Homeಅಂಕಣಗಳುಗೋಡ್ಸೆ ಬೆಂಗಳೂರಿಗೆ ಬಂದ ಸುದ್ದಿಯೂ ಕೂಡಾ... ಪರ್ತಕರ್ತನಾಗಿ ನನ್ನ ಪಾಲಿಗೆ News is Sacred

ಗೋಡ್ಸೆ ಬೆಂಗಳೂರಿಗೆ ಬಂದ ಸುದ್ದಿಯೂ ಕೂಡಾ… ಪರ್ತಕರ್ತನಾಗಿ ನನ್ನ ಪಾಲಿಗೆ News is Sacred

- Advertisement -
- Advertisement -

ಹೋದವಾರದ ಸಂಚಿಕೆಯಲ್ಲಿ ದೊರೆಸ್ವಾಮಿ 38 ದಿನ ಸಂಪಾದಕನಾಗಿದ್ದ ಅಪ್ರಬುದ್ಧ ಪತ್ರಕರ್ತ ಎಂದು ಹೇಳಿರುವ ಬಾಬು ಕೃಷ್ಣಮೂರ್ತಿಯ ಬಾಯಿ ಮುಚ್ಚಿಸಿದ್ದೇನೆ.

ಈ ಲೇಖನದಲ್ಲಿ ಗಾಂಧಿ ಹಂತಕ ಗೋಡ್ಸೆ ವಿಚಾರದಲ್ಲಿ ಎರಡು ಮಾತು ಹೇಳಲು ಬಯಸುತ್ತೇನೆ. ಗೋಡ್ಸೆ ಗಾಂಧೀಜಿ ಹತ್ಯೆಗೆ ಮೊದಲು ಬೆಂಗಳೂರಿನಲ್ಲಿ ನಡೆದ ಆರ್‌ಎಸ್‌ಎಸ್ ರ‍್ಯಾಲಿಗೆ ಬಂದಿದ್ದ. ರ‍್ಯಾಲಿಯ ಸ್ವಾಗತ ಸಮಿತಿಯ ಅಧ್ಯಕ್ಷನಾಗಿದ್ದ ಸುಪ್ರಸಿದ್ದ ನ್ಯಾಯವಾದಿ ಬೇಲಿ ವಾಸುದೇವಮೂರ್ತಿಯವರ ಅತಿಥಿಯಾಗಿದ್ದ ಎಂದು ಪೌರವಾಣಿಯಲ್ಲಿ ವರದಿಯಾಗಿತ್ತು. ಅದನ್ನು ಪ್ರಶ್ನಿಸಿ ಬಾಬು ಕೃಷ್ಣಮೂರ್ತಿಯವರು ಗಾಂಧಿ ಹತ್ಯೆ ಸಂಬಂಧದಲ್ಲಿ ಬಂಧಿಗಳಾಗಿದ್ದ ಗೋಡ್ಸೆ ಮತ್ತು ನಾರಾಯಣ ನ್ಯಾಯಾಲಯದ ಮುಂದೆ ನೀಡಿರುವ ಹೇಳಿಕೆಯಲ್ಲಿ ತಾವು ಆ ದಿನಗಳಲ್ಲಿ ದೆಹಲಿಯ ಹೋಟೆಲ್‌ಗಳಲ್ಲಿ ಸುಳ್ಳು ಹೆಸರು ಬರೆಸಿ ವಾಸ್ತವ್ಯ ಮಾಡಿರುವುದಾಗಿ ಹೇಳಿದ್ದಾರೆ. ಆದ್ದರಿಂದ ಗೋಡ್ಸೆ ಆ ದಿನಗಳಲ್ಲಿ ಬೆಂಗಳೂರಿನಲ್ಲಿ ಇದ್ದಿದ್ದು ಸುಳ್ಳು ಎಂದು ಬಾಬು ಕೃಷ್ಣಮೂರ್ತಿ ಅಭಿಪ್ರಾಯಪಡುತ್ತಾರೆ.


ಇದನ್ನು ಓದಿ: ನಾನು ಪೌರವಾಣಿ ಪತ್ರಿಕೆಯ ಸಂಪಾದಕನಾಗಿದ್ದು ಹೇಗೆ? ದೊರೆಸ್ವಾಮಿಯವರ ನೆನಪುಗಳು…


 

ಗಾಂಧಿ ಹತ್ಯೆಗೆ ಎಷ್ಟೋ ಮೊದಲು ವರದಿಯಾಗಿರುವ ಸುದ್ದಿ ಇದು. ಈ ಸುದ್ದಿಯನ್ನು ಸೃಷ್ಟಿಸಿದ್ದೇವೆಂಬುದು ಬಾಬುವಿನ ಆಪಾದನೆ. ಈ ಸುದ್ದಿಯನ್ನು ಆ ದಿನ ಪೌರವಾಣಿ ಪತ್ರಿಕೆಯಲ್ಲಿ ಹಾಕುವುದಕ್ಕೆ ಮೊದಲೇ ನ್ಯಾಯಾಲಯದ ಕಡತಗಳನ್ನು ನಾನು ನೋಡಬೇಕಾಗಿತ್ತು ಎಂದು ಅವರು ಅಭಿಪ್ರಾಯಪಡುವಂತಿದೆ. ನಾವು ಈ ಸುದ್ದಿಯನ್ನು ಸೃಷ್ಟಿಸಿದ್ದೇವೆಂದು ಅವರು ಹೇಳುವುದು ತಪ್ಪು. ಗಾಂಧೀಜಿಯನ್ನು ಮುಂದೆ ಗೋಡ್ಸೆ ಕೊಲ್ಲುತ್ತಾನೆ ಅದರಿಂದ ಅವನ ಹೆಸರನ್ನು ಈಗಲೇ Expose ಮಾಡಿಬಿಡೋಣ ಎಂದು ನಾವು ಈ ಸುದ್ದಿಯನ್ನು ಹರಿಯಬಿಟ್ಟೆವು ಎಂಬುದು ಕೃಷ್ಣಮೂರ್ತಿಗಳ ಗ್ರಹಿಕೆ ಇರಬಹುದು. ಇದು ವಿತಂಡವಾದ. ಆರ್‌ಎಸ್‌ಎಸ್ ರ‍್ಯಾಲಿಗೆ ಬರೆದೆ ಇದ್ದ, ಸ್ವಾಗತ ಸಮಿತಿ ಅಧ್ಯಕ್ಷರ ಅತಿಥಿಯಾಗಿ ಇರದೇ ಇದ್ದ ಗೋಡ್ಸೆ ಬಗೆಗೆ ಸುಳ್ಳು ಸುದ್ದಿ ಹಾಕುವ ಅಗತ್ಯವಾದರೂ ನನಗಾಗಲಿ, ನಮ್ಮ ಹಿರಿಯ ಭಾತ್ಮೀದಾರ ಎಚ್.ಎನ್ ನಾರಾಯಣರಾಯರಿಗಾಗಲಿ ಏನಿತ್ತು?

ನಾನು ಭಾರತ ಮಾತೆಯ ಆಣೆಮಾಡಿ ಹೇಳುತ್ತೇನೆ. ಈ ಸುದ್ದಿಯನ್ನು ಎಲ್ಲ ಇತರ ಸುದ್ದಿಗಳನ್ನು ಹಾಕುವಂತೆ ಸಹಜವಾಗಿ ಹಾಕಿದ್ದೇನೆ. News is sacred ಎಂಬುದು ಪತ್ರಿಕಾ ಧರ್ಮ. ಈ ಸುದ್ದಿಯನ್ನು ಹಾಕುವಾಗಲೂ ಅದೇ ಭಾವನೆಯಿಂದ ಹಾಕಿದ್ದೇವೆ. ಈ ಸುದ್ದಿಯನ್ನು ನಾವು ಸೃಷ್ಟಿಸಿಲ್ಲ. ಇದ್ದದ್ದನ್ನು ಇದ್ದಹಾಗೆ ಮುದ್ರಿಸಿದ್ದೆವು.


ಇದನ್ನು ಓದಿ: ಸುಳ್ಳು ಮತ್ತು ಸತ್ಯದ ಸಂಘರ್ಷ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಕುರಿತು ‘ನ್ಯಾಯಪಥ’ ವಿಶೇಷ ಸಂಚಿಕೆ


ಇನ್ನು ಗೋಡ್ಸೆ ಮತ್ತು ಇತರರು ನ್ಯಾಯಾಲಯದ ಮುಂದೆ ನುಡಿದಿರುವ ವಿಷಯ ಅವರು ಯಾವುದೋ ಕೃತ್ಯಗಳನ್ನು ಮುಚ್ಚಿಡಲು ಆ ತಾರೀಕುಗಳಲ್ಲಿ ದಿಲ್ಲಿಯ ಹೋಟೆಲ್‌ಗಳಲ್ಲಿ ಇದ್ದುದ್ದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ ಎರಡು ದಿನ ಬೇರೆ ಬೇರೆ ಹೋಟೆಲ್‌ಗಳಲ್ಲಿ ಇದ್ದುದ್ದಾಗಿಯೂ ಎರಡು ಕಡೆ ಹೆಸರು ಬದಲಿಸಿಕೊಂಡು ಒಂದೊಂದು ಹೋಟೆಲ್‌ನಲ್ಲಿ ಬೇರೆ-ಬೇರೆ ಹೆಸರುಗಳನ್ನು ನಮೂದಿಸಿರುವುದಾಗಿ ಹೇಳಿದ್ದಾರೆ. ಈ ಹುಟ್ಟು ಸುಳ್ಳುಗಾರರ ಮಾತನ್ನು ಹೇಗೆ ನಂಬುವುದು? ಇವರು ಹೇಳಿರುವುದೆಲ್ಲ ಸುಳ್ಳು ಎಂಬುದನ್ನು ನಮ್ಮ ಪತ್ರಿಕೆಯಲ್ಲಿನ ವರದಿ ಖಚಿತಪಡಿಸುತ್ತದೆ.

ನೀವು ಕೊಲೆಗಡುಕರ ಮಾತನ್ನೇ ನಂಬಬೇಕೆನ್ನುತ್ತೀರಿ. ನಿಸ್ಪೃಹರಾಗಿ ಪೌರವಾಣಿ ಪತ್ರಿಕೆ ನಡೆಸಿದವರನ್ನು ನಂಬುವುದಿಲ್ಲ ಅನ್ನುತ್ತೀರಿ. ನಿಮಗೆ ನಿಮ್ಮ ದೇವರು ಸದ್ಬುದ್ಧಿ ಕೊಡಲಿ ಎಂದು ಆಶಿಸುತ್ತೇನೆ. ರುಮಾಲೆ ಚನ್ನಬಸಯ್ಯನವರು ಗಾಂಧಿಯನ್ನು ಕೊಂದ ಗೋಡ್ಸೆ ಆರ್‌ಎಸ್‌ಎಸ್ ಎಂದು ತಾಯಿನಾಡು ಪತ್ರಿಕೆಯಲ್ಲಿ ಪ್ರಕಟಿಸಿದ್ದಕ್ಕಾಗಿ ಅಂದಿನ ನಗರ ಬಿಜೆಪಿ ಅಧ್ಯಕ್ಷರಾಗಿದ್ದ ಭೀಮಾಚಾರ್ಯರು ಮಾನನಷ್ಟ ಮೊಕದ್ದಮೆಯನ್ನು ಸಿ.ಒ ಮ್ಯಾಜಿಸ್ಟ್ರೇಟ್‌ ಕೋರ್ಟ್‌‌ನಲ್ಲಿ ಹಾಕಿದ್ದರು. ತುಮಕೂರಿನ ಕೆ.ರಂಗಯ್ಯಗಾರ್ ರುಮಾಲೆ ಪರವಾಗಿ ವಕೀಲಿಕೆ ವಹಿಸಿದ್ದರು. ನಾನು ಪೌರವಾಣಿ ಸಂಪಾದಕನಾಗಿ ಗೋಡ್ಸೆ ಬೆಂಗಳೂರಿನಲ್ಲಿ ನಡೆದ ಆರ್‌ಎಸ್‌ಎಸ್ ರ‍್ಯಾಲಿಗೆ ಬಂದಿದ್ದು, ಸ್ವಾಗತ ಸಮಿತಿಯ ಅಧ್ಯಕ್ಷರಾದ ಸುಪ್ರಸಿದ್ಧ ವಕೀಲರು ಆದ ಬೇಲಿವಾಸುದೇವಮೂರ್ತಿಯವರ ಆತಿಥ್ಯದಲ್ಲಿದ್ದ ಎಂಬುದನ್ನು ಪ್ರಕಟಿಸಿದ್ದೆ. ಆದ್ದರಿಂದ ಆ ಸುದ್ದಿಯಿದ್ದ ಪತ್ರಿಕೆಯ ಸಂಪುಟವನ್ನು ನ್ಯಾಯಾಲಯಕ್ಕೆ ಒಪ್ಪಿಸಿ, ನನ್ನ ಸಾಕ್ಷ್ಯ ನುಡಿದೆ. ನಾಲ್ಕಾರು ಹಿಯರಿಂಗ್‌ಗಳು ಆದವು. ಅಷ್ಟರಲ್ಲಿ ಬೆಂಗಳೂರಿನ ಮತ್ತೊಬ್ಬ ಸುಪ್ರಸಿದ್ಧ ವಕೀಲರಾದ ಎಸ್.ಕೆ. ವೆಂಕಟರಂಗಯ್ಯಗಾರರು ಮಧ್ಯಪ್ರವೇಶಿಸಿ ಭೀಮಾಚಾರ್ಯರಿಗೂ, ರುಮಾಲೆ ಚೆನ್ನಬಸವಯ್ಯನವರಿಗೂ ರಾಜಿ ಮಾಡಿಸಿ ಕೇಸನ್ನು ವಾಪಸ್ ತೆಗೆಸಿದ್ದರು. ನನ್ನ ಪೌರವಾಣಿ ಪತ್ರಿಕೆಯ ಸಂಪುಟ ನ್ಯಾಯಾಲಯದಲ್ಲಿಯೇ ಉಳಿಯಿತು. ಅಂದಿನ ಪೌರವಾಣಿ ಪತ್ರಿಕೆಯ ಪ್ರತಿ Information Department ನಲ್ಲಿ ಸಿಗಬಹುದು.

ಬೇಲಿ ವಾಸುದೇವಮೂರ್ತಿಯವರು ಭೀಮಾಚಾರ್ಯರ ಬೀಗರು ಎಂಬುದನ್ನೂ ನಾನು ತಿಳಿಸಬಯಸುತ್ತೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಧರ್ಮದ ಕಾರಣಕ್ಕೆ ಹೈದರಾಬಾದ್ ಮೂಲದ ಮುಸ್ಲಿಂ ವ್ಯಕ್ತಿಗೆ ಹಲವು ಬಾರಿ ಇರಿತ: ಅಮೆರಿಕದ ಮಾಲ್‌ನಲ್ಲಿ ಕೃತ್ಯ

ಅಮೆರಿಕದ ಉತಾಹ್‌ನಲ್ಲಿರುವ ಶಾಪಿಂಗ್ ಮಾಲ್‌ನಲ್ಲಿ ಹೈದರಾಬಾದ್ ಮೂಲದ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಹಲವು ಬಾರಿ ಇರಿತದ ಆರೋಪ ಹೊರಿಸಲಾಗಿದೆ. ಹೈದರಾಬಾದ್‌ ನಗರದ ಟೋಲಿಚೌಕಿಯ ನಿವಾಸಿ ಸೈಯದ್ ಸೊಹೈಲ್ ಉದ್ದೀನ್, ಉತಾಹ್‌ನ ಸಾಲ್ಟ್ ಲೇಕ್ ಕೌಂಟಿಯ...

47 ವರ್ಷಗಳ ನಂತರ ಸಾಮೂಹಿಕ ಅತ್ಯಾಚಾರ ಪ್ರಕರಣದ ಶಿಕ್ಷೆ ಎತ್ತಿಹಿಡಿದ ಅಲಹಾಬಾದ್ ಹೈಕೋರ್ಟ್

1979 ರಲ್ಲಿ ನಡೆದಿದ್ದ ಅಪ್ರಾಪ್ತೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 71 ವರ್ಷದ ವ್ಯಕ್ತಿಯ ಶಿಕ್ಷೆಯನ್ನು ಅಲಹಾಬಾದ್ ಹೈಕೋರ್ಟ್ ಎತ್ತಿಹಿಡಿದಿದೆ. ಆದರೆ, ಕ್ರಿಮಿನಲ್ ಮೇಲ್ಮನವಿಯ 43 ವರ್ಷಗಳ ಸುದೀರ್ಘ ವಿಚಾರಣೆ ಮತ್ತು ಆತನ...

ಪಶ್ಚಿಮ ಬಂಗಾಳ: ಮುರ್ಷಿದಾಬಾದ್‌ನಲ್ಲಿ ಶಾಲಾ ವ್ಯಾನ್‌ಗೆ ರೈಲು ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳು ಸೇರಿ 3 ಮಂದಿ ಸಾವು

ಮುರ್ಷಿದಾಬಾದ್: ದೇಶದಲ್ಲಿ ರೈಲ್ವೆ ಸುರಕ್ಷತೆಯ ಕುರಿತು ಸರ್ಕಾರಗಳು ದೊಡ್ಡ ದೊಡ್ಡ ಭರವಸೆ ಹಾಗೂ ಯೋಜನೆಗಳನ್ನು ಮಂಡಿಸುತ್ತಿದ್ದರೂ, ತಳಮಟ್ಟದ ವಾಸ್ತವ ಮಾತ್ರ ಇಂದಿಗೂ ಅತ್ಯಂತ ಭೀಕರವಾಗಿದೆ ಎಂಬುದಕ್ಕೆ ಪಶ್ಚಿಮ ಬಂಗಾಳದಲ್ಲಿ ನಡೆದ ಈ ಘೋರ...

ವಿಜಯ್ ನೇತೃತ್ವದ ಟಿವಿಕೆ ಸರ್ಕಾರವನ್ನು ಅಸ್ಥಿರಗೊಳಿಸಲು ‘ಪ್ರಾಜೆಕ್ಟ್ ಮೇಘಾಲಯ’ ಸಂಚು ಆರೋಪ : ಪತ್ರಕರ್ತನ ವಿಚಾರಣೆ

ತಮಿಳುನಾಡಿನ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಶಾಸಕ ಎನ್. ಇಲೈಯರಾಜ ಅವರಿಗೆ ಹಣದ ಆಮಿಷವೊಡ್ಡಲು ಯತ್ನಿಸಿದ ಆರೋಪ ಪ್ರಕರಣ ಸಂಬಂಧ ಚೆನ್ನೈ ಪೊಲೀಸರು 'ಪುದಿಯಾ ತಲೈಮುರೈ' ವಾಹಿನಿಯ ಪತ್ರಕರ್ತ ವಿಜಯನ್...

ಜಂತರ್ ಮಂತರ್ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ...

E20 ಪೆಟ್ರೋಲ್ ಪ್ರಕರಣ : ‘ಗ್ರ್ಯಾಂಡ್ ವಿಟಾರಾ’ ಕಾರು ಬದಲಾಯಿಸಿ ಕೊಡಲು ಮಾರುತಿ ಸುಝುಕಿಗೆ ಗ್ರಾಹಕ ನ್ಯಾಯಾಲಯ ಆದೇಶ

ಛತ್ತೀಸ್‌ಗಢದ ರಾಯ್‌ಪುರದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು (ಡಿಸಿಡಿಆರ್‌ಸಿ), E20 ಇಂಧನ (ಪೆಟ್ರೋಲ್) ಬಳಕೆಯಿಂದಾಗಿ ಕಾರು ಕೆಟ್ಟುಹೋಗಿದೆ ಎಂದು ಆರೋಪಿಸಿದ ವ್ಯಕ್ತಿಗೆ ಹೊಸ 'ಗ್ರಾಂಡ್ ವಿಟಾರಾ' ಕಾರನ್ನು ನೀಡುವಂತೆ ಕಾರು ತಯಾರಿಕಾ...

ಸಿಜೆಪಿ ಶಾಂತಿಯುತ ಪ್ರತಿಭಟನೆಗೆ ನಿರಂತರ ಪೊಲೀಸ್ ಕಣ್ಗಾವಲು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಜನತಾ ಪಕ್ಷ (ಸಿಜೆಪಿ) ಆಯೋಜಿಸಿರುವ ಶಾಂತಿಯುತ ಧರಣಿ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವ ನಾಗರಿಕರ ಮೇಲೆ ದೆಹಲಿ ಪೊಲೀಸರು ನಿರಂತರ ಮತ್ತು ವ್ಯಾಪಕ ಕಣ್ಗಾವಲು...

IAS ಆಗುವ ಮುನ್ನ ‘ಪರಿಪೂರ್ಣ ತಾಯಿ’ಯಾಗಿ ಎಂದ ರಾಜ್ಯಪಾಲರ ಸಲಹೆ ಪುರುಷ ಪ್ರಾಧ್ಯಾನ್ಯತೆಯ ಮುಂದುವರೆದ ಆಚರಣೆ ಅಲ್ಲವೆ?

ಇತ್ತೀಚೆಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು, "ಮಹಿಳೆಯರು IAS ಅಧಿಕಾರಿ ಅಥವಾ ಶಿಕ್ಷಕಿಯಾಗುವ ಕನಸು ಕಾಣುವ ಮೊದಲು 'ಪರಿಣಿತ ತಾಯಿ' ಆಗುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದರು. ಕಾನ್ಪುರದ ಛತ್ರಪತಿ...

ಹಿಂದಿನ ಮದುವೆ, ಮಗು ವಿಚಾರ ಮುಚ್ಚಿಟ್ಟಿದ್ದಕ್ಕೆ ಸಹೋದರನೊಂದಿಗಿನ ಸಂಬಂಧ ಮುರಿದುಕೊಂಡಿದ್ದ ಕಾನೂನು ವಿದ್ಯಾರ್ಥಿನಿಯನ್ನು ಇರಿದು ಕೊಂದ ತಮ್ಮ

ಬೆಂಗಳೂರು: ಮೊದಲ ಮದುವೆ ಹಾಗೂ ಮಗುವಿದ್ದ ವಿಷಯವನ್ನು ಮುಚ್ಚಿಟ್ಟು ವಂಚಿಸಿದ್ದ ಪ್ರಿಯಕರನೊಂದಿಗಿನ ಸಂಬಂಧವನ್ನು ಮುರಿದುಕೊಂಡ ಕಾರಣಕ್ಕೆ, ಆತನ ಸಹೋದರನಿಂದಲೇ ಚಾಕು ಇರಿತಕ್ಕೊಳಗಾಗಿದ್ದ ಕಾನೂನು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ...

ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ಅಮೆರಿಕ ದಾಳಿಗೆ ಇರಾನ್‌ನಿಂದ ಪ್ರತೀಕಾರ

ಕಳೆದ ಗುರುವಾರ (ಜು.16) ಖುಜೆಸ್ತಾನ್ ಪ್ರಾಂತ್ಯದಲ್ಲಿರುವ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯು ನೆಲೆಗಳ ಮೇಲೆ ಇರಾನ್ ಪ್ರತಿದಾಳಿ...