Homeಮುಖಪುಟರಾಜ್ ಠಾಕ್ರೆ, ಸೋಲಿನಿಂದ ಕಲಿತ ಪಾಠವೆ..? ಹೊಸ ಆಟವೆ..?

ರಾಜ್ ಠಾಕ್ರೆ, ಸೋಲಿನಿಂದ ಕಲಿತ ಪಾಠವೆ..? ಹೊಸ ಆಟವೆ..?

- Advertisement -
ಹೆಚ್ಚಿನ ರಾಜಕೀಯ ಪಂಡಿತರು ಮಹಾರಾಷ್ಟ್ರದ ಸ್ಪರ್ಧೆಯಿಂದ ಹೊರಗೆಸೆದಿದ್ದ ರಾಜ್ ಠಾಕ್ರೆ ಮತ್ತೆ ಕಣದಲ್ಲಿದ್ದಾರೆ. ಆದರೆ ಅವರು ಹುಲಿ ವೇಷದ ಜತೆಗೆ ಬರುವ ಕೋವಿಯವನೇ ಅಥವಾ ನಿಜವಾದ ಹುಲಿಯೇ? ಯಾಕೆಂದರೆ ಕಳೆದ ಬಾರಿ 2009ರಲ್ಲಿ ಅಧಿಕಾರಕ್ಕೆ ಬರಲು ನೇರವಾಗಿ ಮತದಾರರನ್ನು ಕೋರುವಷ್ಟು ಆತ್ಮವಿಶ್ವಾಸವನ್ನು ರಾಜ್ ಠಾಕ್ರೆ ಹೊಂದಿದ್ದರು. ಆದರೆ ಈ ಬಾರಿ ಪ್ರತಿಪಕ್ಷದ ಭಾಗವನ್ನಾಗಿ ಮಾಡಿ ಎಂದು ಕೋರುತ್ತಿದ್ದಾರೆ. ಹಾಗಾದರೆ ಬದಲಾಗಿರುವುದು ಏನು?
2009ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ ಠಾಕ್ರೆ ಪಕ್ಷ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್) 13 ಸ್ಥಾನಗಳನ್ನು ಗಳಿಸಿತ್ತು. ಆದರೆ, 2014ರಲ್ಲಿ ಕೇವಲ ಒಂದು ಸ್ಥಾನವನ್ನಷ್ಟೇ ಗಳಿಸಿ ಭಾರೀ ಹೊಡೆತ ತಿಂದಿತ್ತು. ಕಾಲಕ್ರಮೇಣ ಕಾರ್ಯಕರ್ತರು ಪಕ್ಷದ ಕೈಬಿಟ್ಟರು. ಪಕ್ಷ ವಾಸ್ತವ ಸ್ಥಿತಿಯೊಂದಿಗಿನ ಸಂಪರ್ಕ ಕಳೆದುಕೊಂಡಿತು. ಎಂಎನ್‌ಎಸ್ ರಾಜಕೀಯವಾಗಿ ಲೆಕ್ಕಕ್ಕಿಲ್ಲದ ಪಕ್ಷವಾಯಿತು.
‘ಮ.ನ.ಸೇ ರಾಜ್ ಕರ್ನೇವಾಲ’ (ಮನದಿಂದ ರಾಜ್ಯಭಾರ ಮಾಡುವವನು) ಎಂಬ ಸ್ವಯಂ ಘೋಷಣೆಯನ್ನು ಹೊಂದಿರುವ ರಾಜ್ ಠಾಕ್ರೆ ಕಳೆದ ಬಾರಿಯ ವೈಫಲ್ಯದಿಂದ ಚೇತರಿಸಿಕೊಳ್ಳಲು ಈ ಬಾರಿ ಯಾವ ಯೋಜನೆ ಹಾಕಿದ್ದಾರೆ? ಅದೂ ಕೂಡಾ ಕಳೆದ ಬಾರಿ ಗೆದ್ದಿದ್ದ ಏಕೈಕ ಶಾಸಕನೂ ಕಳೆದ ತಿಂಗಳು ಶಿವಸೇನೆಗೆ ಹಾರಿರುವಾಗ, ತಾಂತ್ರಿಕವಾಗಿ ಅವರ ಪಕ್ಷಕ್ಕೆ ಶಾಸಕರೂ ಇಲ್ಲ, ಸಂಸದರೂ ಇಲ್ಲ. ಬೃಹತ್ ಮುಂಬಯಿ ಮಹಾನಗರ ಪಾಲಿಕೆಯ ಚುನಾವಣೆಗಳಲ್ಲಿ ಪಕ್ಷವು 2012ರಲ್ಲಿ 27 ಸ್ಥಾನಗಳನ್ನು ಗೆದ್ದಿತ್ತು. 2017ರಲ್ಲಿ ಕೇವಲ ಏಳಕ್ಕೆ ಇಳಿದಿತ್ತು. ಅದರಲ್ಲೂ ಆರು ಮಂದಿ ಪಕ್ಷದ ನಾಯಕರು ಶಿವಸೇನೆಗೆ ಜಿಗಿದರು. 2009ರಿಂದ 2009ರತ ತನಕ  ಪಕ್ಷದ ಅವನತಿ ಈ ರೀತಿಯಲ್ಲಿ ಆಗಿದೆ. ಒಬ್ಬೊಬ್ಬರಾಗಿ ಪಕ್ಷದ ನಾಯಕರು ಮತ್ತು ಕಾರ್ಪೊರೇಟರ್‌ಗಳು ಠಾಕ್ರೆಗೆ ಕೈಕೊಟ್ಟಿದ್ದಾರೆ. ಇದರಿಂದ ಪಕ್ಷವು ಸಾಮಾನ್ಯ ಮತದಾರರೊಂದಿಗೆ ಸಂಪರ್ಕ ಕಳೆದುಕೊಂಡಿದೆ.
ಈ ಬಾರಿ ಎಂ‌ಎನ್ಎಸ್, ಕಾಂಗ್ರೆಸ್ ಜತೆಗೆ ಮೈತ್ರಿ ಹೊಂದಿರುವ ಶರದ್ ಪವಾರ್ ಅವರ ಎನ್‌ಸಿಪಿ ಜತೆ ತಾಂತ್ರಿಕವಾಗಿ ಹೊಂದಾಣಿಕೆ ಮಾಡಿಕೊಂಡಿರುವಂತೆ ಕಾಣುತ್ತದೆ. ಉದಾಹರಣೆಗೆ ಪುಣೆಯ ಪ್ರತಿಷ್ಟಿತ ಕೊತ್ರೂಡ್ ಕ್ಷೇತ್ರವನ್ನು ತೆಗೆದುಕೊಳ್ಳಬಹುದು. ಅಲ್ಲಿ ಎನ್‌ಸಿಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಎಂಎನ್‌ಎಸ್ ಪಕ್ಷವನ್ನು ಬೆಂಬಲಿಸುತ್ತಿದೆ.
ಮಾತಿನ ಹುಲಿ..?
ಬಾಳಾ ಠಾಕ್ರೆಯ ಮಾತಿನ ಶೈಲಿ, ಮತ್ತೆ ಮತ್ತೆ ಬೈಗುಳಗಳ ಬಳಕೆ, ಪ್ರಚೋದನಕಾರಿ ಪದಗಳು ಠಾಕ್ರೆಯ ಹಿಂಬಾಲಕರನ್ನು ಹಾಗೆಯೇ ಉಳಿಸಿವೆ. ಆದುದರಿಂದ ಜನರು ‘ಮುಂದೇನು?’ ಎಂದು ಕಾಯುತ್ತಿದ್ದಾರೆ.
ಇತ್ತೀಚೆಗೆ “ಮಾತು ಕೃತಿಗೆ ಇಳಿಯುತ್ತಿಲ್ಲ” ಎಂಬ ಗೊಣಗು ಕಾರ್ಯಕರ್ತರದ್ದಾಗಿದೆ. ಅಧಿಕಾರ ಇಲ್ಲದುದರಿಂದ ಅವರು ಏನನ್ನೂ ಮಾಡಲು ಸಾಧ್ಯವಿರಲಿಲ್ಲ ಎಂದು ಯಾರಾದರೂ ವಾದಿಸಬಹುದು. ಆದರೆ, 2012ರಲ್ಲಿ ಮಹತ್ವದ ನಾಸಿಕ್ ಮಹಾನಗರಪಾಲಿಕೆ ಚುನಾವಣೆಗಳಲ್ಲಿ ಗೆದ್ದಾಗ ಎಂಎನ್‌ಎಸ್‌ಗೆ ಒಂದು ಒಳ್ಳೆಯ ಅವಕಾಶ ಇತ್ತು. ಆದರೆ ಅದು ಉಳಿಯಲಿಲ್ಲ. ಮತದಾರರು ಅದರ ಸದಸ್ಯ ಬಲವನ್ನು 2012ರ 40ರಿಂದ 2017ರಲ್ಲಿ ಕೇವಲ ಐದಕ್ಕಿಳಿಸಿದರು. ಭಾಷಣಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದರೂ ಠಾಕ್ರೆ ಮಾತುಗಳು ಆಕ್ರೋಶವನ್ನು ಹುಟ್ಟುಹಾಕಿದರೂ ಸಹ ಮತವಾಗಿ ಪರಿವರ್ತನೆ ಆಗುತ್ತಿಲ್ಲ ಎಂಬುದನ್ನು ತೋರಿಸುತ್ತದೆ. ಈ ಸಲ ರಾಜ್ ಠಾಕ್ರೆಯ ತಂತ್ರ ಎಂದರೆ, ತನ್ನ ಧ್ವನಿ, ದೃಶ್ಯ ಮತ್ತು ಭಾಷಣಗಳಿಂದ ಮತದಾರರನ್ನು ಆಕರ್ಷಿಸುವುದು ಮಾತ್ರವಲ್ಲ, ತನ್ನ ಗುರಿಯ ಬಗ್ಗೆ ಕಟುವಾದ ಸತ್ಯವನ್ನು ಹೇಳುವುದು. ಅದೆಂದರೆ…
ಪ್ರತಿಪಕ್ಷದ ಹುಡುಗ..!
“ಅವನು ಪ್ರತಿಪಕ್ಷಗಳ ಮುಖವಾಣಿ” ಎಂಬುದು ರಾಜ್ ಠಾಕ್ರೆಯ ಬಗ್ಗೆ ಬಿಜೆಪಿ ಮತ್ತು ಶಿವಸೇನೆಯ ಟೀಕೆ. ಇದಕ್ಕೆ ಕಾರಣವೆಂದರೆ ಕಳೆದ ಲೋಕಸಭಾ ಚುನಾವಣೆಯ ವೇಳೆ ವೈರಲ್ ಆದ ಅವರ ಭಾಷಣಗಳ ವಿಡಿಯೋಗಳು. ಅವುಗಳು ಧ್ವನಿ ಮತ್ತು ದೃಶ್ಯಗಳ ಮೂಲಕ ಮೋದಿ-ಫಡ್ನವೀಸ್ ಸರಕಾರಗಳ ಸುಳ್ಳುಗಳನ್ನು ಬಯಲಿಗೆಳೆದಿದ್ದವು. ತಾನು ಪ್ರತಿಪಕ್ಷಗಳ ಪರ ಪ್ರಚಾರ ಮಾಡುತ್ತಿಲ್ಲ ಎಂದು ರಾಜ್ ಠಾಕ್ರೆ ಹೇಳಿಕೊಂಡರೂ, ಅವರು ಪ್ರತಿಪಕ್ಷಗಳಿಗೆ ನೀಡಿದ ಹಿಂಬಾಗಿಲ ಬೆಂಬಲವು ಅವರನ್ನು ಮತ್ತೆ ಮುಖ್ಯವಾಹಿನಿಯ ರಾಜಕಾರಣಕ್ಕೆ ತಂದಿತ್ತು. ಇಂತಹ ನಡೆಯನ್ನು ರಾಜ್ ಠಾಕ್ರೆಯಂತವರಿಂದ ಯಾರೂ ನಿರೀಕ್ಷಿಸಿರಲಿಲ್ಲ.
ಗೂಂಡಾ ರಾಜ್..? ನೇತಾ ರಾಜ್..?
“ಲಾತೊಂಕಿ ಭೂತ್ ಬಾತೊಂ ಸೆ ನಹೀ ಮಾನ್‌ತಿ” (ಒದೆಯ ಭೂತ ಮಾತಿಗೆ ಬಗ್ಗದು) ಎಂಬುದು ಎಂಎನ್‌ಎಸ್‌ನ ಘೋಷಣೆಯಾಗಿತ್ತು. ಮುಂಬಯಿಯ ರಸ್ತೆಗಳಲ್ಲಿ ಉತ್ತರ ಭಾರತೀಯರ ವಿರುದ್ಧದ ಹಿಂಸಾಚಾರ ಆತನಿಗೆ “ಗೂಂಡಾ ರಾಜ್” ಎಂಬ ಅಡ್ಡಹೆಸರು ತಂದುಕೊಟ್ಟಿತ್ತು. ಅವರು ಈ ಸಲ ಅದನ್ನು ಮರೆಸಲು ಯತ್ನಿಸುತ್ತಿರುವಂತಿದೆ. ಇತ್ತೀಚಿನ ನಿದರ್ಶನ ಎಂದರೆ, ಅವರು ಜಾರಿ ನಿರ್ದೇಶನಾಲಯ (ಇಡಿ)ದ ಜಾಲದಲ್ಲಿ ಸಿಲುಕಿ ಹಾಕಿಕೊಂಡಿರುವುದು ಅಥವಾ ಸಿಲುಕಿಸಿರುವುದು. ಕಪ್ಪುಹಣವನ್ನು ಬಿಳಿಗೊಳಿಸಿದ ಐಎಲ್ ಎಂಡ್ ಎಫ್‌ಎಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಡಿ ಅವರನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕಳಿಸಿತ್ತು. ಆಗ ಎಂಎನ್‌ಎಸ್ ಕಾರ್ಯಕರ್ತರು ಮುಂಬಯಿ ಬಂದ್‌ಗೆ ಕರೆ ನೀಡಿದ್ದರು. ಆದರೆ, ರಾಜ್ ಠಾಕ್ರೆ ಶಾಂತಿ ಕಾಪಾಡುವಂತೆ ಸಾರ್ವಜನಿಕವಾಗಿ ಕರೆ ನೀಡಿ, ಇದು ತನ್ನ ಬಾಯಿ ಮುಚ್ಚಿಸಲು ಕೇಂದ್ರ ಸರಕಾರದ ಇನ್ನೊಂದು ತಂತ್ರ ಎಂದು ಕರೆದಿದ್ದರು. ರಾಜ್ ಠಾಕ್ರೆಯ ಹಿಂಸಾತ್ಮಕ ಹಿನ್ನೆಲೆಯು ಆತನಿಗೆ ಪತ್ರಿಕೆಗಳಲ್ಲಿ ಕೆಟ್ಟ ಹೆಸರು ತಂದುಕೊಟ್ಟಿದ್ದು ಮಾತ್ರವಲ್ಲ, ಆತ ಕೆಲಸ ಮಾಡಬಲ್ಲ ವ್ಯಕ್ತಿಯಾಗಿದ್ದರೂ, ಅಧಿಕಾರದಲ್ಲಿರಲು ಸೂಕ್ತ ವ್ಯಕ್ತಿಯಲ್ಲ ಎಂಬ ಭಾವನೆಯನ್ನು ಜನರಲ್ಲಿ ಮೂಡಿಸಿತ್ತು.
ರಾಜ್ ಠಾಕ್ರೆಯನ್ನು ಬಿಟ್ಟುಹೋದ ಬಹಳಷ್ಟು ನಾಯಕರ ದೂರು ಎಂದರೆ, ಆತ ಕೈಗೆ ಸಿಗುವುದಿಲ್ಲ ಎಂಬುದಾಗಿತ್ತು. ಕಳೆದ ಲೋಕಸಭಾ ಚುನಾವಣೆಯ ವೇಳೆ ಆತನ ‘ಬಿಗಿತ’ವೇ ಲೋಕಸಭಾ ಚುನಾವಣೆ ವೇಳೆಗೆ ಮಹಾರಾಷ್ಟ್ರದಲ್ಲಿ ಪ್ರತಿಪಕ್ಷಗಳ ಮೈತ್ರಿಕೂಟದಿಂದ ಎಂಎನ್‌ಎಸ್ ಪಕ್ಷವನ್ನು ಹೊರಗಿಡಲಾಗಿತ್ತು. ಆದರೆ, ಈಗ ಎನ್‌ಸಿಪಿ ಜತೆ ಮೈತ್ರಿ ಮತ್ತು ಬಿಜೆಪಿ-ಶಿವಸೇನೆಯ ವಿರುದ್ಧ ವಾಗ್ದಾಳಿ, ಅವರ ಮನೋಭಾವ ಬದಲಾಗಿದೆ ಎಂಬುದನ್ನು ತೋರಿಸುತ್ತದೆ.
ತಡವಾಯಿತೆ..?
ಹಿಂದಿನ ಲೋಕಸಭಾ ಚುನಾವಣೆಯ ವೇಳೆಯೂ, ಈಗಿನ ವಿಧಾನಸಭಾ ಚುನಾವಣೆಯ ವೇಳೆಯೂ ಅವರು, ನಿಲ್ಲುತ್ತಾರೋ ಇಲ್ಲವೋ ಎಂಬ ಹಂತದಲ್ಲಿ ಕಣಕ್ಕಿಳಿದಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದೇ ಇದ್ದರೂ, ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಕೂಡಾ ಎರಡೇ ವಾರಗಳ ಹಿಂದೆ ಬಂತು. ಆಗಲೇ ಕಾಂಗ್ರೆಸ್-ಎನ್‌ಸಿಪಿ ಮತ್ತು ಬಿಜೆಪಿ-ಶಿವಸೇನಾ ಮೈತ್ರಿಕೂಟಗಳು ಪ್ರಚಾರ ಆರಂಭಿಸಿದ್ದವು!
ಇದು ಕಾರ್ಯಕರ್ತರಿಗೆ ಕೂಡಾ ಸಿದ್ಧತೆಗೆ ಕಡಿಮೆ ಸಮಯ ಕೊಟ್ಟರೂ, ಅವರು ಕಳೆದ ಚುನಾವಣೆಯಲ್ಲಿ ಮಾಡಿದಂತೆ ಮೋದಿ-ಶಾ ದುಷ್ಟಕೂಟದ ಬಗ್ಗೆ ತನ್ನ ಭಾಷಣಗಳ ಮೂಲಕ ದಾಳಿ ನಡೆಸುತ್ತಾ, ತಾನು ಹಿಂದಿನಿಂದಲೂ ಇದಕ್ಕೆ ಸಿದ್ಧನಾಗಿದ್ದೆ ಎಂದು ತೋರಿಸುತ್ತಿದ್ದಾರೆ. ಏನೇ ಇದ್ದರೂ ಮಹಾರಾಷ್ಟ್ರ ರಾಜಕಾರಣದಲ್ಲಿ ಮಾತಿನ ಬಲ ಇರುವ ಒಬ್ಬ ‘ಠಾಕ್ರೆ’ಯನ್ನು ಕಡೆಗಣಿಸುವಂತಿಲ್ಲ!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...