Homeಅಂಕಣಗಳುಅಮೆರಿಕದಲ್ಲಿ ಬಲಪಂಥೀಯರ ಚುನಾವಣಾ ವಿಷಯವಾಗುತ್ತಿರುವ ‘ಆ್ಯಂಟಿ ವೋಕ್'!

ಅಮೆರಿಕದಲ್ಲಿ ಬಲಪಂಥೀಯರ ಚುನಾವಣಾ ವಿಷಯವಾಗುತ್ತಿರುವ ‘ಆ್ಯಂಟಿ ವೋಕ್’!

- Advertisement -
- Advertisement -

ದಿಲ್ಬರ್ಟ್ ಮತ್ತು ರೋಲ್ಡ್ ಡಾಲ್ ಹಾಗೂ ಎಚ್ಚೆತ್ತ ಮಾಧ್ಯಮಗಳ ಬಗ್ಗೆ ಕಳೆದ ವಾರ ಬರೆದ ಸಂಪಾದಕೀಯದಲ್ಲಿ, ಈ ಎಚ್ಚರಿಕೆಯನ್ನು ’ವೋಕ್ ಸಂಸ್ಕೃತಿ’ ಅಥವಾ ’ವೋಕಿಸಂ’ ಎಂಬ ಬಗೆದು ಹೀಗಳೆಯಲು ಹಲವರು ಪ್ರಯತ್ನಿಸುವ ಬಗ್ಗೆ ಪ್ರಸ್ತಾಪಿಸಿ ಲೇಖನವನ್ನು ಕೊನೆಗೊಳಿಸಲಾಗಿತ್ತು. ’ವೋಕ್-ವಿರೋಧಿ’ ಅಭಿಯಾನವನ್ನೇ ಪ್ರಧಾನವಾಗಿಟ್ಟುಕೊಂಡು ಯುಎಸ್‌ಎನ ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ಅಭ್ಯರ್ಥಿಯಾಗಲು ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಪ್ರಚಾರವನ್ನು ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ವಿವೇಕ್ ಬಗ್ಗೆ ಸುದೀರ್ಘ ಲೇಖನವನ್ನು ಪ್ರಕಟಿಸಿದ್ದ ನ್ಯೂಯಾರ್ಕರ್ ಪತ್ರಿಕೆ ಅವರನ್ನು ’ಆಂಟಿ ವೋಕ್ ಇಂಕ್’ ಸಿಇಒ ಎಂದು ಕರೆದಿತ್ತು. 21ನೇ ಶತಮಾನದಲ್ಲಿ ಜನಾಂಗ, ಲಿಂಗತ್ವ, ಹವಾಮಾನ, ಸವಲತ್ತು, ಪ್ರಾತಿನಿಧ್ಯ ಮುಂತಾದ ಸಂಗತಿಗಳ ಬಗ್ಗೆ ಸಮಾಜ ಎಚ್ಚೆತ್ತುಕೊಳ್ಳುತ್ತಿರುವ ಅಥವಾ ಎಚ್ಚರಗೊಳ್ಳಬೇಕಿರುವ ಆಶಯದ ವಿರುದ್ಧ ಹೂಡಿರುವ ಈ ’ವೋಕ್-ವಿರೋಧಿ’ ಅಭಿಯಾನ ದಿನೇದಿನೇ ಬಲಪಂಥೀಯ ಮಾಧ್ಯಮಗಳಲ್ಲಿ ರಾರಾಜಿಸುತ್ತಿದೆ. ಅಮೆರಿಕದ ತೀವ್ರ ಬಲಪಂಥೀಯ ಟಿವಿ ಚಾನೆಲ್ ಆದ ಫಾಕ್ಸ್ ನ್ಯೂಸ್ ಕಾರ್ಯಕ್ರಮಗಳಲ್ಲಿ ವಿವೇಕ್ ರಾಮಸ್ವಾಮಿ ಕಾಯಂಆಗಿ ಹೋಗಿದ್ದಾರೆ ಎನ್ನುತ್ತವೆ ವರದಿಗಳು.

ಸ್ಯಾಂಪಲ್‌ಗೆ ವಿವೇಕ್ ಅವರ ಒಂದು ಟ್ವೀಟ್ ನೋಡಿ: “ನಾನು ಅಧ್ಯಕ್ಷನಾಗಿ, ಫೆಡೆರಲ್ ಕಾನೂನಾದ (ಯುಎಸ್‌ಎ ರಾಷ್ಟ್ರ ಮತ್ತು ರಾಜ್ಯಗಳು ಸೇರಿ ಮಾಡಿರುವ) ’ಅಫರ್ಮೆಟಿವ್ ಆಕ್ಷನ್’ ಅನ್ನು (ಅಂದರೆ, ಜನಾಂಗೀಯ ತಾರತಮ್ಯ ಕೊನೆಗಾಣಿಸಲು ನೀಡುವ ಮೀಸಲಾತಿ) ಕೊನೆಗೊಳಿಸುತ್ತೇನೆ. ಜನಾಂಗದ ಆಧಾರದ ಮೇಲೆ ಮೀಸಲಾತಿ ನೀಡುವ ಲಿಂಡನ್ ಜಾನ್ಸನ್ ಕಾರ್ಯಾಂಗ ಆದೇಶ 11246ವನ್ನು ವಾಪಸ್ ತೆಗೆದುಕೊಳ್ಳುತ್ತೇನೆ. ಜಾನ್ಸನ್ ನಂತರ ಪ್ರತಿ ರಿಪಬ್ಲಿಕನ್‌ಗೆ ಈ ಕೆಲಸ ಮಾಡುವ ಅವಕಾಶವಿತ್ತು. ನಾನು ಯಾವುದೇ ಕ್ಷಮೆ ಕೇಳದೆ ಮಾಡುತ್ತೇನೆ” ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ “ಪ್ರತಿಭೆ, ಶ್ರೇಷ್ಠತೆ, ಸ್ವ-ಆಡಳಿತ, ಮುಕ್ತ ಅಭಿವ್ಯಕ್ತಿ. ಇದು ಹೊಸ ಅಮೆರಿಕನ್ ಡ್ರೀಮ್ ಎಂದು ಬರೆದುಕೊಳ್ಳುತ್ತಾರೆ. ಯಾವ ಮೌಲ್ಯಗಳನ್ನು ಮರುಮೌಲ್ಯಮಾಪನ ಮಾಡಿ ಸಮಾನತೆ, ಪ್ರಾತಿನಿಧ್ಯದ ಕಡೆಗೆ ಚಲಿಸಬೇಕೆಂದು ಎಚ್ಚೆತ್ತ ಮನಸ್ಸುಗಳು ತುಡಿಯುತ್ತಿವೆಯೋ ಅವನ್ನೆಲ್ಲಾ ಅವಮಾನಿಸಿ ವಿರೋಧಿಸುವ ಅಭಿಯಾನವೇ ’ಆ್ಯಂಟಿ ವೋಕಿಸಂ’. ಹವಾಮಾನ ಬದಲಾವಣೆಯ ಬಗ್ಗೆ ಕಾಳಜಿ, ಜನಾಂಗೀಯ ನಿಂದನೆಯ ಬಗ್ಗೆ ಕಠಿಣ ಕ್ರಮಗಳು, ಜನ ಕಲ್ಯಾಣ ಯೋಜನೆಗಳು – ಹೀಗೆ ಜನಪರ ನೀತಿಗಳನ್ನೆಲ್ಲಾ ತೊಡೆದುಹಾಕಿ ’ಅಮೆರಿಕ ಫಸ್ಟ್’ ಎನಿಸಿಕೊಳ್ಳಬೇಕೆನ್ನುವ ’ಹುಸಿ ಶ್ರೇಷ್ಠತೆಯ’ ಧೋರಣೆಯೇ ಇದರ ಮೊದಲ ಆದ್ಯತೆ. ಮುಕ್ತ ಅಭಿವ್ಯಕ್ತಿ ಎಂಬುದು ಜವಾಬ್ದಾರಿ ಹೊತ್ತುಕೊಳ್ಳದ ಅಭಿವ್ಯಕ್ತಿ ಸ್ವಾತಂತ್ರ್ಯವಾಗಿ ಉಳಿಯಬೇಕೆಂಬ ವಾದ ಇವರದ್ದು. ಯಾವುದೇ ಮಟ್ಟದಲ್ಲಿ ಕೂಡ ಜನಾಂಗೀಯ, ಅಲ್ಪಸಂಖ್ಯಾತರ, ಮಹಿಳೆಯರ ಅವಮಾನ-ನಿಂದನೆಯನ್ನು ಮಾಡಲು ಸ್ವಾತಂತ್ರ್ಯ ಇರಬೇಕೆಂಬುದು ಇವರ ಫ್ರೀ ಸ್ಪೀಚ್ ವಾದದ ಉದ್ದೇಶ!

ಇದನ್ನೂ ಓದಿ: ದಿಲ್ಬರ್ಟ್, ರೋಲ್ಡ್ ಡಾಲ್ ಮತ್ತು ಎಚ್ಚೆತ್ತ ಮಾಧ್ಯಮಗಳ ಸುತ್ತ…

ಈ ವಿವೇಕ್ ರಾಮಸ್ವಾಮಿಯ ಕುಟುಂಬದವರು ಕೇರಳ ಮೂಲದ ಬ್ರಾಹ್ಮಣ ಜಾತಿಗೆ ಸೇರಿದವರು. ಇಲ್ಲಿನ ಬ್ರಾಹ್ಮಣ್ಯದ ’ಶ್ರೇಷ್ಠತೆಯ’ ಬಲಪಂಥೀಯತೆ ಮತ್ತು ಅಮೆರಿಕದಲ್ಲಿ ಹುಟ್ಟಿ ಬೆಳೆದು ಮೈಗೂಡಿಸಿಕೊಂಡಿರುವ ಕಾರ್ಪೊರೆಟ್ ಸಂಸ್ಕೃತಿಯ ಬಲಪಂಥೀಯತೆ ಒಟ್ಟಿಗೆ ಸೇರಿ ವಿವೇಕ್ ಅಮೆರಿಕದಲ್ಲಿ ಹೊಸ ಬಗೆಯ ಧ್ರುವೀಕರಣಕ್ಕೆ ನಾಂದಿ ಹಾಡುತ್ತಿದ್ದಾರೆ; ಡೊನಾಲ್ಡ್ ಟ್ರಂಪ್ ಮಾಡಿದ ಡ್ಯಾಮೇಜ್ ಏನೇನೂ ಸಾಲದೆಂಬಂತೆ. ಇಂತಹ ’ವೋಕ್-ಎಚ್ಚರ’ದ ವಿರುದ್ಧದ ಅಭಿಯಾನ ಮೀಸಲಾತಿ ವಿರೋಧಿಯಾಗಿ, ಖಾಸಗೀಕರಣದ ಪ್ರತಿಪಾದಕನಾಗಿ, ದೈತ್ಯ ಕಾರ್ಪೊರೆಟ್ ಕುಳಗಳ ಸಂರಕ್ಷರರಾಗಿ ಬೇರೆಬೇರೆ ಅವತಾರಗಳಲ್ಲಿ ಭಾರತದಲ್ಲಿಯೂ ನಮಗೆ ಕಾಣಸಿಗುತ್ತದೆ. ಅದು ಮುಂದೆ ಇನ್ನೂ ತೀವ್ರವಾಗುವುದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಆಧುನಿಕ ಜಗತ್ತಿಗೆ ಬೇಕಾದ ಸಮಾನತೆಯ ಮೌಲ್ಯಗಳನ್ನು ಉಳಿಸಿಕೊಳ್ಳುವ ಬಗ್ಗೆ ಕಾಳಜಿಯನ್ನು ಸ್ವಲ್ಪವಾದರೂ ಉಳಿಸಿಕೊಂಡಿರುವ ರಾಜಕೀಯ ಪಕ್ಷಗಳು, ನಾಗರಿಕ ಸಮಾಜ ಮತ್ತು ನಾಗರಿಕ ಹಕ್ಕುಗಳ ಹೋರಾಟ ಗುಂಪುಗಳು ಸಕ್ರಿಯವಾಗಬೇಕಿದೆ.

2014ರಲ್ಲಿ ಕಪ್ಪು ವ್ಯಕ್ತಿಯೊಬ್ಬನನ್ನು ಅಮೆರಿಕದ ಪೊಲೀಸನೊಬ್ಬ ಕೊಂದಿದ್ದು ’ಬ್ಲಾಕ್ ಲೈವ್ಸ್ ಮ್ಯಾಟರ್‍ಸ್’ ಪ್ರತಿಭಟನೆಗಳಿಗೆ ಕಾರಣವಾಗಿತ್ತು. ಆಗ ’ಸ್ಟೇ ವೋಕ್’ ಅಥವಾ ’ವೋಕ್’ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತು. 2020ರಲ್ಲಿ ಯುಎಸ್‌ಎನ ಪೊಲೀಸನೊಬ್ಬ ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ವ್ಯಕ್ತಿಯನ್ನು ಕತ್ತುಹಿಸುಕಿ ಸಾರ್ವಜನಿಕವಾಗಿಯೇ ಹತ್ಯೆ ಮಾಡಿದಾಗ ’ಬ್ಲಾಕ್ ಲೈವ್ಸ್ ಮ್ಯಾಟರ್‍ಸ್’ ತೀವ್ರ ಸ್ವರೂಪ ಪಡೆದುಕೊಂಡಿತು. ಇದು ಜಗತ್ತಿನಾದ್ಯಂತ ಜನಾಂಗೀಯ ಹಿಂಸೆಗಳ ಬಗ್ಗೆ ಚರ್ಚೆಗೆ ಕಾರಣವಾಯಿತು. ಜನಾಂಗೀಯ ನಿಂದನೆ ಮತ್ತು ಹಿಂಸೆಗಳ ಬಗ್ಗೆ ಜಾಗೃತಿ ತಳೆಯುವಂತೆ ಯುವ ಸಮುದಾಯವನ್ನು ಪ್ರಚೋದಿಸಿತು. ಭಾರತದಲ್ಲಿ ಜಾತಿನಿಂದನೆ ಮತ್ತು ಹಿಂಸೆಯ ಬಗ್ಗೆಗೂ ಚರ್ಚೆಗಳಾದವು. ಕೆಲಸದ ಸ್ಥಳಗಳಲ್ಲಿ ಜನರು ಹೆಚ್ಚು ಸಂವೇದನಾಶೀಲರಾಗಲು ತಳಸಮುದಾಯಗಳಿಂದ ಆಗ್ರಹ ಮೂಡಿಬಂತು. ಆಗ ಶೋಷಕ ಸಮುದಾಯಕ್ಕೆ ಸೇರಿದ ಕೆಲವರಾದರೂ ಎಚ್ಚೆತ್ತು ಸ್ಪಂದಿಸಲು ಪ್ರಾರಂಭಿಸಿದರು. ಅದರ ಜೊತೆಗೇ ಈ ಎಚ್ಚೆತ್ತ ಪ್ರಜ್ಞೆಯನ್ನು ಪ್ರಶ್ನಿಸುವ ಅವಮಾನಿಸುವ ವಿದ್ಯಮಾನಗಳೂ ಚುರುಕು ಪಡೆದವು. ಇಂದಿಗೂ ಈ ವಿವೇಕ್ ರಾಮಸ್ವಾಮಿ ’ಬ್ಲಾಕ್ ಲೈವ್ಸ್ ಮ್ಯಾಟರ್‍ಸ್’ಅನ್ನು ಗೇಲಿಮಾಡುವುದನ್ನು ತನ್ನ ಕಾಯಕವನ್ನಾಗಿಸಿಕೊಂಡಿದ್ದಾರೆ. ಅದಕ್ಕಾಗಿ ಆ ಚಳವಳಿಯಲ್ಲಿ ಭಾಗಿಯಾದವರ ಚಾರಿತ್ರ್ಯಹರಣಕ್ಕೂ ಮುಂದಾಗುತ್ತಾರೆ.

ಭಾರತದಲ್ಲಿ ಲೋಕಸಭಾ ಚುನಾವಣೆಗಳು 2024ರ ಮೊದಲ ಭಾಗದಲ್ಲಿ ಜರುಗಲಿವೆ. ಅಮೆರಿಕದ ಚುನಾವಣೆಗಳು 2024ರ ಕೊನೆಗೆ. ಅಮೆರಿಕದಲ್ಲಿ ರಿಪಬ್ಲಿಕನ್ ಪಕ್ಷ ತೀವ್ರ ಬಲಪಂಥೀಯತೆಯ ಹೊಸ ರೂಪದಲ್ಲಿ ಅವತರಿಸುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ. 2020ರಲ್ಲಿ ಹೇಗೋ ರಿವರ್ಸ್ ಪೋಲರೈಸೇಷನ್ ಸಾಧ್ಯವಾಗಿ ಟ್ರಂಪ್‌ನ ಸೋಲು ಸಾಧ್ಯವಾಗಿತ್ತು. ಆದರೆ ಟ್ರಂಪ್‌ಗಿಂತಲೂ ತನ್ನ ಪ್ರತಿಗಾಮಿ ಚಿಂತನೆಗಳನ್ನು ಪರಿಣಾಮಕಾರಿಯಾಗಿ ಮಂಡಿಸಬಲ್ಲ ವ್ಯಕ್ತಿತ್ವ ವಿವೇಕ್ ಅವರದ್ದು. ಇವರ ನರೆಟಿವ್‌ಅನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸುವ ಕಾರ್ಯಸ್ವರೂಪ ಡೆಮಾಕ್ರಟ್ ಪಕ್ಷದಿಂದ ದೊಡ್ಡಮಟ್ಟದಲ್ಲಿ ವ್ಯಕ್ತವಾಗಿಲ್ಲ. ಭಾರತದಲ್ಲಿಯೂ ಇದೇ ಸನ್ನಿವೇಶವನ್ನು ನಾವು ಮುಂಗಾಣಬಹುದಾಗಿದೆ. ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಆಡಳಿತ ನಡೆಸುತ್ತಿರುವ ಬಲಪಂಥೀಯ ಪಕ್ಷ ಮರು ಆಯ್ಕೆಗಾಗಿ ಹಿಂದೆ ನಡೆಸಿದಂತೆಯೆ ಧ್ರುವೀಕರಣದ ತೀವ್ರ ಪ್ರಚಾರಾಭಿಯಾನ ನಡೆಸಲಿದೆ. ಇಲ್ಲಿನ ವಿರೋಧ ಪಕ್ಷಗಳು ಅದನ್ನು ಕೌಂಟರ್ ಮಾಡಲು ಸಜ್ಜಾಗಿವೆಯೇ? ರಾಷ್ಟ್ರವ್ಯಾಪಿ ಅಸ್ತಿತ್ವವಿದೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷದಲ್ಲಿಯೂ ಇಂದು ಜನಪರ-ಪ್ರಗತಿಪರ ನಿಲುವುಗಳನ್ನು ಮತ್ತು ಬಲಪಂಥೀಯ ನೀತಿಗಳ ವಿರುದ್ಧವಾದ ಪೊಸಿಶನ್‌ಅನ್ನು ತೆಗೆದುಕೊಳ್ಳುವ ಮುಖಂಡರುಗಳು ಕಾಣಿಸುತ್ತಿಲ್ಲ. ಸಂಪತ್ತಿನ ಅಸಮಾನತೆ, ಪ್ರಾತಿನಿಧ್ಯ, ಹವಾಮಾನ ವೈಪರೀತ್ಯ ಇಂತಹ ವಿಷಯಗಳು ಇಲ್ಲಿನ್ನೂ ಚುನಾವಣೆಯ ವಿಷಯಗಳಾಗುತ್ತಿಲ್ಲ. ಈ ನಿಟ್ಟಿನಲ್ಲಿ ನಾಗರಿಕ ಸಮಾಜದ ಜವಾಬ್ದಾರಿಯೇ ದೊಡ್ಡದಿದೆ ಎಂಬುದಂತೂ ನಿಚ್ಚಳ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...