ಕಾರು ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಉಂಟಾದ ಗಲಾಟೆ, ಪೊಲೀಸರ ಮೇಲೆ ಹಲ್ಲೆ ಪ್ರಕರಣ ಇಂದು ದೊಡ್ಡ ಪ್ರತಿಭಟನೆಗೆ ಕಾರಣವಾಗಿದೆ. ಸಾವಿರಾರು ಪೊಲೀಸರು ಇಂದು ದೆಹಲಿಯಲ್ಲಿ ನಿರಂತರ 11 ಗಂಟೆಗಳ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿ ಪೊಲೀಸರ ಸಮಸ್ಯೆ ಬಗೆಹರಿಸು ಗೃಹ ಸಚಿವ ಅಮಿತ್ ಶಾ ಮುಂದಾಗದ ಹಿನ್ನೆಲೆಯಲ್ಲಿ ಅವರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ದೆಹಲಿ ಮಹಿಳೆಯರು: ನಮ್ಮ ರಕ್ಷಣೆಯ ಕುರಿತು ನಿರಂತರವಾಗಿ ಚಿಂತತವಾಗಿದ್ದೇವೆ
ದೆಹಲಿ ಪೊಲೀಸರು: ನಾವು ಕೂಡ!
ಅಮಿತ್ ಶಾ ಎಲ್ಲಿದ್ದಾರೆ? ವಕೀಲರು ಕಾನೂನಿಗಿಂತ ಮಿಗಿಲಲ್ಲ ಎಂದು ಪ್ರಿಯಾಂಕ ಗಾಂಧಿ ಟ್ವೀಟ್ ಮಾಡುವ ಮೂಲಕ ಟಾಂಗ್ ನೀಡಿದ್ದಾರೆ.
.
Delhi Women: We constantly worry about our safety.Delhi Police: #MeToo #WhereIsAmitShah#LawyersVsDelhiPolice#LawyersVsPolice #GoonsInBlack #LawyersNotAboveLaw #Lawyers pic.twitter.com/eEdaq8OWbS
— Priyanka Gandhi Unofficial (@PriyankaGANDHl) November 5, 2019
’ಗೃಹ ಸಚಿವರು ಮಹಾರಾಷ್ಟ್ರದಲ್ಲಿ ಶಾಸಕರ ಖರೀದಿಯಲ್ಲಿ ನಿರತರಾಗಿರಬೇಕು’ ಎಂದು ಗೌರವ್ ಪಾಂಢಿ ಎಂಬುವವರು ವ್ಯಂಗ್ಯವಾಡಿದ್ದಾರೆ.
72 ವರ್ಷಗಳ ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಗೃಹ ಸಚಿವ ಅಮಿತ್ ಶಾ ಅವರ ಆಡಳಿತದಲ್ಲಿ ನಮ್ಮ ಪೊಲೀಸ್ ಪಡೆಗಳು ಅಸುರಕ್ಷಿತವೆಂದು ಭಾವಿಸಿ ನ್ಯಾಯಕ್ಕಾಗಿ ಬೇಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ನಮ್ಮ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ, ಪೊಲೀಸರು ಸಹ ಸುರಕ್ಷಿತವಾಗಿಲ್ಲ ಎಂದು ದೆಹಲಿ ಪೊಲೀಸರು ಪ್ರತಿಭಟಿಸುತ್ತಿದ್ದಾರೆ. ದೆಹಲಿ ಪೊಲೀಸರ ನೇರ ಹೊಣೆ ಹೊತ್ತಿರುವ ನಮ್ಮ ಗೃಹ ಸಚಿವ ಚಾಣಕ್ಯ ಎಲ್ಲಿದ್ದಾರೆ? ಎಂದು ಧೃವ್ ರಾಠೀ ಪ್ರಶ್ನಿಸಿದ್ದಾರೆ.
ಅಮಿತ್ ಶಾ ಎಲ್ಲಿದ್ದಾರೆಂದರೆ ಎನ್ಸಿಪಿ ಮತ್ತು ಶಿವಸೇನೆಯ ಶಾಸಕರ ಮೇಲೆ ದಾಳಿ ಮಾಡುವಂತೆ ಐಟಿ ಮತ್ತು ಇಡಿಗೆ ಸೂಚನೆ ಕೊಡುತ್ತಿದ್ದಾರೆ ಎಂದು ಮುಖೇಶ್ ಮಿಠ್ಠಲ್ ಟ್ವೀಟ್ ಮಾಡಿದ್ದಾರೆ.
ಕೊನೆಗೂ ದೆಹಲಿಯ ಲೆಫ್ಟಿನೆಂಟ್ ಗರ್ವನರ್ ಅನಿಲ್ ಬೈಜಾಲ್ರವರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪೊಲೀಸರ ಹತ್ತು ಬೇಡಿಕೆಗಳಿಗೆ ಸಮ್ಮತಿ ಸೂಚಿಸಿದ ನಂತರ ಪೊಲೀಸರು ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದಾರೆ.