Homeಪುಸ್ತಕ ವಿಮರ್ಶೆಪುಸ್ತಕ ಪರಿಚಯ: ಯಡೂರು ಮಹಾಬಲ ಅವರ ಜಯಪ್ರಕಾಶ ನಾರಯಣ ಬಾಲ್ಯದಿಂದ ಸಂಪೂರ್ಣ ಕ್ರಾಂತಿಯವರೆಗೆ - ಒಂದು...

ಪುಸ್ತಕ ಪರಿಚಯ: ಯಡೂರು ಮಹಾಬಲ ಅವರ ಜಯಪ್ರಕಾಶ ನಾರಯಣ ಬಾಲ್ಯದಿಂದ ಸಂಪೂರ್ಣ ಕ್ರಾಂತಿಯವರೆಗೆ – ಒಂದು ಮೌಲ್ಯಮಾಪನ

- Advertisement -
- Advertisement -

ಜಯಪ್ರಕಾಶ ನಾರಾಯಣ (ಜೆ.ಪಿ) ಅವರ ಹೆಸರು ಕೇಳಿದಾಕ್ಷಣ ನಮಗೆ ನೆನಪಾಗುವುದು 1970ರ ದಶಕದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೇಶದ ಜನರ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿದ್ದು, ಮತ್ತು ಜೆ.ಪಿಯವರ ನೇತೃತ್ವದಲ್ಲಿ ಅದಕ್ಕೆ ಪ್ರತಿರೋಧ ಉಂಟಾಗಿ 1977ರ ಸಾರ್ವತ್ರಿಕ ಚುನಾವಣೆಗಳಲ್ಲಿ ಅವರು ಸೋಲು ಕಂಡಿದ್ದು. ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಜೈಲುಪಾಲಾದ ಜೆ.ಪಿ. ಬಿಡುಗಡೆಗೊಂಡ ಮೇಲೆ ಎಲ್ಲ ವಿರೋಧ ಪಕ್ಷಗಳನ್ನು ಒಟ್ಟುಗೂಡಿಸಿ ಕಾಂಗ್ರೆಸ್ ಪಕ್ಷಕ್ಕೆ ಒಂದು ಪರ್ಯಾಯ ಶಕ್ತಿಯನ್ನು ಹುಟ್ಟುಹಾಕುವುದು ಸಾಧ್ಯ ಅನ್ನುವುದನ್ನು ತೋರಿಸಿದರು. ಆ ಸಂದರ್ಭದ ಅವರ ’ಸಂಪೂರ್ಣ ಕ್ರಾಂತಿ’ಯ ಪರಿಕಲ್ಪನೆ ಹಾಗೂ ಜೈಲು ದಿನಚರಿಗಳಿಂದಾಗಿ ದೇಶದಲ್ಲಿ ಮನೆಮಾತಾದ ಜೆ.ಪಿ. ಭಾರತದ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನೇ ಆರಂಭಿಸಿದರು. ಹೀಗಾಗಿ ಆಧುನಿಕ ಭಾರತದ ಇತಿಹಾಸದಲ್ಲಿ ಜೆ.ಪಿ.ಯವರು ಭದ್ರಸ್ಥಾನವನ್ನು ಪಡೆದುಕೊಂಡಿದ್ದಾರೆ.

ಆದರೆ ಜೆ.ಪಿ.ಯವರಿಗೆ ಸಂಬಂಧಪಟ್ಟಂತೆ ಇಷ್ಟು ಮಾತ್ರ ಇತಿಹಾಸವಲ್ಲ. ಇಂದಿರಾ ಗಾಂಧಿಯವರ ನಿರಂಕುಶಾಧಿಕಾರವನ್ನು ಎದುರಿಸುವುದಕ್ಕೊ ಮೊದಲೇ, ಅಂದರೆ 1947ರವರೆಗೂ ಈ ದೇಶದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿಯೂ ಸಕ್ರಿಯವಾಗಿದ್ದರು. ಆನಂತರವೂ ಅವರು ಅಂದಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರುರವರ ಟೀಕಾಕಾರರಾಗಿದ್ದರು. ಬಿಹಾರದ ಶ್ರೀಮಂತವೇ ಎನ್ನಬಹುದಾದ ಕುಟುಂಬದಲ್ಲಿ ಹುಟ್ಟಿದ ಜೆ.ಪಿ. ಒಳ್ಳೆಯ ಶಿಕ್ಷಣವನ್ನು ಪಡೆದರು; ಆಧುನಿಕ ಚಿಂತನೆಗೆ ತಮ್ಮನ್ನು ತಾವು ತೆರೆದುಕೊಂಡರು. ಹಾಗಾಗಿ ವಿದ್ಯಾರ್ಥಿ ದೆಸೆಯಲ್ಲಿಯೇ ಪ್ರಗತಿಪರ ಮನೋಧರ್ಮವನ್ನು ಮೈಗೂಡಿಸಿಕೊಂಡು ಸಮಾಜವಾದ ಮಾರ್ಕ್ಸ್‌ವಾದಗಳ ಕಡೆ ಆಕರ್ಷಿತರಾದರು. ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದು ಅದರೊಳಗಿನ ಸಮಾಜವಾದಿ ಗುಂಪಿನ ಮುಖ್ಯ ಸದಸ್ಯರೂ ಅಗಿದ್ದರು.

ಇಂದಿನ ಪೀಳಿಗೆಯವರಿಗೆ ಜೆ.ಪಿ. ಎಂದು ಮಾತ್ರ ತಿಳಿದಿರುವ ಜಯಪ್ರಕಾಶ ನಾರಾಯಣದ ಬೌದ್ಧಿಕ ಪಯಣದ ವಿವರಗಳು ಅಪರಿಚಿತವೆಂದೇ ಹೇಳಬೇಕು. ಯಡೂರ ಮಹಾಬಲ ಅವರು ಈ ಅವಶ್ಯಕತೆಯನ್ನು ಪೂರೈಸಿದ್ದಾರೆ. ಬ್ಯಾಂಕ್ ಅಧಿಕಾರಿಯಾಗಿ ನಿವೃತ್ತರಾದ ಮಹಾಬಲರವರು ಈಗಾಗಲೇ ಲೋಹಿಯಾರವರ ವಿಚಾರಗಳ ವಿಮರ್ಶೆಯ ಮೂಲಕ ಲೋಹಿಯಾವಾದಿಗಳ ಬಗ್ಗೆ, ಲೋಹಿಯಾವಾದದ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಜೆ.ಪಿಯವರ ಜೀವನ ಚರಿತ್ರೆಯಾಗಿರುವ ಈ ಕೃತಿಯೂ ಸಹ ಆ ಪ್ರಶ್ನೆಗಳ ಮುಂದುವರಿಕೆ ಎನ್ನಬಹುದು. ಅಲ್ಲದೆ ಈಶಾನ್ಯ ರಾಜ್ಯಗಳ ಹಿನ್ನೆಲೆಯಲ್ಲಿ ಭಾರತ-ಚೀನಾ ದೇಶಗಳ ಸಂಬಂಧಗಳ ಕುರಿತಾದ ಹಲವು ಗ್ರಂಥಗಳೂ ಅವರ ಲೇಖನಿಯಿಂದ ಹೊರಬಂದಿದೆ. ’ನಿಗೂಢ ಟಿಬೆಟ್, ’ಯುದ್ಧೋತ್ತರ ಕಾಂಡ’, ’ಅಕ್ಸಾಯ್ ಚಿನ್’ ಮುಂತಾದ ಕೃತಿಗಳೇ ಅಲ್ಲದೆ ’ಕ್ವಿಟ್ ಇಂಡಿಯಾ ಚಳವಳಿಯ ಒಳಗುಟ್ಟುಗಳು’ ಎಂಬ ಸ್ವಾತಂತ್ರ್ಯ ಹೋರಾಟದ ಕುರಿತಾದ ಪುಸ್ತಕವನ್ನೂ ರಚಿಸಿ ಮಹಾಬಲರು ಪ್ರಕಟಿಸಿದ್ದಾರೆ.

ಇದನ್ನೂ ಓದಿ: ಪುಸ್ತಕ ಪರಿಚಯ: ನನ್ನ ಸಂಗೀತ ವ್ಯಾಸಂಗ (ಆತ್ಮಕಥೆ)

ಯಾವುದೇ ವಿಷಯದ ಕುರಿತು ಬರೆಯಲಿ, ಮಹಾಬಲ ಅವರ ಆ ಪ್ರಯತ್ನದಲ್ಲಿ ಸಾಕಷ್ಟು ಓದು, ಸಂಶೋಧನೆಗಳು ಇರುವುದು ಸ್ಪಷ್ಟವಾಗಿ ಕಾಣುತ್ತದೆ. ಸಂಶೋಧನೆಯ ಫಲವಾಗಿ ಅವರು ಸಾಧಾರಣಕ್ಕಿಂತ ಭಿನ್ನವಾದ ತೀರ್ಮಾನಗಳಿಗೆ ಬರುತ್ತಾರೆ, ಆ ಮೂಲಕ ಓದುಗರಲ್ಲಿ ಹೊಸ ಪ್ರಶ್ನೆಗಳನ್ನು ಮೂಡಿಸುತ್ತಾರೆ.

ಜೆ.ಪಿಯವರ ಬಗೆಗಿನ ಈ ಕೃತಿಯೂ ಸಹ ಮಹಾಬಲರ ಸಂಶೋಧನೆಯ ಮತ್ತೊಂದು ಫಲ. ಜೆ.ಪಿ.ಯವರ ಬಾಲ್ಯ, ವಿದ್ಯಾಭ್ಯಾಸ, ಕೌಟುಂಬಿಕ ಜೀವನ, ರಾಜಕಾರಣ ಮುಂತಾದವುಗಳನ್ನು ಹಲವು ಆಕರಗಳ ಅಧ್ಯಯನದ ಮೂಲಕ ಪ್ರಸ್ತುತಪಡಿಸಲಾಗಿದೆ. ಅಲ್ಲದೆ, ಆ ಜೀವನದ ವಿವರಗಳನ್ನು ನೀಡುವಾಗಲೇ ಆಯಾ ಸಂದರ್ಭಗಳಲ್ಲಿನ ಜೆ.ಪಿ.ಯವರ ನಿಲುವುಗಳ ಮೌಲ್ಯಮಾಪನವನ್ನು ಮಹಾಬಲರು ನಡೆಸಿದ್ದಾರೆ. ಹೀಗೆ ಮಾಡುವಲ್ಲಿ ಇವರು ಯಾವ ಮುಲಾಜನ್ನು ತೋರುವುದಿಲ್ಲ; ಸರಿಯಾದ ತೀರ್ಮಾನಗಳನ್ನು ಹೊಗಳುವಂತೆಯೇ ವೈರುಧ್ಯಗಳಿಂದ ಕೂಡಿದ, ಅಥವಾ ಆ ಸಂದರ್ಭಕ್ಕೆ ಸರಿಹೊಂದದ ತೀರ್ಮಾನವನ್ನು ಅಷ್ಟೇ ಕಟುವಾಗಿ ಟೀಕಿಸುತ್ತಾರೆ.

ಕಾಂಗ್ರೆಸ್ ಪಕ್ಷದ ಸಮಾಜವಾದಿ ಗುಂಪಿನ ಸಕ್ರಿಯ ಸದಸ್ಯರಾಗಿದ್ದಾಗ ಜೆ.ಪಿ.ಯವರ ನಿಲುವುಗಳಿಗೂ, ನಂತರದ ಘಟ್ಟದ ಅವರ ನಿಲುವುಗಳಿಗೂ ಇರುವ ವೈರುಧ್ಯವನ್ನು ಎತ್ತಿತೋರಿಸುತ್ತಾರೆ. ಸ್ವಾತಂತ್ರ್ಯ ಬಂದ ಹೊಸದರಲ್ಲಿ ಆರ್.ಎಸ್.ಎಸ್. ಕುರಿತ ಅವರ ವಿಮರ್ಶೆಗಳಿಗೂ ತುರ್ತು ಪರಿಸ್ಥಿತಿಯ ನಂತರ ಅದೇ ಸಂಘಟನೆಯ ಬಗ್ಗೆ ಬದಲಾದ ಅಭಿಪ್ರಾಯಗಳಿಗೂ ಒಂದಕ್ಕೊಂದು ತಾಳೆಯಾಗುವುದಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ನಿರೂಪಿಸುತ್ತಾರೆ.

ಮಾತ್ರವಲ್ಲದೆ ಜೆ.ಪಿ.ಯವರ ಸಮಕಾಲೀನರಾದ ಹಲವಾರು ರಾಜಕಾರಣಿಗಳು, ಆ ಕಾಲದ ಪ್ರಮುಖ ಬೆಳವಣಿಗೆಗಳು ಸಹ ಮಹಾಬಲರ ಪರಿಶೀಲನೆಯ ವಸ್ತುಗಳಾಗಿವೆ. ಸಾಮಾಜಿಕ ಬದಲಾವಣೆಗಾಗಿ ನಿರಂತರ ತುಡಿಯುತ್ತಿದ್ದ ಮನಸ್ಸುಳ್ಳ ಜೆ.ಪಿ.ಯವರ ನಿಲುವುಗಳು ಅವರ ಇಂಥ ತುಡಿತದ ಕಾರಣದಿಂದಲೇ ಕಾಲಕಾಲಕ್ಕೆ ಪರಸ್ಪರ ವಿರುದ್ಧವೆನಿಸುವ ರೀತಿಯಲ್ಲಿ ಬದಲಾಗುತ್ತಿದ್ದವೇನೋ ಎನ್ನುವ ಭಾವನೆಯನ್ನೂ ಮಹಾಬಲರ ಈ ಕೃತಿ ಹುಟ್ಟಿಸುತ್ತದೆ. ’ಸಂಪೂರ್ಣ ಕ್ರಾಂತಿ’ಯನ್ನು ಸದರಿ ಪುಸ್ತಕದ ಲೇಖಕರು ’ಸಂಪೂರ್ಣ ಭ್ರಾಂತಿ’ ಎಂತಲೂ ಕರೆಯುತ್ತಾರೆ ಮತ್ತು ಅದಕ್ಕೆ ಕಾರಣಗಳನ್ನು ಒದಗಿಸುತ್ತಾರೆ.

ಮಹಾಬಲರ ತೀರ್ಮಾನಗಳನ್ನು, ಮೌಲ್ಯಮಾಪನವನ್ನು ಓದುಗರು ಒಪ್ಪಬಹುದು ಅಥವಾ ಒಪ್ಪದಿರಬಹುದು. ಆದರೆ ಜೆ.ಪಿ.ಯವರಂತಹ ಪ್ರಮುಖ ವ್ಯಕ್ತಿಯ ಜೀವನದ ವಿವರಗಳನ್ನು ಅದರ ಎಲ್ಲ ಸಂಕೀರ್ಣತೆಗಳೊಂದಿಗೆ ತಿಳಿಯಲು ಈ ಕೃತಿ ಸಹಾಯಕವಾಗುತ್ತದೆ. ಜೆ.ಪಿ.ಯವರ ಬಗೆಗಿನ ಓದುಗರ ಮೌಲ್ಯಮಾಪನವನ್ನೇ ಮೌಲ್ಯಮಾಪನ ಮಾಡುವಂತೆ ಈ ಪುಸ್ತಕ ಪ್ರೇರೇಪಿಸುತ್ತದೆ; ಈ ಕಾರಣಗಳಿಗಾಗಿ ಇದೊಂದು ಓದಬೇಕಾದ ಪುಸ್ತಕ.

ಮುಗಿಸುವ ಮುನ್ನ ಒಂದು ಮಾತು; ಮಹಾಬಲರು ಕೈಗೆತ್ತಿಕೊಂಡಿರುವ ವಿಷಯಗಳು ಮೌಲಿಕವಾದವು. ಅವುಗಳು ಎಲ್ಲರನ್ನೂ ಸುಲಭವಾಗಿ ತಟ್ಟಬೇಕೆಂದರೆ ಮಹಾಬಲರ ಭಾಷೆಯ ಬಳಕೆ ಇನ್ನಷ್ಟ ಉತ್ತಮಗೊಳ್ಳಬೇಕಿದೆ; ಆಗ ಈ ಪುಸ್ತಕವು ಸೇರಿದಂತೆ ಅವರ ಅನೇಕ ಕೃತಿಗಳನ್ನು ಓದುಗರು ಸುಲಭವಾಗಿ ದಕ್ಕಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಅವರು ತಮ್ಮ ವಿಷಯಮಂಡನೆ ಮತ್ತು ಬರವಣಿಗೆಯ ಶೈಲಿಯಲ್ಲಿ ಇನ್ನಷ್ಟು ಪ್ರಯೋಗಗಳನ್ನು ನಡೆಸಿ ಉತ್ತಮಪಡಿಸಿಕೊಂಡರೆ ಅವರ ಕೃತಿಗಳ ಮೌಲ್ಯ ಮತ್ತಷ್ಟು ಹೆಚ್ಚುವುದರಲ್ಲಿ ಅನುಮಾನವಿಲ್ಲ.

ಪ್ರೊ. ನಗರಗೆರೆ ರಮೇಶ್

ಪ್ರೊ. ನಗರಗೆರೆ ರಮೇಶ್
ನಗರಗೆರೆ ರಮೇಶ್ ಅವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ನಗರಗೆರೆಯವರು. ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದು ನಂತರ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದಾರೆ. ಮಾನವ ಹಕ್ಕು ಸಂಘಟನೆಯಾದ ಪ್ರಜಾತಾಂತ್ರಿಕ ಜನರ ವೇದಿಕೆ ಮೊದಲಾದವುಗಳ ಭಾಗವಾಗಿದ್ದಾರೆ. ಎಲ್ಲ ಜನಪರ ಚಳವಳಿಗಳ ದೀರ್ಘಕಾಲದ ಒಡನಾಡಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: 43ಲಕ್ಷದಲ್ಲಿ ನೋಟಿಸ್ ತಲುಪಿರುವುದು 25ಲಕ್ಷ ಜನರಿಗೆ ಮಾತ್ರ, ಬಾಕಿ 18ಲಕ್ಷ ಜನರಿಗೆ ಇನ್ನು ನೋಟಿಸ್ಸೇ ತಲುಪಿಲ್ಲ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಆಡಳಿತಾತ್ಮಕ ಗೊಂದಲ ಹಾಗೂ ಯಾಂತ್ರಿಕ ಲೋಪಗಳ ಜಾಲದಲ್ಲಿ ಸಿಲುಕಿಬಿದ್ದಿದೆ. ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿರುವ ಇತ್ತೀಚಿನ ದತ್ತಾಂಶವೇ ಆಯೋಗದ...

ಕಾಳಿಘಾಟ್‌ನಲ್ಲಿ ‘ಮೀನಿನ ಪ್ರಸಾದ’ ಸ್ವೀಕರಿಸಿದ ಸುವೇಂದು ಅಧಿಕಾರಿ; ಬಾಗೇಶ್ವರ್ ಬಾಬಾ ‘ಮಾಂಸಾಹಾರ’ ವಿವಾದಕ್ಕೆ ಹೊಸ ತಿರುವು!

ದುರ್ಗಾ ಪೂಜೆ ಸಂದರ್ಭದಲ್ಲಿ ಮೀನು–ಮಾಂಸ ಸೇವನೆ ಕುರಿತು ಬಾಗೇಶ್ವರ್ ಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿರುವ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ವಿವಾದಕ್ಕೆ ಕಾರಣವಾಗಿರುವ ನಡುವೆಯೇ, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕಾಳಿಘಾಟ್ʼನ ಕಾಳಿ ದೇವಸ್ಥಾನದಲ್ಲಿ...

ಎಸ್‌ಐಆರ್‌: ಹೈದರಾಬಾದ್, ಸಿಕಂದರಾಬಾದ್‌ನಲ್ಲಿ ಲಕ್ಷಾಂತರ ಮತದಾರರ ಹೆಸರು ಅಳಿಸುವಿಕೆ; 2029ರ ಚುನಾವಣೆಗೂ ಮುನ್ನ ಗಂಭೀರ ಆತಂಕ

ಹೈದರಾಬಾದ್: ತೆಲಂಗಾಣದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಭಾರೀ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಲಾಗಿರುವುದು ಮುಂದಿನ ಚುನಾವಣೆಯ ರಾಜಕೀಯ ಲೆಕ್ಕಾಚಾರಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯನ್ನು ಹುಟ್ಟುಹಾಕಿದೆ....

9/11 ದಾಳಿಗೆ 25 ವರ್ಷ: ‘ಭಯೋತ್ಪಾದನೆ ವಿರುದ್ಧದ ಯುದ್ಧ’ ಮತ್ತು ಕುಸಿದ ಪ್ರಜಾಪ್ರಭುತ್ವದ ಮೌಲ್ಯಗಳು

ನ್ಯೂಯಾರ್ಕ್‌ನ ಪ್ರತಿಷ್ಠಿತ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರಗಳ ಮೇಲೆ ನಡೆದ ಭೀಕರ ಭಯೋತ್ಪಾದನಾ ದಾಳಿಗೆ ಇಂದಿಗೆ ಭರ್ತಿ 25 ವರ್ಷಗಳು ತುಂಬಿವೆ. ಈ ಕಾಲು ಶತಮಾನದ ಅವಧಿಯಲ್ಲಿ 'ಭಯೋತ್ಪಾದನೆ ವಿರುದ್ಧದ ಜಾಗತಿಕ...

‘ಈ ಪ್ರಕ್ರಿಯೆಯೇ ಶಿಕ್ಷೆಯಾಗಿದೆ’: ಉಮರ್ ಖಾಲಿದ್ ದೀರ್ಘ ಜೈಲುವಾಸದ ಬಗ್ಗೆ ಮಾಜಿ ನ್ಯಾಯಮೂರ್ತಿ ದೀಪಕ್ ಗುಪ್ತಾ ತೀವ್ರ ಟೀಕೆ

ನವದೆಹಲಿ: ಮಾನವ ಹಕ್ಕುಗಳ ಕಾರ್ಯಕರ್ತ, ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರ ದೀರ್ಘಕಾಲದ ವಿಚಾರಣಾಪೂರ್ವ ಬಂಧನ, ಎಲ್ಗರ್ ಪರಿಷತ್ ಪ್ರಕರಣದ ಆರೋಪಿಗಳ ವರ್ಷಗಳ ಜೈಲುವಾಸ ಹಾಗೂ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಾಂಗದ...

‘ದೇಶವಿರೋಧಿ ಮನಸ್ಥಿತಿಯಲ್ಲ’: ಜಿ.ಎನ್. ಸಾಯಿಬಾಬಾ ಸ್ಮರಣೆ ಪ್ರಕರಣದಲ್ಲಿ ‘ಟಿಸ್’ ಮಾಜಿ ವಿದ್ಯಾರ್ಥಿಗೆ ಜಾಮೀನು!

ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ದಿವಂಗತ ಜಿ.ಎನ್. ಸಾಯಿಬಾಬಾ ಅವರ ಸ್ಮರಣಾರ್ಥ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (TISS) ಕ್ಯಾಂಪಸ್‌ನಲ್ಲಿ ನಡೆದ ಅನುಮತಿರಹಿತ ಕಾರ್ಯಕ್ರಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ವಿದ್ಯಾರ್ಥಿ...

ಜನಾಕ್ರೋಶದ ನಡುವೆಯೇ ಎಸ್ಐಆರ್ ಸಮರ್ಥಿಸಿಕೊಂಡ ಮುಖ್ಯ ಚುನಾವಣಾ ಆಯುಕ್ತ: ‘ರಾಜಕೀಯ ದಾಳಿಗಳಿಂದ ಆಯೋಗ ವಿಚಲಿತವಾಗದು’ ಎಂದ ಜ್ಞಾನೇಶ್ ಕುಮಾರ್

ಅಹಮದಾಬಾದ್: ದೇಶದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ರಾಜಕೀಯ ಪಕ್ಷಗಳು, ನಾಗರಿಕ ಸಂಘಟನೆಗಳು ಹಾಗೂ ವಿವಿಧ ವಲಯಗಳಿಂದ ತೀವ್ರ ಟೀಕೆಗಳು ವ್ಯಕ್ತವಾಗುತ್ತಿರುವ ನಡುವೆಯೇ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...

ಕರ್ನಾಟಕ ಎಸ್ಐಆರ್: ಹೆಸರಿನ ಸಣ್ಣ ವ್ಯತ್ಯಾಸಕ್ಕಾಗಿ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ನೋಟಿಸ್; ‘ಸುಳ್ಳು ಮಾಹಿತಿ ನೀಡಿದರೆ ಜೈಲು’ ಎಂಬ ಬೆದರಿಕೆ

ಮೈಸೂರು: ಸುಮಾರು ಮೂರೂವರೆ ದಶಕಗಳ ಕಾಲ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಿ, ಸ್ವತಃ ಚುನಾವಣಾ ಪ್ರಕ್ರಿಯೆಯ ಜವಾಬ್ದಾರಿಯುತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರೇ ಇದೀಗ ತಮ್ಮ...

SIR : ತಾಯಿಯೊಂದಿಗೆ ಮ್ಯಾಪಿಂಗ್ ಮಾಡಿದರೂ ಅಜ್ಜನ ವಯಸ್ಸಿನ ವ್ಯತ್ಯಾಸದ ನೆಪ ಹೇಳಿ ನೋಟಿಸ್ ನೀಡಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ದಿನಕ್ಕೊಂದು ವಿಲಕ್ಷಣ ಹಾಗೂ ಯಾಂತ್ರಿಕ ದೋಷಗಳನ್ನು ಹೊರಹಾಕುತ್ತಿದ್ದು, ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಲು ಬಯಸುವ ನೈಜ ಮತದಾರರನ್ನು ಆತಂಕಕ್ಕೆ ತಳ್ಳುತ್ತಿದೆ. ಬ್ಯಾಟರಾಯನಪುರ...

ಬ್ಯಾಂಕ್ ಮುಷ್ಕರ: ದೇಶಾದ್ಯಂತ ಶಾಖಾ ಸೇವೆಗಳಿಗೆ ಅಡಚಣೆ; ವಾರಾಂತ್ಯ, ಗಣೇಶ ಚತುರ್ಥಿಯಿಂದ ಹಲವು ದಿನ ಸೇವೆ ವ್ಯತ್ಯಯ 

ನವದೆಹಲಿ: ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಕರೆ ನೀಡಿರುವ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಸೆಪ್ಟೆಂಬರ್ 11ರಂದು (ಇಂದು) ನಡೆಯುತ್ತಿದ್ದು, ದೇಶದಾದ್ಯಂತ ಬ್ಯಾಂಕ್ ಗ್ರಾಹಕರ ಸಾಮಾನ್ಯ ಸೇವೆಗಳ ಮೇಲೆ ಪರಿಣಾಮ ಬೀರುವ...