Homeಮುಖಪುಟಲಾಠಿ ಹಿಡಿದ ಪ್ರಧಾನಿ ನೆಹರೂ ಹಿಂಸಾನಿರತ ಗುಂಪು ಚದುರಿಸಿದ್ದನ್ನು ಮರೆಯಲಾಗದು: ಅಡ್ಮಿರಲ್ ರಾಮದಾಸ್

ಲಾಠಿ ಹಿಡಿದ ಪ್ರಧಾನಿ ನೆಹರೂ ಹಿಂಸಾನಿರತ ಗುಂಪು ಚದುರಿಸಿದ್ದನ್ನು ಮರೆಯಲಾಗದು: ಅಡ್ಮಿರಲ್ ರಾಮದಾಸ್

ನಿಜವಾದ ನಾಯಕರೆಂದರೆ, ದಾರ್ಶನಿಕತೆ ಮತ್ತು ಧೈರ್ಯ ಹೊಂದಿರುವವರು. ಪಂಡಿತ್‌ಜೀ ಅವರು ಈ ಗುಣಗಳ ಮಾದರಿಯಾಗಿದ್ದಾರೆ.

- Advertisement -
- Advertisement -

ಅಡ್ಮಿರಲ್ ಲಕ್ಷ್ಮೀನಾರಾಯಣ ರಾಮದಾಸ್, ಪಿವಿಎಸ್‌ಎಂ, ಎವಿಎಸ್‌ಎಂ, ವೀರಚಕ್ರ, ವಿಎಸ್‌ಎಂ, ಎಡಿಸಿ ಅವರು ಭಾರತೀಯ ನೌಕಾಸೇನೆಯ ಮಾಜಿ ಮಹಾದಂಡನಾಯಕರಾಗಿದ್ದು, ಮೊದಲ ಪ್ರಧಾನಿ ನೆಹರೂ ಅವರು ಲಾಠಿ ಹಿಡಿದು ಹಿಂಸಾನಿರತ ಗುಂಪನ್ನು ಚದರಿಸಿದ ಘಟನೆಯನ್ನು ಇಲ್ಲಿ ನೆನಪಿಸಿಕೊಂಡಿದ್ದಾರೆ.

***

1947ರಲ್ಲಿ ನಾನು ಹದಿನಾಲ್ಕು ವರ್ಷದ ಹುಡುಗನಾಗಿದ್ದು, ದಿಲ್ಲಿಯಲ್ಲಿ ವಾಸಿಸುತ್ತಿದ್ದೆ. ದೇಶ ವಿಭಜನೆಯ ಯಾತನೆ ಮತ್ತು ಉದ್ವೇಗ ಹಾಗೂ ಸ್ವಾತಂತ್ರ್ಯದ ಭರವಸೆಯಲ್ಲಿ ನಾನಿದ್ದೆ. ನಾನು ನೌಕಾಪಡೆಗೆ ಸೇರಿದ್ದಕ್ಕೆ ಪ್ರೇರಣೆಯೇ ಅದು ದೇಶಸೇವೆಗೆ ಅವಕಾಶ ಒದಗಿಸಿ, ದೇಶ ಕಟ್ಟುವ ಕೆಲಸದಲ್ಲಿ ನೆರವಾಗಬಹುದೆಂಬ ನಿರೀಕ್ಷೆ. ನಾನು ಭಾರತದ ಕೊನೆಯ ವೈಸರಾಯ್ ಮತ್ತು ಮೊದಲ ಗವರ್ನರ್ ಜನರಲ್ ಆಗಿದ್ದ ಬರ್ಮಾದ ಲಾರ್ಡ್ ಲೂಯಿ ಮೌಂಟ್‌ಬ್ಯಾಟನ್ ಅವರ ಸ್ವಚ್ಛ, ಬಿಳಿ ಸಮವಸ್ತ್ರದಿಂದ ಸಂಪೂರ್ಣ ಮಂತ್ರಮುಗ್ಧನಾಗಿದ್ದೆ ಎಂಬುದನ್ನು ಒಪ್ಪಿಕೊಳ್ಳಬೇಕು. ನೆಹರೂ ಅವರನ್ನು ಅವರ ನಿಷ್ಕಳಂಕ ಚೂಡಿದಾರ್- ಕುರ್ತಾ ಮತ್ತು ವಿಶಿಷ್ಟ “ನೆಹರೂ” ಜ್ಯಾಕೆಟ್‌ನಲ್ಲಿ ನೋಡದಿರುವುದು ಸಾಧ್ಯವಿರಲಿಲ್ಲ- ಅದಕ್ಕೆ ಈ ದಿನಗಳಲ್ಲಿ ಬೇರೆಯೇ ಹೆಸರಿದೆ.

ನೆನಪಿನಲ್ಲಿ ಎದ್ದು ಕಾಣುವ ಆ ತಲೆಮಾರಿನ ನಾಯಕರ ಗುಣಗಳ ಕುರಿತು ಹಿಂತಿರುಗಿ ನೋಡಿದಾಗ ಒಂದು ಚಿತ್ರವನ್ನು ಅದೂ ತೀರಾ ಹತ್ತಿರದಿಂದ ನೋಡಿದ ಒಂದು ಚಿತ್ರವನ್ನು ನಾನೆಂದಿಗೂ ಮರೆಯಲಾರೆ. ಅದೆಂದರೆ “ಕಾರ್ಯಾಚರಣೆಯಲ್ಲಿ ನೆಹರೂ”.

ಆ ಭಯಾನಕ ದಿನಗಳ ಮೂರು ಚಿತ್ರಗಳು ನನ್ನ ಮನದಲ್ಲಿ ಅಚ್ಚೊತ್ತಿ ಉಳಿದಿವೆ-

– ನನ್ನ ಕಣ್ಣೆದುರೇ ಅಸಹಾಯಕ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಚೂರಿ ಇರಿತದ ಕ್ರೂರ ಘಟನೆ.

-ನಮ್ಮ ಬಂಗಾಳಿ ಮಾರ್ಕೆಟ್ ಮನೆಯ ಹೊರಗೆ ಉದ್ರಿಕ್ತ ಗುಂಪೊಂದು ನಮ್ಮ ಮನೆಯಲ್ಲಿ ಆಶ್ರಯ ಪಡೆದಿದ್ದ ನನ್ನ ತಂದೆಯವರ ಮಿತ್ರ ಹಾಗೂ ಸಹೋದ್ಯೋಗಿ ಗುಲಾಂ ಮೊಹಮ್ಮದ್ ಅವರನ್ನು ಹೊರಗೆ ಕಳುಹಿಸದಿದ್ದರೆ ತಂದೆಯವರಿಗೆ ಹಿಂಸಾಚಾರದ ಬೆದರಿಕೆ ಒಡ್ಡಿದ್ದು.

– ತನ್ನ ಸ್ವಂತ ಜೀವದ ಬೆದರಿಕೆಯನ್ನೂ ಲೆಕ್ಕಿಸದೆ ಪಂಡಿತ್ ನೆಹರೂ ಅವರು ಹಿಂಸಾನಿರತ ಉದ್ರಿಕ್ತ ಜನರ ಗುಂಪನ್ನು ಚದರಿಸಲು ಲಾಠಿ ಹಿಡಿದು ಧುಮುಕಿದ್ದು.

ಈ ಕೊನೆಯ ಘಟನೆಯನ್ನು ನೆನಪಿಸಿಕೊಳ್ಳಲು ನಾನು ಕೆಲವು ಸೆಕೆಂಡುಗಳನ್ನು ಕಳೆಯುತ್ತೇನೆ.

ನಾನು ಕನ್ನಾಟ್ ಸರ್ಕಸ್‌ನ ಅಗ್ನಿಶಾಮಕ ಠಾಣೆಯ ಎದುರಿದ್ದ ಕಟ್ಟಡವೊಂದರ ಮೊದಲ ಮಹಡಿಯಲ್ಲಿದ್ದ ನ್ಯೂ ಕ್ಯಾಂಬ್ರಿಡ್ಜ್ ಸ್ಕೂಲ್‌ನಿಂದ ಮನೆಗೆ ಮರಳುವ ಹಾದಿಯಲ್ಲಿದ್ದೆ. ಆಗ ಅಲ್ಲಲ್ಲಿ ಉದ್ರಿಕ್ತ ಮತ್ತು ಹಿಂಸಾಚಾರ ನಿರತ ಗುಂಪುಗಳಿರುತ್ತಿದ್ದವು. ಅಂತಹಾ ಒಂದು ಗುಂಪು ದಿಲ್ಲಿಯ ಹಲವಾರು ಜನರಿಗೆ ಪ್ರಿಯ ತಾಣವಾಗಿದ್ದ ಪ್ರಸಿದ್ಧ ಪುಸ್ತಕದಂಗಡಿಯಾಗಿದ್ದ ಎಸ್. ರಿಯಾಜುದ್ದೀನ್ ಎಂಡ್ ಸನ್ಸ್‌ನತ್ತ ಸಾಗುತ್ತಿತ್ತು.

ಏಕಾಏಕಿಯಾಗಿ ಒಂದು ಕೆನೆಬಣ್ಣದ ಅಂಬಾಸಿಡರ್ ಕಾರು ಬಂದು ನಿಂತಿತು, ಅದರ ಬಾಗಿಲು ತೆರೆಯಿತು ಮತ್ತು ನನ್ನನ್ನು ದಂಗುಬಡಿಸುವಂತಹ ಅಚ್ಚರಿಯಲ್ಲಿ ಕೆಡಹುವಂತೆ ಕೆಳಗಿಳಿದ ಜವಾಹರಲಾಲ್ ನೆಹರೂ ಅವರು ತನ್ನ ಕೈಯಲ್ಲಿದ್ದ ಲಾಠಿಯನ್ನು ಝಳಪಿಸುತ್ತಾ, ಹಿಂಸಾಚಾರ ನಿಲ್ಲಿಸುವಂತೆ ಕೂಗುತ್ತಾ ಗುಂಪಿನತ್ತ ಓಡಿದರು. ನಮ್ಮ ಪ್ರಧಾನಿಯವರೇ ಸ್ವಂತ ಭದ್ರತೆಯನ್ನು ಲೆಕ್ಕಿಸದೇ, ಯಾವುದೇ ಭದ್ರತೆ ಇಲ್ಲದೇ ಕಾರ್ಯಾಚರಣೆಗೆ ಧುಮುಕಿದ್ದನ್ನು ನೋಡಿ ದಂಗಾಗಿಹೋದೆ.

ಹೀಗೆ ನಡೆದಂತೆ, ನಾನು ಚಿಕ್ಕದೊಂದು ಭೇಟಿಗಾಗಿ ಮುಂಬಯಿಗೆ ಹೋಗಿದ್ದವನು ಮಹಮ್ಮದಾಲಿ ರಸ್ತೆಯಲ್ಲಿದ್ದಾಗ ದಿಲ್ಲಿಯ ಬಿರ್ಲಾ ಭವನದಲ್ಲಿ ರಾಷ್ಟ್ರಪಿತ ಗಾಂಧೀಜಿಯವರ ಹತ್ಯೆಯಾದ ಸುದ್ದಿ ಬಂತು. ವ್ಯಾಪಾರಿಗಳು ತರಾತುರಿಯಲ್ಲಿ ಅಂಗಡಿ ಬಾಗಿಲುಗಳನ್ನು ಮುಚ್ಚುವುದನ್ನು ಮತ್ತು ಜನರು ಯದ್ವಾತದ್ವಾ ಓಡುವುದನ್ನು ಕಂಡೆ. ಗಾಂಧೀಜಿಯವರನ್ನು ಕೊಂದದ್ದು ಒಬ್ಬ ಹಿಂದೂ ಎಂದು ಆಕಾಶವಾಣಿಯಲ್ಲಿ ಮಾತನಾಡಿದ ಪ್ರಧಾನಿ ನೆಹರೂ ಮತ್ತೆ ಮತ್ತೆ ಹೇಳಿದ್ದನ್ನು ಕೇಳಿ ನಮಗೆಷ್ಟು ಸಮಾಧಾನವಾಯಿತು ಎಂಬುದನ್ನು ನೆನಪಿಸಿಕೊಳ್ಳಬಲ್ಲೆ. ಇದರಿಂದ ಅವರು ಅಲ್ಪಪಸಂಖ್ಯಾತ ಸಮುದಾಯದ ಮೇಲೆ ಕೋಪ ಸ್ಫೋಟಗೊಂಡು ಹಿಂಸಾಚಾರ ನಡೆಯದಂತೆ ಅವರು ಖಾತರಿಪಡಿಸಿದ್ದರು. ಇದಕ್ಕೆ ತೀಕ್ಷ್ಣವಾದ ಪ್ರಸಂಗಾವಧಾನತೆ ಮತ್ತು ನಮ್ಮ ದೇಶದ ಜಾತ್ಯಾತೀತ ಸ್ವರೂಪದ ರಕ್ಷಣೆಯ ಅಗತ್ಯದ ಕುರಿತು ಆಳವಾದ ನಂಬಿಕೆಯ ಅಗತ್ಯವಿತ್ತು.

ನಾನು ವರ್ಷಗಳ ಹಿಂದೆ ಕಣ್ಣುತಿರುಗಿಸಿ ನೋಡಿದಾಗ, ಅದರಲ್ಲೂ ಮುಖ್ಯವಾಗಿ ಈ ವರ್ಷದ ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರ ಗಮನಿಸಿದಾಗ ಅದನ್ನು 1947ರ ಅತ್ಯಂತ ಸ್ಫೋಟಕ ಪರಿಸ್ಥಿತಿಗೆ ಹೋಲಿಸುವುದು ಕಷ್ಟವಲ್ಲ. 2020ರಲ್ಲಿ ಯಾವುದೇ ರಾಜಕೀಯ ನಾಯಕರು ಹಿಂಸಾಚಾರವನ್ನಾಗಲೀ, ನಂತರದಲ್ಲಿ ದೇಶಕ್ಕೆ ಆಳವಾದ ಹಾನಿಯುಂಟುಮಾಡುವ ವಿಭಜನೆಯನ್ನಾಗಲೀ ದೈಹಿಕವಾಗಿ ನಿಯಂತ್ರಿಸಲು ವೈಯಕ್ತಿಕವಾಗಿ ಹಾಜರಿರಲಿಲ್ಲ.

ನಿಜವಾದ ನಾಯಕರೆಂದರೆ, ದಾರ್ಶನಿಕತೆ ಮತ್ತು ಧೈರ್ಯ ಹೊಂದಿರುವವರು. ಪಂಡಿತ್‌ಜೀ ಅವರು ಈ ಗುಣಗಳ ಮಾದರಿಯಾಗಿದ್ದಾರೆ.

ಅನುವಾದ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ವಿಚ್ಛಿದ್ರಕಾರಿ ಅಜೆಂಡಾ ತಡೆಯಲು ಮುಂದಾಗಿ: ಮೋದಿಗೆ ನೌಕಾಪಡೆ ಮಾಜಿ ಮುಖ್ಯಸ್ಥ ಎಲ್. ರಾಮದಾಸ್ ಪತ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...