Homeಪುಸ್ತಕ ವಿಮರ್ಶೆಪುಸ್ತಕ ಪರಿಚಯ; ಬಿ.ಎ. ಮೊಹಿದೀನ್ ಅವರ ’ನನ್ನೊಳಗಿನ ನಾನು’

ಪುಸ್ತಕ ಪರಿಚಯ; ಬಿ.ಎ. ಮೊಹಿದೀನ್ ಅವರ ’ನನ್ನೊಳಗಿನ ನಾನು’

- Advertisement -
- Advertisement -

ಕನ್ನಡದಲ್ಲಿ ಕಲಾವಿದರು-ಲೇಖಕರು ಬರೆದ ಆತ್ಮಕಥೆಗಳು ಸಾಕಷ್ಟಿವೆ. ಆದರೆ ರಾಜಕಾರಣಿಗಳ ಆತ್ಮಕಥೆಗಳ ಸಂಖ್ಯೆ ಕಡಿಮೆ. ಇರುವ ಕೆಲವು ಆತ್ಮಕಥೆಗಳಾದರೂ ಆಧುನಿಕ ಕರ್ನಾಟಕದ ರಾಜಕೀಯ ಚರಿತ್ರೆಯ ಅಪೂರ್ವ ದಾಖಲೆಗಳಂತಿವೆ. ಇವುಗಳಲ್ಲಿ ಹಗರಿಬೊಮ್ಮನಹಳ್ಳಿಯ ಶಾಸಕರಾಗಿದ್ದ ಚನ್ನಬಸವನಗೌಡರ ‘ನಾನೊಬ್ಬ ಸಾರ್ವಜನಿಕ’ ಹಾಗೂ ಕರ್ನಾಟಕದ ಶಿಕ್ಷಣಮಂತ್ರಿಗಳಾಗಿದ್ದ ಬಿ.ಎ. ಮೊಹಿದೀನ್ ಅವರ ‘ನನ್ನೊಳಗಿನ ನಾನು’ ಸೇರಿವೆ.

ಇದೊಂದು ಹೇಳಿ ಬರೆಯಿಸಿದ ಆತ್ಮಕಥೆ. ಇದರಲ್ಲಿ ಲೇಖಕರ ವೈಯಕ್ತಿಕ, ವ್ಯಕ್ತಿತ್ವದ, ಕುಟುಂಬದ, ಬ್ಯಾರಿ ಸಮುದಾಯದ, ಕರಾವಳಿಯ ಹಾಗೂ ರಾಜ್ಯದ ರಾಜಕಾರಣದ ಸ್ತರಗಳಿವೆ. ಆತ್ಮಕಥೆಯ ಹೆಸರು ಸಾಂಕೇತಿಕವಾಗಿದೆ. ಬಾಳನ್ನೆಲ್ಲ ಸಾರ್ವಜನಿಕವಾಗಿ ಮತ್ತು ಬಹಿರ್ಮುಖಿಯಾಗಿ ಕಳೆದ ವ್ಯಕ್ತಿಯೊಬ್ಬರು ತಮ್ಮ ವೃದ್ಧಾಪ್ಯದ ಸಾವಿನ ಸನ್ನಿಧಿಯಲ್ಲಿ ಬದುಕನ್ನು ಒಮ್ಮೆ ಹಿಂತಿರುಗಿ ಕಾಣುವಾಗ ಹುಟ್ಟುವ ನೋಟದಲ್ಲಿ ಜನ್ಮತಳೆದ ಕೃತಿಯಿದು. ಇದು ತನ್ನನ್ನು ತಾನು ನೋಡಿಕೊಳ್ಳುವ ಆತ್ಮಾವಲೋಕನ ಕ್ರಮದಲ್ಲಿ ಹುಟ್ಟಿದ ಕೃತಿ. ಕರ್ನಾಟಕದ ರಾಜಕೀಯ ಚರಿತ್ರೆಯನ್ನು ಕಂಡರಿಸುತ್ತ ಅದರ ಮೌಲ್ಯಮಾಪನ ಮಾಡುವ ಕೃತಿ ಕೂಡ. ಲೇಖಕರು ಗಂಡಾಳಿಕೆ ಮನೋಭಾವದಿಂದ ಹೆಂಗರುಳಿನ ಅಂತಃಕರಣಕ್ಕೆ, ಹಿರಿತನದಿಂದ ಮಗುತನಕ್ಕೆ ರೂಪಾಂತರವಾದಂತೆ ಇಲ್ಲಿನ ಭಾವವಿದೆ. ಒಂಟಿತನದಲ್ಲಿ, ಏಕಾಂತದಲ್ಲಿ ಕಾಡುವ ಬಾಲ್ಯಕಾಲದ ನೆನಪುಗಳು ಬರುವ ಕಡೆ ಆತ್ಮಕಥೆ ಆಪ್ತವಾಗಿದೆ.

ಆತ್ಮಕಥೆಯ ವಿಶೇಷವೆಂದರೆ, ಸ್ವಂತ ವ್ಯಕ್ತಿತ್ವದ, ಕರ್ನಾಟಕ ರಾಜಕಾರಣದ, ಬ್ಯಾರಿ ಸಮುದಾಯದ ಹಾಗೂ ಕರಾವಳಿಯ ಸಾಮಾಜಿಕ ಸನ್ನಿವೇಶದ ಚಿತ್ರಗಳನ್ನು ಕೊಡುವುದು; ಮಾತ್ರವಲ್ಲದೆ, ಅವುಗಳ ವಿಮರ್ಶೆಯನ್ನೂ ಮಾಡಿರುವುದು. ಸೌದಿ ಅರೇಬಿಯಾದಲ್ಲಿ ಇರುವ ವಂಶಾಡಳಿತದ ರಾಜಪ್ರಭುತ್ವವು ಪೈಗಂಬರ್ ಬಯಸಿದ ಖಲೀಫಾ ಪದ್ಧತಿಗೆ ವಿರುದ್ಧವಾಗಿದೆ ಎಂದು ಲೇಖಕರು ಒಂದೆಡೆ ಹೇಳುತ್ತಾರೆ. ಆತ್ಮಕಥೆ ಮುಗಿಯುವುದು ಮಡದಿಯ ಜತೆ ಗಂಡಾಳಿಕೆಯ ಮನೋಭಾವವುಳ್ಳ ತಾನು ನಡೆದುಕೊಂಡ ಬಗೆಗಿನ ಪರಿತಾಪದಿಂದ. ಬೇರೆಬೇರೆ ಧರ್ಮ ಜಾತಿಗಳ ಮಕ್ಕಳೊಂದಿಗೆ ಬೆರೆಯದ ಮದ್ರಸಾ ಶಿಕ್ಷಣದ ಪದ್ಧತಿಯ ಐಸೊಲೇಶನ್ ಬಗ್ಗೆ ಇಲ್ಲಿ ವಿಮರ್ಶೆಯಿದೆ. ಸಂಪ್ರದಾಯವಾದಿ ಮೌಲವಿಗಳ ಟೀಕೆಯಿದೆ. ಲೇಖಕರು ಅವರೊಟ್ಟಿಗೆ ಚರ್ಚೆ ಕೂಡ ಮಾಡುತ್ತಾರೆ. ಮದ್ರಸಾಗಳ ಧಾರ್ಮಿಕ ಶಿಕ್ಷಣವನ್ನು ಲೌಕಿಕವಾಗಿ ಉಪಯುಕ್ತವಾಗುವ ವಿದ್ಯೆಗಳನ್ನು ಕಲಿವ ಜಾಗವಾಗಿಸಬೇಕೆಂದೂ, ಕ್ರೈಸ್ತ ಮಿಶನರಿ ಶಾಲೆಗಳಿರುವಂತೆ ಎಲ್ಲ ಧರ್ಮ ಜಾತಿಯ ಮಕ್ಕಳು ಕಲಿಯುವಂತೆ ವಿಸ್ತರಣೆ ಪಡೆಯಬೇಕೆಂದೂ, ಅಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲ ಧರ್ಮದವರಿಗೆ ಸಂಬಂಧಪಟ್ಟಿರಬೇಕೆಂದೂ ಅಭಿಪ್ರಾಯ ಪಡುವರು. ಮಹಿಳಾ ಶಿಕ್ಷಣದ ಪ್ರಾಮುಖ್ಯದ ಬಗ್ಗೆ ಪ್ರಸ್ತಾಪಿಸುವರು. ಈ ಕಾರಣಕ್ಕೆ ಆತ್ಮಕಥೆಯು ಸಮಾಜ ಸುಧಾರಣವಾದಿಯೊಬ್ಬನ ಜಾತ್ಯತೀತ ಚಿಂತನೆಯ ದಾಖಲೆ.

ಇದನ್ನೂ ಓದಿ: ಪುಸ್ತಕ ಪರಿಚಯ: ಸದನದಲ್ಲಿ ಭೂಪತಿ

ಲೇಖಕರು ಒಂದೆಡೆ ಹೀಗೆ ಹೇಳುತ್ತಾರೆ: “ಮಸೀದಿ ಮದ್ರಸಾಗಳ ಆವರಣದೊಳಗಿರುವ ಶಾಲೆಗಳಲ್ಲಿ ಶಾಲಾ ವಾರ್ಷಿಕೋತ್ಸವ ಸಂದರ್ಭಗಳಲ್ಲಿ ಹಾಡು ನಾಟಕ ನೃತ್ಯ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಲು ವಿದ್ಯಾರ್ಥಿಗಳಿಗೆ ಅಲ್ಲಿಯ ವ್ಯವಸ್ಥಾಪಕರು, ಧಾರ್ಮಿಕ ನಾಯಕರು ಬಿಡುತ್ತಿಲ್ಲ ಎಂಬ ಆರೋಪ ಕೂಡ ಇದೆ. ಇದು ತಪ್ಪು. ಎಳೆಯ ಮಕ್ಕಳನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸುವುದು ಕೂಡ ನಮ್ಮ ಜವಾಬ್ದಾರಿಯಾಗಿದೆ. ಇದೂ ಶಿಕ್ಷಣದ ಒಂದು ಅಂಗವಾಗಿದೆ. ಇಂದಿನ ಕಾಲದ ಅಗತ್ಯವೂ ಆಗಿದೆ. ಇದರಿಂದ ಮಕ್ಕಳ ಪ್ರತಿಭೆ ಹೊರಹೊಮ್ಮಿ ಅರಳಿ ಬೆಳೆಯಲು ಸಹಕಾರಿಯಾಗುತ್ತದೆ ಮತ್ತು ಇದು ಸೌಹಾರ್ದ ಬದುಕಿಗೆ ತುಂಬಾ ಅಗತ್ಯವೂ ಆಗಿದೆ.”

ಆತ್ಮಕಥೆಯು 70-80ರ ದಶಕದ ಕೂಡುಬದುಕಿನ ಚಿತ್ರಗಳನ್ನು ಕೊಡುತ್ತದೆ. ಅದರಲ್ಲಿ ಮುಸ್ಲಿಮರು ಭೂತದಕೋಲ, ಯಕ್ಷಗಾನ, ಕೋಳಿಅಂಕ, ಕಂಬಳದಲ್ಲಿ ಭಾಗವಹಿಸುವ ವಿವರಗಳಿವೆ. ಬಂಟರು ಸ್ಥಳೀಯ ಉರುಸನ್ನು ನಡೆಸಿಕೊಡುವ ವಿವರಗಳಿವೆ. ಇಲ್ಲೊಂದು ವಿಶೇಷ ಪ್ರಸಂಗ ಬರುತ್ತದೆ: ಯಕ್ಷಗಾನಕ್ಕೆ ಹೋಗಲು ಹಟಮಾಡುವ ಮೊಮ್ಮಗನನ್ನು ಮನೆಯ ಅಜ್ಜಿ ನಿರಾಕರಿಸಿ, ಅವನಿಗೆ ಬುದ್ಧಿಹೇಳಲು ಮೌಲವಿಯೊಬ್ಬರಿಗೆ ಒಪ್ಪಿಸುವಳು. ಆದರೆ ಆ ಮೌಲವಿಯು ಮಗುವಿಗೆ ಹಣಕೊಟ್ಟು ನಿದ್ದೆಗೆಡದಂತೆ ಎಚ್ಚರವಹಿಸಿ, ಆಟಕ್ಕೆ ಗುಪ್ತವಾಗಿ ಕಳಿಸಿಕೊಡುತ್ತಾರೆ. ಮಕ್ಕಳನ್ನು ಅವರ ಸಹಜ ಇಚ್ಛೆಗೆ ವಿರುದ್ಧವಾಗಿ ಹಿಡಿದಿಡಬಾರದು ಎಂಬ ಶಿಕ್ಷಕ ಪ್ರಜ್ಞೆಯ ಜತೆಗೆ, ಮಕ್ಕಳು ಸ್ಥಳೀಯ ಪರಿಸರದೊಂದಿಗೆ ಸಹಜವಾಗಿ ಬೆರೆಯುವ ಸನ್ನಿವೇಶವೂ ಇರಬೇಕೆಂಬ ನಾಗರಿಕ ಪ್ರಜ್ಞೆಯನ್ನು ಪ್ರಕಟಿಸುತ್ತಾರೆ. ಇದಕ್ಕೆ ಪೂರಕವಾಗಿ ಆತ್ಮಕಥೆಯು ಬ್ಯಾರಿ ಮುಸ್ಲಿಮರ ಸಂಸ್ಕೃತಿಯ ಚಿತ್ರಗಳನ್ನು ಕೊಡುವುದು. ಬ್ಯಾರಿಗಳ ಮದುವೆ ಬಟ್ಟೆಬರೆ ಊಟಆಟ ಉರುಸುಗಳನ್ನು ದಟ್ಟವಾಗಿ ಕಟ್ಟಿಕೊಡುತ್ತದೆ.

ಈ ಕಾರಣದಿಂದ ಆತ್ಮಕತೆಯು ಮುಸ್ಲಿಮರ ದಟ್ಟವಾದ ಜಾನಪದ ಸಂಸ್ಕೃತಿಯನ್ನು ಮೂಲಭೂತವಾದವೂ; ಕರಾವಳಿಯ ಧಾರ್ಮಿಕ ಕೂಡುಬಾಳ್ವೆಯ ಬದುಕನ್ನು ಕೋಮುವಾದವೂ ಕಳೆದುಹಾಕಿದವು ಎಂಬ ವಿಷಾದಕರ ದನಿಯನ್ನು ಒಳಗೊಂಡಿದೆ. ಇದರ ಭಾಗವಾಗಿಯೇ ಇಲ್ಲಿ ಬರುವ ಸುರತ್ಕಲ್ ಕೋಮುಗಲಭೆಯ ವಿವರಗಳನ್ನು ಗಮನಿಸಬೇಕು. ಕರಾವಳಿಯಲ್ಲಿ ಆರ್ಥಿಕ ಬಡತನವಿದ್ದಾಗ ಅದು ಸಾಂಸ್ಕೃತಿಕವಾಗಿ ಸಿರಿವಂತವಾಗಿತ್ತು ಮತ್ತು ಕೂಡುಬಾಳಿನ ಬದುಕನ್ನು ಹೊಂದಿತ್ತು. ಈಗ ಆರ್ಥಿಕ ಏಳಿಗೆಯಿದೆ; ಸಂಪತ್ತಿದೆ. ಆದರೆ ಮನುಷ್ಯ ಸಂಬಂಧಗಳು ಹಾಗೂ ಸಾಮಾಜಿಕ ಬದುಕು ವಿಘಟಿತವಾಗಿದೆ ಎಂಬ ವಿಷಾದವನ್ನು ಆತ್ಮಕಥೆ ಓದುಗರಲ್ಲಿ ಮೂಡಿಸುತ್ತದೆ. ಹಲಾಲ್, ಹಿಜಾಬ್, ಆಜಾನ್, ಟಿಪ್ಪು, ಉರಿಗೌಡ-ನಂಜೇಗೌಡ, ವ್ಯಾಪಾರ ನಿಷೇಧ, ಮೀಸಲಾತಿ ರದ್ದತಿ ಮೊದಲಾದ ವಿದ್ಯಮಾನಗಳು ಕಳೆದ ಒಂದು ವರ್ಷದಿಂದ ಕರ್ನಾಟಕದ ರಾಜಕೀಯ ಸಾಮಾಜಿಕ ಆರ್ಥಿಕ ಬದುಕನ್ನು ಕದಡಿವೆ. ಈ ಹಿನ್ನೆಲೆಯಲ್ಲಿ ಈ ಆತ್ಮಕಥೆಯು, ಸಾಂಸ್ಕೃತಿಕವಾಗಿ ಕಳೆದುಹೋದ ಸುವರ್ಣಯುಗದಂತೆ, ಸಮಾಜವಾದಿ ರಾಜಕಾರಣದ ಅಧ್ಯಾಯದಂತೆ ಭಾಸವಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...

ಸೌದಿಗೆ ಪ್ರಯಾಣಿಸುವ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದ ಅಮೆರಿಕ

ಸೌದಿ ಅರೇಬಿಯಾ ಬೆಂಬಲಿತ ಪಡೆಗಳು ಮತ್ತು ಯೆಮೆನ್‌ನ ಹೌದಿ ಬಂಡುಕೋರರ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಸೌದಿ ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿರುವುದಾಗಿ ಹೌದಿ ಪಡೆಗಳು ಪ್ರತಿಪಾದಿಸಿವೆ. ಮತ್ತೊಂದೆಡೆ, ಪವಿತ್ರ ನಗರಿ ಮಕ್ಕಾದ ದಕ್ಷಿಣ ಭಾಗದಲ್ಲಿ...

ಪ್ರಜ್ವಲ್ ಪ್ರಕರಣ ಮುಂದಿಟ್ಟುಕೊಂಡು ‘ದೇವೇಗೌಡರ ಕುಟುಂಬದ ಧ್ವನಿ ಅಡಗಿಸಲು ಅಸಾಧ್ಯ’: ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಹೊಳೆನರಸೀಪುರ: ಪ್ರಜ್ವಲ್ ರೇವಣ್ಣ ಪ್ರಕರಣದ ನೆಪದಲ್ಲಿ ದೇವೇಗೌಡರ ಕುಟುಂಬದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಜೈಲಿನಲ್ಲಿದ್ದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಮೊಬೈಲ್‌ ಫೋನ್ ಹಾಗೂ...

ಭೂಮಿ, ಆಕಾಶದ ಬಳಿಕ ಈಗ ಬಾಹ್ಯಾಕಾಶವೇ ಯುದ್ಧಭೂಮಿ: ಕಕ್ಷೆಯಲ್ಲಿ ಶಸ್ತ್ರಾಸ್ತ್ರ ನಿಯೋಜನೆ ಒಪ್ಪಿಕೊಂಡ ಅಮೆರಿಕ

ಭವಿಷ್ಯದಲ್ಲಿ ಬೃಹತ್ ಯುದ್ಧವೇನಾದರೂ ಸಂಭವಿಸಿದರೆ ಅದು ಕೇವಲ ಭೂಮಿ, ಸಮುದ್ರ ಮತ್ತು ವಾಯುಮಾರ್ಗಕ್ಕೆ ಮಾತ್ರ ಸೀಮಿತವಾಗದೆ ಬಾಹ್ಯಾಕಾಶಕ್ಕೂ ವಿಸ್ತರಿಸಲಿದೆ ಎಂಬುದನ್ನು ಸಾಬೀತುಪಡಿಸುವ ರೀತಿಯಲ್ಲಿ ಅಮೆರಿಕ ಹೇಳಿಕೊಂಡಿದೆ. ಭೂಮಿಯ ಕಕ್ಷೆಯಲ್ಲಿ ತಾನು ಮಿಲಿಟರಿ ಶಸ್ತ್ರಾಸ್ತ್ರಗಳನ್ನು...

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...