Homeಮುಖಪುಟತಮಿಳುನಾಡು ವಿಧಾನಸಭಾ ಚುನಾವಣೆ: ದ್ರಾವಿಡ ರಾಜಕೀಯಕ್ಕೆ ಹೊಸ ಸವಾಲುಗಳು!

ತಮಿಳುನಾಡು ವಿಧಾನಸಭಾ ಚುನಾವಣೆ: ದ್ರಾವಿಡ ರಾಜಕೀಯಕ್ಕೆ ಹೊಸ ಸವಾಲುಗಳು!

- Advertisement -
- Advertisement -

ಭಾರತದ ರಾಜಕೀಯ ಇತಿಹಾಸದಲ್ಲಿ ತನ್ನದೇ ಆದ ಮೆರುಗನ್ನು ಸಾಧಿಸಿದ್ದ ತಮಿಳುನಾಡು ಚುನಾವಣಾ ಇತಿಹಾಸ ಬಹುಶಃ ಇಂತಹ ನಗೆಪಾಟಲಿನ ಮತ್ತು ನಿಸ್ಸಾಹಾಯಕ ಸ್ಥಿತಿಯನ್ನು ಹಿಂದೆಂದೂ ಎದುರಿಸಿರಲಿಲ್ಲ. ಕಳೆದ 5 ದಶಕಗಳಿಂದ ವರ್ಗದ ತಮಿಳರ ಪಾಲಿಗೆ ದಂತ ಕತೆಗಳಂತಿದ್ದ ಅಮ್ಮ (ಜಯಲಲಿತ) ಮತ್ತು ಅಯ್ಯ (ಕರುಣಾನಿಧಿ) ಇಬ್ಬರೂ ಇಲ್ಲದೆ ನಡೆಯುತ್ತಿರುವ ಈ ಮೊದಲ ವಿಧಾನಸಭಾ ಚುನಾವಣೆ ದ್ರಾವಿಡ ನಾಡಿನ ರಾಜಕೀಯ ಕಣ್ಣಿಗೆ ರಾಚುವ ಮಟ್ಟಿಗಿನ ನಿಸ್ಸಹಾಯಕ ಸ್ಥಿತಿಗೆ ತಲುಪಿದೆ. ಅದಕ್ಕೆ ಕಾರಣ ಇಂದು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಸ್ವಘೋಷಿತ ಚಾಣಕ್ಯ ಅಮಿತ್ ಶಾ ಎಂದರೆ ತಪ್ಪಾಗಲಾರದು.

ಹೌದು..! ತಮಿಳುನಾಡಿನ ಮಟ್ಟಿಗೆ ಹಿಂದಿ ಮತ್ತು ರಾಷ್ಟ್ರೀಯ ಪಕ್ಷಗಳು ಎಂದಿಗೂ ಮಾರು ದೂರವೇ. ಇದಕ್ಕೆ ಕಾರಣ ದ್ರಾವಿಡ ನಾಡಿನಲ್ಲಿ 30ರ ದಶಕದಲ್ಲಿ ಹುಟ್ಟಿ 60ರ ದಶಕದಲ್ಲಿ ರಾಜಕೀಯ ಪಲ್ಲಟಕ್ಕೆ ಕಾರಣವಾದ ದ್ರಾವಿಡ ಚಳುವಳಿ. ಈ ಚಳುವಳಿಯ ಅಧಿನಾಯಕ ಪೆರಿಯಾರ್ ಎಂಬ ಇ.ವಿ. ರಾಮಸ್ವಾಮಿಯವರು. 1967ರಲ್ಲಿ ಈ ಚಳುವಳಿ ಮೊದಲ ಬಾರಿಗೆ ಫಲ ಕೊಟ್ಟಿತ್ತು. ಕಾಂಗ್ರೆಸ್ಸೇತರ ಮೊದಲ ಮುಖ್ಯಮಂತ್ರಿಯಾಗಿ ತಲೈವರ್ ಖ್ಯಾತಿಯ ಸಿ.ಎನ್. ಅಣ್ಣಾದುರೈ ಮುಖ್ಯಮಂತ್ರಿ ಗದ್ದುಗೆಗೆ ಏರಿದರು.

PC : Firstpost

ತದನಂತರದ ದಿನಗಳಲ್ಲಿ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಯಾವ ರಾಷ್ಟ್ರೀಯ ಪಕ್ಷಗಳೆನಿಸಿಕೊಂಡವಕ್ಕೆ ಅಧಿಕಾರದ ಗದ್ದುಗೆಯ ಸನಿಹಕ್ಕೆ ಬರುವುದರಲಿ ಕನಿಷ್ಟ 30ಕ್ಕೂ ಹೆಚ್ಚು ಸ್ಥಾನ ಗಳಿಸುವುದಕ್ಕೂ ಆಗಿರಲಿಲ್ಲ. ದಿವಂಗತ ಮಾಜಿ ಸಿಎಂ ಕಾಮರಾಜ್‌ರ ಕಾರಣಕ್ಕೆ ಕಾಂಗ್ರೆಸ್‌ಗೆ ದ್ರಾವಿಡ ನಾಡಿನಲ್ಲಿ ಕೆಲವಾದರೂ ಸ್ಥಾನಗಳಿವೆ. ಆದರೆ ಬಿಜೆಪಿ ಈವರೆಗೆ ಖಾತೆಯನ್ನೂ ತೆರೆಯಲಾಗದ ಹೀನಾಯ ಸ್ಥಿತಿಯಲ್ಲೇ ಇದೆ.

ಆದರೆ, 1996ರಲ್ಲಿ ಕೇಂದ್ರದಲ್ಲಿ ಅಂದಿನ ವಾಜಪೇಯಿ ಸರ್ಕಾರವನ್ನೇ ಉರುಳಿಸಿ ಉಕ್ಕಿನ ಮಹಿಳೆ ಎಂಬ ಉಪನಾಮಕ್ಕೆ ಪಾತ್ರವಾದ ಜಯಲಲಿತಾ ಮರಣದ ನಂತರ ಇದೀಗ ಇಡೀ ತಮಿಳುನಾಡು ರಾಜಕೀಯ ಚಿತ್ರಣವೇ ಬದಲಾಗಿದೆ. ಅಮ್ಮ ಕಟ್ಟಿ ಆಳಿದ ಎಐಎಡಿಎಂಕೆ ಎಂಬ ಪಕ್ಷವನ್ನು ಬಿಜೆಪಿ ಸಂಪೂರ್ಣವಾಗಿ ಆಪೋಷನ ತೆಗೆದುಕೊಂಡಿದೆ. ಆಡಳಿತರೂಢ ಸರ್ಕಾರದ ಲಾಭ ತೆಗೆದುಕೊಂಡು ದ್ರಾವಿಡ ನಾಡಿನಲ್ಲಿ ಕಮಲವನ್ನು ಅರಳಿಸಿಯೇ ತೀರಬೇಕು ಎಂಬ ನಿರ್ಣಯಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದಾರೆ. ಆದರೆ, ಜನ ಬಿಜೆಪಿ ತಂತ್ರಕ್ಕೆ ಮರುಳಾಗುತ್ತಾರ? ಏನು ಹೇಳುತ್ತಿದ್ದಾನೆ ತಮಿಳು ಮತದಾರ? ಎಐಎಡಿಎಂಕೆ ಪಕ್ಷ ಬಿಜೆಪಿ ಬಿ ಟೀಮ್‌ನಂತೆ ವರ್ತಿಸುತ್ತಿರುವುದೇ? ಚಿನ್ನಮ್ಮ ಶಶಿಕಲಾ ದಿಢೀರೆಂದು ಸೈಡ್ಲೈನ್ ಆಗಿದ್ದೇಕೆ?

ಎಡಿಎಂಕೆಯನ್ನು ಅಪೋಶನಗೈದ ಬಿಜೆಪಿ

2016ರ ವರೆಗೆ ತಮಿಳುನಾಡಿನಲ್ಲಿ ಬಿಜೆಪಿ ಪರಿಸ್ಥಿತಿ ಹೇಗಿತ್ತು ಎಂದರೆ ಪಕ್ಷಕ್ಕೆ ಮತ ಯಾಚಿಸುವುದಿರಲಿ, ಇಂತಹ ಪಕ್ಷ ದ್ರಾವಿಡ ನಾಡಿನಲ್ಲಿ ಜೀವಂತ ಇದೆ ಎಂಬ ಊಹೆಯೂ ಎಷ್ಟೋ ಜನರಿಗೆ ಇದ್ದಿರಲಿಕ್ಕಿಲ್ಲ. ಆದರೆ, 2016ರಲ್ಲಿ ಎಲ್ಲವೂ ಬದಲಾಗಿತ್ತು. ವೈದ್ಯಕೀಯ ವಿದ್ಯಾರ್ಥಿಗಳಿಗೆ ನೀಟ್, ಜಲ್ಲಿಕಟ್ಟು ನಿಷೇಧ ಎಂದು ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿದ್ದ ಎಲ್ಲಾ ಕಾನೂನುಗಳನ್ನು ಜಯಲಲಿತ ವಿರೋಧಿಸಿದ್ದರು. ಆದರೆ, ದುರಾದೃಷ್ಟವಶಾತ್ ಜಯಲಲಿತಾ ಅದೇ ವರ್ಷ ಮೃತಪಟ್ಟರೆ, ಅವರ ಆಪ್ತೆ ಶಶಿಕಲಾ ಅಲಿಯಾಸ್ ಚಿನ್ನಮ್ಮ ಭ್ರಷ್ಟಾಚಾರದ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು.

ಜಯಲಲಿತಾ ಸಾವಿನಲ್ಲಿ ಅನೇಕ ಸಂಶಯಗಳಿವೆ, ಆ ಸಾವಿನ ಸತ್ಯಾಸತ್ಯತೆ ಕುರಿತು ಪ್ರಸ್ತುತ ತನಿಖೆಯೂ ಆಗುತ್ತಿದೆ ಎಂಬುದು ಬೇರೆ ವಿಚಾರ. ಆದರೆ, ಈ ಬೆಳವಣಿಗೆಯ ನಂತರ ಎಡಿಎಂಕೆ ನಾವಿಕನಿಲ್ಲದ ದೋಣಿಯಂತಾದದ್ದು ಮಾತ್ರ ಅಕ್ಷರಶಃ ಸತ್ಯ. ಈ ಸಮಯದಲ್ಲೇ ಬಿಜೆಪಿ ಇದರ ಲಾಭ ಪಡೆಯಲು ಮುಂದಾದದ್ದು ಮತ್ತು ಅಮಿತ್ ಶಾ ಕಣವನ್ನು ಪ್ರವೇಶಿಸಿದ್ದು. ಹಾಗೆ ನೋಡಿದರೆ ಇಡೀ ಎಐಎಡಿಎಂಕೆ ಎಂಬುದು ಭ್ರಷ್ಟಾಚಾರದ ಕೂಪವಾಗಿ ಹೋಗಿತ್ತು. ಎಲ್ಲಾ ಶಾಸಕರ ಹಾಗೂ ಸಚಿವರ ಮೇಲೂ ಭ್ರಷ್ಟಾಚಾರದ ಆರೋಪಗಳಿವೆ. ಇದೇ ಸಮಯದಲ್ಲಿ ಚಿನ್ನಮ್ಮ ಶಶಿಕಲಾ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿದ್ದು, ಅನೇಕ ಸಚಿವರ ಪಾಲಿಗೆ ಭಯದ ಪರಿಸ್ಥಿತಿ ನಿರ್ಮಾಣ ಮಾಡಿದ್ದು ಸುಳ್ಳಲ್ಲ.

PC : Firstpost

ಈ ವೇಳೆ ಜಯಲಲಿತಾ ಮತ್ತು ಶಶಿಕಲಾ ಅವರ ರಬ್ಬರ್ ಸ್ಟಾಂಪ್‌ಗಳಾಗಿಯೇ ದೀರ್ಘ ಕಾಲ ತಮ್ಮ ರಾಜಕೀಯ ಏಳಿಗೆ ಕಂಡಿದ್ದ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತು ಉಪ ಮುಖ್ಯಮಂತ್ರಿಯಾಗಿದ್ದ ಓ. ಪನ್ನೀರ್ ಸೆಲ್ವಂ ಇಬ್ಬರನ್ನೂ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹೆಚ್ಚು ಸಮಯ ಬೇಕಿರಲಿಲ್ಲ. ಕೇಂದ್ರ ಜಾರಿ ನಿರ್ದೇಶನಾಲಯ ಮತ್ತು ಸಿಬಿಐಗೆ ಹೆದರಿಯೇ ಬಹುತೇಕ ಎಲ್ಲಾ ಸಚಿವರು ಬಿಜೆಪಿ ಶರಣಾಗಿ ಹೋಗಿದ್ದರು. ಈ ಬ್ಲಾಕ್‌ಮೇಲ್ ತಂತ್ರದಿಂದಾಗಿಯೇ 2016ರಿಂದ ಈಚೆಗೆ ತಮಿಳುನಾಡಿನಲ್ಲಿ ನಡೆದದ್ದೆಲ್ಲ ಬಿಜೆಪಿ ಆಡಳಿತವೇ ಎಂಬುದನ್ನು ಬೇರೆ ಬಿಡಿಸಿ ಹೇಳಬೇಕಿಲ್ಲ ಎನ್ನುತ್ತಾರೆ ಅಲ್ಲಿನ ರಾಜಕೀಯ ವಿಶ್ಲೇಷಕರು.

ಸ್ವತಃ ಸಚಿವರೊಬ್ಬರು “ಮೋದಿ ನಮ್ಮ ಡ್ಯಾಡಿ” ಎಂದು ಬಹಿರಂಗ ಹೇಳಿಕೆ ನೀಡುತ್ತಾರೆ ಎಂದರೆ ದ್ರಾವಿಡ ನಾಡಿನಲ್ಲಿ ಬಿಜೆಪಿ ಯಾವ ಮಟ್ಟಿಗೆ ಆಡಳಿತರೂಢ ಪಕ್ಷವನ್ನು ಅಪೋಶನ ಮಾಡಿಕೊಂಡಿದೆ ಎಂಬುದನ್ನು ಊಹಿಸಬಹುದು. ಈ ನಡುವೆ ಪ್ರಸ್ತುತ ಚುನಾವಣೆಯಲ್ಲಿ ಎಐಡಿಎಂಕೆ ಮೈತ್ರಿಯಾಗಿರುವ ಬಿಜೆಪಿ ತಮಿಳುನಾಡಿನಲ್ಲಿ ಶೇ.1 ರಷ್ಟು ಕೂಡ ಮತಬ್ಯಾಂಕ್ ಹೊಂದಿರದಿದ್ದರೂ ಬಿಜೆಪಿ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಚೌಕಾಶಿ ಮಾಡಿದೆ. ಮೊದಲ ಬಾರಿಗೆ ಇಷ್ಟು ದೊಡ್ಡಮಟ್ಟದಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿಗೆ ಎಐಎಡಿಎಂಕೆ ಎಲ್ಲಾ ಸಹಾಯ ಮಾಡುತ್ತಿದೆ. ದ್ರಾವಿಡ ನಾಡಿನಲ್ಲಿ ತಮ್ಮ ತತ್ವ ಸಿದ್ಧಾಂತಗಳಿಗೆ ವಿರುದ್ಧವಾದ ಕೋಮುವಾದಿ ಪಕ್ಷಕ್ಕೆ ಕೆಂಪುಹಾಸು ಹಾಸಿದೆ ಎಂದರೆ ಎಐಎಡಿಎಂಕೆ ಪಕ್ಷದ ಅಸಹಾಕತೆಯನ್ನೂ ಇಲ್ಲಿ ಗಮನಿಸಬೇಕಿದೆ.

ಚಿನ್ನಮ್ಮ ಸೈಡ್ಲೈನ್

ಒಂದು ಹಂತದಲ್ಲಿ ಚಿನ್ನಮ್ಮ ಶಶಿಕಲಾ ಅವರೇ ತಮಿಳುನಾಡಿನ ಮುಂದಿನ ಸಿಎಂ ಎನ್ನಲಾಗಿತ್ತು. ಶಶಿಕಲಾ ಜೈಲಿನಲ್ಲಿದ್ದರೂ ಸಹ ಅವರ ಸಂಬಂಧಿ ಟಿಟಿವಿ ದಿನಕರನ್ ತಮಿಳುನಾಡಿನಲ್ಲಿ ಎಡಿಎಂಕೆಗೆ ಸೆಡ್ಡು ಹೊಡೆದಿದ್ದರು. ಶಶಿಕಲಾಗಾಗಿಯೇ ’ಅಮ್ಮಾ ದ್ರಾವಿಡ ಮುನ್ನೇಟ್ರ ಕಳಗಂ’ ಎಂಬ ಪಕ್ಷವನ್ನು ಕೂಡ ಸ್ಥಾಪಿಸಿದ್ದರು. ಈ ಮೂಲಕ ಜಯಲಲಿತಾ ಅಭಿಮಾನದ ಮತಗಳ ಮೇಲೆ ಹಕ್ಕು ಸಾಧಿಸಲು ಮುಂದಾಗಿದ್ದರು.

PC : Prajavani

ಇದಕ್ಕೆ ಪೂರಕವಾಗಿ ಕಳೆದ ತಿಂಗಳು ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾದ ಶಶಿಕಲಾ ಅವರನ್ನು ಬೆಂಗಳೂರಿನಿಂದ ಚೆನ್ನೈವರೆಗೆ ದೊಡ್ಡ ಜನ ಬೆಂಬಲದೊಂದಿಗೆ ಸ್ವಾಗತ ಮಾಡಲಾಗಿತ್ತು. ಈ ಜನ ಬೆಂಬಲವನ್ನು ಕಂಡ ರಾಜಕೀಯ ತಜ್ಞರೇ ಸ್ವತಃ ಥಂಡ ಹೊಡೆದಿದ್ದರು. ಅಲ್ಲದೆ, ಭವಿಷ್ಯದಲ್ಲಿ ಶಶಿಕಲಾ ತಮಿನಾಡಿನ ರಾಜಕೀಯದಲ್ಲಿ ನಿರ್ಣಾಯಕವಾಗಲಿದ್ದಾರೆ ಎಂದೇ ಹೇಳಲಾಗಿತ್ತು. ಎಡಿಎಂಕೆ ಪಕ್ಷದ ಅನೇಕ ಸಚಿವರು ಸಹ ಶಶಿಕಲಾ ಪರವಾಗಿ ಬಹಿರಂಗವಾಗಿ ಬ್ಯಾಟ್ ಬೀಸಿದ್ದರು.

ಆದರೆ, ಅವರನ್ನೂ ಸಹ ಇದೀಗ ಸೈಡ್ಲೈನ್ ಮಾಡಲಾಗಿದೆ. ಯಾರೂ ನಿರೀಕ್ಷಿಸದ ರೀತಿಯಲ್ಲಿ ಶಶಿಕಲಾ ದಿಢೀರೆಂದು ರಾಜಕೀಯ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಈ ನಿರ್ಧಾರದ ಹಿಂದೆ ’ಚಾಣಕ್ಯ’ನ ಅದೇ ಬ್ಲಾಕ್‌ಮೇಲ್ ತಂತ್ರ ಇದೆ ಎಂದೇ ಹೇಳಲಾಗುತ್ತಿದೆ. ಬಿಜೆಪಿ ಪಕ್ಷದ ಇತ್ತೀಚಿನ ನಡೆಗಳೂ ಸಹ ಈ ಅನುಮಾನಗಳಿಗೆ ಇಂಬು ನೀಡುವಂತಿರುವುದು ಸುಳ್ಳಲ್ಲ.

ಮತದಾರನ ಒಲವೇನು?

ಅಸಲಿಗೆ ತಮಿಳುನಾಡಿನಲ್ಲಿ ಹಲವು ದಶಕಗಳ ನಂತರ ಸಾಮಾನ್ಯ ಜನ ಮತ್ತು ವಿದ್ಯಾರ್ಥಿ ಸಮೂಹ ಮುಂದೆ ನಿಂತು ನಡೆಸಿದ ಬಹುದೊಡ್ಡ ಹೋರಾಟ ಎಂದರೆ ಅದು ಜಲ್ಲಿಕಟ್ಟು ಹೋರಾಟ. ಇಂದು ತಮಿಳುನಾಡಿನಲ್ಲಿ ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆ ಮುಂದುವರೆಯಲು ಸಾಧ್ಯವಾಗಿರುವುದಕ್ಕೆ ಈ ಹೋರಾಟಗಾರರ ಶ್ರಮ ನಿರ್ಣಾಯಕ. ಆದರೆ, ಇತ್ತೀಚೆಗೆ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ಉಪ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ, “ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆ ಮುಂದುವರೆಯಲು ನರೇಂದ್ರ ಮೋದಿಯೇ ಕಾರಣ. ತಮಿಳುನಾಡಿನ ಅಭಿವೃದ್ಧಿಗೆ ಮೋದಿಯೇ ಸೂತ್ರಧಾರ” ಎಂದು ಬಹಿರಂಗವಾಗಿ ಹೇಳಿಕೆ ನೀಡಿಬಿಟ್ಟರು. ಈ ಹೇಳಿಕೆ ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ತಮಿಳುನಾಡಿನ ವಾಸ್ತವ ರಾಜಕಾರಣದಲ್ಲಿ ಬಿಜೆಪಿಗೆ ಯಾವುದೇ ಸ್ಥಾನಮಾನ ಇಲ್ಲ. ಇನ್ನೂ ಕಳೆದ 50 ವರ್ಷ ದ್ರಾವಿಡ ನಾಡನ್ನು ಆಳ್ವಿಕೆ ಮಾಡಿರುವ ಪ್ರಬಲ ದ್ರಾವಿಡ ಪಕ್ಷವೊಂದು, ತಮ್ಮ ಜೀವಾಳವಾಗಿದ್ದ ಅಮ್ಮ ಜಯಲಲಿತಾ ಅವರನ್ನೇ ಸೈಡಿಗೆ ಸರಿಸಿ ತಮ್ಮ ಮತಗಳಿಗಾಗಿ ಮೋದಿಯನ್ನು ಹೊಗಳುವಂತಹ ಹೀನಾಯ ಸ್ಥಿತಿಗೆ ತೆರಳಿತೇ? ಎಂಬ ಪ್ರಶ್ನೆಗಳು ಇದೀಗ ತಮಿಳುನಾಡಿನ ಎಲ್ಲೆಡೆ ಹರಿದಾಡುತ್ತಿದೆ.

ಅಸಲಿಗೆ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಬ್ಯಾನ್ ಆಗಲು ಕೇಂದ್ರ ಬಿಜೆಪಿ ಸರ್ಕಾರವೂ ಕಾರಣ ಎಂಬುದು ತಮಿಳರಿಗೆ ತಿಳಿಯದ ವಿಚಾರವೇನಲ್ಲ. ಹೀಗಾಗಿ ಓ. ಪನ್ನೀರ್ ಸೆಲ್ವಂ ಅವರ ಮಾತು ಅಲ್ಲಿನ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗುತ್ತಿದೆ.

ಬಿಜೆಪಿ-ಎಡಿಎಂಕೆ ಎರಡಕ್ಕೂ ಇಲ್ಲ ಚಾರ್ಮ್

ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸೇರಿದಂತೆ ಒಟ್ಟು 20 ಜನರನ್ನು ಬಿಜೆಪಿ ಕಣಕ್ಕಿಳಿಸಿದೆ. ಆದರೆ, ಯಾವೊಬ್ಬ ಸ್ಪರ್ಧಿಗೂ ಜನರನ್ನು ಸೆಳೆಯುವ ಸಾಮರ್ಥ್ಯವಿಲ್ಲ. ಎಡಿಎಂಕೆ 170ಕ್ಕೂ ಅಧಿಕ ಕ್ಷೇತ್ರದಲ್ಲಿ ತಮಿಳುನಾಡಿನಲ್ಲಿ ಕಣಕ್ಕಿಳಿಯುತ್ತಿದೆ. ಆದರೆ, ಜಯಲಲಿತಾ ಮರಣದ ನಂತರ ಎಐಎಡಿಎಂಕೆ ಸಂಪೂರ್ಣವಾಗಿ ತನ್ನ ಚಾರ್ಮ್ ಕಳೆದುಕೊಂಡಿದೆ. ಜನರನ್ನು ಸೆಳೆಯಬಲ್ಲ ಒಬ್ಬೇ ಒಬ್ಬ ನಾಯಕನೂ ಆ ಪಕ್ಷದಲ್ಲಿ ಇಲ್ಲ ಎಂಬುದೇ ಸತ್ಯ.

PC : Nakkheeran

ಈ ನಡುವೆ ಬೆಲೆ ಏರಿಕೆ, ನೀಟ್, ಜಲ್ಲಿಕಟ್ಟು ನಿಷೇಧ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಕಾರಣವಾಗಿರುವ ಬಿಜೆಪಿ ಜೊತೆಗೆ ಎಡಿಎಂಕೆ ಮೈತ್ರಿ ತಮಿಳರಿಗೆ ಸುತಾರಾಂ ಇಷ್ಟವಿಲ್ಲ. ಈ ಹಿಂದೆ 2019ರ ಲೋಕಸಭಾ ಚುನಾವಣೆಯಲ್ಲೇ ಎಡಿಎಂಕೆ-ಬಿಜೆಪಿ ಮೈತ್ರಿಗೆ ಅಲ್ಲಿನ ಮತದಾರ ಶೂನ್ಯ ಸಂಪಾದನೆ ನೀಡಿ ತಿರಸ್ಕರಿಸಿದ್ದ. ಇನ್ನು ಈಗಂತೂ ತಮಿಳುನಾಡಿನಲ್ಲಿ ಬಿಜೆಪಿ ವಿರೋಧಿ ಅಲೆ ಜೊತೆಗೆ ಎಡಿಎಂಕೆ ಆಡಳಿತ ವಿರೋಧಿ ಅಲೆ ಕೂಡ ಸೇರಿಕೊಂಡಿದ್ದು, ಬಿಜೆಪಿ ದೆಸೆಯಿಂದ ಎಐಎಡಿಎಂಕೆ ಸಹ ತನ್ನ ಕ್ಷೇತ್ರಗಳನ್ನು ಅಧಿಕ ಸಂಖ್ಯೆಯಲ್ಲಿ ಕಳೆದುಕೊಳ್ಳಲಿದೆ ಎನ್ನಲಾಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಸಿ-ವೋಟರ್ ಸಮೀಕ್ಷೆಯೂ ಇದೇ ಫಲಿತಾಂಶ ನೀಡಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.

’ಮತ್ತೊಂದೆಡೆ ಡಿಎಂಕೆ ಕಳೆದ ಒಂದು ವರ್ಷದಿಂದ ಜನರ ನಡುವೆ ಕೆಲಸ ಮಾಡುತ್ತಿದೆ. ಜನ ಪಂಚಾಯತ್ ನಡೆಸುವ ಮೂಲಕ ಜನರಿಗೆ ಹತ್ತಿರವಾಗಿದೆ. ಅಲ್ಲದೆ, ಆಡಳಿತ ವಿರೋಧಿ ಅಲೆಯನ್ನು ಸೃಷ್ಟಿಸುವಲ್ಲಿ ಸಫಲವಾಗಿದೆ. ಹೀಗಾಗಿ ಕರುಣಾನಿಧಿ ಮಗ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಈ ಭಾರಿ ಜಯಭೇರಿ ಭಾರಿಸಲಿದೆ. 10 ವರ್ಷಗಳ ನಂತರ ಮತ್ತೊಮ್ಮೆ ಅಧಿಕಾರಕ್ಕೆ ಏರಲಿದೆ’ ಎಂದೇ ಹೇಳಲಾಗುತ್ತಿದೆ. ಆದರೆ, ಈ ಎಲ್ಲಾ ಲೆಕ್ಕಾಚಾರಗಳ ಅಸಲಿಯತ್ತು ಚುನಾವಣಾ ಫಲಿತಾಂಶದ ನಂತರವೇ ತಿಳಿಯಲಿದೆ.


ಇದನ್ನೂ ಓದಿ: 18 ಪಕ್ಷಾಂತರಿಗಳಿಗೆ ಟಿಕೆಟ್, ತಮಿಳುನಾಡು BJP ಪರಿಸ್ಥಿತಿ ಇಲ್ಲಿಗೆ ಬಂತು: ಸುಬ್ರಮಣಿಯನ್ ಸ್ವಾಮಿ ವ್ಯಂಗ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...