Homeಅಂಕಣಗಳುಎಲ್ಲರಿಗೂ ಭೂಮಿ ಕೊಡಿ, ಸರ್ಕಾರದ ಮುಂದೆ ರೈತರನ್ನು ಭಿಕ್ಷುಕರನ್ನಾಗಿ ಮಾಡಬೇಡಿ

ಎಲ್ಲರಿಗೂ ಭೂಮಿ ಕೊಡಿ, ಸರ್ಕಾರದ ಮುಂದೆ ರೈತರನ್ನು ಭಿಕ್ಷುಕರನ್ನಾಗಿ ಮಾಡಬೇಡಿ

ಸರ್ಕಾರ ರೈತರ ಹೆಸರಿಗೆ 5000 ಹಾಕುವ ಬದಲು ವ್ಯವಸಾಯದಲ್ಲಿ ಕ್ರಾಂತಿ ತರುವ ಪಣ ತೊಡಬೇಕು.

- Advertisement -
- Advertisement -

ರೈತರ ಸಾಲಮನ್ನಾ ಪ್ರಹಸನಕ್ಕೆ ಇತಿಶ್ರೀ ಹಾಡಿ ಅವರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಗೊತ್ತು ಮಾಡಿ ಎಂದು ಸರ್ಕಾರಕ್ಕೆ ಆಗ್ರಹ ಪೂರ್ವಕವಾಗಿ ಹೇಳುತ್ತಿದ್ದೇನೆ.

ರೈತರ ಸಾಲಮನ್ನಾ ಶ್ರೀಮಂತ ರೈತರಿಗೆ ಒಂದು ವರದಾನ. ಪ್ರತಿವರ್ಷ ಈ ಶ್ರೀಮಂತ ರೈತರು ಒಂದು ಲಕ್ಷ, ಎರಡು ಲಕ್ಷ ಬ್ಯಾಂಕಿನಿಂದ ಸಾಲ ಪಡೆಯುವುದು ವರ್ಷದ ಕೊನೆಯಲ್ಲಿ ಆ ಸಾಲಮನ್ನಾ ಮಾಡಿಸುವುದು. ಹತ್ತಾರು ವರ್ಷಗಳಿಂದ ನಡೆದೇ ಇದೆ. ಶ್ರೀಮಂತ ರೈತರು ಸೈಟು ಕೊಳ್ಳುವುದು, ಕಂಪೆನಿ ಷೇರುಕೊಳ್ಳುವುದಕ್ಕೆ, ವ್ಯವಸಾಯದ ಜೊತೆಗೆ ಅಕ್ಕಿ ಗಿರಣಿ, ಕಿರಾಣಿ ವ್ಯಾಪಾರ ಮಳಿಗೆ ತೆರೆಯಲು ಈ ಸಾಲಮನ್ನಾ ಹಣ ಬಳಕೆಯಾಗುತ್ತಿದೆ.

ಎರಡು ನಾಲ್ಕು ಎಕರೆ ಜಮೀನು ಹೊಂದಿದವರು ರೈತಾಪಿಗಳಲ್ಲವೇ? ಇಂತಹವರು ಶೇ.60ರಷ್ಟು ಜನ ಇದ್ದಾರೆ. ಇವರಿಗೆ ಸಿಗುವ ಸಾಲ ಬಹಳ ಕಡಿಮೆ. ಇವರಿಗೆ ಸಾಲದ ಬದಲು ಪವರ್ ಟಿಲ್ಲರ್‍ನಲ್ಲಿ ಇವರ ಭೂಮಿಯನ್ನ ಉಚಿತವಾಗಿ ಉತ್ತಿ ಕೊಡಬೇಕು, ಕಟಾವು ಮಾಡುವ ಸಾಧನೆ ಡ್ರೈಯರ್ ಹಾರ್ವೆಸ್ಟರ್‍ಗಳನ್ನು ಸಕಾಲದಲ್ಲಿ ಉಚಿತವಾಗಿ ಒದಗಿಸಬೇಕು.

ಕಾರ್ಖಾನೆಯಲ್ಲಿ ತಯಾರಾದ ಪದಾರ್ಥಕ್ಕೆ ಬೆಲೆ ನಿರ್ಧರಿಸುವಾಗ ಅಲ್ಲಿ ಅನುಸರಿಸುವ ಎಲ್ಲ ನಿಯಮಗಳನ್ನೂ ವೈಜ್ಞಾನಿಕವಾಗಿ ರೈತನಿಗೂ ಅನುಸರಿಸಬೇಕು. ವೈಜ್ಞಾನಿಕವಾಗಿ ಬೆಳೆದ ಬೆಳೆಗೆ ಬೆಲೆ ನಿರ್ಧರಿಸಲು ಒಂದು ವ್ಯವಸ್ಥೆ ಮಾಡಲಾಗಿತ್ತು. ಆ ಸಮಿತಿ ತನ್ನ ಅಂತಿಮ ವರದಿ ನೀಡಿದೆ. ಅದನ್ನು ಸರ್ಕಾರ ಕೂಡಲೇ ಅಂಗೀಕರಿಸಿ ಚಾಲ್ತಿಗೆ ಕೊಡಬೇಕು. ಸಾಲಮನ್ನಾ ಹುನ್ನಾರವನ್ನು ಕೊನೆಗಾಣಿಸಬೇಕು.

ಸಣ್ಣ ರೈತರು ತಾವೇ ಹೊಲದಲ್ಲಿ ದುಡಿದು ವ್ಯವಸಾಯ ಮಾಡುತ್ತಾರೆ. 20 ಎಕರೆ ಮೇಲೆ ಜಮೀನುಳ್ಳವರು ಸಂಪೂರ್ಣವಾಗಿ ಕೂಲಿಕಾರ್ಮಿಕರನ್ನೇ ಅವಲಂಬಿಸಿದ್ದಾರೆ. ಈ ವ್ಯವಸಾಯ ಕೂಲಿ ದರ ದಿನಕ್ಕೆ 500ರೂ.ಗಳು. ಕೇರಳದಲ್ಲಿ 800ರೂ ಎಂದು ಕೇಳಲ್ಪಟ್ಟಿದ್ದೇನೆ. ಇಷ್ಟೊಂದು ಕೂಲಿ ಕೊಟ್ಟು ತಮ್ಮ ಎಲ್ಲ ಜಮೀನಿನಲ್ಲೂ ಆಹಾರ ಧಾನ್ಯ ಬೆಳೆಯಲು ಆಗುವುದಿಲ್ಲ. ಬೆಳೆದ ಬೆಳೆಯನ್ನೆಲ್ಲಾ ಮಾರಾಟ ಮಾಡಿದರೂ ಬೆಳೆದವನಿಗೆ ಶೇ.30ರಷ್ಟು ಲಾಭ ದೊರೆಯುವುದಿಲ್ಲ. ಆದ್ದರಿಂದ ಈ ದೊಡ್ಡ ಹಿಡುವಳಿದಾರರು ಸ್ವಲ್ಪ ಜಮೀನಿನಲ್ಲಿ ಆಹಾರ ಧಾನ್ಯ ಬೆಳೆದು ಉಳಿದ ಜಮೀನಿನಲ್ಲಿ ವ್ಯಾಪಾರಕ್ಕೆ ಅನುಕೂಲವಾಗುವ ಶುಂಠಿ, ಕೊತ್ತಂಬರಿ, ತರ್ಕಾರಿ, ಹೂವು ಬೆಳೆಯುತ್ತಾರೆ. ಇನ್ನೂ ಹೆಚ್ಚು ಜಮೀನುಳ್ಳವರು ತೇಗ ಮೊದಲಾದ ಲಾಭ ತರುವ ಮರಗಳನ್ನು ಬೆಳೆಯುತ್ತಾರೆ. ಇದರಿಂದಾಗಿ ಭಾರತದಲ್ಲಿ ಆಹಾರ ಧಾನ್ಯಗಳ ಕೊರತೆ ಕಾಣಿಸಿಕೊಂಡಿದೆ. ಸಿ.ಸುಬ್ರಮಣ್ಯಂ ಅವರು ವ್ಯವಸಾಯ ಸಚಿವರಾಗಿದ್ದಾಗ ಆಹಾರ ಕ್ರಾಂತಿ ಒಂದನ್ನು ಮಾಡಿದ್ದರು. ಎಂದು ಇದನ್ನು ಕರೆದರು. ಭಾರತದಲ್ಲಿ ಆಹಾರ ಧಾನ್ಯಕ್ಕೆ ಕೊರತೆ ಉಂಟಾಗದಂತೆ ಅವರು ನೋಡಿಕೊಂಡರು. ಭಾರತ ವ್ಯವಸಾಯ ಪ್ರಧಾನ ದೇಶ ಭಾರತೀಯರು ಭಿಕ್ಷೆ ಪಾತ್ರೆ ಹಿಡಿದು ಅನ್ಯ ದೇಶಗಳ ಬಳಿ ಹೋಗಬಾರದು ಅದು ಅಪಮಾನಕರ ಎಂದು ಸಿ.ಸುಬ್ರಮಣ್ಯಂ ಅವರ ಧ್ಯೇಯವಾಗಿತ್ತು. ಅದಕ್ಕಾಗಿ ಅವರ ಕಾಲದಲ್ಲಿ ಅನೇಕ ದೊಡ್ಡ ನದಿಗಳಿಗೆ ಅಡ್ಡಗಟ್ಟಿ ಹಾಕಿ ದೊಡ್ಡ ಅಣೆಕಟ್ಟುಗಳನ್ನು ಕಟ್ಟಿಸಿದರು. ಹೊಲಗದ್ದೆಗಳ ಬದುವಿಗೆ ಗೊಬ್ಬರದ ಗಿಡಗಳನ್ನು ಬೆಳೆಸಲಾಯಿತು. ಒಡ್ಡುಗಳನ್ನು ಹಾಕಲಾಯಿತು. ಆಗ ವ್ಯವಸಾಯದ ಕೂಲಿ ಇಷ್ಟೊಂದು ಇರಲಿಲ್ಲ. ಹೀಗಾಗಿ ಭಾರತವು ಆಹಾರದ ವಿಷಯದಲ್ಲಿ ಸ್ವಪರಿಪೂರ್ಣವಾಯಿತು. ಈಗ ನಾವು ಸಕ್ಕರೆ, ಗೋಧಿ, ಅಕ್ಕಿ ಮುಂತಾದುದನ್ನು ಆಮದು ಮಾಡಿಕೊಳ್ಳುವ ಸ್ಥಿತಿಗೆ ಬಂದಿದ್ದೇವೆ.

ಬಡವರನೇಕರ ಕೈಯಲ್ಲಿ ಭೂಮಿ ಇಲ್ಲ; ದುಡಿದು ತಿನ್ನುತ್ತೇವೆಂದರೆ ತಮ್ಮದಾಗಿ ನೆಲ ಇಲ್ಲ. ಈ ಭೂಮಿಹೀನರೂ ಭಾರತೀಯರೆ ಅಲ್ಲವೇ? ಅವರಿಗೆ ಓಟು ಕೊಟ್ಟಿದ್ದೇವೆ, ಊಟ ಕೊಟ್ಟಿಲ್ಲ, ಉದ್ಯೋಗ ಕೊಟ್ಟಿಲ್ಲ. ಸರ್ಕಾರ ಭೂಮಿಯ ಮರು ಹಂಚಿಕೆ ಮಾಡಬೇಕು. ಆದಾಗಬೇಕಾದರೆ ಸೀಲಿಂಗ್‍ಅನ್ನು ಇಳಿಸಬೇಕು. ಭೂಮಿ ಕಾಯ್ದೆಯಲ್ಲಿ ತಿದ್ದುಪಡಿ ತಂದು ದುಡಿಯಲು ತಯಾರಿರುವ ಭೂಹೀನರಿಗೆ ತಲಾ 5 ಎಕರೆ ಖುಷ್ಕಿ ಅಥವಾ 3 ಎಕರೆ ತರಿ ಅಥವಾ ಒಂದು ಎಕರೆ ತೋಟದ ಜಮೀನನ್ನು ನೀಡಬೇಕು. ಹೀಗೆ ನೀಡಿದ ಜಮೀನನ್ನು ಖಾಸಗಿಯವರಿಗೆ ಮಾರಾಟ, ಭೋಗ್ಯ ಆಧಾರ ಮಾಡುವಂತಿಲ್ಲ ಎಂಬ ಕರಾರು ಹಾಕಿ ಭೂಮಿ ಹಂಚಬೇಕು. ಎರಡು ವರ್ಷ ಕಾಲ ಹೀಗೆ ನೀಡಿದ ಜಮೀನನ್ನು ಎರಡು ವರ್ಷ ಕಾಲ ಉಳುಮೆ ಮಾಡದಿದ್ದರೆ, ಆ ಜಮೀನನ್ನು ಅವರ ವಶದಿಂದ ಹಿಂಪಡೆದು ದುಡಿಮೆ ಮಾಡುವ ಬೇರೊಬ್ಬರಿಗೆ ಕೊಡಬೇಕು.

ಸರ್ಕಾರ ರೈತರ ಹೆಸರಿಗೆ 5000 ಹಾಕುವ ಬದಲು ವ್ಯವಸಾಯದಲ್ಲಿ ಕ್ರಾಂತಿ ತರುವ ಪಣ ತೊಡಬೇಕು. ಮೋದಿ ಸರ್ಕಾರ ಭೂಮಿ ನೀಡಿ ರೈತರನ್ನ ಕಾಲ ಮೇಲೆ ನಿಲ್ಲುವ ಹಾಗೆ ಮಾಡಬೇಕೇ ಹೊರತು, ಸರ್ಕಾರದಿಂದ ಭಿಕ್ಷೆಗೆ ಕಾಯುವಂತೆ ಮಾಡುವುದು ಭಾರತೀಯರನ್ನು ಅಪಮಾನಗೊಳಿಸಿದಂತೆ ಎಂದು ತಿಳಿಯಬೇಕು.


ಇದನ್ನು ಓದಿ: ಬಡವರಿಗೆ ನೇರ ನಗದು ವರ್ಗಾವಣೆಯಲ್ಲದೇ ಬೇರೆ ದಾರಿ ಇಲ್ಲ : ’ಶ್ರಮಜೀವಿಗಳಿಗೆ ಲಾಕ್ ಡೌನ್’ ಅಧ್ಯಯನ ವರದಿ ಬಿಡುಗಡೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...