Homeಅಂತರಾಷ್ಟ್ರೀಯಗಾಜಾ ನೆರವು ಹಡಗು ವಶಕ್ಕೆ ಪಡೆಯುವ ವೇಳೆ ಇಸ್ರೇಲ್ ತನ್ನನ್ನು "ಅಪಹರಿಸಿದೆ" ಎಂದ ಗ್ರೇಟಾ ಥನ್‌ಬರ್ಗ್!

ಗಾಜಾ ನೆರವು ಹಡಗು ವಶಕ್ಕೆ ಪಡೆಯುವ ವೇಳೆ ಇಸ್ರೇಲ್ ತನ್ನನ್ನು “ಅಪಹರಿಸಿದೆ” ಎಂದ ಗ್ರೇಟಾ ಥನ್‌ಬರ್ಗ್!

- Advertisement -
- Advertisement -

ಆಕ್ರಮಿತ ಪ್ಯಾಲೆಸ್ತೀನ್‌ನ ಇಸ್ರೇಲಿ ಪಡೆಗಳು ಅಂತರರಾಷ್ಟ್ರೀಯ ಜಲ ಪ್ರದೇಶದಲ್ಲಿ ತನ್ನನ್ನು ಮತ್ತು ಪ್ಯಾಲೆಸ್ತೀನ್ ಪರ ಹೋರಾಟಗಾರರ ಗುಂಪನ್ನು ಬಲವಂತವಾಗಿ ಬಂಧಿಸಿವೆ ಎಂದು ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ಮಂಗಳವಾರ ಆರೋಪಿಸಿದ್ದಾರೆ. ತನ್ನ ಗಡೀಪಾರು ನಂತರ ತಾನು ಇಸ್ರೇಲ್‌ಗೆ ಅಕ್ರಮವಾಗಿ ಪ್ರವೇಶಿಸಿದ್ದೇನೆ ಎಂದು ಹೇಳುವ ದಾಖಲೆಗೆ ಸಹಿ ಹಾಕಲು ನಿರಾಕರಿಸಿರುವುದಾಗಿ ಅವರು ಹೇಳಿದ್ದಾರೆ. ಗಾಜಾ ನೆರವು ಹಡಗು

“ನಮ್ಮನ್ನು ಅಂತರರಾಷ್ಟ್ರೀಯ ಜಲ ಪ್ರದೇಶದಿಂದ ಅಪಹರಿಸಿ ನಮ್ಮ ಸ್ವಂತ ಇಚ್ಛೆಗೆ ವಿರುದ್ಧವಾಗಿ ಇಸ್ರೇಲ್‌ಗೆ ಕರೆತರಲಾಗಿದೆ ಎಂದು ನನ್ನ ಸಾಕ್ಷ್ಯದಲ್ಲಿ ನಾನು ಸ್ಪಷ್ಟವಾಗಿ ಹೇಳಿದ್ದೇನೆ” ಎಂದು ಗ್ರೇಟಾ ಥನ್‌ಬರ್ಗ್ ಅವರು ಇಸ್ರೇಲ್ ವಶದಲ್ಲಿರುವ ಆಕ್ರಮಿತ ಪ್ಯಾಲೆಸ್ತೀನ್‌ನಿಂದ ಹಿಂದಿರುಗಿದ ನಂತರ ಪ್ಯಾರಿಸ್‌ನ ಚಾರ್ಲ್ಸ್ ಡಿ ಗೌಲ್ ವಿಮಾನ ನಿಲ್ದಾಣದಲ್ಲಿ ಹೇಳಿದ್ದಾರೆ.

ಇಸ್ರೇಲ್ ಆಕ್ರಮಿತ ಪ್ಯಾಲೆಸ್ತೀನ್‌ನ ಗಾಝಾಕ್ಕೆ ಆಹಾರ, ನೀರು ಮತ್ತು ವೈದ್ಯಕೀಯ ಸಾಮಗ್ರಿಗಳೊಂದಿಗೆ ಹೊರಟಿದ್ದ ‘ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟ’ದ ನೆರವು ಹಡಗಾದ ‘ಮದ್ಲೀನ್’ ಅಲ್ಲಿ ಇದ್ದ 12 ಮಂದಿ ವ್ಯಕ್ತಿಗಳಲ್ಲಿ ಗ್ರೇಟಾ ಕೂಡಾ ಒಬ್ಬರಾಗಿದ್ದಾರೆ. ಬ್ರಿಟಿಷ್ ಧ್ವಜವನ್ನು ಹೊಂದಿರುವ ಈ ನೆರವು ಹಡಗು ಇಟಲಿಯ ಸಿಸಿಲಿಯಿಂದ ಜೂನ್‌ 1ರಂದು ಹೊರಟಿತ್ತು.

ಅವರು ಪ್ರಯಾಣಿಸುತ್ತಿದ್ದ ‘ಮದ್ಲೀನ್’ ಹಡಗು ಗಾಝಾದ ಜನರಿಗೆ ಸಾಂಕೇತಿಕ ಮಾನವೀಯ ನೆರವಿನ ಸರಬರಾಜುಗಳ ಜೊತೆಗೆ ಕಳೆದ ಎರಡು ದಶಕಗಳಿಂದ ಇಸ್ರೇಲ್‌ ಹೇರಿರುವ ಗಾಝಾದ ಅಕ್ರಮ ನೌಕಾ ದಿಗ್ಬಂಧನವನ್ನು ಮುರಿಯುವ ಮತ್ತು ಮಾನವೀಯ ಬಿಕ್ಕಟ್ಟಿನ ಬಗ್ಗೆ ಅಂತರರಾಷ್ಟ್ರೀಯ ಗಮನ ಸೆಳೆಯುವ ಉದ್ದೇಶವನ್ನು ಹೊಂದಿತ್ತು.

ಅಂತಾರಾಷ್ಟ್ರೀಯ ಜಪ ಪ್ರದೇಶದಲ್ಲಿ ತಡೆಹಿಡಿಯಲಾದ ಹಡಗನ್ನು ಸೋಮವಾರ ಸಂಜೆಯ ವೇಳೆಗೆ ಆಕ್ರಮಿತ ಪ್ಯಾಲೆಸ್ತೀನ್‌ನ ಆಶ್ಡೋಡ್ ಬಂದರಿಗೆ ಎಳೆದುಕೊಂಡು ಹೋಗಲಾಗಿದೆ ಎಂದು ಇಸ್ರೇಲ್‌ನ ವಿದೇಶಾಂಗ ಸಚಿವಾಲಯ ದೃಢಪಡಿಸಿದೆ. ಸ್ವೀಡನ್, ಬ್ರೆಜಿಲ್, ಫ್ರಾನ್ಸ್, ಜರ್ಮನಿ, ನೆದರ್ಲ್ಯಾಂಡ್ಸ್, ಸ್ಪೇನ್ ಮತ್ತು ಟರ್ಕಿಯಿಂದ ಬಂದ ಪ್ರಯಾಣಿಕರನ್ನು ವಶಕ್ಕೆ ತೆಗೆದುಕೊಂಡು, ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು ಮತ್ತು ಬೆನ್-ಗುರಿಯನ್ ವಿಮಾನ ನಿಲ್ದಾಣದ ಮೂಲಕ ಗಡೀಪಾರು ಮಾಡಲು ನಿರ್ಧರಿಸಲಾಯಿತು ಎಂದು ಅದು ಹೇಳಿದೆ.

ಹಡಗಿನಲ್ಲಿದ್ದ ಹೋರಾಟಗಾರರನ್ನು ‘ಸೆಲ್ಫಿ ವಿಹಾರ ದೋಣಿ’ ಪ್ರಯಾಣಿಕರು ಎಂದು ಹಂಗಿಸಿರುವ ಇಸ್ರೇಲ್, ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಮತ್ತು ಯಾವುದೇ ಹಾನಿಗೊಳಗಾಗಿಲ್ಲ ಎಂದು ಹೇಳಿದೆ. “ಅವರಿಗೆ ಸ್ಯಾಂಡ್‌ವಿಚ್‌ಗಳು ಮತ್ತು ನೀರನ್ನು ಒದಗಿಸಲಾಗಿದೆ. ಪ್ರದರ್ಶನ ಮುಗಿದಿದೆ,” ಎಂದು ವ್ಯಂಗ್ಯವಾಗಿ ಇಸ್ರೇಲ್ ವಿದೇಶಾಂಗ ಸಚಿವಾಲಯ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.

ಅಷ್ಟೆ ಅಲ್ಲದೆ, ಲೈಫ್ ಜಾಕೆಟ್‌ಗಳನ್ನು ಧರಿಸಿ ಶಾಂತವಾಗಿ ಕುಳಿತು ಉಪಹಾರಗಳನ್ನು ಪಡೆಯುತ್ತಿರುವ ಹೋರಾಟಗಾರರ ವಿಡಿಯೊವನ್ನು ಸಚಿವಾಲಯ ಬಿಡುಗಡೆ ಮಾಡಿದ್ದು, ಅದರಲ್ಲಿ ಗ್ರೇಟಾ ಥನ್‌ಬರ್ಗ್ ಅವರು ಗೋಚರಿಸುತ್ತಿದ್ದರು. ಅದಾಗ್ಯೂ, ಫ್ರೀಡಂ ಪ್ಲೋಟಿಲ್ಲಾ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಎಲ್ಲಾ ಹೋರಾಟಗಾರರು ಕೈಗಳನ್ನು ಮೇಲೆತ್ತುವ ಮತ್ತು ಅವರ ಹಗಡಗನ್ನು ಇಸ್ರೇಲ್‌ನ ಸೈನಿಕರು ವಶಕ್ಕೆ ಪಡೆಯುವ ದೃಶ್ಯಗಳು ದಾಖಲಾಗಿವೆ.

ಕಾನೂನುಬಾಹಿರ ದಾಳಿ ಎಂದ ಫ್ರೀಡಂ ಫ್ಲೋಟಿಲ್ಲಾ

ಮದ್ಲೀನ್ ಪ್ರಯಾಣವನ್ನು ಆಯೋಜಿಸಿದ್ದ ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟವು, ಹಡಗನ್ನು ಅಂತರರಾಷ್ಟ್ರೀಯ ಜಲ ಪ್ರದೇಶದಲ್ಲಿ “ಕಾನೂನುಬಾಹಿರವಾಗಿ ಹತ್ತಿಕ್ಕಲಾಗಿದೆ” ಎಂದು ಹೇಳಿದೆ. ಕ್ವಾಡ್‌ಕಾಪ್ಟರ್‌ಗಳು ಹಡಗಿಗೆ ಬಿಳಿ ವಸ್ತುವನ್ನು ಸಿಂಪಡಿಸಿದ್ದು, ಹಡಗಿನ ಸಂವಹನಗಳನ್ನು ಜ್ಯಾಮ್ ಮಾಡಿದ್ದವು ಮತ್ತು ರೇಡಿಯೋದಲ್ಲಿ ಅಡ್ಡಿಪಡಿಸುವ ಶಬ್ದಗಳನ್ನು ಪ್ರಸಾರ ಮಾಡಲಾಯಿತು ಎಂದು ಒಕ್ಕೂಟ ಹೇಳಿಕೊಂಡಿದ್ದು, ವಿಡಿಯೊವನ್ನು ಬಿಡುಗಡೆ ಮಾಡಿದೆ.

ಹೋರಾಟಗಾರ್ತಿ ಯಾಸೆಮಿನ್ ಅಕಾರ್ ಅವರು ಇಸ್ರೇಲ್ ಸೇನೆ ಸಿಂಪಡಿಸಿದ್ದ ಬಿಳಿ ವಸ್ತುವನ್ನು ಪ್ರದರ್ಶಿಸುತ್ತಾ ಅದು ತನ್ನ ಕಣ್ಣುಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳುತ್ತಿರುವುದು ಹಡಗಿನ ಲೈವ್‌ಸ್ಟ್ರೀಮ್‌ನಲ್ಲಿ ದಾಖಲಾಗಿದೆ. ನಂತರ ಬಿಡುಗಡೆ ಮಾಡಲಾದ ಮತ್ತೊಂದು ವೀಡಿಯೊದಲ್ಲಿ ಪ್ರಯಾಣಿಕರು ಯಾವುದೆ ಪ್ರತಿರೋಧ ತೋರದೆ ಸನ್ನೆಯಲ್ಲಿ ತಮ್ಮ ಕೈಗಳನ್ನು ಮೇಲಕ್ಕೆತ್ತಿರುವುದು ತೋರಿಸಲಾಗಿದೆ.

ಹಡಗಿನ ಸಂಪರ್ಕ ಕಡಿತಗೊಂಡ ನಂತರ ಒಕ್ಕೂಟವು ಹಿಂದೆಯೆ ರೆಕಾರ್ಡ್ ಮಾಡಲಾಗಿದ್ದ ವಿಡಿಯೊವನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಗೇಟಾ ಥನ್‌ಬರ್ಗ್ ಅವರು ಮಾತನಾಡುತ್ತಾ, “ನೀವು ಈ ವೀಡಿಯೊವನ್ನು ನೋಡುತ್ತಿದ್ದರೆ, ಇಸ್ರೇಲಿ ಉದ್ಯೋಗ ಪಡೆಗಳು ಅಥವಾ ಇಸ್ರೇಲ್ ಅನ್ನು ಬೆಂಬಲಿಸುವ ಪಡೆಗಳು ನಮ್ಮನ್ನು ತಡೆದು ಅಂತರರಾಷ್ಟ್ರೀಯ ಜಲ ಪ್ರದೇಶದಿಂದ ಅಪಹರಿಸಿವೆ. ನನ್ನ ಎಲ್ಲಾ ಸ್ನೇಹಿತರು, ಕುಟುಂಬ ಮತ್ತು ಒಡನಾಡಿಗಳು ನನ್ನನ್ನು ಮತ್ತು ಇತರರನ್ನು ಸಾಧ್ಯವಾದಷ್ಟು ಬೇಗ ಬಿಡುಗಡೆ ಮಾಡುವಂತೆ ಸ್ವೀಡಿಷ್ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ನಾನು ಒತ್ತಾಯಿಸುತ್ತೇನೆ.” ಎಂದು ಹೇಳಿದ್ದಾರೆ.

ತಮ್ಮ ಉದ್ದೇಶ ಶಾಂತಿಯುತವಾಗಿತ್ತು ಮತ್ತು 600 ದಿನಗಳ ಸಂಘರ್ಷದ ನಂತರ 11 ವಾರಗಳ ಸಂಪೂರ್ಣ ದಿಗ್ಬಂಧನದಿಂದಾಗಿ ತೀವ್ರ ಆಹಾರದ ಕೊರತೆಯನ್ನು ಎದುರಿಸುತ್ತಿರುವ ಗಾಝಾದಲ್ಲಿನ ಮಾನವೀಯ ತುರ್ತು ಪರಿಸ್ಥಿತಿಯನ್ನು ಎತ್ತಿ ತೋರಿಸುವುದು ತಮ್ಮ ಗುರಿಯಾಗಿದೆ ಎಂದು ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟ ಹೇಳಿದೆ.

ಗ್ರೇಟಾ ಥನ್‌ಬರ್ಗ್ ವಿರುದ್ಧ ಮತ್ತೆ ದ್ವೇಷ ಕಾರಿದ ಅಮೆರಿಕ ಅಧ್ಯಕ್ಷ ಟ್ರಂಪ್

ಈ ನಡುವೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗ್ರೇಟಾ ಥನ್‌ಬರ್ಗ್ ಅವರ ಅಪಹರಣದ ಹೇಳಿಕೆಯನ್ನು ಅಪಹಾಸ್ಯ ಮಾಡಿದ್ದು, “ಗ್ರೇಟಾ ಥನ್‌ಬರ್ಗ್ ಅನ್ನು ಅಪಹರಿಸುವ ಬದಲು ಇಸ್ರೇಲ್‌ಗೆ ಮಾಡಲು ಸಾಕಷ್ಟು ಕೆಲಸಗಳಿವೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.

ಗ್ರೇಟಾ ಅವರೊಂದಿಗಿನ ತಮ್ಮ ದೀರ್ಘಕಾಲದ ದ್ವೇಷವನ್ನು ಪುನರುಜ್ಜೀವನಗೊಳಿಸಿದ ಟ್ರಂಪ್, “ಅವರು ಕೋಪಗೊಂಡ ಯುವ ವ್ಯಕ್ತಿ. ಅದು ನಿಜವಾದ ಕೋಪವೋ ಎಂದು ನನಗೆ ತಿಳಿದಿಲ್ಲ; ವಾಸ್ತವವಾಗಿ ನಂಬುವುದು ಕಷ್ಟ. ಆದರೆ ಏನಾಯಿತು ಎಂದು ನಾನು ನೋಡಿದೆ. ಅವರು ಖಂಡಿತವಾಗಿಯೂ ವಿಭಿನ್ನಳು. ಅವರು ಕೋಪ ನಿರ್ವಹಣಾ ತರಗತಿಗೆ ಹೋಗಬೇಕು ಎಂದು ನಾನು ಭಾವಿಸುತ್ತೇನೆ. ಅದು ಅವರಿಗೆ ನನ್ನ ಪ್ರಾಥಮಿಕ ಶಿಫಾರಸು.” ಎಂದು ಹೇಳಿದ್ದಾರೆ.

ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿ ಟ್ರಂಪ್ ಅವರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಗ್ರೇಟಾ ಥನ್‌ಬರ್ಗ್, “ಪ್ರಸ್ತುತ ನಡೆಯುತ್ತಿರುವ ಎಲ್ಲದರಲ್ಲೂ ಪ್ರಾಮಾಣಿಕವಾಗಿರಲು ಜಗತ್ತಿಗೆ ಇನ್ನೂ ಹೆಚ್ಚಿನ ಯುವ ಕೋಪಗೊಂಡ ಮಹಿಳೆಯರು ಬೇಕಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ.” ಎಂದು ತಿರುಗೇಟು ನೀಡಿದ್ದಾರೆ.

ಸಾಂಕೇತಿಕ ನೆರವು ಕಾರ್ಯಾಚರಣೆಯೋ ಅಥವಾ “ಸೆಲ್ಫಿ ಸ್ಟಂಟ್”?

ಇಸ್ರೇಲ್ ವಿದೇಶಾಂಗ ಸಚಿವಾಲಯವು ಮದ್ಲೀನ್ ಹಡಗಿನ ಪ್ರಯಾಣವನ್ನು “ಸೆಲ್ಫಿ ವಿಹಾರ ನೌಕೆ” ಎಂದು ಹಂಗಿಸಿದ್ದು, ಈ ಪ್ರಯಾಣವು ಸಹಾಯಕ್ಕಿಂತ ಪ್ರಚಾರದ ಬಗ್ಗೆ ಹೆಚ್ಚು ಬಳಸಲಾಗಿದೆ ಎಂದು ಸೂಚಿಸಿತ್ತು. ಆದರೆ ಗ್ರೇಟಾ ಥನ್‌ಬರ್ಗ್ ಅದನ್ನು ತಿರಸ್ಕರಿಸಿದ್ದಾರೆ. ಈ ಹಿಂದೆ ನೆರವಿನೊಂದಿಗೆ ಹೊರಟಿದ್ದ ಪ್ಲೋಟಿಲ್ಲಾದ ದೊಡ್ಡ ಹಡಗಿನ ಮೇಲೆ ಬಾಂಬ್ ದಾಳಿ ಮಾಡಿರುವುದನ್ನು ಅವರು ನೆನಪಿಸಿಕೊಂಡಿದ್ದಾರೆ.

“ಇದು ಸಾರ್ವಜನಿಕ ಸಂಪರ್ಕ ಕ್ರಮವಲ್ಲ” ಎಂದು ಹೇಳಿದ ಅವರು, “ಸಹಾಯವನ್ನು ತಲುಪಿಸುವುದು ಮತ್ತು ಅಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಈ ಪ್ರಯಾಣದ ಉದ್ದೇಶವಾಗಿದೆ.” ಎಂದು ಗ್ರೇಟಾ ಹೇಳಿದ್ದಾರೆ.

ಮದ್ಲೀನ್ ಹಡಗಿನಲ್ಲಿ ಗ್ರೇಟಾ ಅವರ ಜೊತೆಗೆ ಯುರೋಪಿಯನ್ ಸಂಸತ್ತಿನ ಫ್ರೆಂಚ್ ಸದಸ್ಯೆ ರಿಮಾ ಹಸನ್, ಅಲ್ ಜಝೀರಾದ ಫ್ರೆಂಚ್ ಪತ್ರಕರ್ತ ಒಮರ್ ಫಯಾದ್, ಬ್ರೆಜಿಲ್‌ನ ಥಿಯಾಗೊ ಅವಿಲಾ, ಫ್ರಾನ್ಸ್‌ನ ಬ್ಯಾಪ್ಟಿಸ್ಟ್ ಆಂಡ್ರೆ, ಪ್ಯಾಸ್ಕಲ್ ಮೌರಿಯರಾಸ್, ಯಾನಿಸ್ ಮಹಮ್ದಿ, ಟರ್ಕಿಯ ಶುವಾಯ್ಬ್ ಒರ್ಡು, ರೆವಾ ವಿಯಾರ್ಡ್, ಸ್ಪೇನ್‌ನ ಸೆರ್ಗಿಯೊ ಟೊರಿಬಿಯೊ ಮತ್ತು ನೆದರ್ಲ್ಯಾಂಡ್ಸ್‌ನ ಮಾರ್ಕೊ ವ್ಯಾನ್ ರೆನ್ನೆಸ್ ಇದ್ದರು. ಗಾಜಾ ನೆರವು ಹಡಗು

ಇಡೀ ಘಟನೆಯು, ಇಸ್ರೇಲ್ ಆಕ್ರಮಿತ ಪ್ಯಾಲೆಸ್ತೀನ್ ಅಲ್ಲಿ ಹೇರಲಾಗಿರುವ ನೌಕಾ ದಿಗ್ಬಂಧನ ಮತ್ತು ಗಾಝಾದಲ್ಲಿನ ಮಾನವೀಯ ಪರಿಸ್ಥಿತಿಯ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಜೊತೆಗೆ ಗ್ರೇಟಾ ಥನ್‌ಬರ್ಗ್‌ ಅವರು ಮತ್ತೊಮ್ಮೆ ಅಂತರರಾಷ್ಟ್ರೀಯ ಗಮನ ಸೆಳೆದಿದ್ದಾರೆ. ಈ ಬಾರಿ ಅವರು ಪರಿಸರ ಹೋರಾಟದ ಬದಲಾಗಿ, ವಿಶ್ವದ ಅತ್ಯಂತ ಧ್ರುವೀಕೃತ ಸಂಘರ್ಷಗಳಲ್ಲಿ ಒಂದಾದ ಪ್ಯಾಲೆಸ್ತಿನ್‌ ಹೋರಾಟದ ಪರವಾಗಿ ಬಹಿರಂಗ ರಾಜಕೀಯ ನಿಲುವಿಗಾಗಿ ಗಮನ ಸೆಳೆದಿದ್ದಾರೆ.

ಇಸ್ರೇಲಿ ಬಂಧನದಲ್ಲಿರುವ ಎಲ್ಲಾ ಹೋರಾಟಗಾರರನ್ನು ತಕ್ಷಣ ಬಿಡುಗಡೆ ಮಾಡುವಂತೆ ಫ್ರೀಡಂ ಪ್ಲೋಟಿಲ್ಲಾ ಒಕ್ಕೂಟ (FFC) ಕರೆ ನೀಡುತ್ತಲೇ ಇದ್ದು, ತಮ್ಮ ಕ್ರಮಗಳು ಕಾನೂನುಬದ್ಧ, ನೈತಿಕ ಮತ್ತು ತುರ್ತು ಎಂದು ಸಮರ್ಥಿಸಿಕೊಂಡಿವೆ. ಗಾಜಾ ನೆರವು ಹಡಗು

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ನೆರವು ಹೊತ್ತು ಗಾಝಾದತ್ತ ತೆರಳಿದ್ದ ‘ಮದ್ಲೀನ್’ ಹಡಗನ್ನು ವಶಕ್ಕೆ ಪಡೆದ ಇಸ್ರೇಲಿ ಪಡೆ: ಅಪಹರಿಸಲಾಗಿದೆ ಎಂದ ಹೋರಾಟಗಾರರು

ನೆರವು ಹೊತ್ತು ಗಾಝಾದತ್ತ ತೆರಳಿದ್ದ ‘ಮದ್ಲೀನ್’ ಹಡಗನ್ನು ವಶಕ್ಕೆ ಪಡೆದ ಇಸ್ರೇಲಿ ಪಡೆ: ಅಪಹರಿಸಲಾಗಿದೆ ಎಂದ ಹೋರಾಟಗಾರರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...