Homeಮುಖಪುಟಎಲ್ಲರ ಹಸಿವು ನೀಗಿಸಲು ನಮ್ಮ ಮುಂದಿವೆ ಹಲವು ದೇಶಗಳ ಮಾದರಿಗಳು

ಎಲ್ಲರ ಹಸಿವು ನೀಗಿಸಲು ನಮ್ಮ ಮುಂದಿವೆ ಹಲವು ದೇಶಗಳ ಮಾದರಿಗಳು

ಇಂಡೋನೇಷಿಯಾದಲ್ಲಿ ಹಾಲನ್ನು ನೀರಿನ ತರಾ ನಲ್ಲಿಯಲ್ಲಿ ಅವರವರ ಅಡಗಿ ಮನಿಯೊಳಗ ಕಳಿಸಿಕೊಡತಾರ. ಶ್ರೀಲಂಕಾ - ಬಾಂಗ್ಲಾದೇಶದಲ್ಲಿ ಸಹಿತ ಊಟದ ಬುಟ್ಟಿ ಕೊಡತಾರ. ಪಾಕಿಸ್ತಾನ ದಂತಾ ಪಾಕಿಸ್ತಾನದಾಗ ಹಿಟ್ಟು- ಎಣ್ಣಿ, ಪ್ಯಾಂಟು- ಷರ್ಟಿನ ಅರಿವಿ- ಬೂಟು, ಕೊಡತಾರು.

- Advertisement -
- Advertisement -

ಎಂಬತ್ತರ ದಶಕದಲ್ಲಿ ದ್ವಾರಕೀಶ ಅವರು ʻಎಲ್ಲಿದೆಯೋ ನ್ಯಾಯಾ, ಅಣ್ಣಾ, ಎಲ್ಲಿದೆಯೋ ನ್ಯಾಯಾʼ ಅಂತ ಹಾಡಿದರು. ಆ ಹಾಡು ಬರೆದ ಚಿರಂತನ ಕವಿ ಚಿ.ಉದಯಶಂಕರ ಅವರು ʻಬಡವನು ನ್ಯಾಯವ ಕೇಳುವುದೇ ಅನ್ಯಾಯʼ ಅನ್ನುವ ಅಂತಿಮ ಸತ್ಯವೊಂದನ್ನು ದ್ವಾರಕೀಶ ಅವರ ಬಾಯಿಯಲ್ಲಿ ಹೇಳಿಸಿದರು.

ಆ ಹಾಡು ಈಗ ನೆನಪಾಗಲಿಕ್ಕೆ ಕಾರಣ ಏನಂದರ ನಾವು ನಮ್ಮ ದೇಶದ ಲಕ್ಷಾಂತರ ಕಾರ್ಮಿಕರನ್ನು ಸಾವಿರಾರು ಕಿಲೊಮಿಟರ್ ನಡಕೊಂಡು ಹೋಗಲಿಕ್ಕೆ ಬಿಟ್ಟು ಮನಿಯೊಳಗ ನೆಟ್ ಫ್ಲಿಕ್ಸ ನೋಡಾಕ ಹತ್ತೇವಿ.

ಅವರು ನಮ್ಮನ್ನ ನ್ಯಾಯ ಎಲ್ಲಿದೆ ಅಂತ ಕೇಳಾಕ ಒಲ್ಲರು, ಹಂಗ ಏನರ ಕೇಳಿದರ ಅದಕ್ಕ ಉತ್ತರ ಕೊಡಾಕ ನಮ್ಮ ಕಡೆ ಆಗವಲ್ಲದು. ಅವರ ಸಂಕಟಕ್ಕ ಮರುಗೋದು ಬಿಟ್ಟು, ನಾವು “ಅವರು ಯಾಕ ತಮ್ಮ ರಾಜ್ಯ ಬಿಟ್ಟು ಇಲ್ಲಿಗೆ ಬರಾಕ ಹೋದರು?”, “ಅವರ ರಾಜ್ಯದ ಸರಕಾರಗಳು ಅವರಿಗೆ ಕೆಲಸ ಕೊಡಲಿಕ್ಕೆ ಯಾಕ ಆಗಲಿಲ್ಲ?”, ಇಲ್ಲಿಗೆ ಬಂದು ಐದು- ಹತ್ತು ಸಾವಿರ ರುಪಾಯಿ ಗಳಿಸೋರು ಅವರು, ಅವರಿಗೆ ಅಷ್ಟೂ ಕೊಡಾಕ ಆಗಲಿಲ್ಲೇನು ಅಲ್ಲಿನ ಸರಕಾರದವರಿಗೆ ಅಂತ ಪಾಟಿ ಸವಾಲು ಮಾಡಾಕ ಹತ್ತೇವಿ.

ʻಹಂಗಾರ ಅವರಿಗೆ ಅನ್ಯಾಯ ಆಗೇತೋ ಇಲ್ಲವೋ?ʼ ಅಂತ ಕೇಳಿದರೆ. ʻಹೌದುʼ ಅಂತ ನಾಚಿಕೋತನ ಹೇಳತೇವಿ. ಹಂಗಾರ ಈ ಅನ್ಯಾಯ ಆಗಲಾರದಂಗ ಏನು ಮಾಡಬಹುದಿತ್ತು ಅಂತ ಕೇಳಿದರ ಯಾರ ಹತ್ತರನೂ ಉತ್ತರ ಇಲ್ಲ.

ಆ ಉತ್ತರದ ಸಾಧ್ಯತೆಗಳನ್ನ ಇಲ್ಲಿ ನೋಡೋಣ.

ಮೊದಲನೆಯದು ʻಅನ್ನ ಭಾಗ್ಯʼ ಅನ್ನೋ ಹೆಸರಿನ ಯೋಜನೆ. ಆ ಹೆಸರಿನ ಬದಲಿಗೆ ʻಹಕ್ಕಿನ ಅನ್ನʼ ಅಂತ ಇಡಬಹುದಾಗಿತ್ತು. ಇದು ಕೇಂದ್ರ ಕೊಡುವ ಸಬ್ಸಿಡಿ ಜೊತೆಗೆ ರಾಜ್ಯದ ಸಬ್ಸಿಡಿಯನ್ನೂ ಸೇರಿಸಿ ಬಡವರಿಗೆ ಅಕ್ಕಿ-ಗೋಧಿ ಕೊಡುವ ಯೋಜನೆ. ಇದು ಪರ-ವಿರೋಧ ದನಿಗಳನ್ನು ಎಬ್ಬಿಸಿತು. ಇದು ಕಷ್ಟಪಟ್ಟ ದುಡಿಯುವವರ ಕೈಯಿಂದ ಹಣ ಕಸಿದು ಬಡವರಿಗೆ ತಿನ್ನಿಸಿ ಅವರನ್ನು ಆಲಸಿಯಾಗಿಸಿತು ಅಂತ ಕೆಲವರು ಭೀಕರವಾಗಿ ವಿರೋಧಿಸಿದರು. ಇನ್ನು ಕೆಲವರು ಬಡವರ ಕಷ್ಟಕಾಲಕ್ಕೆ ಆಯಿತು ಅಂತ ಸ್ವಾಗತಿಸಿದರು.

ʻಇದು ಅಪೂರ್ಣವಾಯಿತು, ಇದನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ರೂಪಿಸಬಹುದಿತ್ತು. ಇದರಲ್ಲಿನ ಬ್ರಷ್ಟಾಚಾರದ ಅವಕಾಶಗಳನ್ನು ಕಮ್ಮಿ ಮಾಡಬೇಕಾಗಿತ್ತುʼ ಅಂತ ಇನ್ನು ಕೆಲವರು ಸೃಜನಾತ್ಮಕ ಟೀಕೆ ಮಾಡಿದರು, ಸಲಹೆ ನೀಡಿದರು.

ಇಂಥದ್ದರಲ್ಲಿ ಒಂದು ಒಳ್ಳೆಯ ಐಡಿಯಾ ಅಂದರೆ ಫುಡ್ ಬಾಸ್ಕೆಟ್ ಅಥವಾ ʻಊಟದ ಬುಟ್ಟಿʼ. ಹಿಂಗಂದರ, ಬರೇ ಅಕ್ಕಿ, ಗೋಧಿ, ಕೊಡೋದಲ್ಲ, ಕಾಳು-ಬೇಳೆ- ಎಣ್ಣೆ- ಹಾಲಿನ ಪದಾರ್ಥ, ಸಕ್ಕರೆ- ಉಪ್ಪು- ಮಸಾಲೆ ಸಾಮಾನು, – ಸೋಪು, ಹಣ್ಣು- ತರಕಾರಿ ಸಹಿತ ಸೇರಿಸಿ ಬಡವರಿಗೆ ಕೊಡೋದು. ಕೆಲವು ದೇಶಗಳಲ್ಲಂತೂ ಇದನ್ನು ಎಲ್ಲರಿಗೂ ಕೊಡತಾರ. ಬ್ಯಾಡಾ ಅಂದವರು ಬಿಡಬಹುದು. ಗ್ಯಾಸಿನ ಸಬ್ಸಿಡಿ ಇದ್ದಂಗ.

ಇದು ಐವತ್ತು ವರ್ಷಗಳಿಂದ ಕ್ಯೂಬಾ ದೇಶದಲ್ಲಿ ನಡೆದುಕೊಂಡು ಬಂದದ. ಭಾರತಕ್ಕಿಂತ ಕಮ್ಮಿ ತಲಾ ಆದಾಯ ಇರುವ ದೇಶಗಳಲ್ಲಿ ಸಹಿತ ಇಂತಹ ಅನೇಕ ಯೋಜನೆಗಳು ಯಶಸ್ವಿಯಾಗಿ ನಡೆದುಕೊಂಡು ಬಂದಾವು.

ಅದರಲ್ಲಿ ಕೆಲವು ನೋಡೋಣ. ಇಂಡೋನೇಷಿಯಾದಲ್ಲಿ ಹಾಲನ್ನು ನೀರಿನ ತರಾ ನಲ್ಲಿಯಲ್ಲಿ ಅವರವರ ಅಡಗಿ ಮನಿಯೊಳಗ ಕಳಿಸಿಕೊಡತಾರ. ಶ್ರೀಲಂಕಾ – ಬಾಂಗ್ಲಾದೇಶದಲ್ಲಿ ಸಹಿತ ಊಟದ ಬುಟ್ಟಿ ಕೊಡತಾರ. ಪಾಕಿಸ್ತಾನ ದಂತಾ ಪಾಕಿಸ್ತಾನದಾಗ ಹಿಟ್ಟು- ಎಣ್ಣಿ, ಪ್ಯಾಂಟು- ಷರ್ಟಿನ ಅರಿವಿ- ಬೂಟು, ಕೊಡತಾರು.

ಕ್ಯೂಬಾದಾಗ ಎಲ್ಲಾರಿಗೂ ಕೊಡತಾರ. ಆದರ ಬ್ಯಾರೆ ದೇಶಗಳೊಳಗ ಬಡವರಿಗಷ್ಟ ಕೊಡತಾರ.

ನಾವು ಯಾಕ ಕೊಡಲಿಕ್ಕೆ ಆಗಲೊಲ್ಲದು?

ಯಾಕಂದರ ಕೇಂದ್ರ ನಮಗ ರೊಕ್ಕ ಕೊಡೋದಿಲ್ಲ, ಅಕ್ಕಿ ಕೊಡತೇತಿ. ಪ್ರತಿ ತಿಂಗಳ, ಪ್ರತಿ ಮನುಷಾನ ಲೆಕ್ಕದಲೆ, 27 ರೂಪಾಯಿ ಕೊಡತೆತಿ. ಅದನ್ನ ಒಂದು ಕೇಜಿ ಅಕ್ಕಿಯ ರೂಪದಾಗ ಕೊಡತೇತಿ. ಅದ ರೊಕ್ಕ ನಮಗ ಕೊಟ್ಟರ ನಾವು ಏನಾದರೂ ತೊಗೋಬಹುದು.

ಕರ್ನಾಟಕದಾಗ ಸರಬರಾಜು ಆಗೋ ಅಕ್ಕಿ ಛತ್ತೀಸಘಡ, ಜಾರಖಂಡಿನಿಂದ ಬರತೇತಿ. ಗೋಧಿ ಪಂಜಾಬು- ಹರಿಯಾಣಾ- ಮಹಾರಾಷ್ಟ್ರ ದಿಂದ ಬರತೇತಿ.

ಸುಮಾರು ಎರಡು – ಮೂರು ಸಾವಿರ ಕಿಲೋಮಿಟರು ದೂರದಿಂದ ಅಕ್ಕಿ ಸಾಗಣೆ ಮಾಡೋ ಖರ್ಚನ್ನ ರಾಜ್ಯ ಸರಕಾರ ಹೊರತೇತಿ. ಅದರ ಬದಲಿಗೆ ಅದ 27 ರೂಪಾಯಿ ರಾಜ್ಯಕ್ಕ ಕೊಟ್ಟರ, ನಮ್ಮ ರೈತರು ಬೆಳದ ಅಕ್ಕಿ ನಾವು ಖರೀದಿಸಿ ರೊಕ್ಕ ಉಳಿಸಬಹುದು, ಕಿರಿಕಿರಿ ಇರಲಾರದೇ ಹಂಚಬಹುದು.

ವಿಕೇಂದ್ರಿಕೃತ ವ್ಯವಸ್ಥೆ ಜಾರಿ ಆದರ ಉತ್ತರ ಕರ್ನಾಟಕದಾಗ ಜೋಳ, ದಕ್ಷಿಣದಾಗ ರಾಗಿ, ಕರಾವಳಿಯೊಳಗ ಕೆಂಪು ಅಕ್ಕಿ ಖರೀದಿಸಿ, ಅಲ್ಲಲ್ಲೇ ಹಂಚಬಹುದು.

ಅದಕ್ಕ ಒಮ್ಮೆ ಹಿಂದಿನ ಮುಖ್ಯಮಂತ್ರಿ ಸಿದ್ರಾಮಯ್ಯನವರು ದೂರದರ್ಶನದಾಗ ಫೋನು ಇನ್ನು ಕಾರ್ಯಕ್ರಮ ನಡೆಸಿದಾಗ ಕಾರ್ಯಕರ್ತರೊಬ್ಬರು ಇದು ಅನ್ನ ಭಾಗ್ಯ ಅಲ್ಲ, ಸರಿಯಾಗಿ ಜಾರಿಮಾಡಿದರೆ ಅದು ರೈತ ಭಾಗ್ಯ. ಸರಕಾರ ರೈತರಿಂದ ಜೋಳ -ಕಾಳು ಖರೀದಿಸಿದರೆ ರೈತರಿಗೆ- ಗೃಹಿಣಿಯರಿಗೆ ಇಬ್ಬರಿಗೂ ಅನುಕೂಲ ಅಂತ ಹೇಳಿದ್ದರು. ಮುಖ್ಯಮಂತ್ರಿಗಳಿಗೆ ಐಡಿಯಾ ಇಷ್ಟ ಆತು, ಖರೆ, ಆದರಿ ವಿಧಾನಸೌಧದ ಪಟ್ಟ ಭದ್ರ ಕಪಾಟುಗಳಲ್ಲಿ ಆ ಫೈಲು ಥಂಡಿ ಹಿಡೀತು.

ಇನ್ನ ಸರಕಾರದವರು ಎಷ್ಟು ದಡ್ಡರು ಅಂದರ ಅವರು ಒಂದೇ ತಪ್ಪನ್ನ ಎರಡೆರಡು ಸರತೆ ಮಾಡತಾರು. ಉದಾಹರಣೆಗೆ ತೊಗರಿ ಕಾಳಿನ ಬೆಲೆ ಕುಸಿದರೆ ರೈತರಿಂದ ಖರೀದಿ ಮಾಡತಾರು. ಈ ವರ್ಷ 55 ರೂಪಾಯಿಗೆ ಒಂದು ಕೇಜಿಯಂತೆ ಖರೀದಿ ಮಾಡಿದಾರು. ಆರು ತಿಂಗಳ ಬಿಟ್ಟು ಮಿಲ್ಲು ಮಾಲಿಕರು ಹಾಗೂ ಮಧ್ಯವರ್ತಿಗಳಿಂದ ಸರಕಾರಿ ಹಾಸ್ಟೆಲ್ಲುಗಳ ಹುಡುಗರ ಸಲುವಾಗಿ 90 ರೂಪಾಯಿಗೆ ತೊಗರಿ ಬೇಳೆ ಖರೀದಿ ಮಾಡತಾರು. ರೈತರಿಂದ ಖರೀದಿ ಮಾಡಿದ ತೊಗರಿ ಕಾಳನ್ನೇ ಮಿಲ್ಲಿನಲ್ಲಿ ಒಡೆದು ಹಾಕಿಸಿ ಹಾಸ್ಟೆಲ್ಲಿಗೆ ಪೂರೈಸೋವಷ್ಟು ಕನಿಷ್ಟ ಸಾಮಾನ್ಯ ಜ್ಞಾನ ಅವರಿಗೆ ಇಲ್ಲ.

ಮೂರನೇಯದು ಇಂದಿರಾ ಕ್ಯಾಂಟೀನು. ಮೊದಲನೆಯದು ಅದರ ಹೆಸರ ಹಿಂದಿನ ರಾಜಕೀಯ. ಕಾಂಗ್ರೆಸ್ಸಿನವರು ಇಂದಿರಮ್ಮಾ ಕ್ಯಾಂಟಿನ ಅಂತ ಮಾಡಿದ್ದರ ಅದರ ಇಂದಿರಾ ತಗದು ಅಮ್ಮಾ ಅಂತ ಭಾಜಪ ದವರು ಮುಂದು ವರೆಸಬಹುದಿತ್ತು. ಇಲ್ಲಾ ಅಂದರ ಅನ್ನಪೂರ್ಣಾ ಅಡುಗೆ ಮನೆ ಅಂತಾದರೂ ಇವರು ಬದಲಾಯಿಸಬೇಕಾಗಿತ್ತು. ಅಥವಾ ಅದ ಕೆಲಸಾ ಕಾಂಗ್ರೆಸ್ಸಿನವರು ಮಾಡಬೇಕಿತ್ತು. ಅದುನೂ ಆಗಲಿಲ್ಲ.

ಎರಡನೇಯದ್ದು ಅವಕ್ಕೆ ರಾಜ್ಯ ಖಜಾನೆಯಿಂದ ಹಣ ಹೊಂದಿಸೋ ಕೆಲಸ ಸಿದ್ರಾಮಯ್ಯನವರು ಮಾಡಲಿಲ್ಲ. ಅವರು ಮಾಡಿದ್ದು ಎರಡು ತಪ್ಪು. ಅವನ್ನು ನಗರ ಪಾಲಿಕೆ ಅಥವಾ ಸ್ಥಳೀಯ ಸಂಸ್ಥೆಯವರು ನಡೆಸಬೇಕು ಅನ್ನೋ ನಿಯಮ ಮಾಡಿದ್ದು. ಎರಡನೇಯದ್ದು ಗುತ್ತಿಗೆದಾರರ ಕೈಯೊಳಗ ಕೊಟ್ಟಿದ್ದು.

ಅವನ್ನು ತಮಿಳುನಾಡಿನ ರೀತಿ ಮಹಿಳಾ ಸ್ವಸಹಾಯ ಸಂಘಗಳ ಕೈಗೆ ಕೊಟ್ಟಿದ್ದರ ಅವು ಚಂದಾಗಿ ನಡೆಸಿಕೊಂಡು ಬರತಿದ್ದರು. ಏಳು ವರ್ಷದ ಹಿಂದೆ ಸುರುವಾದ ಈ ಬಡವರ ಅಡುಗೆ ಮನೆಗಳು ಇಲ್ಲಿಯವರೆಗೆ 25 ಕೋಟಿ ಇಡ್ಲಿ, 30 ಕೋಟಿ ಚಪಾತಿ ಹಾಗೂ 20 ಕೋಟಿ ಪ್ಲೇಟು ಅನ್ನ ತಯಾರಿಸಿದ್ದಾವು. ಅವುಗಳ ಬೆಲೆ ಬದಲಾಗಿಲ್ಲ. ಈ ಲಾಕ್ ಡೌನ್ ಸಮಯದಾಗೂನು ಕೆಲಸ ಮಾಡಿದಾವು. ಬಡವರ ಪ್ರಾಣ ಕಾದವು.

ಆದರ ನಮ್ಮಲ್ಲೆ ಹಂಗ ಆಗಲಿಲ್ಲ. ಬಡವರು ಉಪವಾಸ ಬಿದ್ದರು. ಪ್ರವಾಸಿ ಕಾರ್ಮಿಕರು ಯಾವುದೋ ಸಂಘ ಸಂಸ್ಥೆಗಳು ಕೊಡೋ ಆಹಾರಕ್ಕ ಕಾಯ್ದು ಕೊಂಡು ದಿನಗಟ್ಟಲೇ ಇದ್ದರು. ಏನೂ ಸಿಗಲಾರದಾಗ ತಮ್ಮ ಹಣೆಬರಹಕ್ಕೆ ಬೈದುಕೊಂಡು ಸುಮ್ಮನೇ ಕಣ್ಣೀರು ಕುಡಿದು ಕುಂತರು.

ಇಂದಿರಾ ಕ್ಯಾಂಟೀನು ತಗದರ ಗದ್ದಲ ಆಗತೇತಿ ಅಂತ ಮುಚಿಕೊಂಡು ಕೂತರು. ಸಾರಾಯಿ ದುಕಾನು ತೆಗೆದು ಅಲ್ಲಿನ ಜನ ಜಂಗುಳಿ – ನೂಕು ನುಗ್ಗಲು ನೋಡಿ ಮುಸಿ ಮುಸಿ ನಕ್ಕ ನಮ್ಮ ಸರಕಾರ ಇಂದಿರಾ ಕ್ಯಾಂಟಿನ ತೆರೆಯಲಿಲ್ಲ. ಬಡವರಿಗೆ ಅನ್ನಕ್ಕಿಂತಲೂ ಎಣ್ಣೆ ಬೇಕು ಅಂತ ನಕ್ಕರು ಅಷ್ಟ.

ಇವೆಲ್ಲಾ ನಮ್ಮ ರೈತರ ಪರವಾಗಿ, ಮಹಿಳೆಯರ ಪರವಾಗಿ ಮಾತಾಡುವ ಪುಡಾರಿ ನಾಯಕರಿಗೆ ಕಾಣೋದಿಲ್ಲ. ಜನ ಜಾಗೃತಿ ಹೊರತು ಪ್ರಜಾಸತ್ತೆಗೆ ಬೇರೆ ಔಷಧಿ ಇಲ್ಲ ಅಂತ ಬೆಂಜಮಿನ್ ಫ್ರ‍್ಯಾಂಕ್ಲಿನ್ ಹೇಳಿದಂಗ, ನಮಗನ ತಿಳೀಲಿಲ್ಲಾ ಅಂದರ ನಮ್ಮ ನಾಯಕರಿಗೆ ಹೆಂಗ ತಿಳೀಬೇಕು?


ಇದನ್ನೂ ಓದಿ: ದಿನಕ್ಕೆ ಕೇವಲ ಒಂದೇ ಹೊತ್ತು ಊಟ : ಅಹಮದಾಬಾದ್‌ನ ಹಲವರ ಪರಿಸ್ಥಿತಿ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...