Homeಮುಖಪುಟಹೋರಾಟನಿರತ ರೈತರ ದೇಹ, ಮನಸ್ಸಿಗೆ ಶಕ್ತಿ ತುಂಬುತ್ತಿರುವ ವಿಭಿನ್ನ ಲಂಗರ್‌ಗಳು…!

ಹೋರಾಟನಿರತ ರೈತರ ದೇಹ, ಮನಸ್ಸಿಗೆ ಶಕ್ತಿ ತುಂಬುತ್ತಿರುವ ವಿಭಿನ್ನ ಲಂಗರ್‌ಗಳು…!

ಸಿಖ್ ಧರ್ಮದ ಮೂರನೇ ಗುರುಗಳಾದ ಗುರು ಅಮರ್ ದಾಸ್, ಜನರ ಹಸಿವನ್ನು ನೀಗಿಸುವ ಲಂಗರ್‌ಗಳಿಗೆ ಒಂದು ಸಂಘಟಿತ ರೂಪ ನೀಡಿದರು.

- Advertisement -
- Advertisement -

ಲಂಗರ್… ರೈತ ಹೋರಾಟ ಶುರುವಾದಾಗಿನಿಂದ ಎಲ್ಲರ ಬಾಯಲ್ಲಿ ಬರುತ್ತಿರುವ ಮತ್ತು ಹೆಚ್ಚು ಪ್ರಚುರಗೊಳ್ಳುತ್ತಿರುವ ಪದ. ಲಂಗರ್ ಎಂದರೆ ಅಡುಗೆಮನೆ ಎಂಬ ಅರ್ಥ ಇದೆ. ಇದು ಸಿಖ್ ಸಮುದಾಯದ ಜನರು ಒಂದಾಗಿ, ಒಕ್ಕೂಟದ ರೀತಿಯಲ್ಲಿ ಅಡುಗೆ ಮಾಡಿ, ಗುರುದ್ವಾರಗಳಲ್ಲಿ ನೀಡುವ ಉಚಿತ ಊಟದ ಸೇವೆಯಾಗಿದೆ.

ಲಂಗರ್‌ಗಳಲ್ಲಿ ಯಾವುದೇ ಜಾತಿ, ಧರ್ಮ, ಲಿಂಗ, ಸಾಮಾಜಿಕ ಸ್ಥಾನಮಾನ, ಆರ್ಥಿಕ ಸ್ಥಿತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಇಲ್ಲಿ ಎಲ್ಲರು ಸಮಾನರು. ಎಲ್ಲರು ಜೊತೆಯಲ್ಲಿ ಕುಳಿತು ಊಟ ಮಾಡಬೇಕು. ಯಾರೊಬ್ಬರು ಹಸಿವಿನಿಂದ ಬಳಲಬಾರದು ಎಂಬುದು ಲಂಗರ್‌ಗಳ ಆಶಯ. ಲಂಗರ್‌ಗಳು ಸಸ್ಯಹಾರವನ್ನು ಒದಗಿಸುತ್ತವೆ. ಸಿಖ್ ಸಮುದಾಯದ ಸ್ವಯಂ ಸೇವಕರು ಲಂಗರ್‌ಗಳಲ್ಲಿ ಸೇವೆ ಸಲ್ಲಿಸುತ್ತಾರೆ.

ಲಂಗರ್‌ಗಳ ಇತಿಹಾಸ

ಲಂಗರ್‌ಗಳಿಗೆ 1500 ವರ್ಷಗಳ ಇತಿಹಾಸವಿದೆ. ಸಿಖ್ ಧರ್ಮ ಸಂಸ್ಥಾಪಕ ಗುರುನಾನಕ್ ಅವರ ಕಾಲದಿಂದಲು ಲಂಗರ್‌ಗಳು ಸೇವೆ ನೀಡುತ್ತಿವೆ. ಪಂಜಾಬ್‌ನಲ್ಲಿ ಈ ಲಂಗರ್‌ಗಳ ಆರಂಭವಾಯಿತು ಎಂದು ಪ್ರತಿಭಟನಾ ನಿರತ ಪಂಜಾಬ್‌ನ ರೈತರು ತಿಳಿಸುತ್ತಾರೆ.

ಸಿಖ್ ಧರ್ಮದ ಎರಡನೇ ಗುರುಗಳಾದ ಗುರು ಅಂಗದ್ ಅವರು ಗುರುದ್ವಾರಗಳಲ್ಲಿ ಈ ಲಂಗರ್‌ಗಳಿಗೆ ನಿಯಮಬದ್ಧವಾಗಿ ಚಾಲನೆ ನೀಡಿದವರು. ಸಿಖ್ ಧರ್ಮದ ಮೂರನೇ ಗುರುಗಳಾದ ಗುರು ಅಮರ್ ದಾಸ್, ಜನರ ಹಸಿವನ್ನು ನೀಗಿಸುವ ಲಂಗರ್‌ಗಳಿಗೆ ಒಂದು ಸಂಘಟಿತ ರೂಪ ನೀಡಿದರು. ಗುರುದ್ವಾರಗಳಿಂದ ಹೊರಭಾಗದಲ್ಲೂ ಹಸಿವಿನಿಂದ ಬಳಲುವವರಿಗೆ ಊಟ ಸಿಗಬೇಕು ಎಂದು ಪ್ರತಿಪಾದಿಸಿದರು. ತಮ್ಮನ್ನು ಭೇಟಿಯಾಗಲು ಬರುವವರು ಮೊದಲು ಊಟ ಮಾಡಿ ನಂತರ ಭೇಟಿಯಾಗಬೇಕು ಎಂಬ ಹವ್ಯಾಸವನ್ನು ಬೆಳೆಸಿದರು. ಇದು ಈಗಲೂ ಸಿಖ್ ಸಮುದಾಯದಲ್ಲಿ ಜಾರಿಯಿದೆ.

ಗಡಿಗಳಲ್ಲಿ ಲಂಗ್‌ರ್‌ಗಳು ತಲೆಎತ್ತಿದ ಬಗೆ

ಕಳೆದ 5 ತಿಂಗಳಿನಿಂದ ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ನಡೆಯುತ್ತಿರುವ ರೈತ ಹೋರಾಟದಲ್ಲಿ ಈ ಲಂಗರ್‌ಗಳ ಪಾತ್ರ ಪ್ರಮುಖವಾಗಿದೆ. ವಿಶ್ವದಾದ್ಯಂತ ಹಬ್ಬಿಕೊಂಡಿರುವ ಲಂಗರ್‌ಗಳು ಈ ಹೋರಾಟದಲ್ಲಿ ಚಾರಿತ್ರಿಕ ಕೊಡುಗೆ ನೀಡುತ್ತಿವೆ. ಪ್ರತಿಭಟನೆಗೆ ಬರುವವರಿಗೆ ಮೊದಲು ಲಂಗರ್‌ಗಳ ದಾರಿ ತಿಳಿಸಲಾಗುತ್ತದೆ. ಮೊದ ಮೊದಲು ಸಾಮಾನ್ಯ ಊಟಕ್ಕೆ ಮಾತ್ರ ಸೀಮಿತವಾಗಿದ್ದ ಲಂಗರ್‌ಗಳು ಈಗ ಜನರ ಜೀವನ ಶೈಲಿ ಜೊತೆಗೆ ಸಾಕಾಷ್ಟು ಬದಲಾವಣೆ ಹೊಂದಿವೆ.

ನವೆಂಬರ್ 26 ರಂದು ಪಂಜಾಬ್ ರೈತರು ಆಂಭಿಸಿದ ದೆಹಲಿ ಚಲೋ ಜೊತೆಗೆ ಲಂಗರ್‌ಗಳು ರೈತರ ಬೆನ್ನು ಹತ್ತಿದ್ದವು. ರೈತರು ತಮ್ಮ ಪ್ರತಿಭಟನಾ ಸ್ಥಳಗಳನ್ನು ಗುರುತಿಸಿ ಟ್ರ್ಯಾಲಿಗಳನ್ನು ನಿಲ್ಲಿಸಿದ ಕೂಡಲೇ ಲಂಗರ್‌ಗಳು ಕೂಡ ಕಾರ್ಯನಿರ್ವಹಿಸಲು ಆರಂಭಿಸಿದ್ದವು. ದೆಹಲಿಯ ಗಡಿಭಾಗಗಳಾದ ಸಿಂಘು ಬಾರ್ಡರ್, ಟಿಕ್ರಿ ಬಾರ್ಡರ್, ಶಹಾಜಾನ್ಪುರ, ಗಾಝಿಪುರ್, ಚಿಲ್ಲಾ, ಪಲ್ವಲ್ ಬಾರ್ಡರ್, ಇಂದ್ರಪ್ರಸ್ಥ ಬಾರ್ಡರ್‌ಗಳು ಸೇರಿದಂತೆ ಲಕ್ಷಾಂತರ ಜನ ಪ್ರತಿಭಟನಾಕಾರರು ಇರುವಲ್ಲಿಯೇ ಸಾವಿರಾರು ಲಂಗರ್‌ಗಳು ತಲೆ ಎತ್ತಿದವು.

ಸಿಖ್ ಧರ್ಮ ರೂಪುಗೊಂಡಿರುವುದೆ ಒಂದು ಸಂಘಟನೆಯ ಮಾದರಿಯಲ್ಲಿ. ಇಲ್ಲಿ ಎಲ್ಲರೂ ನಿಯಮಗಳಿಗೆ ಬದ್ಧರಾಗಿರಬೇಕು. ತಾವು ಸಂಪಾದಿಸಿದ ಸಂಪತ್ತಿನಲ್ಲಿ ಶೇಕಡಾ 10 ರಷ್ಟನ್ನು ಲಂಗರ್‌ಗಳಿಗೆ ಪ್ರತಿಯೊಬ್ಬರು ದೇಣಿಗೆ ನೀಡಲೇಬೇಕು. ಇದರಿಂದಲೇ ಲಂಗರ್‌ಗಳಿಗೆ ಬೇಕಾದ ದೇಣಿಗೆ ಸಂಗ್ರಹವಾಗುತ್ತದೆ.

ದಿನವೀಡಿ ಸೇವೆ

ಪ್ರತಿಭಟನಾ ಸ್ಥಳಗಳಲ್ಲಿ ತಲೆ ಎತ್ತಿರುವ ಲಂಗರ್‌ಗಳು 24 ಗಂಟೆಗಳು ಪ್ರತಿಭಟನಾ ನಿರತರ ಹಸಿವನ್ನು ಇಂಗಿಸುತ್ತಿವೆ. ಬೆಳಗ್ಗೆ 4 ಗಂಟೆಯಿಂದ ಕಾರ್ಯ ನಿರ್ವಹಿಸಲು ಆರಂಭಿಸುವ ಇವುಗಳ ಕೆಲಸ ರಾತ್ರಿ 10 ಗಂಟೆಯವರೆಗೂ ಸಾಗುತ್ತಲೇ ಇರುತ್ತದೆ. ನಂತರವೂ ಯಾರಾದರೂ ಊಟಕ್ಕೆ ಬಂದರೇ ಇಲ್ಲ ಎನ್ನುವುದಿಲ್ಲ. ರೈತ ಹೋರಾಟದಲ್ಲಿರುವ ಲಂಗರ್‌ಗಳು ಬೆಳಗ್ಗೆ ಚಹಾ ನೀಡುವ ಮೂಲಕ ಆರಂಭವಾಗುತ್ತವೆ. ರಾತ್ರಿ ಹಾಲು ನೀಡುವ ಮೂಲಕ ಕೊನೆಗೊಳ್ಳುತ್ತವೆ.

ಸಾಮಾನ್ಯ ಊಟ ಉಪಚಾರಕ್ಕೆ ಮೀಸಲಾಗಿದ್ದ ಇವುಗಳಲ್ಲಿ ಈಗ ಹಲವಾರು ಬದಲಾವಣೆಗಳು ಕಂಡು ಬಂದಿವೆ. ಹಲವು ವಿಭಿನ್ನ ಲಂಗರ್‌ಗಳು ಪ್ರತಿಭಟನಾ ಸ್ಥಳಗಳಲ್ಲಿ ತಲೆ ಎತ್ತಿವೆ. ಚಹಾದ ಲಂಗರ್, ಕೀರ್ ಕಿ ಲಂಗರ್, ಬೆಳಗಿನ ತಿಂಡಿ ಲಂಗರ್, ಊಟದ ಲಂಗರ್, ಸಂಜೆ ಸ್ಯಾಕ್ಸ್ ಲಂಗರ್, ಬರ್ಗರ್ ಲಂಗರ್, ಪಿಜ್ಜಾ ಲಂಗರ್, ಪಿಂಡಿ (ಸಿಹಿ ಉಂಡೆಗಳು) ಕಾ ಲಂಗರ್, ಹಲ್ವಾ ಮತ್ತು ಜಿಲೇಬಿ ಲಂಗರ್‌ಗಳೆಂಬ ಹಲವು ರೀತಿಯಲ್ಲಿ ಬದಲಾಗಿವೆ.

ದೇಶ-ವಿದೇಶಗಳ ಹಲವು ಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲಂಗರ್‌ಗಳ ಒಂದು ಭಾಗಗಳು ಈ ಪ್ರತಿಭಟನಾ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ದೇಶ ವಿದೇಶಗಳ ಸಾವಿರಾರು ಸ್ವಯಂ ಸೇವಕರು ಲಂಗರ್‌ಗಳಲ್ಲಿ ಅಡುಗೆ ಮಾಡುವುದು, ಸ್ವಚ್ಛತೆ, ಬಡಿಸುವುದು ಸೇರಿದಂತೆ ಎಲ್ಲಾ ಕೆಲಸಗಳನ್ನು ನೋಡಿಕೊಳ್ಳುತ್ತಾರೆ.

ಗುರುದ್ವಾರಗಳ ಲಂಗರ್‌ಗಳ ಜೊತೆಗೆ ಪ್ಯಾಮಿಲಿ ಲಂಗರ್‌ಗಳು ಇಲ್ಲಿವೆ. ಹಳ್ಳಿಯ ಎರಡು ಮೂರು ಮನೆಗಳ ಸದಸ್ಯರು ಸೇರಿಯು ಲಂಗರ್‌ಗಳನ್ನು ನಡೆಸುತ್ತಿದ್ದಾರೆ. ಕುಟುಂಬದ ಲಂಗರ್‌ಗಳಲ್ಲಿ ತಮ್ಮ ಕುಟುಂಬ ಸದಸ್ಯರ ಜೊತೆಗೆ ಹೊರ ಭಾಗಗಳಿಂದ ಬಂದವರಿಗೂ ಆಹಾರ ಒದಗಿಸಲಾಗುತ್ತದೆ. ಇವುಗಳಲ್ಲಿ ಮನೆಯ ಸದಸ್ಯರೇ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಾರೆ.

ರೈತ ಹೋರಾಟದಲ್ಲಿರುವ ಲಂಗರ್‌ಗಳಲ್ಲಿ ಊಟ ಉಪಚಾರದ ಜೊತೆಗೆ ದಿನ ಬಳಕೆಯ ಅಗತ್ಯ ವಸ್ತುಗಳಾದ ಬ್ರಶ್, ಪೇಸ್ಟ್, ಸೋಪ್, ಶೂ, ಚಪ್ಪಲಿ, ಬಟ್ಟೆ, ಚಳಿಗಾಲದ ಕ್ರೀಮ್‌ಗಳು, ಸ್ಯಾನಿಟರಿ ನ್ಯಾಪ್ಕಿನ್ಸ್, ಒಳಉಡುಪುಗಳನ್ನು ಸಹ ನೀಡಲಾಗುತ್ತಿದೆ.

ಲಂಗ್‌ರ್‌ಗಳ ಮಹತ್ವ

70 ದಿನಗಳ ರೈತ ಹೋರಾಟದಲ್ಲಿ ಈ ಲಂಗರ್‌ಗಳ ಪಾತ್ರ ಬಹಳ ಪ್ರಾಮುಖ್ಯತೆ ಪಡೆದಿದೆ. ಹೋರಾಟಗಳು ಹಲವು ಬಾರಿ ಹಣಕಾಸು ಕೊರತೆ, ಊಟದ ವ್ಯವಸ್ಥೆ ಇಲ್ಲದ ಕಾರಣಕ್ಕೆ ಕೊನೆಗೊಂಡ ಉದಾಹರಣೆಗಳಿವೆ. ಲಕ್ಷಾಂತರ ಜನರು ಒಂದೆಡೆ ಇರುವಾಗ ಊಟ-ಉಪಚಾರಗಳು ಸರಿಯಾಗಿ ಇಲ್ಲದಿದ್ದರೇ, ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಹೋರಾಟ ಕೂಡ ಕೊನೆಗೊಳ್ಳಬಹುದು. ಇಂತಹ ಸ್ಥಿತಿಗಳನ್ನು ಈ ಲಂಗರ್‌ಗಳು ಪಾರು ಮಾಡಿವೆ.

ಲಂಗರ್‌ಗಳಲ್ಲಿ ಮೈಕ್‌ಗಳ ಮೂಲಕ ಇಡೀ ದಿನ ಪ್ರತಿಭಟನಾಕಾರರನ್ನು ಊಟಕ್ಕೆ ಕರೆಯಲಾಗುತ್ತಿರುತ್ತದೆ. ಹೋರಾಟಕ್ಕೆ ಶಕ್ತಿ ತುಂಬುವ ವಾಕ್ಯಗಳನ್ನು ಘೋಷಿಸುತ್ತಿರುತ್ತವೆ. ಲಂಗರ್‌ಗಳು ಇಡೀ ದಿನ ಆಹಾರ, ಚಹಾ ನೀಡುವ ಮೂಲಕ ತೀವ್ರ ಚಳಿಯಲ್ಲಿ ಹೋರಾಟ ನಡೆಸುತ್ತಿರುವ ರೈತರಿಗೆ ಬೆಚ್ಚಗಿನ ಭಾವ ಒದಗಿಸುತ್ತಿವೆ. ಉತ್ತಮ ಆಹಾರ ದೇಹಕ್ಕೆ ಶಕ್ತಿ ನೀಡುವ ಜೊತೆಗೆ ಮನಸ್ಸಿಗೂ ಹೋರಾಟದ ಹುಮ್ಮಸ್ಸು ನೀಡುತ್ತಿದೆ.

  • ಮಮತ ಎಂ

ಇದನ್ನೂ ಓದಿ: ರಾಕೇಶ್ ಟಿಕಾಯತ್ (2013-21)ರನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ‘ಹರ್ ಹರ್ ಮಹಾದೇವ್, ಅಲ್ಲಾಹು ಅಕ್ಬರ್’…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...