Homeಮುಖಪುಟಒಳಮೀಸಲಾತಿಯೆಂಬುದು ಅಣ್ಣನ ಪಾಲು ಅಣ್ಣನಿಗೆ, ತಮ್ಮನ ಪಾಲು ತಮ್ಮನಿಗೆ ಎಂಬ ಸರಳ ಸೂತ್ರ - ಅಂಬಣ್ಣ...

ಒಳಮೀಸಲಾತಿಯೆಂಬುದು ಅಣ್ಣನ ಪಾಲು ಅಣ್ಣನಿಗೆ, ತಮ್ಮನ ಪಾಲು ತಮ್ಮನಿಗೆ ಎಂಬ ಸರಳ ಸೂತ್ರ – ಅಂಬಣ್ಣ ಅರೋಲಿಕರ್

ಬಲಾಢ್ಯರು ಹಾಗೂ ಬಡಕಲು ವ್ಯಕ್ತಿಗಳ ನಡುವೆ ಸ್ಪರ್ಧೆಗೆ ಅವಕಾಶ ನೀಡಿದರೆ ಅಂತಿಮವಾಗಿ ಅನ್ಯಾಯವಾಗುವುದು ಮಾತ್ರ ಬಡಕಲು ವ್ಯಕ್ತಿಗಳಿಗೆ ಎಂಬ ಸರಳ ಸತ್ಯವು ಬಹುತೇಕರಿಗೆ ಅರ್ಥವಾಗದಿರುವುದು ಈ ದೇಶದ ದೌರ್ಭಾಗ್ಯವೇ ಸರಿ.

- Advertisement -
- Advertisement -

ಸ್ವಾತಂತ್ರ್ಯ ನಂತರದ 70 ವರ್ಷಗಳ ಅವಧಿಯಲ್ಲಿ ಸರಿ ಸುಮಾರು ಮೂವತ್ತೈದು ವರ್ಷಗಳ ಕಾಲ, ಪರಿಶಿಷ್ಟ ಜಾತಿಗಳಿಗೆ ಮೀಸಲಿಟ್ಟ 15% ಮೀಸಲಾತಿಯನ್ನು ಆದ್ಯತೆಯನುಸಾರ ಬಲಹೀನರಿಗೆ ಹಾಗೂ ಅವಕಾಶ ವಂಚಿತರಿಗೆ ಅವರವರ ಆರ್ಥಿಕ ಅಸಮಾನತೆಗಳ ಆಧಾರದ ಮೇಲೆ, ವಿದ್ಯೆ ಹಾಗೂ ಉದ್ಯೋಗವಕಾಶಗಳಿಗೆ ಮಾತ್ರ ಉಪಯುಕ್ತವಾಗುವಂತೆ ಹಂಚುವಂತೆ ಹೋರಾಡುತ್ತಿರುವುದೇ ಬಹುದೊಡ್ಡ ಅಪರಾಧವೆಂಬಂತೆ ಚಿತ್ರೀಕರಿಸಲಾಗುತ್ತಿದೆ. ಬಹುತೇಕ ಎಲ್ಲಾ ನ್ಯಾಯಪಾಲಕರು ಹಾಗೂ ಬುದ್ಧಿಜೀವಿಗಳೆನಿಸಿಕೊಂಡ ಅಕ್ಷರಸ್ಥರು ತಮ್ಮ ತಮ್ಮ ಅವಗಾಹನೆಗೆ ತಕ್ಕಂತೆ ವಿಶ್ಲೇಷಣೆ ಮಾಡುತ್ತಾ, ಹಸಿದು ಹೌಹಾರಿದ ಸಮುದಾಯಗಳ ಮೇಲೆ ಅತಿಕ್ರಮಣ ನಡೆಸಿರುವುದು ಬಿಟ್ಟರೆ, ಆ ಸಮುದಾಯಗಳ ಹಸಿವಿನ ಬೇಗುದಿಯನ್ನು ಯಾವ ರೀತಿಯಾಗಿ ಶಮನ ಮಾಡಬೇಕೆಂಬುದರ ಬಗ್ಗೆ ಚಿಂತಿಸಲೇ ಇಲ್ಲ. ಇದು ‘ಸೋತವರ ಮೇಲೆ ಬಲಿತವರು ಬಿದ್ದರು’ ಎಂಬಂತಾಗಿದೆ. ಇದು ಈ ದೇಶದ ಪ್ರಗತಿಪರ, ಜೀವಪರ, ಜನಪರತೆಯ ಕಾಳಜಿಗೆ ಬಹುದೊಡ್ಡ ನಿದರ್ಶನವಾಗಿದೆ.

ಬಹುಸಂಖ್ಯಾತ ಅಸ್ಪೃಶ್ಯ ಸಮುದಾಯಗಳು ಕಳೆದ 35 ವರ್ಷಗಳಲ್ಲಿ ಸತತವಾಗಿ ಹೋರಾಡಿದ ಪರಿಣಾಮದಿಂದ ಕಾಂಗ್ರೆಸ್ ಸರ್ಕಾರವು ನ್ಯಾಯಮೂರ್ತಿ ಎ.ಜೆ ಸದಾಶಿವರವರ ಏಕಸದಸ್ಯ ಆಯೋಗವನ್ನು ನೇಮಿಸಿದರೆ, ಬಿಜೆಪಿ ಸರ್ಕಾರವು ಆಯೋಗದ ಸಮೀಕ್ಷೆಗೆ ಅನುದಾನವನ್ನು ನೀಡಿದೆ. ಇನ್ನು ಜೆಡಿಎಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವುದಾಗಿ ಲಿಖಿತ ಭರವಸೆಯನ್ನು ನೀಡಿದೆ. ಹೀಗಿರುವಾಗ ಈ ರಾಜ್ಯದ 224 ಶಾಸಕರು ಈ ಆಯೋಗದ ಶಿಫಾರಸ್ಸುಗಳನ್ನು ಸರ್ವಾನುಮತದಿಂದ ಅಂಗೀಕರಿಸಿ ಜಾರಿಗೊಳಿಸಲು ಯಾವ ಸೀಮೆಯ ಸಾಮಾಜಿಕ ನ್ಯಾಯ ಅಡ್ಡ ಬರುತ್ತದೆಯೋ? ಉತ್ತರಿಸಬೇಕಾದ ಜವಾಬ್ದಾರಿ ಸರ್ವ ಪಕ್ಷಗಳಿಗೆ ಸೇರಿದ ವಿಚಾರವಾಗಿದೆ.

ಇದನ್ನೂ ಓದಿ: ಒಳಮೀಸಲಾತಿಯ ಕುರಿತು ಡಾ. ಬಿ.ಆರ್. ಅಂಬೇಡ್ಕರ್‌ರವರ ಆಶಯ ಎನು? – ಡಾ.ನರಸಿಂಹ ಗುಂಜಹಳ್ಳಿ

ಹೌದು ಇಂತಹ ಅಭಿಪ್ರಾಯವು ಒಂದಷ್ಟು ಜನರಿಗೆ ಅತಿಶಯೋಕ್ತಿ ಎನಿಸಿದರೂ ಅಕ್ಷರಶಃ ಅಸ್ಪೃಶ್ಯ ಸಮುದಾಯಗಳ ಪಾಲಿಗೆ ಹಾಗೂ ಅವಕಾಶ ವಂಚಿತರಿಗೆ ಅತಿ ಹತ್ತಿರವಾದ ಅನುಭವದ ಮಾತಾಗಿದೆ. ದೇಶದ ಯಾವುದೇ ರಾಜ್ಯಗಳಲ್ಲೂ ಅಸ್ಪೃಶ್ಯ ಸಮುದಾಯಗಳ ಪಟ್ಟಿಯಲ್ಲಿ ಅಸ್ಪೃಶ್ಯೇತರರು ಸೇರ್ಪಡೆಯಾಗದೆ ಕರ್ನಾಟಕದಲ್ಲಿ ಮಾತ್ರ ಇದು ಸಾಧ್ಯವಾಗಿದೆ. ಸ್ಪೃಶ್ಯರು ಸಹ ಆರ್ಥಿಕವಾಗಿ ಅತ್ಯಂತ ಸಬಲರು ಎನ್ನುತ್ತಿಲ್ಲ, ಆದರೆ ಬಲಾಢ್ಯರು ಹಾಗೂ ಬಡಕಲು ವ್ಯಕ್ತಿಗಳ ನಡುವೆ ಸ್ಪರ್ಧೆಗೆ ಅವಕಾಶ ನೀಡಿದರೆ ಅಂತಿಮವಾಗಿ ಅನ್ಯಾಯವಾಗುವುದು ಮಾತ್ರ ಬಡಕಲು ವ್ಯಕ್ತಿಗಳಿಗೆ ಎಂಬ ಸರಳ ಸತ್ಯವು ಅತ್ತ ಸರ್ಕಾರ ಹಾಗೂ ಸರ್ವೋಚ್ಚ ನ್ಯಾಯಾಲಯಗಳಿಗೆ ಇತ್ತ ಸಾಮಾಜಿಕ ನ್ಯಾಯದ ಪರ ಶತಮಾನಗಳ ಕಾಲ ಬೊಗಳೆ ಬಿಡುವ ಬುದ್ಧಿವಂತರಿಗೂ ಅರ್ಥವಾಗದೆ ಇರುವುದು ಈ ದೇಶದ ದೌರ್ಭಾಗ್ಯವೇ ಸರಿ. ಆರ್ಥಿಕವಾಗಿ ಬಲಹೀನರಾದವರಿಗೆಲ್ಲಾ ಮೀಸಲಾತಿಯನ್ನು ನೀಡಿದಂತೆ ಸ್ಪೃಶ್ಯ ಸಮುದಾಯಗಳಿಗೂ ಅವರ ಆರ್ಥಿಕ, ಶೈಕ್ಷಣಿಕ ಆದ್ಯತೆಗಳ ಅನುಸಾರ ವಿಶೇಷವಾದ ಮೀಸಲಾತಿಯನ್ನು ನೀಡಲು ಯಾರ ಅಭ್ಯಂತರವೂ ಇಲ್ಲ. ಆದರೆ ಇಲ್ಲಿ ಆಗಿರುವುದೆ ಬೇರೆ – ರಾಜಕೀಯ ಪಕ್ಷಗಳು ತಮ್ಮ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಡಜನ್‍ಗೂ ಅಧಿಕ ಜಾತಿಗಳನ್ನು ತಮ್ಮ ಮನಸೋ ಇಚ್ಚೆ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವ ಮೂಲಕ ಮೂಲ ಪರಿಶಿಷ್ಟರಿಗೆ ಆಗಬಹುದಾದ ಸಹಜ ಅನ್ಯಾಯದ ಅಪಾಯವನ್ನು ಲೆಕ್ಕಿಸದೆ ಇರುವುದು ದುರಂತ.

ಈ ಪ್ರಕ್ರಿಯೆ ಯಾವುದೇ ಪ್ರಗತಿಪರ ಕಾಳಜಿಯುಳ್ಳ ಮತಿವಂತರಿಗೆ ಅರ್ಥವಾಗದೇ ಇರುವುದು ಅತ್ಯಂತ ಘೋರ ಅಪರಾಧವೆಂದೆ ಹೇಳಬೇಕಿದೆ. ಇದ್ಯಾವುದು ಕಾನೂನಿನ ಪ್ರಕಾರ ಅಪರಾಧವಲ್ಲ. ಆದರೆ ಇರುವ ಮೀಸಲಾತಿಯನ್ನು ಕಟ್ಟಕಡೆಯ ಜನರಿಗೆ ಪ್ರಾಮಾಣಿಕವಾಗಿ ಹಂಚಬೇಕೆಂಬ ಪರಿಕಲ್ಪನೆಯನ್ನೇ ಸಂವಿಧಾನಬಾಹಿರವೆನ್ನುವ ಆಷಾಡಭೂತಿತನ ಮಾತ್ರ ಮನುವಾದ, ಕೋಮವಾದಕ್ಕಿಂತಲೂ ಕ್ರ್ರೂರತನದ್ದಾಗಿದೆ. ಇನ್ನು ಮೇಲ್ಜಾತಿಗಳಿಗೆ ಮೀಸಲಾತಿಯ ಹೆಚ್ಚಳವಾಗುವುದು ಇರಲಿ, ಎಲ್ಲಾ ವಲಯಗಳು ಕಾರ್ಪೋರೇಟ್ ಕಬಂದಬಾಹುಗಳಿಗೆ ಸಿಲುಕಿ ಖಾಸಗೀಕರಣವಾಗಿರುವುದಾಗಲಿ ಇವರಿಗೆ ಅಪಾಯಕಾರಿ ಎನಿಸುವುದಿಲ್ಲ. ಹಳ್ಳಿಗಾಡಿನ, ಅನಕ್ಷರಸ್ಥ ಸಮುದಾಯಗಳು ನಡೆಸುವ ಹಳ್ಳಿಕಟ್ಟೆ ಪಂಚಾಯ್ತಿಯಲ್ಲಿ ಬಗೆಹರಿಯಬಹುದಾದ ಪಿತ್ರಾರ್ಜಿತ ಅಸ್ತಿಯ ಹಂಚಿಕೆಯಂತೆ ಅಣ್ಣನ ಪಾಲು ಅಣ್ಣನಿಗೆ, ತಮ್ಮನ ಪಾಲು ತಮ್ಮನಿಗೆ ಎಂಬ ಸರಳ ಸೂತ್ರವು ದೆಹಲಿ ಹಂತದ ಪಂಚಾಯಿತಿಯಲ್ಲಿ ಕಳೆದ 70 ವರ್ಷಗಳಿಂದಲೂ ಬಗೆಹರಿಯದೆ, ಅನಿರ್ಧಿಷ್ಟ ಕಾಲದವರೆಗೂ ವಾದ ವಿವಾದಗಳಲ್ಲೇ ಕಾಲಹರಣವಾಗುತ್ತಿದೆ. ಇದು ಎರಡು ತಲೆಮಾರುಗಳ ಕೋಟ್ಯಾಂತರ ಜನಗಳ ವಿದ್ಯೆ ಹಾಗೂ ಉದ್ಯೋಗದ ವಂಚನೆಗೆ ಕಾರಣವಾಗಿದೆ.

ಪರಿಶಿಷ್ಟ ಜಾತಿಗಳು ಇದುವರೆಗೂ ಎತ್ತಿರುವ ಪ್ರಶ್ನೆ ಮೀಸಲಾತಿ ಹೆಚ್ಚಳವಾಗಬೇಕಂದಲ್ಲ. ಈಗಾಗಲೇ ಅಸ್ಪೃಶ್ಯರಲ್ಲೇ ಅತೀ ಬುದ್ಧಿವಂತರಾದ ಪ್ರಭಾವಿ ರಾಜಕಾರಣಿಗಳು ಹಾಗೂ ಅಕ್ರಮವಾಗಿ ನುಸುಳಲ್ಪಟ್ಟ ಅಸ್ಪೃಶ್ಯೇತರರು ಇರುವ ಎಲ್ಲಾ ಅವಕಾಶಗಳನ್ನು ಬಾಚಿ ತಿಂದು ಬಲಾಢ್ಯರಾಗಿ ಮೆರೆಯುತ್ತಿರುವಾಗ, ಇದ್ದ ಬಿದ್ದ ಹಳಸಲು ಅನ್ನವನ್ನಾದರು ನಮ್ಮ ಹಸಿದ ಹೊಟ್ಟೆಗೆ ನೀಡಿ ಎಂದು ಈ ನೆಲದ ಸಫಾಯಿ ಕರ್ಮಚಾರಿಗಳು ಹಾಗೂ ಮಲ ಬಳೆಯುವ ಪೌರಕಾರ್ಮಿಕರು ಕಳೆದ ಮೂರು ದಶಕಗಳಿಂದ ಅಂಗಲಾಚಿ ಪರಿತಪಿಸುತ್ತಿದ್ದರೂ ಯಾವ ಸರ್ಕಾರಗಳಿಗೂ ಹಾಗೂ ಯಾವ ನ್ಯಾಯಾಲಯಗಳಿಗೂ ಕಿಂಚಿತ್ತೂ ಅಲುಗಾಡುತ್ತಿಲ್ಲ. ಇದರ ಹಿಂದೆ ಅಸ್ಪೃಶ್ಯತೆಯು ಇನ್ನು ಹಲವಾರು ಶತಮಾನಗಳ ಕಾಲ ಅಸ್ತಿತ್ವದಲ್ಲಿರಬೇಕೆಂಬ ಉದ್ದೇಶ ಅಡಗಿದೆ ಎಂದು ಎನಿಸುತ್ತಿದೆ. ಕಸ ಬಳಿಯುವವರು ಕಾಲಾನುಕಾಲದಿಂದ ಕಸಬಳಿಯುತ್ತಲೇ ಇರಬೇಕೆಂಬ ಶ್ರೇಣಿಕೃತ ವ್ಯವಸ್ಥೆಯ ಹುನ್ನಾರದ ಮುಂದುವರೆದ ಭಾಗವೇ ಇದು ಎಂಬುದನ್ನು ಈ ದೇಶದ ಪ್ರಜಾತಂತ್ರವಾದಿಗಳು ಹಾಗೂ ಪ್ರಗತಿಪರವಾದದ ಪೊರೆ ಆವರಿಸಿದ ಅಣ್ಣಂದಿರು ಅರ್ಥಮಾಡಿಕೊಂಡರೆ, ಅರೆಗಳಿಗೆಯಲ್ಲಿ ಹಸಿದ ಜನಗಳಿಗೆ ಹಳಸಿದ ಅನ್ನವನ್ನಾದರೂ ನೀಡಿ, ಅರೆ ಜೀವದಲ್ಲಿರುವ ಅಸಂಖ್ಯಾತ ಅಸ್ಪೃಶ್ಯ ಸಮುದಾಯಗಳನ್ನು ಅರೆಕಾಲಿಕವಾಗಿಯಾದರೂ ಐಸಿಯುನಿಂದ ಜನರಲ್ ವಾರ್ಡ್‍ಗೆ ಸ್ಥಳಾಂತರಿಸಬಹುದಾಗಿದೆ ಎಂದು ನಂಬಿದ್ದೇನೆ.

ಅಂಬಣ್ಣ ಅರೋಲಿಕರ್

(ತಮ್ಮ ಹೋರಾಟದ ಹಾಡುಗಳ ಗಾಯನದಿಂದ ಪ್ರಖ್ಯಾತವಾಗಿದ್ದ ಅಂಬಣ್ಣ ಅರೋಲಿಕರ್ ಈಗ ಮಾದಿಗ ಮೀಸಲಾತಿ ಹೋರಾಟದ ರಾಜ್ಯ ಮಟ್ಟದ ನಾಯಕರಲ್ಲೊಬ್ಬರು. ರಾಯಚೂರಿನಲ್ಲಿ ಜನಬಲ ಟೈಮ್ಸ್ ದಿನಪತ್ರಿಕೆಯನ್ನು ನಡೆಸುತ್ತಿರುವ ಅಂಬಣ್ಣ ಕಳೆದ ಮೂರು ದಶಕಗಳಿಗಿಂತ ಹೆಚ್ಚು ಸಮಯ ಚಳವಳಿಯಲ್ಲಿ ಪಾಲ್ಗೊಂಡಿದ್ದ ಕ್ರಿಯಾಶೀಲ ವ್ಯಕ್ತಿ.)


ಇದನ್ನೂ ಓದಿ: ಒಳ ಮೀಸಲಾತಿ: ಕಣ್ಣ ಗಾಯವನರಿಯುವ ಕ್ರಮ – ಹುಲಿಕುಂಟೆ ಮೂರ್ತಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...