Homeಕರ್ನಾಟಕಪಕ್ಷಾಂತರ ನೀಷೇಧ ಕಾಯ್ದೆಯ ಜೀವ ತೆಗೆಯುತ್ತಿದ್ದಾರೆ: ದೇವನೂರು ಮಹಾದೇವ

ಪಕ್ಷಾಂತರ ನೀಷೇಧ ಕಾಯ್ದೆಯ ಜೀವ ತೆಗೆಯುತ್ತಿದ್ದಾರೆ: ದೇವನೂರು ಮಹಾದೇವ

ರಾಜೀನಾಮೆ ಅಂಗೀಕಾರವಾಗುವವರೆಗೆ ಮುಂಬೈ ಹೋಟೆಲ್‍ಗೆ ಹೋಗಿ ಕೂತಿದ್ದು ಅನೈತಿಕತೆಯ ವಾಸನೆ ಹೊಡಿಸ್ತು

- Advertisement -
- Advertisement -

15ಕ್ಕೂ ಹೆಚ್ಚು ಶಾಸಕರು ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿ ಮುಂಬೈಗೆ ಹಾರಿಹೋದಾಗಿನಿಂದ ರಾಜ್ಯ ರಾಜಕಾರಣ ದಿನಕ್ಕೊಂದು ತಿರುವು ಪಡೆದುಕೊಂಡು ಅಸಹ್ಯ ಹುಟ್ಟಿಸುತ್ತಿದೆ. ಇದನ್ನು ವಿರೋಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾಡಿನ ಹಿರಿಯ ಸಾಕ್ಷಿಪ್ರಜ್ಞೆಗಳಾದ ದೇವನೂರು ಮಹಾದೇವ ಮತ್ತು ಎಚ್.ಎಸ್ ದೊರೆಸ್ವಾಮಿಯವರು ಸ್ಪೀಕರ್ ರಮೇಶ್ ಕುಮಾರ್ ರವರಿಗೆ ಪತ್ರ ಬರೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ನಾನುಗೌರಿ.ಕಾಂ ವತಿಯಿಂದ ದೇವನೂರು ಮಹಾದೇವರನ್ನು ಸಂದರ್ಶಿಸಲಾಯಿತು.

ಪತ್ರಿಕೆ: ನೀವು ಸ್ಪೀಕರ್‍ರಿಗೆ ಪತ್ರ ಬರೆಯಬೇಕೆಂದುಕೊಂಡಿದ್ದು ಯಾಕೆ ಸಾರ್?
ದೇವನೂರ ಮಹಾದೇವ: ರಾಜ್ಯದ ಶಾಸಕರ ನಾಪತ್ತೆ ರಾಜಕಾರಣವನ್ನು ಮಾಧ್ಯಮಗಳೆಲ್ಲವೂ ಹೈಡ್ರಾಮಾ ಎಂದು ಬಿಂಬಿಸುತ್ತಿವೆ. ಆದರೆ ನಡೀತಿರೋದು ಕೊಳಕು ಡ್ರಾಮಾ. ಈಗ ಏನು ನಡೀತಿದೆ ಗೊತ್ತೇ? ಇದು ಪಕ್ಷಾಂತರ ನಿಷೇಧ ಕಾಯ್ದೆಯ ಜೀವ ತೆಗೀತಿರೋದು. ಇದಕ್ಕೆ ನಮ್ಮ ನ್ಯಾಯಾಂಗ, ರಾಜ್ಯಪಾಲರು ಹಾಗೂ ರಾಜಕಾರಣಿಗಳು ಒಂದಲ್ಲಾ ಒಂದು ರೀತಿ ಕಾರಣರಾಗಿದ್ದಾರೆ. ಮೇಲ್ಕಂಡವರಿಗೆ ಸಂವಿಧಾನದ ಬಗ್ಗೆ, ನ್ಯಾಯಾಲಯದ ಬಗ್ಗೆ ನಂಬಿಕೆ ಗೌರವ ಇದೆಯಾ ಎನ್ನೋ ಅನುಮಾನ ದಿನೇ ದಿನೇ ಹೆಚ್ಚಾಗ್ತಿದೆ. ಹೀಗಾಗಿ ಸುಮ್ಮನಿರಬಾರ್ದು ಅನ್ನಿಸ್ತು.

ಪತ್ರಿಕೆ: ಸ್ಪೀಕರ್‍ರಿಗೇ ಯಾಕೆ ಬರೆದ್ರಿ?
ದೇ.ಮ: ನೋಡಿ, ಇಲ್ಲಿ ಕೆಲವ್ರು ಆಪರೇಷನ್ ಮಾಡ್ತಾ ಇದಾರೆ. ಕೆಲವ್ರು ಆಪರೇಷನ್ ಮಾಡಿಸ್ಕತಾ ಇದಾರೆ. ಕೊನೇಗೆ ಇದು ನಮ್ಮನ್ನ ಎಲ್ಲಿಗೆ ಕರೆದೊಯ್ತದೆ? ಈ ರೆಸಾರ್ಟ್ ರಾಜಕಾರಣದಿಂದ ನಾವೂ ತಲೆ ತಗ್ಗಿಸೋಂಗಾಗಿದೆ. ಸ್ಪೀಕರ್ ನಡೆ ನುಡಿ ನೋಡಿದರೆ ಅವ್ರು ಸಾಕ್ಷಿಪ್ರಜ್ಞೆ ಇಟ್ಟುಕೊಂಡು ಸೂಕ್ತವಾಗಿ ನಿರ್ವಹಿಸಬಹುದು ಅಂತ ಅನ್ನಿಸ್ತು. ಹಾಗಾಗಿ ಅವ್ರಲ್ಲಿ ಪ್ರಾರ್ಥನೆ ಮಾಡ್ಕೊಂಡ್ವಿ. ಅದಕ್ಕಿಂತ ಮುಖ್ಯವಾಗಿ ಸ್ಪೀಕರ್ ಶಾಸಕಾಂಗದ, ಶಾಸಕರ ಕಸ್ಟೋಡಿಯನ್ ಎಂಬ ಭಾವನೆ ಇದೆ. ಈ ಮಾತು ಅನೇಕ ಸಲ ಶಾಸನ ಸಭೆಯ ಚರ್ಚೆಯಲ್ಲೂ ಬಂದಿದೆ. ಅವ್ರು ಪ್ರತ್ಯಕ್ಷವಾಗಿ ಶಾಸಕರ ಕಸ್ಟೋಡಿಯನ್ ಆಗಿರುವುದಾದರೆ, ಪರೋಕ್ಷವಾಗಿ ಆ ಶಾಸಕರನ್ನು ಆರಿಸಿದ ಮತದಾರರ ಆಯ್ಕೆಯ ಹಕ್ಕಿನ ಕಸ್ಟೋಡಿಯನ್ ಸಹಾ ಆಗ್ಬೇಕು. ಆದ್ರಿಂದ ಅವ್ರಿಗೆ ಪತ್ರ ಬರೆದೆವು.

ಪತ್ರಿಕೆ: ಶಾಸಕರಿಗೆ ರಾಜೀನಾಮೆ ನೀಡೋ ಹಕ್ಕೇ ಇಲ್ಲ ಅಂತ ಹೇಳೋಕಾಗುತ್ತಾ?
ದೇ.ಮ: ಖಂಡಿತವಾಗ್ಲೂ ಇಲ್ಲ. ನಾವು ಯಾರಿಗೂ ರಾಜೀನಾಮೆ ಕೊಡೋದು ಬೇಡ ಅಂತ ಹೇಳಲ್ಲ. ಆದರೆ ಆ ಶಾಸಕರು ರಾಜೀನಾಮೆ ಊರ್ಜಿತವಾಗೋ ತನಕವಾದರೂ ಆ ಕಾಲವಧಿಯಲ್ಲಿ ಜನರ ಜೊತೆ ಇರಬೇಕೆಂದು ಕೇಳುವುದು ನ್ಯಾಯ ತಾನೇ? ಅದು ನೈತಿಕವಾಗಿ ಸರಿ ತಾನೇ? ತಮ್ಮದೇ ನಿರ್ಧಾರದ ಬಗ್ಗೆ ಗ್ಯಾರಂಟಿ ಇಲ್ಲದೇ ಬೇರೆ ರಾಜ್ಯದ ರೆಸಾರ್ಟ್‍ನಲ್ಲಿ ಕೂರೋದು ಕೊಡೋ ಸಂದೇಶ ಏನಂದ್ರೆ ಅದ್ರಲ್ಲಿ ಒಂದೋ ಬೇರೆ ಅನೈತಿಕ ಹಿತಾಸಕ್ತಿ ಇದೆ, ಇಲ್ಲವೇ ಯಾರೋ ಇವ್ರನ್ನ ಹಿಡ್ಕೊಂಡು ಕೂರಿಸ್ಕೊಂಡಿದಾರೆ ಅಂತ.

ಪತ್ರಿಕೆ: ಇದನ್ನ ತಡೆಯೋಕೆ ಏನು ಮಾಡಬೇಕು ಅನಿಸುತ್ತೆ ಸಾರ್?
ದೇ.ಮ: ರಾಜೀನಾಮೆ ಕೊಡೋರು ತಮ್ಮ ಮತದಾರರ ಜೊತೆಗೇ ಇರಬೇಕು ಅಂತ ಮಾಡ್ಬೇಕು. ಇಂತಹ ಹೊಸದೊಂದು ಪರಂಪರೆಯನ್ನು ನಮ್ಮ ಸ್ಪೀಕರ್ ರವರು ಹುಟ್ಟು ಹಾಕುತ್ತಾರೆಂಬ ನಂಬಿಕೆ ನಮಗಿದೆ. ಅಂತಹ ಕಾನೂನು ಸಹಾ ಇಲ್ಲ ನಿಜ. ಇವೆಲ್ಲವನ್ನ ಕೇವಲ ಕಾನೂನಿನ ನಿಯಮಗಳ ಪುಸ್ತಕ ಇಟ್ಕೊಂಡೇ ಬದಲಾಯಿಸಕ್ಕೆ ಆಗಲ್ಲ. ಆದ್ರೆ, ಇವತ್ತಿನ ಸಂದರ್ಭದಲ್ಲಿ ರೆಸಾರ್ಟ್ ರಾಜಕಾರಣದಂತಹ ಚೆಂಗಲು, ಎಂಜಲು ಮತ್ತು ಅಹಂನ ಮದದ ರಾಜಕಾರಣಿಗಳಿಗೆ ಮಾನ ಮರ್ಯಾದೆಗೆ ಹೆದರೋ ಥರದ ಒಂದು ತೀರ್ಮಾನ ಸ್ಪೀಕರ್ ಕಡೆಯಿಂದ ಆಗ್ಲೇಬೇಕು ಅಂತ ನನಗೆ ಅನ್ನಿಸುತ್ತೆ.

ಇದನ್ನೂ ಓದಿ: ದೇವನೂರು ಮತ್ತು ದೊರೆಸ್ವಾಮಿಯವರಿಂದ ಸ್ಪೀಕರ್ ರಿಗೆ ದೂರು ಸಲ್ಲಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...