Homeಪುಸ್ತಕ ವಿಮರ್ಶೆಪುಸ್ತಕ ಪರಿಚಯ; ಬಿ.ಎ. ಮೊಹಿದೀನ್ ಅವರ ’ನನ್ನೊಳಗಿನ ನಾನು’

ಪುಸ್ತಕ ಪರಿಚಯ; ಬಿ.ಎ. ಮೊಹಿದೀನ್ ಅವರ ’ನನ್ನೊಳಗಿನ ನಾನು’

- Advertisement -
- Advertisement -

ಕನ್ನಡದಲ್ಲಿ ಕಲಾವಿದರು-ಲೇಖಕರು ಬರೆದ ಆತ್ಮಕಥೆಗಳು ಸಾಕಷ್ಟಿವೆ. ಆದರೆ ರಾಜಕಾರಣಿಗಳ ಆತ್ಮಕಥೆಗಳ ಸಂಖ್ಯೆ ಕಡಿಮೆ. ಇರುವ ಕೆಲವು ಆತ್ಮಕಥೆಗಳಾದರೂ ಆಧುನಿಕ ಕರ್ನಾಟಕದ ರಾಜಕೀಯ ಚರಿತ್ರೆಯ ಅಪೂರ್ವ ದಾಖಲೆಗಳಂತಿವೆ. ಇವುಗಳಲ್ಲಿ ಹಗರಿಬೊಮ್ಮನಹಳ್ಳಿಯ ಶಾಸಕರಾಗಿದ್ದ ಚನ್ನಬಸವನಗೌಡರ ‘ನಾನೊಬ್ಬ ಸಾರ್ವಜನಿಕ’ ಹಾಗೂ ಕರ್ನಾಟಕದ ಶಿಕ್ಷಣಮಂತ್ರಿಗಳಾಗಿದ್ದ ಬಿ.ಎ. ಮೊಹಿದೀನ್ ಅವರ ‘ನನ್ನೊಳಗಿನ ನಾನು’ ಸೇರಿವೆ.

ಇದೊಂದು ಹೇಳಿ ಬರೆಯಿಸಿದ ಆತ್ಮಕಥೆ. ಇದರಲ್ಲಿ ಲೇಖಕರ ವೈಯಕ್ತಿಕ, ವ್ಯಕ್ತಿತ್ವದ, ಕುಟುಂಬದ, ಬ್ಯಾರಿ ಸಮುದಾಯದ, ಕರಾವಳಿಯ ಹಾಗೂ ರಾಜ್ಯದ ರಾಜಕಾರಣದ ಸ್ತರಗಳಿವೆ. ಆತ್ಮಕಥೆಯ ಹೆಸರು ಸಾಂಕೇತಿಕವಾಗಿದೆ. ಬಾಳನ್ನೆಲ್ಲ ಸಾರ್ವಜನಿಕವಾಗಿ ಮತ್ತು ಬಹಿರ್ಮುಖಿಯಾಗಿ ಕಳೆದ ವ್ಯಕ್ತಿಯೊಬ್ಬರು ತಮ್ಮ ವೃದ್ಧಾಪ್ಯದ ಸಾವಿನ ಸನ್ನಿಧಿಯಲ್ಲಿ ಬದುಕನ್ನು ಒಮ್ಮೆ ಹಿಂತಿರುಗಿ ಕಾಣುವಾಗ ಹುಟ್ಟುವ ನೋಟದಲ್ಲಿ ಜನ್ಮತಳೆದ ಕೃತಿಯಿದು. ಇದು ತನ್ನನ್ನು ತಾನು ನೋಡಿಕೊಳ್ಳುವ ಆತ್ಮಾವಲೋಕನ ಕ್ರಮದಲ್ಲಿ ಹುಟ್ಟಿದ ಕೃತಿ. ಕರ್ನಾಟಕದ ರಾಜಕೀಯ ಚರಿತ್ರೆಯನ್ನು ಕಂಡರಿಸುತ್ತ ಅದರ ಮೌಲ್ಯಮಾಪನ ಮಾಡುವ ಕೃತಿ ಕೂಡ. ಲೇಖಕರು ಗಂಡಾಳಿಕೆ ಮನೋಭಾವದಿಂದ ಹೆಂಗರುಳಿನ ಅಂತಃಕರಣಕ್ಕೆ, ಹಿರಿತನದಿಂದ ಮಗುತನಕ್ಕೆ ರೂಪಾಂತರವಾದಂತೆ ಇಲ್ಲಿನ ಭಾವವಿದೆ. ಒಂಟಿತನದಲ್ಲಿ, ಏಕಾಂತದಲ್ಲಿ ಕಾಡುವ ಬಾಲ್ಯಕಾಲದ ನೆನಪುಗಳು ಬರುವ ಕಡೆ ಆತ್ಮಕಥೆ ಆಪ್ತವಾಗಿದೆ.

ಆತ್ಮಕಥೆಯ ವಿಶೇಷವೆಂದರೆ, ಸ್ವಂತ ವ್ಯಕ್ತಿತ್ವದ, ಕರ್ನಾಟಕ ರಾಜಕಾರಣದ, ಬ್ಯಾರಿ ಸಮುದಾಯದ ಹಾಗೂ ಕರಾವಳಿಯ ಸಾಮಾಜಿಕ ಸನ್ನಿವೇಶದ ಚಿತ್ರಗಳನ್ನು ಕೊಡುವುದು; ಮಾತ್ರವಲ್ಲದೆ, ಅವುಗಳ ವಿಮರ್ಶೆಯನ್ನೂ ಮಾಡಿರುವುದು. ಸೌದಿ ಅರೇಬಿಯಾದಲ್ಲಿ ಇರುವ ವಂಶಾಡಳಿತದ ರಾಜಪ್ರಭುತ್ವವು ಪೈಗಂಬರ್ ಬಯಸಿದ ಖಲೀಫಾ ಪದ್ಧತಿಗೆ ವಿರುದ್ಧವಾಗಿದೆ ಎಂದು ಲೇಖಕರು ಒಂದೆಡೆ ಹೇಳುತ್ತಾರೆ. ಆತ್ಮಕಥೆ ಮುಗಿಯುವುದು ಮಡದಿಯ ಜತೆ ಗಂಡಾಳಿಕೆಯ ಮನೋಭಾವವುಳ್ಳ ತಾನು ನಡೆದುಕೊಂಡ ಬಗೆಗಿನ ಪರಿತಾಪದಿಂದ. ಬೇರೆಬೇರೆ ಧರ್ಮ ಜಾತಿಗಳ ಮಕ್ಕಳೊಂದಿಗೆ ಬೆರೆಯದ ಮದ್ರಸಾ ಶಿಕ್ಷಣದ ಪದ್ಧತಿಯ ಐಸೊಲೇಶನ್ ಬಗ್ಗೆ ಇಲ್ಲಿ ವಿಮರ್ಶೆಯಿದೆ. ಸಂಪ್ರದಾಯವಾದಿ ಮೌಲವಿಗಳ ಟೀಕೆಯಿದೆ. ಲೇಖಕರು ಅವರೊಟ್ಟಿಗೆ ಚರ್ಚೆ ಕೂಡ ಮಾಡುತ್ತಾರೆ. ಮದ್ರಸಾಗಳ ಧಾರ್ಮಿಕ ಶಿಕ್ಷಣವನ್ನು ಲೌಕಿಕವಾಗಿ ಉಪಯುಕ್ತವಾಗುವ ವಿದ್ಯೆಗಳನ್ನು ಕಲಿವ ಜಾಗವಾಗಿಸಬೇಕೆಂದೂ, ಕ್ರೈಸ್ತ ಮಿಶನರಿ ಶಾಲೆಗಳಿರುವಂತೆ ಎಲ್ಲ ಧರ್ಮ ಜಾತಿಯ ಮಕ್ಕಳು ಕಲಿಯುವಂತೆ ವಿಸ್ತರಣೆ ಪಡೆಯಬೇಕೆಂದೂ, ಅಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲ ಧರ್ಮದವರಿಗೆ ಸಂಬಂಧಪಟ್ಟಿರಬೇಕೆಂದೂ ಅಭಿಪ್ರಾಯ ಪಡುವರು. ಮಹಿಳಾ ಶಿಕ್ಷಣದ ಪ್ರಾಮುಖ್ಯದ ಬಗ್ಗೆ ಪ್ರಸ್ತಾಪಿಸುವರು. ಈ ಕಾರಣಕ್ಕೆ ಆತ್ಮಕಥೆಯು ಸಮಾಜ ಸುಧಾರಣವಾದಿಯೊಬ್ಬನ ಜಾತ್ಯತೀತ ಚಿಂತನೆಯ ದಾಖಲೆ.

ಇದನ್ನೂ ಓದಿ: ಪುಸ್ತಕ ಪರಿಚಯ: ಸದನದಲ್ಲಿ ಭೂಪತಿ

ಲೇಖಕರು ಒಂದೆಡೆ ಹೀಗೆ ಹೇಳುತ್ತಾರೆ: “ಮಸೀದಿ ಮದ್ರಸಾಗಳ ಆವರಣದೊಳಗಿರುವ ಶಾಲೆಗಳಲ್ಲಿ ಶಾಲಾ ವಾರ್ಷಿಕೋತ್ಸವ ಸಂದರ್ಭಗಳಲ್ಲಿ ಹಾಡು ನಾಟಕ ನೃತ್ಯ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಲು ವಿದ್ಯಾರ್ಥಿಗಳಿಗೆ ಅಲ್ಲಿಯ ವ್ಯವಸ್ಥಾಪಕರು, ಧಾರ್ಮಿಕ ನಾಯಕರು ಬಿಡುತ್ತಿಲ್ಲ ಎಂಬ ಆರೋಪ ಕೂಡ ಇದೆ. ಇದು ತಪ್ಪು. ಎಳೆಯ ಮಕ್ಕಳನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸುವುದು ಕೂಡ ನಮ್ಮ ಜವಾಬ್ದಾರಿಯಾಗಿದೆ. ಇದೂ ಶಿಕ್ಷಣದ ಒಂದು ಅಂಗವಾಗಿದೆ. ಇಂದಿನ ಕಾಲದ ಅಗತ್ಯವೂ ಆಗಿದೆ. ಇದರಿಂದ ಮಕ್ಕಳ ಪ್ರತಿಭೆ ಹೊರಹೊಮ್ಮಿ ಅರಳಿ ಬೆಳೆಯಲು ಸಹಕಾರಿಯಾಗುತ್ತದೆ ಮತ್ತು ಇದು ಸೌಹಾರ್ದ ಬದುಕಿಗೆ ತುಂಬಾ ಅಗತ್ಯವೂ ಆಗಿದೆ.”

ಆತ್ಮಕಥೆಯು 70-80ರ ದಶಕದ ಕೂಡುಬದುಕಿನ ಚಿತ್ರಗಳನ್ನು ಕೊಡುತ್ತದೆ. ಅದರಲ್ಲಿ ಮುಸ್ಲಿಮರು ಭೂತದಕೋಲ, ಯಕ್ಷಗಾನ, ಕೋಳಿಅಂಕ, ಕಂಬಳದಲ್ಲಿ ಭಾಗವಹಿಸುವ ವಿವರಗಳಿವೆ. ಬಂಟರು ಸ್ಥಳೀಯ ಉರುಸನ್ನು ನಡೆಸಿಕೊಡುವ ವಿವರಗಳಿವೆ. ಇಲ್ಲೊಂದು ವಿಶೇಷ ಪ್ರಸಂಗ ಬರುತ್ತದೆ: ಯಕ್ಷಗಾನಕ್ಕೆ ಹೋಗಲು ಹಟಮಾಡುವ ಮೊಮ್ಮಗನನ್ನು ಮನೆಯ ಅಜ್ಜಿ ನಿರಾಕರಿಸಿ, ಅವನಿಗೆ ಬುದ್ಧಿಹೇಳಲು ಮೌಲವಿಯೊಬ್ಬರಿಗೆ ಒಪ್ಪಿಸುವಳು. ಆದರೆ ಆ ಮೌಲವಿಯು ಮಗುವಿಗೆ ಹಣಕೊಟ್ಟು ನಿದ್ದೆಗೆಡದಂತೆ ಎಚ್ಚರವಹಿಸಿ, ಆಟಕ್ಕೆ ಗುಪ್ತವಾಗಿ ಕಳಿಸಿಕೊಡುತ್ತಾರೆ. ಮಕ್ಕಳನ್ನು ಅವರ ಸಹಜ ಇಚ್ಛೆಗೆ ವಿರುದ್ಧವಾಗಿ ಹಿಡಿದಿಡಬಾರದು ಎಂಬ ಶಿಕ್ಷಕ ಪ್ರಜ್ಞೆಯ ಜತೆಗೆ, ಮಕ್ಕಳು ಸ್ಥಳೀಯ ಪರಿಸರದೊಂದಿಗೆ ಸಹಜವಾಗಿ ಬೆರೆಯುವ ಸನ್ನಿವೇಶವೂ ಇರಬೇಕೆಂಬ ನಾಗರಿಕ ಪ್ರಜ್ಞೆಯನ್ನು ಪ್ರಕಟಿಸುತ್ತಾರೆ. ಇದಕ್ಕೆ ಪೂರಕವಾಗಿ ಆತ್ಮಕಥೆಯು ಬ್ಯಾರಿ ಮುಸ್ಲಿಮರ ಸಂಸ್ಕೃತಿಯ ಚಿತ್ರಗಳನ್ನು ಕೊಡುವುದು. ಬ್ಯಾರಿಗಳ ಮದುವೆ ಬಟ್ಟೆಬರೆ ಊಟಆಟ ಉರುಸುಗಳನ್ನು ದಟ್ಟವಾಗಿ ಕಟ್ಟಿಕೊಡುತ್ತದೆ.

ಈ ಕಾರಣದಿಂದ ಆತ್ಮಕತೆಯು ಮುಸ್ಲಿಮರ ದಟ್ಟವಾದ ಜಾನಪದ ಸಂಸ್ಕೃತಿಯನ್ನು ಮೂಲಭೂತವಾದವೂ; ಕರಾವಳಿಯ ಧಾರ್ಮಿಕ ಕೂಡುಬಾಳ್ವೆಯ ಬದುಕನ್ನು ಕೋಮುವಾದವೂ ಕಳೆದುಹಾಕಿದವು ಎಂಬ ವಿಷಾದಕರ ದನಿಯನ್ನು ಒಳಗೊಂಡಿದೆ. ಇದರ ಭಾಗವಾಗಿಯೇ ಇಲ್ಲಿ ಬರುವ ಸುರತ್ಕಲ್ ಕೋಮುಗಲಭೆಯ ವಿವರಗಳನ್ನು ಗಮನಿಸಬೇಕು. ಕರಾವಳಿಯಲ್ಲಿ ಆರ್ಥಿಕ ಬಡತನವಿದ್ದಾಗ ಅದು ಸಾಂಸ್ಕೃತಿಕವಾಗಿ ಸಿರಿವಂತವಾಗಿತ್ತು ಮತ್ತು ಕೂಡುಬಾಳಿನ ಬದುಕನ್ನು ಹೊಂದಿತ್ತು. ಈಗ ಆರ್ಥಿಕ ಏಳಿಗೆಯಿದೆ; ಸಂಪತ್ತಿದೆ. ಆದರೆ ಮನುಷ್ಯ ಸಂಬಂಧಗಳು ಹಾಗೂ ಸಾಮಾಜಿಕ ಬದುಕು ವಿಘಟಿತವಾಗಿದೆ ಎಂಬ ವಿಷಾದವನ್ನು ಆತ್ಮಕಥೆ ಓದುಗರಲ್ಲಿ ಮೂಡಿಸುತ್ತದೆ. ಹಲಾಲ್, ಹಿಜಾಬ್, ಆಜಾನ್, ಟಿಪ್ಪು, ಉರಿಗೌಡ-ನಂಜೇಗೌಡ, ವ್ಯಾಪಾರ ನಿಷೇಧ, ಮೀಸಲಾತಿ ರದ್ದತಿ ಮೊದಲಾದ ವಿದ್ಯಮಾನಗಳು ಕಳೆದ ಒಂದು ವರ್ಷದಿಂದ ಕರ್ನಾಟಕದ ರಾಜಕೀಯ ಸಾಮಾಜಿಕ ಆರ್ಥಿಕ ಬದುಕನ್ನು ಕದಡಿವೆ. ಈ ಹಿನ್ನೆಲೆಯಲ್ಲಿ ಈ ಆತ್ಮಕಥೆಯು, ಸಾಂಸ್ಕೃತಿಕವಾಗಿ ಕಳೆದುಹೋದ ಸುವರ್ಣಯುಗದಂತೆ, ಸಮಾಜವಾದಿ ರಾಜಕಾರಣದ ಅಧ್ಯಾಯದಂತೆ ಭಾಸವಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...