Homeಕರ್ನಾಟಕಕೊರೋನಾಲಜಿ ಏನೆಂದು ಬಲ್ಲಿರಾ, ನೀವು ಬಲ್ಲಿರಾ?

ಕೊರೋನಾಲಜಿ ಏನೆಂದು ಬಲ್ಲಿರಾ, ನೀವು ಬಲ್ಲಿರಾ?

- Advertisement -
- Advertisement -

ಇದೇ ಎಪ್ರಿಲ್ 13 ನೇ ತಾರೀಕಿನಂಗ ವಿಶ್ವದಾಗ 18 ಲಕ್ಷ 95 ಸಾವಿರ ಜನರಿಗೆ ಕೊರೊನಾ ಸೋಂಕು ಹಬ್ಬೇದ. ಅದರಾಗ ಸುಮಾರು. 1 ಲಕ್ಷ 17 ಸಾವಿರ ಜನ ನಿಧನ ಹೊಂದಿದಾರ ಮತ್ತು ಸುಮಾರು 4 ಲಕ್ಷ 38 ಸಾವಿರ ಜನ ಆರಾಮಾಗಿದಾರ. ಹಿಂದೂಸ್ತಾನದಾಗ 9,635 ಜನರಿಗೆ ರೋಗ ಬಂದು 331 ಜನ ಸತ್ತಾರ. ಸತ್ತವರಿಗಿಂತ ಉಳದವರ ಸಂಖ್ಯ ಸುಮಾರು ನಾಲ್ಕು ಪಟ್ಟು ಅನ್ನೋದನ್ನ ನಾವು ಮರಿಯೋದು ಬ್ಯಾಡ.

ಆದರ ನಮ್ಮ ಭಾರತದಾಗ ಒಂದು ಮಜಾ ಆಗೇತಿ. ಸಿಂಧೂ ನದಿಯ ದೊಣ್ಣೆ ನಾಯಕರೂ, ಕೇಂದ್ರ ಗೃಹ ಸಚಿವರೂ ಆದ ಮಿತಿಯಿಲ್ಲದ ಮಹಿಪತಿ ಅಮಿತ ಷಾ ಅವರು ಇಲ್ಲಿಯವರೆಗೂ ಹೊರಗ ಕಾಣಿಸಿಕೊಂಡಿಲ್ಲ.

ಈ ಕೊರೋನಾದ ಬಗ್ಗೆ `ಕುಛ ಕರೋ ನಾ’ ಅಂತ ಅವರಿಗೆ ಅವರ ನಾಯಕರು ಹೇಳಿರಬಹುದು. ಅಥವಾ ಅವರಿಗೆ ಮೈಗೆ ಹುಷಾರಿಲ್ಲದಂಗ ಆಗಿರಬಹುದು. ಅಥವಾ ಅವರು ಸುಂಕದಕಟ್ಟಿಯೊಳಗ ಕುತಗೊಂಡು `ನಾನು ಎದ್ದು ಬಂದರ ನೋಡು’ ಅಂತ ಹೆದರಸೋ ಕುಂಟನಂಗ ಸುಮ್ಮನೇ ಕೂತಿರಬಹದು. ಏಲ್ಲಾ ಅಸ್ತ್ರಗಳು ಮುಗದ ಮ್ಯಾಲೆ ಬ್ರಹ್ಮಾಸ್ತ್ರ ಬರೋಹಂಗ ಅವರು ಸೈನ್ಯ, ಅರೆ ಸ್ಯನ್ಯ, ಪೊಲೀಸೋ, ಅರೆ ಪೊಲೀಸೋ, ಅವರ್ಯಾರು ಸಿಗಲಿಲ್ಲ ಅಂದರ ಕಡೀಕೆ ಪೊಲೀಗಳ ಸೈನ್ಯ ಕಟಗೊಂಡು ರೋಡಿಗೆ ಇಳಿಯಬಹುದು. ಹಂಗ ಮಾಡಿದರನ ನನಗೆ ಮುಂದ ಕಿರೀಟ ಸಿಗಬಹುದು ಅಂದುಕೊಂಡಿರಬಹುದು.

ಏನರ ಇರಲಿ.

ಅವರ ಮನಸಿನೊಳಗ ಪರಮನ ಪ್ರವೇಶ ಮಾಡಿದರ ಏನಿರಬಹುದು ಅಂತ ನೋಡಿದರ ಒಂದು ಕೊರೊನೋಲೋಜಿ ಸ್ಪಷ್ಟವಾಗಿ ಕಾಣತದ.
ನವಂಬರ ಎರಡನೇ ವಾರದೊಳಗ ಚೈನಾದ ವುಹಾನ ಪ್ರಾಂತದಾಗ ಕೊರೋನಾ ಬಂತು. ಮಾರವಾಡಿಗಳ ಮನಿ ದೇವರುಗಳಾದ ಚೀನಾದವರು “ಅದೇನು ಬರೇ ಫ್ಲೂ…ಪಿಸ್ಯಾ” ಅಂತ ಅಲಕ್ಷ ಮಾಡಿದರು. ಈ ಅಲಕ್ಷದಿಂದ ಎಪ್ರಿಲ ತನಕಾ ಲಕ್ಷ ಜನ ಜೀವ ಕಳಕೊಳ್ಳೋಹಂಗಾತು.

ಅದಾಗಿ ಒಂದು ತಿಂಗಳಿಗೆ ಚೈನಾದವರು ಅಮೇರಿಕದವರ ಜೊತಿಗಿ ವ್ಯಾಪಾರ ಒಪ್ಪಂದ ಮಾಡಿಕೊಂಡರು. ಅದರಾಗ `ದೇವರ ಕೈಚಳಕ’ ದಿಂದಾಗಿ ಏನರ ಅಮೇರಿಕಾ ಕಂಪನಿಗಳಿಗೆ ನಷ್ಟ ಆದರ ನಾವು ಜವಾಬುದಾರರಲ್ಲ ಅಂತ ಒಂದು ಸಾಲು ಹಾಕಿದರು.

ಅದಾಗಿ ಒಂದು ತಿಂಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರಾದ ಟೆಡ್ರೋಸ್ ಅಧಾನಾಮ ಅನ್ನೋ ಅರ್ಧ ಹೆಸರಿನ ಮನುಷ ಇದು ಪ್ರಾದೇಶಿಕ ಸಮಸ್ಯೆ. ಇದನ್ನ ಜಾಗತಿಕ ಸಮಸ್ಯೆ ಅನ್ನಲಿಕ್ಕೆ ನಾವು ತಯಾರು ಇಲ್ಲ ಅಂತಂದರು. ಇದರ ಮುಂದಿನ ತಿಂಗಳ ಏನೇನೂ ಆಗಲಿಲ್ಲ. ಬರೇ ಚೈನಾದ ಸುದ್ದಿ, ಅಲ್ಲಿನ ಸಾವು – ನೋವು ಇಷ್ಟ. ಬ್ಯಾರೆ ದೇಶದೊಳಗ ಅಂದರ ಇರಾನು- ಇರಾಕು- ಕೋರಿಯಾದಾಗ ಹಿಂಗದ – ಹಂಗದ ಅನ್ನೋ ಮಾತು. ಯುರೋಪಿನ – ಅಮೇರಿಕಾದ ಮಾತು ಬರಲಿಲ್ಲ.

ಫೆಬ್ರವರಿಯೊಳಗ ಇಟಲಿಯ ಸಾವಿನ ಸನ್ನಿ. ಅದಕ್ಕ ಹತ್ತಿಕೊಂಡ ಇದ್ದ ಇತರ ಯುರೋಪಿನ ದೇಶಗಳ ಬಗ್ಗೆ ಯಾರೂ ಮಾತಾಡಲಿಲ್ಲ. ನಾವು ಮಾತಾಡಲಿಲ್ಲ ಅಂದರ ವೈರಸ್ಸು ಏನು ಬಿಡತಾವ? ಅವು ಸಾವಿನ ಸೈನಿಕರಹಂಗ ಬೆನ್ನು ಹತ್ತಿ ಬಂದವು.

ಮಾರ್ಚಿನ್ಯಾಗಂತೂ ಸುದ್ದಿಯ ಹಂಗು ಇಲ್ಲದನ ಸಾವಿನ ಆಟ ಜೋರಾತು.

ಅದು ತೀರ ಕೈ ಮೀರಿ ಹೋದ ಮ್ಯಾಲೆ, ಮಾರ್ಚ 19 ಕ್ಕ ಘನ ಸರಕಾರ ವಿಮಾನ ನಿಲ್ದಾಣಗಳನ್ನ ಬಂದು ಮಾಡಿತು. ಜನವರಿಯಿಂದ ಮಾರ್ಚ ಒಳಗ ಸುಮಾರು 15 ಲಕ್ಷ ಜನ ಭಾರತದೊಳಗ ಹಾರಿಕೊಂಡು ಬಂದಾರ ಅಂತ ಕೇಂದ್ರ ವಿಮಾನಯಾನ ಕಾರ್ಯದರ್ಶಿ ಹೇಳಿದರು. ಅವರನ್ನ ಯಾರನ್ನೂ ಸರಿಯಾಗಿ ತಪಾಸಣೆ ಮಾಡಿಲ್ಲ. ಅವರೊಳಗ ಎಷ್ಟು ಮಂದಿಗೆ ಸೋಂಕು ಇತ್ತೋ, ಅವರು ಎಷ್ಟು ಮಂದಿಗೆ ಅದನ್ನ ಖುಷಿಯಿಂದ ಹಂಚಿದರೋ ಗೊತ್ತಿಲ್ಲ.

ಈಗ ಏನಾಗೇದ ಅಂದರ ನಮ್ಮ ಸುದ್ದಿ ಭಯೋತ್ಪಾದಕರು ತಬ್ಲೀಘಿ ಜಮಾತಿನವರನ್ನ ಕರೊನಾ ಜಿಹಾದಿಗಳು ಅಂತ ಹಣೆ ಪಟ್ಟಿ ಕಟ್ಟಿ ಬಿಟ್ಟಾರ. ಅವರು ಬೇಜವಾಬ್ದಾರಿಯಿಂದ ಇದ್ದಾರ, ಇಷ್ಟೆಲ್ಲಾ ಭಾನಗಡಿ ಇದ್ದರೂ ದೆಹಲಿಗೆ ಹೋದರು ಅನ್ನೋದು ಬ್ಯಾರೆ. ಆದರ ಅವರು ಬೇಕಂತ ಮಾಡಲಿಕ್ಕೆ ಹತ್ಯಾರ. ಬ್ಯಾರೆಯವರ ಜೀವ ತಗೀಲಿಕ್ಕೆ ಸೋಂಕು ಹಂಚಲಿಕ್ಕೆ ಹತ್ಯಾರ ಅಂತ ಅಪಪ್ರಚಾರ ನಡದದ.

ಸಾಮಾನ್ಯ ಜ್ಞಾನ ಇದ್ದವರು ಯಾರೂ ಇದನ್ನ ಒಪ್ಪಲಿಕ್ಕೆ ಸಾಧ್ಯ ಇಲ್ಲ. ಬ್ಯಾರೆ ಅವರಿಗೆ ಹಂಚಲಿಕ್ಕೆ ಸಂಚು ಮಾಡೋರು ತಮ್ಮವರನ್ನ ಮೂರುವರೆ ಸಾವಿರ ಜನರನ್ನ ದೆಹಲಿಯೊಳಗ ಒಂದ ಕಡೆ ಕೂಡಿಸಿ ಸೋಂಕು ಹಂಚಿಕೊಳತಿದ್ದರೇನು? ಹೋಗಲಿ ಅಲ್ಲಿಂದ ಬಂದ ಮ್ಯಾಲೆ ಅವರು ಯಾರಿಗೆ ಸೋಂಕಿಸಲಿಕ್ಕೆ ಹತ್ಯಾರ? ತಮ್ಮ ಕುಟುಂಬದವರನ್ನ- ನೆರೆ ಹೊರೆಯವರನ್ನ. ಅವರು ಮುಸ್ಲಿಮ ಕಾಲನಿ ಬಿಟ್ಟು ಬ್ಯಾರೆ ಕಡೆ ಮನಿ ಮಾಡಲಿಕ್ಕೆ ನಾವು ಅವರನ್ನ ಬಿಟ್ಟರಲ್ಲಾ ಅವರು ಹಂಗ ಮಾಡೋದು?

ದೆಹಲಿ ನಿಜಾಮುದ್ದಿನಿಗೆ ಹೋದವರನ್ನ ಹೆಂಗ ಹಿಡಕೊಂಡು ಹಿಡಕೊಂಡು ತಪಾಸಣೆ ಮಾಡಲಿಕ್ಕೆ ಹತ್ಯಾರಲ್ಲಾ ಹಂಗ ಬ್ಯಾರೆ ಜಾತ್ರೆ- ಮದುವಿ- ಹುಟ್ಟಿದ ಹಬ್ಬ- ಗುರುದ್ವಾರ- ಚರ್ಚು ಭಜನಿ ಯೊಳಗ ಸೇರಿಕೊಂಡವರನ್ನ ತಪಾಸಣೆ ಮಾಡಲಿಲ್ಲ.

ಪಂಜಾಬಿನ ಗುರುದ್ವಾರದೊಳಗ ಒಂದು ವಾರ ನಡೆದ ಕಾರ್ಯಕ್ರಮದಿಂದಾಗಿ 20 ಸಾವಿರ ಜನ ಕ್ವಾರಂಟೈನಿಗೆ ಒಳಗಾಗಿದಾರ. ಅದರಾಗ ಹಾಡಿದ ರಾಗಿ ಸಂತರೊಬ್ಬರು ತೀರಿಕೊಂಡು ಹೋದ ಮ್ಯಾಲೆ ಇದು ಬೆಳಕಿಗೆ ಬಂತು. ಇನ್ನು ಬ್ಯಾರೆ ಕಡೆ, ಇಡೀ ದೇಶದ ತುಂಬಾ ಎಷ್ಟು ಇಂಥಾ ಜನ ಜಂಗುಳಿ ಕಾರ್ಯಕ್ರಮ ಆಗ್ಯಾವೋ ಯಾವಾನಿಗೆ ಗೊತ್ತು? ಆದರ ನಮ್ಮ ಸರಕಾರದ ಹೆಕ್ಕಿ – ಹೆಕ್ಕಿ ತೆಗೆದ ನಿರ್ಧಾರಗಳಿಂದ ಬರೆ ಜಮಾತಿನವರನ್ನ ತಪಾಸಣೆ ಮಾಡಿ ಅವರಿಗೆ ಕೆಟ್ಟ ಹೆಸರು ಬರೋಹಂಗಾತು. ಇದು ಕೇಂದ್ರದ ಬೇಜವಾಬುದಾರಿ ಇರಬಹುದು, ಅಥವಾ ಅವರು ಬೇಕಂತ ಮಾಡಿರಬಹುದು. ಅದನ್ನ ಅವರೇ ಹೇಳಬೇಕು.

ಇಡೀ ವಿಶ್ವದೊಳಗ ಅತಿ ಕಡಿಮಿ ತಪಾಸಣೆ ನಡಿಯೋ ದೇಶ ಭಾರತ. ಒಂದು ನೂರಾ ಮೂವತ್ತು ಕೋಟಿ ಜನರ ತಪಾಸಣೆಗೆ 160 ಸರಕಾರಿ ಹಾಗೂ 50 ಖಾಸಗಿ ಪ್ರಯೋಗಾಲಯ ಅದಾವು. ಎಲ್ಲಾ ಸೇರಿ ಒಂದು ದಿನಕ್ಕ ಬರೇ 5,000 ತಪಾಸಣೆ ನಡೀಬಹುದು.

ದಕ್ಷಿಣ ಕರ್ನಾಟಕದಾಗ ಐದು ಇದ್ದರ ಉತ್ತರದಾಗ ಮೂರು. ಬಳ್ಳಾರಿ ಜಿಲ್ಲಾಧಿಕಾರಿ ಪ್ರಯೋಗಾಲಯದ ಪಿಸಿಆರ್ ಯಂತ್ರ ಖರೀದಿ ಮಾಡಿ ಇಟಗೊಂಡರ ಸಹಿತ ಅವರಿಗೆ ಜಲ್ದಿ ಪರವಾನಗಿ ಸಿಗಲಿಲ್ಲ. ಬೆಳಗಾವಿಯೊಳಗ ಕೇಂದ್ರ ಸರಕಾರದ ಪ್ರಯೋಗಾಲಯ, ಜವಾಹರಲಾಲ ನೆಹರೂ ವೈದ್ಯ ವಿಜ್ಞಾನ ಕಾಲೇಜಿನ ವರು ಕೇಳಿದರೂ ಸಹ ಪರವಾನಗಿ ಸಿಗಲಿಲ್ಲ.

ಈ ರೀತಿಯ ಚುನಾಯಿತ ತಪಾಸಣೆಯನ್ನ, ಧರ್ಮಾಧಾರಿತ ನಿರ್ಧಾರಗಳನ್ನ ವೈಜ್ಞಾನಿಕ ಅನ್ನಬೇಕೋ, ಹುಷಾರು ಅನ್ನಬೇಕೋ, ಕುತಂತ್ರ ಅನ್ನಬೇಕೋ? ಇದರ ಹಿಂದ ರಾಜಕೀಯ ಐತಿ ಅಂತೀರೋ, ಇಲ್ಲಾ ಅಂತೀರೋ?

ಆಳುವ ಪಕ್ಷದ ಚಾಣಕ್ಯ ನೀತಿಯನ್ನ ಕಂಡವರು ಮಾತ್ರ ಇದು ಅವರ ಮುಂದಿನ ಚುನಾವಣಾ ತಂತ್ರ ಅನಲಿಕ್ಕೆ ಹತ್ಯಾರ.

ಮೊದಲಿನ ಚುನಾವಣೆಗೆ ಜುಮಲಾ ಆತು ಎರಡನೇ ಚುನಾವಣೆಗೆ ಪುಲವಾಮಾ ಸಾಕಾತು. ಇನ್ನ ಇದು ಈ ಕೋರೋನಾ ಪುರಾಣ ಎಷ್ಟು ಖಾರಪುಡಿ- ಮಸಾಲೆ ಕುಟ್ಟಿ ಇಟ್ಟದ ಅಂದರ ಮುಂದೆ ಬರೋ ಎಲ್ಲಾ ಚುನಾವಣೆಗಳಿಗೆ ಇದು ಸಾಕಾಗತದ ಅಂತ ಅವರಿಗೆ ಅನಸತದ. ಹೌದೇ, ಮನೋಲ್ಲಾಸಿನಿ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಸಯನ್ಸ ಬಗ್ಗೆ ಕಮ್ಮಿ ತಿಳುವಳಕೆ ಇರುವ ತಬ್ಲಿಗಿ ಹಿಂಬಾಲಕನ್ನು ಮೀಡಿಯಾಗಳು ರುಬ್ಬಿದವೇ ಹೊರತು, ಹೆಚ್ವು ಕಲಿತು ಹೊರನಾಡುಗಳಿಂದ ಕರೋನಾ ಕರೆತಂದವರನ್ನಲ್ಲ.
    ಆಳ್ವಿಕೆಯ ಹೆಡ್ಡತನವನ್ನೂ ಬಯಲುಮಾಡಲಿಲ್ಲ.

LEAVE A REPLY

Please enter your comment!
Please enter your name here

- Advertisment -

ಆಂಧ್ರ ವಿಧಾನಸಭಾ ಸ್ಪೀಕರ್ ಅಯ್ಯಣ್ಣ ಪಾತ್ರುಡು ಅವರಿಂದ ದಲಿತ ವ್ಯಕ್ತಿಗೆ ಕಪಾಳಮೋಕ್ಷ: ವೈಎಸ್‌ಆರ್‌ಸಿಪಿ ವಾಗ್ದಾಳಿ

ಏಪ್ರಿಲ್ 3 ರ ಗುರುವಾರ ನರಸಿಪಟ್ಟಣದಲ್ಲಿ ದಲಿತ ವ್ಯಕ್ತಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಆಂಧ್ರಪ್ರದೇಶ ವಿಧಾನಸಭಾ ಸ್ಪೀಕರ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಅಯ್ಯಣ್ಣ ಪಾತ್ರುಡು ಅವರ ವಿರುದ್ಧ ವೈಎಸ್‌ಆರ್ ಕಾಂಗ್ರೆಸ್...

ಪ. ಬಂಗಾಳ | ಬಿಜೆಪಿ ಪ್ರಚಾರ ಸಾಮಗ್ರಿ ಸಜ್ಜುಗೊಳಿಸಿದ ವಿಡಿಯೋ ವೈರಲ್ : ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿ ಅಮಾನತು

ಬಿಜೆಪಿ ಪ್ರಚಾರ ಸಾಮಗ್ರಿಗಳನ್ನು ತಯಾರಿಸಲು ಸಹಾಯ ಮಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪಾಣಿಹಟಿ ವಿಧಾನಸಭಾ ಕ್ಷೇತ್ರದ ಅಧಿಕಾರಿಯೊಬ್ಬರನ್ನು ಚುನಾವಣಾ ಆಯೋಗ ಅಮಾನತುಗೊಳಿಸಿದೆ ಎಂದು ದಿ ಇಂಡಿಯನ್...

ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಅಸ್ಸಾಂ ಸಿಎಂ ಪತ್ನಿ ಬಳಿ 2 ಮುಸ್ಲಿಂ ದೇಶಗಳ ಪಾಸ್‌ಪೋರ್ಟ್ ಇದೆ : ಕಾಂಗ್ರೆಸ್ ಆರೋಪ

ಮತದಾನಕ್ಕೆ ಇನ್ನೇನು ಮೂರು ದಿನಗಳು ಬಾಕಿ ಇರುವಾಗ, ಅಸ್ಸಾಂನಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ವೈಯಕ್ತಿಕ ವಿಚಾರಗಳ ಕುರಿತ ವಾಗ್ಯುದ್ಧ ತಾರಕಕ್ಕೇರಿದೆ. ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ...

ದಟ್ಟಾರಣ್ಯದೊಳಗೆ ಮೂರು ದಿನಗಳನ್ನು ಕಳೆದಿದ್ದು ಹೇಗೆ..ದಾರಿ ತಪ್ಪಿದ ಬಳಿಕ ಏನಾಯ್ತು? ನಾಪತ್ತೆ ವಿಚಾರ ಬಿಚ್ಚಿಟ್ಟ ಶರಣ್ಯ

ಕಳೆದ ಗುರುವಾರ (ಏಪ್ರಿಲ್ 2, 2026) ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳದ ಯುವತಿ ಶರಣ್ಯ, ಮೂರು ದಿನಗಳ ಬಳಿಕ, ಅಂದರೆ ನಾಪತ್ತೆಯಾದ ನಾಲ್ಕನೇ ದಿನ ಭಾನುವಾರ (ಏಪ್ರಿಲ್ 4,...

ಮಗಳ ವಿಚ್ಛೇದನ: ಸಿಹಿ ಹಂಚಿ, ಮೆರವಣಿಗೆಯಲ್ಲಿ ಆಕೆಯನ್ನು ಮನೆಗೆ ಕರೆತಂದ ನೀವೃತ್ತ ನ್ಯಾಯಾದೀಶ ಮತ್ತು ಕುಟುಂಬ

ಮೀರತ್: ಕೌಟುಂಬಿಕ ನ್ಯಾಯಾಲಯದಲ್ಲಿ ಮಗಳ ವಿಚ್ಛೇದನ ಅಂತಿಮವಾದ ನಂತರ ಆಕೆಯನ್ನು ಡೋಲು, ನೃತ್ಯಗಳ ಮೆರವಣಿಗೆಯಲ್ಲಿ ಸಂಭ್ರಮದಿಂದ ತಂದೆ ಮನೆಗೆ ಕರೆತಂದ ಘಟನೆ ಮೀರನ್ ನಲ್ಲಿ ನಡೆದಿದೆ.  ಪೋಷಕರ ಬೆಂಬಲದ ಅಪರೂಪದ ಮತ್ತು ಹೃದಯಸ್ಪರ್ಶಿ ಪ್ರದರ್ಶನದಲ್ಲಿ,...

“ನೀನು ನಿಜವಾಗಿಯೂ ಅಂಬೇಡ್ಕರ್ ಮಗಳಾ ಎಂದು ತಿಳಿಯಲು ನಾವು ನಿನ್ನ ಡಿಎನ್‌ಎ ಟೆಸ್ಟ್ ಮಾಡುತ್ತೇವೆ” ದೆಹಲಿ ಸಭೆಯಲ್ಲಿ ದಲಿತ ಟ್ರಾನ್ಸ್ ಹೋರಾಟಗಾರ್ತಿ ಗ್ರೇಸ್ ಬಾನುಗೆ ಜಾತಿ ನಿಂದನೆ ಆರೋಪ

ಕೇಂದ್ರ ಸರ್ಕಾರದ ವಿವಾದಾತ್ಮಕ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026ರ ವಿರುದ್ಧ ಕಳೆದ ಕೆಲ ವಾರಗಳಿಂದ ಇಡೀ ಟ್ರಾನ್ಸ್‌ಜೆಂಡರ್ ಮತ್ತು ಪ್ರಗತಿಪರ ಸಮುದಾಯ ಪ್ರತಿಭಟನೆ ನಡೆಸುತ್ತಿದೆ. ಈ ನಡುವೆ ಶುಕ್ರವಾರ...

‘ಮೋದಿ ಕ್ರಿಶ್ಚಿಯನ್ ಸಂಸ್ಥೆಗಳಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ’: ಎಫ್‌ಸಿಆರ್‌ಎ ತಿದ್ದುಪಡಿ ಕುರಿತು ಮಲ್ಲಿಕಾರ್ಜುನ ಖರ್ಗೆ

ಇಡುಕ್ಕಿ (ಕೇರಳ): ಸಾರ್ವಜನಿಕ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರದಲ್ಲಿ ಕೆಲಸ ಮಾಡುವ ಕ್ರಿಶ್ಚಿಯನ್ ಸಂಸ್ಥೆಗಳು, ಎನ್‌ಜಿಒಗಳು ಮತ್ತು ನಾಗರಿಕ ಸಮಾಜದ ಮೇಲೆ ದಾಳಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಎಫ್‌ಸಿಆರ್‌ಎ (ವಿದೇಶಿ ದೇಣಿಗೆ...

ವೈದ್ಯಕೀಯ, ತಾಂತ್ರಿಕ ಶಿಕ್ಷಣದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಿಸಿದ ಒಡಿಶಾ ಸರ್ಕಾರ, ಒಬಿಸಿ ವಿದ್ಯಾರ್ಥಿಗಳಿಗೆ ಹೊಸ ಕೋಟಾ

ಮಹತ್ವದ ನಿರ್ಧಾರ ಕೈಗೊಂಡಿರುವ ಒಡಿಶಾ ಸರ್ಕಾರ, ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಇತರ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ಕೋರ್ಸ್‌ಗಳಲ್ಲಿ ಪರಿಶಿಷ್ಟ ಪಂಗಡ (ಎಸ್‌ಟಿ), ಪರಿಶಿಷ್ಟ ಜಾತಿ (ಎಸ್‌ಸಿ) ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ಗಣನೀಯವಾಗಿ ಹೆಚ್ಚಿಸಿದೆ....

ಶಾಲಾ ವಾರ್ಷಿಕೋತ್ಸವದಲ್ಲಿ ಲವಲವಿಕೆಯಿಂದ ಭಾಗವಹಿಸಿದ್ದ 6 ಮಕ್ಕಳು, ತಡರಾತ್ರಿ ಹೊತ್ತಿಗೆ ಶವವಾದರು : ಮಹಾರಾಷ್ಟ್ರದಲ್ಲೊಂದು ಹೃದಯ ವಿದ್ರಾವಕ ಘಟನೆ

ಶಾಲಾ ವಾರ್ಷಿಕೋತ್ಸವದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದ್ದ ಆರು ಮಂದಿ ಮಕ್ಕಳು, ತಡ ರಾತ್ರಿ ಹೊತ್ತಿಗೆ ಶವವಾದ ಹೃದಯ ವಿದ್ರಾವಕ ಘಟನೆಯೊಂದು ಮಹಾರಾಷ್ಟ್ರದ ದಿಂಡೋರಿಯಲ್ಲಿ ಶುಕ್ರವಾರ (ಏ.3) ನಡೆದಿದೆ. ನಾಸಿಕ್‌ ನಗರದಿಂದ 20 ಕಿಲೋ...

ಕೇರಳ: ಕೊಲ್ಲಂನಲ್ಲಿ ಟಿವಿ ಚಾನೆಲ್ ಕಚೇರಿ ಮೇಲೆ ಸ್ಫೋಟಕ ವಸ್ತು ಎಸೆತ

ಕೊಲ್ಲಂ: ಇಲ್ಲಿನ ಟಿವಿ ಚಾನೆಲ್ ಒಂದರ ಕಚೇರಿಯ ಮೇಲೆ ಭಾನುವಾರ ಬೆಳಿಗ್ಗೆ ಸ್ಫೋಟಕ ವಸ್ತು ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆ ಪ್ರದೇಶ ಮತ್ತು ಚಾನೆಲ್ ಕಚೇರಿಯ ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರು...