Homeಚಳವಳಿಜನಸಮುದಾಯವನ್ನು ಸಂಘಟಿಸಲು ಗಾಂಧಿಯ ಚಿಂತನೆಗಳು ಇಂದು ನಮಗೆ ಪ್ರಸ್ತುತ...

ಜನಸಮುದಾಯವನ್ನು ಸಂಘಟಿಸಲು ಗಾಂಧಿಯ ಚಿಂತನೆಗಳು ಇಂದು ನಮಗೆ ಪ್ರಸ್ತುತ…

- Advertisement -
- Advertisement -

ಮೂಲ : ಗೋಪಾಲ ಗುರು

ಅನುವಾದ: ಟಿ.ಎಸ್ ವೇಣುಗೋಪಾಲ್, ಶೈಲಜ ಮೈಸೂರು.

ಗಾಂಧಿಯ ಬಗ್ಗೆ ಬರೆದಷ್ಟು ಬಹುಶಃ ಮತ್ಯಾರ ಬಗ್ಗೆಯೂ ಬರೆದಿಲ್ಲ. ಅಷ್ಟೇ ಅಲ್ಲ ಗಾಂಧಿಯನ್ನು ದ್ವೇಷಿಸುವಷ್ಟು ಇನ್ಯಾರನ್ನೂ ದ್ವೇಷಿಸುವುದಿಲ್ಲ ಅನ್ನುವುದೂ ಕೂಡ ಅಷ್ಟೇ ನಿಜ. ಕೆಲವರ ದೃಷ್ಟಿಯಲ್ಲಿ ಗಾಂಧಿ ಮಹಾನ್ ಜನನಾಯಕ. ಉಳಿದವರ ದೃಷ್ಟಿಯಲ್ಲಿ ಆತ ಏನೂ ಅಲ್ಲ. ಬ್ರಿಟಿಷರ ವಿರುದ್ಧದ ರಾಷ್ಟ್ರೀಯ ಹೋರಾಟ ಗಟ್ಟಿಗೊಳ್ಳುತ್ತಿದ್ದ ಸಂದರ್ಭದಲ್ಲಿ ಗಾಂಧಿ ತೆಗೆದುಕೊಂಡ ನಿಲುವುಗಳು ಮತ್ತು ಆಗಿನ ಅವರ ಚಿಂತನೆಗಳನ್ನು ಇವತ್ತಿಗೂ ಕೆಲವರು ಕಟುವಾಗಿ ಟೀಕಿಸುತ್ತಾರೆ.

ಗಾಂಧಿಯನ್ನು ದ್ವೇಷಿಸುವವರಿಗೆ, ಹಾಗೆ ದ್ವೇಷಿಸುವುದಕ್ಕೆ ಕಾರಣವೇ ಬೇಕಿಲ್ಲ. ಅದು ಹಾಗೇನೆ. ಕ್ರೂರ ದ್ವೇಷಕ್ಕೆ ಯಾವ ಕಾರಣವೂ ಬೇಕಿಲ್ಲ. ದ್ವೇಷಿಸಲು ಕೊಡುವ ಕಾರಣಗಳಿಗೆ ಒಂದು ಸಮರ್ಥನೆಯೂ ಇರುವುದಿಲ್ಲ. ದ್ವೇಷ ಮತ್ತು ಅಸೂಯೆ ಎರಡೂ ವಿಚ್ಛಿಧ್ರಕಾರಿ ಅಂಶಗಳು. ಮತ್ತು ಅವೆರಡಕ್ಕೂ ಒಂದು ಸೂಕ್ಷ್ಮವಾದ ತಾರ್ಕಿಕ ಸಮರ್ಥನೆ ಇರುವುದಿಲ್ಲ. ಚಾರಿತ್ರಿಕವಾಗಿ ಸೇರಿಕೊಂಡು ಬಂದಿರುವ ಪೂರ್ವಗ್ರಹಗಳೇ ಅವಕ್ಕೆ ಬೇಕಾದಷ್ಟು. ಬಹುಶಃ ಅವರು ಗಾಂಧಿಯೊಂದಿಗಾಗಲಿ, ಅಥವಾ ಗಾಂಧಿಯನ್ನು ಓದಿಕೊಂಡ ವಿದ್ವಾಂಸರು, ವ್ಯಾಖ್ಯಾನಕಾರರು ಅಥವಾ ವಿಶ್ಲೇಷಿಸಿದವರ ಜೊತೆಗಾಗಲೀ ಎಂದೂ ಗಂಭೀರವಾದ ಚರ್ಚೆಯನ್ನೂ ಮಾಡಿಲ್ಲವೆನಿಸುತ್ತದೆ. ಅವರಿಗೆ ಬೇಕಾಗಿರುವುದು ಗಾಂಧಿಯನ್ನು ಸಮರ್ಥಿಸಿಕೊಂಡು ಕೆಲವರು ನೀಡುವ ತೆಳುವಾದ ತಕ್ಷಣದ ಪ್ರತಿಕ್ರಿಯೆ. ಅದರಲ್ಲೇ ಅವರಿಗೆ ನೆಮ್ಮದಿ.

ಗಾಂಧಿಯವರ ಚಿಂತನೆಗಳನ್ನು ಕುರಿತಂತೆ ಒಂದು ಅಧಿಕೃತವಾದ ಹಾಗೂ ನಿಖರವಾದ ವಿವರಣೆಯನ್ನು ನೀಡುವುದಕ್ಕೆ ವಿದ್ವಾಂಸರಿಗೆ, ಭಾಷ್ಯಕಾರರಿಗೆ, ವಿಶ್ಲೇಷಕರಿಗೆ ಗಾಂಧಿ ಬಹುಶಃ ಅವಕಾಶವನ್ನೇ ಕೊಟ್ಟಂತಿಲ್ಲ. ಅಂದರೆ ಗಾಂಧಿಯವರ ಚಿಂತನೆಗಳನ್ನು ಕುರಿತಂತೆ ಒಂದು ಸಂಪೂರ್ಣವಾದ ಹಾಗೂ ಅಂತಿಮ ಎನ್ನಬಹುದಾದ ವಿವರಣೆಯನ್ನು ಕೊಡುವುದಕ್ಕೆ ಅವರಿಗೆ ಕಷ್ಟವಾಗಿದೆ. ಈ ಮಾತು ಗಾಂಧಿಯವರ ವಿದ್ವತ್ತಿನ ವಿಷಯದಲ್ಲಷ್ಟೇ ಅಲ್ಲ, ಅವರು ಅನುಸರಿಸುವ ವಿಧಾನದ ಮಟ್ಟಿಗೂ ಸತ್ಯ.

ಗಾಂಧಿಯವರ ಬರಹಗಳ ಒಂದು ಲಕ್ಷಣವೆಂದರೆ, ಅವುಗಳ ತೆರೆದಿರುವಿಕೆ (ಮುಕ್ತತೆ). ಅಂದರೆ ಯಾವುದೇ ವಿಚಾರದಲ್ಲೂ ಅವರು ಇದು ಇಲ್ಲಿಗೆ ಮುಗಿಯಿತು ಎಂದು ಒಂದು ತೆರೆ ಎಳೆದು ಬಿಡುವುದಿಲ್ಲ. ಅದು ಮುಕ್ತವಾಗಿಯೇ ಇರುತ್ತದೆೆ. ಇದರಿಂದಾಗಿಯೇ ವಿದ್ವಾಂಸರಿಗೆ ಗಾಂಧಿಯನ್ನು ವಿಭಿನ್ನ “ಅವತಾರ”ಗಳಲ್ಲಿ ಪ್ರದರ್ಶಿಸುವ ಸಾಹಸ ಮಾಡುವುದಕ್ಕೆ ಸಾಧ್ಯವಾಗಿದೆ. ಹಾಗಾಗಿಯೇ ಗಾಂಧಿ ವಸಾಹತುಪೂರ್ವ ರಾಷ್ಟ್ರೀಯವಾದಿಯಾಗಿ, ಅಂತರರಾಷ್ಟ್ರೀಯವಾದಿಯಾಗಿ, ಆಧುನಿಕತೆಗೆ ಪರ್ಯಾಯವಾಗಿ, ಆಧುನಿಕೋತ್ತರವಾದಿಯಾಗಿ, ಭಾವನಾವಾದಿಯಾಗಿ, ವ್ಯಾವಹಾರಿಕನಾಗಿ, ಮಹಿಳಾವಾದಿಯಾಗಿ, ತಳಸಮುದಾಯದ ಚಿಂತಕನಾಗಿ ಮತ್ತು ಕೊನೆಗೆ ಉದಾರವಾದಿಯಾಗಿ ಹಾಗೆಯೇ ಕೂಡೊಡೆತನದ ಪ್ರತಿಪಾದಕನಾಗಿ ಹೀಗೆ ವಿಭಿನ್ನ ರೂಪಗಳಲ್ಲಿ ನಮಗೆ ಕಾಣಿಸಿಕೊಳ್ಳುತ್ತಾನೆ. ಗಾಂಧಿಯ ಚಿಂತನೆಯಲ್ಲಿರುವ ಈ ಮುಕ್ತತೆ ಅಥವಾ ಚಿಂತನೆಯ ಮುಕ್ತತೆಯೇ ಗಾಂಧಿಯನ್ನು ಟೀಕಿಸುವವರನ್ನು ನೈತಿಕ ಶಿಷ್ಟತೆ ಜಾಗೂ ಸೌಜನ್ಯವೇ ಇಲ್ಲದ ಗಲೀಜು ಜನರನ್ನಾಗಿ ಅಥವಾ ರಾಜಕೀಯವಾಗಿ ಆಷಾಡಭೂತಿಗಳನ್ನಾಗಿ, ಬೌದ್ಧಿಕವಾಗಿ ನಿಸ್ಸಾಹಯಕರಾಗಿ, ಹತಾಶರನ್ನಾಗಿ ಅಥವಾ ಅಧೀರರನ್ನಾಗಿ ಮಾಡಿದೆ.

ಗಾಂಧಿಯನ್ನು ಎದುರಿಸಲು ಅವರಲ್ಲಿ ಯಾವುದೇ ವಾದವೂ ಇಲ್ಲ ಅಥವಾ ಅವರಿಗೆ ಆಸಕ್ತಿಯೂ ಇಲ್ಲ. ಹಾಗಾಗಿಯೇ ಅವರು ಅಸಹ್ಯ ಹುಟ್ಟಿಸುತ್ತಾರೆ. ಗಾಂಧಿಯನ್ನು ಬೌದ್ಧಿಕವಾಗಿ ಹೇಗೆ ಎದುರಿಸಬೇಕೆಂದು ತಿಳಿಯದೇ ಅವರಲ್ಲಿ ಕೆಲವರು ಹತಾಶರಾಗುತ್ತಾರೆ. ಗಾಂಧಿವಾದದ ಇಡೀ ಪರಂಪರೆಯನ್ನೇ ನಿರ್ನಾಮ ಮಾಡಬೇಕು ಎಂದುಕೊಂಡವರಿಗೆ ತಮ್ಮ ಉದ್ದೇಶವನ್ನು ಹೇಗೆ ಸಾಧಿಸಿಕೊಳ್ಳಬೇಕು ಎನ್ನುವುದು ತಿಳಿದಿಲ್ಲ. ಹಾಗಾಗಿ ಕನಿಷ್ಠ ಮೇಲ್ನೋಟಕ್ಕಾದರೂ ಅವರು ಗಾಂಧಿಯೊಂದಿಗೆ ಗುರುತಿಸಿಕೊಳ್ಳಬೇಕಾಗಿದೆ. ಅವರ ಒಳಗಿನ ನಿಜವಾದ ಉದ್ದೇಶ ಹಾಗೂ ಅವರು ಹೊರಗೆ ತೋರಿಸಿಕೊಳ್ಳುತ್ತಿರುವ ರೀತಿಗೂ ನಡುವೆ ಘರ್ಷಣೆ ನಡೆಯುತ್ತಿರುತ್ತದೆ. ಆ ಘರ್ಷಣೆಯಲ್ಲಿ ಅವರ ರಾಜಕೀಯ ಅಷಾಡಭೂತಿತನ ಅಥವಾ ಅಸಂತುಷ್ಟ ಪ್ರಜ್ಞೆ ಕಾಣಿಸಿಕೊಳ್ಳುತ್ತದೆ.

ಗಾಂಧಿಯ ಬರಹಗಳು ಸಂವಾದದ ರೂಪದಲ್ಲಿವೆ. ಈ ವಿಧಾನ ಸಾಂಪ್ರದಾಯಿಕ ವಿಚಾರಗಳನ್ನು ಚರ್ಚಿಸುವುದಕ್ಕೆ ಒತ್ತಾಯಿಸುತ್ತದೆ. ಈ ವಿಧಾನಕ್ಕೆ ಬೇಕಾದ ಭೌದ್ಧಿಕ ಆಕರಗಳು ಭಾರತೀಯ ಜ್ಞಾನಪರಂಪರೆಯಲ್ಲಿ ಇವೆ. ಗಾಂಧಿ ಅವನ್ನು ಸೃಜನಶೀಲವಾಗಿ ಬಳಸಿಕೊಂಡಿದ್ದಾರೆ. ಅವರ ಚಿಂತನೆಗಳು ಬಹುಪಾಲು ಒಳಗಿನಿಂದಲೇ ಕೆಲಸಮಾಡುತ್ತಿರುತ್ತವೆ. ಗಾಂಧಿಯ ವಿಚಾರಗಳು ಎಲ್ಲಾ ವಿದ್ವಾಂಸರಲ್ಲೂ ಒಂದೇ ರೀತಿಯ ಚಿಂತನೆಗಳನ್ನು ಮೂಡಿಸುವುದಿಲ್ಲ. ಪಾಶ್ಚಾತ್ಯ ಗ್ರಹಿಕಾಪದ್ಧತಿಗಳಿಗೆ ಭಾರತೀಯರು ದಾಸರಾಗಬಾರದೆಂದು ಗಾಂಧಿ ವಾದಿಸುತ್ತಾರೆ. ಇದನ್ನು ಹಲವು ವಿದ್ವಾಂಸರುಗಳು ಗುರುತಿಸಿದ್ದಾರೆ.

ವಸಾಹತುಶಾಹಿ ಶಕ್ತಿಯ ವಿರುದ್ಧ ಅಥವಾ ಸ್ಥಳೀಯವಾಗಿ ಸಮಾಜವನ್ನು ನಿಯಂತ್ರಿಸುತ್ತಿರುವ ಬ್ರಾಹ್ಮಣಶಾಹಿಯ ವಿರುದ್ಧ ಜನರನ್ನು ಸಂಘಟಿಸುವುದಕ್ಕೆ ಕೆಲವು ವಿಧಾನಗಳು ಸೂಕ್ತವಾಗುವುದಿಲ್ಲ ಎನ್ನುವ ಕಾರಣಕ್ಕೆ ಗಾಂಧಿ ಅವುಗಳನ್ನು ಕೈಬಿಟ್ಟಿದ್ದಾರೆ. ಇವುಗಳನ್ನು ಗಮನಿಸಿದರೆ, ಜ್ಞಾನವನ್ನು ಗ್ರಹಿಸುವುದರಲ್ಲಿ ಗಾಂಧಿಗಿದ್ದ ಅರಿವು ಅರ್ಥವಾಗುತ್ತದೆ. ಇದರಿಂದಾಗಿಯೇ ಅವರು ಬಳಸಿದ ಸಹಿಷ್ಣುತೆ, ಅಹಿಂಸೆ, ಅಸಹಕಾರದ ಭಾಷಾಶೈಲಿ ವಸಾಹತುಶಾಹಿ ವಿರುದ್ಧದ ಹೋರಾಟದಲ್ಲಿ ತುಂಬಾ ಪರಿಣಾಮಕಾರಿಯಾಗಿದ್ದವು.

ಹಾಗೆಯೇ ಸೇವೆ, ಸಹಾನುಭೂತಿ ಮತ್ತು ಕೂಡೊಡೆತನ ಮುಂತಾದವುಗಳ ವಿವರಣೆ ಮತ್ತು ವ್ಯಾಖ್ಯಾನ ಅಂತಹ ಕ್ಲಿಷ್ಟವಾಗಿಲ್ಲ. ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುತ್ತವೆ. ಜನಸಾಮಾನ್ಯರು ಇವುಗಳಿಗಾಗಿ ತಮ್ಮ ಎದುರಾಳಿಗಳ ವಿಷಯದಲ್ಲಿ ತೀರಾ ಕಠಿಣವಾದ ನಿಲುವನ್ನು ತೆಗೆದುಕೊಳ್ಳಬೇಕಾಗುವ ಅವಶ್ಯಕತೆಯೂ ಇರಲಿಲ್ಲ. ಹಾಗಾಗಿ ಇವುಗಳನ್ನು ಒಪ್ಪಿಕೊಳ್ಳುವುದಕ್ಕೆ ಯಾವ ಕಷ್ಟವೂ ಅಗಲಿಲ್ಲ. ಇಂತಹ ಭಾಷೆಯ ಒಳಗೇ ಇರುವ ಭಾವನಾತ್ಮಕ ಅಂಶವೂ ವೈಚಾರಿಕ ಪ್ರಖರತೆಯನ್ನು ಕಡಿಮೆ ಮಾಡುತ್ತದೆ. ಈ ಭಾವನಾತ್ಮಕ ಅಂಶ ಅವರ ಗ್ರಹಿಕಾ ವಿಧಾನಗಳ ಆಧಾರವಾಗಿ ಕೆಲಸಮಾಡುತ್ತದೆ. “ಹರಿಜನ” ಎನ್ನುವುದು ಕೂಡ ಬೌದ್ಧಿಕ ಚಿಂತನೆಯನ್ನು ಆಧರಿಸದ ಇಂತಹುದೇ ಒಂದು ಸುಲಭಗ್ರಾಹ್ಯ ಪದವಾಗಿತ್ತು. ಈ ಪದದ ಉದ್ದೇಶ ಕೆಳಜಾತಿಗಳಿಗೆ ಸಂಬಂಧಿಸಿದಂತೆ ಸವರ್ಣೀಯರ ಸಾಮಾಜಿಕ ನಿಲುವನ್ನು ತಟಸ್ಥಗೊಳಿಸಿ, ಅಂತಿಮವಾಗಿ ಅವರಿಬ್ಬರ ಸಾಮಾಜಿಕ ಅಂತಸ್ತನ್ನು ಒಂದೇ ಮಾಡುವುದಾಗಿತ್ತು. ಗಾಂಧೀಜಿಯವರ ಅನುಸರಿಸಿದ ಈ ವೈದಾನಿಕ ನಡೆಯಿಂದಾಗಿ, ವಸಾಹಾತುವಿರೋಧಿ ಹೋರಾಟದಲ್ಲಿ ಜನರನ್ನು ಸಂಘಟಿಸುವಲ್ಲಿ ಅವರನ್ನು ತೀರಾ ಯಶಸ್ವಿ ನಾಯಕರನ್ನಾಗಿ ಮಾಡಿತು. ಗಾಂಧೀಜಿಯವರ ಈ ಭಾಷೆ ಎದುರಾಳಿಗಳನ್ನು ರೊಚ್ಚಿಗೆಬ್ಬಿಸುತ್ತಿರಲಿಲ್ಲ. ಹಾಗಾಗಿ ಸಾಮಾನ್ಯ ಜನರಲ್ಲಿ ಇದು ಸುರಕ್ಷತೆ ಮತ್ತು ನೆಮ್ಮದಿಯ ಭಾವವನ್ನು ಮೂಡಿಸುತ್ತಿತ್ತು. ವಿವರಣೆ ಮತ್ತು ವ್ಯಾಖ್ಯಾನವನ್ನು ನೀಡುವುದಕ್ಕೆ ಗಾಂಧಿಯು ಬೌದ್ಧಿಕವಲ್ಲದ ಚಿಂತನಾಕ್ರಮವನ್ನು ಬಳಸಿದ್ದರಿಂದ ಅವರ ಚಿಂತನೆಗಳಿಗೆ ಒಂದು ಮುಕ್ತತೆ ಬಂದಿತು. ಇದರಿಂದಾಗಿ ಭಾರತೀಯ ಜನಸಮುದಾಯದ ಪರಿಣಾಮಕಾರಿಯಾದ ಬೆಂಬಲವನ್ನು ಪಡೆದುಕೊಳ್ಳುವುದಕ್ಕೆ ಅವರಿಗೆ ಸಾಧ್ಯವಾಯಿತು.

ಗಾಂಧೀಜಿಯವರ ಚಿಂತನೆಗಳು ಅದೆಷ್ಟು ಮುಕ್ತವಾಗಿವೆಯೆಂದರೆ ವಿಷಯಕ್ಕೆ ಸಂಬಂಧಿಸಿದಂತೇ ಆಗಲಿ ಅಥವಾ ಭಾಷೆಗೆ ಸಂಬಂಧಿಸಿದಂತೇ ಆಗಲಿ ಅವು ಯಾವುದೇ ರೀತಿಯ ನಿಗ್ರಹವನ್ನು ಹೇರುವುದಿಲ್ಲ. ಅವರ ಚಿಂತನೆಗಳಿಗೆ ವಿಭಿನ್ನ ಬಗೆಯ ವಿಶ್ಲೇಷಣೆಗಳು ಸಾಧ್ಯ. ಮತ್ತು ಅವುಗಳನ್ನು ನೀವು ಆರೋಗ್ಯಕರ ವಿಮರ್ಶೆಗೂ ಸುಲಭವಾಗಿ ಒಡ್ಡಬಹುದಿತ್ತು. ಸಾಮಾನ್ಯವಾಗಿ ಆಲೋಚನೆಗಳನ್ನು ಮತ್ತು ವಿಚಾರಗಳ ಅಭಿವ್ಯಕ್ತಿಯನ್ನು ಹಲವು ನಿಬಂಧನೆಗಳು ಮತ್ತು ನಿಯಮಾವಳಿಗಳು ನಿಯಂತ್ರಿಸುತ್ತವೆ. ಆದರೆ ಗಾಂಧಿಯ ಚಿಂತನೆಗಳು ಇಂತಹ ಎಲ್ಲಾ ನಿಯಂತ್ರಣಗಳನ್ನೂ ನಿರಾಕರಿಸುತ್ತವೆ. ಅವರ ಚಿಂತನೆಗಳು ಹುಡುಕಾಟ ಮತ್ತು ಅನ್ವೇಷಣೆಗೆ ಮುಕ್ತವಾಗಿ ತೆರೆದುಕೊಂಡಿವೆ. ಅವು ಹೀಗೆ ಮುಕ್ತವಾಗಿವೆ ಎಂದ ಕೂಡಲೇ, ಅವೆಲ್ಲಾ ಮನಸೋ ಇಚ್ಛೆ ರೂಪುಗೊಂಡ ವಿಚಾರಗಳು ಅಂತ ಭಾವಿಸಬಾರದು. ಅವರ ಚಿಂತನೆಗಳಿಗೆ ಮುಖ್ಯವಾಗಿ ಮಾನವೀಯತೆಯನ್ನು ಆಧರಿಸಿದ ಒಂದು ನೈತಿಕ ಸಮುದಾಯವನ್ನು ಕಟ್ಟುವ ಕಾಳಜಿ ಇದೆ. ಗಾಂಧಿಯವರ ಚಿಂತನೆಗಳಿಗೆ ಒಂದು ನೈತಿಕ ಸಮುದಾಯ ಮತ್ತು ಮಾನವೀಯತೆಯನ್ನು ಸೃಷ್ಟಿಸುವ ಉದ್ದೇಶ ಮತ್ತು ಜವಾಬ್ದಾರಿ ಇದೆ.

ಭಾರತ ಇಂದು ಸಾಮಾಜಿಕವಾಗಿ ಸ್ವತಂತ್ರಗೊಳ್ಳಬೇಕಾಗಿದೆ. ಸ್ವತಂತ್ರ ಅಂದರೆ ಕೇವಲ ಭಾರತವನ್ನು ಬಯಲುಶೌಚಮುಕ್ತ ದೇಶವನ್ನಾಗಿ ಮಾಡುವುದಲ್ಲ. ಅದಕ್ಕಿಂತ ಮುಖ್ಯವಾಗಿ ಭಾರತೀಯ ಮನಸ್ಸುಗಳೊಳಗೆ ಆಳವಾಗಿ ಬೇರೂರಿರುವ ಅಸ್ಪೃಶ್ಯತೆಯಿಂದ ಭಾರತವನ್ನು ಮುಕ್ತಗೊಳಿಸಬೇಕಾಗಿದೆ. ಅದಕ್ಕಾಗಿ ಜನಸಮುದಾಯವನ್ನು ಸಂಘಟಿಸಲು ಗಾಂಧಿಯ ಚಿಂತನೆಗಳು ಇಂದು ನಮಗೆ ಪ್ರಸ್ತುತ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...

ತಮಿಳುನಾಡಿನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ 60 ನೂತನ ಶಾಸಕರು

ತಮಿಳುನಾಡು ರಾಜಕಾರಣ ಎಂದರೆ ಅದು ಐದು ದಶಕಗಳಿಂದ ಕೇವಲ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಜಿದ್ದಾಜಿದ್ದಿ. ಆದರೆ 2026ರ ಫಲಿತಾಂಶವು ಈ "ದ್ವಿಪಕ್ಷೀಯ" ಸಂಪ್ರದಾಯವನ್ನು ಮುರಿದುಹಾಕಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ...

‘ಪ್ರಜಾತಂತ್ರಕ್ಕೆ ಬೆದರಿಕೆ ಒಡ್ಡುತ್ತಿರುವ ಎಸ್ಐಆರ್’: ಬಿಜೆಪಿಯ (ಕು)ತಂತ್ರ ಫಲಿಸಿದರೇ ಭಾರತವೇ ಇರುವುದಿಲ್ಲ..!

ಪಂಚರಾಜ್ಯ ಚುನಾವಣಾ ಫಲಿತಾಂಶಗಳು 2026 ಮೇ 4ರಂದು ಹೊರಬಿದ್ದಿದ್ದು, ಭಾರತೀಯ ಜನತಾ ಪಾರ್ಟಿ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಈ ಗೆಲುವು ಕೇವಲ ಜನರ ಆದರ್ಶವಲ್ಲ, ಬದಲಿಗೆ ಚುನಾವಣಾ ವ್ಯವಸ್ಥೆಯೇ...

ಬಿಹಾರ-ಬಂಗಾಳದ ಬಳಿಕ ಕರ್ನಾಟಕದ ಸರತಿ; ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

ಭಾಗ-1 ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತರಾತುರಿಯಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಜಾರಿ ಮಾಡಿದ ಹಿಂದಿನ ದುರುದ್ದೇಶ ಬಿಹಾರದ ಬಳಿಕ ಈಗ ಪಶ್ಚಿಮ ಬಂಗಾಳದಲ್ಲಿ ಸಾಬೀತಾಗಿದೆ. ಹಿಂದಿನ ಚುನಾವಣೆಗಳಲ್ಲಿ ಕಡಿಮೆ...

ವಿಜಯ್ ಪಕ್ಷದ ಗೆಲುವಿಗೆ ಕಾರಣವಾದ ಡಿಎಂಕೆ-ಎಐಎಡಿಎಂಕೆ ಪಕ್ಷದ ವಲಸೆ ನಾಯಕರು

50 ವರ್ಷಗಳಿಂದ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಎಂಬ ಎರಡು ದ್ರಾವಿಡ ಪಕ್ಷಗಳ ಅಧಿಪತ್ಯದಲ್ಲಿದ್ದ ತಮಿಳು ಮಣ್ಣಿನಲ್ಲಿ ಈಗ ಮಹತ್ವದ ಬದಲಾವಣೆ ಗಾಳಿ ಬೀಸಿದೆ. ನಟ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ...

ಪಶ್ಚಿಮ ಬಂಗಾಳದ ಬಿಜೆಪಿ ಗೆಲುವು ಎಸ್‌ಐಆರ್‌ ಕುತಂತ್ರದ ಫಲ?

ಕಳೆದ 15 ವರ್ಷದಿಂದ ಪಶ್ಚಿಮ ಬಂಗಾಳದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಮಮತಾ ಬ್ಯಾನರ್ಜಿ ಆಡಳಿತಕ್ಕೆ 2026ರ ಚುನಾವಣಾ ಫಲಿತಾಂಶ ಬ್ರೇಕ್ ನೀಡಿದೆ.  ಪಶ್ಚಿಮ ಬಂಗಾಳದ ಒಟ್ಟು 293 ಕ್ಷೇತ್ರಗಳ ಪೈಕಿ 200ರಲ್ಲಿ ಬಿಜಿಪಿ...

ಗೋಮಾಂಸ ಸಾಗಣೆ ಆರೋಪದ ಮೇಲೆ ವಾಹನ ಮುಟ್ಟುಗೋಲು: ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಗೋಮಾಂಸ ಸಾಗಣೆ ಮಾಡುತ್ತಿದ್ದಾರೆ ಎಂದು ಕೇವಲ ಅನುಮಾನದ ಮೇಲೆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದು ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಅಂತಹ ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ವೈಜ್ಞಾನಿಕ ದೃಢೀಕರಣ ಅಗತ್ಯ...

ಎಕ್ಸಿಟ್‌ ಪೋಲ್ಸ್‌ಗಳು ‘ಹಣ-ಒತ್ತಡ’ದಿಂದ ಕೂಡಿವೆ; ಟಿಎಂಸಿ 226 ಸ್ಥಾನಗಳನ್ನು ಮೀರಲಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನದ ನಂತರ ಇತ್ತೀಚಿನ ಚುನಾವಣೋತ್ತರ ಸಮೀಕ್ಷೆಗಳ ವಿಶ್ವಾಸಾರ್ಹತೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಲವಾಗಿ ತಳ್ಳಿಹಾಕಿದ್ದಾರೆ. ಅವರ ಪಕ್ಷವಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) 294 ಸದಸ್ಯರ ವಿಧಾನಸಭೆಯಲ್ಲಿ 226...

ಗುಜರಾತ್‌| ರಾಮ ಮಂದಿರ ಕಾರ್ಯಕ್ರಮದಲ್ಲಿ ದಲಿತರಿಗೆ ಪ್ರತ್ಯೇಕ ಊಟದ ವ್ಯವಸ್ಥೆ; ಅಸ್ಪೃಶ್ಯತೆ ಆಚರಣೆ ಆರೋಪ

ಗುಜರಾತ್‌ನ ಜುನಾಗಢ್ ಜಿಲ್ಲೆಯಲ್ಲಿ ಜಾತಿ ತಾರತಮ್ಯದ ಆರೋಪ ಹೊರಿಸಲಾಗಿದ್ದು, ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ದೇವಾಲಯದ ಆಯೋಜಕರು ಅಸ್ಪೃಶ್ಯತೆ ಆಚರಿಸುತ್ತಿದ್ದಾರೆ ಎಂದು ದಲಿತ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ. ಭುಟ್ಡಿ ಗ್ರಾಮದ ನಿವಾಸಿ 25 ವರ್ಷದ ಅಜಯ್...

ಕೋಗಿಲು ಬಡಾವಣೆ ಮನೆಗಳ ನೆಲಸಮ: ಹದಿನೈದು ದಿನಗಳೊಳಗೆ ಪುನರ್ವಸತಿ ಕಲ್ಪಿಸದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ

ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಪ್ರದೇಶದ ಕೋಗಿಲು ಲೇಔಟ್‌ನ ಫಕೀರ್ ಕಾಲೋನಿ ಮತ್ತು ಮಹಾನಾಯಕ ಅಂಬೇಡ್ಕರ್ ನಗರ (ವಾಸಿಂ ಲೇಔಟ್‌) ಪ್ರದೇಶದ ಬಡ ನಿವಾಸಿಗಳ ಮನೆಗಳನ್ನು 2025 ಡಿಸೆಂಬರ್ 20ರಂದು ಬೆಳಿಗ್ಗೆ ಸುಮಾರು...