Homeನೂರರ ನೋಟಕೊರೋನಾ ಕೊನೆಗೊಳ್ಳಲಿ : ಮೋದಿ ಷಾ ವಿರುದ್ಧ ಹೋರಾಟ ಆರಂಭವಾಗಲಿ

ಕೊರೋನಾ ಕೊನೆಗೊಳ್ಳಲಿ : ಮೋದಿ ಷಾ ವಿರುದ್ಧ ಹೋರಾಟ ಆರಂಭವಾಗಲಿ

- Advertisement -
- Advertisement -

ಮೋದಿ ಷಾ ಅವರ ಮಟ್ಟಿಗೆ ಕೊರೋನಾ ಒಂದು ವರವಾಗಿ ಪರಿಣಮಿಸಿತು. ಅವರ ಮೇಲಿನ ಹೋರಾಟ ಮುಂದಕ್ಕೆ ಹೋಯಿತು. ಮುಂದಕ್ಕೆ ಹೋಯಿತೇ ಹೊರತು ನಿಲ್ಲುವುದಲ್ಲ. ಕೊರೋನಾ ಬರದಿದ್ದರೆ ಈ ವೇಳೆಗೆ ಮೋದಿ ಮತ್ತು ಷಾ ಜನಗಣತಿ ಆರಂಭಿಸುತ್ತಿದ್ದರು. ಯಾರು ಯಾರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಬಹುದೆಂದು home work ಆರಂಭಿಸುತ್ತಿದ್ದರು. ಇದರ ಜೊತೆಜೊತೆಗೇ ಮೋದಿ ಸರ್ಕಾರದ ವಿರುದ್ಧ ಘರ್ಷಣೆ ಆರಂಭವಾಗುತ್ತಿತ್ತು. ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಇತ್ಯಾದಿಗಳನ್ನು ಹಿಂಪಡೆಯಿರಿ ಎಂದು ದಲಿತರು, ಅದಿವಾಸಿಗಳು, ಮುಸ್ಲಿಮರು ದೇಶವ್ಯಾಪ್ತಿ ಚಳುವಳಿ ಆರಂಭಿಸುತ್ತಿದ್ದರು. ಕೊರೋನಾ ಸೈತಾನನ ಸಲುವಾಗಿ ಹಿಂದುತ್ವ ಮಂತಾಧರ ವಿರುದ್ಧ, ನಿಷ್ಕ್ರಿಯ ಸರ್ಕಾರದ ವಿರುದ್ಧ ನಡೆಯಬೇಕಿದ್ದ ಧರ್ಮಯುದ್ದವನ್ನು ಮುಂದೂಡಬೇಕಾದ ಅನಿವಾರ್ಯ ಸೃಷ್ಟಿಯಾಯಿತು.

ಮೋದಿ ಷಾ ನಮಗೆಲ್ಲ 5, 5 ಸಾವಿರ ಕೊಟ್ಟರು ಎಂದು ಜನ ಅಂದುಕೊಂಡಾರು ಎಂಬ ಬ್ರಾಂತಿ ಮೋದಿ-ಷಾಗಳಿಗಿದೆ. ಕೊರೋನಾ ನಮ್ಮ ಅನ್ನ ಕಿತ್ತುಕೊಂಡಿತು, ನಮ್ಮ ಉದ್ಯೋಗ ಕಿತ್ತು ಕೊಂಡಿತು, ನಾವು ನಮ್ಮೂರಿಗೆ ಹೋಗುತ್ತೇವೆ ಎಂದು ವಲಸೆ ಬಂದ ಕಾರ್ಮಿಕರು, ಅಸಂಖ್ಯಾತ ಅಸಂಘಟಿತ ಕಾರ್ಮಿಕರು ಈ ಸಂದರ್ಭದಲ್ಲಿ ಅನುಭವಿಸಿದ ಕಷ್ಟ ಕೋಟಲೆಗಳನ್ನು ಈ ಜನ್ಮದಲ್ಲಿ ಅವರು ಮರೆಯುವುದಿಲ್ಲ. ಸರ್ಕಾರ ಇವರಿಗೆ ಅಷ್ಟೊ ಇಷ್ಟೋ ಹಣ ನೀಡಿದ್ದರೆ ಅದು ಸರ್ಕಾರದ ಹಣವೇ ಹೊರತು ಅವರ ಔದಾರ್ಯವಲ್ಲ. ಸರ್ಕಾರ ತಾನು ಎರಚಿದ ಪುಡಿಕಾಸಿನ ನೆರವನ್ನು ಮತಗಳಿಕೆಯ ಸಾಧನವನ್ನಾಗಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ. ಆದರೆ ಈ ಬಗೆಯ ನೆರವು ನೀಡಿದ ಸರ್ಕಾರ ಶಿಸ್ತುಬದ್ಧನಾಗಿ ಎಲ್ಲ ತರದ ಬಡವರಿಗು ಹಂಚಿದ್ದರೆ ಭೇಷ್ ಅನ್ನಬಹುದಾಗಿತ್ತು. ಮೋದಿಯವರು ನಮ್ಮ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಣ ಹಂಚಿದಾರಾದರೂ ಅದು ಬಕಾಸುರನ ಬಾಯಿಗೆ ಅರೆ ಮಜ್ಜಿಗೆ ಸುರಿದಂತೆ ಎಲ್ಲ ಜನಕ್ಕೂ ತಲುಪಲಿಲ್ಲ.

ಸರ್ಕಾರದ ವಿಚಾರದಲ್ಲಿ ಬಡಜನರ ಆಕ್ರೋಶ ಇದೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚಿರುವುದು ಇಡೀ ಸಮಾಜಕ್ಕೆ ಗೊತ್ತಾಗಿದೆ. ವಿವಿಧ ರಾಜ್ಯಗಳಿಂದ ಬಂದ ಅಸಂಘಟಿತ ಲಕ್ಷಾಂತರ ಕಾರ್ಮಿಕರು ತಮ್ಮ ಸಂಪಾದನೆ ನಿಂತುಹೋದ ಕಾರಣದಿಂದ ನಮ್ಮನ್ನು ನಮ್ಮ ಊರುಗಳಿಗೆ ಕಳುಹಿಸಿ ಕೊಡಿ ಎಂದು ದುಂಬಾಲು ಬಿದ್ದರು. ಕೊರೋನಾ ಆರಂಭವಾದ ಹೊತ್ತಿನಲ್ಲೆ ಪ್ರಾರ್ಥಿಸಿದರೂ ಸರ್ಕಾರ ಅವರಿಗೆ ಹೋಗಲು ತಡೆಹಾಕಿತು. ಕೊನೆಯ ಪಕ್ಷ ಕೊರೋನಾ ಸೋಂಕಿಲ್ಲದವರನ್ನಾದರು ಕಳುಹಿಸಬೇಕಾಗಿತ್ತು. ಸರ್ಕಾರ ಅವರನ್ನೆಲ್ಲ ಇಲ್ಲೆ ಬಂಧನದಲ್ಲಿಟ್ಟಂತೆ ಇಟ್ಟು ಅವರಿಗೆ ಅತ್ತ ಕೂಲಿಯೂ ಇಲ್ಲ ಇತ್ತ ಪರಿಹಾರವೂ ಇಲ್ಲ ಎಂದು ಸರ್ಕಾರ ಕೈಚೆಲ್ಲಿತು. ಇವರಲ್ಲಿ ಕೆಲವರಿಗೆ ಪರಹಾರ ಸಿಕ್ಕಿರುವುದೂ ಕೊರೋನಾ ಅಮರಿಕೊಂಡ 2-3 ತಿಂಗಳ ಮೇಲೆ? ಅವರು ಅರೆಜೀವ, ಕೊರೆಜೀವ ಇಟ್ಟುಕೊಂಡೆ ಆ ದಿನಗಳನ್ನು ಕಳೆದರು.

ಆನಂತರ 2 ತಿಂಗಳ ಮೇಲೆ ಕರ್ನಾಟಕದ ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸುವ ನಿರ್ಧಾರಕ್ಕೆ ಸರ್ಕಾರ ಬಂತು. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಡಬಲ್ ಛಾರ್ಜ್ ವಸೂಲಿ ಮಾಡಿ ಎಂದು ಸರ್ಕಾರ ಹೇಳಿತು. ಅದಕ್ಕೆ ಪ್ರತಿಭಟನೆ ಬಂತು. ಆಗ ಸರ್ಕಾರ ಹೋಗುವ ಚಾರ್ಜ್ ಕೊಟ್ಟರೆ ಸಾಕು ಎಂದಿತು. ಕಾರ್ಮಿಕರು ನಾವೆಲ್ಲಿಂದ ತರೋಣ ಹಣ ಎಂದರು. ಸರ್ಕಾರ ತನ್ನ ಪಟ್ಟು ಬಿಡಲಿಲ್ಲ. ಆಗ ಕಾಂಗ್ರೆಸ್ ಸಂಸ್ಥೆಯವರು ನಾವು ಒಂದು ಕೋಟಿ ಚೆಕ್ ನೀಡುತ್ತೇವೆ ಅವರಿಂದ ಹಣ ವಸೂಲಿ ಮಾಡದೆ ಮರ್ಯಾದೆಯಿಂದ ಕಳುಹಿಸಿಕೊಡಿ ಎಂದು ಸವಾಲೊಡ್ಡಿತು. ಸರ್ಕಾರಕ್ಕೆ ಪೀಕಲಾಟ ಬಂತು.

ಟಿಕೆಟ್ ಹಣ ವಸೂಲಿ ಮಾಡದಿದ್ದರೆ ಕಾಂಗ್ರೆಸ್ಸಿನ ಒತ್ತಡಕ್ಕೆ ಸಿಲುಕಿದಂತಾಗುತ್ತದೆ. ವಸೂಲಿ ಮಾಡಿದರೆ ಆ ಜನ ಶಾಪ ಹಾಕುತ್ತಾರೆ. ಮುಂದಿನ ಚುನಾವಣೆಯಲ್ಲಿ ನಮಗೆ ಮತ ಹಾಕದೆಯೂ ಇರಬಹುದು. ಇತ್ತ ಪುಲಿ ಅತ್ತ ದರಿ ಎನ್ನುವ ಸನ್ನಿವೇಶಕ್ಕೆ ಕಾಂಗ್ರೆಸ್ ನಮ್ಮನ್ನು ದೂಡಿದೆ. ಇದರ ಫಲವಾಗಿ ಕಾರ್ಮಿಕ ವರ್ಗ ಚುನಾವಣೆ ವೇಳೆಯಲ್ಲಿ ನಮ್ಮ ಎದುರು ಬಿದ್ದರೆ ಗತಿ ಏನು? ಎಂದು ಯೋಚಿಸಿ ಉಚಿತವಾಗಿ ಅವರನ್ನು ಸಾಗಿಸುವುದೇ ಬುದ್ಧಿವಂತಿಕೆ ಎಂಬ ತೀರ್ಮಾನಕ್ಕೆ ಬಂದರು. ಕಾಂಗ್ರೆಸ್ ಈ ಸಂದರ್ಭದಲ್ಲಿ ಟ್ರಂಪ್‌ಕಾರ್ಡ್ ಹಾಕಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಿದಲ್ಲದೆ ಕಾರ್ಮಿಕರ ಕೃತಜ್ಞತೆಗೂ ಪಾತ್ರವಾಯಿತು.

ಕೊರೋನಾ ಆದಷ್ಟು ಬೇಗ ಮುಕ್ತಾಯಗೊಳ್ಳಲಿ ನಮ್ಮ ಮೋದಿ ಷಾ ವಿರುದ್ಧ ಹೋರಾಟ ಆರಂಭವಾಗಲಿ ಎಂದು ಆಶಿಸುತ್ತೇನೆ.


ಇದನ್ನೂ ಓದಿ: ಹಸಿದವರ ಮುಂದೆ ಮೃಷ್ಟಾನ್ನದ ಕತೆ ಹೇಳಿದವರು… 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...