HomeUncategorizedನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದ ಸಿಜೆಐ: ಇದೆಂತಾ ಮಾತು ನ್ಯಾಯಮೂರ್ತಿಗಳೇ!

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದ ಸಿಜೆಐ: ಇದೆಂತಾ ಮಾತು ನ್ಯಾಯಮೂರ್ತಿಗಳೇ!

- Advertisement -
- Advertisement -

‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಸಮಾಜವನ್ನು ಕಾಡುತ್ತಾರೆ. ಉದ್ಯೋಗ, ಸ್ಥಾನಮಾನ ಸಿಗದೆ ಇದ್ದಾಗ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ’ ಇದು ಯಾವುದೋ ರಾಜಕೀಯ ರ‍್ಯಾಲಿಯ ಭಾಷಣವಲ್ಲ ಅಥವಾ ಟಿವಿ ಚಾನೆಲ್‌ಗಳ ಜಗಳವಲ್ಲ, ದೇಶದ ಪ್ರಜೆಗಳ ಘನತೆಯನ್ನು ಎತ್ತಿಹಿಡಿಯಬೇಕಾದ ಅತ್ಯುನ್ನತ ಸಾಂವಿಧಾನಿಕ ಪೀಠದ ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಅವರ ನೇತೃತ್ವದ ಸುಪ್ರೀಂ ಕೋರ್ಟ್ ಪೀಠದಲ್ಲಿ ಕೇಳಿಬಂದ ನುಡಿ ಮುತ್ತುಗಳು.

ಸಿಜೆಐ ಹೇಳಿದ ಮಾತುಗಳು

ಇತ್ತೀಚೆಗೆ (ಮೇ 15, 2026) ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಅವರ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಪ್ರಕರಣವೊಂದರ ವಿಚಾರಣೆ ವೇಳೆ ಆಡಿದ ಈ ಮೇಲಿನ ಮಾತುಗಳು ದೇಶಾದ್ಯಂತ ತೀವ್ರ ಚರ್ಚೆಗೆ ಮತ್ತು ಆಕ್ರೋಶಕ್ಕೆ ಕಾರಣವಾಗಿವೆ. ಉದ್ಯೋಗವಿಲ್ಲದ ಭಾರತದ ಯುವಜನರು ‘ರೊಟ್ಟಿ ಇಲ್ಲದಿದ್ದರೂ ಪರವಾಗಿಲ್ಲ, ಜಾಲತಾಣದಲ್ಲಿದ್ದಾರೆ’ ಎಂಬಂತೆ, ಕೆಲಸ ಸಿಗದಿದ್ದಾಗ ಸಾಮಾಜಿಕ ಮಾಧ್ಯಮ, ಪತ್ರಿಕೋದ್ಯಮ ಮತ್ತು ಆರ್‌ಟಿಐ (RTI) ಕಾರ್ಯಕರ್ತರಾಗಿ ಬದಲಾಗಿ ‘ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತಾರೆ’ ಎಂದು ಅವರು ಅಭಿಪ್ರಾಯಪಟ್ಟಿದ್ದರು. ಅಷ್ಟೇ ಅಲ್ಲದೆ, ಅಂತಹವರನ್ನು ‘ಸಮಾಜದ ಪರಾವಲಂಬಿಗಳು’ (Parasites) ಮತ್ತು ‘ಜಿರಳೆಗಳು’ (Cockroaches) ಎಂದು ಹೋಲಿಸಿದ್ದರು ಎಂಬ ವರದಿಗಳು ಭಾರಿ ಬಿರುಗಾಳಿ ಎಬ್ಬಿಸಿವೆ.

ಸಿಜೆಐ ಮಾತಿಗೆ ಆಕ್ಷೇಪ

ನಿರುದ್ಯೋಗಿ ಯುವಕರನ್ನು ಪರಾವಲಂಬಿಗಳು ಹಾಗೂ ಜಿರಳೆಗಳು ಎನ್ನುವ ಭಾರತದ ಮುಖ್ಯನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಹೇಳಿಕೆಯನ್ನು ಎನ್‌ಸಿಪಿ (ಎಸ್‌ಪಿ) ನಾಯಕ ರೋಹಿತ್ ಪವಾರ್ ಟೀಕಿಸಿದ್ದಾರೆ. ಅವರ ಈ ಹೇಳಿಕೆ ಸ್ವೀಕಾರಾರ್ಹವಲ್ಲ, ಇದು ಟೀಕೆ ಹಾಗೂ ಪ್ರಶ್ನೆ ಮಾಡುವುದರ ವಿರುದ್ಧ ಇರುವ ಅಸಹಿಷ್ಣುತೆಯ ಪ್ರತಿಬಿಂಬ ಎಂದು ಹೇಳಿದ್ದಾರೆ.

‘ನನಗೆ ಭಾರತದ ನ್ಯಾಯಾಂಗದ ಬಗ್ಗೆ ಅತ್ಯಂತ ಗೌರವವಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವವರು ನೀಡಿರುವ ಈ ಹೇಳಿಕೆಯು ಅವಕಾಶಗಳ ಕೊರತೆ ಹಾಗೂ ನಿರುದ್ಯೋಗ ಸಮಸ್ಯೆ ಅನುಭವಿಸುತ್ತಿರುವ ಇಡೀ ಪೀಳಿಗೆಯನ್ನು ಅಣಕಿಸುವಂತಿದೆ’ ಎಂದು ಹೇಳಿದ್ದಾರೆ.

ಸಿಜೆಐ ಸ್ಪಷ್ಟೀಕರಣ:

ಈ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಮರುದಿನವೇ (ಮೇ 16, 2026) ಮುಖ್ಯ ನ್ಯಾಯಮೂರ್ತಿಗಳು ತಮ್ಮ ಹೇಳಿಕೆಯ ಕುರಿತು ಸುದೀರ್ಘ ಸ್ಪಷ್ಟೀಕರಣ ನೀಡಿದ್ದಾರೆ. “ಮಾಧ್ಯಮಗಳ ಒಂದು ವರ್ಗ ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿದೆ. ದೇಶದ ಯುವಜನರು ‘ವಿಕಸಿತ ಭಾರತದ ಪಿಲ್ಲರ್‌ಗಳು’ (ಬೆನ್ನೆಲುಬು)” ಎಂದು ಅವರು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್‌   ಕೃಪೆ: ಪಿಟಿಐ
ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್‌      ಕೃಪೆ: ಪಿಟಿಐ

“ನಿನ್ನೆ ನಡೆದ ಸಣ್ಣ ಪ್ರಕರಣವೊಂದರ ವಿಚಾರಣೆ ವೇಳೆ ನಾನು ಆಡಿದ ಮಾತುಗಳನ್ನು ಮಾಧ್ಯಮಗಳು ತಪ್ಪಾಗಿ ಬಿಂಬಿಸಿರುವುದನ್ನು ನೋಡಿ ನನಗೆ ತೀವ್ರ ಬೇಸರವಾಗಿದೆ. ನಕಲಿ ಮತ್ತು ಬೋಗಸ್ ಪದವಿಗಳನ್ನು ಇಟ್ಟುಕೊಂಡು ವಕೀಲಿಕೆ ಅಥವಾ ಪತ್ರಿಕೋದ್ಯಮದಂತಹ ಉದಾತ್ತ ವೃತ್ತಿಗಳಿಗೆ ನುಸುಳಿ, ವ್ಯವಸ್ಥೆಯನ್ನು ಹಾಳುಮಾಡುವವರನ್ನು ಮಾತ್ರ ನಾನು ‘ಪರಾವಲಂಬಿಗಳು’ ಎಂದು ಕರೆದಿದ್ದೆ. ದೇಶದ ಯುವಶಕ್ತಿಯನ್ನು ಟೀಕಿಸುವ ಯಾವುದೇ ಉದ್ದೇಶ ನನಗಿರಲಿಲ್ಲ. ಭಾರತದ ಯುವಜನರ ಬಗ್ಗೆ ನನಗೆ ಅಪಾರ ಗೌರವವಿದೆ,” ಎಂದು ಸಿಜೆಐ ಸೂರ್ಯ ಕಾಂತ್ ಸ್ಪಷ್ಟಪಡಿಸಿದ್ದಾರೆ.

ಇತಿಹಾಸದ ಕರಾಳ ಪುಟಗಳು ಮತ್ತು ಪದಗಳ ಬಳಕೆ:

ಮುಖ್ಯ ನ್ಯಾಯಮೂರ್ತಿಗಳು ಸ್ಪಷ್ಟನೆ ನೀಡಿದ್ದರೂ, ಸಮಾಜದಲ್ಲಿ ಬಳಕೆಯಾಗುವ ‘ಜಿರಳೆ’, ‘ಪರಾವಲಂಬಿ’, ‘ಗೆದ್ದಲು’ ಅಥವಾ ‘ಹುಳ-ಹೇನು’ ಎಂಬ ಪದಗಳಿಗೆ ಜಾಗತಿಕ ಇತಿಹಾಸದಲ್ಲಿ ಅತ್ಯಂತ ಕರಾಳವಾದ ಹಿನ್ನೆಲೆಯಿದೆ. ಯಾವುದೇ ಒಂದು ಸಮೂಹವನ್ನು ಮನುಷ್ಯರೆಂದು ಪರಿಗಣಿಸದೆ, ಕೀಟಗಳಿಗೆ ಹೋಲಿಸುವುದನ್ನು ‘ಡಿಹ್ಯೂಮನೈಸೇಶನ್’ (ಅಮಾನವೀಯಗೊಳಿಸುವಿಕೆ) ಎನ್ನಲಾಗುತ್ತದೆ.

  • ರುವಾಂಡಾ ನರಮೇಧ (1994): ಕೇವಲ 100 ದಿನಗಳಲ್ಲಿ 8 ಲಕ್ಷಕ್ಕೂ ಹೆಚ್ಚು ಟುಟ್ಸಿ ಜನಾಂಗದವರನ್ನು ಕೊಲ್ಲಲಾಯಿತು. ಇದಕ್ಕೂ ಮುನ್ನ ಅಲ್ಲಿನ ರೇಡಿಯೋ ಕೇಂದ್ರಗಳು ಆ ಜನಾಂಗದವರನ್ನು ‘ಇನ್ಯೆಂಜಿ’ (ಜಿರಳೆಗಳು) ಎಂದು ಕರೆಯುತ್ತಿದ್ದವು. ಶಾಲಾ ಶಿಕ್ಷಕರು ಮಕ್ಕಳನ್ನು ಜಿರಳೆಗಳೆಂದು ಹೀಯಾಳಿಸುತ್ತಿದ್ದರು. ಜನರನ್ನು ಮನುಷ್ಯರೆಂದು ನೋಡುವುದನ್ನು ನಿಲ್ಲಿಸಿದ ತಕ್ಷಣ, ಅವರ ಮೇಲಿನ ದೌರ್ಜನ್ಯ ಸಲೀಸಾಯಿತು.
  • ನಾಜಿ ಜರ್ಮನಿ: ಹಿಟ್ಲರ್ ಆಡಳಿತದಲ್ಲಿ ಯಹೂದಿಗಳನ್ನು ‘ಪರಾವಲಂಬಿಗಳು’ ಮತ್ತು ‘ಇಲಿಗಳು’ ಎಂದು ಕರೆಯಲಾಗುತ್ತಿತ್ತು. ಇತಿಹಾಸಕಾರರ ಪ್ರಕಾರ, ‘ಪರಾವಲಂಬಿ’ ಎನ್ನುವ ಪದ ಕೇವಲ ಬೈಗುಳವಲ್ಲ; “ದೇಹಕ್ಕೆ ರೋಗ ತರುವ ಕ್ರಿಮಿಯನ್ನು ನಾಶಪಡಿಸಲೇಬೇಕು” ಎಂಬ ಕ್ರೂರ ಮನಸ್ಥಿತಿಯನ್ನು ಅದು ಸಮಾಜದಲ್ಲಿ ಬಿತ್ತುತ್ತದೆ.

ಇದೇ ರೀತಿಯ ಪದಬಳಕೆಗಳನ್ನು ಅಂತರರಾಷ್ಟ್ರೀಯ ಕಾನೂನುಗಳು (ಉದಾಹರಣೆಗೆ 1948ರ ಜಿನೆವಾ ಒಪ್ಪಂದ ಮತ್ತು ವಿಶ್ವಸಂಸ್ಥೆಯ ರಾಬತ್ ಆಕ್ಷನ್ ಪ್ಲಾನ್) ಕಠಿಣವಾಗಿ ಖಂಡಿಸುತ್ತವೆ. ಒಬ್ಬ ಉನ್ನತ ಅಧಿಕಾರಿಯ ಸ್ಥಾನದಲ್ಲಿರುವವರು ಇಂತಹ ಪದಗಳನ್ನು ಬಳಸಿದಾಗ, ಅದರ ಪ್ರಭಾವ ಸಮಾಜದ ಕಟ್ಟಕಡೆಯ ನಾಗರಿಕನ ಮೇಲೂ ಆಗುತ್ತದೆ ಎಂಬುದು ಬಹುತೇಕರ ಆಕ್ರೋಶಕ್ಕೆ ಕಾರಣವಾಗಿದೆ.

ಸಾಂವಿಧಾನಿಕ ವಿರೋಧಾಭಾಸ:

ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ (AILU) ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಸಿಜೆಐ ಹೇಳಿಕೆಯು ತೀವ್ರ ಆಕ್ಷೇಪಾರ್ಹ ಮತ್ತು ಸ್ವೀಕಾರಾರ್ಹವಲ್ಲದ್ದು ಎಂದು ಹೇಳಿದೆ.

ನಮ್ಮ ಸಂವಿಧಾನದ 19ನೇ ವಿಧಿ ವಾಕ್ ಸ್ವಾತಂತ್ರ್ಯವನ್ನು ನೀಡಿದರೆ, 21ನೇ ವಿಧಿ ಪ್ರತಿಯೊಬ್ಬ ಪ್ರಜೆಯೂ ಗೌರವದಿಂದ ಬದುಕುವ ಹಕ್ಕನ್ನು (Right to Dignity) ನೀಡುತ್ತದೆ. ಅದೇ ರೀತಿ, ಮಾಹಿತಿ ಹಕ್ಕು ಕಾಯ್ದೆ (RTI) ಇರುವುದೇ ಸಾಮಾನ್ಯ ಜನಸಾಮಾನ್ಯರು ಅಧಿಕಾರದಲ್ಲಿರುವವರನ್ನು ಪ್ರಶ್ನಿಸಲಿ ಎಂದು. ಇಂತಹ ಪರಿಸ್ಥಿತಿಯಲ್ಲಿ, ಪ್ರಶ್ನೆ ಕೇಳುವವರನ್ನು ಅಥವಾ ನಿರುದ್ಯೋಗದ ಕಾರಣಕ್ಕೆ ಸಾಮಾಜಿಕ ಮಧ್ಯಮಗಳಲ್ಲಿ ಧ್ವನಿ ಎತ್ತುವವರನ್ನು ಕೀಳಾಗಿ ನೋಡುವುದು ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ.

“ನಮ್ಮ ನ್ಯಾಯಾಂಗದ ಮುಖ್ಯಸ್ಥರಿಂದ ಇಂತಹ ಹೇಳಿಕೆ ಬಂದಿರುವುದು ದುರದೃಷ್ಟಕರ; ಇದು ತೀರಾ ಅಪ್ರಜಾಸತ್ತಾತ್ಮಕ ಮತ್ತು ಪ್ರಜಾಪ್ರಭುತ್ವದ ಬೆಳವಣಿಗೆಗೆ ಶ್ರಮಿಸುವ ಯುವ ಕಾರ್ಯಕರ್ತರಿಗೆ ಮಾಡಿದ ಅವಮಾನ. ನಮ್ಮ ಹೆಮ್ಮೆಯ ಸಂಸ್ಥೆಗಳು ವಿಫಲವಾದಾಗ, ಸಾಂವಿಧಾನಿಕ ಆಶಯಗಳಿಗೆ ತಕ್ಕಂತೆ ಸಮಾಜ ಮತ್ತು ಅದರ ಮೌಲ್ಯಗಳನ್ನು ಮುನ್ನಡೆಸುವಲ್ಲಿ ಯುವಕರು ಪ್ರಮುಖ ಪಾತ್ರ ವಹಿಸುತ್ತಾರೆ. ಸಿಜೆಐ ಅವರ ಸಾಂವಿಧಾನಿಕ ಸ್ಥಾನಮಾನವು ಇಂತಹ ಪರಿಸ್ಥಿತಿಗಳನ್ನು ನಿಭಾಯಿಸುವಾಗ ಇಷ್ಟೊಂದು ಸಾರಾಸಗಟು ಸಾಮಾನ್ಯೀಕರಣ ಮಾಡದಂತೆ ಹೆಚ್ಚಿನ ಸಂಯಮವನ್ನು ಒತ್ತಾಯಿಸುತ್ತದೆ,” ಎಂದು ಸಂಘಟನೆ ಹೇಳಿದೆ.

“ಯಾರೋ ಒಬ್ಬ ಯುವ ವಕೀಲನ ಬೇಜವಾಬ್ದಾರಿ ನಡೆ ಇಡೀ ಯುವ ಸಮೂಹವನ್ನು ನಿಂದಿಸುವ ಇಂತಹ ಹೇಳಿಕೆಗೆ ಕಾರಣವಾಗಬಾರದು. ನಿರುದ್ಯೋಗ ಎಂಬುದು ಯುವಕರ ತಪ್ಪಲ್ಲ – ಇದು ಸರ್ಕಾರ ಮತ್ತು ರಾಜ್ಯ ಅನುಸರಿಸುತ್ತಿರುವ ಅಭಿವೃದ್ಧಿ ಪಥ ಹಾಗೂ ನೀತಿಗಳ ವೈಫಲ್ಯ. ಯುವಕರು ಇದರ ಸಂತ್ರಸ್ತರು,” ಎಂದು ಸಂಘಟನೆ ಖಾರವಾಗಿ ಹೇಳಿದೆ.

ಭಾರತದ ಇಂದಿನ ಸಾಮಾಜಿಕ ಸ್ಥಿತಿ:

ಭಾರತದಲ್ಲಿ ಈಗಾಗಲೇ ಜಾತಿ, ಧರ್ಮಗಳ ಹೆಸರಿನಲ್ಲಿ ದ್ವೇಷದ ಭಾಷಣಗಳು (Hate Speeches) ಹೆಚ್ಚಾಗುತ್ತಿವೆ ಎಂದು ‘ಇಂಡಿಯಾ ಹೇಟ್ ಲ್ಯಾಬ್’ನಂತಹ ಸಂಸ್ಥೆಗಳ ವರದಿಗಳು ಎಚ್ಚರಿಸುತ್ತಿವೆ. ಸಮಾಜದ ಒಂದು ವರ್ಗವನ್ನು ‘ಗೆದ್ದಲುಗಳು’ ಎಂದು ಕರೆಯುವ ರಾಜಕೀಯ ನಾಯಕರನ್ನು ನಾವು ನೋಡಿದ್ದೇವೆ. ಈಗ ನಿರುದ್ಯೋಗಿಗಳೂ ಇಂತಹ ಭಾಷಾ ಪ್ರಯೋಗಗಳಿಗೆ ಬಲಿಯಾದರೆ, ಅದು ದೇಶದ ದೊಡ್ಡ ಯುವಸಂಪನ್ಮೂಲಕ್ಕೆ ಮಾಡುವ ಅಪಮಾನವಾಗುತ್ತದೆ. ನಿರುದ್ಯೋಗ ಎಂಬುದು ಆರ್ಥಿಕ ಮತ್ತು ಸಾಮಾಜಿಕ ನೀತಿಗಳ ವೈಫಲ್ಯವೇ ಹೊರತು, ಉದ್ಯೋಗ ಸಿಗದ ಯುವಕನ ತಪ್ಪಲ್ಲ.

ನ್ಯಾಯಾಂಗವು ದೇಶದ ಪ್ರಜೆಗಳ ಪಾಲಿಗೆ ಕೊನೆಯ ಭರವಸೆಯ ಬೆಳಕು. ಮುಖ್ಯ ನ್ಯಾಯಮೂರ್ತಿಗಳು ತಮ್ಮ ಹೇಳಿಕೆಗೆ ನೀಡಿರುವ ಸ್ಪಷ್ಟೀಕರಣ ಸ್ವಾಗತಾರ್ಹ. ಆದರೆ, ಉನ್ನತ ಸ್ಥಾನದಲ್ಲಿರುವವರು ಬಳಸುವ ಪ್ರತಿಯೊಂದು ಪದವೂ ಇತಿಹಾಸದ ಕರಾಳತೆಯನ್ನು ನೆನಪಿಸದಂತೆ, ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಂತಿರಬೇಕು. ಯುವಜನರನ್ನು ಸಮಾಜದ ಶಕ್ತಿಯನ್ನಾಗಿ ನೋಡಬೇಕೇ ಹೊರತು, ವ್ಯವಸ್ಥೆಗೆ ಬಂದ ರೋಗದಂತೆ ಬಿಂಬಿಸಬಾರದು. ಆಗ ಮಾತ್ರ ಪ್ರಜಾಪ್ರಭುತ್ವದ ಆಶಯ ಜೀವಂತವಾಗಿರಲು ಸಾಧ್ಯ.

ಕೃಪೆ : ದಿ ವೈರ್ ಮತ್ತು ಮಾಧ್ಯಮ ವರದಿಗಳು


ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ..ಹಕ್ಕುಗಳನ್ನು ಕೇಳಬಾರದಾ?: ಕಾಂಗ್ರೆಸ್‌ಗೆ ಮುಸ್ಲಿಂ ಸಮಾವೇಶ ಪ್ರಶ್ನೆ

"ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ? ಯಾವ ಹಕ್ಕನ್ನೂ ಕೇಳಬಾರದು ಎಂದು ನೀವು (ಕಾಂಗ್ರೆಸ್‌ನವರು) ಬಯಸುತ್ತಿದ್ದೀರಾ?" ಎಂದು ಕರ್ನಾಟಕ ಮುಸ್ಲಿಂ ಸಮಾವೇಶ ಖಾರವಾಗಿ ಪ್ರಶ್ನಿಸಿತು. ಬೆಂಗಳೂರಿನ ಪುರಭವನದಲ್ಲಿ ಇಂದು (ಮೇ 16, ಶನಿವಾರ) ನಡೆದ...

“ಸನಾತನ ಬೇರುಗಳಲ್ಲಿರುವ ಅಸಮಾನತೆಗೆ ದ್ರಾವಿಡ ನೆಲದ ಪ್ರತಿರೋಧ”: ಉದಯನಿಧಿ ಹೇಳಿಕೆ ವಿವಾದವಾಗಿದ್ದೇಗೆ..?

ಸನಾತನ ಸಂಸ್ಥೆಗಳನ್ನು ಮತ್ತು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳು ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿವೆ.  ತಮಿಳುನಾಡು ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಅವರು ಅಧಿಕಾರ...

ನೇತ್ರಾವತಿ ತೀರದಲ್ಲಿ ‘ಅಂತರಗಂಗೆ’ಯಂತೆ ಹರಿಯುತ್ತಿರುವ ಪ್ರತಿರೋಧ: ವೇದವಲ್ಲಿಯಿಂದ ಸೌಜನ್ಯಳವರೆಗೆ ಪ್ರತಿಧ್ವನಿಸುತ್ತಿರುವ ಪ್ರಶ್ನೆ-‘ಕೊಂದವರು ಯಾರು?’

ಪ್ರಪಂಚದಾದ್ಯಂತ ಪಿತೃಪ್ರಧಾನ ವ್ಯವಸ್ಥೆ ಮತ್ತು ಪ್ರಭುತ್ವಗಳು ಹಲವು ರೀತಿಗಳಲ್ಲಿ ಮಹಿಳೆಯರನ್ನು ದಮನಿಸುವ ವಿಧಾನಗಳನ್ನು ಕಂಡುಕೊಂಡು ಕರಗತ ಮಾಡಿಕೊಂಡಿವೆ. ಅದರಲ್ಲಿ ಅತ್ಯಂತ ಪರಿಣಾಮಕಾರಿಯಾದುದು, ದೇವರು, ಭಕ್ತಿ ಮತ್ತು ಧರ್ಮದ ಹೆಸರಿನಲ್ಲಿ ಮಹಿಳೆಯರನ್ನು ದಮನಕ್ಕೊಳಪಡಿಸುವ ತಂತ್ರ....

ರೂ. 170 ಕೋಟಿ ದಂಡ ಪಾವತಿಸಲು ಮುಂದಾದ ಅದಾನಿ : ಏನಿದು ಪ್ರಕರಣ?

ಅಮೆರಿಕದ ನ್ಯಾಯಾಲಯದಲ್ಲಿ ದಾಖಲಾಗಿದ್ದ ವಂಚನೆ ಮತ್ತು ಲಂಚದ ಪ್ರಕರಣಕ್ಕೆ ಸಂಬಂಧಿಸಿದಂತೆ, ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಟ್ಟು 18 ಮಿಲಿಯನ್ ಡಾಲರ್ (ಸುಮಾರು 170 ಕೋಟಿ ರೂಪಾಯಿ) ದಂಡ ಪಾವತಿಸಲು ಒಪ್ಪಿಕೊಳ್ಳುವ ಮೂಲಕ...

ಭೋಜಶಾಲಾ-ಕಮಲ್ ಮೌಲಾ ಪ್ರಕರಣದಲ್ಲಿ ಹಿಂದೂಗಳ ಪರ ತೀರ್ಪು…ಮಸೀದಿಯಲ್ಲ ದೇವಸ್ಥಾನವೆಂದ ಕೋರ್ಟ್ : ಏನಿದು ವಿವಾದ?

ಸುಮಾರು 100 ವರ್ಷಗಳ ಹಳೆಯ ವಿವಾದವಾದ ಭೋಜಶಾಲಾ-ಕಮಲ್ ಮೌಲಾ ಮಸೀದಿ ಪ್ರಕರಣದಲ್ಲಿ ಶುಕ್ರವಾರ (ಮೇ 15) ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದ್ದು, ಭೋಜಶಾಲಾದಲ್ಲಿರುವ ಐತಿಹಾಸಿಕ ಸ್ಥಳವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು...

“ಮಹಿಳಾ ಮೀಸಲಾತಿ ಮುಖವಾಡದಲ್ಲಿ ಡಿಲಿಮಿಟೇಷನ್ ಕುತಂತ್ರ ವಿಫಲ” ಬಿಜೆಪಿಗೆ ದಕ್ಷಿಣ ಭಾರತದ ಎಚ್ಚರಿಕೆ

ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2026ರ ಏಪ್ರಿಲ್ 16ರಂದು ಸಂಸತ್ತಿನ ವಿಶೇಷ ಅಧಿವೇಶನ ಕರೆದು, ಮಹಿಳಾ ಮೀಸಲಾತಿ ಅನುಷ್ಠಾನವನ್ನು ತ್ವರಿತಗೊಳಿಸುವ ನೆಪವನ್ನು ಮುಂದುಮಾಡಿ ಮೂರು ಮಸೂದೆಗಳನ್ನು ಮಂಡಿಸಿತು. ಇವುಗಳಲ್ಲಿ ಪ್ರಮುಖವಾದ ಸಂವಿಧಾನ (131ನೇ...

ಹೊಸ ಕಾರ್ಮಿಕ ಕಾನೂನು ಶ್ರಮಿಕರ ಮೂಲಭೂತ ಹಕ್ಕುಗಳಿಗೆ ಕತ್ತರಿ!

"8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ" ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ...

ಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

2001-2004 ರವರೆಗಿನ ನಿರಂತರ ಬರ ಕರ್ನಾಟಕದ ಬಹುತೇಕ ಹಳ್ಳಿಗಳನ್ನು ಕಂಗಾಲಾಗಿಸಿದ್ದಂತೂ ನಿಜ. ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಸಲೂ ಜನ ಅಲೆದಾಡುತ್ತಿದ್ದರು. ಜನರಿಗೆ ಕುಡಿಯುವ ನೀರು ಪೂರೈಕೆ ಸಹ ಆ ಸಂದರ್ಭದಲ್ಲಿ...

ಮಣಿಪುರ: ಬುಡಕಟ್ಟು ಚರ್ಚ್ ನಾಯಕರ ಮೇಲೆ ಉಗ್ರ ದಾಳಿ:  ಹಲವೆಡೆ ಮೇಣದ ಬತ್ತಿಯ ಜೊತೆಗೆ ಶೋಕ ವ್ಯಕ್ತ ಪಡಿಸಿದ ಕುಕಿ ಸಮುದಾಯ 

ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಪ್ರಮುಖ ಕುಕಿ ಚರ್ಚ್ ನಾಯಕರನ್ನು ಹೊಂಚು ಹಾಕಿ ದಾಳಿ ನಡೆಸಿ ಕೊಲ್ಲಲಾಗಿದೆ. ಈ ಘಟನೆಯು ರಾಜ್ಯದಲ್ಲಿ ಜನಾಂಗೀಯ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.  ಮೇ 13ರಂದು ಬೆಳಿಗ್ಗೆ ಚುರಾಚಂದ್‌ಪುರನಲ್ಲಿ...

ಗುಜರಾತ್| ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಹಲ್ಲೆ

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮಡಿ ಗ್ರಾಮದಲ್ಲಿ ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ದಲಿತ ವರನ ಮೇಲೆ ಮೇಲ್ಜಾತಿಯ ಪುರುಷರ ಗುಂಪೊಂದು ಜಾತಿ ನಿಂದನೆ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೇ 10 ರಂದು...