Homeಕರ್ನಾಟಕ'ನಾವು ಯಾರ ಮೀಸಲಾತಿಯನ್ನೂ ಕಿತ್ತುಕೊಳ್ಳಲ್ಲ' - ಪಂಚಮಸಾಲಿ ಸ್ವಾಮೀಜಿಯ ವಿಶೇಷ ಸಂದರ್ಶನ

‘ನಾವು ಯಾರ ಮೀಸಲಾತಿಯನ್ನೂ ಕಿತ್ತುಕೊಳ್ಳಲ್ಲ’ – ಪಂಚಮಸಾಲಿ ಸ್ವಾಮೀಜಿಯ ವಿಶೇಷ ಸಂದರ್ಶನ

ಖಂಡಿತವಾಗಿಯೂ ರೈತರ ಹೋರಾಟದ ಬೆಂಬಲಿಗ ನಾನು. ಆದರೆ, ಮಾಧ್ಯಮಗಳು ಈ ರೈತ ಹೋರಾಟವನ್ನು ತಪ್ಪಾಗಿ ಬಿಂಬಿಸಿವೆ. ನಾವೇನಾದರೂ ಈಗ ರೈತ ಹೋರಾಟದ ಪರ, ಕೃಷಿ ಕಾನೂನುಗಳ ವಿರುದ್ಧ ಹೇಳಿಕೆ ಕೊಟ್ಟರೆ ನಮ್ಮ ಮೀಸಲಾತಿ ಹೋರಾಟವನ್ನು ಮಾಧ್ಯಮಗಳು ತುಳಿದೇ ಬಿಡುತ್ತವೆ- ಪಂಚಮಸಾಲಿ ಸ್ವಾಮೀಜಿ

- Advertisement -
- Advertisement -

ರಾಜಧಾನಿಗೆ ಪಾದಯಾತ್ರೆ, ರಾಜಧಾನಿಯಲ್ಲಿ ಬೃಹತ್ ಸಭೆ ನಡೆಸುವ ಮೂಲಕ ಲಿಂಗಾಯತರ ಒಳಪಂಗಡವಾದ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ಒತ್ತಡ ಹಾಕಲಾಗಿದೆ.

ಇದರ ನೇತೃತ್ವ ವಹಿಸಿರುವ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಿಂದೆಲ್ಲ ಪ್ರಗತಿಪರ ಚಳುವಳಿಗಳಲ್ಲಿ ಕಾಣಿಸಿಕೊಂಡವರು. ಆದರೆ, ಈಗ ಅವರ ನೇತೃತ್ವದ ಹೋರಾಟ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಈ ಕುರಿತು ಫೋನಿನಲ್ಲಿ ಸ್ವಾಮೀಜಿ ನಾನುಗೌರಿ.ಕಾಂ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ನಾನುಗೌರಿ: ರಾಜ್ಯದಲ್ಲಿ ಲಿಂಗಾಯತರು ಬಹುಸಂಖ್ಯಾತರು. ಅದರಲ್ಲಿ ಬಹು ಸಂಖ್ಯಾತರಾದ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಬೇಡುವುದು ತಪ್ಪಲ್ಲವೆ?

ಸ್ವಾಮೀಜಿ: ಆರ್ಥಿಕವಾಗಿ ಪಂಚಮಸಾಲಿಗಳು ತುಂಬ ತೊಂದರೆಯಲ್ಲಿದ್ದಾರೆ. ಕೃಷಿಯನ್ನೇ ಆಧಾರ ಮಾಡಿಕೊಂಡಿರುವ ಸಮುದಾಯ ಸಂಕಷ್ಟದಲ್ಲಿದೆ. ಶೈಕ್ಷಣಿಕವಾಗಿಯೂ ಹಿಂದುಳಿದಿದ್ದಾರೆ. ಹೀಗಿರುವಾಗ ಹೆಚ್ಚಿನ ಮೀಸಲಾತಿ ಕೇಳಲು ಸಂವಿಧಾನವೇ ಅವಕಾಶ ನೀಡಿದೆ.

ಇದನ್ನೂ ಓದಿ: ಲಿಂಗಾಯತ ಮತಗಳಿಗಾಗಿ ಗುದಮುರಗಿ: ಪಂಚಮಸಾಲಿಗಳು ಪಾರ್ಟಿ ಬದಲಿಸಿದರೆ….?

ನಾನುಗೌರಿ: ನಿಮ್ಮ ಉತ್ತರದಲ್ಲೇ ಹಲವು ಪ್ರಶ್ನೆ ಇವೆ. ಕೃಷಿಕರು-ಕೃಷಿ ಕಾರ್ಮಿಕರೇ ಹೆಚ್ಚಿರುವ ಪಂಚಮಸಾಲಿಗಳ ಹೋರಾಟ ಮುನ್ನಡೆಸುವಾಗ ನೀವು ಸಾಂಕೇತಿಕವಾಗಿ ನೇಗಿಲು ಹಿಡಿದಿದ್ದಿರಿ. ಆದರೆ, ಒಮ್ಮೆಯೂ, ಎಲ್ಲಿಯೂ ನೀವು ಕರಾಳ ಕೃಷಿ ಕಾನೂನುಗಳ ವಿರುದ್ಧ ಮತ್ತು ಪ್ರತಿಭಟಿಸುತ್ತಿರುವ ರೈತರ ಪರ ಒಂದೂ ಹೇಳಿಕೆ ನೀಡಿಲ್ಲವಲ್ಲ?

ಸ್ವಾಮೀಜಿ: ಖಂಡಿತವಾಗಿಯೂ ರೈತರ ಹೋರಾಟದ ಬೆಂಬಲಿಗ ನಾನು. ಆದರೆ, ಮಾಧ್ಯಮಗಳು ಈ ರೈತ ಹೋರಾಟವನ್ನು ತಪ್ಪಾಗಿ ಬಿಂಬಿಸಿವೆ. ನಾವೇನಾದರೂ ಈಗ ರೈತ ಹೋರಾಟದ ಪರ, ಕೃಷಿ ಕಾನೂನುಗಳ ವಿರುದ್ಧ ಹೇಳಿಕೆ ಕೊಟ್ಟರೆ ನಮ್ಮ ಮೀಸಲಾತಿ ಹೋರಾಟವನ್ನು ಮಾಧ್ಯಮಗಳು ತುಳಿದೇ ಬಿಡುತ್ತವೆ.

ನಾನುಗೌರಿ: ಬಹುಪಾಲು ಪಂಚಮಸಾಲಿಗಳು ಬಿಜೆಪಿಯ ಬೆಂಬಲಿಗರಾಗಿರುವ ಕಾರಣಕ್ಕೆ ನೀವು ಸಾಫ್ಟ್ ಸ್ಟ್ಯಾಂಡ್ ತಗೊಂಡಿದ್ದೀರಾ ಎಂಬ ಆರೋಪವಿದೆಯಲ್ಲ?

ಸ್ವಾಮೀಜಿ: ಹಾಗೇನೂ ಇಲ್ಲ. ನಮ್ಮ ಬೇಡಿಕೆ ಈಡೇರಬೇಕು ಅಷ್ಟೇ. ಸಮುದಾಯದ ಪಾಲಿಟಿಕಲ್ ಒರಿಯೆಂಟೆಶನ್ ಬಗ್ಗೆ ಈಗ ಮಾತನಾಡುವುದು ಸರಿಯಲ್ಲ ಅನಿಸುತ್ತದೆ.

ನಾನುಗೌರಿ: ಪ್ರತಿಭಟನೆ ಎಂದರೆ, ಅದು ಪ್ರಭುತ್ವದ ವಿರುದ್ಧವೇ ಇರುತ್ತದೆ. ನಿಮ್ಮ ಪ್ರತಿಭಟನೆ-ಹೋರಾಟ ಕೇಂದ್ರ-ರಾಜ್ಯಗಳ ಬಿಜೆಪಿ ಸರ್ಕಾರದ ವಿರುದ್ಧವಾಗಿರುವಾಗ, ನಿಮ್ಮ ಸಭೆ-ಸಮಾವೇಶಗಳಲ್ಲಿ ಸಚಿವರಾದ ನಿರಾಣಿ-ಸಿಸಿ ಪಾಟೀಲರಿಗೇನು ಕೆಲಸ?

ಸ್ವಾಮೀಜಿ: ಅವರು ಜನಾಂಗದ ನಾಯಕರಾಗಿ ಭಾಗವಹಿಸಿದ್ದಾರೆ ಅಷ್ಟೇ…

ಇದನ್ನೂ ಓದಿ: ನಮ್ಮದು ರಾಷ್ಟ್ರೀಯ ಪಕ್ಷ, ಹಾಗಾಗಿ ಯಾವುದೇ ತೀರ್ಮಾನ ಕೈಗೊಳ್ಳುವ ಅಧಿಕಾರ ನನಗಿಲ್ಲ: ಸಿಎಂ ಯಡಿಯೂರಪ್ಪ!

ನಾನುಗೌರಿ: ಹಿಂದೆ ನೀವು ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಇದ್ದಿರಿ. ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕರೆ ಎಲ್ಲ ಬಡ ಲಿಂಗಾಯತರಿಗೂ ಶೈಕ್ಷಣಿಕ ಮೀಸಲಾತಿ ತನ್ನಿಂದ ತಾನೇ ಸಿಗುತ್ತಿತ್ತು ಅಲ್ಲವೆ?

ಸ್ವಾಮೀಜಿ: 800-900 ವರ್ಷಗಳ ಹಿಂದೆಯೇ ಲಿಂಗಾಯತ ಪ್ರತ್ಯೇಕ ಧರ್ಮವಾಗಿದೆ. ಅದಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿ ಎಂಬುದು ನಮ್ಮ ಬೇಡಿಕೆ. ಆದರೆ, ಸರ್ಕಾರಗಳು ಮತ್ತು ಮಾಧ್ಯಮಗಳು ಇಡೀ ಹೋರಾಟವನ್ನೆ ತಪ್ಪಾಗಿ ಬಿಂಬಿಸಿದವು. ಈಗ ಒಂದು ಜಾತಿಗಾಗಿ ನಾವು ನ್ಯಾಯಬದ್ಧ ಮೀಸಲಾತಿ ಕೇಳುತ್ತಿದ್ದೇವೆ.

ನಾನುಗೌರಿ: ಗೌರಿ ಲಂಕೇಶ್ ಮತ್ತು ಪ್ರೊ ಕಲಬುರ್ಗಿ ಅವರ ಹತ್ಯೆಗಳನ್ನು ನೀವು ತೀವ್ರವಾಗಿ ಖಂಡಿಸಿದವರು. ಅವರನ್ನು ಕೊಂದ ಸಿದ್ದಾಂತಗಳನ್ನೇ ಉಸಿರಾಡುವ ಬಸನಗೌಡ ಪಾಟೀಲ್ ಯತ್ನಾಳರು ನಿಮ್ಮ ಹೋರಾಟದ ರಾಜಕೀಯ ಮುಖವಾಣಿ ಆಗಿದ್ದಾರೆ ಅಲ್ಲವೆ?

ಸ್ವಾಮೀಜಿ: ಗೌರಿ ಮತ್ತು ಕಲಬುರ್ಗಿಯವರ ಬಗ್ಗೆ ನನಗೆ ತುಂಬ ಗೌರವ ಇದೆ. ಸತ್ಯ ಹೇಳುವವರನ್ನು ಎದುರಿಸಲಾಗದ ಹೇಡಿಗಳು ಕೊಲೆಯ ಮಟ್ಟಕ್ಕೆ ಇಳಿದಿದ್ದಾರೆ. ಯತ್ನಾಳ್ ಮುಂಚಿನಿಂದಲೂ ಆರ್‌ಎಸ್‌ಎಸ್ ಸಿದ್ದಾಂತದವರು ಎಂಬುದು ಗೊತ್ತೇ ಇರುವ ವಿಷಯ. ನಮ್ಮ ಸಭೆ-ಸಮಾವೇಶಗಳಲ್ಲಿ ಅವರು ಕೇವಲ ಜನಾಂಗದ ಮುಖಂಡರಾಗಿಯಷ್ಟೇ ಭಾಗವಹಿಸಿದ್ದಾರೆ. ನಾನು ಎಂದಿಗೂ ಕೊಲ್ಲುವ ಸಿದ್ದಾಂತ, ದ್ವೇಷ ಸೃಷ್ಟಿಸುವ ಐಡಿಯಾಲಜಿಯ ವಿರುದ್ಧವೇ ಇದ್ದೇನೆ.

ನಾನುಗೌರಿ: ‘3ಎ’ ಮತ್ತು ‘3ಬಿ’ಯಲ್ಲಿ ಇರುವ ಇತರ ಲಿಂಗಾಯತರ ಬಗ್ಗೆ ತಮಗೆ ಕಾಳಜಿ ಇಲ್ಲವೆ?

ಸ್ವಾಮೀಜಿ: ನಮ್ಮ ಸಮುದಾಯದ ಪರ ನಾವು ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಇತರ ಲಿಂಗಾಯತರೂ ಹೋರಾಟ ಮಾಡಿದರೆ ಬೆಂಬಲ ನೀಡುತ್ತೇವೆ.

ನಾನುಗೌರಿ: ದೊಡ್ಡ ಸಮುದಾಯವೊಂದು 2ಎ ಹೊಕ್ಕರೆ ಅಲ್ಲಿರುವ ಇತರ ಧ್ವನಿಯಿಲ್ಲದ ಸಮುದಾಯಗಳ ಹಕ್ಕುಗಳಿಗೆ ಧಕ್ಕೆ ಆಗುತ್ತಲ್ಲ?

ಸ್ವಾಮೀಜಿ: ನಾವು ಯಾರ ಮೀಸಲಾತಿಯನ್ನೂ ಕಿತ್ತುಕೊಳ್ಳಲ್ಲ. ಸಂವಿಧಾನದ ಪ್ರಕಾರ ನಮಗೆ ಸಿಗಬೇಕಾದ ಮೀಸಲಾತಿ ಸೌಲಭ್ಯ ನೀಡಲು ಹಲವು ಮಾರ್ಗಗಳಿವೆ.

ಸಂದರ್ಶನ: ಪಿ.ಕೆ. ಮಲ್ಲನಗೌಡರ್


ಇದನ್ನೂ ಓದಿ: ಹಕ್ಕಿಗಾಗಿ ಹೋರಾಡಬಾರದೆ? ಮಸಿ ಬಳಿಯುವುದು ಪ್ರತಿಭಟನೆಯೇ?: ಉಡುಪಿ ಸ್ಬಾಮೀಜಿಯ ಸಮಸ್ಯೆಗಳು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...