Homeಮುಖಪುಟಹಸಿವಿನ ಭಾಷೆ ಕಲಿಸುವ ರಮಝಾನ್

ಹಸಿವಿನ ಭಾಷೆ ಕಲಿಸುವ ರಮಝಾನ್

- Advertisement -
- Advertisement -

ಜಗತ್ತಿಗೆರಗಿದ ಕೊರೋನಾ ವಿಪತ್ತು, ಲಾಕ್ಡೌನ್ ಸಂಕಷ್ಟಗಳ ನಡುವೆ ಈ ಬಾರಿಯ ರಮಝಾನ್ ಆಗಮಿಸಿ, ಇದೀಗ ನಿರ್ಗಮನದ ಹೊಸ್ತಿಲಲ್ಲಿದೆ. ದಿನವಿಡೀ ತೊಟ್ಟು ಹನಿಯನ್ನೂ ಗಂಟಲಿಗಿಳಿಸದೇ ಉಪವಾಸವಿದ್ದು ಹಸಿವಿನ ಆಳ ಅಗಲಗಳನ್ನು ಪರಿಚಯಿಸಿಕೊಳ್ಳುವ ರಮಝಾನ್ ಈ ಬಾರಿ ತುಸು ಹೆಚ್ಚೇ ತೀಕ್ಷ್ಣವಾಗಿದೆ. ಜಗತ್ತಿನ ಮೂಲೆ ಮೂಲೆಯಲ್ಲಿನ ಮನಕಲಕುವ ಹಸಿವಿನ ಚಿತ್ರಣಗಳು ಪ್ರತಿನಿತ್ಯ ಕಣ್ಣ ಮುಂದೆ ಬಂದು ನಿಲ್ಲುತ್ತಲೇ ಇವೆ. ಲಾಕ್ಡೌನ್ ಪ್ರಾರಂಭವಾದ ಆರಂಭದ ದಿನಗಳಲ್ಲಿ ಪ್ರಧಾನಿ ಮೋದಿಯವರ ಸ್ವಕ್ಷೇತ್ರ ವಾರಣಾಸಿಯ ಬುಡಕಟ್ಟು ಜನಾಂಗವೊಂದರ ಪುಟ್ಟ ಮಕ್ಕಳು ಕುರುಚಲು ಹುಲ್ಲನ್ನು ಉಪ್ಪು ಬೆರೆಸಿ ತಿನ್ನುವ ಹೃದಯ ವಿದ್ರಾವಕ ದೃಶ್ಯವನ್ನು ಪತ್ರಕರ್ತರಾದ ಇಸ್ಮತ್ ಅರಾ The wire.inನಲ್ಲಿ ವರದಿ ಮಾಡಿದ್ದರು. ಕಿನ್ಯಾದ ಮೊಂಬಾಸ ಎಂಬಲ್ಲಿ ಹಸಿವು ತಾಳಲಾರದೇ ರಚ್ಚೆ ಹಿಡಿಯುತ್ತಿದ್ದ ತನ್ನ ಮಕ್ಕಳನ್ನು ಸಂತೈಸುವುದಕ್ಕಾಗಿ ವಿಧವೆ ತಾಯಿಯೊಬ್ಬಳು ಮಡಕೆಯೊಳಗೆ ಕಲ್ಲುಗಳನ್ನು ಹಾಕಿ ಬೇಯಿಸುವಂತೆ ನಟಿಸಿದ್ದಳೆಂದರೆ ಹಸಿವಿನ ಕಾಠಿಣ್ಯವೆಷ್ಟಿರಬೇಕು..? ವ್ರತಾಚರಿಸಿದವನಿಗೆ ದಿನದ ಕೊನೆಯಲ್ಲಿ ಏನನ್ನಾದರೂ ಹೊಟ್ಟೆಗಿಳಿಸಬಹುದೆಂಬ ಭರವಸೆಯಿದೆ. ಆದರೆ ಸಂಕಷ್ಟದಲ್ಲಿ ಸಿಲುಕಿ ಉಪವಾಸ ಬಿದ್ದವರ ಪಾಡು, ತುತ್ತು ಕೂಳಿಗೂ ತತ್ವಾರಪಡುವ ದಟ್ಟ ದರಿದ್ರರ ಪಾಡು ಊಹೆಗೂ ನಿಲುಕದ್ದು.

ಹಸಿವು ಮರಣಕ್ಕಿಂತಲೂ ಭಯಾನಕ ಎನ್ನುತ್ತಾರೆ. ಲಾಕ್ಡೌನಿನಿಂದ ಹಸಿವು ತಾಳಲಾರದೇ ಕಾಳಿಂಗ ಸರ್ಪವೊಂದನ್ನು ಬೇಟೆಯಾಡಿ ತಿಂದ ಘಟನೆಯು ಇದನ್ನು ಸಮರ್ಥಿಸುವಂತಿದೆ.

ಜಗತ್ತಿನಲ್ಲಿ ಹಸಿವಿಗಿಂತ ಮಿಗಿಲಾದ ಫಿಲಾಸಫಿ ಇನ್ನೊಂದಿಲ್ಲ. “ನೆರೆಮನೆಯವನು ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣುವವನು ನನ್ನವನಲ್ಲ” ಎಂಬ ಪ್ರವಾದಿ ಮುಹಮ್ಮದ್ (ಸ) ರ ವಚನ ಅದೆಷ್ಟು ಸುಂದರ ಮತ್ತು ಅದರ ಹಿಂದಿನ ಕಾಳಜಿ ಅದೆಷ್ಟು ಶ್ರೇಷ್ಠ.. ಇಲ್ಲಿ ಪ್ರವಾದಿವರ್ಯರು ಹಸಿದ ಹೊಟ್ಟೆಯನ್ನಷ್ಟೇ ಉಲ್ಲೇಖಿಸಿದ್ದಾರೆಯೇ ಹೊರತು ಆ ಹೊಟ್ಟೆ ಹೊತ್ತ ಮನುಷ್ಯನ ಜಾತಿ, ಧರ್ಮವನ್ನಲ್ಲ. ಹಾಗಾಗಿ ಹಸಿದವನ ಹಸಿವು ತಣಿಸುವುದು ಮುಸಲ್ಮಾನನಿಗೆ ಧಾರ್ಮಿಕ ಬಾಧ್ಯತೆಯಾಗಿದೆ.

ಇಸ್ಲಾಂ ರಮಝಾನ್ ಉಪವಾಸವನ್ನು ಪ್ರತಿಯೊಬ್ಬರಿಗೂ ಕಡ್ಡಾಯಗೊಳಿಸಿರುವುದು ಹಸಿವಲ್ಲಿರಿಸಿ ದಂಡಿಸುವುದಕ್ಕಲ್ಲ. ಆತ್ಮ ಸಂಸ್ಕರಣೆಯೇ ಉಪವಾಸದ ಮೂಲ ಉದ್ದೇಶ. ಉಪವಾಸ ಕೇವಲ ಆರಾಧನೆಯಷ್ಟೇ ಅಲ್ಲ. ಅದರಾಚೆಗೆ ಕಲಿಯಬೇಕಾದ ಪಾಠಗಳು ಬಹಳಷ್ಟಿವೆ.

ಅನುಭವಕ್ಕಿಂತ ದೊಡ್ಡ ಪಾಠವಿಲ್ಲ. ಸ್ವಯಂ ಉಪವಾಸವಿದ್ದಾಗ ಮಾತ್ರ ಹಸಿವಿನ ಕಾಠಿಣ್ಯವನ್ನರಿಯಲು ಸಾಧ್ಯ. ಹೊಟ್ಟೆಗೆ ಹಿಟ್ಟಿಲ್ಲದ ಬಡವನ ಸಂಕಟವನ್ನು ಓರ್ವ ವ್ರತಧಾರಿ ಚೆನ್ನಾಗಿ ಅರ್ಥೈಸಬಲ್ಲನು. ಆದುದರಿಂದಲೇ ಇಂದು ನಮ್ಮ ದೇಶದಲ್ಲಿ ಹಸಿದವರ ಹಸಿವು ತಣಿಸುವ ಕೆಲಸದಲ್ಲಿ ಮುಸ್ಲಿಂ ಸಮುದಾಯ ದೊಡ್ಡ ಸಂಖ್ಯೆಯಲ್ಲಿ ತೊಡಗಿಸಿಕೊಂಡಿರುವುದು. ಕೈಗೆಟುಕದ ಆಹಾರವನ್ನು ದೂರದಿಂದ ಆಸೆಕಣ್ಣುಗಳಿಂದ ನೋಡುವ ಫಕೀರನ ಆ ಅನುಭವ ವ್ರತ ಅನುಷ್ಠಾನದ ಪ್ರತಿಯೊಬ್ಬನೊಳಗೂ ಉಂಟಾಗುತ್ತದೆ. ಕಣ್ಣ ಮುಂದೆ ಯಥೇಚ್ಛ ಆಹಾರ-ಪಾನೀಯಗಳಿದ್ದರೂ ಉಪವಾಸ ಪಾರಣೆಯ ಹೊತ್ತಾಗದೇ ಒಂದೇ ಒಂದು ಅಗುಳನ್ನೋ/ ಹನಿಯನ್ನೋ ಬಾಯಿಗಿಳಿಸುವಂತಿಲ್ಲ. ಖಾಲಿ ತಟ್ಟೆಯ ಹಸಿವಿನ ಕಾವು ತುಂಬು ಬಟ್ಟಲಿಗೆ ಮುಟ್ಟುವುದೇ ಇಲ್ಲಿ. ಜೊತೆಗೆ ಸಹನೆ ಎಂದರೆ ಏನೆಂಬುವುದನ್ನು ಉಪವಾಸವು ಕಲಿಸಿ ಕೊಡುತ್ತದೆ. ಹಸಿವಿನ ರುಚಿಯುಣ್ಣದ ಶ್ರೀಮಂತ ವರ್ಗವು ನಮ್ಮ ಸಮಾಜದಲ್ಲಿದೆ. ರಮಝಾನಿಗೆ ಬಡವ- ಶ್ರೀಮಂತ, ಗಂಡು- ಹೆಣ್ಣು, ಮಳೆ, ಚಳಿ, ಕರಟಿ ಹೋಗುವ ಬಿಸಿಲೆಂಬ ವ್ಯತ್ಯಾಸವಿಲ್ಲ. ರಮಝಾನ್ ಬಂತೆಂದರೆ ಬಡವನ ಹೊಟ್ಟೆಯಲ್ಲಿನ ಅದೇ ಸಂಕಟವನ್ನು ಶ್ರೀಮಂತನೂ ಆಸ್ವಾದಿಸಲೇಬೇಕಾಗುತ್ತದೆ, ಹಸಿವಿನ ಭಾಷೆಯನ್ನು ಕಲಿಯಬೇಕಾಗುತ್ತದೆ.

ದಿನವಿಡೀ ಉಪವಾಸವಿದ್ದು ಇಫ್ತಾರಿನ ಸಮಯದಲ್ಲಿ ಹೊಟ್ಟೆ ಬಿರಿಯುವಂತೆ ತಿನ್ನುವರೆಂಬ ತಪ್ಪು ಕಲ್ಪನೆ ಕೆಲವು ಮುಸ್ಲಿಮೇತರರಲ್ಲಿದೆ. ಇದು ಹೇಗೆಂದರೆ, ದಿನವಿಡೀ ಅನ್ನ ನೀರಿಲ್ಲದೆ ಬಳಲಿ ಬೆಂಡಾದವನ ಮುಂದೆ ವಿವಿಧ ಭೋಜನ ವಸ್ತುಗಳನ್ನಿಟ್ಟಂತೆ. ಆತ ಏನನ್ನೆಲ್ಲಾ ಹೊಟ್ಟೆಗಿಳಿಸಿಯಾನು? ದಿನವಿಡೀ ಹಸಿವಿನಲ್ಲಿದ್ದ ಕಾರಣಕ್ಕೆ ಬಡ್ಡಿ ಸೇರಿಸಿ ತಿನ್ನಲು ಆತನ ಬರಿ ಹೊಟ್ಟೆಗೆ ಸಾಧ್ಯವಾದೀತೇ? ಖಂಡಿತಾ ಇಲ್ಲ. ಬಡವನೊಡಲ ಈ ಅನುಭವವನ್ನು ವ್ರತಧಾರಿಯು ಇಫ್ತಾರಿನ ಸಮಯದಲ್ಲಿ ಅರಿತುಕೊಳ್ಳುತ್ತಾನೆ.

‘ತಿಬ್ಬುನ್ನಬಿ’ ಎಂಬ ಪ್ರವಾದಿ ಚಿಕಿತ್ಸೆಯಲ್ಲಿ ಈ ರೀತಿ ಉಲ್ಲೇಖಿಸಲಾಗಿದೆ, “ಮನುಷ್ಯರಿಗೆ ಆತನ ಹೊಟ್ಟೆಗಿಂತ ಕೆಟ್ಟ ಪಾತ್ರೆ ಬೇರೊಂದಿಲ್ಲ. ಹಾಗಾಗಿ ಹೊಟ್ಟೆಯನ್ನು ಮೂರು ಭಾಗಗಳನ್ನಾಗಿ ಮಾಡಿ, ಅದರಲ್ಲಿ ಒಂದಂಶ ನೀರಿಗೂ, ಒಂದಂಶ ವಾಯುವಿಗೂ, ಒಂದಂಶ ಆಹಾರಕ್ಕೂ ಮೀಸಲಿಡಬೇಕು.” ಆರೋಗ್ಯದ ದೃಷ್ಟಿಯಿಂದಲೂ ಮಿತಾಹಾರ ಒಳ್ಳೆಯದು ಎಂಬುವುದನ್ನು ಇಲ್ಲಿ ಮನಗಾಣಬಹುದು. ಒಟ್ಟಿನಲ್ಲಿ ಉಪವಾಸವೆಂಬುದು ಹೃದಯದ ಕಣ್ಣನ್ನು ತೆರೆಸುವ ಅಸ್ತ್ರ.

ಮನುಷ್ಯ ಸಂಬಂಧವನ್ನು ಗಟ್ಟಿಗೊಳಿಸುವುದು ರಮಝಾನ್‍ನ ಇನ್ನೊಂದು ಅತೀ ಮಹತ್ವದ ಸಂದೇಶವಾಗಿದೆ. ರಮಝಾನ್ ಎಂಬ ಅರಬೀ ಪದಕ್ಕೆ ಸುಟ್ಟು ಹಾಕು ಎಂಬ ಅರ್ಥವಿದೆ. ಕೆಡುಕುಗಳನ್ನು ಸುಟ್ಟು ಹಾಕುವುದು ರಮಝಾನ್‍ನ ಮೂಲಭೂತ ಉದ್ದೇಶಗಳಲ್ಲೊಂದಾಗಿದೆ.

ರಮಝಾನ್‍ನಲ್ಲಿ ಮನುಷ್ಯರು ಪರಸ್ಪರರ ಮೇಲೆ ಅರಿತೋ, ಅರಿಯದೆಯೋ ಮಾಡಿದ ಅಕ್ರಮಗಳನ್ನು ಮಾಫ್ ಮಾಡಿಸಬೇಕಾದುದು ಅತೀ ಅಗತ್ಯ. ಆ ಮೂಲಕ ದ್ವೇಷ, ಈಷ್ರ್ಯೆಗಳನ್ನು ಸುಟ್ಟು ಹಾಕಿ ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುವ ಮಹೋನ್ನತ ಉದ್ದೇಶ ರಮಝಾನಿಗಿದೆ.

ಎಳವೆಯಲ್ಲಿ ರಮಝಾನ್ ಎಂದರೆ ನಮಗೆ ಎಲ್ಲಿಲ್ಲದ ಸಂಭ್ರಮ, ಸಡಗರ. ಆ ದಿನಗಳಿಗೆಂದೇ ವಿವಿಧ ಅಡುಗೆ ಸಾಮಗ್ರಿಗಳು, ಹಣ್ಣು ಹಂಪಲುಗಳು ಮನೆ ಸೇರುತ್ತಿದ್ದವು. ಆಗೆಲ್ಲಾ ನಾನು ಕಲ್ಲಂಗಡಿ ಹಣ್ಣನ್ನು, ಕಡ್ಲೆ ಬೇಳೆ ಮನ್ನಿಯನ್ನು ಉಪವಾಸ ಅಂದುಕೊಳ್ಳುತ್ತಿದ್ದೆ. ಹೊಟ್ಟೆಗಿಲ್ಲದ ಮಕ್ಕಳಿಗೆ ಉಪವಾಸವೆಂದರೆ ವಿಶೇಷ ಅನ್ನಿಸಲಾರದು. ‘ಹಸಿವು’ ಜಗತ್ತಿನಲ್ಲಿ ಹೊಸತಾಗಿ ಹುಟ್ಟಿಕೊಂಡದ್ದೇನೂ ಅಲ್ಲ. ನಮ್ಮ ದೇಶದಲ್ಲಿ ಕೊರೊನಾ ಇದನ್ನು ಮತ್ತೊಮ್ಮೆ ತೆರೆಯ ಮೇಲೆ ಎಳೆದು ತಂದಿದೆ ಅಷ್ಟೇ. ಹಸಿವಿನ ಕಾಠಿಣ್ಯವರಿತು ಸುತ್ತ ಮುತ್ತಲ ಸಹಮಾನವರ ಹಸಿವು ತಣಿಸುವ ಪ್ರಯತ್ನಗಳು ನಮ್ಮಿಂದಾಗದಿದ್ದರೆ ನಮ್ಮ ಉಪವಾಸದ ಉದ್ದೇಶ ಪ್ರಶ್ನಾರ್ಹವಾಗಿಯೇ ಉಳಿಯಬಲ್ಲುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...