Homeರಾಜಕೀಯಕಾಂಗ್ರೆಸ್ಸುವೆ, ಜೇಡಿಯೆಸ್ಸುವೆ ಸೇರಿ ಮಾಡ್ಕ್ಯಂಡಿರೋ ಸಮ್ಮಿಸ್ರ ಸರ್ಕಾರ

ಕಾಂಗ್ರೆಸ್ಸುವೆ, ಜೇಡಿಯೆಸ್ಸುವೆ ಸೇರಿ ಮಾಡ್ಕ್ಯಂಡಿರೋ ಸಮ್ಮಿಸ್ರ ಸರ್ಕಾರ

- Advertisement -
- Advertisement -

`ಕಾಂಗ್ರೆಸ್ಸುವೆ, ಜೇಡಿಯೆಸ್ಸುವೆ ಸೇರಿ ಮಾಡ್ಕ್ಯಂಡಿರೋ ಸಮ್ಮಿಸ್ರ ಸರ್ಕಾರುದೊಳಗೆ ಶ್ಯಾನೆ ನ್ಯೆಲಬಾಂಬುಗಳು ಅವೆ. ಅವು ಯಾವಾಗ ಬೇಕಾದ್ರು ಢಮೀಲ್ ಅನಬೈದು. ಅವು ಢಂ ಅಂದೇಟಿಗೆ ಈ ಸರ್ಕಾರ ಬಿದ್ದೋಯ್ತದೆ ನೋಡ್ಕಂಡಿರಿ. ನಾ ದಿಟವುನೇ ಹ್ಯೇಳ್ತೀನಿ, ಸುಳ್ಳು ಪಳ್ಳು ನಂಗೆ ಬರಾಕಿಲ್ಲ. ನಾವು ಈ ಎಲ್ಡೂ ಪಕ್ಸುದ ಯಾರ್ನೂವೆ ಸಂಪರ್ಕಿಸಿಲ್ಲ. ಆದ್ರುವೇ, ಲೋಕ್ಸಭೆ ಎಲೆಕ್ಷನ್ ಒಳೀಕೆ ಈ ಗೋರ್ಮೆಂಟ್ ಬಿದ್ದೋಗದ್ರಲ್ಲಿ ಡೌಟೇ ಇಲ್ಲಾ ಕಣ್ರ. ಯಾಕಂದ್ರೆ ನ್ಯೆಲಬಾಂಬುಗಳು ಅಷ್ಟು ಸ್ಟ್ರಾಂಗಾಗವೆ’

– ಯೆಮ್ಪಿ ರೇಣುಕಾಚಾರ್ಯ, ನರ್ಸ್ ವೃತ್ತಿಗೆ ಅಪಾರ ಗೌರವ ಕೊಡೊ ಬಿಎಸ್‍ವೈ ಮಾನಸಪುತ್ರ

*****

`
ನೋಡಿ, ನಾವು ಈರಸೈವ ಲಿಂಗಾಯುತ್ರು ರಾಜಕೀಯುದಾಗೆ ಶ್ಯಾನೆ ವೀಕ್ ಆಗ್ತಾ ಇದೀವಿ. ನಾವ್ಯೆಲ್ರುವೆ ಒಗ್ಗಟ್ಟಾಗಬ್ಯೇಕಿದೆ. ಬ್ಯಾರೆಬ್ಯಾರೆ ಸಮುದಾಯುದವ್ರು, ಅವುರ ರಾಜಕೀಯ ನಾಯುಕ್ರ ಬಗ್ಗೆ `ನಮ್ಮವೃ’ ಅಂತ ಎದೆಯ ತಟಿಗಂಡು ಹ್ಯೇಳ್ಕಬೇಕಾರೆ, ನಾವ್ಯಾಕೆ ಯಡ್ಯೋರಪ್ನೋರನ್ನ ನಂ ಸಮಾಜುದ ಧ್ಯೀಮಂತ ನಾಯುಕ ಅಂತ ಹ್ಯೇಳ್ಕಬಾರುದು. ಅದ್ರಲ್ಲಿ ಏನೂ ತ್ಯೆಪ್ಪಿಲ್ಲ. ಕಳುದ ಯೆಲೆಕ್ಸೆನ್ನಾಗೆ ವರುಣಾ ಕ್ಸೇತ್ರುದಿಂದ ಯಡ್ಯೋರಪ್ನೋರ ಮಗ ಇಜಯೇಂದ್ರ ಕಂಟೆಸ್ಟ್ ಮಾಡಿದ್ದ್ರೆ, ಆ ಭಾಗುದ ಐದಾರು ಕ್ಸೇತೃಗುಳಲ್ಲಿ ಬೀಜೇಪಿ ಗ್ಯೆಲ್ತಿತ್ತು, ಸುಲುಬವಾಗಿ ಸರ್ಕಾರನೂ ಮಾಡ್ತಿತ್ತು. ಈ ಮಾತ್ನ ನಾನು ಹ್ಯೇಳ್ತಿಲ್ಲ, ಜ್ಯನ ನನ್ನತ್ರ ಹ್ಯೇಳ್ತಾ ಅವುರೆ..’
– ಸ್ರೀ ಸ್ರೀ ಸಿದ್ದಲಿಂಗ ಸ್ವಾಮಿಗಳು, ನಡೆದಾಡೊ ದೇವರಿರುವ ತುಮಕೂರು ಮಠದ ಅಧ್ಯಕ್ಷರು

*****

`ದೇಖೋ ಬಾಯಿಸಾಬ್, ಈ ಅತ್ಯಾಚಾರ ಅನ್ನೋದು ಏನದೆ, ಅದು ನಂ ಸಮಾಜುದ ಸಹಜ ಸೋಸಿಯಲ್ ಪ್ರದೂಷಣೆ ಅದೆ. ಅದುನ್ನ ತಡಿಯೋಕೆ ಯಾರಿಂದ್ಲೂ ಸಾದ್ಯ ಇಲ್ರ. ನಮ್ಮಂತ ನರಮನುಸ್ಯರ ಕಥೆಯ ಬ್ಯಿಡಿ. ಸಾಕ್ಸಾತ್ ಸ್ರೀ ರಾಮಚಂದ್ರ ಪ್ರಭುವೇ ಮತ್ತೆ ಹ್ವುಟ್ಟಿ ಬಂದ್ರೂ, ಆತುನಿಗೂ ಇದುನ್ನ ತಡಿಯೋಕೆ ಆಗಕ್ಕಿಲ್ಲ ಅಂತೀನಿ’
– ಸುರೇಂದ್ರ ಸಿಂಗ್, ರಾಮರಾಜ್ಯದ ಅಂಬಾಸಿಡರ್ರು ಯೋಗಿ ಆದಿತ್ಯನಾಥರ ಬೆಟಾಲಿಯನ್‍ನ ಬಿಜೆಪಿ ಶಾಸಕ

*****

`ರೈತೃ ಆತುಮಹತ್ಯೆಯ ಮಾಡ್ಕ್ಯಂತಿರೋದು ನಿಜ. ಆದುರೆ, ಹಿಂಗೆ ರೈತೃ ಸಾಯ್ತಾ ಇರೋದು ಇದೇ ಮೊದುಲುನೇ ಕಿತಾ ಏನು ಅಲ್ವಲ್ಲಾ. ಅದು ಹಳೇ ಸಮಸ್ಯೆ. ಶ್ಯಾನೆ ವರ್ಸುಗಳಿಂದ ಅವುರು ಆತುಮಹತ್ಯೆಯ ಮಾಡ್ಕ್ಯಂತಲೇ ಬಂದವುರೆ. ಅದುಕ್ಕೆ ನಮ್ಮುನ್ನ್ಯಾಕೆ ದೂರುತೀರಿ. ಆಕ್ಚುಲೀ, ನಂ ಮ್ವೋದಿಯವುರ ಸರ್ಕಾರ ಬಂದ ಮ್ಯಾಲೆ ರೈತುರ ಉದ್ದಾರಕ್ಕೆ ಅಂತ ಬೆಂಬುಲ ಬೆಲೆಯ ಜ್ಯಾಸ್ತಿ ಮಾಡ್ಯವುರೆ, ಕೃಷಿ ಸಾಲ ಮನ್ನಾ ಮಾಡ್ಯವುರೆ (?), ಬೆಳೆ ಇಮೆಯ ಮಾಡಿಕೊಟ್ಟವುರೆ. ಆದ್ರೂ ರೈತೃ ಸಾಯ್ತಾಲೆ ಅವುರೆ ಅಂದ್ರೆ, ಅದುಕ್ಕೆ ಬ್ಯಾರೇದೆ ಕಾರುಣ ಇರ್ಬೇಕು..’
– ಸುರೇಶ್ ಪ್ರಭು, ಹೊಲದಿಂದ ಹೊಲಕ್ಕೆ ಟ್ರಿಪ್ ಮಾಡುತ್ತಿರುವ ರೈತಬಂಧು ಮೋದಿಯವರ ಸಂಪುಟದ ಕಾಮರ್ಸ್ ಮಂತ್ರಿ

*****

`ಈ ಬೀಜೇಪಿಯವುರು ಅಮಾಯುಕ ಹುಡುಗ್ರನ್ನ ಬಲಿಕ್ವೊಟ್ಟು, ಬಾಬುರಿ ಮಸೀದಿಯ ಕ್ಯೆಡುವಿ ಹಾಕಿದ್ರು. ಭಗುವಂತ ರಾಮುನ ಹೆಸುರಲ್ಲಿ ರಾಜಕೀಯವ ಮಾಡಿ, ಅಧಿಕಾರುವ ಪಡಕಂಡ್ರು. ಆದ್ರುವೆ ರಾಮಮಂದಿರುವ ಕಟ್ಟುಲೇ ಇಲ್ಲ. ಪರ್ದಾನಿ ಮ್ವೋದಿ ಸಾಹೇಬರು ಅಂಡ್ ಎಗುಸ್ಟ್ರಾ ಬೀಜೇಪಿ ಲೀಡ್ರುಗಳಿಗೆ ದಿಟವಾಗುಲೂ ಧಂ ಇದ್ದ್ರೆ, ಅಯೋಧ್ಯನಾಗೆ ಮೊದಲು ರಾಮಮಂದಿರುಕ್ಕೆ ಅಡಿಪಾಯುವ ಹಾಕಿ, ಆಮ್ಯಾಕೆ ಎಂಪಿ ಯೆಲೆಕ್ಸನ್ ಪ್ರಚಾರುಕ್ಕೆ ಇಳೀಲಿ. ಈ ಬೀಜೇಪಿನೋರು ಮ್ವೋದಿ ಹೆಸುರಲ್ಲಿ ಕತ್ತೆಯ ನಿಲ್ಲಿಸಿದ್ರೂ, ಗ್ಯೆಲ್ಲುತ್ತೆ ಅನ್ಕೊಂಡು, ಟಿಕೇಟುಗಳ ಮಾರಾಟ ಮಾಡ್ತಾ ಅವುರೆ. ನಾಚ್ಯಿಕೆ ಆಗ್ಬೇಕು…’
– ಎಸ್ಕೆ ಬೆಳ್ಳುಬ್ಬಿ, ಜೆಡಿಎಸ್ ನಿರಾಶ್ರಿತ ಶಿಬಿರದಲ್ಲಿ ನಿಟ್ಟುಸಿರು ಬಿಡುತ್ತಿರುವ ಮಾಜಿ ಬಿಜೆಪಿಗ

*****

`ದ್ಯೇವರು ಇದಾನೆ ಅನ್ನೋದಕ್ಕೆ ಯಾವನಾರ ಒಂದ್ ಸಾಕ್ಷಿಯ ನೀಡ್ಲಪ್ಪಾ, ಆ ಕೂಡ್ಲೇ ನಾನು ನನ್ನ ಸ್ಥಾನುಕ್ಕೆ ರಾಜೀನಾಮೆಯ ಕೊಟ್ಟುಬುಡ್ತೀನಿ. ದ್ಯೇವುರ ಪಾಸ್‍ಪೋರ್ಟ್ ಸೈಜಿನ ಲೈವ್‍ಫೋಟೊ, ಅಥುವಾ ಮನುಸ್ಯರ ಜ್ವತೆ ಆತ ತ್ಯೆಗಿಸಿಕೊಂಡಿರೊ ಸೆಲ್ಫಿ, ಅಥುವಾ ನಾನು ದ್ಯೇವುರ ಕೂಟೆ ಮಾತಾಡಿದೀನಿ ಅನ್ನೋದುಕ್ಕೆ ಯಾರಾದ್ರು ಪುರಾವೆ ತಂದ್ರೆ ನನ್ನ ರಾಜೀನಾಮೆ ಫಿಕ್ಸು…’
– ರೊಡ್ರಿಗೊ ಡುಟೆರ್ಟಾ, ವಿಲಕ್ಷಣ ವ್ಯಕ್ತಿತ್ವದ ಕ್ರೂರ ಸ್ವಭಾವದ ಫಿಲಿಫೈನ್ಸ್ ಅಧ್ಯಕ್ಷ

*****

`ದ್ಯಾವೇಗೋಡ್ರು ಜಾತುಕವ ಶ್ಯಾನೆ ನಂಬುತಾರೆ. ಅವುರದು ಮತ್ತು ರೇವಣ್ಣುಂದೂ ಜ್ಯಾತುಕ ಹ್ವೊಂದಾಣಿಕೆ ಆಯ್ತವೆ. ಆದ್ರೆ ಕುಮಾರ್ಸೋಮಿಗಳುದ್ದೇ ಒಸಿ ಇಂಡಿಪೆಂಡೆಂಟು. ಅಟ್ಟು ದಿ ಸೇಮ್ ಠೇಮ್, ದ್ಯಾವೇಗೋಡ್ರು ಜಾತುಕವೂ ಸಿದ್ರಾಮಯ್ಯುನ ಜ್ಯಾತುಕವೂ ತಾಳೆ ಆಗ್ತವೆ. ಅದುಕ್ಕೆ ಅವುರಿಬ್ರು ಒಂದಾದಾಗ ಅಧಿಕಾರ ಸಿಕ್ತದೆ, ದೂರದೂರ ಆದ ಕೂಡ್ಲೆ ಅಧಿಕಾರುವೂ ಕೈಬಿಟ್ಟು ಹೋಯ್ತದೆ. ಈ ಜ್ಯಾತುಕ ಹ್ಯೇಳೋರ್ದೂ ಒಂದ್ ದ್ವೊಡ್ಡ್ ಲಾಬಿ ಐತಿ ನೋಡ್ರಿ ಮತಾ….. ಬೈದುಬೈ ಜ್ಯಾತುಕವ ನೋಡಿಯೇ ನಾವು ಟಿಕೇಟ್ ಕೊಟ್ಟಿದ್ದು ಬ್ಯಾರೇ ಮಾತು ಬಿಡ್ರಿ…’
– ಬಸವರಾಜ ಬೊಮ್ಮಾಯಿ, ಯಡ್ಯೂರಪ್ಪ ಸಿಎಂಗಿರಿಯಲ್ಲಿ ನೀರಾವರಿ ಮಂತ್ರಿಯಾಗೊ ಕನವರಿಕೆಯಲ್ಲಿರುವ ಕನಸುಗಾರ

*****

`ರೈತೃ ತಮ್ಮತಮ್ಮ ಹೊಲಗುಳು, ಗೆದ್ದೆಗುಳಲ್ಲಿ ವೇದ ಮಂತೃಗುಳನ್ನ ಹ್ಯೇಳಿಕಂಡು, `ಬ್ರಹ್ಮಾಂಡ ಬ್ಯಾಸಾಯ’ವ ಅಳುವಡಿಸಿಕೊಂಡ್ರೆ, ಭತ್ತದ ಫಸಲು ವೈನಾಗಿ ಬತ್ತದೆ. ಆದಾಯುವೂ ಹೆಚ್ಚಾಯ್ತದೆ. ಬೈದುಬೈ, ರೈತುರ ಇಳುವರಿಗೆ ಜ್ಯಾಸ್ತಿ ಮಾಡೊ ಸಲುವಾಗೇ ನಂ ಬೀಜೇಪಿ ಸರ್ಕಾರ ಗೋವಾದಗೆ `ಶಿವಯೋಗ್ ಬ್ರಹ್ಮಾಂಡ ಬ್ಯಾಸಾಯ’ ಅನ್ನೋ ಯೋಜುನೆಯ ಜ್ಯಾರಿಗೆ ತಂದದೆ. ನೋಡ್ತಾ ಇರಿ, ಇನ್ನು ಮ್ಯಾಲೆ ರೈತೃ ಹ್ಯೆಂಗೆ ಉದ್ದಾರ ಆಯ್ತಾರೆ ಅಂತ’
– ವಿಜಯ್ ಸರ್ದೇಸಾಯಿ, ಟೂರಿಸಂ ಆದಾಯವಿರುವ ಗೋವಾ ರಾಜ್ಯದ ಬಿಜೆಪಿ ಕೃಷಿ ಮಂತ್ರಿ

*****

`ಬರಾಕಿಲ್ಲ, ಬರಾಕಿಲ್ಲ, ಬರಾಕಿಲ್ಲ.. ನಾನು ಸತ್ರುವೇ ಇಂಡಿಯಾಕ್ಕೆ ಬರಾಕಿಲ್ಲ. ನನಿಗೊತ್ತು ನನ್ನ ಕರ್ಕಂಡ್ಹೋಗಿ, ನೋಡಿ ಮಲ್ಯನ್ನ ಹಿಡ್ಕ್ಯಂಬಂದೀವಿ ಅಂತ ಜನುಕ್ಕೆ ತೋರ್ಸಿ ವೋಟು ಹಾಕಿಸಿಗಣಕ್ಕೆ ಪ್ಲ್ಯಾನು ಮಾಡ್ಯವುರೆ. ಬೇಕಾರೆ ಲಂಡನ್ನಾಗಿರೊ ನನ್ನ ಆಸ್ತಿಗುಳ ವಸ ಪಡಿಸ್ಕ್ಯಣಲಿ. ನನ್ನ ಅಭ್ಯಂತುರುವೆ ಇಲ್ಲ. ಆದ್ರೆ ಅವ್ಯಾವು ನನ್ನ ಹೆಸುರಿನ್ಯಾಗೆ ಇಲ್ಲ… ಕಿಲಕಿಲಾ…
– ವಿಜಯ್ ಮಲ್ಯ, ಹೆಂಡದ ದೊರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....