Homeಮುಖಪುಟಒಳಮೀಸಲಾತಿಯೆಂಬುದು ಅಣ್ಣನ ಪಾಲು ಅಣ್ಣನಿಗೆ, ತಮ್ಮನ ಪಾಲು ತಮ್ಮನಿಗೆ ಎಂಬ ಸರಳ ಸೂತ್ರ - ಅಂಬಣ್ಣ...

ಒಳಮೀಸಲಾತಿಯೆಂಬುದು ಅಣ್ಣನ ಪಾಲು ಅಣ್ಣನಿಗೆ, ತಮ್ಮನ ಪಾಲು ತಮ್ಮನಿಗೆ ಎಂಬ ಸರಳ ಸೂತ್ರ – ಅಂಬಣ್ಣ ಅರೋಲಿಕರ್

ಬಲಾಢ್ಯರು ಹಾಗೂ ಬಡಕಲು ವ್ಯಕ್ತಿಗಳ ನಡುವೆ ಸ್ಪರ್ಧೆಗೆ ಅವಕಾಶ ನೀಡಿದರೆ ಅಂತಿಮವಾಗಿ ಅನ್ಯಾಯವಾಗುವುದು ಮಾತ್ರ ಬಡಕಲು ವ್ಯಕ್ತಿಗಳಿಗೆ ಎಂಬ ಸರಳ ಸತ್ಯವು ಬಹುತೇಕರಿಗೆ ಅರ್ಥವಾಗದಿರುವುದು ಈ ದೇಶದ ದೌರ್ಭಾಗ್ಯವೇ ಸರಿ.

- Advertisement -
- Advertisement -

ಸ್ವಾತಂತ್ರ್ಯ ನಂತರದ 70 ವರ್ಷಗಳ ಅವಧಿಯಲ್ಲಿ ಸರಿ ಸುಮಾರು ಮೂವತ್ತೈದು ವರ್ಷಗಳ ಕಾಲ, ಪರಿಶಿಷ್ಟ ಜಾತಿಗಳಿಗೆ ಮೀಸಲಿಟ್ಟ 15% ಮೀಸಲಾತಿಯನ್ನು ಆದ್ಯತೆಯನುಸಾರ ಬಲಹೀನರಿಗೆ ಹಾಗೂ ಅವಕಾಶ ವಂಚಿತರಿಗೆ ಅವರವರ ಆರ್ಥಿಕ ಅಸಮಾನತೆಗಳ ಆಧಾರದ ಮೇಲೆ, ವಿದ್ಯೆ ಹಾಗೂ ಉದ್ಯೋಗವಕಾಶಗಳಿಗೆ ಮಾತ್ರ ಉಪಯುಕ್ತವಾಗುವಂತೆ ಹಂಚುವಂತೆ ಹೋರಾಡುತ್ತಿರುವುದೇ ಬಹುದೊಡ್ಡ ಅಪರಾಧವೆಂಬಂತೆ ಚಿತ್ರೀಕರಿಸಲಾಗುತ್ತಿದೆ. ಬಹುತೇಕ ಎಲ್ಲಾ ನ್ಯಾಯಪಾಲಕರು ಹಾಗೂ ಬುದ್ಧಿಜೀವಿಗಳೆನಿಸಿಕೊಂಡ ಅಕ್ಷರಸ್ಥರು ತಮ್ಮ ತಮ್ಮ ಅವಗಾಹನೆಗೆ ತಕ್ಕಂತೆ ವಿಶ್ಲೇಷಣೆ ಮಾಡುತ್ತಾ, ಹಸಿದು ಹೌಹಾರಿದ ಸಮುದಾಯಗಳ ಮೇಲೆ ಅತಿಕ್ರಮಣ ನಡೆಸಿರುವುದು ಬಿಟ್ಟರೆ, ಆ ಸಮುದಾಯಗಳ ಹಸಿವಿನ ಬೇಗುದಿಯನ್ನು ಯಾವ ರೀತಿಯಾಗಿ ಶಮನ ಮಾಡಬೇಕೆಂಬುದರ ಬಗ್ಗೆ ಚಿಂತಿಸಲೇ ಇಲ್ಲ. ಇದು ‘ಸೋತವರ ಮೇಲೆ ಬಲಿತವರು ಬಿದ್ದರು’ ಎಂಬಂತಾಗಿದೆ. ಇದು ಈ ದೇಶದ ಪ್ರಗತಿಪರ, ಜೀವಪರ, ಜನಪರತೆಯ ಕಾಳಜಿಗೆ ಬಹುದೊಡ್ಡ ನಿದರ್ಶನವಾಗಿದೆ.

ಬಹುಸಂಖ್ಯಾತ ಅಸ್ಪೃಶ್ಯ ಸಮುದಾಯಗಳು ಕಳೆದ 35 ವರ್ಷಗಳಲ್ಲಿ ಸತತವಾಗಿ ಹೋರಾಡಿದ ಪರಿಣಾಮದಿಂದ ಕಾಂಗ್ರೆಸ್ ಸರ್ಕಾರವು ನ್ಯಾಯಮೂರ್ತಿ ಎ.ಜೆ ಸದಾಶಿವರವರ ಏಕಸದಸ್ಯ ಆಯೋಗವನ್ನು ನೇಮಿಸಿದರೆ, ಬಿಜೆಪಿ ಸರ್ಕಾರವು ಆಯೋಗದ ಸಮೀಕ್ಷೆಗೆ ಅನುದಾನವನ್ನು ನೀಡಿದೆ. ಇನ್ನು ಜೆಡಿಎಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವುದಾಗಿ ಲಿಖಿತ ಭರವಸೆಯನ್ನು ನೀಡಿದೆ. ಹೀಗಿರುವಾಗ ಈ ರಾಜ್ಯದ 224 ಶಾಸಕರು ಈ ಆಯೋಗದ ಶಿಫಾರಸ್ಸುಗಳನ್ನು ಸರ್ವಾನುಮತದಿಂದ ಅಂಗೀಕರಿಸಿ ಜಾರಿಗೊಳಿಸಲು ಯಾವ ಸೀಮೆಯ ಸಾಮಾಜಿಕ ನ್ಯಾಯ ಅಡ್ಡ ಬರುತ್ತದೆಯೋ? ಉತ್ತರಿಸಬೇಕಾದ ಜವಾಬ್ದಾರಿ ಸರ್ವ ಪಕ್ಷಗಳಿಗೆ ಸೇರಿದ ವಿಚಾರವಾಗಿದೆ.

ಇದನ್ನೂ ಓದಿ: ಒಳಮೀಸಲಾತಿಯ ಕುರಿತು ಡಾ. ಬಿ.ಆರ್. ಅಂಬೇಡ್ಕರ್‌ರವರ ಆಶಯ ಎನು? – ಡಾ.ನರಸಿಂಹ ಗುಂಜಹಳ್ಳಿ

ಹೌದು ಇಂತಹ ಅಭಿಪ್ರಾಯವು ಒಂದಷ್ಟು ಜನರಿಗೆ ಅತಿಶಯೋಕ್ತಿ ಎನಿಸಿದರೂ ಅಕ್ಷರಶಃ ಅಸ್ಪೃಶ್ಯ ಸಮುದಾಯಗಳ ಪಾಲಿಗೆ ಹಾಗೂ ಅವಕಾಶ ವಂಚಿತರಿಗೆ ಅತಿ ಹತ್ತಿರವಾದ ಅನುಭವದ ಮಾತಾಗಿದೆ. ದೇಶದ ಯಾವುದೇ ರಾಜ್ಯಗಳಲ್ಲೂ ಅಸ್ಪೃಶ್ಯ ಸಮುದಾಯಗಳ ಪಟ್ಟಿಯಲ್ಲಿ ಅಸ್ಪೃಶ್ಯೇತರರು ಸೇರ್ಪಡೆಯಾಗದೆ ಕರ್ನಾಟಕದಲ್ಲಿ ಮಾತ್ರ ಇದು ಸಾಧ್ಯವಾಗಿದೆ. ಸ್ಪೃಶ್ಯರು ಸಹ ಆರ್ಥಿಕವಾಗಿ ಅತ್ಯಂತ ಸಬಲರು ಎನ್ನುತ್ತಿಲ್ಲ, ಆದರೆ ಬಲಾಢ್ಯರು ಹಾಗೂ ಬಡಕಲು ವ್ಯಕ್ತಿಗಳ ನಡುವೆ ಸ್ಪರ್ಧೆಗೆ ಅವಕಾಶ ನೀಡಿದರೆ ಅಂತಿಮವಾಗಿ ಅನ್ಯಾಯವಾಗುವುದು ಮಾತ್ರ ಬಡಕಲು ವ್ಯಕ್ತಿಗಳಿಗೆ ಎಂಬ ಸರಳ ಸತ್ಯವು ಅತ್ತ ಸರ್ಕಾರ ಹಾಗೂ ಸರ್ವೋಚ್ಚ ನ್ಯಾಯಾಲಯಗಳಿಗೆ ಇತ್ತ ಸಾಮಾಜಿಕ ನ್ಯಾಯದ ಪರ ಶತಮಾನಗಳ ಕಾಲ ಬೊಗಳೆ ಬಿಡುವ ಬುದ್ಧಿವಂತರಿಗೂ ಅರ್ಥವಾಗದೆ ಇರುವುದು ಈ ದೇಶದ ದೌರ್ಭಾಗ್ಯವೇ ಸರಿ. ಆರ್ಥಿಕವಾಗಿ ಬಲಹೀನರಾದವರಿಗೆಲ್ಲಾ ಮೀಸಲಾತಿಯನ್ನು ನೀಡಿದಂತೆ ಸ್ಪೃಶ್ಯ ಸಮುದಾಯಗಳಿಗೂ ಅವರ ಆರ್ಥಿಕ, ಶೈಕ್ಷಣಿಕ ಆದ್ಯತೆಗಳ ಅನುಸಾರ ವಿಶೇಷವಾದ ಮೀಸಲಾತಿಯನ್ನು ನೀಡಲು ಯಾರ ಅಭ್ಯಂತರವೂ ಇಲ್ಲ. ಆದರೆ ಇಲ್ಲಿ ಆಗಿರುವುದೆ ಬೇರೆ – ರಾಜಕೀಯ ಪಕ್ಷಗಳು ತಮ್ಮ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಡಜನ್‍ಗೂ ಅಧಿಕ ಜಾತಿಗಳನ್ನು ತಮ್ಮ ಮನಸೋ ಇಚ್ಚೆ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವ ಮೂಲಕ ಮೂಲ ಪರಿಶಿಷ್ಟರಿಗೆ ಆಗಬಹುದಾದ ಸಹಜ ಅನ್ಯಾಯದ ಅಪಾಯವನ್ನು ಲೆಕ್ಕಿಸದೆ ಇರುವುದು ದುರಂತ.

ಈ ಪ್ರಕ್ರಿಯೆ ಯಾವುದೇ ಪ್ರಗತಿಪರ ಕಾಳಜಿಯುಳ್ಳ ಮತಿವಂತರಿಗೆ ಅರ್ಥವಾಗದೇ ಇರುವುದು ಅತ್ಯಂತ ಘೋರ ಅಪರಾಧವೆಂದೆ ಹೇಳಬೇಕಿದೆ. ಇದ್ಯಾವುದು ಕಾನೂನಿನ ಪ್ರಕಾರ ಅಪರಾಧವಲ್ಲ. ಆದರೆ ಇರುವ ಮೀಸಲಾತಿಯನ್ನು ಕಟ್ಟಕಡೆಯ ಜನರಿಗೆ ಪ್ರಾಮಾಣಿಕವಾಗಿ ಹಂಚಬೇಕೆಂಬ ಪರಿಕಲ್ಪನೆಯನ್ನೇ ಸಂವಿಧಾನಬಾಹಿರವೆನ್ನುವ ಆಷಾಡಭೂತಿತನ ಮಾತ್ರ ಮನುವಾದ, ಕೋಮವಾದಕ್ಕಿಂತಲೂ ಕ್ರ್ರೂರತನದ್ದಾಗಿದೆ. ಇನ್ನು ಮೇಲ್ಜಾತಿಗಳಿಗೆ ಮೀಸಲಾತಿಯ ಹೆಚ್ಚಳವಾಗುವುದು ಇರಲಿ, ಎಲ್ಲಾ ವಲಯಗಳು ಕಾರ್ಪೋರೇಟ್ ಕಬಂದಬಾಹುಗಳಿಗೆ ಸಿಲುಕಿ ಖಾಸಗೀಕರಣವಾಗಿರುವುದಾಗಲಿ ಇವರಿಗೆ ಅಪಾಯಕಾರಿ ಎನಿಸುವುದಿಲ್ಲ. ಹಳ್ಳಿಗಾಡಿನ, ಅನಕ್ಷರಸ್ಥ ಸಮುದಾಯಗಳು ನಡೆಸುವ ಹಳ್ಳಿಕಟ್ಟೆ ಪಂಚಾಯ್ತಿಯಲ್ಲಿ ಬಗೆಹರಿಯಬಹುದಾದ ಪಿತ್ರಾರ್ಜಿತ ಅಸ್ತಿಯ ಹಂಚಿಕೆಯಂತೆ ಅಣ್ಣನ ಪಾಲು ಅಣ್ಣನಿಗೆ, ತಮ್ಮನ ಪಾಲು ತಮ್ಮನಿಗೆ ಎಂಬ ಸರಳ ಸೂತ್ರವು ದೆಹಲಿ ಹಂತದ ಪಂಚಾಯಿತಿಯಲ್ಲಿ ಕಳೆದ 70 ವರ್ಷಗಳಿಂದಲೂ ಬಗೆಹರಿಯದೆ, ಅನಿರ್ಧಿಷ್ಟ ಕಾಲದವರೆಗೂ ವಾದ ವಿವಾದಗಳಲ್ಲೇ ಕಾಲಹರಣವಾಗುತ್ತಿದೆ. ಇದು ಎರಡು ತಲೆಮಾರುಗಳ ಕೋಟ್ಯಾಂತರ ಜನಗಳ ವಿದ್ಯೆ ಹಾಗೂ ಉದ್ಯೋಗದ ವಂಚನೆಗೆ ಕಾರಣವಾಗಿದೆ.

ಪರಿಶಿಷ್ಟ ಜಾತಿಗಳು ಇದುವರೆಗೂ ಎತ್ತಿರುವ ಪ್ರಶ್ನೆ ಮೀಸಲಾತಿ ಹೆಚ್ಚಳವಾಗಬೇಕಂದಲ್ಲ. ಈಗಾಗಲೇ ಅಸ್ಪೃಶ್ಯರಲ್ಲೇ ಅತೀ ಬುದ್ಧಿವಂತರಾದ ಪ್ರಭಾವಿ ರಾಜಕಾರಣಿಗಳು ಹಾಗೂ ಅಕ್ರಮವಾಗಿ ನುಸುಳಲ್ಪಟ್ಟ ಅಸ್ಪೃಶ್ಯೇತರರು ಇರುವ ಎಲ್ಲಾ ಅವಕಾಶಗಳನ್ನು ಬಾಚಿ ತಿಂದು ಬಲಾಢ್ಯರಾಗಿ ಮೆರೆಯುತ್ತಿರುವಾಗ, ಇದ್ದ ಬಿದ್ದ ಹಳಸಲು ಅನ್ನವನ್ನಾದರು ನಮ್ಮ ಹಸಿದ ಹೊಟ್ಟೆಗೆ ನೀಡಿ ಎಂದು ಈ ನೆಲದ ಸಫಾಯಿ ಕರ್ಮಚಾರಿಗಳು ಹಾಗೂ ಮಲ ಬಳೆಯುವ ಪೌರಕಾರ್ಮಿಕರು ಕಳೆದ ಮೂರು ದಶಕಗಳಿಂದ ಅಂಗಲಾಚಿ ಪರಿತಪಿಸುತ್ತಿದ್ದರೂ ಯಾವ ಸರ್ಕಾರಗಳಿಗೂ ಹಾಗೂ ಯಾವ ನ್ಯಾಯಾಲಯಗಳಿಗೂ ಕಿಂಚಿತ್ತೂ ಅಲುಗಾಡುತ್ತಿಲ್ಲ. ಇದರ ಹಿಂದೆ ಅಸ್ಪೃಶ್ಯತೆಯು ಇನ್ನು ಹಲವಾರು ಶತಮಾನಗಳ ಕಾಲ ಅಸ್ತಿತ್ವದಲ್ಲಿರಬೇಕೆಂಬ ಉದ್ದೇಶ ಅಡಗಿದೆ ಎಂದು ಎನಿಸುತ್ತಿದೆ. ಕಸ ಬಳಿಯುವವರು ಕಾಲಾನುಕಾಲದಿಂದ ಕಸಬಳಿಯುತ್ತಲೇ ಇರಬೇಕೆಂಬ ಶ್ರೇಣಿಕೃತ ವ್ಯವಸ್ಥೆಯ ಹುನ್ನಾರದ ಮುಂದುವರೆದ ಭಾಗವೇ ಇದು ಎಂಬುದನ್ನು ಈ ದೇಶದ ಪ್ರಜಾತಂತ್ರವಾದಿಗಳು ಹಾಗೂ ಪ್ರಗತಿಪರವಾದದ ಪೊರೆ ಆವರಿಸಿದ ಅಣ್ಣಂದಿರು ಅರ್ಥಮಾಡಿಕೊಂಡರೆ, ಅರೆಗಳಿಗೆಯಲ್ಲಿ ಹಸಿದ ಜನಗಳಿಗೆ ಹಳಸಿದ ಅನ್ನವನ್ನಾದರೂ ನೀಡಿ, ಅರೆ ಜೀವದಲ್ಲಿರುವ ಅಸಂಖ್ಯಾತ ಅಸ್ಪೃಶ್ಯ ಸಮುದಾಯಗಳನ್ನು ಅರೆಕಾಲಿಕವಾಗಿಯಾದರೂ ಐಸಿಯುನಿಂದ ಜನರಲ್ ವಾರ್ಡ್‍ಗೆ ಸ್ಥಳಾಂತರಿಸಬಹುದಾಗಿದೆ ಎಂದು ನಂಬಿದ್ದೇನೆ.

ಅಂಬಣ್ಣ ಅರೋಲಿಕರ್

(ತಮ್ಮ ಹೋರಾಟದ ಹಾಡುಗಳ ಗಾಯನದಿಂದ ಪ್ರಖ್ಯಾತವಾಗಿದ್ದ ಅಂಬಣ್ಣ ಅರೋಲಿಕರ್ ಈಗ ಮಾದಿಗ ಮೀಸಲಾತಿ ಹೋರಾಟದ ರಾಜ್ಯ ಮಟ್ಟದ ನಾಯಕರಲ್ಲೊಬ್ಬರು. ರಾಯಚೂರಿನಲ್ಲಿ ಜನಬಲ ಟೈಮ್ಸ್ ದಿನಪತ್ರಿಕೆಯನ್ನು ನಡೆಸುತ್ತಿರುವ ಅಂಬಣ್ಣ ಕಳೆದ ಮೂರು ದಶಕಗಳಿಗಿಂತ ಹೆಚ್ಚು ಸಮಯ ಚಳವಳಿಯಲ್ಲಿ ಪಾಲ್ಗೊಂಡಿದ್ದ ಕ್ರಿಯಾಶೀಲ ವ್ಯಕ್ತಿ.)


ಇದನ್ನೂ ಓದಿ: ಒಳ ಮೀಸಲಾತಿ: ಕಣ್ಣ ಗಾಯವನರಿಯುವ ಕ್ರಮ – ಹುಲಿಕುಂಟೆ ಮೂರ್ತಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...