Homeಅಂಕಣಗಳುಮಾತು ಮರೆತ ಭಾರತ-32; ಲಾಕ್‌ಡೌನ್ ಫೈಲ್ಸ್: ಪ್ರೀತಿಯನ್ನು ಮಣಿಸಿದ ಜಾತಿ

ಮಾತು ಮರೆತ ಭಾರತ-32; ಲಾಕ್‌ಡೌನ್ ಫೈಲ್ಸ್: ಪ್ರೀತಿಯನ್ನು ಮಣಿಸಿದ ಜಾತಿ

- Advertisement -
- Advertisement -

(ಭಾರತದ Dalit Human Rights Defenders Network ಎಂಬ ಸಂಸ್ಥೆಯು No lockdown on Caste Atrocities’ ಎಂಬ ಪುಸ್ತಕದಲ್ಲಿ ನೈಜ ಘಟನೆಗಳನ್ನು ವರದಿ ಮಾಡಿದೆ. ಇದರಲ್ಲಿ ’ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಭಾರತದ ಏಳು ರಾಜ್ಯಗಳಲ್ಲಿ ದಲಿತರ ಮೇಲೆ ನಡೆದ 60 ದೌರ್ಜನ್ಯಗಳನ್ನು ಪಟ್ಟಿ ಮಾಡಿದೆ. ಒಂದೊಂದೂ ಭೀಕರ ಮತ್ತು ಹಿಂದೂ ಮೇಲ್ಜಾತಿಗಳು ದಲಿತರ ಮೇಲೆ ನಡೆಸಿರುವ ಕ್ರೂರ ಕೃತ್ಯಗಳನ್ನು ಬಯಲುಗೊಳಿಸುತ್ತದೆ. ಆ ದಲಿತರ ಮೇಲಿನ ದೌರ್ಜನ್ಯಗಳ ಘಟನೆಗಳಲ್ಲಿ ಇದೂ ಒಂದು. ಇದನ್ನು ವರದಿ ಮಾಡುವ ಉದ್ದೇಶ ಖಂಡಿತವಾಗಿಯೂ ಹಿಂದೂ ಮೇಲ್ಜಾತಿಗಳ ಮನ ಪರಿವರ್ತಿಸುವುದಲ್ಲ. ಬದಲಾಗಿ ’ಹಿಂದೂ ನಾವೆಲ್ಲ ಒಂದೂ’ ಎನ್ನುತ್ತಿರುವ ದಲಿತರ ಅಂಧಕಾರವನ್ನು ಕಳಚುವುದಾಗಿದೆ.)

ಅದು 2020ರ ಅಕ್ಟೋಬರ್ 2. ಗಾಂಧಿ ಜಯಂತಿಯ ದಿನ. ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಆಸ್ಪತ್ರೆಯಲ್ಲಿ ಸೌಮ್ಯ ಎಂಬ ದಲಿತ ಹುಡುಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಳು.

ಸೌಮ್ಯ 10 ವರ್ಷದವಳಿದ್ದಾಗಲೇ ತಾಯಿ ಪಳನಿ ಅಮ್ಮಾಳನ್ನು ಕಳೆದುಕೊಂಡಿದ್ದಳು. ತಂದೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದರು. ಆಗ ಅವಳ ತಾತ ಮತ್ತು ಇಬ್ಬರು ಅಜ್ಜಿಯಂದಿರು ಆಕೆಯನ್ನು ಸಾಕಿ ಸಲಹಿದ್ದರು. ಕರಿಮಂಗಲಮ್ ಎಂಬ ಹಳ್ಳಿಯಲ್ಲಿ ವಾಸವಿದ್ದ ಈ ಕುಟುಂಬವು ದಲಿತ ಪರಯ್ಯಾ ಜಾತಿಗೆ ಸೇರಿತ್ತು. ಈ ಧರ್ಮಪುರಿ ಜಿಲ್ಲೆಯು ಇಂದಿಗೂ ಬಲಾಢ್ಯ ಮೇಲ್ಜಾತಿ ವಣ್ಣಿಯಾರ್ ಸಮುದಾಯದ ಹಿಡಿತದಲ್ಲಿದೆ.

ಕರಿಮಂಗಲಮ್ ಗ್ರಾಮದ ಬಹುಸಂಖ್ಯಾತರು ದಲಿತರೇ ಆಗಿದ್ದಾರೆ. ಇಲ್ಲಿನ ದಲಿತರ ಬಳಿ ಎಕರೆಗಟ್ಟಲೆ ಭೂಮಿ ಇದೆ. ಆದರೂ ಸೌಮ್ಯಳ ತಾತನ ಕುಟುಂಬ ಇಂದಿಗೂ ಕೂಲಿಯನ್ನೇ ನಂಬಿಕೊಂಡು ಜೀವಿಸುತ್ತಿದೆ. ಊರಿನ ಕಸ ಗುಡಿಸುವ ಹಾಗೂ ಮಲ ಬಾಚುವ ಕೆಲಸ ಈ ಕುಟುಂಬದ್ದಾಗಿದೆ.

ಇಂತಹ ಪರಿಸ್ಥಿತಿಯಲ್ಲಿಯೂ ಸೌಮ್ಯ 10ನೇ ತರಗತಿಯವರೆಗೆ ಓದಿದಳು. ಓದುತ್ತಲೇ ಸಾಧ್ಯವಾಗುವ ಕೂಲಿ ಕೆಲಸಕ್ಕೂ ಹೋಗಿ ಕುಟುಂಬಕ್ಕೆ ಸಹಾಯ ಮಾಡುತ್ತಿದ್ದಳು. ಆದರೆ ದೂರದೂರಿಗೆ ಹೋಗಿ ಓದಲಾಗದ ಶಕ್ತಿ ಇಲ್ಲದ ಕಾರಣ ಓದನ್ನು ಅರ್ಧಕ್ಕೆ ನಿಲ್ಲಿಸಿದಳು. ಇಲ್ಲಿನ ದಲಿತರು ಭೂಮಿ ಹೊಂದಿದ್ದರೂ ಬಹುತೇಕ ಎಲ್ಲಾ ತೀರ್ಮಾನವೂ ವಣ್ಣಿಯಾರರದ್ದೇ ಆಗಿತ್ತು. 2012ರಲ್ಲಿ ಅಂತರ್ಜಾತಿ ವಿವಾಹವಾದ ಕಾರಣಕ್ಕೆ 300 ದಲಿತರ ಮನೆಗಳನ್ನು ಸುಟ್ಟು ಕರಕಲಾಗಿಸಿದ್ದು ಇದೇ ಜಿಲ್ಲೆಯಲ್ಲಿಯೇ. ಈ ಗಲಭೆಯನ್ನು ಸಾವಿರ ಪೊಲೀಸರಿಗೂ ನಿಯಂತ್ರಿಸಲು ಆಗಿರಲಿಲ್ಲ.

ಹೀಗಿದ್ದ ಧರ್ಮಪುರಿ ಜಿಲ್ಲೆಯ ಕರಿಮಂಗಲಮ್ ಗ್ರಾಮದಲ್ಲಿ 19 ವರ್ಷದ ದಲಿತೆ ಸೌಮ್ಯಳಿಗೆ 17 ವರ್ಷದ ವಣ್ಣಿಯಾರ್ ಯುವಕ ಮನಿಷ್ ಕುಮಾರ್‌ನೊಂದಿಗೆ ಪ್ರೀತಿಯುಂಟಾಗುತ್ತದೆ. ಸನಾತನಿ ಧರ್ಮದ ಕಾನೂನಿನ ಪ್ರಕಾರ ಇದು ಸಾಧುವಲ್ಲದ ಪ್ರೇಮವಾಗಿದ್ದರೂ ಹೃದಯಕ್ಕೆ ಯಾವ ಜಾತಿ ಇದೆ ಹೇಳಿ? ದೇಶದ ಕಾನೂನಿನ ಪ್ರಕಾರವೂ ವಯಸ್ಸಿನ ತೊಡಕ್ಕಿತ್ತು! ಆದರೂ, ಇಬ್ಬರೂ ಒಬ್ಬರಿಗೊಬ್ಬರು ಬಹಳ ಹಚ್ಚಿಕೊಂಡುಬಿಟ್ಟಿದ್ದರು. ಇದೆಲ್ಲವನ್ನೂ ತಿಳಿಯದ ಜೋಡಿ ಊರುಬಿಟ್ಟು ದೂರ ತೆರಳಿ ಮದುವೆ ಆಗಿಬಿಟ್ಟರು. ಮನಿಷ್ ಕುಟುಂಬದ ಕಣ್ಣಿಗೆ ಬೀಳದಂತೆ ಅಲ್ಲಿಯೇ ಸುತ್ತಾಮುತ್ತಾ ಹಲವು ದಿನಗಳ ಕಾಲ ಜೀವನ ಸಾಗಿಸಿದರು. ಆದರೆ ವಣ್ಣಿಯಾರ್ ಕುಲದಲ್ಲಿ ಅಷ್ಟು ಸುಲಭಕ್ಕೆ ಬಿಡುವ ಮಾತೇ ಇಲ್ಲವಲ್ಲ! ತನ್ನ ಜಾತಿ ನೆಟ್‌ವರ್ಕ್ ಬಳಸಿಕೊಂಡು ಇಬ್ಬರನ್ನೂ ಹುಡುಕಲು ಹಚ್ಚಿತು. 90 ದಿನಗಳ ನಂತರ ಮನಿಷ್ ಮತ್ತು ಸೌಮ್ಯರನ್ನು ವಣ್ಣಿಯಾರ್ ಯುವಕರು ಪತ್ತೆ ಹಚ್ಚಿಬಿಟ್ಟರು. ಅದೂ ಪೊಲೀಸರ ನೆರವಿನಿಂದ ಮತ್ತು ಒಂದು ದೂರನ್ನೂ ದಾಖಲಿಸದಂತೆ!

ಬಲಾಢ್ಯ ವಣ್ಣಿಯಾರ್ ಕುಟುಂಬ ಸೌಮ್ಯಳಿಂದ ಮನಿಷನನ್ನು ದೂರ ಮಾಡುವುದರಲ್ಲಿ ಯಶಸ್ವಿಯಾಗುತ್ತದೆ. ಬಹುಶಃ ಮನಿಷ್ ಅಪ್ಪನ ಒಂದು ನೋಟಕ್ಕೆ ಸೌಮ್ಯ ತಣ್ಣಗಾಗಿರಬಹುದು. ಸೌಮ್ಯ ವಿಧಿ ಇಲ್ಲದೆ ತನ್ನ ತಾತನ ಬಳಿಗೆ ಮರಳುತ್ತಾಳೆ. ಆದರೆ ಪ್ರೀತಿ ಎಂಬುದು ಮಾತ್ರ ಮರಳುವುದಿಲ್ಲವಲ್ಲ! ಕೆಲವು ದಿನಗಳ ನಂತರ ಗಟ್ಟಿ ಮನಸ್ಸು ಮಾಡಿಕೊಂಡ ಸೌಮ್ಯ ಮನಿಷ್ ಮನೆಗೆ ಹೊರಟೇಬಿಡುತ್ತಾಳೆ. ’ನನ್ನ ಗಂಡ ನನಗೆ ಬೇಕು’ ಎಂದು ಅಂಗಲಾಚುತ್ತಾಳೆ. ’ಅವನನ್ನು ಒಮ್ಮೆ ಮಾತನಾಡಿಸಲು ಅವಕಾಶ ಕೊಡಿ’ ಎಂದು ಬೇಡಿಕೊಳ್ಳುತ್ತಾಳೆ. ಪಾಪ, ಸೌಮ್ಯಳ ಪ್ರೀತಿಗೆ ಪ್ರಪಂಚದ ಪರಿವೆಯೇ ಇರಲಿಲ್ಲ. ಮನೆಯೊಳಗಿಂದ ಹೊರಗಡೆ ಬಂದ ಮನಿಷ್‌ನನ್ನು ನೋಡಿ ಹರ್ಷಗೊಂಡ ಸೌಮ್ಯ ಇನ್ನೆಲ್ಲ ಕಷ್ಟವೂ ಕೊನೆಯಾಯಿತು ಎಂದುಕೊಳ್ಳುವಷ್ಟರಲ್ಲಿ, ಸ್ವತಃ ಮನಿಷ್ ’ನಿನಗೂ ನನಗೂ ಸಂಬಂಧವಿಲ್ಲ. ನಿನ್ನೊಂದಿಗೆ ಬಾಳಲು ನನಗಿಷ್ಟವಿಲ್ಲ’ ಎಂದುಬಿಡುತ್ತಾನೆ. ಅಲ್ಲಿಗೆ ಸೌಮ್ಯಳ ಕ್ಷಣದ ನಗು ಮಾಯವಾಗುತ್ತದೆ. ಹೌದು, ಅಲ್ಲಾಗಿದ್ದು ಅದೇ. ಕುಟುಂಬದ ಒತ್ತಡಕ್ಕೆ ಮಣಿದು ಮನಿಷ್ ಆ ಮಾತುಗಳನ್ನಾಡುತ್ತಿರಬಹುದು ಎಂದು ಭಾವಿಸಿದ ಸೌಮ್ಯ ಪೊಲೀಸ್ ಠಾಣೆಗೆ ಓಡಿಹೋಗುತ್ತಾಳೆ. ’ವಿಡುದಲೈ ಚಿರುತೈಗಳ್ ಕಚ್ಚಿ’ ರಾಜಕೀಯ ಪಕ್ಷ ಅವಳ ಬೆನ್ನಿಗೆ ನಿಲ್ಲುತ್ತದೆ. ಪೊಲೀಸರ ಬಳಿ ದೂರು ನೀಡಿದಾಗ, ಅವರು ’ಪಂಚಾಯ್ತಿ ಕಟ್ಟೆಯಲ್ಲಿ ತೀರ್ಮಾನ ಮಾಡ್ಕಳಮ್ಮ’ ಎನ್ನುತ್ತಾರೆ! ಆದರೆ ಅಪ್ರಾಪ್ತ ವಯಸ್ಕರಿಗೆ ಸಂಬಂಧಿಸಿದಂತೆ ಕಾನೂನು ಬೇರೆಯೇ ಹೇಳುತ್ತಿದೆ. ಎಪೆಕ್ಸ್ ಕೋರ್ಟ್ ಈ ವಿಷಯದಲ್ಲಿ ಸ್ಪಷ್ಟವಾಗಿ ತೀರ್ಪಿತ್ತಿದೆ. ಇಬ್ಬರನ್ನೂ ಪೊಲೀಸ್ ಕಸ್ಟಡಿಗೆ ತೆಗದುಕೊಂಡು ರಕ್ಷಣೆ ನೀಡಿ ರಿಮ್ಯಾಂಡ್ ರೂಮಿನಲ್ಲಿರಿಸಬೇಕೆಂಬ ಸ್ಪಷ್ಟ ಆದೇಶವಿದೆ. ಆದರೆ ಪೊಲೀಸರು ಈ ಜಾತಿವಾದಿ ನೆಲದವರಲ್ಲವೇ? ಸೌಮ್ಯಳ ಮಾತಿಗೆ ಬೆಲೆ ಕೊಡುವುದೇ ಇಲ್ಲ.

ಇದನ್ನೂ ಓದಿ: ಮಾತು ಮರೆತ ಭಾರತ-31; ಲಾಕ್‌ಡೌನ್ ಫೈಲ್ಸ್ : ಅಂಬೇಡ್ಕರ್ ಟಿ-ಶರ್ಟ್ ಜಾತಿ ಹೇಳಿತು

ಪಂಚಾಯ್ತಿ ಕಟ್ಟೆಗೆ ಸೌಮ್ಯಳ ಪ್ರೇಮ ಬಂದು ನಿಲ್ಲುತ್ತದೆ. ಫಲಿತಾಂಶ ಯಥಾವತ್ ಆಗುತ್ತದೆ. ಬಡವರ ಮಕ್ಕಳನ್ನು ದುಡ್ಡುಕೊಟ್ಟು ಸರಿ ಮಾಡಿಬಿಡುವ ಕುತಂತ್ರ ನಡೆಯುತ್ತದೆ. ಸೌಮ್ಯಳಿಗೆ ಇಂತಿಷ್ಟು ಹಣ ನೀಡಿಬಿಡುತ್ತೇವೆ ನಮ್ಮ ಮಗನ ತಂಟೆಗೆ ಬರಬಾರದು ಎಂಬ ತೀರ್ಮಾನವಾಗುತ್ತದೆ. ಇದರ ಪರವಾಗಿ ಮನಿಷ್ ಸಹ ನಿಂತುಬಿಡುತ್ತಾನೆ. ಹೆಣ್ಣುಜೀವ, ಅದು ಹೇಗೆ ತಡೆಯಬಲ್ಲದು? ಆಕಾಶವೇ ತಲೆ ಮೇಲೆ ಬಿದ್ದಂತಾಗುತ್ತದೆ. ಹಿಂದೆಮುಂದೆ ಯೋಚಿಸದೇ ಸೌಮ್ಯ ವಿಷ ಸೇವಿಸುತ್ತಾಳೆ. ಸತತವಾಗಿ 22 ದಿನಗಳ ಹೋರಾಟದಲ್ಲಿ ಸಾವು ಗೆಲ್ಲುತ್ತದೆ. ಪ್ರಾಮಾಣಿಕ ಪ್ರೀತಿ ಸೋಲುತ್ತದೆ.

ಇಂದು ಮನಿಷ್ ಕುಮಾರ್ ಮತ್ತು ಆತನ ಕುಟುಂಬದ ಮೇಲೆ ಕೇಸು ದಾಖಲಾಗಿದೆ. ನ್ಯಾಯಾಲಯ ಏನೆಂದು ತೀರ್ಪಿತ್ತಬಹುದೋ ಊಹಿಸಬಹುದಾಗಿದೆ. ಸೌಮ್ಯ ಮಾತ್ರ ತನ್ನ ಪ್ರಾಮಾಣಿಕ ಪ್ರೀತಿಯನ್ನು ಹೊತ್ತು ನೆಲದೊಳಗೆ ಮಲಗಿದ್ದಾಳೆ. ಅವಳಿಗೆ ಮನಿಷ್ ಮತ್ತೆ ಹಿಂದಿರುಗುವ ಕನಸಾದರೂ ಬೀಳಲಿ. ನಮಗೆ ಮನಿಷ್‌ನನ್ನು ಸೃಷ್ಟಿಸಿದ ಸಮಾಜದ ಬಗ್ಗೆ ಕಿಂಚಿತ್ತಾದರೂ ಕಣ್ಣು ಕೆಂಪಗಾಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...