Homeಮುಖಪುಟದೇಶದ ಬಂದರುಗಳು ಮತ್ತು ನದಿಗಳು ಮಾರಾಟವಾಗುತ್ತಿರುವುದನ್ನು ನೀವು ಬಲ್ಲಿರೇನು?

ದೇಶದ ಬಂದರುಗಳು ಮತ್ತು ನದಿಗಳು ಮಾರಾಟವಾಗುತ್ತಿರುವುದನ್ನು ನೀವು ಬಲ್ಲಿರೇನು?

ಇನ್ನು ಮುಂದೆ ಮಂಗಳೂರು ಬಂದರಿಗೆ ಸೇರಿದ ಕರಾವಳಿ ಪ್ರದೇಶದ ಮೇಲೆ ಸ್ಥಳೀಯ ಗ್ರಾಮ ಪಂಚಾಯಿತಿ, ಮುನಿಸಿಪಾಲಿಟಿ ಅಥವಾ ರಾಜ್ಯ ಸರಕಾರದ ನಿಯಂತ್ರಣವಾಗಲೀ ಇರುವುದಿಲ್ಲ ಮತ್ತು ಅದು ಸ್ಥಳೀಯ ಜನರ ಉಪಯೋಗಕ್ಕಾಗಲೀ ಸಿಗುವುದಿಲ್ಲ.

- Advertisement -
- Advertisement -

“ಸೌಗಂಧ್ ಮುಝೆ ಇಸ್ ಮಿಟ್ಟೀಕೀ, ಮೈ ದೇಶ್ ನಹೀ ಬಿಕನೆ ದೂಂಗಾ” (ನನಗೆ ಈ ಮಣ್ಣಿನ ಆಣೆ, ನಾನು ದೇಶವನ್ನು ಮಾರಲು ಬಿಡುವುದಿಲ್ಲ) ಎಂಬ ಭಾಷಣ ಕೇಳಿ ಚಪ್ಪಾಳೆ ಹೊಡೆದು ನಿಮ್ಮ ಅಮೂಲ್ಯವಾದ ಮತವನ್ನು ಓರ್ವ ಮೋಡಿಗಾರನಿಗೆ ಹಾಕಿ ನಿಶ್ಚಿಂತೆಯಿಂದ ಮನೆಯಲ್ಲಿ ಮಲಗಿದ್ದಿರಿ ಅಲ್ಲವೇ? ಈಗ ನೋಡಿ ನಮ್ಮ ದೇಶ ಹೇಗೆ ಹೇಗೆ ಮಾರಾಟವಾಗುತ್ತಿದೆ ಎಂದು.

ನಿಮ್ಮ ಮತದ ಆಧಾರದಿಂದ ಗಳಿಸಿದ ಸಂಸತ್ತಿನ ಬಹುಮತದ ಮೇರೆಗೆ ಸರಕಾರ ಯಾವ ಯಾವ ಕಾಯ್ದೆಗಳನ್ನು ತರುತ್ತಿದೆ, ತಂದಿದೆ, ಹಳೆಯ ಕಾಯಿದೆಗಳಿಗೆ ತಿದ್ದುಪಡಿ ಮಾಡಿದೆ, ನಿಯಮಾವಳಿ ರೂಪಿಸಿದೆ ಅಥವಾ ಬದಲಾಯಿಸಿದೆ ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಇದರಲ್ಲಿ ದೇಶದ ಜನತೆಗೆ ಯಾವ ರೀತಿ ಮೋಸವಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.

ಕೋಸ್ಟಲ್ ರೆಗ್ಯುಲೇಷನ್ ಜ಼ೊನ್ (ಸಿ ಅರ್ ಝೆಡ್) ನೋಟಿಫಿಕೇಷನ್ 2019ರಲ್ಲಿ ಕರಾವಳಿ ಪ್ರದೇಶದಲ್ಲಿ ಹೆಚ್ಚಿನ ಆರ್ಥಿಕ ಚಟುವಟಿಕೆ ಮಾಡುವುದರಿಂದ ಪರಿಸರ ಸಂರಕ್ಷಣೆ, ಅಭಿವೃದ್ಧಿ, ಉದ್ಯೋಗವಕಾಶ ಮತ್ತು ಜನರ ಜೀವನ ಗುಣಮಟ್ಟ ಹೆಚ್ಚಳ ಆಗುತ್ತದೆ ಎಂದು ಬಾಯಿಯಲ್ಲಿ ಹೇಳುತ್ತಾ ಕೇರಳ ರಾಜ್ಯದ ಕೊಚ್ಚಿ ನಗರದ ಮಾರಾಡುವಿನ ಕರಾವಳಿ ತೀರದ ನಾಲ್ಕು ದೊಡ್ಡ ಬಿಲ್ಡಿಂಗುಗಳನ್ನು ಜನವರಿ 2020ರಲ್ಲಿ, ನ್ಯಾಯಾಲಯದ ಆದೇಶದ ಮೇರೆಗೆ, ನಗರಪಾಲಿಕೆ ಕೆಡವಿದ ದೃಶ್ಯ ನಿಮಗೆ ನೆನಪಿರಬಹುದು. ಇದನ್ನು ನೀವು ಸ್ವಾಗತಿಸಿರಲೂಬಹುದು.

ಇದೇ ಕಾಯಿದೆಯಡಿ ಗೋವಾ ರಾಜ್ಯದ ಸಂಪೂರ್ಣ 53 ಕಿ.ಮೀ. ಉದ್ದದ ಕರಾವಳಿಯನ್ನು ಮೊರ್ಮುಗಾವ್ ಪೋರ್ಟ್ ಟ್ರಸ್ಟಿ (ಎಂಪಿಟಿ) ಗೆ ಹಸ್ತಾಂತರಿಸಿದೆ ಎಂಬ ಸುದ್ದಿ ಇದೆ ಆದರೆ ಎಂಪಿಟಿ ತನಗೆ ಕೇಂದ್ರ ಸರಕಾರದ ಈ ಸುತ್ತೋಲೆ ಸಿಕ್ಕೇ ಇಲ್ಲ ಎಂದು ಹೇಳಿದೆ. ಇತ್ತೀಚೆಗೆ ಸಂಸತ್ತಿನಲ್ಲಿ ಬುಲ್ಡೋಜರ್ ಮೂಲಕ ಪಾರಿತಗೊಂಡ ಮೇಜರ್ ಪೋರ್ಟ್ ಅಥಾರಿಟೀಸ್ ಆಕ್ಟ್ 2021ರ ಸೆಕ್ಷನ್ 21, 22(2) ಮತ್ತು 22(3)ರ ಪ್ರಕಾರ ಯಾವುದೇ ಬಂದರಿನ ಆಡಳಿತ ಮಂಡಳಿ (ಬೋರ್ಡ್) ಅದಕ್ಕೆ ಸೇರಿದ ಎಲ್ಲಾ ಆಸ್ತಿಗಳ ಅಭಿವೃದ್ಧಿಯನ್ನು ತನ್ನ ಮನಸೋ ಇಚ್ಛೆ ಮಾಡಬಹುದು. ಇದಕ್ಕೆ ಯಾವುದೇ ಗ್ರಾಮ ಪಂಚಾಯಿತಿ, ಮುನಿಸಿಪಾಲಿಟಿ ಅಥವಾ ರಾಜ್ಯ ಸರಕಾರದ ಪರವಾನಗಿ ಬೇಕಿಲ್ಲ ಅಥವಾ ಸ್ಥಳೀಯ ಕಾನೂನು ಅಡ್ಡ ಬರುವುದಿಲ್ಲ ಎಂದು ಹೇಳುತ್ತದೆ.

ಹಲವು ರಾಜ್ಯಗಳಲ್ಲಿರುವ ಬಂದರಿನ ಸಮಗ್ರ ಆಸ್ತಿಯನ್ನು, ರಾಜ್ಯ ಸರಕಾರದ ಸಮ್ಮತಿಯಿಲ್ಲದೇ, ಕೇಂದ್ರ ಸರಕಾರ ಈ ದೊಡ್ಡ ಬಂದರುಗಳ ಪೋರ್ಟ್ ಟ್ರಸ್ಟಿನ ಸುಪರ್ದಿಗೆ ಈಗಾಗಲೇ ವರ್ಗಾಯಿಸಿದೆ. ಇದರಲ್ಲಿ ನಮ್ಮ ಕರ್ನಾಟಕದ ಹೊಸ ಮಂಗಳೂರು ಬಂದರೂ ಸಹ ಸೇರಿದೆ. ಅಂದರೆ ಇನ್ನು ಮುಂದೆ ಮಂಗಳೂರು ಬಂದರಿಗೆ ಸೇರಿದ ಕರಾವಳಿ ಪ್ರದೇಶದ ಮೇಲೆ ಸ್ಥಳೀಯ ಗ್ರಾಮ ಪಂಚಾಯಿತಿ, ಮುನಿಸಿಪಾಲಿಟಿ ಅಥವಾ ರಾಜ್ಯ ಸರಕಾರದ ನಿಯಂತ್ರಣವಾಗಲೀ ಇರುವುದಿಲ್ಲ ಮತ್ತು ಅದು ಸ್ಥಳೀಯ ಜನರ ಉಪಯೋಗಕ್ಕಾಗಲೀ ಸಿಗುವುದಿಲ್ಲ. ಅಂದರೆ ಕರಾವಳಿಯ “ಬೀಚ್” ಇನ್ನು ಮುಂದೆ “ಕ್ಲೋಸ್”. ಕರಾವಳಿಯ ಮೀನುಗಾರರ ಜೀವನ ನೀರುಪಾಲು.

ಇದೇ ರೀತಿ ಇನ್ನೆರಡು ಕಾಯಿದೆ ಇನ್ಲ್ಯಾಂಡ್ ವಾಟರ್ವೇ ಅಥಾರಿಟೀಸ್ ಆಕ್ಟ್ 2020 ಮತ್ತು ನ್ಯಾಷನಲ್ ವಾಟರ್ವೇಸ್ ಆಕ್ಟ್ 2016 ಇವನ್ನು ಒಟ್ಟಾರೆ ಸೇರಿಸಿ ನೋಡಿದಾಗ ಕರ್ನಾಟಕದ ಹಲವಾರು ನದಿಗಳನ್ನು ರಾಷ್ಟ್ರೀಯ ಜಲಮಾರ್ಗ ಎಂದು ಘೋಷಿಸಲಾಗಿದೆ. ಇದರಲ್ಲಿ ನಮ್ಮ ಭೀಮಾ, ಘಟಪ್ರಭಾ, ಕಬಿನಿ, ಕಾಳೀನದಿ, ಕೃಷ್ಣಾ, ಮಲಪ್ರಭಾ, ನೇತ್ರಾವತಿ, ಶರಾವತಿ, ತುಂಗಭದ್ರಾ, ಉದಯಾವರ ಮುಂತಾದ ನದಿಗಳು ಸೇರಿವೆ. ನಮ್ಮ ನದಿಗಳು ರಾಷ್ಟ್ರೀಯ ಜಲಮಾರ್ಗ ಆದರೆ ತಪ್ಪೇನು, ರಾಷ್ಟ್ರೀಯ ಹೆದ್ದಾರಿಗಳು ನಮ್ಮ ರಾಜ್ಯದಲ್ಲಿ ಇಲ್ಲವೇ ಎಂದು ನೀವು ಅನ್ನಬಹುದು. ಇನ್ಲ್ಯಾಂಡ್ ವಾಟರ್ವೇ ಅಥಾರಿಟೀಸ್ ಆಕ್ಟ್ ನಿಯಮದ ಪ್ರಕಾರ ಈ ರಾಷ್ಟ್ರೀಯ ನದಿಗಳು ರಾಜ್ಯದ ಸ್ವತ್ತು ಆಗುವುದಿಲ್ಲ. ಇವು ಕೇಂದ್ರ ಸರಕಾರದ ಸಂಸ್ಠೆಯಾದ “ಇನ್ಲ್ಯಾಂಡ್ ವಾಟರ್ವೇ ಅಥಾರಿಟಿ ಆಫ್ ಇಂಡಿಯಾ”ದ ಸ್ವತ್ತು ಆಗುತ್ತದೆ. ಇದೇ ಕಾಯಿದೆಯ ಸೆಕ್ಷನ್ 2ರ ಪ್ರಕಾರ “ಅಪರ್ಟುನೆಂಟ್ ಲ್ಯಾಂಡ್” ಅಂದರೆ ನದಿಯ ಎರಡೂ ಬದಿಯಲ್ಲಿ ಹೊಂದಿಕೊಂಡಿರುವಂತಹ ಜಮೀನು, ಅದನ್ನು ಮಾರ್ಕ್ ಮಾಡಿರಲಿ ಅಥವಾ ಬಿಟ್ಟಿರಲಿ, ಅದೂ ಸಹ ಇನ್ಲ್ಯಾಂಡ್ ವಾಟರ್ವೇ ಅಥಾರಿಟಿ ಆಫ್ ಇಂಡಿಯಾದ ಸ್ವತ್ತು ಆಗುತ್ತದೆ. ಈ ನೆಲವನ್ನೂ ಸಹ ಅಥಾರಿಟಿಯವರು ತಮ್ಮ ಮನಸೋ ಇಚ್ಛೆ ಅಭಿವೃದ್ಧಿ ಮಾಡಬಹುದು ಮತ್ತು ಇದರಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ, ಮುನಿಸಿಪಾಲಿಟಿ ಅಥವಾ ರಾಜ್ಯ ಸರಕಾರದ ನಿಯಂತ್ರಣವಾಗಲೀ ಇರುವುದಿಲ್ಲ ಮತ್ತು ಸ್ಥಳೀಯ ಜನರ ಉಪಯೋಗಕ್ಕಾಗಲೀ ಸಿಗುವುದಿಲ್ಲ. ಅಂದರೆ ನದಿ ತೀರದ ಜನರ ಪಾಡು ನೀರು ಪಾಲು.

ಗೋವಾ ರಾಜ್ಯದ ಜಿ ಆರ್ ಇ ಎಂಬ ಸಂಸ್ಥೆ ಮತ್ತು ರಾಷ್ಟ್ರೀಯ ಮೀನುಗಾಗರ ಸಂಘ ರಾಜ್ಯದ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಸಿ ಅರ್ ಝೆಡ್ ನೋಟಿಫಿಕೇಷನ್ 2019, ಮೇಜರ್ ಪೋರ್ಟ್ ಅಥಾರಿಟೀಸ್ ಆಕ್ಟ್ 2021 ಮತ್ತು ನ್ಯಾಷನಲ್ ವಾಟರ್ವೇಸ್ ಆಕ್ಟ್ 2016 ಇವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಇನ್ಲ್ಯಾಂಡ್ ವಾಟರ್ವೇ ಅಥಾರಿಟೀಸ್ ಆಕ್ಟ್ ಸೆಕ್ಷನ್ 26ರ ಅನ್ವಯ “ಸಾರ್ವಜನಿಕ ಅವಶ್ಯಕತೆಗೆ” ಬೇಕಾದಷ್ಟು ನದಿ ತೀರದ ಜಮೀನನ್ನು ಅಥಾರಿಟಿ ಅಧಿಗ್ರಹಿಸಬಹುದು ಮತ್ತು ಅವರಿಂದ ಸಾಧ್ಯವಾಗದೇ ಇದ್ದಲ್ಲಿ ರಾಜ್ಯ ಸರಕಾರ ಅದನ್ನು ಅಧಿಗ್ರಹಿಸಿ ಅಥಾರಿಟಿಗೆ ಹಸ್ತಾಂತರಿಸಬೇಕು. ಆದರೆ ಈ ಜಮೀನಿನ ಮೇಲೆ ಸ್ಥಳೀಯ ಗ್ರಾಮ ಪಂಚಾಯಿತಿ, ಮುನಿಸಿಪಾಲಿಟಿ ಅಥವಾ ರಾಜ್ಯ ಸರಕಾರದ ನಿಯಂತ್ರಣವಾಗಲೀ ಇರುವುದಿಲ್ಲ ಮತ್ತು ಸ್ಥಳೀಯ ಜನರ ಉಪಯೋಗಕ್ಕಾಗಲೀ ಸಿಗುವುದಿಲ್ಲ. ಅಂದರೆ ಒಂದು ರಾಜ್ಯದೊಳಗೆ ಕೇಂದ್ರ ತನ್ನದೇ ಆದ ರಾಜ್ಯವನ್ನು ಸ್ಥಾಪಿಸಿ ವಿಸ್ತರಿಸುತ್ತಿದೆ. ಹಂತಹಂತವಾಗಿ ರಾಜ್ಯದ ಆಸ್ತಿ ಮತ್ತು ಅಧಿಕಾರವನ್ನು ಕೇಂದ್ರ ಕಬಳಿಸುತ್ತಾ ಬಂದಿದೆ. ಸಂವಿಧಾನದ ಆರ್ಟಿಕಲ್ 1 ತನ್ನ ಅರ್ಥವನ್ನು ಕಳೆದುಕೊಳ್ಳುತ್ತಿದೆ. ರಾಜ್ಯಗಳು ಕೇಂದ್ರ ಶಾಸಿತ ಪ್ರದೇಶಗಳಾಗುತ್ತಿವೆ.

ಅಷ್ಟೇ ಅಲ್ಲ, ಈ ಪೋರ್ಟ್ ಮತ್ತು ಏರ್ಪೋರ್ಟ್‌‌ಗಳನ್ನು ಕೇಂದ್ರ ಸರಕಾರ ಯಾವ ಆಪ್ತಮಿತ್ರರಿಗೆ ಮಾರಾಟ ಮಾಡುತ್ತಿದೆ, ಸರಕಾರದ ಎಲ್ಲಾ ಆಸ್ತಿಗಳನ್ನು ಕೊಂಡುಕೊಳ್ಳುವಷ್ಟು ಹಣ ಯಾರ ಹತ್ತಿರ ಇದೆ ಎಂಬುದನ್ನು ನಾನು ಬಿಡಿಸಿ ಹೇಳಬೇಕಿಲ್ಲ.

ಜಣ ಜಣ ಜಣ ಕಾಂಚಾಣದಲ್ಲಿ

ಅಂಬದಾನಿ ಲಾಂಛನದಲ್ಲಿ

ದೇವರು ದಿಂಡಿರ ಭಜನೆಯಲ್ಲಿ

ಮಂದಿರ ಮಸೀದಿ ಗದ್ದಲದಲ್ಲಿ

ಎಲ್ಲ ಮಾಯ ನಾಳೆ ನಾವು ಮಾಯ

ಎಲ್ಲಾ ಮಾಯ ನಾಳೆ ನೀವು ಮಾಯ….

  •   ಜಿ.ಆರ್.ವಿದ್ಯಾರಣ್ಯ

ಇದನ್ನೂ ಓದಿ: ಕಾಡನ್ನೂ ಖಾಸಗೀಕರಣಗೊಳಿಸುತ್ತಿರುವ ಸರ್ಕಾರ: ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟ ಆರೋಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...