Homeಅಂಕಣಗಳುಕೆಂಪೇಗೌಡರ ಪ್ರತಿಮೆಯನ್ನು ಸರಿಯಾಗಿ ನೋಡಿದ್ದೀರ?

ಕೆಂಪೇಗೌಡರ ಪ್ರತಿಮೆಯನ್ನು ಸರಿಯಾಗಿ ನೋಡಿದ್ದೀರ?

- Advertisement -
- Advertisement -

ಬಿಜೆಪಿಯವರಿಂದ ನಿರ್ಮಿಸಿಕೊಂಡು ಅನಾವರಣಗೊಂಡ ಕೆಂಪೇಗೌಡರ ಪ್ರತಿಮೆಯನ್ನ ನೋಡಿದ್ದೀರಾ? ನೋಡದಿದ್ದರೆ ಸರಿಯಾಗಿ ನೋಡಿ, ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯವೇ ಮೆಚ್ಚಿದ ಪಾಳೇಗಾರ. ಪಾಳೇಗಾರ ಪರಾಕ್ರಮಿಯಾಗಿ ಮೆರೆಯುತ್ತಿದ್ದ ಕಾಲ ಅದು. ಆದರೆ ನಮ್ಮ ಬಿಜೆಪಿಗಳು ಕೆತ್ತಿಸಿ ನಿಲ್ಲಿಸಿರುವ ಕೆಂಪೇಗೌಡರು ಹಿಡಿದ ಕತ್ತಿ ಮತ್ತು ಮುಖಭಾವಕ್ಕೆ ಒಂದಿಷ್ಟು ಹೋಲಿಕೆಯಿಲ್ಲವಂತಲ್ಲಾ. ಅತ್ತ ಶಿವಗಂಗೆಯಲ್ಲಿರುವ ಕೆಂಪೇಗೌಡರ ಸಾತ್ವಿಕತೆಯೂ ಅದರಲ್ಲಿ ಇಲ್ಲವಂತಲ್ಲಾ. ಬೇಲಿ ಸವರಲು ಕತ್ತಿ ಹಿಡಿದಂತೆ ಕಾಣುವ ಕೆಂಪೇಗೌಡರ ಪ್ರತಿಮೆ ಕಡಿದ ಶಿಲ್ಪಿಗೆ ಕೆಂಪೇಗೌಡರ ತಲೆ ಅಷ್ಟುಗಾತ್ರವಿದ್ದ ಮೇಲೆ ಎದೆಭಾಗ ಎಷ್ಟಿರಬೇಕೆಂಬುದೇ ಗೊತ್ತಿಲ್ಲ ಅಂತ ಕಾಣಿಸುತ್ತೆ. ಪ್ರತಿಮೆಯಲ್ಲಿ ತೊಡಿಸಿರುವ ಬಟ್ಟೆಯಂತೂ ಕೆಂಪೇಗೌಡರ ಕಾಲವನ್ನು ಪ್ರತಿನಿಧಿಸುತ್ತಿಲ್ಲ. ಈಗಲೂ ಕಾಲ ಮಿಂಚಿಲ್ಲ ಕೆಂಪೇಗೌಡರ ಪ್ರತಿಮೆಯನ್ನ ಅನಾವರಣಗೊಳಿಸಲು ಆಹ್ವಾನವಿಲ್ಲದೆ ಅವಮಾನಗೊಂಡವರೆಲ್ಲಾ ಸೇರಿ ಒಳ್ಳೆ ಪ್ರತಿಮೆ ಮಾಡಿಸಿ ನಿಲ್ಲಿಸಬಹುದಂತಲ್ಲಾ, ಥೂತ್ತೇರಿ.

*****

ಬಿಜೆಪಿಗಳು ಯಾವ ಕೆಲಸ ಮಾಡಿದರೂ ಅಲ್ಲೊಂದು ಸಂಚು ಮತ್ತು ಸೇಡು ಇದೇ ಇರುತ್ತದೆ. ಅಶೋಕ ಮತ್ತು ಅಶ್ವತ್ಥ ನಾರಾಯಣರ ಜೊತೆಗೆ ನಿರ್ಮಲಾನಂದ ಸ್ವಾಮಿ ಇದ್ದರೆ ಸಾಕು, ಇಡೀ ಒಕ್ಕಲಿಗ ಸಮಾಜ ಬಿಜೆಪಿ ದೊಡ್ಡಿಗೆ ಬಂದು ತುಂಬಿಕೊಳ್ಳುತ್ತದೆ ಅಂದುಕೊಂಡಿದ್ದಾರೆ. ಹೀಗೆ ಭಾವಿಸಿರುವ ಅಶ್ವತ್ತಶೋಕರು ಆದಿಚುಂಚನಗಿರಿ ಸ್ವಾಮಿಗೆ ನಮ್ಮಷ್ಟು ಹತ್ತಿರ ಯಾರೂ ಇಲ್ಲ ಎಂಬ ಸಲುಗೆ ತೋರಲು ಅವರ ಭುಜ ಹಿಡಿದು ಪೋಜು ಕೊಟ್ಟಿವೆಯಲ್ಲಾ. ಜಗದ್ಗುರುವಿನ ಭುಜವನ್ನ ಸಲುಗೆಯಿಂದ ಮುಟ್ಟಿರುವ ಕಾರಣಕ್ಕೆ ದೂರು ದಾಖಲಿಸಿ ಕೇಸುಮಾಡಲು ಒಕ್ಕಲಿಗ ಲಾಯರು ತಯಾರಾಗಿದ್ದರಂತಲ್ಲಾ. ಆದರೆ ಭುಜವನ್ನ ಮುಟ್ಟಿಸಿಕೊಂಡ ಜಗದ್ಗುರುವೇ ಮೋಹಕವಾಗಿ ನಗುತ್ತ ಹಾಗೆ ಭುಜ ಮುಟ್ಟಲು ನಾನೇ ಹೇಳಿದೆ ಎಂದರೆ ಮಾಡುವುದೇನು ಎಂದು ಸುಮ್ಮನಾದರಂತಲ್ಲಾ. ಅದೇನಾದರಾಗಲಿ ಕೃಷಿಕ ಸಮಾಜದ ಸಿದ್ಧಾಂತಗಳನ್ನ ಕೈಬಿಟ್ಟು ವೈದಿಕ ಪರಂಪರೆ ಕಡೆ ಸಾಗುತ್ತಿರುವ ಚುಂಚನಗಿರಿ ಮಠವನ್ನ ಆ ಭೈರವೇಶ್ವರನೇ ಬಚಾವು ಮಾಡಬೇಕಂತಲ್ಲಾ, ಥೂತ್ತೇರಿ.

*****

ಇದನ್ನೂ ಓದಿ: ರಂಜಿಸಿ ವಂಚಿಸುವ ಕಾಂತಾರ

ಇತ್ತ ಹೊನ್ನಾಳಿ ಕಡೆಯಿಂದ ಬಂದ ಸುದ್ದಿ ಶಾನೆ ಶಾಕಿಂಗಾಗಿದೆಯಲ್ಲಾ. ನನ್ನ ಸೋದರನ ಮಗನದ್ದು ಗ್ಯಾರಂಟಿ ಕೊಲೆ, ಅದನ್ನ ಪತ್ತೆ ಹಚ್ಚಲಾಗದ ನೀವು ಎಂತಹ ಪೊಲೀಸರು ಎಂದು ಸಾರ್ವಜನಿಕವಾಗಿ ಅವಾಜುಹಾಕಿ ಅವಮಾನ ಮಾಡಿದ ರೇಣುಕಾಚಾರಿ ಇದ್ದಕ್ಕಿದ್ದಂತೆ ಬಾಯಿ ಬಂದ್ ಮಾಡಿಕೊಂಡು, ಇದ್ದಾರೂ ಇಲ್ಲವೋ ಅನ್ನುವಂತಾಗಿದ್ದಾರಲ್ಲಾ. ಹೊನ್ನಾಳಿ ಚಂದ್ರಶೇಖರರ ಸಾವು ಸಂಭವಿಸುವ ಮುನ್ನ ಆತ ಗೌರಿಗದ್ದೆ ಕಡೆಯಿಂದ ಬರಲು ಕಾರಣವೇನು ಎಂದು ಹುಡುಕಿಹೋದ ಪೊಲೀಸರಿಗೆ ಗೌರಿಗದ್ದೆಯಲ್ಲಿ ವಾಸಿಸುವ ’ಅವಧೂತ’ನ ಚರಿತ್ರೆ ಶಾನೆ ಕುತೂಹಲ ಮೂಡಿಸಿದೆಯಂತಲ್ಲಾ. ಈ ಮಠಗಳ ಕರ್ಮಕಾಂಡ ಶುರುವಾದದ್ದು ರಾಮಚಂದ್ರಾಪುರದ ಮಠದ ಕಡೆಯಿಂದ. ಆ ನಂತರ ಉಡುಪಿ ಮಠಗಳು. ಅಲ್ಲೂಬ್ಬ ಸ್ವಾಮಿ ಆತ್ಮಹತ್ಯೆ ಮಾಡಿಕೊಂಡ. ಈಚೆಗೆ ಮುರುಘ ಶರಣರ ಸ್ಥಿತಿ ನೋಡಿದ ಇಬ್ಬರು ಲಿಂಗೈಕ್ಯರಾದರು. ಇನ್ನು ದಿನದಿಂದ ದಿನಕ್ಕೆ ಮುರುಘ ಶರಣರ ದೌರ್ಜನ್ಯಗಳು ಬಿಚ್ಚಿಕೊಳ್ಳುತ್ತಿದ್ದಂತೆ ಗೌರಿಗದ್ದೆ ಬಾಲಕನ ವಿರುದ್ಧವೂ ಅನುಮಾನ ಆರೋಪಗಳು ಏಳುತ್ತಿವೆ. ಇದರ ಅಪಾಯವರಿತ ಜವಬ್ದಾರಿವಂತರು ಇಂಥ ಮಠಗಳ ಕಡೆಗೆ ಮಹಿಳೆ-ಮಕ್ಕಳು-ಹುಡುಗರನ್ನು ಕಳಿಸಬೇಡಿ ಎಂಬ ಎಚ್ಚರಿಕೆ ಫಲಕಗಳನ್ನ ಬರೆಯುತ್ತಿದ್ದಾರಂತಲ್ಲಾ, ಥೂತ್ತೇರಿ.

*****

ಹೇಗಾದರೂ ಮಾಡಿ ಟಿಪ್ಪು ಸುಲ್ತಾನನನ್ನು ಕನ್ನಡ ದ್ರೋಹಿ ಮಾಡಲು ಹೆಣಗುತ್ತಿರುವವರ ಜೊತೆಗೆ ಈಗ ಎಸ್ಸೆಲ್ ಭೈರಪ್ಪ ಕೂಡ ಸೇರಿದ್ದಾರಲ್ಲಾ. ಟಿಪ್ಪು ಕನ್ನಡ ದ್ರೋಹಿಯಾಗಿದ್ದ ಎಂಬುದಕ್ಕೆ ಭೈರಪ್ಪ ಕೊಡುವ ಕಾರಣ ಆತ ಕಂದಾಯ ಇಲಾಖೆಯಲ್ಲಿ ಪರ್ಶಿಯನ್, ಪಾರ್ಸಿ ಹೆಸರುಗಳನ್ನ ಸೇರಿಸಲಾಗಿದೆ ಎಂಬುದಾಗಿದೆ. ಇಂಗ್ಲಿಷ್ ವಿರೋಧಿಯಾಗಿದ್ದ ಟಿಪ್ಪು ಪರ್ಶಿಯನ್ ಭಾಷೆ ಸೇರಿಸಿದ್ದು ಸಹಜ ಕ್ರಿಯೆಯಾಗಿತ್ತು. ಆದರೆ ಶ್ಯಾನುಭೋಗರ ಮನೆಯವರಾದ ಭೈರಪ್ಪ ಇತಿಹಾಸ ಕೆದಕಿದರೆ, ಟಿಪ್ಪು ಕಾಲದಲ್ಲಿ ಇಡೀ ನಾಡಿನ ಕಂದಾಯ ಇಲಾಖೆ ನೋಡಿಕೊಳ್ಳುತ್ತಿದ್ದವರು ಶಾನುಭೋಗರು. ಇನ್ನ ಟಿಪ್ಪು ಸಚಿವ ಸಂಪುಟದಲ್ಲಿ ಐದು ಜನ ಬ್ರಾಹ್ಮಣರಿದ್ದರು. ಟಿಪ್ಪು ಆಡಳಿತದಲ್ಲಿ ಯಾವುದೇ ಕಾನೂನು ಜಾರಿಯಾಗುವುದಿದ್ದರೂ ಅದಕ್ಕೆ ಬ್ರಾಹ್ಮಣರ ಚರ್ಚೆಗಳೂ ಮುಖ್ಯವಾಗುತ್ತಿದ್ದವು. ಒಂದು ವೇಳೆ ಟಿಪ್ಪು ತನ್ನ ಆಡಳಿತದಲ್ಲಿ ಪರ್ಶಿಯನ್ ಭಾಷೆ ತುರುಕಲು ಯತ್ನಿಸಿದ್ದರೆ ಅದನ್ನು ಖಂಡಿಸಿ ಬ್ರಾಹ್ಮಣರು ತಮ್ಮ ಹುದ್ದೆಗೆ ರಾಜೀನಾಮೆ ಕೊಡಬೇಕಿತ್ತು. ಹಾಗೆ ಮಾಡದೆ ಬಂದ ಬಳವಳಿಯವರು ಈಗ ಟಿಪ್ಪುವನ್ನು ಕನ್ನಡ ದ್ರೋಹಿ ಎಂದು ಬಗೆಯಲು ಪ್ರಯತ್ನಿಸಿದರೆ ಅವರನ್ನೇ ಈ ದ್ರೋಹಿಗಳ ಪಟ್ಟಿಯಲ್ಲಿ ಸೇರಿಸಲು ಜನ ಕಾಯುತ್ತಿದ್ದಾರಂತಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಕಂದಾಯ ಇಲಾಕೆಯ ಪರ್ಷೀಯನ್ ಪದಗಳಿಗೆ ಈಗಲಾದರೂ ಕನ್ನಡ ಪದಗಳನ್ನು ಹುಟ್ಟುಹಾಕಬಹುದಲ್ಲಾ?

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...