Homeರಾಜಕೀಯಮಿತ್ರೋ... ಮಿತ್ರೋ... ಮಿತ್ರೋ...

ಮಿತ್ರೋ… ಮಿತ್ರೋ… ಮಿತ್ರೋ…

- Advertisement -
- Advertisement -

ಮಿತ್ರೊ…. ಟೆಡ್ಡಿ ಫೋನ್ ಮಾಡಿದ್ರು.. ಸಡುನ್ ಆಗಿ ಎಂಜಿಲು ಮುಖಕ್ಕೆ ಬಿತ್ತು.. `ಥೂ ಬೋ$%&@#, 2008ರಲ್ಲಿ ನೀವಿಲ್ದೆ 110 ಸೀಟ್ ಗೆದಿದ್ದೆ, ಮೋದಿ ಅಲೆ, ದೇಶಭಕ್ತಿ, ಶಾ ಅಂತ 104ಕ್ಕೆ ತಂದು ನಡುನೀರ್ನಲ್ ನಿಲ್ಸಿ ಕೈಕೊಟ್ರಲ್ಲೋ..’ ಫುಲ್ ಸಂಸ್ಕೃತ.. ಇನ್ನು ಏನೋ ಹೇಳೋಕೆ ಹೋದ್ರು, ಕೋಪ ಮಾಡಿಕೊಂಡೊವ್ರೆ ಅಂಥ ಫೋನ್ ಕಟ್ ಮಾಡಿಬಿಟ್ಟೆ..
* * * *
ಮಿತ್ರೊ…. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರೆಲ್ಗೆ 104 ಡಾಲರ್ ಇದ್ದಾಗ uಠಿಚಿ ಸರ್ಕಾರ ಬರಿ 4.5% ಕೇಂದ್ರೀಯ ತೆರಿಗೆ ಹಾಕಿ ಭಾರತ ಅಭಿವೃದ್ಧಿ ಆಗದಂತೆ ಮಾಡಿತ್ತು.. ನಾವು ಅಧಿಕಾರಕ್ಕೆ ಬಂದಾಗಿನಿಂದ ಅದೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ಗೆ 35 ಡಾಲರ್ ಇಂದ ಹಿಡಿದು 60 ಡಾಲರ್ ಆಗಿದೆ.. ನಾವು 4.5% ಇದ್ದ ಕೇಂದ್ರೀಯ ತೆರಿಗೆಯನ್ನು 19.5% ಹೆಚ್ಚಿಸಿ ದೇಶದ ಅಭಿವೃದ್ದಿಯ್ಯನ್ನು ಭಯಂಕರ ಹೆಚ್ಚಿಸಿದ್ದೇವೆ..!
* * * *
ಮಿತ್ರೊ…. ವೇದಾಂತ ಕಂಪನಿಯ ಅನಿಲ್ ಫೋನ್ ಮಾಡಿದ್ದ.. ಮಚ್ಚ, ಕಂಪನಿಗೆ ಬೀಗ ಹಾಕ್ಬಿಟ್ರು, ಏನಾರ ಮಾಡು ಅಂತ.. ನಾನು ಕೂಡ ಮೊನ್ನೆಯಿಂದ ಕ್ಯಾಲ್ಕುಲೇಟರ್ ಇಡ್ಕೊಂಡ್ ಲೆಕ್ಕ ಹಾಕ್ತಿದ್ದೆ. ಇವನು, ಕಾಂಗಿಗಳು ಮತ್ತು ನಮ್ಮ ಕೃಪೆಯಿಂದ, ಭಾರತೀಯ ಬ್ಯಾಂಕುಗಳಿಂದ ಪಡೆದಿರುವ ಒಟ್ಟೂ ಸಾಲ 2 ಲಕ್ಷ ಕೋಟಿಯಂತೆ. ಒಂದು ಅಂದಾಜಿನ ಮೇಲೆ ಇವನ ಕಂಪನಿಯಲ್ಲಿ ಒಟ್ಟು ಕೆಲಸಗಾರರು 60000.. ಅಂದರೆ ಪ್ರತಿ 3 ಕೋಟಿ 33 ಲಕ್ಷಕ್ಕೆ ಒಂದು ಉದ್ಯೋಗ ಶೃಸ್ಟಿ ಮಾಡುತ್ತಿದ್ದಾನಂತೆ! ಅಂದರೆ ಇವನ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರೆಲ್ಲರೂ ಕೋಟ್ಯಧಿಪತಿಗಳೇ? ಇಲ್ಲ, ಇವನ ಕಂಪನಿಯಲ್ಲಿ 90% ಮೇಲೂ ಕಾರ್ಮಿಕರು, ತಿಂಗಳಿಗೆ 20,000ಕ್ಕಿಂತಲೂ ಕಡಿಮೆ ಸಂಬಳ ಪಡೆಯುತ್ತಿದ್ದಾರೆ.. ಕಾಂಗಿ ಮತ್ತು ನಮಗೆ ಇವನು ಲೆಕ್ಕದಲ್ಲಿ ಕೊಟ್ಟಿರುವ ದೇಣಿಗೆ ಬರಿ 29 ಕೋಟಿ.. ಇನ್ನ ಮಿಕ್ಕ ಅಷ್ಟೊಂದು ಕಾಸಿನಲ್ಲಿ ಏನ್ ಮಾಡ್ತಾ ಇದ್ದಿಯೊ ಅಂತ ಡೌಟ್ನಲ್ಲಿ ಕೇಳ್ದೆ .. ಅವನು “ದೇಶದ್ರೋಹಿ, ಸೈನಿಕರು ಗಡಿಯಲ್ಲಿ ದೇಶಕ್ಕೋಸ್ಕರ ಸಾಯಿತಾ ಇದ್ರೆ ನಿಂಗೆ ಲೆಕ್ಕದ್ ಚಿಂತೆ” ಅಂತ ಫೋನ್ ಕಟ್ ಮಾಡ್ಬಿಡೋದ!!!
* * * *
ಮಿತ್ರೊ…. , ನನ್ನ ಗುರು ಸಾವರ್ಕರ್ ಅವರ ಬಗ್ಗೆ ನಾನು ಚಿಕ್ಕಂದಿನಿಂದಲೇ ಓದಲು ಶುರು ಮಾಡಿದ ಪುಸ್ತಕ “ಲೈಫ್ ಒಫ್ ಬ್ಯಾರಿಸ್ಟರ್ ಸಾವರ್ಕರ್”. ಇದು ಅವರು ಬ್ರಿಟಿಷರಿಂದ ಭಿಕ್ಷೆ ಬೇಡಿ, ನಾನು ಇನ್ನೆಂದಿಗೂ ಬ್ರಿಟಿಷರ ವಿರುದ್ಧ ಹೋರಾಡುವುದಿಲ್ಲ, ಇನ್ನು ಮುಂದೆ ನಾನು ನಿಮ್ಮ ಗುಲಾಮ ಎಂದು ಒಂದರ ಮೇಲೆ ಒಂದರಂತೆ ಹನ್ನೊಂದು ಪತ್ರಗಳನ್ನು ಬೆರೆದು 1924ರಲ್ಲಿ ಷರತ್ತಿನ ಮೇಲೆ ಬಿಡುಗಡೆಯಾಗಿ ಎರೆಡನೆ ವರ್ಷದಲ್ಲಿ(1926) ಅನಾಮಧೇಯ ಚಿತ್ರಗುಪ್ತ ಎಂಬುವವರು ಪ್ರಕಟಿಸಿದ ಪುಸ್ತಕ.. ಈ ಪುಸ್ತಕ ಎಷ್ಟು ರೋಚಕವಾಗಿತ್ತೆಂದರೆ, ಸಾವರ್ಕರ್ ಹುಟ್ಟಿನಿಂದಲೇ ಅತಿ ಬುದ್ದಿವಂತ, ಆಜನ್ಮ ಹೋರಾಟಗಾರ, ಅನ್ಯಾಯಗಳ ವಿರುದ್ಧ ಸಿಡಿದೇಳುವ ವೀರ, ಶೂರ, ಯಾವುದೇ ತಂತ್ರಕ್ಕೆ, ಮಣಿಯದೆ ಪ್ರತಿತಂತ್ರ ಹೆಣೆಯುವ ಶಕ್ತಿ ಮತ್ತು ಯುಕ್ತಿಯುಳ್ಳ ವೀರ ಎಂದು ಪುಸ್ತಕದ ಪ್ರತಿಯೊಂದು ಹಂತದಲ್ಲೂ ಬರೆಯಲಾಗಿತ್ತು.. ಯಾವುದೇ ಫಿಕ್ಷನ್ ಪುಸ್ತಕ ಓದುತ್ತಿದ್ದರೆ ಆ ಪಾತ್ರಗಳ ಒಳಗೆ ನಾವು ಹೇಗೆ ನುಸುಳಿ ಮಾರುಹೋಗುತ್ತೇವೋ ಅದೇ ರೀತಿ ಸಾವರ್ಕರರೇ ನಾನು ಎಂಬಂತೆ ಕಲ್ಪಿಸಿಕೊಳ್ಳಲು ಆರಂಭಿಸಿದೆ (ಒಂದು ರೀತಿಯ ನಾಗವಲ್ಲಿ ಟೈಪ್ಸ್). ನನ್ನ ಮೂವತ್ತೊಂದನೆ ವರ್ಷದಲ್ಲಿ, ಅದೆ 1987ರಲ್ಲಿ ತಿಳಿಯಿತು ಆ ಚಿತ್ರಗುಪ್ತ ಬೇರ್ಯಾರು ಅಲ್ಲ, ಖುದ್ದು ಸರ್ವರ್ಕರ್, ಚಿತ್ರಗುಪ್ತ ಎಂಬ ಹೆಸರಿನಲ್ಲಿ ಬರೆದ ಪುಸ್ತಕ ಎಂದು.. ಅಷ್ಟೊತ್ತಿಗಾಗಲೇ ಕಾಲ ಮಿಂಚಿತ್ತು.. ನಾನು ಸಾವರ್ಕರ್ ಆಗಿಹೋಗಿದ್ದೆ.. ನಿಜಜೀವನದಲ್ಲಿ ಭಗತ್ ಸಿಂಗ್, ರಾಜ್ಗುರು, ಸುಖ್ದೇವ್ ಥರ ವೀರರಾಗದಿದ್ದರೂ ಮುಖವಾಡಗಳಲ್ಲಿ ಹೀರೊ ಅಗೋ ಖುಷಿನೆ ಬೇರೆ.. ಈಗಲೂ ಅದನ್ನೇ mಚಿiಟಿಣಚಿiಟಿ ಮಾಡ್ಕೊಂಡ್ ಹೋಗ್ತಾ ಇದ್ದೀನಿ..
* * * *
ಮಿತ್ರೊ….
ನಾನು ಕೆಲಸ ಮಾಡುವವನು ಅಲ್ಲವೇ ಅಲ್ಲ, ನಾನು ಕಲರ್‍ಪುಲ್ ಮಾತಿನ ಗಿರಾಕಿ. ನಾಲ್ಕು ವರ್ಷಗಳಿಂದ ದೇಶದ ಆರ್ಥಿಕತೆಯನ್ನು ಹಳ್ಳ ಹಿಡಿಸಿದೆ. ನನ್ನ ತುಘಲಕ್ ತೀರ್ಮಾನವಾದ ಅಮಾನ್ಯೀಕರಣದಿಂದ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡರು. ಇನ್ನೂ ದೇಶದ ಆಡಳಿತ ನಡೆಸಲು ಬಾರದೆ ವಿದೇಶಿ ಪ್ರವಾಸ ಮಾಡಿಕೊಂಡು ಅಲ್ಲಿಯೂ ಭಾಷಣ ಮಾಡಿಕೊಂಡು ದಿನ ನೂಕಿದೆ. ಇನ್ನೂ ಹೀಂಗೆ ಹೇಳುತ್ತ ಹೋದರೆ ನೂರಾರು ಸಾಧನೆಗಳನ್ನು ಹೇಳಬಹುದು. ನೀವುಗಳು ನನ್ನ ಮಾತಿನಿಂದಲೇ ಹೊಟ್ಟೆ ತುಂಬಿಸಿಕೊಂಡು ದೇಶಕ್ಕಾಗಿ ಮಾಡುತ್ತಿರುವ ತ್ಯಾಗ ನೆನಸಿಕೊಂಡರೆ ಇನ್ನೂ ಅರ್ಧ ಕೆಜಿ ಅಣಬೆ ತಿನ್ನುವ ಅನ್ನಿಸುತ್ತೆ. 2019 ಕ್ಕೂ ನನ್ನ ಮಾತನ್ನೆ ರಾಷ್ಟ್ರ ನಿರ್ಮಾಣ ಎಂದು ತಿಳಿದುಕೊಂಡು ಮತ್ತೊಮ್ಮೆ ಪ್ರಧಾನಿ ಮಾಡುತ್ತಿರಿ ಅನ್ನುವ ಗ್ಯಾರಂಟಿ ನನಗೆ ಇದೆ.
* * * *
ಮಿತ್ರೊ…. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಿದ್ರೆ ನಿಮ್ಗೆ ಇಷ್ಟ್ ಮಜಾ ಇರ್ತೀತ್ತ? ನಂಗೊತ್ತು ನೀವ್ ಯಾಕ್ ಬಿಜೆಪಿಗೆ ವೋಟ್ ಹಾಕುದ್ರಿ ಅಂತ.. ಗೋವಾ, ಕೇರಳ, ರೆಸಾರ್ಟ್ ರಾಜಕೀಯ, 100 ಕೋಟಿ, ಅವ್ನು ಅಲ್ಲಿಂದ ಇಲ್ಲಿಗೆ, ಇಲ್ಲಿರೋವ್ನು ಅಲ್ಲಿಗೆ.. ಇವ್ನು ಅವ್ನ ಭ್ರಷ್ಟ ಅನ್ನೋದು, ಅವ್ನು ಇವ್ನ ಭ್ರಷ್ಟ ಅನ್ನೋದು.. ಎಲ್ಲ ಮಿಸ್ ಮಾಡ್ಕೊಂಡಿದ್ರಿ ಅಂತ ಗೊತ್ತು..
* * * *
ಮಿತ್ರೊ…. ನಾನು ತೈವಾನ್ ಇಂದ ತರ್ಸಿರೋ ಇಂಪೋರ್ಟೆಡ್ ಅಣಬೆ ತಿನ್ನೋದು.. ಯಾರೋ ಕಿಡಿಗೇಡಿಗಳು ನಾನು ಭಾಷಣ ಪ್ರಾರಂಭ ಮಾಡೋಕು ಮುಂಚೆ ಕೊಡೈ ಕನಲ್ ಅಣೆಬೆ ಸೇರ್ಸಿ ಕೊಡ್ತಿದ್ದಾರೆ ಅನ್ಸುತ್ತೆ.. ಅದಕ್ಕೆ ನಾನೇನು ಮಾತಾಡ್ತಾ ಇದ್ದೀನಿ ಅಂಥ ನಂಗೆ ಗೋತೈತಿಲ್ಲ.. ಹಂಗೆ ನಮ್ಮ ಈಶ್ವರಪ್ಪ ಹೇಳ್ದಂಗೆ ಒಂದ್ ಫ್ಲೋ ನಲ್ಲಿ ಬಾಯಿಗೆ ಬಂದದ್ದು ಸುಳ್ಳೋ ಪೊಳ್ಳೋ ಜೋರಾಗಿ ಹೇಳ್ಬಿಡ್ತೀನಿ.. ಆ ಕಿಡಿಗೇಡಿಗಳನ್ನು ಹಿಡಿಯಲು ನನ್ನ ಗೆಲ್ಲಿಸಿ…
* * * *
ಮಿತ್ರೊ…. ನಾನೀಗ ನೇಪಾಳದ ಮುಕ್ತಿನಾಥ ದೇವಸ್ಥಾನದಲ್ಲಿದ್ದೀನಿ.. ಇಲ್ಲಿ ಧಾರ್ಮಿಕ ಡಿಪ್ಲೊಮಾಸಿ ಮುಗಿಸಿ ಮೌಂಟ್ ಎವರೆಸ್ಟ್ ಹತ್ತಲು ಯೋಚಿಸ್ತಿದ್ದೀನಿ.. ಕಾಂಗ್ರೆಸ್ನವರು, ಮೌಂಟ್ ಎವರೆಸ್ಟ್ ಈವರೆಗೂ ಹತ್ತದೆ ಅದನ್ನು ಅವಮಾನ ಮಾಡಿದ್ದಾರೆ..

– ಭರತ್ ಹೆಬ್ಬಾಳ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...