Homeಪುಸ್ತಕ ವಿಮರ್ಶೆಪುಸ್ತಕ ಪರಿಚಯ; ಬಿ.ಎ. ಮೊಹಿದೀನ್ ಅವರ ’ನನ್ನೊಳಗಿನ ನಾನು’

ಪುಸ್ತಕ ಪರಿಚಯ; ಬಿ.ಎ. ಮೊಹಿದೀನ್ ಅವರ ’ನನ್ನೊಳಗಿನ ನಾನು’

- Advertisement -
- Advertisement -

ಕನ್ನಡದಲ್ಲಿ ಕಲಾವಿದರು-ಲೇಖಕರು ಬರೆದ ಆತ್ಮಕಥೆಗಳು ಸಾಕಷ್ಟಿವೆ. ಆದರೆ ರಾಜಕಾರಣಿಗಳ ಆತ್ಮಕಥೆಗಳ ಸಂಖ್ಯೆ ಕಡಿಮೆ. ಇರುವ ಕೆಲವು ಆತ್ಮಕಥೆಗಳಾದರೂ ಆಧುನಿಕ ಕರ್ನಾಟಕದ ರಾಜಕೀಯ ಚರಿತ್ರೆಯ ಅಪೂರ್ವ ದಾಖಲೆಗಳಂತಿವೆ. ಇವುಗಳಲ್ಲಿ ಹಗರಿಬೊಮ್ಮನಹಳ್ಳಿಯ ಶಾಸಕರಾಗಿದ್ದ ಚನ್ನಬಸವನಗೌಡರ ‘ನಾನೊಬ್ಬ ಸಾರ್ವಜನಿಕ’ ಹಾಗೂ ಕರ್ನಾಟಕದ ಶಿಕ್ಷಣಮಂತ್ರಿಗಳಾಗಿದ್ದ ಬಿ.ಎ. ಮೊಹಿದೀನ್ ಅವರ ‘ನನ್ನೊಳಗಿನ ನಾನು’ ಸೇರಿವೆ.

ಇದೊಂದು ಹೇಳಿ ಬರೆಯಿಸಿದ ಆತ್ಮಕಥೆ. ಇದರಲ್ಲಿ ಲೇಖಕರ ವೈಯಕ್ತಿಕ, ವ್ಯಕ್ತಿತ್ವದ, ಕುಟುಂಬದ, ಬ್ಯಾರಿ ಸಮುದಾಯದ, ಕರಾವಳಿಯ ಹಾಗೂ ರಾಜ್ಯದ ರಾಜಕಾರಣದ ಸ್ತರಗಳಿವೆ. ಆತ್ಮಕಥೆಯ ಹೆಸರು ಸಾಂಕೇತಿಕವಾಗಿದೆ. ಬಾಳನ್ನೆಲ್ಲ ಸಾರ್ವಜನಿಕವಾಗಿ ಮತ್ತು ಬಹಿರ್ಮುಖಿಯಾಗಿ ಕಳೆದ ವ್ಯಕ್ತಿಯೊಬ್ಬರು ತಮ್ಮ ವೃದ್ಧಾಪ್ಯದ ಸಾವಿನ ಸನ್ನಿಧಿಯಲ್ಲಿ ಬದುಕನ್ನು ಒಮ್ಮೆ ಹಿಂತಿರುಗಿ ಕಾಣುವಾಗ ಹುಟ್ಟುವ ನೋಟದಲ್ಲಿ ಜನ್ಮತಳೆದ ಕೃತಿಯಿದು. ಇದು ತನ್ನನ್ನು ತಾನು ನೋಡಿಕೊಳ್ಳುವ ಆತ್ಮಾವಲೋಕನ ಕ್ರಮದಲ್ಲಿ ಹುಟ್ಟಿದ ಕೃತಿ. ಕರ್ನಾಟಕದ ರಾಜಕೀಯ ಚರಿತ್ರೆಯನ್ನು ಕಂಡರಿಸುತ್ತ ಅದರ ಮೌಲ್ಯಮಾಪನ ಮಾಡುವ ಕೃತಿ ಕೂಡ. ಲೇಖಕರು ಗಂಡಾಳಿಕೆ ಮನೋಭಾವದಿಂದ ಹೆಂಗರುಳಿನ ಅಂತಃಕರಣಕ್ಕೆ, ಹಿರಿತನದಿಂದ ಮಗುತನಕ್ಕೆ ರೂಪಾಂತರವಾದಂತೆ ಇಲ್ಲಿನ ಭಾವವಿದೆ. ಒಂಟಿತನದಲ್ಲಿ, ಏಕಾಂತದಲ್ಲಿ ಕಾಡುವ ಬಾಲ್ಯಕಾಲದ ನೆನಪುಗಳು ಬರುವ ಕಡೆ ಆತ್ಮಕಥೆ ಆಪ್ತವಾಗಿದೆ.

ಆತ್ಮಕಥೆಯ ವಿಶೇಷವೆಂದರೆ, ಸ್ವಂತ ವ್ಯಕ್ತಿತ್ವದ, ಕರ್ನಾಟಕ ರಾಜಕಾರಣದ, ಬ್ಯಾರಿ ಸಮುದಾಯದ ಹಾಗೂ ಕರಾವಳಿಯ ಸಾಮಾಜಿಕ ಸನ್ನಿವೇಶದ ಚಿತ್ರಗಳನ್ನು ಕೊಡುವುದು; ಮಾತ್ರವಲ್ಲದೆ, ಅವುಗಳ ವಿಮರ್ಶೆಯನ್ನೂ ಮಾಡಿರುವುದು. ಸೌದಿ ಅರೇಬಿಯಾದಲ್ಲಿ ಇರುವ ವಂಶಾಡಳಿತದ ರಾಜಪ್ರಭುತ್ವವು ಪೈಗಂಬರ್ ಬಯಸಿದ ಖಲೀಫಾ ಪದ್ಧತಿಗೆ ವಿರುದ್ಧವಾಗಿದೆ ಎಂದು ಲೇಖಕರು ಒಂದೆಡೆ ಹೇಳುತ್ತಾರೆ. ಆತ್ಮಕಥೆ ಮುಗಿಯುವುದು ಮಡದಿಯ ಜತೆ ಗಂಡಾಳಿಕೆಯ ಮನೋಭಾವವುಳ್ಳ ತಾನು ನಡೆದುಕೊಂಡ ಬಗೆಗಿನ ಪರಿತಾಪದಿಂದ. ಬೇರೆಬೇರೆ ಧರ್ಮ ಜಾತಿಗಳ ಮಕ್ಕಳೊಂದಿಗೆ ಬೆರೆಯದ ಮದ್ರಸಾ ಶಿಕ್ಷಣದ ಪದ್ಧತಿಯ ಐಸೊಲೇಶನ್ ಬಗ್ಗೆ ಇಲ್ಲಿ ವಿಮರ್ಶೆಯಿದೆ. ಸಂಪ್ರದಾಯವಾದಿ ಮೌಲವಿಗಳ ಟೀಕೆಯಿದೆ. ಲೇಖಕರು ಅವರೊಟ್ಟಿಗೆ ಚರ್ಚೆ ಕೂಡ ಮಾಡುತ್ತಾರೆ. ಮದ್ರಸಾಗಳ ಧಾರ್ಮಿಕ ಶಿಕ್ಷಣವನ್ನು ಲೌಕಿಕವಾಗಿ ಉಪಯುಕ್ತವಾಗುವ ವಿದ್ಯೆಗಳನ್ನು ಕಲಿವ ಜಾಗವಾಗಿಸಬೇಕೆಂದೂ, ಕ್ರೈಸ್ತ ಮಿಶನರಿ ಶಾಲೆಗಳಿರುವಂತೆ ಎಲ್ಲ ಧರ್ಮ ಜಾತಿಯ ಮಕ್ಕಳು ಕಲಿಯುವಂತೆ ವಿಸ್ತರಣೆ ಪಡೆಯಬೇಕೆಂದೂ, ಅಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲ ಧರ್ಮದವರಿಗೆ ಸಂಬಂಧಪಟ್ಟಿರಬೇಕೆಂದೂ ಅಭಿಪ್ರಾಯ ಪಡುವರು. ಮಹಿಳಾ ಶಿಕ್ಷಣದ ಪ್ರಾಮುಖ್ಯದ ಬಗ್ಗೆ ಪ್ರಸ್ತಾಪಿಸುವರು. ಈ ಕಾರಣಕ್ಕೆ ಆತ್ಮಕಥೆಯು ಸಮಾಜ ಸುಧಾರಣವಾದಿಯೊಬ್ಬನ ಜಾತ್ಯತೀತ ಚಿಂತನೆಯ ದಾಖಲೆ.

ಇದನ್ನೂ ಓದಿ: ಪುಸ್ತಕ ಪರಿಚಯ: ಸದನದಲ್ಲಿ ಭೂಪತಿ

ಲೇಖಕರು ಒಂದೆಡೆ ಹೀಗೆ ಹೇಳುತ್ತಾರೆ: “ಮಸೀದಿ ಮದ್ರಸಾಗಳ ಆವರಣದೊಳಗಿರುವ ಶಾಲೆಗಳಲ್ಲಿ ಶಾಲಾ ವಾರ್ಷಿಕೋತ್ಸವ ಸಂದರ್ಭಗಳಲ್ಲಿ ಹಾಡು ನಾಟಕ ನೃತ್ಯ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಲು ವಿದ್ಯಾರ್ಥಿಗಳಿಗೆ ಅಲ್ಲಿಯ ವ್ಯವಸ್ಥಾಪಕರು, ಧಾರ್ಮಿಕ ನಾಯಕರು ಬಿಡುತ್ತಿಲ್ಲ ಎಂಬ ಆರೋಪ ಕೂಡ ಇದೆ. ಇದು ತಪ್ಪು. ಎಳೆಯ ಮಕ್ಕಳನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸುವುದು ಕೂಡ ನಮ್ಮ ಜವಾಬ್ದಾರಿಯಾಗಿದೆ. ಇದೂ ಶಿಕ್ಷಣದ ಒಂದು ಅಂಗವಾಗಿದೆ. ಇಂದಿನ ಕಾಲದ ಅಗತ್ಯವೂ ಆಗಿದೆ. ಇದರಿಂದ ಮಕ್ಕಳ ಪ್ರತಿಭೆ ಹೊರಹೊಮ್ಮಿ ಅರಳಿ ಬೆಳೆಯಲು ಸಹಕಾರಿಯಾಗುತ್ತದೆ ಮತ್ತು ಇದು ಸೌಹಾರ್ದ ಬದುಕಿಗೆ ತುಂಬಾ ಅಗತ್ಯವೂ ಆಗಿದೆ.”

ಆತ್ಮಕಥೆಯು 70-80ರ ದಶಕದ ಕೂಡುಬದುಕಿನ ಚಿತ್ರಗಳನ್ನು ಕೊಡುತ್ತದೆ. ಅದರಲ್ಲಿ ಮುಸ್ಲಿಮರು ಭೂತದಕೋಲ, ಯಕ್ಷಗಾನ, ಕೋಳಿಅಂಕ, ಕಂಬಳದಲ್ಲಿ ಭಾಗವಹಿಸುವ ವಿವರಗಳಿವೆ. ಬಂಟರು ಸ್ಥಳೀಯ ಉರುಸನ್ನು ನಡೆಸಿಕೊಡುವ ವಿವರಗಳಿವೆ. ಇಲ್ಲೊಂದು ವಿಶೇಷ ಪ್ರಸಂಗ ಬರುತ್ತದೆ: ಯಕ್ಷಗಾನಕ್ಕೆ ಹೋಗಲು ಹಟಮಾಡುವ ಮೊಮ್ಮಗನನ್ನು ಮನೆಯ ಅಜ್ಜಿ ನಿರಾಕರಿಸಿ, ಅವನಿಗೆ ಬುದ್ಧಿಹೇಳಲು ಮೌಲವಿಯೊಬ್ಬರಿಗೆ ಒಪ್ಪಿಸುವಳು. ಆದರೆ ಆ ಮೌಲವಿಯು ಮಗುವಿಗೆ ಹಣಕೊಟ್ಟು ನಿದ್ದೆಗೆಡದಂತೆ ಎಚ್ಚರವಹಿಸಿ, ಆಟಕ್ಕೆ ಗುಪ್ತವಾಗಿ ಕಳಿಸಿಕೊಡುತ್ತಾರೆ. ಮಕ್ಕಳನ್ನು ಅವರ ಸಹಜ ಇಚ್ಛೆಗೆ ವಿರುದ್ಧವಾಗಿ ಹಿಡಿದಿಡಬಾರದು ಎಂಬ ಶಿಕ್ಷಕ ಪ್ರಜ್ಞೆಯ ಜತೆಗೆ, ಮಕ್ಕಳು ಸ್ಥಳೀಯ ಪರಿಸರದೊಂದಿಗೆ ಸಹಜವಾಗಿ ಬೆರೆಯುವ ಸನ್ನಿವೇಶವೂ ಇರಬೇಕೆಂಬ ನಾಗರಿಕ ಪ್ರಜ್ಞೆಯನ್ನು ಪ್ರಕಟಿಸುತ್ತಾರೆ. ಇದಕ್ಕೆ ಪೂರಕವಾಗಿ ಆತ್ಮಕಥೆಯು ಬ್ಯಾರಿ ಮುಸ್ಲಿಮರ ಸಂಸ್ಕೃತಿಯ ಚಿತ್ರಗಳನ್ನು ಕೊಡುವುದು. ಬ್ಯಾರಿಗಳ ಮದುವೆ ಬಟ್ಟೆಬರೆ ಊಟಆಟ ಉರುಸುಗಳನ್ನು ದಟ್ಟವಾಗಿ ಕಟ್ಟಿಕೊಡುತ್ತದೆ.

ಈ ಕಾರಣದಿಂದ ಆತ್ಮಕತೆಯು ಮುಸ್ಲಿಮರ ದಟ್ಟವಾದ ಜಾನಪದ ಸಂಸ್ಕೃತಿಯನ್ನು ಮೂಲಭೂತವಾದವೂ; ಕರಾವಳಿಯ ಧಾರ್ಮಿಕ ಕೂಡುಬಾಳ್ವೆಯ ಬದುಕನ್ನು ಕೋಮುವಾದವೂ ಕಳೆದುಹಾಕಿದವು ಎಂಬ ವಿಷಾದಕರ ದನಿಯನ್ನು ಒಳಗೊಂಡಿದೆ. ಇದರ ಭಾಗವಾಗಿಯೇ ಇಲ್ಲಿ ಬರುವ ಸುರತ್ಕಲ್ ಕೋಮುಗಲಭೆಯ ವಿವರಗಳನ್ನು ಗಮನಿಸಬೇಕು. ಕರಾವಳಿಯಲ್ಲಿ ಆರ್ಥಿಕ ಬಡತನವಿದ್ದಾಗ ಅದು ಸಾಂಸ್ಕೃತಿಕವಾಗಿ ಸಿರಿವಂತವಾಗಿತ್ತು ಮತ್ತು ಕೂಡುಬಾಳಿನ ಬದುಕನ್ನು ಹೊಂದಿತ್ತು. ಈಗ ಆರ್ಥಿಕ ಏಳಿಗೆಯಿದೆ; ಸಂಪತ್ತಿದೆ. ಆದರೆ ಮನುಷ್ಯ ಸಂಬಂಧಗಳು ಹಾಗೂ ಸಾಮಾಜಿಕ ಬದುಕು ವಿಘಟಿತವಾಗಿದೆ ಎಂಬ ವಿಷಾದವನ್ನು ಆತ್ಮಕಥೆ ಓದುಗರಲ್ಲಿ ಮೂಡಿಸುತ್ತದೆ. ಹಲಾಲ್, ಹಿಜಾಬ್, ಆಜಾನ್, ಟಿಪ್ಪು, ಉರಿಗೌಡ-ನಂಜೇಗೌಡ, ವ್ಯಾಪಾರ ನಿಷೇಧ, ಮೀಸಲಾತಿ ರದ್ದತಿ ಮೊದಲಾದ ವಿದ್ಯಮಾನಗಳು ಕಳೆದ ಒಂದು ವರ್ಷದಿಂದ ಕರ್ನಾಟಕದ ರಾಜಕೀಯ ಸಾಮಾಜಿಕ ಆರ್ಥಿಕ ಬದುಕನ್ನು ಕದಡಿವೆ. ಈ ಹಿನ್ನೆಲೆಯಲ್ಲಿ ಈ ಆತ್ಮಕಥೆಯು, ಸಾಂಸ್ಕೃತಿಕವಾಗಿ ಕಳೆದುಹೋದ ಸುವರ್ಣಯುಗದಂತೆ, ಸಮಾಜವಾದಿ ರಾಜಕಾರಣದ ಅಧ್ಯಾಯದಂತೆ ಭಾಸವಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...