HomeಎಕಾನಮಿExplainer: ಈ ಜಿಡಿಪಿ (GDP) ಅಂದರೆ ಏನಪಾ? - ಬೈ ಡೇಟಾಮ್ಯಾಟಿಕ್ಸ್

Explainer: ಈ ಜಿಡಿಪಿ (GDP) ಅಂದರೆ ಏನಪಾ? – ಬೈ ಡೇಟಾಮ್ಯಾಟಿಕ್ಸ್

ನಮ್ಮ ದೇಶ ಕೆಲವೇ ವರ್ಷಗಳಲ್ಲಿ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂಬ ಕನಸ ಮಾರುವ ಚಲುವರು ನಮ್ಮ ಸುತ್ತ ಮುತ್ತ ಇದ್ದಾರ. ನಮ್ಮ ಸ್ನೇಹಿತರ, ಕುಟುಂಬದ, ನಮ್ಮ ಸಹಪಾಠಿಗಳ, ಸಹ ಕೆಲಸಗಾರರ ಗುಂಪುಗಳಲ್ಲಿ ತುಂಬ್ಯಾರ.

- Advertisement -
- Advertisement -

ಜಿಡಿಪಿ ಅಥವಾ ನಿವ್ವಳ ಆಂತರಿಕ ಉತ್ನನ್ನ ಹಿಂಗಂದರ ಒಂದು ದೇಶದ ಜನಾ ತಮ್ಮ ಎಲ್ಲಾ ಚಟುವಟಿಕೆಗಳಿಂದ ಒಂದು ವರ್ಷದಾಗ ಸೃಷ್ಟಿಸಬಹುದಾದ ಒಟ್ಟು ಸಂಪತ್ತು. ಇದು ಸರಕು ಅಥವಾ ಸೇವೆಯ ರೂಪದಾಗ ಇರಬಹುದು.

ನೀವು ಏನರ ನೌಕರಿ ಮಾಡ್ತೀರಿ, ಅಥವಾ ವ್ಯಾಪಾರ ಮಾಡತೀರಿ ಅದರಿಂದ ನಿಮಗ ಎಷ್ಟು ದುಡ್ಡು ಅಥವಾ ಅದರ ಮೌಲ್ಯದ ಪರ್ಯಾಯ ವಸ್ತು ಅಥವಾ ಸೇವೆ ಸಿಗತದೋ ಅದು ನಿಮ್ಮ ಪಾಲಿನ ಜಿಡಿಪಿ. ಇಂಥದನ್ನೇ ಎಲ್ಲಾರೂ ಕೂಡಿ ಮಾಡಿದಾಗ ಸಿಗೋ ಲೆಕ್ಕಾ ಅಂದರ ಈ ದೇಶದ ಜಿಡಿಪಿ.


ಇದನ್ನೂ ಓದಿ: 1 ನೇ ಆರ್ಥಿಕ ತ್ರೈಮಾಸಿಕ ಜಿಡಿಪಿ 23.9% ಇಳಿಕೆ; ಐತಿಹಾಸಿಕ ಇಳಿಕೆ ಕಂಡ ಭಾರತ


ಇನ್ನ ಕೆಲವು ವಿಷಯ ಜಿಡಿಪಿಯೊಳಗ ಬರಂಗಿಲ್ಲಾ. ನಿಮ್ಮ ದಾಡಿ ನೀವ ಮಾಡಿಕೊಳ್ಳೋದು ಅನ್ರೀ, ನಿಮ್ಮ ತಾಯಿ, ಹೆಂಡತಿ, ಮಗಳು, ಅಕ್ಕಾ, ತಂಗಿ, ವೈನಿ, ಅಥವಾ ಮತ್ಯಾರರೆ ನಿಮ್ಮ ಅಡಿಗಿ ಮನಿಯೊಳಗ ನಿಮ್ಮ ಮತ್ತು ತಮ್ಮ ಊಟಕ್ಕ ಅಡಿಗೀ ಮಾಡತಾರಲ್ಲಾ, ಅದುನೂ ಬರೋದಿಲ್ಲ. ನಮ್ಮ ದೇಶದೊಳಗ ಕೋಟ್ಯಾಂತರ ಹೆಣ್ಣು ಮಕ್ಕಳು ಸಾಯೋ ತನಕಾ ತಮ್ಮ ತಮ್ಮ ಮನಿಯೊಳಗ, ಕೈ ಸುಟಗೋತ ದುಡದು ಹಾಕತಾರಲ್ಲಾ ಅದರ ಮೌಲ್ಯ ಸರಕಾರದ ಜಿಡಿಪಿ ಲೆಕ್ಕದೊಳಗ ಬರಂಗಿಲ್ಲಾ. ಗಂಡು ಮಕ್ಕಳ ಮನಸಿನ್ಯಾಗಂತೂ ಅದು ಬರೋದೇ ಇಲ್ಲಾ ಬಿಡ್ರಿ. ಅದು ಬ್ಯಾರೆ ಮಾತು.

ನಂ ಭಾರತದ ಈ ವರ್ಷದ ಜಿಡಿಪಿ ಸುಮಾರು 2.6 ಲಕ್ಷ ಕೋಟಿ ಡಾಲರ್ ಅಂದರ ಸುಮಾರು 182 ಲಕ್ಷ ಕೋಟಿ. ಇದು 2011-12 ವರ್ಷವನ್ನು ಅಳತೆಗೋಲಾಗಿ ತೆಗೆದುಕೊಂಡಾಗ ಸಿಗುವ ಲೆಕ್ಕ. ಮುಂಚೆ ಇದು 1981 ಇತ್ತು, 91 ಆತು, 2004 ನಾಲ್ಕು ಆತು. ಮೋಷಾ ಸರಕಾರ ಬಂದ ಮ್ಯಾಲೆ ಇದು 2011 ಆತು. ಲೆಕ್ಕದ ವರ್ಷ ಬದಲಾದಂಗೆಲ್ಲಾ ಜಿಡಿಪಿಯ ಮೌಲ್ಯ ಬದಲಾಗತದ, ಅದು ಮತ್ತ ಯೂನಿವರ್ಸಿಟಿ ಬೃಹಸ್ಪತಿಗಳ ತಲಿ ಕೆಡಿಸೋ ಲೆಕ್ಕ. ನಮ್ಮಂತಹ ಹುಲುಮಾನವರಿಗಲ್ಲ. ಅದನ್ನ ಬಿಡ್ರಿ.

ಹಂಗಾರ ಬ್ಯಾರೆ ದೇಶಗಳ ಜಿಡಿಪಿ ಎಷ್ಟದಪಾ? ಇದು ಯಾಕ ಬೇಕಂದ್ರ, ನಿಮ್ಮ ಹುಡುಗಾ ರನ್ನಿಂಗ್ ರೇಸ್ ನ್ಯಾಗ ಎಷ್ಟನೇ ಬಂದಾನ್ರೀ ಅಂದ್ರ ಸೆಕೆಂಡ್ ಬಂದಾನ ಅಂತ ನೀವು ಹೆಮ್ಮೆಯಿಂದ ಹೇಳಿದ್ರಿ ಅಂತ ತಿಳಕೋಳ್ರಿ. ಆ ರೇಸಿನ್ಯಾಗ ಎಷ್ಟು ಜನಾ ಇದ್ದರು ಅಂದರು ಅಂತ ತಿರಗಿ ಕೇಳಿದರ ಇಬ್ಬರ ರನ್ನರ್ಸ ಇದ್ದರು ಅಂತ ನಾಚಿಕೊಂಡು ಹೇಳೋ ಪರಿಸ್ಥಿತಿ ನಿಮಗ ಬರಬಾರದಲ್ಲಾ, ಅದಕ್ಕ.

ನೋಡ್ರಿ, ಈ ಸಮಸ್ತ ಭೂಮಂಡಲದಾಗ ಸುಮಾರು 220 ದೇಶ ಅಥವಾ ಸ್ವಯಂ ಆಡಳಿತ ಪ್ರದೇಶಾ ಅದಾವು. ಅದರಾಗ ಸುಮಾರು 200 ದೇಶದ ಜಿಡಿಪಿ ಲೆಕ್ಕಾ ಸಿಕ್ಕದ.
ಅದರ ಪ್ರಕಾರ ಅತಿ ಹೆಚ್ಚಿನವು ಹಿಂಗವ.

ಅಮೇರಿಕಾ 1357 ಲಕ್ಷ ಕೋಟಿ
ಚೈನಾ 857 ಲಕ್ಷ ಕೋಟಿ
ಜಪಾನ್ 350 ಲಕ್ಷ ಕೋಟಿ
ಜರ್ಮನಿ 257 ಲಕ್ಷ ಕೋಟಿ
ಭಾರತ 182 ಲಕ್ಷ ಕೋಟಿ
ಇನ್ನು ನಮ್ಮ ನೆರೆ ಹೊರೆಯವರ ಲೆಕ್ಕ ಎಷ್ಟು? ಬೆಳಿಗ್ಗೆ ಎದ್ದಾಗಿಂದಲೂ ಮಲಗೋ ತನಕಾ ನಾವು ಎಲ್ಲದಕ್ಕೂ ಹೋಲಿಸಿಕೊಳ್ಳುವ ನಮ್ಮ ನೆರೆಯವರು ಈ ರೇಸಿನ್ಯಾಗ ಎಲ್ಲಿದ್ದಾರ ಅಂದರ-
ಬಾಂಗ್ಲಾ – 17 ಲಕ್ಷ ಕೋಟಿ
ಪಾಕಿಸ್ತಾನ 21 ಲಕ್ಷ ಕೋಟಿ
ಇನ್ನು ಲಭ್ಯ ಅಂಕಿ ಅಂಶಗಳ ಪ್ರಕಾರ ಅತ್ಯಂತ ಕಡಿಮೆ ಜಿಡಿಪಿ ಇರುವ ದೇಶಗಳು ಅಂದರ-
ಬುರುಂಡಿ 25,000 ಕೋಟಿ
ರುವಾಂಡಾ 63,000 ಕೋಟಿ

ನಮ್ಮ ದೇಶ ಕೆಲವೇ ವರ್ಷಗಳಲ್ಲಿ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂಬ ಕನಸ ಮಾರುವ ಚಲುವರು ನಮ್ಮ ಸುತ್ತ ಮುತ್ತ ಇದ್ದಾರ. ನಮ್ಮ ಸ್ನೇಹಿತರ, ಕುಟುಂಬದ, ನಮ್ಮ ಸಹಪಾಠಿಗಳ, ಸಹ ಕೆಲಸಗಾರರ ಗುಂಪುಗಳಲ್ಲಿ ತುಂಬ್ಯಾರ.

ಅವರೆಲ್ಲಾ ತಿಳಿದುಕೊಳ್ಳಬೇಕಾದ ವಿಷಯ ಏನಪಾ ಅಂದರ ನಾವು ಜಿಡಿಪಿ ಪಟ್ಟಿಯ ಮೇಲಿನ ದೇಶಗಳಿಗೆ ಹತ್ತಿರ ಇಲ್ಲ. ಕೆಳಗಿನವರಿಗೆ ಹತ್ತಿರ ಇದ್ದೇವೆ. ಅದಕ್ಕೇ ಭೂಗೋಳದ ದಕ್ಷಿಣದ ದೇಶಗಳ ಭ್ರಾತ್ವತ್ವದ ಮಾತು, ಬ್ರಿಕ್ಸ ದೇಶಗಳ ಹೊಂದಾಣಿಕೆಯ ಮಾತುಗಳು ಆಗಾಗ ಕೇಳಿ ಬರತಿರತಾವು.
ಇದನ್ನ ನಾವು ಮರೆಯಬಾರದು.

ನಾವು ಏಣಿಯ ಎಷ್ಟನೇ ಮೆಟ್ಟಿಲ ಮೇಲೆ ಇದ್ದೇವಿ ಅನ್ನುವುದು ಗೊತ್ತಾಗದಿದ್ದರ ಎಷ್ಟು ಬೇಗ, ಎಷ್ಟು ಎತ್ತರಕ್ಕೆ ಏರಬೇಕು ಎನ್ನುವುದು ನಮಗೆ ಗೊತ್ತಾಗಲಿಕ್ಕೆ ಸಾಧ್ಯವಿಲ್ಲ. ನಾವು ನಿಂತಲ್ಲೇ ನಿಂತು ಮೇಲಿನವರನ್ನು ನೋಡಿ ಹೊಟ್ಟಿ ಕಿಚ್ಚು ಪಡಬಹುದು, ಅಥವಾ ಕೆಳಗಿನವರನ್ನು ನೋಡಿ ಅಪಹಾಸ್ಯ ಮಾಡಬಹುದು. ನಮ್ಮ ಮನಿಯೊಳಗ ಕನ್ನಡಿ ಇರದಿದ್ದರ, ಬೇರೆಯವರ ಮುಖದ ಮೇಲಿನ ಕಲೆಯ ಬಗ್ಗೆ ಮಾತಾಡಬಾರದು.

ಈ ಸಲಾ ಈ ವಿಷಯದ ಕಡೆ ನಮ್ಮ ಸಂಕೀರ್ತನೆ ಯಾಕ ಹೊರಳಿತಪಾ ಅಂದರ ಅದಕ್ಕೊಂದು ಛಂದನೆ ಕಾರಣ ಅದ.

ನಮ್ಮ ಮೋಹನ ಭಾಗವತ ಅವರು `ಜಿಡಿಪಿ’ ಭಾರತೀಯ ಮೂಲದ ಕಲ್ಪನೆ ಅಲ್ಲಾ ಅಂತ ಹೇಳ್ಯಾರ. ಅಷ್ಟ ಅಲ್ಲದ `ಲಿಂಚಿಂಗ್’ ಅನ್ನೋದು ಸಹ ನಮ್ಮ ಸಂಸ್ಕೃತಿಯ ಮೂಲದ್ದಲ್ಲಾ ಅಂತಂದಾರ.
ಅಮಿತ ಷಾ ಅವರು `ಮಾನವ ಹಕ್ಕುಗಳು` ಅನ್ನೋದು ನಮ್ಮ ಭಾರತೀಯ ಸಂಸ್ಕೃತಿಯ ಕಲ್ಪನೆ ಅಲ್ಲಾ ಅಂತ ಅಪ್ಪಣೆ ಕೊಟ್ಟಾರ.

ಅಂದರ ಈ ಮೂರು ವಿಷಯಗಳ ಬಗ್ಗೆ ತಿಳಕೊಳ್ಳೋದು, ಮಾತಾಡೋದು ನಿಷಿದ್ಧ ಅಂತ ಆತಲ್ಲಾ.
ಅದಕ್ಕಂತನ, ಈ ವಾರದ ಡೇಟಾ ಖೋಲಿಯೊಳಗ ನಮ್ಮ ಪ್ರವೇಶ. ಈ ನಿಷೇಧಿತ ವಸ್ತುವಿನ ಹುಡುಕಾಟಕ್ಕ.


ಇದನ್ನೂ ಓದಿ: ಅಸಂಘಟಿತ ವಲಯದ ಆರ್ಥಿಕತೆ ನಾಶ; ಜಿಡಿಪಿ ಶೇ.-23.9ಕ್ಕೆ ಕುಸಿತ: ಕೇಂದ್ರ ಸರ್ಕಾರದ ಮೇಲೆ ರಾಹುಲ್ ವಾಗ್ದಾಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...