Homeಮುಖಪುಟಲಾಠಿ ಹಿಡಿದ ಪ್ರಧಾನಿ ನೆಹರೂ ಹಿಂಸಾನಿರತ ಗುಂಪು ಚದುರಿಸಿದ್ದನ್ನು ಮರೆಯಲಾಗದು: ಅಡ್ಮಿರಲ್ ರಾಮದಾಸ್

ಲಾಠಿ ಹಿಡಿದ ಪ್ರಧಾನಿ ನೆಹರೂ ಹಿಂಸಾನಿರತ ಗುಂಪು ಚದುರಿಸಿದ್ದನ್ನು ಮರೆಯಲಾಗದು: ಅಡ್ಮಿರಲ್ ರಾಮದಾಸ್

ನಿಜವಾದ ನಾಯಕರೆಂದರೆ, ದಾರ್ಶನಿಕತೆ ಮತ್ತು ಧೈರ್ಯ ಹೊಂದಿರುವವರು. ಪಂಡಿತ್‌ಜೀ ಅವರು ಈ ಗುಣಗಳ ಮಾದರಿಯಾಗಿದ್ದಾರೆ.

- Advertisement -
- Advertisement -

ಅಡ್ಮಿರಲ್ ಲಕ್ಷ್ಮೀನಾರಾಯಣ ರಾಮದಾಸ್, ಪಿವಿಎಸ್‌ಎಂ, ಎವಿಎಸ್‌ಎಂ, ವೀರಚಕ್ರ, ವಿಎಸ್‌ಎಂ, ಎಡಿಸಿ ಅವರು ಭಾರತೀಯ ನೌಕಾಸೇನೆಯ ಮಾಜಿ ಮಹಾದಂಡನಾಯಕರಾಗಿದ್ದು, ಮೊದಲ ಪ್ರಧಾನಿ ನೆಹರೂ ಅವರು ಲಾಠಿ ಹಿಡಿದು ಹಿಂಸಾನಿರತ ಗುಂಪನ್ನು ಚದರಿಸಿದ ಘಟನೆಯನ್ನು ಇಲ್ಲಿ ನೆನಪಿಸಿಕೊಂಡಿದ್ದಾರೆ.

***

1947ರಲ್ಲಿ ನಾನು ಹದಿನಾಲ್ಕು ವರ್ಷದ ಹುಡುಗನಾಗಿದ್ದು, ದಿಲ್ಲಿಯಲ್ಲಿ ವಾಸಿಸುತ್ತಿದ್ದೆ. ದೇಶ ವಿಭಜನೆಯ ಯಾತನೆ ಮತ್ತು ಉದ್ವೇಗ ಹಾಗೂ ಸ್ವಾತಂತ್ರ್ಯದ ಭರವಸೆಯಲ್ಲಿ ನಾನಿದ್ದೆ. ನಾನು ನೌಕಾಪಡೆಗೆ ಸೇರಿದ್ದಕ್ಕೆ ಪ್ರೇರಣೆಯೇ ಅದು ದೇಶಸೇವೆಗೆ ಅವಕಾಶ ಒದಗಿಸಿ, ದೇಶ ಕಟ್ಟುವ ಕೆಲಸದಲ್ಲಿ ನೆರವಾಗಬಹುದೆಂಬ ನಿರೀಕ್ಷೆ. ನಾನು ಭಾರತದ ಕೊನೆಯ ವೈಸರಾಯ್ ಮತ್ತು ಮೊದಲ ಗವರ್ನರ್ ಜನರಲ್ ಆಗಿದ್ದ ಬರ್ಮಾದ ಲಾರ್ಡ್ ಲೂಯಿ ಮೌಂಟ್‌ಬ್ಯಾಟನ್ ಅವರ ಸ್ವಚ್ಛ, ಬಿಳಿ ಸಮವಸ್ತ್ರದಿಂದ ಸಂಪೂರ್ಣ ಮಂತ್ರಮುಗ್ಧನಾಗಿದ್ದೆ ಎಂಬುದನ್ನು ಒಪ್ಪಿಕೊಳ್ಳಬೇಕು. ನೆಹರೂ ಅವರನ್ನು ಅವರ ನಿಷ್ಕಳಂಕ ಚೂಡಿದಾರ್- ಕುರ್ತಾ ಮತ್ತು ವಿಶಿಷ್ಟ “ನೆಹರೂ” ಜ್ಯಾಕೆಟ್‌ನಲ್ಲಿ ನೋಡದಿರುವುದು ಸಾಧ್ಯವಿರಲಿಲ್ಲ- ಅದಕ್ಕೆ ಈ ದಿನಗಳಲ್ಲಿ ಬೇರೆಯೇ ಹೆಸರಿದೆ.

ನೆನಪಿನಲ್ಲಿ ಎದ್ದು ಕಾಣುವ ಆ ತಲೆಮಾರಿನ ನಾಯಕರ ಗುಣಗಳ ಕುರಿತು ಹಿಂತಿರುಗಿ ನೋಡಿದಾಗ ಒಂದು ಚಿತ್ರವನ್ನು ಅದೂ ತೀರಾ ಹತ್ತಿರದಿಂದ ನೋಡಿದ ಒಂದು ಚಿತ್ರವನ್ನು ನಾನೆಂದಿಗೂ ಮರೆಯಲಾರೆ. ಅದೆಂದರೆ “ಕಾರ್ಯಾಚರಣೆಯಲ್ಲಿ ನೆಹರೂ”.

ಆ ಭಯಾನಕ ದಿನಗಳ ಮೂರು ಚಿತ್ರಗಳು ನನ್ನ ಮನದಲ್ಲಿ ಅಚ್ಚೊತ್ತಿ ಉಳಿದಿವೆ-

– ನನ್ನ ಕಣ್ಣೆದುರೇ ಅಸಹಾಯಕ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಚೂರಿ ಇರಿತದ ಕ್ರೂರ ಘಟನೆ.

-ನಮ್ಮ ಬಂಗಾಳಿ ಮಾರ್ಕೆಟ್ ಮನೆಯ ಹೊರಗೆ ಉದ್ರಿಕ್ತ ಗುಂಪೊಂದು ನಮ್ಮ ಮನೆಯಲ್ಲಿ ಆಶ್ರಯ ಪಡೆದಿದ್ದ ನನ್ನ ತಂದೆಯವರ ಮಿತ್ರ ಹಾಗೂ ಸಹೋದ್ಯೋಗಿ ಗುಲಾಂ ಮೊಹಮ್ಮದ್ ಅವರನ್ನು ಹೊರಗೆ ಕಳುಹಿಸದಿದ್ದರೆ ತಂದೆಯವರಿಗೆ ಹಿಂಸಾಚಾರದ ಬೆದರಿಕೆ ಒಡ್ಡಿದ್ದು.

– ತನ್ನ ಸ್ವಂತ ಜೀವದ ಬೆದರಿಕೆಯನ್ನೂ ಲೆಕ್ಕಿಸದೆ ಪಂಡಿತ್ ನೆಹರೂ ಅವರು ಹಿಂಸಾನಿರತ ಉದ್ರಿಕ್ತ ಜನರ ಗುಂಪನ್ನು ಚದರಿಸಲು ಲಾಠಿ ಹಿಡಿದು ಧುಮುಕಿದ್ದು.

ಈ ಕೊನೆಯ ಘಟನೆಯನ್ನು ನೆನಪಿಸಿಕೊಳ್ಳಲು ನಾನು ಕೆಲವು ಸೆಕೆಂಡುಗಳನ್ನು ಕಳೆಯುತ್ತೇನೆ.

ನಾನು ಕನ್ನಾಟ್ ಸರ್ಕಸ್‌ನ ಅಗ್ನಿಶಾಮಕ ಠಾಣೆಯ ಎದುರಿದ್ದ ಕಟ್ಟಡವೊಂದರ ಮೊದಲ ಮಹಡಿಯಲ್ಲಿದ್ದ ನ್ಯೂ ಕ್ಯಾಂಬ್ರಿಡ್ಜ್ ಸ್ಕೂಲ್‌ನಿಂದ ಮನೆಗೆ ಮರಳುವ ಹಾದಿಯಲ್ಲಿದ್ದೆ. ಆಗ ಅಲ್ಲಲ್ಲಿ ಉದ್ರಿಕ್ತ ಮತ್ತು ಹಿಂಸಾಚಾರ ನಿರತ ಗುಂಪುಗಳಿರುತ್ತಿದ್ದವು. ಅಂತಹಾ ಒಂದು ಗುಂಪು ದಿಲ್ಲಿಯ ಹಲವಾರು ಜನರಿಗೆ ಪ್ರಿಯ ತಾಣವಾಗಿದ್ದ ಪ್ರಸಿದ್ಧ ಪುಸ್ತಕದಂಗಡಿಯಾಗಿದ್ದ ಎಸ್. ರಿಯಾಜುದ್ದೀನ್ ಎಂಡ್ ಸನ್ಸ್‌ನತ್ತ ಸಾಗುತ್ತಿತ್ತು.

ಏಕಾಏಕಿಯಾಗಿ ಒಂದು ಕೆನೆಬಣ್ಣದ ಅಂಬಾಸಿಡರ್ ಕಾರು ಬಂದು ನಿಂತಿತು, ಅದರ ಬಾಗಿಲು ತೆರೆಯಿತು ಮತ್ತು ನನ್ನನ್ನು ದಂಗುಬಡಿಸುವಂತಹ ಅಚ್ಚರಿಯಲ್ಲಿ ಕೆಡಹುವಂತೆ ಕೆಳಗಿಳಿದ ಜವಾಹರಲಾಲ್ ನೆಹರೂ ಅವರು ತನ್ನ ಕೈಯಲ್ಲಿದ್ದ ಲಾಠಿಯನ್ನು ಝಳಪಿಸುತ್ತಾ, ಹಿಂಸಾಚಾರ ನಿಲ್ಲಿಸುವಂತೆ ಕೂಗುತ್ತಾ ಗುಂಪಿನತ್ತ ಓಡಿದರು. ನಮ್ಮ ಪ್ರಧಾನಿಯವರೇ ಸ್ವಂತ ಭದ್ರತೆಯನ್ನು ಲೆಕ್ಕಿಸದೇ, ಯಾವುದೇ ಭದ್ರತೆ ಇಲ್ಲದೇ ಕಾರ್ಯಾಚರಣೆಗೆ ಧುಮುಕಿದ್ದನ್ನು ನೋಡಿ ದಂಗಾಗಿಹೋದೆ.

ಹೀಗೆ ನಡೆದಂತೆ, ನಾನು ಚಿಕ್ಕದೊಂದು ಭೇಟಿಗಾಗಿ ಮುಂಬಯಿಗೆ ಹೋಗಿದ್ದವನು ಮಹಮ್ಮದಾಲಿ ರಸ್ತೆಯಲ್ಲಿದ್ದಾಗ ದಿಲ್ಲಿಯ ಬಿರ್ಲಾ ಭವನದಲ್ಲಿ ರಾಷ್ಟ್ರಪಿತ ಗಾಂಧೀಜಿಯವರ ಹತ್ಯೆಯಾದ ಸುದ್ದಿ ಬಂತು. ವ್ಯಾಪಾರಿಗಳು ತರಾತುರಿಯಲ್ಲಿ ಅಂಗಡಿ ಬಾಗಿಲುಗಳನ್ನು ಮುಚ್ಚುವುದನ್ನು ಮತ್ತು ಜನರು ಯದ್ವಾತದ್ವಾ ಓಡುವುದನ್ನು ಕಂಡೆ. ಗಾಂಧೀಜಿಯವರನ್ನು ಕೊಂದದ್ದು ಒಬ್ಬ ಹಿಂದೂ ಎಂದು ಆಕಾಶವಾಣಿಯಲ್ಲಿ ಮಾತನಾಡಿದ ಪ್ರಧಾನಿ ನೆಹರೂ ಮತ್ತೆ ಮತ್ತೆ ಹೇಳಿದ್ದನ್ನು ಕೇಳಿ ನಮಗೆಷ್ಟು ಸಮಾಧಾನವಾಯಿತು ಎಂಬುದನ್ನು ನೆನಪಿಸಿಕೊಳ್ಳಬಲ್ಲೆ. ಇದರಿಂದ ಅವರು ಅಲ್ಪಪಸಂಖ್ಯಾತ ಸಮುದಾಯದ ಮೇಲೆ ಕೋಪ ಸ್ಫೋಟಗೊಂಡು ಹಿಂಸಾಚಾರ ನಡೆಯದಂತೆ ಅವರು ಖಾತರಿಪಡಿಸಿದ್ದರು. ಇದಕ್ಕೆ ತೀಕ್ಷ್ಣವಾದ ಪ್ರಸಂಗಾವಧಾನತೆ ಮತ್ತು ನಮ್ಮ ದೇಶದ ಜಾತ್ಯಾತೀತ ಸ್ವರೂಪದ ರಕ್ಷಣೆಯ ಅಗತ್ಯದ ಕುರಿತು ಆಳವಾದ ನಂಬಿಕೆಯ ಅಗತ್ಯವಿತ್ತು.

ನಾನು ವರ್ಷಗಳ ಹಿಂದೆ ಕಣ್ಣುತಿರುಗಿಸಿ ನೋಡಿದಾಗ, ಅದರಲ್ಲೂ ಮುಖ್ಯವಾಗಿ ಈ ವರ್ಷದ ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರ ಗಮನಿಸಿದಾಗ ಅದನ್ನು 1947ರ ಅತ್ಯಂತ ಸ್ಫೋಟಕ ಪರಿಸ್ಥಿತಿಗೆ ಹೋಲಿಸುವುದು ಕಷ್ಟವಲ್ಲ. 2020ರಲ್ಲಿ ಯಾವುದೇ ರಾಜಕೀಯ ನಾಯಕರು ಹಿಂಸಾಚಾರವನ್ನಾಗಲೀ, ನಂತರದಲ್ಲಿ ದೇಶಕ್ಕೆ ಆಳವಾದ ಹಾನಿಯುಂಟುಮಾಡುವ ವಿಭಜನೆಯನ್ನಾಗಲೀ ದೈಹಿಕವಾಗಿ ನಿಯಂತ್ರಿಸಲು ವೈಯಕ್ತಿಕವಾಗಿ ಹಾಜರಿರಲಿಲ್ಲ.

ನಿಜವಾದ ನಾಯಕರೆಂದರೆ, ದಾರ್ಶನಿಕತೆ ಮತ್ತು ಧೈರ್ಯ ಹೊಂದಿರುವವರು. ಪಂಡಿತ್‌ಜೀ ಅವರು ಈ ಗುಣಗಳ ಮಾದರಿಯಾಗಿದ್ದಾರೆ.

ಅನುವಾದ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ವಿಚ್ಛಿದ್ರಕಾರಿ ಅಜೆಂಡಾ ತಡೆಯಲು ಮುಂದಾಗಿ: ಮೋದಿಗೆ ನೌಕಾಪಡೆ ಮಾಜಿ ಮುಖ್ಯಸ್ಥ ಎಲ್. ರಾಮದಾಸ್ ಪತ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...