Homeಅಂಕಣಗಳುಇಂದಿರಾ ಕ್ಯಾಂಟೀನ್‌ದೊಳಗ ಊಟ ಮಾಡಿದಿವಿ ಅಂದರೆ ಕಮಲ ಪಕ್ಷಕ್ಕೆ ಆಗಿ ಬರೋದಿಲ್ಲ...!

ಇಂದಿರಾ ಕ್ಯಾಂಟೀನ್‌ದೊಳಗ ಊಟ ಮಾಡಿದಿವಿ ಅಂದರೆ ಕಮಲ ಪಕ್ಷಕ್ಕೆ ಆಗಿ ಬರೋದಿಲ್ಲ…!

ಭಾರೀ ಪ್ರಚಾರ ದೊಂದಿಗೆ ಶುರು ಆದ ಆ ಖಾನಾವಳಿಗಳು ಬಡವರಿಗೆ ಯಾವ ಕಾಲಕ್ಕೆ ಬೇಕಾಗಿದ್ದವೋ ಆ ಕಾಲಕ್ಕೆ ಉಪಯೋಗ ಆಗಲಿಲ್ಲ.

- Advertisement -
- Advertisement -

ಗುಲಾಬಿ ಅಂತ ನಾವು ಯಾವುದನ್ನು ಕರೀತೀವೋ,

ಅದರ ಹೆಸರು ಏನಿದ್ದರೇನು ಸುಗಂಧ ಅಷ್ಟೇ ಸಿಹಿಯಲ್ಲವೇ ?

ಅಂತ ಕವಿಯೊಬ್ಬ ಸುಮಾರು 400 ವರ್ಷ ಹಿಂದ ಒದರಿ ಹೋದ.

ಅವನ ಹೆಸರು ವಿಲಿಯಮ್ ಷೇಕ್ಸ್‌ಪಿಯರ್. ಅವ ಇಂಗ್ಲಂಡದೊಳಗ ನಾಟಕ, ಹಾಡು ಬರಕೊಂಡು ಇದ್ದಾಗ ನಮ್ಮಲ್ಲೇ ಮೊಹಮ್ಮದ್ ಜಲಾಲಉದ್ದೀನ್ ಅಕ್ಬರ್ ಅವರು ರಾಜ್ಯ ಆಳತಾ ಇದ್ದರು.

ನಮ್ಮಲ್ಲೆ ಬಹುಶಃ ಎಲ್ಲರಿಗೂ ಷೇಕ್ಸ್‌ಪಿಯರ್ ಅವರ ಹೆಸರು ಗೊತ್ತು. ಆದರ ಅಕ್ಬರ್ ಅನ್ನೋದು ಅವರ ಬಿರುದು, ಅವನ ಹೆಸರು ಅಲ್ಲ ಅಂತ ಗೊತ್ತಿಲ್ಲ.

ಅವ ಹೋಗಲಿ ಬಿಡ್ರಿ, ಮಹಾಭಾರತದಾಗ ಭೀಷ್ಮ ಅನ್ನೋದು ಗಂಗಾಪುತ್ರನ ಬಿರುದು, ಹೆಸರು ಅಲ್ಲ ಅನ್ನೋದು ಗೊತ್ತಿರೋದಿಲ್ಲ. ಹಂಗ ನೋಡಿದರ ಮಹಾಭಾರತದಾಗ ಬಿರುದುಗಳೇ ಜಾಸ್ತಿ, ಹೆಸರು ಕಮ್ಮಿ. ಇರಲಿ ಬಿಡ್ರಿ.

ಈಗ ನಮ್ಮ ಮುಂದೆ ಬಂದಿರೋ ವಿಷಯ ಅಂದ್ರ ವಿಶ್ವ ಸಂಸ್ಥೆಯವರು ನಮ್ಮ ದೇಶದ ಕೆಲವು ರಾಜ್ಯಗಳ ಕೋವಿಡ್ ನಿರ್ವಹಣೆಯನ್ನು ಹೊಗಳಿದ ಸುದ್ದಿ.

ಅಲ್ಲಿನ ತಜ್ಞರು ಮುಂಬೈ ಶಹರದ ಧಾರಾವಿ ಝೋಪಡ ಪಟ್ಟಿಯೊಳಗ ಹೆಂಗ ಈ ರೋಗ ನಿಯಂತ್ರಣಕ್ಕ ಬಂತು ಅನ್ನೋದನ್ನು ನೋಡಿ, ಅಲ್ಲೇ ಸರಿ ಆಗಬಹುದು ಅಂದ್ರ ಎಲ್ಲಾದರೂ ಆಗಬಹುದು ಅಂತ ಹೇಳಿದರು. ಮತ್ತು ಕೇರಳದ ರೋಗಿ ಪತ್ತೆ ವಿಧಾನ ಹಾಗೂ ಆಸ್ಪತ್ರೆ ನಿರ್ವಹಣೆ ವಿಷಯದ ಬಗ್ಗೆ ಹೊಗಳಿದರು. ಅವರು ಇನ್ನೊಂದು ವಿಷಯ ಪ್ರಸ್ತಾಪ ಮಾಡಿದರು.

ಅದು ಎನಪ ಅಂದ್ರ ಕೇರಳದ ಕುಟುಂಬಶ್ರೀ ವ್ಯವಸ್ಥೆ ಕೆಳಗ ನಡೀತಾ ಇರೋ ಕಮ್ಮಿ ಖರ್ಚಿನ ಸರ್ಕಾರಿ ಕ್ಯಾಂಟೀನ್‌ಗಳು ಹೆಂಗ ಬಡವರ ಹಸಿವನ್ನು ಕಮ್ಮಿ ಮಾಡಿದರು ಅನ್ನೋದನ್ನ ಎತ್ತಿ ತೋರಿಸಿದರು.

ಆ ರಾಜ್ಯದ 510 ನಗರ ಹಾಗೂ ಹಳ್ಳಿಗಳಲ್ಲಿ ರಾಜ್ಯ ಸರಕಾರದಿಂದ ಬಡವರಿಗೆ ಅಂತ ಹೇಳಿ ‘ಜನಕೀಯ ಕುಟುಂಬಶ್ರೀ’ ಕ್ಯಾಂಟೀನು ಶುರು ಅಗಿದಾವ. ಇವನ್ನ ಮಹಿಳಾ ಸಂಘಗಳು ನಡಸತಾವ. ಅವರು ಇಪ್ಪತ್ತು ರೂಪಾಯಿಗೆ ಒಂದು ಊಟ ಕೊಡತಾರ. ಅದರಾಗ ಅರ್ಧ ಖರ್ಚು ರಾಜ್ಯ ಸರಕಾರ ವಹಿಸಿಕೊಳ್ಳೋದಕ್ಕ ಅವರಿಗೆ ಒಂದು ಊಟದ ಮ್ಯಾಲೆ ಹತ್ತು ರೂಪಾಯಿ ಸಿಗತದ.

ಇಲ್ಲಿ ತನಕ ಆ ಮಹಿಳಾ ಖಾನಾವಳಿಗಳು ಸುಮಾರು ಹತ್ತು ಲಕ್ಷ ತಾಟು ಊಟ ಮಾರಾಟ ಮಾಡಿದಾವ. ಇವುಗಳ ಯಶಸ್ಸು ನೋಡಿ ಇನ್ನೂ ಹೆಚ್ಚು ಕ್ಯಾಂಟೀನ್ ಶುರು ಮಾಡಬೇಕು ಅಂತ ಸರಕಾರ ನಿರ್ಧಾರ ಮಾಡೇತಿ.

ಎಲ್ಲಕ್ಕಿಂತ ಮುಖ್ಯ ಅಂದ್ರ ಇವು ಲಾಕಡೌನ್‌ದಾಗೂ ಕೆಲಸ ಮಾಡಿದಾವು.

ಅಲ್ಲಿ ಸಾಧ್ಯ ಆಗಿದ್ದು ನಮ್ಮಲ್ಲೆ ಯಾಕ ಸಾಧ್ಯ ಆಗಿಲ್ಲ? ನಮ್ಮಲ್ಲೆ ಯಾಕ ಬಡವರು ರಸ್ತೆದಾಗ ಸತ್ತರು? ಯಾಕ ಅವರಿಗೆ ಹೊತ್ತಿಗೆ ಸರಿಯಾಗಿ ಊಟ ಸಿಗಲಿಲ್ಲ? ಯಾಕ ನಮ್ಮ ಸರ್ಕಾರಿ ಖಾನಾವಳಿಗಳು ಲಾಕಡೌನ್‌ದಾಗ ಬಂದ ಆಗಿದ್ದವು?

ಇದರ ಹಿಂದ ಏನು ದೊಡ್ಡ ರಹಸ್ಯ ಇಲ್ಲ. ಇದರ ಹಿಂದ ಒಂದು ಮಜಾ ಕತಿ ಐತಿ. ಅದನ್ನ ಹೇಳಬೇಕು ಅಂದ್ರ ಷೇಕ್ಸ್‌ಪಿಯರ್‌ನ ನೆನಪು ಮಾಡಿಕೋಬೇಕು. ಅವನ ರೋಮಿಯೋ ಜೂಲಿಯಟ್ ನಾಟಕದ ಜಗತ್ ವಿಖ್ಯಾತ ಸಾಲು ‘ಹೆಸರಿನಲ್ಲಿ ಏನಿದೆ’ ಅನ್ನೋದನ್ನ ನೆನಪು ಮಾಡಿಕೋಬೇಕು.

ಕರ್ನಾಟಕದಾಗ ಸರ್ಕಾರಿ ಖಾನಾವಳಿಗಳಿಗೆ ಏನು ಅಂತ ಕರೀತಾರ? ಇಂದಿರಾ ಕ್ಯಾಂಟೀನು ಅಂತಾರ. ಆ ಹೆಸರನ ಅವಕ್ಕ ಕಂಟಕ ಆಗೇದ. ಹೆಂಗ ಅಂತೀರಿ? ಇಲ್ಲಿ ಕೇಳರಿ.

ಲಾಕಡೌನ್ ಆಗಿದ್ದಾಗ ಒಂದು ದಿವಸ ಯಾರೋ ಬಡವರು ಬಂದು ಅಲ್ಲಿ ಊಟ ಮಾಡಿದರು ಅಂದುಕೋರಿ. ಅವರು ಹೊರಗ ಹೋಗಿ ಏನು ಹೇಳತಾರ?

ನಾವು ಇಂದಿರಾ ಕ್ಯಾಂಟೀನ್‌ದೊಳಗ ಊಟ ಮಾಡಿದಿವಿ ಅಂತ ಹೇಳತಾರ. ಅದು ಈಗಿನ ಕಮಲ ಪಕ್ಷಕ್ಕೆ ಆಗಿ ಬರೋದಿಲ್ಲ. ನಾವು ಊಟ ಹಾಕಿದೀವಿ, ಅದರ ಕಾಂಗ್ರೆಸ್ ನಾಯಕಿಗೆ ಹೆಸರು ಬಂತು ಅಂತ ಅವರು ಕಿರಿಕಿರಿ ಮಾಡಿಕೋತಾರ.

ಇದನ್ನು ತಪ್ಪಿಸೋದು ಹೆಂಗ ಅಂದ್ರ ಬಡವರು ಹಸಿವೆಯಿಂದ ಇರೋದು ಅವರ ಪ್ರಾಬ್ಲಂ ಅಂತ ಸರಕಾರ ಬ್ಯಾರೆ ಕಡೆ ನೋಡೋದು. ಭಾಷಣ, ಹೆಸರು ಬದಲಾವಣೆ, ರಸ್ತೆ, ಸೇತುವೆ, ಗಟಾರು, ಕೋರೋನಾ ಔಷಧಿ ಗುತ್ತಿಗೆ, ಕೋರೋನಾ ಕಾಳಜಿ ಕೇಂದ್ರದ ಬಾಡಿಗೆ ಮುಂತಾದ ಅತಿ ಮುಖ್ಯ ಸಂಗತಿಗಳ ಬಗ್ಗೆ ಸಚಿವರು ತಲೆ ಕೆಡಿಸಿಕೊಳ್ಳೋದು. ಆ ಕ್ಲಿಷ್ಟ ಸಮಸ್ಯೆಗಳಿಗೆ ಈ ಸರಳ ಪರಿಹಾರಗಳು.

ಆದರ ಆಳುವ ಪಕ್ಷಕ್ಕೆ ಹೆಸರು ಬದಲಾವಣೆ ಮಾಡೋದು ಏನು ಅಷ್ಟು ಕಷ್ಟದ ಕೆಲಸ ಅಲ್ಲ. ಪಂಥ ಪ್ರಧಾನ ಸೇವಕರು ಬಂದ ಮ್ಯಾಲೆ ಎರಡು ನೂರಕ್ಕೂ ಹೆಚ್ಚು ಯೋಜನೆಗಳ ಹೆಸರು ಬದಲಾವಣೆ ಮಾಡಿದಾರು. ಕಾಂಗ್ರೆಸ್ ನವರು ಶುರು ಮಾಡಿದ ಯೋಜನೆ ಹೋಗಲಿ, ತಮ್ಮದೇ ಪಕ್ಷದ ಹಿರಿಯರು ಹರಿಬಿಟ್ಟ ಸ್ವದೇಶಿ ಅನ್ನೋ ವಿಚಾರದ ಹೆಸರು ಬದಲು ಮಾಡಿ ಆತ್ಮನಿರ್ಭರ ಅಂತ ಮಾಡಿದರು.

ಆದರ ಕರ್ನಾಟಕದೊಳಗ ಅದು ಸಾಧ್ಯ ಆಗಲಿಲ್ಲ. ಯಾಕೋ ಗೊತ್ತಿಲ್ಲ. ಅದಕ್ಕ ಆಡಳಿತಾತ್ಮಕ ಕಾರಣಗಳಿಗಿಂತ ರಾಜಕೀಯ ಕಾರಣನ ಹೆಚ್ಚು ಇರಬಹುದು.

ಅದು ಹೋಗಲಿ ಬಿಡ್ರಿ.

ಕರ್ನಾಟಕದ ಖಾನಾವಳಿಗೆ ಇಂದಿರಮ್ಮನ ಹೆಸರು ಹೆಂಗ ಬಂತು ಅಂತ ಗೊತ್ತೇನು ನಿಮಗ?

ಅದು ಗೊತ್ತಾಗಬೇಕು ಅಂದ್ರ ನಿಮಗ ಕೊಲ್ಲು ಹುಡುಗಿ ಒಮ್ಮೆ ನನ್ನ ಅನ್ನೋ ಹಾಡು ಗೊತ್ತಿರಬೇಕು. ಅದು ಮುಂಗಾರು ಮಳೆ ಅನ್ನೋ ಪಿಚ್ಚರುದಾಗಿನದು. ಅದರ ನಿರ್ದೇಶಕ ಯಾರು, ಅದಕ್ಕ ರೊಕ್ಕ ಕೊಟ್ಟವರು ಯಾರು ಅಂತ ನಿಮಗ ಗೊತ್ತಿರಬೇಕು. ಹಂಗ ಅದಕ್ಕ ರೊಕ್ಕ ಹೊಂದಿಸಿದವರು ಒಬ್ಬರು ರಾಜಕೀಯದಾಗ ಹೋಗೋಣು ಅಂತ ನಿರ್ಧಾರ ಮಾಡಿದರು.

ಅವರು ಅಂದಿನ ಆಡಳಿತ ಪಕ್ಷವಾದ ಕಾಂಗ್ರೆಸ್ ಸೇರಿಕೊಂಡರು. ಅಷ್ಟರೊಳಗ ರಾಜ್ಯ ಸರಕಾರ ಖಾನಾವಳಿ ಆರಂಭ ಮಾಡಬೇಕು, ಅವಕ್ಕ ನಮ್ಮ ಕ್ಯಾಂಟೀನ್ ಅಂತ ಹೆಸರು ಇಡಬೇಕು ಅಂತ ನಿರ್ಧಾರ ಮಾಡಿತ್ತು.

ನಮ್ಮ ಸಿನಿಮಾ ಸ್ಟಾರ್ ಅವರು ಕಾಂಗ್ರೆಸ್‌ನೊಳಗ ಫಳ ಫಳ ಹೊಳೀಬೇಕು ಅಂತ ಹೇಳಿ ಒಂದು ಸಲಹೆ ಕೊಟ್ಟರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯೊಳಗ ಇದಕ್ಕ ನಮ್ಮ ಕ್ಯಾಂಟೀನ್ ಅನ್ನೋದು ಬ್ಯಾಡ, ಇಂದಿರಾ ಕ್ಯಾಂಟೀನ್ ಅನ್ನೋಣು ಅಂತ ಅಂದರು. ಇಂತಹ ಬೀಜ ಮಂತ್ರ ಪ್ರಯೋಗ ಆದ ಮೇಲೆ ಅದನ್ನ ವಿರೋಧ ಮಾಡೋ ಗಣ ಮಗ ಕಾಂಗ್ರೆಸ್ ದೊಳಗ ಯಾರ ಅದಾರು? ಎಲ್ಲರೂ ಸುಮ್ಮನೇ ಕೂತರು. ಜೈಕಾರ ಹಾಕಿದರು.

ಭಾರೀ ಪ್ರಚಾರ ದೊಂದಿಗೆ ಶುರು ಆದ ಆ ಖಾನಾವಳಿಗಳು ಬಡವರಿಗೆ ಯಾವ ಕಾಲಕ್ಕೆ ಬೇಕಾಗಿದ್ದವೋ ಆ ಕಾಲಕ್ಕೆ ಉಪಯೋಗ ಆಗಲಿಲ್ಲ.

ಬರ ಬರ್ತಾ ಅವನ್ನ ಮಹಿಳಾ ಸಂಘಗಳಿಗೆ ವಹಿಸಿ ಕೊಡಬೇಕು ಅನ್ನೋ ವಿಚಾರ ಹೋತು. ಅವು ಖಾಸಗಿ ಗುತ್ತಿಗೆದಾರರ ಕೈಯಾಗ ಸಿಕ್ಕು ನಮ್ಮ ಕ್ಯಾಂಟೀನು ಆಗದೇ ಕಾಂಟ್ರಾಕ್ಟರ ಕ್ಯಾಂಟೀನು ಆದವು.

ಇನ್ನು ಆ ಐತಿಹಾಸಿಕ ಐಡಿಯಾ ಕೊಟ್ಟ ಪುಣ್ಯಾತ್ಮ ಇಂದಿರಾ ಅವರ ಪಕ್ಷದೊಳಗ ಬಹಳ ದಿವಸ ಉಳೀಲಿಲ್ಲ. ಮುಂಗಾರು ಮಾರುತ ಇತ್ತಲಾಗ ಬೀಸಲಿಕ್ಕೆ ಹತ್ತಿದ್ದು ನೋಡಿದ ಅವರು ಈಗ ಕಮಲ ಪಕ್ಷ ದೊಳಗ ಅದಾರು.

ಯಕ್ಷಗಾನ ಭಾಗವತರು ಪ್ರತಿ ಸರೆ “ಬಲಿರೆ ಪರಾಕ್ರಮ ಕಂಠೀರವ” ಅಂತ ಹೇಳಿದಾಗ ಅವರು ಹೊಸ ಪಾತ್ರದ ಪರಿಚಯ ಮಾಡತಿರತಾರ. ಒಮ್ಮೊಮ್ಮೆ ಹಳೇ ಪಾತ್ರನ ಹೊಸ ಹೆಸರಿನಿಂದ ಬರತಾವೂ. ಯಾವಾಗ ಭಾಗ್ಯವಾತರು ನಕ್ಕೋತ ಹೊಸಬರ ಪರಿಚಯ ಮಾಡತಾರ.

ಆ ವಿಲಿಯಮ್ ಷೇಕ್ಸ್‌ಪಿಯರ್‌ಗೆ ಏನು ಗೊತ್ತು – ಹೆಸರಿನ ಗಮ್ಮತ್ತು? ನಮ್ಮಲ್ಲೇ ಗುಲಾಬಿ ಹೂವಿಗೆ ಕಮಲ ಅಂತ ಹೆಸರು ಇಟ್ಟರ ಅದು ಸೂಸೋ ಗಂಧನ ಬೇರೆ!

ಅಲ್ಲವೇ ಮನೋಲ್ಲಾಸಿನಿ?


ಇದನ್ನು ಓದಿ: ಕೋವಿಡ್‌ಗೆ ಬಲಿಯಾದ ಪೌರಕಾರ್ಮಿಕರಿಗೆ ಶ್ರದ್ಧಾಂಜಲಿ: ಕಾಳಜಿ ವಹಿಸದ ಸರ್ಕಾರದ ವಿರುದ್ಧ ಪ್ರತಿಭಟನೆಗೆ ನಿರ್ಧಾರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...

ಆಕಸ್ಮಿಕವಾಗಿ ಗಡಿ ದಾಟಿದ್ದ 7 ಭಾರತೀಯರನ್ನು ಹಸ್ತಾಂತರಿಸಿದ ಪಾಕಿಸ್ತಾನ

2023 ರ ಪ್ರವಾಹದ ಸಮಯದಲ್ಲಿ ಅಜಾಗರೂಕತೆಯಿಂದ ಗಡಿ ದಾಟಿದ ನಂತರ ಬಂಧಿಸಲ್ಪಟ್ಟ ಏಳು ಭಾರತೀಯ ನಾಗರಿಕರನ್ನು ಪಾಕಿಸ್ತಾನ ಶನಿವಾರ ಸ್ವದೇಶಕ್ಕೆ ವಾಪಸ್ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನ ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನಲ್ಲಿ...

ಮೀರತ್| ಅಪಹರಣ ಪ್ರಕರಣ ಹಿಂಪಡೆಯುವಂತೆ ಪೊಲೀಸರ ಒತ್ತಡ; ‘ಗೃಹಬಂಧನ’ದಲ್ಲಿ ದಲಿತ ಕುಟುಂಬ

ಜನವರಿ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಪ್ಸಾದ್ ಗ್ರಾಮದಲ್ಲಿ ತಾಯಿಯ ಕೊಲೆಯ ನಂತರ ಅಪಹರಿಸಲ್ಪಟ್ಟ ದಲಿತ ಹುಡುಗಿಯ ಕುಟುಂಬ ಸದಸ್ಯರು ತಾವು ಗೃಹಬಂಧನದಲ್ಲಿದ್ದು, ಆರೋಪಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸದಂತೆ ಪೊಲೀಸರು...

ಉದ್ಯಮಿ ಸಿಜೆ ರಾಯ್ ಮರಣೋತ್ತರ ಪರೀಕ್ಷೆ; ಹೃದಯ-ಶ್ವಾಸಕೋಶದಲ್ಲಿ 6.35 ಎಂಎಂ ಗುಂಡಿನ ಗಾಯ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆಯ ಮರಣೋತ್ತರ ಪರೀಕ್ಷೆಯ ವರದಿಗಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಂಎನ್ ವಿವರಿಸಿದ್ದಾರೆ. 6.35 ಎಂಎಂ ಗುಂಡಿನ ದಾಳಿಯು ತಕ್ಷಣದ...

ಮುಂಬೈ| ನಿರ್ದೇಶಕ ರೋಹಿತ್ ಶೆಟ್ಟಿ ಮನೆಯ ಹೊರಗೆ 4 ಸುತ್ತು ಗುಂಡು ಹಾರಿಸಿದ ಅಪರಿಚಿತರು

ಶನಿವಾರ ತಡರಾತ್ರಿ, ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈನ ಜುಹು ನಿವಾಸದ ಹೊರಗೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದ್ದು, ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಚಿತ್ರ ನಿರ್ಮಾಪಕ-ನಿರ್ದೇಶಕರ ಕಟ್ಟಡದ ಬಳಿ ಅಪರಿಚಿತ...

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...