Homeಪುಸ್ತಕ ವಿಮರ್ಶೆಹದಿನೆಂಟರ ಮನೋಸ್ಥಿತಿಯ ದಟ್ಟ ಚಿತ್ರಣ: ಈ ಪುಸ್ತಕ ಏನನ್ನು ಹೇಳುತ್ತದೆ?

ಹದಿನೆಂಟರ ಮನೋಸ್ಥಿತಿಯ ದಟ್ಟ ಚಿತ್ರಣ: ಈ ಪುಸ್ತಕ ಏನನ್ನು ಹೇಳುತ್ತದೆ?

- Advertisement -
- Advertisement -

| ಕೇಶವ ಶರ್ಮ |
ಪ್ರಾಧ್ಯಾಪಕ, ಕುವೆಂಪು ವಿಶ್ವವಿದ್ಯಾಲಯ

ಅತ್ಯಂತ ಮುಖ್ಯವಾದ ಸಮಸ್ಯೆಯನ್ನು ಕುರಿತು ಈ ಕೃತಿಯು ಹೇಳುತ್ತದೆ. ಈ ಪುಸ್ತಕವನ್ನು ನಾವು ಓದಲೇಬೇಕು: ಯಾಕೆಂದರೆ ನಮ್ಮ ನಡುವೆ ಹದಿನಂಟು ವಯಸ್ಸಿನ ಅನೇಕರು ಇದ್ದಾರೆ. ಅವರನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಈ ದೃಷ್ಟಿಯಲ್ಲಿ ಈ ಕೃತಿಯು ಅತ್ಯಂತ ಮಹತ್ವದ್ದು.

ಇದು ಡಾ. ಪಿ.ವಿ.ಭಂಡಾರಿ ಮತ್ತು ಹರೀಶ್ ಬಂಡ್ಸಾಲೆಯವರ ಕೃತಿ. ಇದು ಹದಿಹರಯದವರ ಮನೋಸ್ಥಿತಿಯನ್ನು ಹೇಳುತ್ತದೆ. ಮನಸ್ಸು ಮತ್ತು ಅದರ ವ್ಯಾಪಾರವನ್ನು ಹೇಳುತ್ತದೆ. ಲೇಖಕರು ವೃತ್ತಿಯಲ್ಲಿ ವೈದ್ಯರು ಎನ್ನುವುದು ವಿಶೇಷ. ಹದಿನಂಟು ಮನಸ್ಸನ್ನು ಕೇಂದ್ರ ಮಾಡಿದೆ. ಹಾಗೆ ನೋಡಿದರೆ ಹದಿಹರಯ ಎನ್ನುವುದೇ ಮನುಷ್ಯನ ಜೀವನದಲ್ಲಿ ಹೊಸದಾದ ಕನಸು ಮತ್ತು ಆಸೆಗಳನ್ನು ಹುಟ್ಟಿಸುವ ವಯಸ್ಸು. ಆದರೆ ಇದರ ಜೊತೆಗೆ ಈ ಕಾಲವು ನಮಗೆ ಸರಿ ಮತ್ತು ತಪ್ಪುಗಳು ಹೊಯ್ದಾಟದ ಕಾಲವೂ ಹೌದು. ಇದನ್ನು ಈ ಕೃತಿಯಲ್ಲಿ ಲೇಖಕರು ಹೇಳುತ್ತಾರೆ. ಅವರ ವೃತ್ತಿ ಜೀವನದಲ್ಲಿ ಏನು ಕಂಡಿದ್ದಾರೆಯೋ ಅದನ್ನು ಇಲ್ಲಿ ಹೇಳಿದ್ದಾರೆ ಎಂದು ಕಾಣುತ್ತದೆ. ಅದ್ದರಿಂದ ಇದು ಸತ್ಯ. ಅಷ್ಟೇ ಅಲ್ಲ, ಒಬ್ಬ ತಜ್ಞ ವೈದ್ಯ ಮತ್ತು ಒಬ್ಬ ತತ್ವಜ್ಞಾನಿ ಜೀವನವನ್ನು ನೋಡುವ ಕ್ರಮಗಳು ಬೇರೆ. ಅದರಲ್ಲಿ ಸಂಶಯವು ಇಲ್ಲ. ವೈದ್ಯನಿಗೆ ತನ್ನ ಹತ್ತಿರ ಬರುವ ರೋಗಿಯ ಮನೋಸ್ಥಿತಿಯು ರೋಗದ ಒಂದು ಲಕ್ಷಣವಾಗಿ ಕಾಣುತ್ತದೆ. ಭಂಡಾರಿಯವರಿಗೆ ಮತ್ತು ಹರೀಶ್ ಅವರಿಗೆ ಬರೀ ಮನಸ್ಸು ಮಾತ್ರವೇ ಮುಖ್ಯವಲ್ಲ. ಅದರ ಹಿಂದೆ ಇರುವ ಮನೋರೋಗವೂ ಅತ್ಯಂತ ಮುಖ್ಯ. ನಮ್ಮಲ್ಲಿ ಮನೋರೋಗದ ಬಗ್ಗೆ ಅನೇಕ ಅಪಕಲ್ಪನೆಗಳು ಇವೆ. ತುಂಬಾ ಜನರು ಮನೋವೈದ್ಯರ ಹತ್ತಿರ ಹೋಗಲು ಹಿಂಜರಿಯುತ್ತಾರೆ. ಅದರ ಜೊತೆಗೆ ಅತ್ಯಂತ ತೀರಾ ಸಾಮಾನ್ಯರು ಮನೋರೋಗವನ್ನು ನೋಡುವ ಕ್ರಮಗಳೇ ಬೇರೆ. ಜನರು ಮೂಢನಂಬಿಕೆಯಿಂದ ಸ್ವಲ್ಪ ವ್ಯತಿರಿಕ್ತವಾಗಿ ನಡೆಯುವವರನ್ನು , ಭ್ರಾಂತಿಯಲ್ಲಿ ಇರುವವರನ್ನು ಭೂತ ಮತ್ತು ದೆವ್ವ ಬಿಡಿಸುವವರ ಹತ್ತಿರ ಕರೆದುಕೊಂಡು ಹೋಗುವುದು ಹೆಚ್ಚು. ಅದನ್ನು ಹೋಗಲಾಡಿಸಲು ಈ ತರಹದ ಕೃತಿಗಳು ಬರಬೇಕಾಗುತ್ತದೆ. ಮನೋವಿಜ್ಞಾನಕ್ಕೆ ಸಂಬಂಧಪಟ್ಟು ಹೆಚ್ಚು ಕೃತಿಗಳು ಬಂದಿಲ್ಲ. ಬರುವುದು ತೀರಾ ಅಪರೂಪ. ಆದ್ದರಿಂದ ಈ ಕೃತಿಯು ನಮಗೆ ಅತ್ಯಂತ ಮುಖ್ಯವಾಗಿದೆ. ಇಲ್ಲಿ ಲೇಖಕರು ಎರಡು ಪ್ರಧಾನವಾದ ಸಂಗತಿಗಳನ್ನು ಪ್ರಸ್ತಾವಿಸುತ್ತಾರೆ: ಒಂದು ಹದಿಹರಯದವರ ಮನೋಸ್ಥಿತಿ. ಎರಡು ನಾವು ಅವರನ್ನು ನೋಡಬೇಕಾದ ಕ್ರಮ. ನಾವೆಲ್ಲರೂ ಗಮನಿಸಬೇಕಾದ ಅಗತ್ಯಗಳಿವು. ಭಯ ಮತ್ತು ದುಃಖ ಮನುಷ್ಯರನ್ನು ಹತಾಶರನ್ನಾಗಿ ಮಾಡುತ್ತದೆ. ದುಃಖಿತ ಮನುಷ್ಯರು ಖಿನ್ನತೆಯಿಂದ ಬಳಲುತ್ತಾರೆ. ಖಿನ್ನತೆ ಎಂದರೆ ಅದು ಒಣ ಕೆಮ್ಮು ಅಥವಾ ಶೀತದಂತೆ ಅಲ್ಲ ಎನ್ನುವುದು ಈ ಕೃತಿಯ ಅತ್ಯಂತ ಮಹತ್ವದ ತತ್ವ. ಮನಸ್ಸಿನ ಆಂತರಿಕ ಸಂಘರ್ಷಕ್ಕೂ ಒಂದು ಸಂಬಂಧವಿದೆ ಎನ್ನುವುದನ್ನು ಇಲ್ಲಿ ಲೇಖಕರು ಹೇಳುತ್ತಾರೆ. ಉದಾಹರಣೆಗೆ ”ಇವರಿಗೂ ಇತ್ತು ಸಮಸ್ಯೆಗಳು” ಲೇಖನವು ನಮಗೆ ಅನೇಕ ವಿಚಾರಗಳನ್ನು ಹೇಳುತ್ತದೆ.

ನಮ್ಮಲ್ಲಿರುವ ವಿಷಾದವು ಭಯ ಮತ್ತು ಬೇಸರದಿಂದ ಹುಟ್ಟುತ್ತದೆ. ಉದ್ವಿಗ್ನತೆಗೂ ಮನಸ್ಸಿನಲ್ಲಿ ಉಂಟಾಗುವ ಕಿರಿಕಿರಿಗೂ ಸಂಬಂಧವಿದೆ. ಅದು ಮಾನಸಿಕ ಒಂದು ಸ್ಥಿತಿಯು ಮಾತ್ರ. ಅದನ್ನು ಸರಳವಾದ ಮಾತಿನಲ್ಲಿ ವಿವರಿಸಲು ಬರುವುದಿಲ್ಲ ಈ ಕೃತಿಯ ಈ ಲೇಖನವು ಇದಕ್ಕೆ ಒಂದು ಉದಾಹರಣೆ ಈ ಸಂಕಲನದ ‘ಪ್ರೇಮ ಕಾವ ಲಿಂಗದ ಹಂಗು” ಲೇಖನವು ಅತ್ಯಂತ ಮುಖ್ಯವಾದ ವಿಚಾರವನ್ನು ನಮ್ಮ ಮುಂದೆ ಇಡುತ್ತದೆ.

ಖಿನ್ನನಾದವನು ಮತ್ತೆಮತ್ತೆ ದುಃಖ ಮತ್ತು ಬೇಸರವನ್ನು ಮತ್ತೆ ಮತ್ತೆ ಹೇಳುತ್ತಿರುತ್ತಿರುತ್ತಾನೆ. ಖಿನ್ನನಾದವನ ಮನೋಸ್ಥಿತಿಯು ಬೇಸರವನ್ನೂ ಭಯವನ್ನು ಸೂಚಿಸುತ್ತಿರುವುದರಿಂದ ಅವನು ಸುತ್ತಲಿನ ಜಗತ್ತನ್ನು ಕಾಣುವ ಸ್ಥಿತಿಯೂ ಬೇರೆ. ಅವನು ಸ್ನೇಹಿತರಿಂದ ದೂರವಿರುತ್ತಾನೆ. ಅವನು ಒಂಟಿಯಾಗಿ ಇರಲು ಇಷ್ಟ ಪಡುತ್ತಾನೆ, ಎಷ್ಟೋ ಸರ್ತಿ ಅವನು ಸುಮ್ಮನೆ ಅಲೆದಾಡುತ್ತಾನೆ. ಅವನ ಬಾಯಿಯು ಒಣಗುತ್ತದೆ. ಅವನ ಅಲೋಚನೆಗಳು ಅಸಹಜತೆಯನ್ನು ಪ್ರಕಟಿಸುತ್ತವೆ. ಇದನ್ನು ಲೇಖಕರು ಹೇಳುತ್ತಾರೆ ಈ ಸಂಕಲನ ಮತ್ತೊಂದು ಮಹತ್ವದ ಲೇಖನ “ಏಕೆ ಕಾಡುವಿರಿ ಹೀಗೆ’? ಮನಸ್ಸು ಮತ್ತು ಅದರ ಸಂಕಟವನ್ನು ಇದು ಹೇಳುತ್ತದೆ.

ಮನಸ್ಸು ಮತ್ತು ಅದರ ವ್ಯಗ್ರತೆಯು ಬೇರೆ ಬೇರೆ ಕಾರಣದಿಂದ ಬರುತ್ತದೆ. ವ್ಯಗ್ರತೆಯಿಂದ ಇರುವವನು ವಾಸ್ತವತೆಯನ್ನು ಸರಿಯಾಗಿ ನೋಡಲಾರ..”ನಮ್ಮ ವೃತ್ತಿ ನಮ್ಮ ಆಯ್ಕೆ” ಎನ್ನುವ ಲೇಖನವು ಇದನ್ನು ಸವಿವರವಾಗಿ ಮಂಡಿಸುತ್ತದೆ.

ಹದಿನೇಳನೆಯ ಶತಮಾನ ಮತ್ತು ಹದಿನೆಂಟನೆಯ ಶತಮಾನದಲ್ಲಿ ಇದು ವಿನಾ ಕಾರಣವೆಂದು ಭಾವಿಸಲಾಗಿತ್ತು. ಇದಕ್ಕೆ ಪೂರಕವಾಗಿ ಮತ್ತೆ ಕೆಲವು ಅಂಶಗಳನ್ನು ನೋಡಬಹುದು-ನರ ಸಂಬಂಧಿ ಕಾಯಿಲೆಗಳಲ್ಲಿ ಮೂರ್ಛೆ ರೋಗವೂ ಒಂದು. ಕ್ಲಾಸಿಕಲ್ ಪರಂಪರೆಯ ಅನೇಕ ವೈದ್ಯರಿಗೆ ಇದನ್ನು ವಿವರಿಸಲು ಸಾಧ್ಯವಾಗಲಿಲ್ಲ. ಆದರೆ ಮೂರ್ಛೆ ರೋಗುವು ನಿಸರ್ಗ ದತ್ತವಾದುದಲ್ಲ. ಅದು ವಾಸ್ತವವಾಗಿ ಕೇವಲ ಮನುಷ್ಯನ ಸ್ಥಿತಿಯನ್ನು ಮಾತ್ರವೇ ವಿವರಿಸುತ್ತದೆ. ಮೂರ್ಛೆ ಎಂದರೆ ತನ್ನ ಸ್ಥಿತಿಯನ್ನು ಮರೆಯವುದು. ಇದರಲ್ಲಿ ನೈತಿಕ ಮತ್ತು ಅನೈತಿಕವೆನ್ನುವ ಅಂಶಗಳೇ ಇಲ್ಲ. ಮತ್ತು ಹಿಸ್ಟಿರಿಕ್ ಆದವನ ಅಭಿವ್ಯಕ್ತಿಯೂ ಬೇರೆ. ಆಗಿನ ಕಾಲದಲ್ಲಿ ಹಿಸ್ಟಿರಿಕ್ ಮತ್ತು ನೈತಿಕ ಹಾಗೂ ಅನೈತಿಕ ಎನ್ನುವುದರ ವಿವರಣೆಯು ಭಿನ್ನವಾಗಿತ್ತು. ಹದಿನೆಂಟನೆಯ ಶತಮಾನದ ಮೊದಲ ಭಾಗದಲ್ಲಿ ಹಿಸ್ಟಿರಿಕ್ ಮತ್ತು ವ್ಯಕ್ತತೆಗೆ ಇದ್ದ ಸಂಬಂಧವು ಕುರಿತು ಹೇಳುವಾಗ ವೈದ್ಯಕೀಯ ಲೋಕವು ಅದಕ್ಕೂ ಕರುಣೆಯ ಅಗತ್ಯವಿದೆ ಎಂದು ವಿವರಿಸಿತ್ತು. ಆಗ ವೈದ್ಯರು ನರ ಸಂಬಂಧಿ ಕಾಯಿಲೆಯನ್ನು ವಿವರಿಸಿದ ಕ್ರಮವೆಂದರೆ ಮನುಷ್ಯನ ಸಂವೇದನೆ, ನರವ್ಯೂಹ, ಖಿನ್ನತೆ, ಅದನ್ನು ಮನುಷ್ಯನು ವ್ಯಕ್ತ ಪಡಿಸುವ ವಿಧಾನ ಎಲ್ಲವೂ ಮುಖ್ಯವೆಂದು ಹೇಳಿದರು. ವಾಸ್ತವಾಗಿ ಖಿನ್ನತೆಯು ಮನಸ್ಸಿನ ಯಾತನೆಯೂ ಹೌದು, ದೇಹದ ಯಾತನೆಯೂ ಹೌದು. ಅದರ ಅನುಭವವು ಸ್ವಲ್ಪ ಮಟ್ಟಿಗೆ ಕಟುವಾದದು. ಖಿನ್ನತೆಯನ್ನು ನಾವು ಹೇಗೆ ವಿವರಿಸುತ್ತೇವೆ ಎನ್ನುವುದೂ ಅಷ್ಟೇ ಮುಖ್ಯ. ಯಾರು ಹೆಚ್ಚು ಸಂವೇದನಾ ಶೀಲರಾಗಿರುತ್ತಾರೋ ಅವರಿಗೆ ಖಿನ್ನತೆಯು ಕಾಡುತ್ತದೆ. ಬಳಲಿಕೆ, ಖಿನ್ನತೆ ಮತ್ತು ಆತಂಕಗಳು ಜೊತೆಗೆ ಇರುತ್ತದೆ. ಸೋಪು ಮತ್ತು ಸೋಪಿನ ಉತ್ಪನ್ನಗಳು ಅವರನ್ನು ಶುದ್ಧಿ ಮಾಡಲಾರದು. ಖಿನ್ನತೆಯಿಂದ ಬಳಲುವವರ ಸಮಸ್ಯೆಯು ಈ ದೃಷಿಯಿಂದ ವಿಶಿಷ್ಟವಾಗಿದೆ. ಆಧುನಿಕ ಸಂದರ್ಭದಲ್ಲಿ ವ್ಯಕ್ತಿಯ ಅನುಭವವು ಕೇವಲ ಶುದ್ಧೀಕರಣಕ್ಕೆ ಸಂಬಂಧಪಟ್ಟಿದ್ದು ಅಲ್ಲ. ಹಾಗೆ ನೋಡುವುದಿದ್ದರೆ ಯಾವುದನ್ನು ಸಹಜ ಮತ್ತು ಅಸಹಜ ಎನ್ನುವುದನ್ನು ಗುರುತಿಸುವುದು ಸಾಮಾಜಿಕ ಸನ್ನಿವೇಶದ ಆಧಾರದ ಮೇಲೆ. ಯಾವುದನ್ನು ಸಾಮಾಜಿಕತೆ ಒಪ್ಪಿದೆಯೆಂದರೆ ನೀತಿಯನ್ನು ಮಾತ್ರ. ಈ ಚೌಕಟ್ಟಿನಿಂದ ಹೊರತಾದ ಸಂಗತಿಗಳನ್ನು ಅಸಹಜವೆಂದು ಹೇಳಿದೆ. ನೀತಿಗೂ ಜೀವನದ ಕ್ರಮಕ್ಕೂ ರಾಜಕಾರಣಕ್ಕೂ ಒಂದು ಸಂಬಂಧವಿದೆ. ಮೊದಲ ಮಹಾಯದ್ಧ ಮತ್ತು ಅದರ ಪರಿಣಾಮವನ್ನು ನೋಡಿದರೆ ಮತ್ತೆ ಒಂದು ಅಂಶವು ನಮ್ಮ ಗಮನಕ್ಕೆ ಬರುತ್ತದೆ. ಆಗ ನಾಜಿಗಳನ್ನು ನೋಡಿದ ಕ್ರಮಗಳು ಬೇರೆಯಾಗಿದ್ದವು. ಮತ್ತು ಅದರ ಪರಿಣಾಮವೂ ಬಹಳ ಬಿಕ್ಕಟ್ಟಿನದು ಎಂದು ಹೇಳಲಾಯಿತು. ಆದರೆ ಅವರ ಮನೋಸ್ಥಿತಿಯು ಸಾಮಾನ್ಯವಾದ್ದು ಆಗಿರಲಿಲ್ಲ ಭಂಡಾರಿಯವರ ಮುಖ್ಯವಾದ ಗಮನವಿರುವುದು ಒಂದು ವಯಸ್ಸಿನ ಮನೋಸ್ಥಿಯ ಮೇಲೆ. ಹಾಗೆ ನೋಡಿದರೆ ಈ ಕೃತಿಯನ್ನು ಒಬ್ಬರು ವೈದ್ಯರು ಹೇಗೆ ಬರೆಯಬಹುದೋ ಆ ರೀತಿಯಲ್ಲಿ ಅವರು ಬರೆದಿದ್ದಾರೆ. ನಿತ್ಯ ನಾವು ನೋಡುವ ಹದಿಹರಯದವರನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು ಎನ್ನುವುದನ್ನು ಈ ಕೃತಿಯು ಹೇಳುತ್ತದೆ. ಪಾಲಕರು, ಶಿಕ್ಷಕರು, ಸಮಾಜ, ಸಂಸ್ಕೃತಿ ತಜ್ಞರು, ಹದಿಹರಯದವರು ಈ ಕೃತಿಯನ್ನು ಓದಬೇಕು. ಇದು ನಮಗೆ ಅನೇಕ ಮಾರ್ಗ ಸೂಚನೆಯನ್ನು ಕೊಡುತ್ತದೆ. ಮನೋವ್ಯಾಪಾರ ಎನ್ನುವುದು ಅತ್ಯಂತ ಸರಳವಲ್ಲ ಎನ್ನುವುದು ಇದನ್ನು ಓದುವಾಗ ನಮ್ಮ ಅರಿವಿಗೆ ಬರುತ್ತದೆ. ಇದು ಈ ಕೃತಿಯ ಮುಖ್ಯವಾದ ಅಂಶ. ಹಾಗೆಂದು ಈ ಕೃತಿಯಲ್ಲಿ ಮಿತಿಯೇ ಇಲ್ಲವೆಂದು ಅರ್ಥವಲ್ಲ. ಈವತ್ತು ಕೂಡಾ ಹದಿಹರಯದವರ ಮನೋಸ್ಥಿತಿಯ ಅಧ್ಯಯನ ಎಂದರೆ ಅದು ಅತ್ಯಂತ ವಿಶಾಲವಾದ ಅರ್ಥದಲ್ಲಿ ಒಂದು ಸಮಾಜದ ಸ್ಥಿತಿಯ ಅಧ್ಯಯನವೂ ಹೌದು. ತುಂಬಾ ಮಹತ್ವದ ಮನೋವಿಜ್ಞಾನಿಗಳು (ಫುಕೋ, ಲಕಾನ್, ಫ್ರಾಯ್ಡ್ ಮುಂತಾದವರು) ಮನೋಸ್ಥಿತಿ ಮತ್ತು ಸಮಾಜದ ನಡುವೆ ಇರುವ ಅಂತರ್ ಸಂಬಂಧವನ್ನು ಹೇಳಿದ್ದಾರೆ. ಪರಿಸ್ಥಿತಿಯು ಹೇಗೆ ಇದೆ ಎಂದು ಅವರು ಹೇಳುತ್ತಾರೆ. ಈ ಕೃತಿಯನ್ನು ಓದುವಾಗ ನಮಗೆ ಅವರ ನೆನಪು ಸಹಜವಾಗಿ ಆಗುತ್ತದೆ. ಇಲ್ಲಿಯೂ ಲೇಖಕರು ನಮಗೆ ಅನೇಕ ಮಾರ್ಗದರ್ಶನವನ್ನು ಸೂಚಿಸುತ್ತಾರೆ. ನಿರೂಪಣೆಯ ತಂತ್ರವು ಚೆನ್ನಾಗಿದೆ. ಕೊನೆಯ ಲೇಖನದಲ್ಲಿ ಕೆಲವು ಪ್ರಶ್ನೆ ಮತ್ತು ಉತ್ತರದ ಮಾದರಿಗಳು ಇವೆ. ಇದು ಮುಖ್ಯವಾಗಿದೆ. ಹಾಗೆಂದು ಇದರಲ್ಲಿ ಯಾವುದೇ ಲೋಪವು ಇಲ್ಲ ಎಂದು ಹೇಳಲು ಬರುವುದಿಲ್ಲ. ಕಳೆದ ಹದಿನೈದು ಇಪ್ಪತ್ತು ವರ್ಷಗಳಲ್ಲಿ ಇಡೀ ಸಮಾಜದಲ್ಲಿ ಅತ್ಯಂತ ವ್ಯಾಪಕವಾದ ಒಂದು ಬದಲಾವಣೆಯನ್ನು ಕಾಣುತ್ತೇವೆ. ಅದು ಸಮಾಜ ಮತ್ತು ನಮ್ಮ ಆರ್ಥಿಕ ಹಾಗೂ ಮಾಧ್ಯಮದ ನೀತಿಗೂ ಸಂಬಂಧವನ್ನು ಇರಿಸಿಕೊಂಡಿದೆ. ಮಧ್ಯಮವರ್ಗದ ಅನೇಕ ಯುವಜನರು ಮತ್ತು ಅವರ ಮನೋಸ್ಥಿತಿಯು ಹೇಗೆ ಬದಲಾಗುತ್ತದೆ ಎನ್ನುವುದನ್ನು ತಾತ್ವಿವಾಗಿಯೂ ನೋಡಬೇಕಾಗುತ್ತದೆ

ಹೀಗಿದ್ದರೂ ಅತ್ಯಂತ ಮುಖ್ಯವಾದ ಸಮಸ್ಯೆಯನ್ನು ಕುರಿತು ಈ ಕೃತಿಯು ಹೇಳುತ್ತದೆ. ಈ ಪುಸ್ತಕವನ್ನು ನಾವು ಓದಲೇಬೇಕು: ಯಾಕೆಂದರೆ ನಮ್ಮ ನಡುವೆ ಹದಿನಂಟು ವಯಸ್ಸಿನ ಅನೇಕರು ಇದ್ದಾರೆ. ಅವರನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಈ ದೃಷ್ಟಿಯಲ್ಲಿ ಈ ಕೃತಿಯು ಅತ್ಯಂತ ಮಹತ್ವದ್ದು. ವೈದ್ಯ ವೃತ್ತಿಯಲ್ಲಿ ಇದ್ದು ಬರೆಯುವುದು ಅತ್ಯಂತ ಕಷ್ಟ. ಅದನ್ನು ಡಾ. ಭಂಡಾರಿಯವರು ಮತ್ತು ಭಂಡ್ಸಾಲೆಯವರು ದಾಟಿ ನಮಗೆ ಮೌಲಿಕವಾದ್ದನ್ನು ಕೊಟ್ಟಿದ್ದಾರೆ.

ಕೃತಿ      : ಹದಿನೆಂಟು ಏನಿಲ್ಲ… ಏನುಂಟು…!?
ಲೇಖಕರು : ಡಾ||ಪಿ.ವಿ.ಭಂಡಾರಿ ಮತ್ತು ಹರೀಶ್ ಶೆಟ್ಟಿ ಬಂಡ್ಸಾಲೆ
ಪ್ರಕಟಣೆ   : 2018
ರೂ       : 180/-

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...