Homeನೂರರ ನೋಟಕೊರೋನಾ ಕೊನೆಗೊಳ್ಳಲಿ : ಮೋದಿ ಷಾ ವಿರುದ್ಧ ಹೋರಾಟ ಆರಂಭವಾಗಲಿ

ಕೊರೋನಾ ಕೊನೆಗೊಳ್ಳಲಿ : ಮೋದಿ ಷಾ ವಿರುದ್ಧ ಹೋರಾಟ ಆರಂಭವಾಗಲಿ

- Advertisement -
- Advertisement -

ಮೋದಿ ಷಾ ಅವರ ಮಟ್ಟಿಗೆ ಕೊರೋನಾ ಒಂದು ವರವಾಗಿ ಪರಿಣಮಿಸಿತು. ಅವರ ಮೇಲಿನ ಹೋರಾಟ ಮುಂದಕ್ಕೆ ಹೋಯಿತು. ಮುಂದಕ್ಕೆ ಹೋಯಿತೇ ಹೊರತು ನಿಲ್ಲುವುದಲ್ಲ. ಕೊರೋನಾ ಬರದಿದ್ದರೆ ಈ ವೇಳೆಗೆ ಮೋದಿ ಮತ್ತು ಷಾ ಜನಗಣತಿ ಆರಂಭಿಸುತ್ತಿದ್ದರು. ಯಾರು ಯಾರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಬಹುದೆಂದು home work ಆರಂಭಿಸುತ್ತಿದ್ದರು. ಇದರ ಜೊತೆಜೊತೆಗೇ ಮೋದಿ ಸರ್ಕಾರದ ವಿರುದ್ಧ ಘರ್ಷಣೆ ಆರಂಭವಾಗುತ್ತಿತ್ತು. ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಇತ್ಯಾದಿಗಳನ್ನು ಹಿಂಪಡೆಯಿರಿ ಎಂದು ದಲಿತರು, ಅದಿವಾಸಿಗಳು, ಮುಸ್ಲಿಮರು ದೇಶವ್ಯಾಪ್ತಿ ಚಳುವಳಿ ಆರಂಭಿಸುತ್ತಿದ್ದರು. ಕೊರೋನಾ ಸೈತಾನನ ಸಲುವಾಗಿ ಹಿಂದುತ್ವ ಮಂತಾಧರ ವಿರುದ್ಧ, ನಿಷ್ಕ್ರಿಯ ಸರ್ಕಾರದ ವಿರುದ್ಧ ನಡೆಯಬೇಕಿದ್ದ ಧರ್ಮಯುದ್ದವನ್ನು ಮುಂದೂಡಬೇಕಾದ ಅನಿವಾರ್ಯ ಸೃಷ್ಟಿಯಾಯಿತು.

ಮೋದಿ ಷಾ ನಮಗೆಲ್ಲ 5, 5 ಸಾವಿರ ಕೊಟ್ಟರು ಎಂದು ಜನ ಅಂದುಕೊಂಡಾರು ಎಂಬ ಬ್ರಾಂತಿ ಮೋದಿ-ಷಾಗಳಿಗಿದೆ. ಕೊರೋನಾ ನಮ್ಮ ಅನ್ನ ಕಿತ್ತುಕೊಂಡಿತು, ನಮ್ಮ ಉದ್ಯೋಗ ಕಿತ್ತು ಕೊಂಡಿತು, ನಾವು ನಮ್ಮೂರಿಗೆ ಹೋಗುತ್ತೇವೆ ಎಂದು ವಲಸೆ ಬಂದ ಕಾರ್ಮಿಕರು, ಅಸಂಖ್ಯಾತ ಅಸಂಘಟಿತ ಕಾರ್ಮಿಕರು ಈ ಸಂದರ್ಭದಲ್ಲಿ ಅನುಭವಿಸಿದ ಕಷ್ಟ ಕೋಟಲೆಗಳನ್ನು ಈ ಜನ್ಮದಲ್ಲಿ ಅವರು ಮರೆಯುವುದಿಲ್ಲ. ಸರ್ಕಾರ ಇವರಿಗೆ ಅಷ್ಟೊ ಇಷ್ಟೋ ಹಣ ನೀಡಿದ್ದರೆ ಅದು ಸರ್ಕಾರದ ಹಣವೇ ಹೊರತು ಅವರ ಔದಾರ್ಯವಲ್ಲ. ಸರ್ಕಾರ ತಾನು ಎರಚಿದ ಪುಡಿಕಾಸಿನ ನೆರವನ್ನು ಮತಗಳಿಕೆಯ ಸಾಧನವನ್ನಾಗಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ. ಆದರೆ ಈ ಬಗೆಯ ನೆರವು ನೀಡಿದ ಸರ್ಕಾರ ಶಿಸ್ತುಬದ್ಧನಾಗಿ ಎಲ್ಲ ತರದ ಬಡವರಿಗು ಹಂಚಿದ್ದರೆ ಭೇಷ್ ಅನ್ನಬಹುದಾಗಿತ್ತು. ಮೋದಿಯವರು ನಮ್ಮ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಣ ಹಂಚಿದಾರಾದರೂ ಅದು ಬಕಾಸುರನ ಬಾಯಿಗೆ ಅರೆ ಮಜ್ಜಿಗೆ ಸುರಿದಂತೆ ಎಲ್ಲ ಜನಕ್ಕೂ ತಲುಪಲಿಲ್ಲ.

ಸರ್ಕಾರದ ವಿಚಾರದಲ್ಲಿ ಬಡಜನರ ಆಕ್ರೋಶ ಇದೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚಿರುವುದು ಇಡೀ ಸಮಾಜಕ್ಕೆ ಗೊತ್ತಾಗಿದೆ. ವಿವಿಧ ರಾಜ್ಯಗಳಿಂದ ಬಂದ ಅಸಂಘಟಿತ ಲಕ್ಷಾಂತರ ಕಾರ್ಮಿಕರು ತಮ್ಮ ಸಂಪಾದನೆ ನಿಂತುಹೋದ ಕಾರಣದಿಂದ ನಮ್ಮನ್ನು ನಮ್ಮ ಊರುಗಳಿಗೆ ಕಳುಹಿಸಿ ಕೊಡಿ ಎಂದು ದುಂಬಾಲು ಬಿದ್ದರು. ಕೊರೋನಾ ಆರಂಭವಾದ ಹೊತ್ತಿನಲ್ಲೆ ಪ್ರಾರ್ಥಿಸಿದರೂ ಸರ್ಕಾರ ಅವರಿಗೆ ಹೋಗಲು ತಡೆಹಾಕಿತು. ಕೊನೆಯ ಪಕ್ಷ ಕೊರೋನಾ ಸೋಂಕಿಲ್ಲದವರನ್ನಾದರು ಕಳುಹಿಸಬೇಕಾಗಿತ್ತು. ಸರ್ಕಾರ ಅವರನ್ನೆಲ್ಲ ಇಲ್ಲೆ ಬಂಧನದಲ್ಲಿಟ್ಟಂತೆ ಇಟ್ಟು ಅವರಿಗೆ ಅತ್ತ ಕೂಲಿಯೂ ಇಲ್ಲ ಇತ್ತ ಪರಿಹಾರವೂ ಇಲ್ಲ ಎಂದು ಸರ್ಕಾರ ಕೈಚೆಲ್ಲಿತು. ಇವರಲ್ಲಿ ಕೆಲವರಿಗೆ ಪರಹಾರ ಸಿಕ್ಕಿರುವುದೂ ಕೊರೋನಾ ಅಮರಿಕೊಂಡ 2-3 ತಿಂಗಳ ಮೇಲೆ? ಅವರು ಅರೆಜೀವ, ಕೊರೆಜೀವ ಇಟ್ಟುಕೊಂಡೆ ಆ ದಿನಗಳನ್ನು ಕಳೆದರು.

ಆನಂತರ 2 ತಿಂಗಳ ಮೇಲೆ ಕರ್ನಾಟಕದ ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸುವ ನಿರ್ಧಾರಕ್ಕೆ ಸರ್ಕಾರ ಬಂತು. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಡಬಲ್ ಛಾರ್ಜ್ ವಸೂಲಿ ಮಾಡಿ ಎಂದು ಸರ್ಕಾರ ಹೇಳಿತು. ಅದಕ್ಕೆ ಪ್ರತಿಭಟನೆ ಬಂತು. ಆಗ ಸರ್ಕಾರ ಹೋಗುವ ಚಾರ್ಜ್ ಕೊಟ್ಟರೆ ಸಾಕು ಎಂದಿತು. ಕಾರ್ಮಿಕರು ನಾವೆಲ್ಲಿಂದ ತರೋಣ ಹಣ ಎಂದರು. ಸರ್ಕಾರ ತನ್ನ ಪಟ್ಟು ಬಿಡಲಿಲ್ಲ. ಆಗ ಕಾಂಗ್ರೆಸ್ ಸಂಸ್ಥೆಯವರು ನಾವು ಒಂದು ಕೋಟಿ ಚೆಕ್ ನೀಡುತ್ತೇವೆ ಅವರಿಂದ ಹಣ ವಸೂಲಿ ಮಾಡದೆ ಮರ್ಯಾದೆಯಿಂದ ಕಳುಹಿಸಿಕೊಡಿ ಎಂದು ಸವಾಲೊಡ್ಡಿತು. ಸರ್ಕಾರಕ್ಕೆ ಪೀಕಲಾಟ ಬಂತು.

ಟಿಕೆಟ್ ಹಣ ವಸೂಲಿ ಮಾಡದಿದ್ದರೆ ಕಾಂಗ್ರೆಸ್ಸಿನ ಒತ್ತಡಕ್ಕೆ ಸಿಲುಕಿದಂತಾಗುತ್ತದೆ. ವಸೂಲಿ ಮಾಡಿದರೆ ಆ ಜನ ಶಾಪ ಹಾಕುತ್ತಾರೆ. ಮುಂದಿನ ಚುನಾವಣೆಯಲ್ಲಿ ನಮಗೆ ಮತ ಹಾಕದೆಯೂ ಇರಬಹುದು. ಇತ್ತ ಪುಲಿ ಅತ್ತ ದರಿ ಎನ್ನುವ ಸನ್ನಿವೇಶಕ್ಕೆ ಕಾಂಗ್ರೆಸ್ ನಮ್ಮನ್ನು ದೂಡಿದೆ. ಇದರ ಫಲವಾಗಿ ಕಾರ್ಮಿಕ ವರ್ಗ ಚುನಾವಣೆ ವೇಳೆಯಲ್ಲಿ ನಮ್ಮ ಎದುರು ಬಿದ್ದರೆ ಗತಿ ಏನು? ಎಂದು ಯೋಚಿಸಿ ಉಚಿತವಾಗಿ ಅವರನ್ನು ಸಾಗಿಸುವುದೇ ಬುದ್ಧಿವಂತಿಕೆ ಎಂಬ ತೀರ್ಮಾನಕ್ಕೆ ಬಂದರು. ಕಾಂಗ್ರೆಸ್ ಈ ಸಂದರ್ಭದಲ್ಲಿ ಟ್ರಂಪ್‌ಕಾರ್ಡ್ ಹಾಕಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಿದಲ್ಲದೆ ಕಾರ್ಮಿಕರ ಕೃತಜ್ಞತೆಗೂ ಪಾತ್ರವಾಯಿತು.

ಕೊರೋನಾ ಆದಷ್ಟು ಬೇಗ ಮುಕ್ತಾಯಗೊಳ್ಳಲಿ ನಮ್ಮ ಮೋದಿ ಷಾ ವಿರುದ್ಧ ಹೋರಾಟ ಆರಂಭವಾಗಲಿ ಎಂದು ಆಶಿಸುತ್ತೇನೆ.


ಇದನ್ನೂ ಓದಿ: ಹಸಿದವರ ಮುಂದೆ ಮೃಷ್ಟಾನ್ನದ ಕತೆ ಹೇಳಿದವರು… 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...