Homeಮುಖಪುಟಸಿದ್ದು ಜನಪ್ರಿಯ ನಾಯಕರು, ಜನಾಭಿಪ್ರಾಯದಿಂದ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ: ವೈರಲ್ ಆಡಿಯೋದಲ್ಲಿರುವುದೇನು?

ಸಿದ್ದು ಜನಪ್ರಿಯ ನಾಯಕರು, ಜನಾಭಿಪ್ರಾಯದಿಂದ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ: ವೈರಲ್ ಆಡಿಯೋದಲ್ಲಿರುವುದೇನು?

ಅಮಿತ್ ಶಾ ಅವರದು ಒಂಥರಾ ರೌಡಿಸಂ, ಯಾರನ್ನೂ ಬಿಡೋಲ್ಲ. ಅಂದ್ರೆ ಯಾರಾದ್ರೂ ಇತರ ಪಕ್ಷಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದರೆ ಅದನ್ನು ಸಹಿಸೋಲ್ಲ. ಅವರ ಬುಡ ಬಿಡೋಲ್ಲ

- Advertisement -
- Advertisement -

ಮಾಜಿ ಸಚಿವ, ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್ ಅವರು ಬಿಜೆಪಿಯ ಕಾರ್ಯಕರ್ತರ ಜೊತೆ ರಾಜ್ಯ ರಾಜಕೀಯದ ಆಗುಹೋಗುಗಳ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ಸಂಭಾಷಣೆಯ ಆಡಿಯೋ ಒಂದು ಎಲ್ಲೆಡೆ ವೈರಲ್ ಆಗುತ್ತಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಸಂಭಾಷಣೆ ತಮ್ಮದಲ್ಲ ಎಂದು ಯೋಗೇಶ್ವರ್ ಹೇಳಿದ್ದಾರೆ. ಆದರೆ ಅದರಲ್ಲಿ ಇರು ಮಾತುಗಳು ಗಮನ ಸೆಳೆಯುತ್ತಿವೆ. ವೈರಲ್ ಆಡಿಯೋದಲ್ಲೇನಿದೆ ಎಂಬುದನ್ನು ಇಲ್ಲಿ ನೀಡುವ ಪ್ರಯತ್ನ ಮಾಡಿದ್ದೇವೆ.

ಗುಬ್ಬಿ ಶ್ರೀನಿವಾಸ್, ಶಿವಲಿಂಗೇಗೌಡ, ಎ.ಟಿ ರಾಮಸ್ವಾಮಿ, ಗನ್ ಮಂಜು, ಡಾ.ಶ್ರೀನಿವಾಸಮೂರ್ತಿ, ಅನ್ನದಾನಿ, ಡಿ.ಸಿ ತಮ್ಮಣ್ಣ, ಎಂ.ಶ್ರೀನಿವಾಸ್, ಸಾ.ರಾ ಮಹೇಶ್, ಟಿ.ನರಸೀಪುರದ ಶಾಸಕ, ರಾಮನಗರದಲ್ಲಿ ಒಬ್ಬರು ಸೋಲುತ್ತಾರೆ. ಚನ್ನಪಟ್ಟಣ ಅಂತಲೇ ಅಲ್ಲ, ಅಲ್ಲಿ ಕುಮಾರಸ್ವಾಮಿಯವರು ಗೆಲ್ಲಬಹುದು. ಆದರೆ ರಾಮನಗರದ ಮೂವರು ಶಾಸಕರಲ್ಲಿ ಒಬ್ಬರು ಸೋಲುತ್ತಾರೆ. ಒಟ್ಟಿನಲ್ಲಿ ಹಳೆ ಮೈಸೂರು ಪ್ರಾಂತ್ಯದಲ್ಲಿ 12 ಜನ ಹಾಲಿ ಶಾಸಕರು ಸೋಲುತ್ತಾರೆ. ಉತ್ತರ ಕರ್ನಾಟಕದಲ್ಲಿ 5 ಜನರಲ್ಲಿ 3 ಜನ ಸೋಲುತ್ತಾರೆ. ಅದೇ ರೀತಿ ಮಧುಗಿರಿಯ ವೀರಭದ್ರಯ್ಯ, ಬೇಲೂರು ಲಿಂಗೇಶ್, ಚಿಂತಾಮಣಿಯಲ್ಲಿ ಕೃಷ್ಣಾ ರೆಡ್ಡಿ, ಸಕಲೇಶಪುರದಲ್ಲಿ ಕುಮಾರಸ್ವಾಮಿ ಸೇರಿದಂತೆ ಒಟ್ಟು 19 ಜನ ಶಾಸಕರು ಸೋಲುತ್ತಾರೆ ಎಂದು ಹೇಳಲಾಗಿದೆ.

ಸಾ.ರಾ ಮಹೇಶ್ ಯಾಕೆ ಸೋಲುತ್ತಾರೆಂದರೆ ಕಳೆದ ಬಾರಿ ಅವರು ಕಡಿಮೆ ಅಂತರದಲ್ಲಿ ಸೋತಿದ್ದರು. ಈ ಬಾರಿ ಇಬ್ಬರೂ ಒಕ್ಕಲಿಗ ಕ್ಯಾಂಡಿಡೇಟ್ ಇದ್ದು ಕಾಂಗ್ರೆಸ್‌ ಅಲ್ಲಿ ಗೆಲ್ಲುತ್ತದೆ. ಬಿಜೆಪಿಯಿಂದ ನಾವು ಕಳೆದ ಬಾರಿ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದೆವು. ದೇವೇಗೌಡರ ಜೊತೆ ಮಾತನಾಡಿದ್ದೆವು. ಎಂದು ಹೇಳುವುದು ದಾಖಲಾಗಿದೆ.

ಈ ಬಾರಿ ಜನಾಭಿಪ್ರಾಯದಿಂದ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಆದರೆ, ನಾವು ಬಿಜೆಪಿ ಸರ್ಕಾರ ರಚಿಸುತ್ತೇವೆ. ಮಾವಿನ ಹಣ್ಣು ಮರದಲ್ಲಿಯೇ ಹಣ್ಣು ಆಗುವುದಕ್ಕೂ, ತಂದು ಕೆಮಿಕಲ್ ಹಾಕಿ ಹಣ್ಣು ಮಾಡುವುದಕ್ಕೂ ವ್ಯತ್ಯಾಸವಿದೆ. ಕಾಂಗ್ರೆಸ್ ಸ್ಟ್ರಾಂಗ್ ಇಲ್ಲ. ಸಿದ್ದರಾಮಯ್ಯನವರಿಗೆ ಪಟ್ಟ ಕಟ್ಟಲು ಹಿರಿಯ ನಾಯಕರಿಗೆ ಇಷ್ಟವಿಲ್ಲ. ಸಂಕ್ರಾಂತಿ ನಂತರ ಹಳೆ ಮೈಸೂರು ಭಾಗದಲ್ಲಿ ದೊಡ್ಡ ಬದಲಾವಣೆ ಮಾಡುತ್ತೀವಿ. ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಬಿಜೆಪಿಗೆ ಬರುತ್ತಾರೆ. ಅದರಿಂದ ನಾಲ್ಕೈದು ಕ್ಷೇತ್ರಗಳಲ್ಲಿ ಬಿಜೆಪಿಗೆ 2-3 ಮತಗಳು ಪ್ಲಸ್ ಆಗುತ್ತವೆ. ಮಂಡ್ಯದಲ್ಲಿ ಒಬ್ಬರು ಬರುತ್ತಾರೆ. ಕೋಲಾರದಲ್ಲಿ ಒಬ್ಬರು ದಲಿತ ಲೀಡರ್ ಬರುತ್ತಾರೆ. ಅವರು 7-8 ಬಾರಿ ಸಂಸದರಾಗಿದ್ದರು. ಆದರೆ ನಮ್ಮವರೆ ಇನ್ನು ಒಪ್ಪುತ್ತಿಲ್ಲ.

25 ಜನರನ್ನು ಬಿಜೆಪಿಗೆ ತರುವ ಯೋಚನೆಯಲ್ಲಿದ್ದೇವೆ. ಚುನಾವಣೆ ಗೆದ್ದಮೇಲೆ ಆಪರೇಷನ್ ಕಮಲ ಮಾಡುವುದಿಲ್ಲ ನಾವು. ಮೊದಲೆ ಮಾಡಿಬಿಡುತ್ತೇವೆ. ಸುಮ್ಮನೆ ಯಾಕೆ ಆಪರೇಷನ್ ಕಮಲದ ಕೆಟ್ಟ ಹೆಸರು ಎಂದರು.

ಸಿದ್ದರಾಮಯ್ಯ ಅವರು ಜನಪ್ರಿಯ ನಾಯಕರು. ಅದರಲ್ಲಿ ಡೌಟ್ ಇಲ್ಲ. ಅವರು ಕೋಲಾರದಲ್ಲಿ ಗೆಲ್ಲುತ್ತಾರೆ. ಅವರಂತಹ ರಾಜಕಾರಣಿಗಳು ಇರಬೇಕು. ಆದರೆ ಅವರು ಎಷ್ಟು ಜನಪ್ರಿಯರು, 120 ಗೆಲ್ಲಿಸಿ, ಪಕ್ಷ ಬಹುಮತ ಪಡೆದು ಸರ್ಕಾರ ರಚಿಸುವಷ್ಟು ಜನಪ್ರಿಯರೆ ಎನ್ನುವುದು ಗೊತ್ತಿಲ್ಲ. ಅವರು ಕೋಲಾರದಲ್ಲಿ ಗೆಲ್ಲುತ್ತಾರೆ, ಅವರು ಗೆದ್ದ ಬಳಿಕವೇ ನಿಜವಾದ ರಾಜಕೀಯ ಶುರುವಾಗುತ್ತೆ. ಗೆದ್ದ ಮೇಲೆ ಅವರು ಮುಖ್ಯಮಂತ್ರಿ ಆಗದೇ ಬಿಡ್ತಾರಾ? ಇದು ಅವರ ಕೊನೆಯ ಪ್ರಯತ್ನ. ಆಗಲೇ ರಾಜಕೀಯ ಶುರುವಾಗುವುದು ಎಂದಿದ್ದಾರೆ.

ನಾನು ಕುಮಾರಸ್ವಾಮಿ ಅವರ ವಿರುದ್ಧ ಚನ್ನಪಟ್ಟದಲ್ಲಿ ಸ್ಪರ್ಧಿಸಲು ಒಪ್ಪಿಕೊಂಡಿದ್ದೇನೆ. ಅದೇ ರೀತಿ ಸಚಿವ ಅಶೋಕ್‌ ಅವರು ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಅವರ ಎದುರು, ಸಚಿವ ಅಶ್ವತ್ಥನಾರಾಯಣ ಅವರು ರಾಮನಗರದಲ್ಲಿ  ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರ ಸ್ವಾಮಿ ಅವರ ಎದುರು ಸ್ಪರ್ಧಿಸಬೇಕು. ಹಾಗೆ ಕಟ್ಟಿ ಹಾಕಬೇಕು. ಹೇಗಿದ್ದರೂ ಪಕ್ಷವು ನಮ್ಮ ಬೆಂಬಲಕ್ಕೆ ಬರಲಿದೆ. ಸೋತರೆ ಎಂಎಲ್‌ಸಿ ಮಾಡಿ ಮಂತ್ರಿ ಮಾಡುತ್ತಾರೆ ಎಂದು ಹೇಳಲಾಗಿದೆ.

ಅಮಿತ್‌ ಶಾ ಹೇಳಿದ್ದಾರೆ ಹೊಂದಾಣಿಕೆ ಮಾಡಿಕೊಳ್ಳಬೇಡಿ ಅಂತ. ಬಹಳ ಕೆಟ್ಟದಾಗಿ ಹೇಳಿದರು. ಹೊಂದಾಣಿಕೆ ತಾಯಿಗೆ ದ್ರೋಹ ಬಗೆದ ಹಾಗೆ ಅಂತ. ಅಮಿತ್ ಶಾ ಅವರದು ಒಂಥರಾ ರೌಡಿಸಂ, ಯಾರನ್ನೂ ಬಿಡೋಲ್ಲ. ಅಂದ್ರೆ ಯಾರಾದ್ರೂ ಇತರ ಪಕ್ಷಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದರೆ ಅದನ್ನು ಸಹಿಸೋಲ್ಲ. ಅವರ ಬುಡ ಬಿಡೋಲ್ಲ ಎಂದರು.

ʼಮೂವತ್ತು ಜನರನ್ನೂ ಅಮಿತ್‌ ಶಾ ಕರೆದಿದ್ದರು. ನನಗೆ ಗೊತ್ತು ಯಾರು ಪಕ್ಷಕ್ಕೆ ದ್ರೋಹ ಮಾಡ್ತಿದ್ದೀರಾ, ಇತರ ಪಕ್ಷಗಳ ಜೊತೆ ಅಂಡರ್ ಸ್ಟಾಂಡಿಂಗ್‌ ಮಾಡಿಕೊಂಡಿದ್ದೀರಾ ಎನ್ನುವುದು ಗೊತ್ತು ಎಂದು ಭಾರಿ ಕೆಟ್ಟದಾಗ್‌ ಮಾತನಾಡಿದ್ರು, ನೀಟಾಗಿ ಹೇಳಿದ್ರು, ಮೂರು ಗಂಟೆ ತಗೊಂಡ್ರು. ಪುನಃ ಕ್ಲಾಸ್ ತಗೋತ್ತಾರೆ ಅಂತೆ. ಆಗ ನಾನು ನೇರವಾಗಿ ಹೇಳಿಬಿಡ್ತೀನಿ. ನಾನು ಕುಮಾರಸ್ವಾಮಿ ಅವರ ವಿರುದ್ಧ ಚನ್ನಪಟ್ಟದಲ್ಲಿ ಸ್ಪರ್ಧಿಸಲು ಒಪ್ಪಿಕೊಂಡಿದ್ದೇನೆ. ಅದೇ ರೀತಿ ಸಚಿವ ಅಶೋಕ್‌ ಅವರು ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಅವರ ಎದುರು, ಸಚಿವ ಅಶ್ವತ್ಥನಾರಾಯಣ ಅವರು ರಾಮನಗರದಲ್ಲಿ  ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರ ಸ್ವಾಮಿ ವಿರುದ್ಧ ಸ್ಪರ್ಧಿಸುತ್ತಾರೆ ಅಂತ 8-10 ಪಟ್ಟಿ ಮಾಡಿ ಹೇಳಿಬಿಡ್ತೀನಿ. ಆಗ ಚರ್ಚೆಯಾಗಲಿ. ಫೆಬ್ರವರಿ ಮಾರ್ಚ್‌ ನಲ್ಲಿ ಗೊತ್ತಾಗುತ್ತದೆ ಎಂದಿದ್ದಾರೆ. ಕೊನೆಯಲ್ಲಿ ಸಂಕ್ರಾಂತಿಯ ಶುಭಾಷಯಗಳನ್ನು ತಿಳಿಸಿರುವುದು ನೋಡಿದರೆ ಅದು ಇತ್ತೀಚಿನ ಆಡಿಯೋ ಎಂದು ದೃಢವಾಗುತ್ತದೆ.

ಇದನ್ನೂ ಓದಿ: ಪಂಚಮಸಾಲಿಯೊಳಗೆ ಯತ್ನಾಳ್- ನಿರಾಣಿ ಕುಸ್ತಿ: ಸಭ್ಯತೆ ಮೀರಿದ ಟೀಕಾಪ್ರಹಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...