿಯ ಮೋಹಿತ್, ವಸ್ತ್ರವಿನ್ಯಾಸದ ಶ್ವೇತಾರಾಣಿ, ನಿರ್ದೇಶನದಲ್ಲಿ ಸಹಾಯ ಮಾಡಿದ ಸ್ಕಂದ, ಶ್ರೀಹರ್ಷ ಮತ್ತು ಪೂರ್ವಿ ಕಲ್ಯಾಣಿ ಇವರೆಲ್ಲರೂ ಸೇರಿಕೊಂಡು ಕನ್ನಡ ರಂಗಭೂಮಿಗೆ ದಾರಿದೀಪವಾಗಬಲ್ಲ ನಾಟಕವೊಂದನ್ನು ಕೊಟ್ಟಿದ್ದಾರೆ.

ಭಾರತವನ್ನು ಮೇಲೆತ್ತುವ ಜವಾಬ್ದಾರಿಯನ್ನು ಹೊಂದಿರುವ ದಲಿತ ಸಮುದಾಯ ಒಟ್ಟಾಗಿ ಸಾಗಬೇಕಾದ ಬಾಬಾ ಸಾಹೇಬರ ಕನಸು ಕನ್ನಡದ ಕೆ.ಬಿ. ಸಿದ್ದಯ್ಯನವರ ಕಣ್ಣುಗಳಲ್ಲಿ ದೀಪವಾಗಿ ಉರಿಯುತ್ತಾ ತಲೆಮಾರುಗಳಿಗೆ ದಾರಿಯಾಗುತ್ತಿರುವುದನ್ನು ನೋಡಲು ನಾವು ’ದಕ್ಲಕಥಾ ದೇವಿ ಕಾವ್ಯ’ ನಾಟಕವನ್ನು ನೋಡಬೇಕು.

(’ದಕ್ಲಕಥಾ ದೇವಿ ಕಾವ್ಯ’ ನಾಟಕದ ಮುಂದಿನ ಪ್ರದರ್ಶನ ನವೆಂಬರ್ 19, 2022 ಶನಿವಾರ ಸಂಜೆ 6:00 ಗಂಟೆಗೆ ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಆಯೋಜಿತವಾಗಿದೆ)

ಹುಲಿಕುಂಟೆ ಮೂರ್ತಿ

ಹುಲಿಕುಂಟೆ ಮೂರ್ತಿ
ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆಯ ಮೂರ್ತಿ, ಕನ್ನಡ ಅಧ್ಯಾಪಕರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂಎ ಮಾಡುವ ಮುಂಚಿನಿಂದಲೂ ಸಾಮಾಜಿಕ ಚಳವಳಿಗಳಲ್ಲಿ ಕ್ರಿಯಾಶೀಲರು. ‘ನೀಲಿ ಗ್ಯಾನ’ ಕವನ ಸಂಕಲನಕ್ಕೂ ಮುಂಚೆಯೇ ಕವಿಯಾಗಿ ಗುರುತು ಪಡೆದುಕೊಂಡಿದ್ದರು. ಕೌದಿ ಚಿತ್ರದ ಗೀತರಚನೆಗಾಗಿ ರಾಜ್ಯಪ್ರಶಸ್ತಿ ಪಡೆದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...