Homeಮುಖಪುಟವಿಚ್ಛಿದ್ರಕಾರಿ ಅಜೆಂಡಾ ತಡೆಯಲು ಮುಂದಾಗಿ: ಮೋದಿಗೆ ನೌಕಾಪಡೆ ಮಾಜಿ ಮುಖ್ಯಸ್ಥ ಎಲ್. ರಾಮದಾಸ್ ಪತ್ರ

ವಿಚ್ಛಿದ್ರಕಾರಿ ಅಜೆಂಡಾ ತಡೆಯಲು ಮುಂದಾಗಿ: ಮೋದಿಗೆ ನೌಕಾಪಡೆ ಮಾಜಿ ಮುಖ್ಯಸ್ಥ ಎಲ್. ರಾಮದಾಸ್ ಪತ್ರ

ಅಂತರರಾಷ್ಟ್ರೀಯ ಸಮುದಾಯವು ಕೋವಿಡ್ ವಿರುದ್ಧ ಭಾರತದ ಪ್ರಯತ್ನಗಳನ್ನು ನಿಕಟವಾಗಿ ಗಮನಿಸುತ್ತಿರುವ ಹೊತ್ತಿನಲ್ಲಿ- ಮಾಹಿತಿ ತಂತ್ರಜ್ಞಾನವನ್ನು ಬಳಸುವ ಕೆಲವರು ಹರಡುತ್ತಿರುವ ಸುಳ್ಳು ಸುದ್ದಿಗಳು ಮತ್ತು ಕಿಡಿಗೇಡಿತನದ ಅಪಪ್ರಚಾರಗಳು ಭಾರತಕ್ಕೆ ಶ್ರೇಯವನ್ನು ತರುವುದಿಲ್ಲ.

- Advertisement -
- Advertisement -

ಕೊರೋನಾ ವಿರುದ್ಧದ ಹೋರಾಟದ ಹೊತ್ತಿನಲ್ಲಿ ವಿಚ್ಛಿದ್ರಕಾರಿ ಅಜೆಂಡಾಗಳು ಸುಳ್ಳು ಸುದ್ದಿಗಳಾಗಿ ಮುನ್ನೆಲೆಗೆ ಬರುತ್ತಿದ್ದು ಅವುಗಳನ್ನು ತಡೆಯುವಂತೆ ಭಾರತದ ನೌಕಾಪಡೆ ಮಾಜಿ ಮುಖ್ಯಸ್ಥ ಎಲ್. ರಾಮದಾಸ್‌ರವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಅದರ ಕನ್ನಡ ಅನುವಾದ ಇಲ್ಲಿದೆ.

ನನ್ನ ನೆಚ್ಚಿನ ಪ್ರಧಾನ ಮಂತ್ರಿಯವರೇ,

ಎಪ್ರಿಲ್ 14, 2020ರಂದು ಅಂಬೇಡ್ಕರ್ ಜಯಂತಿಯ ದಿನ ರಾಷ್ಟ್ರೀಯ ಟೆಲಿವಿಷನ್‌ನಲ್ಲಿ ರಾಷ್ಟ್ರವನ್ನುದ್ದೇಶಿಸಿ ನೀವು ಮಾಡಿದ ಭಾಷಣವನ್ನು ನಾನು ಅತ್ಯಾಸಕ್ತಿಯಿಂದ ಕೇಳಿದೆ.

ಆದರೆ, ಉಳಿದವರಂತೆ ನಾನು ಕೂಡಾ- ತಮ್ಮ ತಮ್ಮ ಕೆಲಸದ ಸ್ಥಳಗಳಿಂದ ಹೊರತಳ್ಳಲ್ಪಪಟ್ಟಿರುವ ಲಕ್ಷಾಂತರ ಕಾರ್ಮಿಕರು –  ಒಂದೋ ಒತ್ತಾಯಪೂರ್ವಕವಾಗಿ  ನಗರಗಳಲ್ಲಿರುವ ತಮ್ಮತಮ್ಮ ಕೆಲಸದ ಸ್ಥಳಗಳಲ್ಲಿಯೇ ಉಳಿದುಕೊಳ್ಳುವ ಅನಿವಾರ್ಯತೆಗೆ ಒಳಗಾಗಿರುವವವರು; ಅಥವಾ ತಮ್ಮ ಕುಟುಂಬದವರನ್ನು ಸೇರಿಕೊಳ್ಳಲು ನೂರಾರು ಕಿ.ಮೀ. ದೂರದಲ್ಲಿರುವ ಮನೆಗಳಿಗೆ ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳೆಸಿದ ಕಾರ್ಮಿಕರನ್ನು ನೋಡಿಕೊಳ್ಳುವ ಸಲುವಾಗಿ ಸರಕಾರ ಯಾವೆಲ್ಲಾ ಕ್ರಮಗಳನ್ನು ಹಾಗೂ ಯೋಜನೆಗಳನ್ನು ಹಾಕಿಕೊಂಡಿದೆ ಎಂಬ ಕುರಿತು ಇನ್ನಷ್ಟು ನಿರ್ದಿಷ್ಟವಾದ ಮಾಹಿತಿಯನ್ನು ನೀವು ನಮಗೆ ಒದಗಿಸುತ್ತೀರಿ ಎಂದು ಆಶಿಸುತ್ತಿದ್ದೆ, ನಿರೀಕ್ಷಿಸುತ್ತಿದ್ದೆ.

ನಾವು ಮಾಧ್ಯಮದಲ್ಲಿ ನೋಡುತ್ತಿರುವ ವರದಿಗಳು ಮತ್ತು ಪ್ರತ್ಯಕ್ಷ ವರದಿಗಳಿಂದ ಅವರ ಸಂಕಷ್ಟ ಹೃದಯ ಒಡೆಯುವಂತದ್ದಾಗಿದೆ ಮತ್ತು ನಾವು ಊಹಿಸಬಹುದಾದುದಕ್ಕಿಂತಲೂ ತೀರಾ ಕೆಟ್ಟದಾಗಿದೆ ಎಂದು ಗೊತ್ತಾಗುತ್ತಿದೆ.

ನಾನು ಮಾರ್ಚ್ 27ರಂದು ಮಾನನೀಯ ರಕ್ಷಣಾ ಸಚಿವರು, ಮುಖ್ಯ ರಕ್ಷಣಾ ಕಾರ್ಯದರ್ಶಿಯವರು, ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಮುಖ್ಯಸ್ಥರಿಗೆ ಪ್ರತಿಗಳನ್ನು ಲಗತ್ತಿಸಿ ನಿಮಗೆ ಬರೆದಿದ್ದ ಹಿಂದಿನ ಪತ್ರ ನಿಮಗೆ ನೆನಪಿರಬಹುದು. ಸಶಸ್ತ್ರ ಪಡೆಗಳು ಹೊಂದಿರುವ ಅಗಾಧ ಮಾನವ ಶಕ್ತಿ, ಅದಕ್ಕೂ ಮಿಗಿಲಾಗಿ ಅವರು ಅಖಿಲ ಭಾರತ ಮಟ್ಟದಲ್ಲಿ ಹೊಂದಿರುವ ಅಸ್ತಿತ್ವವನ್ನು- ನಾಗರಿಕ ಆಡಳಿತ ನೆರವಿಗಾಗಿ ಮನವಿ ಸಲ್ಲಿಸುವುದಕ್ಕೆ ಮುನ್ನವೇ- ಸ್ಥಳೀಯ ಆಡಳಿತಕ್ಕೆ ನೆರವಾಗುವ ಸಲುವಾಗಿ ಬಳಸಿಕೊಳ್ಳಬಹುದು ಎಂದು ನಾನು ಸಲಹೆ ಮಾಡಿದ್ದೆ.

ಇಂತಹ “ನಾಗರಿಕ ಅಧಿಕಾರಕ್ಕೆ ನೆರವು” ಎಂಬುದನ್ನು “ನಾಗರಿಕ ಪ್ರಾಧಿಕಾರ ವ್ಯವಸ್ಥೆಗೆ ನೆರವು” ಎಂಬುದಾಗಿ ಅರ್ಥ ಮಾಡಿಕೊಳ್ಳಬೇಕು. ಇಂತಹಾ ನೆರವನ್ನು ಹಲವು ರೀತಿಗಳಲ್ಲಿ ನೀಡಲು ಸಾಧ್ಯವಿದೆ. ದೊಡ್ಡ ಸಂಖ್ಯೆಯ ಸಂಚಾರ, ಸಾರಿಗೆಯಲ್ಲಿ ನೆರವಾಗುವುದರಿಂದ ಹಿಡಿದು, ಸಮುದಾಯ ಅಡುಗೆಮನೆ ಮತ್ತು ಆಹಾರ ವಿತರಣೆಯನ್ನು ನಿರ್ವಹಿಸುವುದು, ಅಥವಾ ವಿಸ್ತೃತವಾದ ಆಸ್ಪತ್ರೆಗಳಿಗೆ ಮೂಲಸೌಕರ್ಯ ನಿರ್ಮಾಣ ಮಾಡುವುದು, ಆರೋಗ್ಯ ಸೇವಾ ಸಿಬ್ಬಂದಿಯನ್ನು ಒದಗಿಸುವುದರ ತನಕ- ನಮ್ಮ ನಾಗರಿಕರಿಗೆ ಈಗ ಸಿಗುತ್ತಿರುವ ಸೇವೆಗಳನ್ನು ಬಲಪಡಿಸಲು ಬಳಸಿಕೊಳ್ಳಬಹುದು ಎಂದು ನಾನು ಹೇಳಿದ್ದೆ.

ಆಹಾರ ಧಾನ್ಯಗಳನ್ನು ಜಿಲ್ಲಾ ಆಡಳಿತಗಳು ಪೂರೈಕೆ ಮಾಡಬಹುದು ಮತ್ತು ಭಾರತೀಯ ಆಹಾರ ನಿಗಮ (ಎಫ್‌ಸಿಐ)ದಲ್ಲಿ ಬಿದ್ದುಕೊಂಡಿರುವ ಭಾರೀ ಪ್ರಮಾಣದ ಮಿಗತೆ ಆಹಾರ ಧಾನ್ಯಗಳನ್ನು ಪಡೆದು ಬಳಸಿಕೊಳ್ಳಲು ಅವುಗಳಿಗೆ ಅಧಿಕಾರ ನೀಡಬೇಕು ಎಂದೂ ನಾನು ಸಲಹೆ ಮಾಡಿದ್ದೆ. ಎಲ್ಲಾ ಲಭ್ಯ ಲೆಕ್ಕಾಚಾರಗಳ ಪ್ರಕಾರ ನಮ್ಮ ಆಹಾರದ ಮಿಗತೆ ದಾಸ್ತಾನು ಯಾವುದೇ ತುರ್ತು ಸ್ಥಿತಿಗೆ ಅಗತ್ಯ ಇರುವುದಕ್ಕಿಂತ ಹೆಚ್ಚುಕಡಿಮೆ ಮೂರು ಪಟ್ಟು ಹೆಚ್ಚು ಇದೆ.

ಪ್ರಸ್ತುತ ಸ್ಥಿತಿಯು ಅತ್ಯಂತ ಗಂಭೀರ ಸ್ಥಿತಿಗಿಂತಲೂ ಗಂಭೀರವಾಗಿದೆ ಎಂದು ನೀವು ನನ್ನೊಂದಿಗೆ ಒಪ್ಪಿಕೊಳ್ಳುತ್ತೀರಿ. ಅದೆಂದರೆ, ಹಠಾತ್ತಾಗಿ ಹೇರಿದ ಲಾಕ್‌ಡೌನ್‌ನ ಪರಿಣಾಮವಾಗಿ ಹುಟ್ಟಿಕೊಂಡ ಹಲವಾರು ಸಂಕೀರ್ಣ ಪರಿಸ್ಥಿತಿಗಳು ನಿರ್ಮಿಸಿದ ಸಾಮೂಹಿಕ ಹಸಿವಿನ ಘೋರ ಪರಿಸ್ಥಿತಿ. ಅತ್ಯಂತ ಅಗತ್ಯವಿರುವವರಿಗೆ, ರೇಷನ್ ಕಾರ್ಡು ಇದ್ದರೂ, ಇಲ್ಲದಿದ್ದರೂ ಈ ಆಹಾರ ದಾಸ್ತಾನು ಲಭ್ಯವಾಗುವಂತೆ ಮಾಡದಿದ್ದರೆ ಅದು- ಅತ್ಯಂತ ತೀವ್ರವಾದ ಅಗತ್ಯದ ಸಂದರ್ಭದಲ್ಲಿಯೂ ಅತ್ಯಂತ ಜೀವನಾವಶ್ಯಕ ವಸ್ತುಗಳನ್ನು ಕಳ್ಳದಾಸ್ತಾನು ಮಾಡುವುದಕ್ಕೆ ಸಮನಾಗುತ್ತದೆ.


ಇದನ್ನೂ ಓದಿ: ಪಾದರಾಯನಪುರದಲ್ಲಿ ನಡೆದದ್ದೇನು? ಏನು ಕಾರಣ? ಸಂಪೂರ್ಣ ವಿವರಗಳು


ಸಶಸ್ತ್ರ ಪಡೆಗಳು ಈಗಾಗಲೇ ಆರೋಗ್ಯ ಸೇವೆ, ಔಷಧಿ, ಕ್ವಾರಂಟೈನ್ ಕೇಂದ್ರಗಳು, ಹೆಚ್ಚುವರಿ ಹಾಸಿಗೆ ಇತ್ಯಾದಿ ಕ್ಷೇತ್ರಗಳಲ್ಲಿ ತಳಮಟ್ಟದ ಸೇವೆಯನ್ನು ನೀಡುತ್ತಿವೆ ಎಂದು ನನಗೆ ತಿಳಿದಿದೆ. ಇದು ಅತ್ಯುತ್ತಮ ಸೇವಾ ಸಂಪ್ರದಾಯಕ್ಕೆ ಅನುಗುಣವಾಗಿದೆ. ಎಲ್ಲಾ ಸಮಯಗಳಲ್ಲಿ ಕಾರ್ಯಾಚರಣೆಯ ಸಿದ್ಧತೆಯನ್ನು ಕಾಯ್ದುಕೊಳ್ಳುವುದರ ಜೊತೆಗೆ, ಈ ಪಿಡುಗನ್ನು ಎದುರಿಸುವುದರಲ್ಲಿ ರಕ್ಷಣಾ ಸಚಿವಾಲಯದಲ್ಲಿರುವ ನಿಮ್ಮ ತಂಡ ತೀವ್ರವಾದ ಒತ್ತಡದಲ್ಲಿದೆ ಎಂದೂ ನಾನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೇನೆ.

ಹಲವಾರು ರಾಜ್ಯ ಮತ್ತು ಜಿಲ್ಲಾಡಳಿತಗಳು ಮತ್ತು ಸರಕಾರೇತರ ಸಂಘಟನೆಗಳು, ಹಲವಾರು ನಾಗರಿಕ ಸಂಘಟನೆಗಳು, ಧಾರ್ಮಿಕ ಸಂಸ್ಥೆಗಳು ಕೂಡಾ ಮಾಡುತ್ತಿರುವ ಅತ್ಯುತ್ಕೃಷ್ಟ ಸೇವೆಯನ್ನು ನಾನು ಶ್ಲಾಘಿಸುತ್ತೇನೆ. ಈಗ ನಾವು ಎದುರಿಸುತ್ತಿರುವ ಸಮಸ್ಯೆಯ ಪ್ರಮಾಣ ಹಿಂದೆಂದೂ ಎದುರಾಗದಿರುವಂತದ್ದು ಎಂದು ಕೂಡಾ ನಾನು ಹಿಂದೆ ಉಲ್ಲೇಖಿಸಿದ್ದೆ. ಆದುದರಿಂದ, ನಮ್ಮ ಪ್ರತಿಕ್ರಿಯೆ ಕೂಡಾ ಅದೇ ರೀತಿಯಲ್ಲಿ ಇರಬೇಕು.

ನಾನೊಬ್ಬ ನೌಕಾಪಡೆಯ ಮಾಜಿ ಮುಖ್ಯಸ್ಥನಾಗಿದ್ದು, ಭಾರತವು ಸ್ವತಂತ್ರವಾದ ಸ್ವಲ್ಪ ಸಮಯದ ಬಳಿಕ 1949ರಲ್ಲಿ ಭಾರತೀಯ ಸಶಸ್ತ್ರ ಪಡೆ (ನೌಕಾಪಡೆ) ಸೇರಿದ್ದೆ. ರಾಷ್ಟ್ರಪಿತನ ಹತ್ಯೆಯ ಬಳಿಕ ಅಷ್ಟೊಂದು ಜನರು ಅನುಭವಿಸಿದ ಆಘಾತ ನನಗೆ ಇಂದಿಗೂ ನೆನಪಿದೆ. ಇಂತಹ ಒಂದು ಆಘಾತಕಾರಿ ಘಟನೆಯ ಬಳಿಕವೂ- ನಾವು, ಭಾರತೀಯ ಜನರು, ಬಾಬಾ ಸಾಹೇಬ್ ಅಂಬೇಡ್ಕರರ ನಾಯಕತ್ವದಲ್ಲಿ ನಮ್ಮ ಸಂವಿಧಾನವನ್ನು ಅಂಗೀಕರಿಸಿ ಆನಂದತುಂದಿಲರಾಗಿದ್ದೆವು. ಭಾರತದ ಎಲ್ಲಾ ಜನರ ನಡುವಿನ ಸಮಾನತೆಯ ಈ ದರ್ಶನವೇ ಭಾರತೀಯ ಸಶಸ್ತ್ರ ಪಡೆಗಳಲ್ಲಿದ್ದ ನಮ್ಮೆಲ್ಲರಿಗೂ ದಾರಿತೋರುವ ಬೆಳಕಾಗಿದ್ದುದು.

ನಮ್ಮ ಸಮಾಜದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ, ಧರ್ಮದ ಬಳಕೆ ಮತ್ತು ದುರ್ಬಳಕೆ, ದ್ವೇಷಕಾರುವ ಮಾತುಗಳು, ಅಲ್ಪಸಂಖ್ಯಾತರನ್ನು, ಅದರಲ್ಲೂ ಮುಸ್ಲಿಮರನ್ನು ಗುರಿಮಾಡುತ್ತಿರುವುದು, ನಮ್ಮ ಸಶಸ್ತ್ರ ಪಡೆಗಳಲ್ಲಿರುವ ಅನೇಕರು ಕೂಡಾ ಮುಸ್ಲಿಮರು ಎಂಬುದನ್ನು ಮರೆಯುತ್ತಿರುವುದು- ಮುಂತಾದವುಗಳನ್ನು ಆಳವಾದ ಆತಂಕ ಮತ್ತು ದುಃಖದಿಂದ ನಾನು ನೋಡುತ್ತಿದ್ದೇನೆ. ಕೊರೋನ ವೈರಸ್/ ಕೋವಿಡ್-19 ಉಂಟುಮಾಡಿರುವ ಈ ದುರಂತಕಾರಿ ಪಿಡುಗನ್ನು ಸಾಮೂಹಿಕವಾಗಿ, ನಮ್ಮ ಅಧೀನದಲ್ಲಿರುವ ಎಲ್ಲಾ ಸಂಪನ್ಮೂಲಗಳನ್ನು ಬಳಸಿ, ಎಲ್ಲಾ ಜನವಿಭಾಗ, ಧರ್ಮ ಮತ್ತು ಸಮುದಾಯಗಳನ್ನು ಜೊತೆಗೆ ಕೊಂಡೊಯ್ಯುವುದರ ಮೂಲಕ ಎದುರಿಸಬೇಕಾಗಿದೆ.

ಅಂತರರಾಷ್ಟ್ರೀಯ ಸಮುದಾಯವು ಕೋವಿಡ್ ವಿರುದ್ಧ ಭಾರತದ ಪ್ರಯತ್ನಗಳನ್ನು ನಿಕಟವಾಗಿ ಗಮನಿಸುತ್ತಿರುವ ಹೊತ್ತಿನಲ್ಲಿ- ಮಾಹಿತಿ ತಂತ್ರಜ್ಞಾನವನ್ನು ಬಳಸುವ ಕೆಲವರು ಹರಡುತ್ತಿರುವ ಸುಳ್ಳು ಸುದ್ದಿಗಳು ಮತ್ತು ಕಿಡಿಗೇಡಿತನದ ಅಪಪ್ರಚಾರಗಳು ಭಾರತಕ್ಕೆ ಶ್ರೇಯವನ್ನು ತರುವುದಿಲ್ಲ.

ಪ್ರಧಾನ ಮಂತ್ರಿ ‘ಜೀ’, ನೀವು ಮತ್ತೆಮತ್ತೆ ಭಾರತದ ಸಂವಿಧಾನ ಮತ್ತು ಅದರಲ್ಲಿ ಅಡಕವಾಗಿರುವ ನ್ಯಾಯ, ಸಮಾನತೆ, ಸ್ವಾತಂತ್ರ್ಯಗಳ- ಚುಟುಕಾಗಿ “ವಸುಧೈವ ಕುಟುಂಬಕಂ” ಎಂಬ ಮೌಲ್ಯದ ಮೇಲೆ ನಂಬಿಕೆ ವ್ಯಕ್ತಪಡಿಸಿದ್ದೀರಿ. ಧರ್ಮ, ಜಾತಿ, ಜನಾಂಗ, ವರ್ಗ ಅಥವಾ ಉದ್ಯೋಗದ ಆಧಾರದಲ್ಲಿ, ಯಾವುದೇ ವ್ಯಕ್ತಿ, ಸಮುದಾಯ ಅಥವಾ ಧರ್ಮದ ಕುರಿತು ಯಾವುದೇ ರೀತಿಯ ಪೂರ್ವಗ್ರಹದಿಂದ ಕೂಡಿರುವ ಎಲ್ಲಾ ಕೃತ್ಯಗಳಿಗೆ ನಿಮ್ಮ ಸರಕಾರ ಮತ್ತು ಪಕ್ಷ ಶೂನ್ಯ ಸಹನೆ ತೋರುವುದು ಎಂಬ ವಿಶ್ವಾಸ ನನಗಿದೆ.

ಹಲವಾರು ಹಂತಗಳಲ್ಲಿ ಸ್ಪಷ್ಟವಾಗಿಯೇ- ಈ ಪರಿಸ್ಥಿತಿಯ ಲಾಭಪಡೆದು ತಮ್ಮ ವಿಚ್ಛಿದ್ರಕಾರಿ ಅಜೆಂಡಾವನ್ನು ಹರಡುತ್ತಾ ದಾರಿತಪ್ಪಿಸುತ್ತಿರುವ ಕೆಲವು ಮೂಲಗಳಿವೆ. ಅದೇ ಹೊತ್ತಿನಲ್ಲಿ, ನಿಸ್ಪಕ್ಷಪಾತದ, ತನಿಖಾ ವರದಿಗಾರಿಕೆಯ ನೀತಿಯನ್ನು ಅನುಸರಿಸುವಂತೆ ಸಾಮಾಜಿಕ ಮಾಧ್ಯಮ ಸೇರಿದಂತೆ ಎಲ್ಲಾ ಮಾಧ್ಯಮಗಳಿಗೆ ನಿರ್ದೇಶಿಸಬೇಕು.

ಪ್ರಸ್ತುತ ನೌಕಾಪಡೆ ಅತ್ಯಂತ ಹಿರಿಯ ಮಾಜಿ ಮುಖ್ಯಸ್ಥನಾಗಿ, ಈ ಮೇಲಿನ ಅಂಶಗಳನ್ನು ನಿಮ್ಮ ಗಂಭೀರ ಪರಿಗಣನೆಗಾಗಿ ಮತ್ತು ದೋಷನಿವಾರಕ ಕ್ರಮಗಳಿಗಾಗಿ ನಿಮ್ಮ ಮುಂದಿಡುವುದು  ನನ್ನ ಕರ್ತವ್ಯವೆಂದು ಭಾವಿಸಿದ್ದೇನೆ.

ಅಂಚೆ, ಸ್ಪೀಡ್‌ಪೋಸ್ಟ್, ಕೊರಿಯರ್ ಇತ್ಯಾದಿ ಸೇವೆಗಳೆಲ್ಲವೂ ಪ್ರಸ್ತುತ ಲಭ್ಯವಿಲ್ಲದೇ ಇರುವುದರಿಂದ, ಇದನ್ನು ಒಂದು ಬಹಿರಂಗ ಪತ್ರವನ್ನಾಗಿ ಮಾಡುವ ಸ್ವಾತಂತ್ರ್ಯವನ್ನು ತೆಗೆದುಕೊಳ್ಳುತ್ತಿದ್ದೇನೆ.

ಅತ್ಯುನ್ನತ ಗೌರವಗಳೊಂದಿಗೆ,

ನಿಮ್ಮ ವಿಶ್ವಾಸಿ,

ಎಲ್. ರಾಮದಾಸ್

(ಅಡ್ಮಿರಲ್ (ನಿವೃತ್ತ) ಎಲ್. ರಾಮದಾಸ್ ಅವರು ಭಾರತೀಯ ನೌಕಾಪಡೆ ಮಾಜಿ ಮುಖ್ಯಸ್ಥರು.)

ಅನುವಾದ: ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...