Homeಚಳವಳಿಜನಸಮುದಾಯವನ್ನು ಸಂಘಟಿಸಲು ಗಾಂಧಿಯ ಚಿಂತನೆಗಳು ಇಂದು ನಮಗೆ ಪ್ರಸ್ತುತ...

ಜನಸಮುದಾಯವನ್ನು ಸಂಘಟಿಸಲು ಗಾಂಧಿಯ ಚಿಂತನೆಗಳು ಇಂದು ನಮಗೆ ಪ್ರಸ್ತುತ…

- Advertisement -
- Advertisement -

ಮೂಲ : ಗೋಪಾಲ ಗುರು

ಅನುವಾದ: ಟಿ.ಎಸ್ ವೇಣುಗೋಪಾಲ್, ಶೈಲಜ ಮೈಸೂರು.

ಗಾಂಧಿಯ ಬಗ್ಗೆ ಬರೆದಷ್ಟು ಬಹುಶಃ ಮತ್ಯಾರ ಬಗ್ಗೆಯೂ ಬರೆದಿಲ್ಲ. ಅಷ್ಟೇ ಅಲ್ಲ ಗಾಂಧಿಯನ್ನು ದ್ವೇಷಿಸುವಷ್ಟು ಇನ್ಯಾರನ್ನೂ ದ್ವೇಷಿಸುವುದಿಲ್ಲ ಅನ್ನುವುದೂ ಕೂಡ ಅಷ್ಟೇ ನಿಜ. ಕೆಲವರ ದೃಷ್ಟಿಯಲ್ಲಿ ಗಾಂಧಿ ಮಹಾನ್ ಜನನಾಯಕ. ಉಳಿದವರ ದೃಷ್ಟಿಯಲ್ಲಿ ಆತ ಏನೂ ಅಲ್ಲ. ಬ್ರಿಟಿಷರ ವಿರುದ್ಧದ ರಾಷ್ಟ್ರೀಯ ಹೋರಾಟ ಗಟ್ಟಿಗೊಳ್ಳುತ್ತಿದ್ದ ಸಂದರ್ಭದಲ್ಲಿ ಗಾಂಧಿ ತೆಗೆದುಕೊಂಡ ನಿಲುವುಗಳು ಮತ್ತು ಆಗಿನ ಅವರ ಚಿಂತನೆಗಳನ್ನು ಇವತ್ತಿಗೂ ಕೆಲವರು ಕಟುವಾಗಿ ಟೀಕಿಸುತ್ತಾರೆ.

ಗಾಂಧಿಯನ್ನು ದ್ವೇಷಿಸುವವರಿಗೆ, ಹಾಗೆ ದ್ವೇಷಿಸುವುದಕ್ಕೆ ಕಾರಣವೇ ಬೇಕಿಲ್ಲ. ಅದು ಹಾಗೇನೆ. ಕ್ರೂರ ದ್ವೇಷಕ್ಕೆ ಯಾವ ಕಾರಣವೂ ಬೇಕಿಲ್ಲ. ದ್ವೇಷಿಸಲು ಕೊಡುವ ಕಾರಣಗಳಿಗೆ ಒಂದು ಸಮರ್ಥನೆಯೂ ಇರುವುದಿಲ್ಲ. ದ್ವೇಷ ಮತ್ತು ಅಸೂಯೆ ಎರಡೂ ವಿಚ್ಛಿಧ್ರಕಾರಿ ಅಂಶಗಳು. ಮತ್ತು ಅವೆರಡಕ್ಕೂ ಒಂದು ಸೂಕ್ಷ್ಮವಾದ ತಾರ್ಕಿಕ ಸಮರ್ಥನೆ ಇರುವುದಿಲ್ಲ. ಚಾರಿತ್ರಿಕವಾಗಿ ಸೇರಿಕೊಂಡು ಬಂದಿರುವ ಪೂರ್ವಗ್ರಹಗಳೇ ಅವಕ್ಕೆ ಬೇಕಾದಷ್ಟು. ಬಹುಶಃ ಅವರು ಗಾಂಧಿಯೊಂದಿಗಾಗಲಿ, ಅಥವಾ ಗಾಂಧಿಯನ್ನು ಓದಿಕೊಂಡ ವಿದ್ವಾಂಸರು, ವ್ಯಾಖ್ಯಾನಕಾರರು ಅಥವಾ ವಿಶ್ಲೇಷಿಸಿದವರ ಜೊತೆಗಾಗಲೀ ಎಂದೂ ಗಂಭೀರವಾದ ಚರ್ಚೆಯನ್ನೂ ಮಾಡಿಲ್ಲವೆನಿಸುತ್ತದೆ. ಅವರಿಗೆ ಬೇಕಾಗಿರುವುದು ಗಾಂಧಿಯನ್ನು ಸಮರ್ಥಿಸಿಕೊಂಡು ಕೆಲವರು ನೀಡುವ ತೆಳುವಾದ ತಕ್ಷಣದ ಪ್ರತಿಕ್ರಿಯೆ. ಅದರಲ್ಲೇ ಅವರಿಗೆ ನೆಮ್ಮದಿ.

ಗಾಂಧಿಯವರ ಚಿಂತನೆಗಳನ್ನು ಕುರಿತಂತೆ ಒಂದು ಅಧಿಕೃತವಾದ ಹಾಗೂ ನಿಖರವಾದ ವಿವರಣೆಯನ್ನು ನೀಡುವುದಕ್ಕೆ ವಿದ್ವಾಂಸರಿಗೆ, ಭಾಷ್ಯಕಾರರಿಗೆ, ವಿಶ್ಲೇಷಕರಿಗೆ ಗಾಂಧಿ ಬಹುಶಃ ಅವಕಾಶವನ್ನೇ ಕೊಟ್ಟಂತಿಲ್ಲ. ಅಂದರೆ ಗಾಂಧಿಯವರ ಚಿಂತನೆಗಳನ್ನು ಕುರಿತಂತೆ ಒಂದು ಸಂಪೂರ್ಣವಾದ ಹಾಗೂ ಅಂತಿಮ ಎನ್ನಬಹುದಾದ ವಿವರಣೆಯನ್ನು ಕೊಡುವುದಕ್ಕೆ ಅವರಿಗೆ ಕಷ್ಟವಾಗಿದೆ. ಈ ಮಾತು ಗಾಂಧಿಯವರ ವಿದ್ವತ್ತಿನ ವಿಷಯದಲ್ಲಷ್ಟೇ ಅಲ್ಲ, ಅವರು ಅನುಸರಿಸುವ ವಿಧಾನದ ಮಟ್ಟಿಗೂ ಸತ್ಯ.

ಗಾಂಧಿಯವರ ಬರಹಗಳ ಒಂದು ಲಕ್ಷಣವೆಂದರೆ, ಅವುಗಳ ತೆರೆದಿರುವಿಕೆ (ಮುಕ್ತತೆ). ಅಂದರೆ ಯಾವುದೇ ವಿಚಾರದಲ್ಲೂ ಅವರು ಇದು ಇಲ್ಲಿಗೆ ಮುಗಿಯಿತು ಎಂದು ಒಂದು ತೆರೆ ಎಳೆದು ಬಿಡುವುದಿಲ್ಲ. ಅದು ಮುಕ್ತವಾಗಿಯೇ ಇರುತ್ತದೆೆ. ಇದರಿಂದಾಗಿಯೇ ವಿದ್ವಾಂಸರಿಗೆ ಗಾಂಧಿಯನ್ನು ವಿಭಿನ್ನ “ಅವತಾರ”ಗಳಲ್ಲಿ ಪ್ರದರ್ಶಿಸುವ ಸಾಹಸ ಮಾಡುವುದಕ್ಕೆ ಸಾಧ್ಯವಾಗಿದೆ. ಹಾಗಾಗಿಯೇ ಗಾಂಧಿ ವಸಾಹತುಪೂರ್ವ ರಾಷ್ಟ್ರೀಯವಾದಿಯಾಗಿ, ಅಂತರರಾಷ್ಟ್ರೀಯವಾದಿಯಾಗಿ, ಆಧುನಿಕತೆಗೆ ಪರ್ಯಾಯವಾಗಿ, ಆಧುನಿಕೋತ್ತರವಾದಿಯಾಗಿ, ಭಾವನಾವಾದಿಯಾಗಿ, ವ್ಯಾವಹಾರಿಕನಾಗಿ, ಮಹಿಳಾವಾದಿಯಾಗಿ, ತಳಸಮುದಾಯದ ಚಿಂತಕನಾಗಿ ಮತ್ತು ಕೊನೆಗೆ ಉದಾರವಾದಿಯಾಗಿ ಹಾಗೆಯೇ ಕೂಡೊಡೆತನದ ಪ್ರತಿಪಾದಕನಾಗಿ ಹೀಗೆ ವಿಭಿನ್ನ ರೂಪಗಳಲ್ಲಿ ನಮಗೆ ಕಾಣಿಸಿಕೊಳ್ಳುತ್ತಾನೆ. ಗಾಂಧಿಯ ಚಿಂತನೆಯಲ್ಲಿರುವ ಈ ಮುಕ್ತತೆ ಅಥವಾ ಚಿಂತನೆಯ ಮುಕ್ತತೆಯೇ ಗಾಂಧಿಯನ್ನು ಟೀಕಿಸುವವರನ್ನು ನೈತಿಕ ಶಿಷ್ಟತೆ ಜಾಗೂ ಸೌಜನ್ಯವೇ ಇಲ್ಲದ ಗಲೀಜು ಜನರನ್ನಾಗಿ ಅಥವಾ ರಾಜಕೀಯವಾಗಿ ಆಷಾಡಭೂತಿಗಳನ್ನಾಗಿ, ಬೌದ್ಧಿಕವಾಗಿ ನಿಸ್ಸಾಹಯಕರಾಗಿ, ಹತಾಶರನ್ನಾಗಿ ಅಥವಾ ಅಧೀರರನ್ನಾಗಿ ಮಾಡಿದೆ.

ಗಾಂಧಿಯನ್ನು ಎದುರಿಸಲು ಅವರಲ್ಲಿ ಯಾವುದೇ ವಾದವೂ ಇಲ್ಲ ಅಥವಾ ಅವರಿಗೆ ಆಸಕ್ತಿಯೂ ಇಲ್ಲ. ಹಾಗಾಗಿಯೇ ಅವರು ಅಸಹ್ಯ ಹುಟ್ಟಿಸುತ್ತಾರೆ. ಗಾಂಧಿಯನ್ನು ಬೌದ್ಧಿಕವಾಗಿ ಹೇಗೆ ಎದುರಿಸಬೇಕೆಂದು ತಿಳಿಯದೇ ಅವರಲ್ಲಿ ಕೆಲವರು ಹತಾಶರಾಗುತ್ತಾರೆ. ಗಾಂಧಿವಾದದ ಇಡೀ ಪರಂಪರೆಯನ್ನೇ ನಿರ್ನಾಮ ಮಾಡಬೇಕು ಎಂದುಕೊಂಡವರಿಗೆ ತಮ್ಮ ಉದ್ದೇಶವನ್ನು ಹೇಗೆ ಸಾಧಿಸಿಕೊಳ್ಳಬೇಕು ಎನ್ನುವುದು ತಿಳಿದಿಲ್ಲ. ಹಾಗಾಗಿ ಕನಿಷ್ಠ ಮೇಲ್ನೋಟಕ್ಕಾದರೂ ಅವರು ಗಾಂಧಿಯೊಂದಿಗೆ ಗುರುತಿಸಿಕೊಳ್ಳಬೇಕಾಗಿದೆ. ಅವರ ಒಳಗಿನ ನಿಜವಾದ ಉದ್ದೇಶ ಹಾಗೂ ಅವರು ಹೊರಗೆ ತೋರಿಸಿಕೊಳ್ಳುತ್ತಿರುವ ರೀತಿಗೂ ನಡುವೆ ಘರ್ಷಣೆ ನಡೆಯುತ್ತಿರುತ್ತದೆ. ಆ ಘರ್ಷಣೆಯಲ್ಲಿ ಅವರ ರಾಜಕೀಯ ಅಷಾಡಭೂತಿತನ ಅಥವಾ ಅಸಂತುಷ್ಟ ಪ್ರಜ್ಞೆ ಕಾಣಿಸಿಕೊಳ್ಳುತ್ತದೆ.

ಗಾಂಧಿಯ ಬರಹಗಳು ಸಂವಾದದ ರೂಪದಲ್ಲಿವೆ. ಈ ವಿಧಾನ ಸಾಂಪ್ರದಾಯಿಕ ವಿಚಾರಗಳನ್ನು ಚರ್ಚಿಸುವುದಕ್ಕೆ ಒತ್ತಾಯಿಸುತ್ತದೆ. ಈ ವಿಧಾನಕ್ಕೆ ಬೇಕಾದ ಭೌದ್ಧಿಕ ಆಕರಗಳು ಭಾರತೀಯ ಜ್ಞಾನಪರಂಪರೆಯಲ್ಲಿ ಇವೆ. ಗಾಂಧಿ ಅವನ್ನು ಸೃಜನಶೀಲವಾಗಿ ಬಳಸಿಕೊಂಡಿದ್ದಾರೆ. ಅವರ ಚಿಂತನೆಗಳು ಬಹುಪಾಲು ಒಳಗಿನಿಂದಲೇ ಕೆಲಸಮಾಡುತ್ತಿರುತ್ತವೆ. ಗಾಂಧಿಯ ವಿಚಾರಗಳು ಎಲ್ಲಾ ವಿದ್ವಾಂಸರಲ್ಲೂ ಒಂದೇ ರೀತಿಯ ಚಿಂತನೆಗಳನ್ನು ಮೂಡಿಸುವುದಿಲ್ಲ. ಪಾಶ್ಚಾತ್ಯ ಗ್ರಹಿಕಾಪದ್ಧತಿಗಳಿಗೆ ಭಾರತೀಯರು ದಾಸರಾಗಬಾರದೆಂದು ಗಾಂಧಿ ವಾದಿಸುತ್ತಾರೆ. ಇದನ್ನು ಹಲವು ವಿದ್ವಾಂಸರುಗಳು ಗುರುತಿಸಿದ್ದಾರೆ.

ವಸಾಹತುಶಾಹಿ ಶಕ್ತಿಯ ವಿರುದ್ಧ ಅಥವಾ ಸ್ಥಳೀಯವಾಗಿ ಸಮಾಜವನ್ನು ನಿಯಂತ್ರಿಸುತ್ತಿರುವ ಬ್ರಾಹ್ಮಣಶಾಹಿಯ ವಿರುದ್ಧ ಜನರನ್ನು ಸಂಘಟಿಸುವುದಕ್ಕೆ ಕೆಲವು ವಿಧಾನಗಳು ಸೂಕ್ತವಾಗುವುದಿಲ್ಲ ಎನ್ನುವ ಕಾರಣಕ್ಕೆ ಗಾಂಧಿ ಅವುಗಳನ್ನು ಕೈಬಿಟ್ಟಿದ್ದಾರೆ. ಇವುಗಳನ್ನು ಗಮನಿಸಿದರೆ, ಜ್ಞಾನವನ್ನು ಗ್ರಹಿಸುವುದರಲ್ಲಿ ಗಾಂಧಿಗಿದ್ದ ಅರಿವು ಅರ್ಥವಾಗುತ್ತದೆ. ಇದರಿಂದಾಗಿಯೇ ಅವರು ಬಳಸಿದ ಸಹಿಷ್ಣುತೆ, ಅಹಿಂಸೆ, ಅಸಹಕಾರದ ಭಾಷಾಶೈಲಿ ವಸಾಹತುಶಾಹಿ ವಿರುದ್ಧದ ಹೋರಾಟದಲ್ಲಿ ತುಂಬಾ ಪರಿಣಾಮಕಾರಿಯಾಗಿದ್ದವು.

ಹಾಗೆಯೇ ಸೇವೆ, ಸಹಾನುಭೂತಿ ಮತ್ತು ಕೂಡೊಡೆತನ ಮುಂತಾದವುಗಳ ವಿವರಣೆ ಮತ್ತು ವ್ಯಾಖ್ಯಾನ ಅಂತಹ ಕ್ಲಿಷ್ಟವಾಗಿಲ್ಲ. ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುತ್ತವೆ. ಜನಸಾಮಾನ್ಯರು ಇವುಗಳಿಗಾಗಿ ತಮ್ಮ ಎದುರಾಳಿಗಳ ವಿಷಯದಲ್ಲಿ ತೀರಾ ಕಠಿಣವಾದ ನಿಲುವನ್ನು ತೆಗೆದುಕೊಳ್ಳಬೇಕಾಗುವ ಅವಶ್ಯಕತೆಯೂ ಇರಲಿಲ್ಲ. ಹಾಗಾಗಿ ಇವುಗಳನ್ನು ಒಪ್ಪಿಕೊಳ್ಳುವುದಕ್ಕೆ ಯಾವ ಕಷ್ಟವೂ ಅಗಲಿಲ್ಲ. ಇಂತಹ ಭಾಷೆಯ ಒಳಗೇ ಇರುವ ಭಾವನಾತ್ಮಕ ಅಂಶವೂ ವೈಚಾರಿಕ ಪ್ರಖರತೆಯನ್ನು ಕಡಿಮೆ ಮಾಡುತ್ತದೆ. ಈ ಭಾವನಾತ್ಮಕ ಅಂಶ ಅವರ ಗ್ರಹಿಕಾ ವಿಧಾನಗಳ ಆಧಾರವಾಗಿ ಕೆಲಸಮಾಡುತ್ತದೆ. “ಹರಿಜನ” ಎನ್ನುವುದು ಕೂಡ ಬೌದ್ಧಿಕ ಚಿಂತನೆಯನ್ನು ಆಧರಿಸದ ಇಂತಹುದೇ ಒಂದು ಸುಲಭಗ್ರಾಹ್ಯ ಪದವಾಗಿತ್ತು. ಈ ಪದದ ಉದ್ದೇಶ ಕೆಳಜಾತಿಗಳಿಗೆ ಸಂಬಂಧಿಸಿದಂತೆ ಸವರ್ಣೀಯರ ಸಾಮಾಜಿಕ ನಿಲುವನ್ನು ತಟಸ್ಥಗೊಳಿಸಿ, ಅಂತಿಮವಾಗಿ ಅವರಿಬ್ಬರ ಸಾಮಾಜಿಕ ಅಂತಸ್ತನ್ನು ಒಂದೇ ಮಾಡುವುದಾಗಿತ್ತು. ಗಾಂಧೀಜಿಯವರ ಅನುಸರಿಸಿದ ಈ ವೈದಾನಿಕ ನಡೆಯಿಂದಾಗಿ, ವಸಾಹಾತುವಿರೋಧಿ ಹೋರಾಟದಲ್ಲಿ ಜನರನ್ನು ಸಂಘಟಿಸುವಲ್ಲಿ ಅವರನ್ನು ತೀರಾ ಯಶಸ್ವಿ ನಾಯಕರನ್ನಾಗಿ ಮಾಡಿತು. ಗಾಂಧೀಜಿಯವರ ಈ ಭಾಷೆ ಎದುರಾಳಿಗಳನ್ನು ರೊಚ್ಚಿಗೆಬ್ಬಿಸುತ್ತಿರಲಿಲ್ಲ. ಹಾಗಾಗಿ ಸಾಮಾನ್ಯ ಜನರಲ್ಲಿ ಇದು ಸುರಕ್ಷತೆ ಮತ್ತು ನೆಮ್ಮದಿಯ ಭಾವವನ್ನು ಮೂಡಿಸುತ್ತಿತ್ತು. ವಿವರಣೆ ಮತ್ತು ವ್ಯಾಖ್ಯಾನವನ್ನು ನೀಡುವುದಕ್ಕೆ ಗಾಂಧಿಯು ಬೌದ್ಧಿಕವಲ್ಲದ ಚಿಂತನಾಕ್ರಮವನ್ನು ಬಳಸಿದ್ದರಿಂದ ಅವರ ಚಿಂತನೆಗಳಿಗೆ ಒಂದು ಮುಕ್ತತೆ ಬಂದಿತು. ಇದರಿಂದಾಗಿ ಭಾರತೀಯ ಜನಸಮುದಾಯದ ಪರಿಣಾಮಕಾರಿಯಾದ ಬೆಂಬಲವನ್ನು ಪಡೆದುಕೊಳ್ಳುವುದಕ್ಕೆ ಅವರಿಗೆ ಸಾಧ್ಯವಾಯಿತು.

ಗಾಂಧೀಜಿಯವರ ಚಿಂತನೆಗಳು ಅದೆಷ್ಟು ಮುಕ್ತವಾಗಿವೆಯೆಂದರೆ ವಿಷಯಕ್ಕೆ ಸಂಬಂಧಿಸಿದಂತೇ ಆಗಲಿ ಅಥವಾ ಭಾಷೆಗೆ ಸಂಬಂಧಿಸಿದಂತೇ ಆಗಲಿ ಅವು ಯಾವುದೇ ರೀತಿಯ ನಿಗ್ರಹವನ್ನು ಹೇರುವುದಿಲ್ಲ. ಅವರ ಚಿಂತನೆಗಳಿಗೆ ವಿಭಿನ್ನ ಬಗೆಯ ವಿಶ್ಲೇಷಣೆಗಳು ಸಾಧ್ಯ. ಮತ್ತು ಅವುಗಳನ್ನು ನೀವು ಆರೋಗ್ಯಕರ ವಿಮರ್ಶೆಗೂ ಸುಲಭವಾಗಿ ಒಡ್ಡಬಹುದಿತ್ತು. ಸಾಮಾನ್ಯವಾಗಿ ಆಲೋಚನೆಗಳನ್ನು ಮತ್ತು ವಿಚಾರಗಳ ಅಭಿವ್ಯಕ್ತಿಯನ್ನು ಹಲವು ನಿಬಂಧನೆಗಳು ಮತ್ತು ನಿಯಮಾವಳಿಗಳು ನಿಯಂತ್ರಿಸುತ್ತವೆ. ಆದರೆ ಗಾಂಧಿಯ ಚಿಂತನೆಗಳು ಇಂತಹ ಎಲ್ಲಾ ನಿಯಂತ್ರಣಗಳನ್ನೂ ನಿರಾಕರಿಸುತ್ತವೆ. ಅವರ ಚಿಂತನೆಗಳು ಹುಡುಕಾಟ ಮತ್ತು ಅನ್ವೇಷಣೆಗೆ ಮುಕ್ತವಾಗಿ ತೆರೆದುಕೊಂಡಿವೆ. ಅವು ಹೀಗೆ ಮುಕ್ತವಾಗಿವೆ ಎಂದ ಕೂಡಲೇ, ಅವೆಲ್ಲಾ ಮನಸೋ ಇಚ್ಛೆ ರೂಪುಗೊಂಡ ವಿಚಾರಗಳು ಅಂತ ಭಾವಿಸಬಾರದು. ಅವರ ಚಿಂತನೆಗಳಿಗೆ ಮುಖ್ಯವಾಗಿ ಮಾನವೀಯತೆಯನ್ನು ಆಧರಿಸಿದ ಒಂದು ನೈತಿಕ ಸಮುದಾಯವನ್ನು ಕಟ್ಟುವ ಕಾಳಜಿ ಇದೆ. ಗಾಂಧಿಯವರ ಚಿಂತನೆಗಳಿಗೆ ಒಂದು ನೈತಿಕ ಸಮುದಾಯ ಮತ್ತು ಮಾನವೀಯತೆಯನ್ನು ಸೃಷ್ಟಿಸುವ ಉದ್ದೇಶ ಮತ್ತು ಜವಾಬ್ದಾರಿ ಇದೆ.

ಭಾರತ ಇಂದು ಸಾಮಾಜಿಕವಾಗಿ ಸ್ವತಂತ್ರಗೊಳ್ಳಬೇಕಾಗಿದೆ. ಸ್ವತಂತ್ರ ಅಂದರೆ ಕೇವಲ ಭಾರತವನ್ನು ಬಯಲುಶೌಚಮುಕ್ತ ದೇಶವನ್ನಾಗಿ ಮಾಡುವುದಲ್ಲ. ಅದಕ್ಕಿಂತ ಮುಖ್ಯವಾಗಿ ಭಾರತೀಯ ಮನಸ್ಸುಗಳೊಳಗೆ ಆಳವಾಗಿ ಬೇರೂರಿರುವ ಅಸ್ಪೃಶ್ಯತೆಯಿಂದ ಭಾರತವನ್ನು ಮುಕ್ತಗೊಳಿಸಬೇಕಾಗಿದೆ. ಅದಕ್ಕಾಗಿ ಜನಸಮುದಾಯವನ್ನು ಸಂಘಟಿಸಲು ಗಾಂಧಿಯ ಚಿಂತನೆಗಳು ಇಂದು ನಮಗೆ ಪ್ರಸ್ತುತ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...