Homeಅಂಕಣಗಳುಆತ್ಮಶ್ರೀಗಾಗಿ ಅವಧೂತರ ಬಳಿಹೋದ ಅಲ್ಪರು!

ಆತ್ಮಶ್ರೀಗಾಗಿ ಅವಧೂತರ ಬಳಿಹೋದ ಅಲ್ಪರು!

- Advertisement -
- Advertisement -

ನಮ್ಮ ಜನಪ್ರಿಯ ರಾಜಕಾರಣಿಯಾದ ಎಲ್.ಆರ್ ಶಿವರಾಮೇಗೌಡರು ಮಾದೇಗೌಡರನ್ನು ಕಟುವಾಗಿ ಟೀಕಿಸಿ ಆ ಕಾರಣವಾಗಿ ಕುಮಾರಣ್ಣನವರಿಂದ ನಿಂತ ನಿಲುವಿನಲ್ಲೇ ಪಾರ್ಟಿಯಿಂದ ವಜಾ ಆದ ಘಟನೆ ಈಗ ಹಳೆಯದು. ಆದರೇನು ಶಿವರಾಮೇಗೌಡರು ಇಂತಹ ಪನಿಶ್ಮೆಂಟಿಗೆಲ್ಲಾ ಹೆದರುವವರಲ್ಲ. ಅವರು ಈ ಹಿಂದೆ ಗೆದ್ದಿರುವುದೇ ಪಕ್ಷೇತರರಾಗಿ; ’ಈಗಲೂ ಮುಂಬರುವ ಚುನಾವಣೆಯಲ್ಲಿ ಪಕ್ಷೇತರರಾಗಿ ನಿಲ್ಲುತ್ತೇನೆ. ಚಲುವರಾಯಸ್ವಾಮಿ ಮತ್ತು ಸುರೇಶ್‌ಗೌಡನ ಎದುರು ನನ್ನನ್ನು ಮತದಾರರು ಗೆಲ್ಲಿಸದಿದ್ದರೆ ಕೂಡಲೇ ಶಿರಶ್ಚೇದನ ಮಾಡಿಕೊಳ್ಳುತ್ತೆನೆಂದು’ ಹೆದರಿಸಿದ್ದಾರಲ್ಲಾ! ಸ್ವಾತಂತ್ರ್ಯ ಪಡೆಯುವುದಕ್ಕೇ ಹಲವು ವರ್ಷಗಳ ಮೊದಲು ಈ ದೇಶದಲ್ಲಿ ಸತಿಸಹಗಮನ ನಡಯುತ್ತಿತ್ತು. ಬಂಗಾಳದಲ್ಲಿಯೇ ವರ್ಷಕ್ಕೆ ಎಂಬತ್ತರಿಂದ ನೂರು ಜನ ಮಹಿಳೆಯರನ್ನು ಬೆಂಕಿಗೆ ದೂಡಲಾಗುತ್ತಿತ್ತು. ಜನ ಈ ದೃಶ್ಯವನ್ನು ಪದೇಪದೇ ನೋಡಿ ಮಾನವೀಯತೆಯನ್ನೆ ಕಳದುಕೊಂಡು ಮರುಗಟ್ಟಿಹೋಗಿದ್ದರು. ಆದುದರಿಂದ ಸತಿಸಹಗಮನ ಪದ್ಧತಿಯನ್ನು ನೋಡಲು ಯಾವಾಗಲೂ ಜಮಾಯಿಸುತ್ತಿದ್ದರು. ಅಂತದೇ ಮನಸ್ಥಿತಿಯ ಜನ ಈಗ ಹೆಚ್ಚಾಗಿರುವುದರಿಂದ, ದೇವೇಗೌಡರು ತಾವು ಸೋತಾಗ ಹಾಸನ ಜಿಲ್ಲೆಯನ್ನೇ ಬಹಿಷ್ಕರಿಸಿದಂತೆ, ಶಿವರಾಮೇಗೌಡರು ನಾಗಮಂಗಲದ ಕಡೆ ತಿರುಗಿ ನೋಡುವುದಿಲ್ಲ ಎಂದು ಶಪಥ ಬದಲಾಯಿಸಿಕೊಂಡರೆ ಒಳ್ಳೆಯದಲ್ಲವೆ, ಥೂತ್ತೇರಿ.

*****

ಈ ನೆಲದಲ್ಲಿ ಸದ್ಯಕ್ಕೆ ಎಂತಹ ವ್ಯಕ್ತಿಗಳಿಗೂ ಅಭಿಮಾನಿಗಳಿದ್ದಾರೆ. ಹೀಗಿರುವಾಗ ಗೌರಿಗದ್ದೆಯ ಅವಧೂತನಿಗೆ ಸಾವಿರಾರು ಮಂದಿ ಇರುವುದು ಅಚ್ಚರಿಯಲ್ಲ. ಈ ವಯಸ್ಸಿನಲ್ಲಿ ಇನ್ನೇನಾಗಬೇಕು ಎಂದು ಚಿಂತಿಸಬೇಕಾದ ದೇವೇಗೌಡರಿಂದ ಹಿಡಿದು ಹೇಗಾದರೂ ಮಾಡಿ ಮುಖ್ಯಮಂತ್ರಿಯಾಗಿ ಬಿಜೆಪಿಗಳ ಇ.ಡೀ ಈಡಿಯಟ್‌ಗಳಿಗೆ ತಕ್ಕ ಉತ್ತರ ಕೊಡಲು ಕಾದಿರುವ ಡಿ.ಕೆ ಶಿವಕುಮಾರ್ ಜೊತೆಗೆ, ಶಿವಕುಮಾರ್ ಅಭಿಮಾನಿಗಳೂ ಕೂಡ ಅವಧೂತನ ಅಭಿಮಾನಿಗಳಾಗಿರುವುದು ಅಚ್ಚರಿಯಲ್ಲ. ಕಳೆದ ಶತಮಾನದಲ್ಲಿ ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಎಂದು ಕರೆಕೊಟ್ಟು ವಿಚಾರ ಕ್ರಾಂತಿಗೆ ಆಹ್ವಾನ ನೀಡಿದ ಋಷಿಕವಿ ಕುವೆಂಪುರವರ ಸಂಬಂಧಿಗಳು ನಾವೆಂದು ಕಿರೀಟ ಧರಿಸಿ ಮೆರೆಯುತ್ತಿದ್ದ ಮೂರ್ಖರೆಲ್ಲಾ ಗೌರಿಗದ್ದೆ ಅವಧೂತನ ಪಾದಕ್ಕೆ ಬಿದ್ದು ಕುವೆಂಪು ಹೆಸರಿಗೆ ಮಸಿ ಬಳಿದಿವೆಯಂತಲ್ಲಾ. ಹಾಗೆ ನೋಡಿದರೆ ಕುವೆಂಪುರವರ ವಿಚಾರಧಾರೆಗೆ, ಮಂತ್ರ ಮಾಂಗಲ್ಯದ ಕಲ್ಪನೆಗೆ ಈ ಮಲೆನಾಡಿಗರು ತಿಲಾಂಜಲಿಯಿತ್ತು ಬಹಳ ವರ್ಷಗಳಾಗಿವೆ. ಆದ್ದರಿಂದ ಈ ಮಂದಮತಿಗಳು ನಾವು ಕುವೆಂಪು ಪ್ರದೇಶದವರು ಅವರ ಸಂಬಂಧಿಗಳು ಎಂದು ಹೇಳಿಕೊಳ್ಳುವುದನ್ನ ನಿಲ್ಲಿಸಿದರೆ ಅದೇ ಕುವೆಂಪುರವರಿಗೆ ಕೊಡುವ ಗೌರವ ಎಂದು ಕುವೆಂಪುರವರನ್ನು ನಿಜವಾಗಿ ಅನುಸರಿಸುವವರ ಸಲಹೆಯಾಗಿದೆಯಂತಲ್ಲಾ, ಥೂತ್ತೇರಿ.

*****

ಶ್ರೇಷ್ಠ ಸಂವಿಧಾನ ಪಡೆದಿರುವ ನಮ್ಮ ವ್ಯವಸ್ಥೆಯಲ್ಲಿ ಕಾನೂನಿಗಿಂತ ಧರ್ಮವೇ ದೊಡ್ಡದೆಂದು ಪ್ರತಿಪಾದಿಸಿದ ಚಿತ್ರದುರ್ಗ ಪ್ರದೇಶದ ಜಗದ್ಗುರುವೊಬ್ಬರು ಅದನ್ನೇ ಅಧಿಕೃತಗೊಳಿಸುತ್ತ ಹೊರಟಿದ್ದಾರಲ್ಲಾ. ಅದೂ ಕೂಡ ತಾನೇ ನಡೆಸುತ್ತಿರುವ ಅನಧಿಕೃತ ನ್ಯಾಯಾಲಯದ ಉದಾಹರಣೆಗಳನ್ನ ಉದಾಹರಿಸುತ್ತ! ಅದಷ್ಟೇ ಅಲ್ಲ ಅವರ ಮಾತನ್ನು ಅಲ್ಲಗಳೆದವರನ್ನು ನಿಂದಿಸಲು ಭಕ್ತಾದಿಗಳನ್ನ ಪ್ರಚೋದಿಸುತ್ತ. ಇಲ್ಲಿ ಪೊಲೀಸ್ ಠಾಣೆ, ನ್ಯಾಯಾಲಯ, ವಕೀಲರ ಅಗತ್ಯವೇ ಇಲ್ಲ; ಬದಲಿಗೆ ಧರ್ಮದ ಮಾನದಂಡದಿಂದಲೇ ಜಾದೂ ಮಾಡಬಹುದು. ಇರಲಿ ಗುರುಗಳು ಕಾನೂನಿಗೆ ತಿಲಾಂಜಲಿ ಇಟ್ಟ ಫಲವಾಗಿಯೇ ಏನೋ ತರಳಬಾಳು ಕೇಂದ್ರದಲ್ಲಿ ಅಕ್ರಮ ಕಟ್ಟಡ ನಿರ್ಮಿಸುತ್ತಿರವ ಆರೋಪದ ಮೇಲೆ ಬಿಬಿಎಂಪಿ ಆಯುಕ್ತರ ವಿರುದ್ದ ಲೋಕಾಯುಕ್ತಕ್ಕೆ ದೂರು ಹೋಗಿದೆ. ನಾಗರಿಕ ಸೌಲಭ್ಯ ನಿವೇಶನ ಹಂಚಿಕೆ ನಿಯಮಗಳಿಗೆ ವ್ಯತಿರಿಕ್ತವಾಗಿ ತರಳಬಾಳು ಮಠವು ಆರ್.ಟಿ ನಗರದಲ್ಲಿ ಕಾನೂನುಬಾಹಿರ ಮತ್ತು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಮಹಾನಗರ ಪಾಲಿಕೆ ಆಯುಕ್ತರ ವಿರುದ್ಧ ಜಿ.ಬಿ ವೆಂಕಟೇಶ್‌ರವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಮುಂದೆ ಬುದ್ಧಿಯವರು ಪ್ರತಿಪಾದಿಸಿದ ಧರ್ಮದ ಸೆಕ್ಷೆನ್‌ಗಳನ್ನೇ ಬಳಸಿ ಹೋರಾಡುತ್ತಾರೋ ಅಥವಾ ಕಾನೂನು ಸಮರಕ್ಕೆ ತಲೆಬಾಗುತ್ತಾರೋ ಎಂಬುದು ಕುತೂಹಲಕ್ಕೆಡೆಮಾಡಿದೆಯಲ್ಲಾ, ಥೂತ್ತೇರಿ.

*****

ದೆಹಲಿಯಿಂದ ಇಲ್ಲಿಯವರೆಗೆ ಈ ದೇಶದ ವ್ಯವಸ್ಥೆಯೇ ಹಾಳಾಗಿಹೋಗಿದೆ. ಆದರೂ ಬಿಜೆಪಿಗಳು ಮತ್ತೆ ಚುನಾವಣೆಯಲ್ಲಿ ಗೆದ್ದುಬರುವ ಆತ್ಮವಿಶ್ವಾಸಕ್ಕೆ ಕಾರಣವೇನು ಎಂಬುದಕ್ಕೆ ಸಾಕ್ಷಾಧಾರವಾಗಿ ಬೆಂಗಳೂರಲ್ಲಿ ನಡೆದಿರುವ ಮತಪೆಟ್ಟಿಗೆ ಕನ್ನದ ಹಗರಣ ಹೊರಬಿದ್ದಿದೆಯಲ್ಲಾ. ಯಾವುದೇ ಸರ್ಕಾರ ಬರಲಿ ಆಪರೇಷನ್ ಕಮಲದ ಮೂಲಕ ಶಾಸಕರನ್ನು ಖರೀದಿಸಿ ಸರಕಾರ ರಚನೆ ಮಾಡುವ ಸಂಚಿನ ಭರವಸೆಯಿಂದ ಬೀಗುತ್ತಿರುವ ಬಿಜೆಪಿಗಳ ತಮಗೆ ಮತಹಾಕದವರನ್ನು ಮತದಾರರ ಪಟ್ಟಿಯಿಂದಲೇ ಕಿತ್ತು ಬಿಸಾಡುವ ಷಡ್ಯಂತ್ರ ರೂಪಿಸಿದ್ದಾರಂತಲ್ಲಾ. ಇಂತಹ ಯಾವ ಸಂಚೂ ಇಲ್ಲದೆ ಈ ದೇಶ ಇರುವವರೆಗೂ ನಾವು ಅಧಿಕಾರದಲ್ಲಿರುತ್ತೇವೆಂದು ಭಾವಿಸಿ ಆರಾಮವಾಗಿದ್ದ ಕಾಂಗೈಗಳಿಗೆ ಬಿಜೆಪಿ ಸಂಚಿಗೆ ಪ್ರತಿತಂತ್ರವೇ ಹೊಳೆಯದೆ ಪ್ರತಿಭಟನೆಗೆ ಸ್ಪಷ್ಟ ಕಾರಣವೂ ಹೊಳೆಯದೆ ಕಂಗಾಲಾಗಿ ಕೂತಿವೆಯಂತಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...