Homeಅಂಕಣಗಳುಗೋಡ್ಸೆ ಬೆಂಗಳೂರಿಗೆ ಬಂದ ಸುದ್ದಿಯೂ ಕೂಡಾ... ಪರ್ತಕರ್ತನಾಗಿ ನನ್ನ ಪಾಲಿಗೆ News is Sacred

ಗೋಡ್ಸೆ ಬೆಂಗಳೂರಿಗೆ ಬಂದ ಸುದ್ದಿಯೂ ಕೂಡಾ… ಪರ್ತಕರ್ತನಾಗಿ ನನ್ನ ಪಾಲಿಗೆ News is Sacred

- Advertisement -
- Advertisement -

ಹೋದವಾರದ ಸಂಚಿಕೆಯಲ್ಲಿ ದೊರೆಸ್ವಾಮಿ 38 ದಿನ ಸಂಪಾದಕನಾಗಿದ್ದ ಅಪ್ರಬುದ್ಧ ಪತ್ರಕರ್ತ ಎಂದು ಹೇಳಿರುವ ಬಾಬು ಕೃಷ್ಣಮೂರ್ತಿಯ ಬಾಯಿ ಮುಚ್ಚಿಸಿದ್ದೇನೆ.

ಈ ಲೇಖನದಲ್ಲಿ ಗಾಂಧಿ ಹಂತಕ ಗೋಡ್ಸೆ ವಿಚಾರದಲ್ಲಿ ಎರಡು ಮಾತು ಹೇಳಲು ಬಯಸುತ್ತೇನೆ. ಗೋಡ್ಸೆ ಗಾಂಧೀಜಿ ಹತ್ಯೆಗೆ ಮೊದಲು ಬೆಂಗಳೂರಿನಲ್ಲಿ ನಡೆದ ಆರ್‌ಎಸ್‌ಎಸ್ ರ‍್ಯಾಲಿಗೆ ಬಂದಿದ್ದ. ರ‍್ಯಾಲಿಯ ಸ್ವಾಗತ ಸಮಿತಿಯ ಅಧ್ಯಕ್ಷನಾಗಿದ್ದ ಸುಪ್ರಸಿದ್ದ ನ್ಯಾಯವಾದಿ ಬೇಲಿ ವಾಸುದೇವಮೂರ್ತಿಯವರ ಅತಿಥಿಯಾಗಿದ್ದ ಎಂದು ಪೌರವಾಣಿಯಲ್ಲಿ ವರದಿಯಾಗಿತ್ತು. ಅದನ್ನು ಪ್ರಶ್ನಿಸಿ ಬಾಬು ಕೃಷ್ಣಮೂರ್ತಿಯವರು ಗಾಂಧಿ ಹತ್ಯೆ ಸಂಬಂಧದಲ್ಲಿ ಬಂಧಿಗಳಾಗಿದ್ದ ಗೋಡ್ಸೆ ಮತ್ತು ನಾರಾಯಣ ನ್ಯಾಯಾಲಯದ ಮುಂದೆ ನೀಡಿರುವ ಹೇಳಿಕೆಯಲ್ಲಿ ತಾವು ಆ ದಿನಗಳಲ್ಲಿ ದೆಹಲಿಯ ಹೋಟೆಲ್‌ಗಳಲ್ಲಿ ಸುಳ್ಳು ಹೆಸರು ಬರೆಸಿ ವಾಸ್ತವ್ಯ ಮಾಡಿರುವುದಾಗಿ ಹೇಳಿದ್ದಾರೆ. ಆದ್ದರಿಂದ ಗೋಡ್ಸೆ ಆ ದಿನಗಳಲ್ಲಿ ಬೆಂಗಳೂರಿನಲ್ಲಿ ಇದ್ದಿದ್ದು ಸುಳ್ಳು ಎಂದು ಬಾಬು ಕೃಷ್ಣಮೂರ್ತಿ ಅಭಿಪ್ರಾಯಪಡುತ್ತಾರೆ.


ಇದನ್ನು ಓದಿ: ನಾನು ಪೌರವಾಣಿ ಪತ್ರಿಕೆಯ ಸಂಪಾದಕನಾಗಿದ್ದು ಹೇಗೆ? ದೊರೆಸ್ವಾಮಿಯವರ ನೆನಪುಗಳು…


 

ಗಾಂಧಿ ಹತ್ಯೆಗೆ ಎಷ್ಟೋ ಮೊದಲು ವರದಿಯಾಗಿರುವ ಸುದ್ದಿ ಇದು. ಈ ಸುದ್ದಿಯನ್ನು ಸೃಷ್ಟಿಸಿದ್ದೇವೆಂಬುದು ಬಾಬುವಿನ ಆಪಾದನೆ. ಈ ಸುದ್ದಿಯನ್ನು ಆ ದಿನ ಪೌರವಾಣಿ ಪತ್ರಿಕೆಯಲ್ಲಿ ಹಾಕುವುದಕ್ಕೆ ಮೊದಲೇ ನ್ಯಾಯಾಲಯದ ಕಡತಗಳನ್ನು ನಾನು ನೋಡಬೇಕಾಗಿತ್ತು ಎಂದು ಅವರು ಅಭಿಪ್ರಾಯಪಡುವಂತಿದೆ. ನಾವು ಈ ಸುದ್ದಿಯನ್ನು ಸೃಷ್ಟಿಸಿದ್ದೇವೆಂದು ಅವರು ಹೇಳುವುದು ತಪ್ಪು. ಗಾಂಧೀಜಿಯನ್ನು ಮುಂದೆ ಗೋಡ್ಸೆ ಕೊಲ್ಲುತ್ತಾನೆ ಅದರಿಂದ ಅವನ ಹೆಸರನ್ನು ಈಗಲೇ Expose ಮಾಡಿಬಿಡೋಣ ಎಂದು ನಾವು ಈ ಸುದ್ದಿಯನ್ನು ಹರಿಯಬಿಟ್ಟೆವು ಎಂಬುದು ಕೃಷ್ಣಮೂರ್ತಿಗಳ ಗ್ರಹಿಕೆ ಇರಬಹುದು. ಇದು ವಿತಂಡವಾದ. ಆರ್‌ಎಸ್‌ಎಸ್ ರ‍್ಯಾಲಿಗೆ ಬರೆದೆ ಇದ್ದ, ಸ್ವಾಗತ ಸಮಿತಿ ಅಧ್ಯಕ್ಷರ ಅತಿಥಿಯಾಗಿ ಇರದೇ ಇದ್ದ ಗೋಡ್ಸೆ ಬಗೆಗೆ ಸುಳ್ಳು ಸುದ್ದಿ ಹಾಕುವ ಅಗತ್ಯವಾದರೂ ನನಗಾಗಲಿ, ನಮ್ಮ ಹಿರಿಯ ಭಾತ್ಮೀದಾರ ಎಚ್.ಎನ್ ನಾರಾಯಣರಾಯರಿಗಾಗಲಿ ಏನಿತ್ತು?

ನಾನು ಭಾರತ ಮಾತೆಯ ಆಣೆಮಾಡಿ ಹೇಳುತ್ತೇನೆ. ಈ ಸುದ್ದಿಯನ್ನು ಎಲ್ಲ ಇತರ ಸುದ್ದಿಗಳನ್ನು ಹಾಕುವಂತೆ ಸಹಜವಾಗಿ ಹಾಕಿದ್ದೇನೆ. News is sacred ಎಂಬುದು ಪತ್ರಿಕಾ ಧರ್ಮ. ಈ ಸುದ್ದಿಯನ್ನು ಹಾಕುವಾಗಲೂ ಅದೇ ಭಾವನೆಯಿಂದ ಹಾಕಿದ್ದೇವೆ. ಈ ಸುದ್ದಿಯನ್ನು ನಾವು ಸೃಷ್ಟಿಸಿಲ್ಲ. ಇದ್ದದ್ದನ್ನು ಇದ್ದಹಾಗೆ ಮುದ್ರಿಸಿದ್ದೆವು.


ಇದನ್ನು ಓದಿ: ಸುಳ್ಳು ಮತ್ತು ಸತ್ಯದ ಸಂಘರ್ಷ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಕುರಿತು ‘ನ್ಯಾಯಪಥ’ ವಿಶೇಷ ಸಂಚಿಕೆ


ಇನ್ನು ಗೋಡ್ಸೆ ಮತ್ತು ಇತರರು ನ್ಯಾಯಾಲಯದ ಮುಂದೆ ನುಡಿದಿರುವ ವಿಷಯ ಅವರು ಯಾವುದೋ ಕೃತ್ಯಗಳನ್ನು ಮುಚ್ಚಿಡಲು ಆ ತಾರೀಕುಗಳಲ್ಲಿ ದಿಲ್ಲಿಯ ಹೋಟೆಲ್‌ಗಳಲ್ಲಿ ಇದ್ದುದ್ದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ ಎರಡು ದಿನ ಬೇರೆ ಬೇರೆ ಹೋಟೆಲ್‌ಗಳಲ್ಲಿ ಇದ್ದುದ್ದಾಗಿಯೂ ಎರಡು ಕಡೆ ಹೆಸರು ಬದಲಿಸಿಕೊಂಡು ಒಂದೊಂದು ಹೋಟೆಲ್‌ನಲ್ಲಿ ಬೇರೆ-ಬೇರೆ ಹೆಸರುಗಳನ್ನು ನಮೂದಿಸಿರುವುದಾಗಿ ಹೇಳಿದ್ದಾರೆ. ಈ ಹುಟ್ಟು ಸುಳ್ಳುಗಾರರ ಮಾತನ್ನು ಹೇಗೆ ನಂಬುವುದು? ಇವರು ಹೇಳಿರುವುದೆಲ್ಲ ಸುಳ್ಳು ಎಂಬುದನ್ನು ನಮ್ಮ ಪತ್ರಿಕೆಯಲ್ಲಿನ ವರದಿ ಖಚಿತಪಡಿಸುತ್ತದೆ.

ನೀವು ಕೊಲೆಗಡುಕರ ಮಾತನ್ನೇ ನಂಬಬೇಕೆನ್ನುತ್ತೀರಿ. ನಿಸ್ಪೃಹರಾಗಿ ಪೌರವಾಣಿ ಪತ್ರಿಕೆ ನಡೆಸಿದವರನ್ನು ನಂಬುವುದಿಲ್ಲ ಅನ್ನುತ್ತೀರಿ. ನಿಮಗೆ ನಿಮ್ಮ ದೇವರು ಸದ್ಬುದ್ಧಿ ಕೊಡಲಿ ಎಂದು ಆಶಿಸುತ್ತೇನೆ. ರುಮಾಲೆ ಚನ್ನಬಸಯ್ಯನವರು ಗಾಂಧಿಯನ್ನು ಕೊಂದ ಗೋಡ್ಸೆ ಆರ್‌ಎಸ್‌ಎಸ್ ಎಂದು ತಾಯಿನಾಡು ಪತ್ರಿಕೆಯಲ್ಲಿ ಪ್ರಕಟಿಸಿದ್ದಕ್ಕಾಗಿ ಅಂದಿನ ನಗರ ಬಿಜೆಪಿ ಅಧ್ಯಕ್ಷರಾಗಿದ್ದ ಭೀಮಾಚಾರ್ಯರು ಮಾನನಷ್ಟ ಮೊಕದ್ದಮೆಯನ್ನು ಸಿ.ಒ ಮ್ಯಾಜಿಸ್ಟ್ರೇಟ್‌ ಕೋರ್ಟ್‌‌ನಲ್ಲಿ ಹಾಕಿದ್ದರು. ತುಮಕೂರಿನ ಕೆ.ರಂಗಯ್ಯಗಾರ್ ರುಮಾಲೆ ಪರವಾಗಿ ವಕೀಲಿಕೆ ವಹಿಸಿದ್ದರು. ನಾನು ಪೌರವಾಣಿ ಸಂಪಾದಕನಾಗಿ ಗೋಡ್ಸೆ ಬೆಂಗಳೂರಿನಲ್ಲಿ ನಡೆದ ಆರ್‌ಎಸ್‌ಎಸ್ ರ‍್ಯಾಲಿಗೆ ಬಂದಿದ್ದು, ಸ್ವಾಗತ ಸಮಿತಿಯ ಅಧ್ಯಕ್ಷರಾದ ಸುಪ್ರಸಿದ್ಧ ವಕೀಲರು ಆದ ಬೇಲಿವಾಸುದೇವಮೂರ್ತಿಯವರ ಆತಿಥ್ಯದಲ್ಲಿದ್ದ ಎಂಬುದನ್ನು ಪ್ರಕಟಿಸಿದ್ದೆ. ಆದ್ದರಿಂದ ಆ ಸುದ್ದಿಯಿದ್ದ ಪತ್ರಿಕೆಯ ಸಂಪುಟವನ್ನು ನ್ಯಾಯಾಲಯಕ್ಕೆ ಒಪ್ಪಿಸಿ, ನನ್ನ ಸಾಕ್ಷ್ಯ ನುಡಿದೆ. ನಾಲ್ಕಾರು ಹಿಯರಿಂಗ್‌ಗಳು ಆದವು. ಅಷ್ಟರಲ್ಲಿ ಬೆಂಗಳೂರಿನ ಮತ್ತೊಬ್ಬ ಸುಪ್ರಸಿದ್ಧ ವಕೀಲರಾದ ಎಸ್.ಕೆ. ವೆಂಕಟರಂಗಯ್ಯಗಾರರು ಮಧ್ಯಪ್ರವೇಶಿಸಿ ಭೀಮಾಚಾರ್ಯರಿಗೂ, ರುಮಾಲೆ ಚೆನ್ನಬಸವಯ್ಯನವರಿಗೂ ರಾಜಿ ಮಾಡಿಸಿ ಕೇಸನ್ನು ವಾಪಸ್ ತೆಗೆಸಿದ್ದರು. ನನ್ನ ಪೌರವಾಣಿ ಪತ್ರಿಕೆಯ ಸಂಪುಟ ನ್ಯಾಯಾಲಯದಲ್ಲಿಯೇ ಉಳಿಯಿತು. ಅಂದಿನ ಪೌರವಾಣಿ ಪತ್ರಿಕೆಯ ಪ್ರತಿ Information Department ನಲ್ಲಿ ಸಿಗಬಹುದು.

ಬೇಲಿ ವಾಸುದೇವಮೂರ್ತಿಯವರು ಭೀಮಾಚಾರ್ಯರ ಬೀಗರು ಎಂಬುದನ್ನೂ ನಾನು ತಿಳಿಸಬಯಸುತ್ತೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...