Homeಅಂತರಾಷ್ಟ್ರೀಯಗಾಜಾ ನೆರವು ಹಡಗು ವಶಕ್ಕೆ ಪಡೆಯುವ ವೇಳೆ ಇಸ್ರೇಲ್ ತನ್ನನ್ನು "ಅಪಹರಿಸಿದೆ" ಎಂದ ಗ್ರೇಟಾ ಥನ್‌ಬರ್ಗ್!

ಗಾಜಾ ನೆರವು ಹಡಗು ವಶಕ್ಕೆ ಪಡೆಯುವ ವೇಳೆ ಇಸ್ರೇಲ್ ತನ್ನನ್ನು “ಅಪಹರಿಸಿದೆ” ಎಂದ ಗ್ರೇಟಾ ಥನ್‌ಬರ್ಗ್!

- Advertisement -
- Advertisement -

ಆಕ್ರಮಿತ ಪ್ಯಾಲೆಸ್ತೀನ್‌ನ ಇಸ್ರೇಲಿ ಪಡೆಗಳು ಅಂತರರಾಷ್ಟ್ರೀಯ ಜಲ ಪ್ರದೇಶದಲ್ಲಿ ತನ್ನನ್ನು ಮತ್ತು ಪ್ಯಾಲೆಸ್ತೀನ್ ಪರ ಹೋರಾಟಗಾರರ ಗುಂಪನ್ನು ಬಲವಂತವಾಗಿ ಬಂಧಿಸಿವೆ ಎಂದು ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ಮಂಗಳವಾರ ಆರೋಪಿಸಿದ್ದಾರೆ. ತನ್ನ ಗಡೀಪಾರು ನಂತರ ತಾನು ಇಸ್ರೇಲ್‌ಗೆ ಅಕ್ರಮವಾಗಿ ಪ್ರವೇಶಿಸಿದ್ದೇನೆ ಎಂದು ಹೇಳುವ ದಾಖಲೆಗೆ ಸಹಿ ಹಾಕಲು ನಿರಾಕರಿಸಿರುವುದಾಗಿ ಅವರು ಹೇಳಿದ್ದಾರೆ. ಗಾಜಾ ನೆರವು ಹಡಗು

“ನಮ್ಮನ್ನು ಅಂತರರಾಷ್ಟ್ರೀಯ ಜಲ ಪ್ರದೇಶದಿಂದ ಅಪಹರಿಸಿ ನಮ್ಮ ಸ್ವಂತ ಇಚ್ಛೆಗೆ ವಿರುದ್ಧವಾಗಿ ಇಸ್ರೇಲ್‌ಗೆ ಕರೆತರಲಾಗಿದೆ ಎಂದು ನನ್ನ ಸಾಕ್ಷ್ಯದಲ್ಲಿ ನಾನು ಸ್ಪಷ್ಟವಾಗಿ ಹೇಳಿದ್ದೇನೆ” ಎಂದು ಗ್ರೇಟಾ ಥನ್‌ಬರ್ಗ್ ಅವರು ಇಸ್ರೇಲ್ ವಶದಲ್ಲಿರುವ ಆಕ್ರಮಿತ ಪ್ಯಾಲೆಸ್ತೀನ್‌ನಿಂದ ಹಿಂದಿರುಗಿದ ನಂತರ ಪ್ಯಾರಿಸ್‌ನ ಚಾರ್ಲ್ಸ್ ಡಿ ಗೌಲ್ ವಿಮಾನ ನಿಲ್ದಾಣದಲ್ಲಿ ಹೇಳಿದ್ದಾರೆ.

ಇಸ್ರೇಲ್ ಆಕ್ರಮಿತ ಪ್ಯಾಲೆಸ್ತೀನ್‌ನ ಗಾಝಾಕ್ಕೆ ಆಹಾರ, ನೀರು ಮತ್ತು ವೈದ್ಯಕೀಯ ಸಾಮಗ್ರಿಗಳೊಂದಿಗೆ ಹೊರಟಿದ್ದ ‘ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟ’ದ ನೆರವು ಹಡಗಾದ ‘ಮದ್ಲೀನ್’ ಅಲ್ಲಿ ಇದ್ದ 12 ಮಂದಿ ವ್ಯಕ್ತಿಗಳಲ್ಲಿ ಗ್ರೇಟಾ ಕೂಡಾ ಒಬ್ಬರಾಗಿದ್ದಾರೆ. ಬ್ರಿಟಿಷ್ ಧ್ವಜವನ್ನು ಹೊಂದಿರುವ ಈ ನೆರವು ಹಡಗು ಇಟಲಿಯ ಸಿಸಿಲಿಯಿಂದ ಜೂನ್‌ 1ರಂದು ಹೊರಟಿತ್ತು.

ಅವರು ಪ್ರಯಾಣಿಸುತ್ತಿದ್ದ ‘ಮದ್ಲೀನ್’ ಹಡಗು ಗಾಝಾದ ಜನರಿಗೆ ಸಾಂಕೇತಿಕ ಮಾನವೀಯ ನೆರವಿನ ಸರಬರಾಜುಗಳ ಜೊತೆಗೆ ಕಳೆದ ಎರಡು ದಶಕಗಳಿಂದ ಇಸ್ರೇಲ್‌ ಹೇರಿರುವ ಗಾಝಾದ ಅಕ್ರಮ ನೌಕಾ ದಿಗ್ಬಂಧನವನ್ನು ಮುರಿಯುವ ಮತ್ತು ಮಾನವೀಯ ಬಿಕ್ಕಟ್ಟಿನ ಬಗ್ಗೆ ಅಂತರರಾಷ್ಟ್ರೀಯ ಗಮನ ಸೆಳೆಯುವ ಉದ್ದೇಶವನ್ನು ಹೊಂದಿತ್ತು.

ಅಂತಾರಾಷ್ಟ್ರೀಯ ಜಪ ಪ್ರದೇಶದಲ್ಲಿ ತಡೆಹಿಡಿಯಲಾದ ಹಡಗನ್ನು ಸೋಮವಾರ ಸಂಜೆಯ ವೇಳೆಗೆ ಆಕ್ರಮಿತ ಪ್ಯಾಲೆಸ್ತೀನ್‌ನ ಆಶ್ಡೋಡ್ ಬಂದರಿಗೆ ಎಳೆದುಕೊಂಡು ಹೋಗಲಾಗಿದೆ ಎಂದು ಇಸ್ರೇಲ್‌ನ ವಿದೇಶಾಂಗ ಸಚಿವಾಲಯ ದೃಢಪಡಿಸಿದೆ. ಸ್ವೀಡನ್, ಬ್ರೆಜಿಲ್, ಫ್ರಾನ್ಸ್, ಜರ್ಮನಿ, ನೆದರ್ಲ್ಯಾಂಡ್ಸ್, ಸ್ಪೇನ್ ಮತ್ತು ಟರ್ಕಿಯಿಂದ ಬಂದ ಪ್ರಯಾಣಿಕರನ್ನು ವಶಕ್ಕೆ ತೆಗೆದುಕೊಂಡು, ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು ಮತ್ತು ಬೆನ್-ಗುರಿಯನ್ ವಿಮಾನ ನಿಲ್ದಾಣದ ಮೂಲಕ ಗಡೀಪಾರು ಮಾಡಲು ನಿರ್ಧರಿಸಲಾಯಿತು ಎಂದು ಅದು ಹೇಳಿದೆ.

ಹಡಗಿನಲ್ಲಿದ್ದ ಹೋರಾಟಗಾರರನ್ನು ‘ಸೆಲ್ಫಿ ವಿಹಾರ ದೋಣಿ’ ಪ್ರಯಾಣಿಕರು ಎಂದು ಹಂಗಿಸಿರುವ ಇಸ್ರೇಲ್, ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಮತ್ತು ಯಾವುದೇ ಹಾನಿಗೊಳಗಾಗಿಲ್ಲ ಎಂದು ಹೇಳಿದೆ. “ಅವರಿಗೆ ಸ್ಯಾಂಡ್‌ವಿಚ್‌ಗಳು ಮತ್ತು ನೀರನ್ನು ಒದಗಿಸಲಾಗಿದೆ. ಪ್ರದರ್ಶನ ಮುಗಿದಿದೆ,” ಎಂದು ವ್ಯಂಗ್ಯವಾಗಿ ಇಸ್ರೇಲ್ ವಿದೇಶಾಂಗ ಸಚಿವಾಲಯ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.

ಅಷ್ಟೆ ಅಲ್ಲದೆ, ಲೈಫ್ ಜಾಕೆಟ್‌ಗಳನ್ನು ಧರಿಸಿ ಶಾಂತವಾಗಿ ಕುಳಿತು ಉಪಹಾರಗಳನ್ನು ಪಡೆಯುತ್ತಿರುವ ಹೋರಾಟಗಾರರ ವಿಡಿಯೊವನ್ನು ಸಚಿವಾಲಯ ಬಿಡುಗಡೆ ಮಾಡಿದ್ದು, ಅದರಲ್ಲಿ ಗ್ರೇಟಾ ಥನ್‌ಬರ್ಗ್ ಅವರು ಗೋಚರಿಸುತ್ತಿದ್ದರು. ಅದಾಗ್ಯೂ, ಫ್ರೀಡಂ ಪ್ಲೋಟಿಲ್ಲಾ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಎಲ್ಲಾ ಹೋರಾಟಗಾರರು ಕೈಗಳನ್ನು ಮೇಲೆತ್ತುವ ಮತ್ತು ಅವರ ಹಗಡಗನ್ನು ಇಸ್ರೇಲ್‌ನ ಸೈನಿಕರು ವಶಕ್ಕೆ ಪಡೆಯುವ ದೃಶ್ಯಗಳು ದಾಖಲಾಗಿವೆ.

ಕಾನೂನುಬಾಹಿರ ದಾಳಿ ಎಂದ ಫ್ರೀಡಂ ಫ್ಲೋಟಿಲ್ಲಾ

ಮದ್ಲೀನ್ ಪ್ರಯಾಣವನ್ನು ಆಯೋಜಿಸಿದ್ದ ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟವು, ಹಡಗನ್ನು ಅಂತರರಾಷ್ಟ್ರೀಯ ಜಲ ಪ್ರದೇಶದಲ್ಲಿ “ಕಾನೂನುಬಾಹಿರವಾಗಿ ಹತ್ತಿಕ್ಕಲಾಗಿದೆ” ಎಂದು ಹೇಳಿದೆ. ಕ್ವಾಡ್‌ಕಾಪ್ಟರ್‌ಗಳು ಹಡಗಿಗೆ ಬಿಳಿ ವಸ್ತುವನ್ನು ಸಿಂಪಡಿಸಿದ್ದು, ಹಡಗಿನ ಸಂವಹನಗಳನ್ನು ಜ್ಯಾಮ್ ಮಾಡಿದ್ದವು ಮತ್ತು ರೇಡಿಯೋದಲ್ಲಿ ಅಡ್ಡಿಪಡಿಸುವ ಶಬ್ದಗಳನ್ನು ಪ್ರಸಾರ ಮಾಡಲಾಯಿತು ಎಂದು ಒಕ್ಕೂಟ ಹೇಳಿಕೊಂಡಿದ್ದು, ವಿಡಿಯೊವನ್ನು ಬಿಡುಗಡೆ ಮಾಡಿದೆ.

ಹೋರಾಟಗಾರ್ತಿ ಯಾಸೆಮಿನ್ ಅಕಾರ್ ಅವರು ಇಸ್ರೇಲ್ ಸೇನೆ ಸಿಂಪಡಿಸಿದ್ದ ಬಿಳಿ ವಸ್ತುವನ್ನು ಪ್ರದರ್ಶಿಸುತ್ತಾ ಅದು ತನ್ನ ಕಣ್ಣುಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳುತ್ತಿರುವುದು ಹಡಗಿನ ಲೈವ್‌ಸ್ಟ್ರೀಮ್‌ನಲ್ಲಿ ದಾಖಲಾಗಿದೆ. ನಂತರ ಬಿಡುಗಡೆ ಮಾಡಲಾದ ಮತ್ತೊಂದು ವೀಡಿಯೊದಲ್ಲಿ ಪ್ರಯಾಣಿಕರು ಯಾವುದೆ ಪ್ರತಿರೋಧ ತೋರದೆ ಸನ್ನೆಯಲ್ಲಿ ತಮ್ಮ ಕೈಗಳನ್ನು ಮೇಲಕ್ಕೆತ್ತಿರುವುದು ತೋರಿಸಲಾಗಿದೆ.

ಹಡಗಿನ ಸಂಪರ್ಕ ಕಡಿತಗೊಂಡ ನಂತರ ಒಕ್ಕೂಟವು ಹಿಂದೆಯೆ ರೆಕಾರ್ಡ್ ಮಾಡಲಾಗಿದ್ದ ವಿಡಿಯೊವನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಗೇಟಾ ಥನ್‌ಬರ್ಗ್ ಅವರು ಮಾತನಾಡುತ್ತಾ, “ನೀವು ಈ ವೀಡಿಯೊವನ್ನು ನೋಡುತ್ತಿದ್ದರೆ, ಇಸ್ರೇಲಿ ಉದ್ಯೋಗ ಪಡೆಗಳು ಅಥವಾ ಇಸ್ರೇಲ್ ಅನ್ನು ಬೆಂಬಲಿಸುವ ಪಡೆಗಳು ನಮ್ಮನ್ನು ತಡೆದು ಅಂತರರಾಷ್ಟ್ರೀಯ ಜಲ ಪ್ರದೇಶದಿಂದ ಅಪಹರಿಸಿವೆ. ನನ್ನ ಎಲ್ಲಾ ಸ್ನೇಹಿತರು, ಕುಟುಂಬ ಮತ್ತು ಒಡನಾಡಿಗಳು ನನ್ನನ್ನು ಮತ್ತು ಇತರರನ್ನು ಸಾಧ್ಯವಾದಷ್ಟು ಬೇಗ ಬಿಡುಗಡೆ ಮಾಡುವಂತೆ ಸ್ವೀಡಿಷ್ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ನಾನು ಒತ್ತಾಯಿಸುತ್ತೇನೆ.” ಎಂದು ಹೇಳಿದ್ದಾರೆ.

ತಮ್ಮ ಉದ್ದೇಶ ಶಾಂತಿಯುತವಾಗಿತ್ತು ಮತ್ತು 600 ದಿನಗಳ ಸಂಘರ್ಷದ ನಂತರ 11 ವಾರಗಳ ಸಂಪೂರ್ಣ ದಿಗ್ಬಂಧನದಿಂದಾಗಿ ತೀವ್ರ ಆಹಾರದ ಕೊರತೆಯನ್ನು ಎದುರಿಸುತ್ತಿರುವ ಗಾಝಾದಲ್ಲಿನ ಮಾನವೀಯ ತುರ್ತು ಪರಿಸ್ಥಿತಿಯನ್ನು ಎತ್ತಿ ತೋರಿಸುವುದು ತಮ್ಮ ಗುರಿಯಾಗಿದೆ ಎಂದು ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟ ಹೇಳಿದೆ.

ಗ್ರೇಟಾ ಥನ್‌ಬರ್ಗ್ ವಿರುದ್ಧ ಮತ್ತೆ ದ್ವೇಷ ಕಾರಿದ ಅಮೆರಿಕ ಅಧ್ಯಕ್ಷ ಟ್ರಂಪ್

ಈ ನಡುವೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗ್ರೇಟಾ ಥನ್‌ಬರ್ಗ್ ಅವರ ಅಪಹರಣದ ಹೇಳಿಕೆಯನ್ನು ಅಪಹಾಸ್ಯ ಮಾಡಿದ್ದು, “ಗ್ರೇಟಾ ಥನ್‌ಬರ್ಗ್ ಅನ್ನು ಅಪಹರಿಸುವ ಬದಲು ಇಸ್ರೇಲ್‌ಗೆ ಮಾಡಲು ಸಾಕಷ್ಟು ಕೆಲಸಗಳಿವೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.

ಗ್ರೇಟಾ ಅವರೊಂದಿಗಿನ ತಮ್ಮ ದೀರ್ಘಕಾಲದ ದ್ವೇಷವನ್ನು ಪುನರುಜ್ಜೀವನಗೊಳಿಸಿದ ಟ್ರಂಪ್, “ಅವರು ಕೋಪಗೊಂಡ ಯುವ ವ್ಯಕ್ತಿ. ಅದು ನಿಜವಾದ ಕೋಪವೋ ಎಂದು ನನಗೆ ತಿಳಿದಿಲ್ಲ; ವಾಸ್ತವವಾಗಿ ನಂಬುವುದು ಕಷ್ಟ. ಆದರೆ ಏನಾಯಿತು ಎಂದು ನಾನು ನೋಡಿದೆ. ಅವರು ಖಂಡಿತವಾಗಿಯೂ ವಿಭಿನ್ನಳು. ಅವರು ಕೋಪ ನಿರ್ವಹಣಾ ತರಗತಿಗೆ ಹೋಗಬೇಕು ಎಂದು ನಾನು ಭಾವಿಸುತ್ತೇನೆ. ಅದು ಅವರಿಗೆ ನನ್ನ ಪ್ರಾಥಮಿಕ ಶಿಫಾರಸು.” ಎಂದು ಹೇಳಿದ್ದಾರೆ.

ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿ ಟ್ರಂಪ್ ಅವರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಗ್ರೇಟಾ ಥನ್‌ಬರ್ಗ್, “ಪ್ರಸ್ತುತ ನಡೆಯುತ್ತಿರುವ ಎಲ್ಲದರಲ್ಲೂ ಪ್ರಾಮಾಣಿಕವಾಗಿರಲು ಜಗತ್ತಿಗೆ ಇನ್ನೂ ಹೆಚ್ಚಿನ ಯುವ ಕೋಪಗೊಂಡ ಮಹಿಳೆಯರು ಬೇಕಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ.” ಎಂದು ತಿರುಗೇಟು ನೀಡಿದ್ದಾರೆ.

ಸಾಂಕೇತಿಕ ನೆರವು ಕಾರ್ಯಾಚರಣೆಯೋ ಅಥವಾ “ಸೆಲ್ಫಿ ಸ್ಟಂಟ್”?

ಇಸ್ರೇಲ್ ವಿದೇಶಾಂಗ ಸಚಿವಾಲಯವು ಮದ್ಲೀನ್ ಹಡಗಿನ ಪ್ರಯಾಣವನ್ನು “ಸೆಲ್ಫಿ ವಿಹಾರ ನೌಕೆ” ಎಂದು ಹಂಗಿಸಿದ್ದು, ಈ ಪ್ರಯಾಣವು ಸಹಾಯಕ್ಕಿಂತ ಪ್ರಚಾರದ ಬಗ್ಗೆ ಹೆಚ್ಚು ಬಳಸಲಾಗಿದೆ ಎಂದು ಸೂಚಿಸಿತ್ತು. ಆದರೆ ಗ್ರೇಟಾ ಥನ್‌ಬರ್ಗ್ ಅದನ್ನು ತಿರಸ್ಕರಿಸಿದ್ದಾರೆ. ಈ ಹಿಂದೆ ನೆರವಿನೊಂದಿಗೆ ಹೊರಟಿದ್ದ ಪ್ಲೋಟಿಲ್ಲಾದ ದೊಡ್ಡ ಹಡಗಿನ ಮೇಲೆ ಬಾಂಬ್ ದಾಳಿ ಮಾಡಿರುವುದನ್ನು ಅವರು ನೆನಪಿಸಿಕೊಂಡಿದ್ದಾರೆ.

“ಇದು ಸಾರ್ವಜನಿಕ ಸಂಪರ್ಕ ಕ್ರಮವಲ್ಲ” ಎಂದು ಹೇಳಿದ ಅವರು, “ಸಹಾಯವನ್ನು ತಲುಪಿಸುವುದು ಮತ್ತು ಅಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಈ ಪ್ರಯಾಣದ ಉದ್ದೇಶವಾಗಿದೆ.” ಎಂದು ಗ್ರೇಟಾ ಹೇಳಿದ್ದಾರೆ.

ಮದ್ಲೀನ್ ಹಡಗಿನಲ್ಲಿ ಗ್ರೇಟಾ ಅವರ ಜೊತೆಗೆ ಯುರೋಪಿಯನ್ ಸಂಸತ್ತಿನ ಫ್ರೆಂಚ್ ಸದಸ್ಯೆ ರಿಮಾ ಹಸನ್, ಅಲ್ ಜಝೀರಾದ ಫ್ರೆಂಚ್ ಪತ್ರಕರ್ತ ಒಮರ್ ಫಯಾದ್, ಬ್ರೆಜಿಲ್‌ನ ಥಿಯಾಗೊ ಅವಿಲಾ, ಫ್ರಾನ್ಸ್‌ನ ಬ್ಯಾಪ್ಟಿಸ್ಟ್ ಆಂಡ್ರೆ, ಪ್ಯಾಸ್ಕಲ್ ಮೌರಿಯರಾಸ್, ಯಾನಿಸ್ ಮಹಮ್ದಿ, ಟರ್ಕಿಯ ಶುವಾಯ್ಬ್ ಒರ್ಡು, ರೆವಾ ವಿಯಾರ್ಡ್, ಸ್ಪೇನ್‌ನ ಸೆರ್ಗಿಯೊ ಟೊರಿಬಿಯೊ ಮತ್ತು ನೆದರ್ಲ್ಯಾಂಡ್ಸ್‌ನ ಮಾರ್ಕೊ ವ್ಯಾನ್ ರೆನ್ನೆಸ್ ಇದ್ದರು. ಗಾಜಾ ನೆರವು ಹಡಗು

ಇಡೀ ಘಟನೆಯು, ಇಸ್ರೇಲ್ ಆಕ್ರಮಿತ ಪ್ಯಾಲೆಸ್ತೀನ್ ಅಲ್ಲಿ ಹೇರಲಾಗಿರುವ ನೌಕಾ ದಿಗ್ಬಂಧನ ಮತ್ತು ಗಾಝಾದಲ್ಲಿನ ಮಾನವೀಯ ಪರಿಸ್ಥಿತಿಯ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಜೊತೆಗೆ ಗ್ರೇಟಾ ಥನ್‌ಬರ್ಗ್‌ ಅವರು ಮತ್ತೊಮ್ಮೆ ಅಂತರರಾಷ್ಟ್ರೀಯ ಗಮನ ಸೆಳೆದಿದ್ದಾರೆ. ಈ ಬಾರಿ ಅವರು ಪರಿಸರ ಹೋರಾಟದ ಬದಲಾಗಿ, ವಿಶ್ವದ ಅತ್ಯಂತ ಧ್ರುವೀಕೃತ ಸಂಘರ್ಷಗಳಲ್ಲಿ ಒಂದಾದ ಪ್ಯಾಲೆಸ್ತಿನ್‌ ಹೋರಾಟದ ಪರವಾಗಿ ಬಹಿರಂಗ ರಾಜಕೀಯ ನಿಲುವಿಗಾಗಿ ಗಮನ ಸೆಳೆದಿದ್ದಾರೆ.

ಇಸ್ರೇಲಿ ಬಂಧನದಲ್ಲಿರುವ ಎಲ್ಲಾ ಹೋರಾಟಗಾರರನ್ನು ತಕ್ಷಣ ಬಿಡುಗಡೆ ಮಾಡುವಂತೆ ಫ್ರೀಡಂ ಪ್ಲೋಟಿಲ್ಲಾ ಒಕ್ಕೂಟ (FFC) ಕರೆ ನೀಡುತ್ತಲೇ ಇದ್ದು, ತಮ್ಮ ಕ್ರಮಗಳು ಕಾನೂನುಬದ್ಧ, ನೈತಿಕ ಮತ್ತು ತುರ್ತು ಎಂದು ಸಮರ್ಥಿಸಿಕೊಂಡಿವೆ. ಗಾಜಾ ನೆರವು ಹಡಗು

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ನೆರವು ಹೊತ್ತು ಗಾಝಾದತ್ತ ತೆರಳಿದ್ದ ‘ಮದ್ಲೀನ್’ ಹಡಗನ್ನು ವಶಕ್ಕೆ ಪಡೆದ ಇಸ್ರೇಲಿ ಪಡೆ: ಅಪಹರಿಸಲಾಗಿದೆ ಎಂದ ಹೋರಾಟಗಾರರು

ನೆರವು ಹೊತ್ತು ಗಾಝಾದತ್ತ ತೆರಳಿದ್ದ ‘ಮದ್ಲೀನ್’ ಹಡಗನ್ನು ವಶಕ್ಕೆ ಪಡೆದ ಇಸ್ರೇಲಿ ಪಡೆ: ಅಪಹರಿಸಲಾಗಿದೆ ಎಂದ ಹೋರಾಟಗಾರರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...