Homeಅಂಕಣಗಳುಅಮೆರಿಕದಲ್ಲಿ ಬಲಪಂಥೀಯರ ಚುನಾವಣಾ ವಿಷಯವಾಗುತ್ತಿರುವ ‘ಆ್ಯಂಟಿ ವೋಕ್'!

ಅಮೆರಿಕದಲ್ಲಿ ಬಲಪಂಥೀಯರ ಚುನಾವಣಾ ವಿಷಯವಾಗುತ್ತಿರುವ ‘ಆ್ಯಂಟಿ ವೋಕ್’!

- Advertisement -
- Advertisement -

ದಿಲ್ಬರ್ಟ್ ಮತ್ತು ರೋಲ್ಡ್ ಡಾಲ್ ಹಾಗೂ ಎಚ್ಚೆತ್ತ ಮಾಧ್ಯಮಗಳ ಬಗ್ಗೆ ಕಳೆದ ವಾರ ಬರೆದ ಸಂಪಾದಕೀಯದಲ್ಲಿ, ಈ ಎಚ್ಚರಿಕೆಯನ್ನು ’ವೋಕ್ ಸಂಸ್ಕೃತಿ’ ಅಥವಾ ’ವೋಕಿಸಂ’ ಎಂಬ ಬಗೆದು ಹೀಗಳೆಯಲು ಹಲವರು ಪ್ರಯತ್ನಿಸುವ ಬಗ್ಗೆ ಪ್ರಸ್ತಾಪಿಸಿ ಲೇಖನವನ್ನು ಕೊನೆಗೊಳಿಸಲಾಗಿತ್ತು. ’ವೋಕ್-ವಿರೋಧಿ’ ಅಭಿಯಾನವನ್ನೇ ಪ್ರಧಾನವಾಗಿಟ್ಟುಕೊಂಡು ಯುಎಸ್‌ಎನ ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ಅಭ್ಯರ್ಥಿಯಾಗಲು ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಪ್ರಚಾರವನ್ನು ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ವಿವೇಕ್ ಬಗ್ಗೆ ಸುದೀರ್ಘ ಲೇಖನವನ್ನು ಪ್ರಕಟಿಸಿದ್ದ ನ್ಯೂಯಾರ್ಕರ್ ಪತ್ರಿಕೆ ಅವರನ್ನು ’ಆಂಟಿ ವೋಕ್ ಇಂಕ್’ ಸಿಇಒ ಎಂದು ಕರೆದಿತ್ತು. 21ನೇ ಶತಮಾನದಲ್ಲಿ ಜನಾಂಗ, ಲಿಂಗತ್ವ, ಹವಾಮಾನ, ಸವಲತ್ತು, ಪ್ರಾತಿನಿಧ್ಯ ಮುಂತಾದ ಸಂಗತಿಗಳ ಬಗ್ಗೆ ಸಮಾಜ ಎಚ್ಚೆತ್ತುಕೊಳ್ಳುತ್ತಿರುವ ಅಥವಾ ಎಚ್ಚರಗೊಳ್ಳಬೇಕಿರುವ ಆಶಯದ ವಿರುದ್ಧ ಹೂಡಿರುವ ಈ ’ವೋಕ್-ವಿರೋಧಿ’ ಅಭಿಯಾನ ದಿನೇದಿನೇ ಬಲಪಂಥೀಯ ಮಾಧ್ಯಮಗಳಲ್ಲಿ ರಾರಾಜಿಸುತ್ತಿದೆ. ಅಮೆರಿಕದ ತೀವ್ರ ಬಲಪಂಥೀಯ ಟಿವಿ ಚಾನೆಲ್ ಆದ ಫಾಕ್ಸ್ ನ್ಯೂಸ್ ಕಾರ್ಯಕ್ರಮಗಳಲ್ಲಿ ವಿವೇಕ್ ರಾಮಸ್ವಾಮಿ ಕಾಯಂಆಗಿ ಹೋಗಿದ್ದಾರೆ ಎನ್ನುತ್ತವೆ ವರದಿಗಳು.

ಸ್ಯಾಂಪಲ್‌ಗೆ ವಿವೇಕ್ ಅವರ ಒಂದು ಟ್ವೀಟ್ ನೋಡಿ: “ನಾನು ಅಧ್ಯಕ್ಷನಾಗಿ, ಫೆಡೆರಲ್ ಕಾನೂನಾದ (ಯುಎಸ್‌ಎ ರಾಷ್ಟ್ರ ಮತ್ತು ರಾಜ್ಯಗಳು ಸೇರಿ ಮಾಡಿರುವ) ’ಅಫರ್ಮೆಟಿವ್ ಆಕ್ಷನ್’ ಅನ್ನು (ಅಂದರೆ, ಜನಾಂಗೀಯ ತಾರತಮ್ಯ ಕೊನೆಗಾಣಿಸಲು ನೀಡುವ ಮೀಸಲಾತಿ) ಕೊನೆಗೊಳಿಸುತ್ತೇನೆ. ಜನಾಂಗದ ಆಧಾರದ ಮೇಲೆ ಮೀಸಲಾತಿ ನೀಡುವ ಲಿಂಡನ್ ಜಾನ್ಸನ್ ಕಾರ್ಯಾಂಗ ಆದೇಶ 11246ವನ್ನು ವಾಪಸ್ ತೆಗೆದುಕೊಳ್ಳುತ್ತೇನೆ. ಜಾನ್ಸನ್ ನಂತರ ಪ್ರತಿ ರಿಪಬ್ಲಿಕನ್‌ಗೆ ಈ ಕೆಲಸ ಮಾಡುವ ಅವಕಾಶವಿತ್ತು. ನಾನು ಯಾವುದೇ ಕ್ಷಮೆ ಕೇಳದೆ ಮಾಡುತ್ತೇನೆ” ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ “ಪ್ರತಿಭೆ, ಶ್ರೇಷ್ಠತೆ, ಸ್ವ-ಆಡಳಿತ, ಮುಕ್ತ ಅಭಿವ್ಯಕ್ತಿ. ಇದು ಹೊಸ ಅಮೆರಿಕನ್ ಡ್ರೀಮ್ ಎಂದು ಬರೆದುಕೊಳ್ಳುತ್ತಾರೆ. ಯಾವ ಮೌಲ್ಯಗಳನ್ನು ಮರುಮೌಲ್ಯಮಾಪನ ಮಾಡಿ ಸಮಾನತೆ, ಪ್ರಾತಿನಿಧ್ಯದ ಕಡೆಗೆ ಚಲಿಸಬೇಕೆಂದು ಎಚ್ಚೆತ್ತ ಮನಸ್ಸುಗಳು ತುಡಿಯುತ್ತಿವೆಯೋ ಅವನ್ನೆಲ್ಲಾ ಅವಮಾನಿಸಿ ವಿರೋಧಿಸುವ ಅಭಿಯಾನವೇ ’ಆ್ಯಂಟಿ ವೋಕಿಸಂ’. ಹವಾಮಾನ ಬದಲಾವಣೆಯ ಬಗ್ಗೆ ಕಾಳಜಿ, ಜನಾಂಗೀಯ ನಿಂದನೆಯ ಬಗ್ಗೆ ಕಠಿಣ ಕ್ರಮಗಳು, ಜನ ಕಲ್ಯಾಣ ಯೋಜನೆಗಳು – ಹೀಗೆ ಜನಪರ ನೀತಿಗಳನ್ನೆಲ್ಲಾ ತೊಡೆದುಹಾಕಿ ’ಅಮೆರಿಕ ಫಸ್ಟ್’ ಎನಿಸಿಕೊಳ್ಳಬೇಕೆನ್ನುವ ’ಹುಸಿ ಶ್ರೇಷ್ಠತೆಯ’ ಧೋರಣೆಯೇ ಇದರ ಮೊದಲ ಆದ್ಯತೆ. ಮುಕ್ತ ಅಭಿವ್ಯಕ್ತಿ ಎಂಬುದು ಜವಾಬ್ದಾರಿ ಹೊತ್ತುಕೊಳ್ಳದ ಅಭಿವ್ಯಕ್ತಿ ಸ್ವಾತಂತ್ರ್ಯವಾಗಿ ಉಳಿಯಬೇಕೆಂಬ ವಾದ ಇವರದ್ದು. ಯಾವುದೇ ಮಟ್ಟದಲ್ಲಿ ಕೂಡ ಜನಾಂಗೀಯ, ಅಲ್ಪಸಂಖ್ಯಾತರ, ಮಹಿಳೆಯರ ಅವಮಾನ-ನಿಂದನೆಯನ್ನು ಮಾಡಲು ಸ್ವಾತಂತ್ರ್ಯ ಇರಬೇಕೆಂಬುದು ಇವರ ಫ್ರೀ ಸ್ಪೀಚ್ ವಾದದ ಉದ್ದೇಶ!

ಇದನ್ನೂ ಓದಿ: ದಿಲ್ಬರ್ಟ್, ರೋಲ್ಡ್ ಡಾಲ್ ಮತ್ತು ಎಚ್ಚೆತ್ತ ಮಾಧ್ಯಮಗಳ ಸುತ್ತ…

ಈ ವಿವೇಕ್ ರಾಮಸ್ವಾಮಿಯ ಕುಟುಂಬದವರು ಕೇರಳ ಮೂಲದ ಬ್ರಾಹ್ಮಣ ಜಾತಿಗೆ ಸೇರಿದವರು. ಇಲ್ಲಿನ ಬ್ರಾಹ್ಮಣ್ಯದ ’ಶ್ರೇಷ್ಠತೆಯ’ ಬಲಪಂಥೀಯತೆ ಮತ್ತು ಅಮೆರಿಕದಲ್ಲಿ ಹುಟ್ಟಿ ಬೆಳೆದು ಮೈಗೂಡಿಸಿಕೊಂಡಿರುವ ಕಾರ್ಪೊರೆಟ್ ಸಂಸ್ಕೃತಿಯ ಬಲಪಂಥೀಯತೆ ಒಟ್ಟಿಗೆ ಸೇರಿ ವಿವೇಕ್ ಅಮೆರಿಕದಲ್ಲಿ ಹೊಸ ಬಗೆಯ ಧ್ರುವೀಕರಣಕ್ಕೆ ನಾಂದಿ ಹಾಡುತ್ತಿದ್ದಾರೆ; ಡೊನಾಲ್ಡ್ ಟ್ರಂಪ್ ಮಾಡಿದ ಡ್ಯಾಮೇಜ್ ಏನೇನೂ ಸಾಲದೆಂಬಂತೆ. ಇಂತಹ ’ವೋಕ್-ಎಚ್ಚರ’ದ ವಿರುದ್ಧದ ಅಭಿಯಾನ ಮೀಸಲಾತಿ ವಿರೋಧಿಯಾಗಿ, ಖಾಸಗೀಕರಣದ ಪ್ರತಿಪಾದಕನಾಗಿ, ದೈತ್ಯ ಕಾರ್ಪೊರೆಟ್ ಕುಳಗಳ ಸಂರಕ್ಷರರಾಗಿ ಬೇರೆಬೇರೆ ಅವತಾರಗಳಲ್ಲಿ ಭಾರತದಲ್ಲಿಯೂ ನಮಗೆ ಕಾಣಸಿಗುತ್ತದೆ. ಅದು ಮುಂದೆ ಇನ್ನೂ ತೀವ್ರವಾಗುವುದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಆಧುನಿಕ ಜಗತ್ತಿಗೆ ಬೇಕಾದ ಸಮಾನತೆಯ ಮೌಲ್ಯಗಳನ್ನು ಉಳಿಸಿಕೊಳ್ಳುವ ಬಗ್ಗೆ ಕಾಳಜಿಯನ್ನು ಸ್ವಲ್ಪವಾದರೂ ಉಳಿಸಿಕೊಂಡಿರುವ ರಾಜಕೀಯ ಪಕ್ಷಗಳು, ನಾಗರಿಕ ಸಮಾಜ ಮತ್ತು ನಾಗರಿಕ ಹಕ್ಕುಗಳ ಹೋರಾಟ ಗುಂಪುಗಳು ಸಕ್ರಿಯವಾಗಬೇಕಿದೆ.

2014ರಲ್ಲಿ ಕಪ್ಪು ವ್ಯಕ್ತಿಯೊಬ್ಬನನ್ನು ಅಮೆರಿಕದ ಪೊಲೀಸನೊಬ್ಬ ಕೊಂದಿದ್ದು ’ಬ್ಲಾಕ್ ಲೈವ್ಸ್ ಮ್ಯಾಟರ್‍ಸ್’ ಪ್ರತಿಭಟನೆಗಳಿಗೆ ಕಾರಣವಾಗಿತ್ತು. ಆಗ ’ಸ್ಟೇ ವೋಕ್’ ಅಥವಾ ’ವೋಕ್’ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತು. 2020ರಲ್ಲಿ ಯುಎಸ್‌ಎನ ಪೊಲೀಸನೊಬ್ಬ ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ವ್ಯಕ್ತಿಯನ್ನು ಕತ್ತುಹಿಸುಕಿ ಸಾರ್ವಜನಿಕವಾಗಿಯೇ ಹತ್ಯೆ ಮಾಡಿದಾಗ ’ಬ್ಲಾಕ್ ಲೈವ್ಸ್ ಮ್ಯಾಟರ್‍ಸ್’ ತೀವ್ರ ಸ್ವರೂಪ ಪಡೆದುಕೊಂಡಿತು. ಇದು ಜಗತ್ತಿನಾದ್ಯಂತ ಜನಾಂಗೀಯ ಹಿಂಸೆಗಳ ಬಗ್ಗೆ ಚರ್ಚೆಗೆ ಕಾರಣವಾಯಿತು. ಜನಾಂಗೀಯ ನಿಂದನೆ ಮತ್ತು ಹಿಂಸೆಗಳ ಬಗ್ಗೆ ಜಾಗೃತಿ ತಳೆಯುವಂತೆ ಯುವ ಸಮುದಾಯವನ್ನು ಪ್ರಚೋದಿಸಿತು. ಭಾರತದಲ್ಲಿ ಜಾತಿನಿಂದನೆ ಮತ್ತು ಹಿಂಸೆಯ ಬಗ್ಗೆಗೂ ಚರ್ಚೆಗಳಾದವು. ಕೆಲಸದ ಸ್ಥಳಗಳಲ್ಲಿ ಜನರು ಹೆಚ್ಚು ಸಂವೇದನಾಶೀಲರಾಗಲು ತಳಸಮುದಾಯಗಳಿಂದ ಆಗ್ರಹ ಮೂಡಿಬಂತು. ಆಗ ಶೋಷಕ ಸಮುದಾಯಕ್ಕೆ ಸೇರಿದ ಕೆಲವರಾದರೂ ಎಚ್ಚೆತ್ತು ಸ್ಪಂದಿಸಲು ಪ್ರಾರಂಭಿಸಿದರು. ಅದರ ಜೊತೆಗೇ ಈ ಎಚ್ಚೆತ್ತ ಪ್ರಜ್ಞೆಯನ್ನು ಪ್ರಶ್ನಿಸುವ ಅವಮಾನಿಸುವ ವಿದ್ಯಮಾನಗಳೂ ಚುರುಕು ಪಡೆದವು. ಇಂದಿಗೂ ಈ ವಿವೇಕ್ ರಾಮಸ್ವಾಮಿ ’ಬ್ಲಾಕ್ ಲೈವ್ಸ್ ಮ್ಯಾಟರ್‍ಸ್’ಅನ್ನು ಗೇಲಿಮಾಡುವುದನ್ನು ತನ್ನ ಕಾಯಕವನ್ನಾಗಿಸಿಕೊಂಡಿದ್ದಾರೆ. ಅದಕ್ಕಾಗಿ ಆ ಚಳವಳಿಯಲ್ಲಿ ಭಾಗಿಯಾದವರ ಚಾರಿತ್ರ್ಯಹರಣಕ್ಕೂ ಮುಂದಾಗುತ್ತಾರೆ.

ಭಾರತದಲ್ಲಿ ಲೋಕಸಭಾ ಚುನಾವಣೆಗಳು 2024ರ ಮೊದಲ ಭಾಗದಲ್ಲಿ ಜರುಗಲಿವೆ. ಅಮೆರಿಕದ ಚುನಾವಣೆಗಳು 2024ರ ಕೊನೆಗೆ. ಅಮೆರಿಕದಲ್ಲಿ ರಿಪಬ್ಲಿಕನ್ ಪಕ್ಷ ತೀವ್ರ ಬಲಪಂಥೀಯತೆಯ ಹೊಸ ರೂಪದಲ್ಲಿ ಅವತರಿಸುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ. 2020ರಲ್ಲಿ ಹೇಗೋ ರಿವರ್ಸ್ ಪೋಲರೈಸೇಷನ್ ಸಾಧ್ಯವಾಗಿ ಟ್ರಂಪ್‌ನ ಸೋಲು ಸಾಧ್ಯವಾಗಿತ್ತು. ಆದರೆ ಟ್ರಂಪ್‌ಗಿಂತಲೂ ತನ್ನ ಪ್ರತಿಗಾಮಿ ಚಿಂತನೆಗಳನ್ನು ಪರಿಣಾಮಕಾರಿಯಾಗಿ ಮಂಡಿಸಬಲ್ಲ ವ್ಯಕ್ತಿತ್ವ ವಿವೇಕ್ ಅವರದ್ದು. ಇವರ ನರೆಟಿವ್‌ಅನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸುವ ಕಾರ್ಯಸ್ವರೂಪ ಡೆಮಾಕ್ರಟ್ ಪಕ್ಷದಿಂದ ದೊಡ್ಡಮಟ್ಟದಲ್ಲಿ ವ್ಯಕ್ತವಾಗಿಲ್ಲ. ಭಾರತದಲ್ಲಿಯೂ ಇದೇ ಸನ್ನಿವೇಶವನ್ನು ನಾವು ಮುಂಗಾಣಬಹುದಾಗಿದೆ. ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಆಡಳಿತ ನಡೆಸುತ್ತಿರುವ ಬಲಪಂಥೀಯ ಪಕ್ಷ ಮರು ಆಯ್ಕೆಗಾಗಿ ಹಿಂದೆ ನಡೆಸಿದಂತೆಯೆ ಧ್ರುವೀಕರಣದ ತೀವ್ರ ಪ್ರಚಾರಾಭಿಯಾನ ನಡೆಸಲಿದೆ. ಇಲ್ಲಿನ ವಿರೋಧ ಪಕ್ಷಗಳು ಅದನ್ನು ಕೌಂಟರ್ ಮಾಡಲು ಸಜ್ಜಾಗಿವೆಯೇ? ರಾಷ್ಟ್ರವ್ಯಾಪಿ ಅಸ್ತಿತ್ವವಿದೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷದಲ್ಲಿಯೂ ಇಂದು ಜನಪರ-ಪ್ರಗತಿಪರ ನಿಲುವುಗಳನ್ನು ಮತ್ತು ಬಲಪಂಥೀಯ ನೀತಿಗಳ ವಿರುದ್ಧವಾದ ಪೊಸಿಶನ್‌ಅನ್ನು ತೆಗೆದುಕೊಳ್ಳುವ ಮುಖಂಡರುಗಳು ಕಾಣಿಸುತ್ತಿಲ್ಲ. ಸಂಪತ್ತಿನ ಅಸಮಾನತೆ, ಪ್ರಾತಿನಿಧ್ಯ, ಹವಾಮಾನ ವೈಪರೀತ್ಯ ಇಂತಹ ವಿಷಯಗಳು ಇಲ್ಲಿನ್ನೂ ಚುನಾವಣೆಯ ವಿಷಯಗಳಾಗುತ್ತಿಲ್ಲ. ಈ ನಿಟ್ಟಿನಲ್ಲಿ ನಾಗರಿಕ ಸಮಾಜದ ಜವಾಬ್ದಾರಿಯೇ ದೊಡ್ಡದಿದೆ ಎಂಬುದಂತೂ ನಿಚ್ಚಳ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...