Homeಬಹುಜನ ಭಾರತಬಹುಜನ ಭಾರತ: ನಾಯಕತ್ವದ ಪರೀಕ್ಷೆಯಲ್ಲಿ ನಪಾಸು-ಇಳಿ ಎಣಿಕೆಯ ಆರಂಭವೇ?

ಬಹುಜನ ಭಾರತ: ನಾಯಕತ್ವದ ಪರೀಕ್ಷೆಯಲ್ಲಿ ನಪಾಸು-ಇಳಿ ಎಣಿಕೆಯ ಆರಂಭವೇ?

- Advertisement -
- Advertisement -

ದೇಶಕ್ಕೆ ದೇಶವೇ ಒಂದು ಸಾಮೂಹಿಕ ಸ್ಮಶಾನದ ರೂಪ ತಳೆದಿದೆಯೇನೋ ಎಂಬ ಭೀಭತ್ಸ, ಭಾರತದ ಉದ್ದಗಲಕ್ಕೆ ಕವಿದಿದೆ. ಸಾವು ಕೇಕೆಯೇ ಕಿವಿಯ ಮೇಲೆ ಅಪ್ಪಳಿಸಿದೆ. ಮಸಣಮೌನದ ಸದ್ದು ಜನಜೀವನವನ್ನು ದಿಕ್ಕೆಡಿಸಿದೆ. ಹೆಗಲ ಮೇಲೆ ಕೈ ಇರಿಸಿ ಸಾಂತ್ವನ ಹೇಳುವ, ಸಂಕಟ ಹಂಚಿಕೊಳ್ಳುವ ನಾಯಕತ್ವ ನಾಪತ್ತೆಯಾಗಿದೆ. ದೈತ್ಯ ಸಂಕಟದ ಈ ಸನ್ನಿವೇಶದಲ್ಲಿ ’ಸೂಪರ್ ಮ್ಯಾನ್’ ವರ್ಚಸ್ಸಿನ ಪ್ರಧಾನಿಯವರ ನಿಷ್ಕ್ರಿಯತೆ, ಸಂವೇದನಾಶೂನ್ಯತೆ ಕಣ್ಣಿಗೆ, ಕರುಳಿಗೆ ರಾಚುವಂತಿದೆ. ಕೋವಿಡ್ ಒಡ್ಡಿರುವ ನಾಯಕತ್ವದ ಅಗ್ನಿಪರೀಕ್ಷೆಯಲ್ಲಿ ಅವರು ಶೋಚನೀಯವಾಗಿ ಸೋತಿದ್ದಾರೆ. ಕೋವಿಡ್ ಸೋಲು ಮತ್ತು ಪಶ್ಚಿಮ ಬಂಗಾಳದ ಚುನಾವಣಾ ಸೋಲು ಒಂದರೊಡನೊಂದು ಬೆರೆತಿವೆ. ಪ್ರಚಂಡ ನಾಯಕನ ಪ್ರಭಾವಳಿಯನ್ನು ಬಲುವೇಗವಾಗಿ ಅಳಿಸಿ ಹಾಕತೊಡಗಿವೆ. ಅಂತಾರಾಷ್ಟ್ರೀಯವಾಗಿಯೂ ಅವರು ತೀವ್ರ ಟೀಕೆ ಎದುರಿಸತೊಡಗಿದ್ದಾರೆ. ದೇಶದೊಳಗೆ ಅವರ ಕುರಿತು ಭುಗಿಲೆದ್ದು ಕವಿದಿದ್ದ ಕುರುಡು ಅಭಿಮಾನದ ಪೊರೆಯೂ ಸರಿಯುವ ಸೂಚನೆಗಳು ದೂರ ದಿಗಂತದಲ್ಲಿ ಗೋಚರಿಸತೊಡಗಿವೆ. ಮೂರನೆಯ ಅವಧಿಗೆ ಮತ್ತೆ ಗೆದ್ದು ಬರುತ್ತಾರೆ ಎಂಬ ಭಾವನೆ ಕರಗತೊಡಗಿದೆ. ಮುಂಬರುವ ಚುನಾವಣೆಗಳು ಅವರ ಪಾಲಿಗೆ ಏರು ಹಾದಿಯ ಪಯಣ ಆಗಲಿವೆ. ಈ ಸವಾಲನ್ನು ಮೋದಿ-ಶಾ ಜೋಡಿ ಹೇಗೆ ಎದುರಿಸೀತು ಎಂದು ಕಾದು ನೋಡಬೇಕಿದೆ.

ಪ್ರತಿಪಕ್ಷಗಳನ್ನು ಸಮಾಧಿ ಮಾಡಿ ಏಕಚಕ್ರಾಧಿಪತ್ಯ ಕಟ್ಟುವ ಬಿಜೆಪಿ ಕನಸು ಭಗ್ನಗೊಂಡಿದೆ. ಜನಸಮುದಾಯಗಳನ್ನು ಕೋಮು ಧೃವೀಕರಣದ ದಳ್ಳುರಿಗೆ ನೂಕಿ ಕೈಕಾಯಿಸಿಕೊಳ್ಳುವ ಪ್ರಯತ್ನಗಳು ಪ್ರತಿ ಸಲವೂ ಫಲ ನೀಡುವುದಿಲ್ಲ ಎಂಬ ವಾಸ್ತವ ರುಜುವಾತಾಗಿದೆ. ದುರಹಂಕಾರದಿಂದ ವರ್ತಿಸಿದ ದಾದಾ ಮೋದಿ ಪಕ್ಷದ ದವಡೆಯನ್ನೇ ಜಜ್ಜಿದ್ದಾರೆ ಮಮತಾ ದೀದಿ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಸೋಲನ್ನು ಜನತಂತ್ರದ ಘನ ಗೆಲುವು ಎಂದೇ ಗುರುತಿಸಬೇಕಿದೆ.

ದೇಶ ಮತ್ತೊಂದು ಅಘೋಷಿತ ಸರ್ವಾಧಿಕಾರದ ಅಂಚಿಗೆ ಬಂದು ನಿಂತಿರುವಾಗ, ಜನತಾಂತ್ರಿಕ ಮೌಲ್ಯಗಳು ಮತ್ತು ವ್ಯಕ್ತಿಸ್ವಾತಂತ್ರ್ಯಗಳು ಇಳಿಜಾರಿನ ಹಾದಿ ಹಿಡಿದಿರುವಾಗ, ಮುಂಬರುವ ದಿನಗಳು ಮತ್ತಷ್ಟು ದುರ್ಭರ ಆಗುವ ಸೂಚನೆಗಳು ಗೋಚರಿಸಿರುವಾಗ ಬಂಗಾಳ ಚಿಮ್ಮಿಸಿರುವ ಈ ಫಲಿತಾಂಶ ಜನತಾಂತ್ರಿಕ ಮೌಲ್ಯಗಳ ಪಾಲಿಗೆ ಅತ್ಯಂತ ಆಶಾದಾಯಕ.

ಪಶ್ಚಿಮ ಬಂಗಾಳದ ಗಡಿಗಳನ್ನು ಜಿಗಿದು ಭಾರತದ ಉದ್ದಗಲಕ್ಕೆ ಸದ್ದು ಮಾಡಿರುವ ಗೆಲುವು ಇದು. ಮೋದಿ ಮತ್ತು ಅಮಿತ್ ಶಾ ಅವರನ್ನು ಸೋಲಿಸುವುದು ಸಾಧ್ಯ ಎಂಬುದನ್ನು ತೋರಿರುವ ಗೆಲುವು.
ಬಂಗಾಳವನ್ನು ಗೆಲ್ಲಲು ಮೋದಿ-ಅಮಿತ್ ಶಾ ಅವರು ಹೆಣೆಯದಿರುವ ತಂತ್ರಗಳಿಲ್ಲ, ಹೂಡದಿರುವ ವ್ಯೂಹಗಳಿಲ್ಲ. ಆದರೂ ಈ ದೈತ್ಯಶಕ್ತಿಯ ಘಾತಕ ದಾಳಿಯನ್ನು ಎದುರಿಸಿದ ಮಮತಾ ಗಟ್ಟಿ ಗುಂಡಿಗೆಯ ಹೆಣ್ಣುಮಗಳು. ಎರಡು ಅವಧಿಗಳಿಂದ ಮುಖ್ಯಮಂತ್ರಿ. ಮೂರನೆಯ ಅವಧಿಗೆ ಆಡಳಿತವಿರೋಧಿ ಭಾವನೆಯನ್ನು ಮೆಟ್ಟಿ ಗೆಲ್ಲುವುದು ಸುಲಭವಿರಲಿಲ್ಲ. 34ವರ್ಷಗಳ ಕಾಲ ಸತತವಾಗಿ ಅಧಿಕಾರ ಹಿಡಿದಿಟಿದ್ದ ಎಡರಂಗ ಸರ್ಕಾರವನ್ನು ಅವರು 2011ರಲ್ಲಿ ಸೋಲಿಸಿದ್ದು ಐತಿಹಾಸಿಕ ಹೌದು. ಅದನ್ನೂ ಮೀರಿಸಿದ ಚರಿತ್ರಾರ್ಹ ವಿಜಯ ಈಗಿನದು. ಈ ಗೆಲುವಿನಲ್ಲಿ ಕಾಂಗ್ರೆಸ್ ಮತ್ತು ಎಡರಂಗದ ಘೋರ ಸೋಲೂ ಅಡಗಿದೆ.

ಸತತ ಮೂರನೆಯ ಗೆಲುವು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವ ಅವಕಾಶವನ್ನೂ ಮಮತಾ ಅವರಿಗೆ ಒದಗಿಸಿದೆ.

2011ರಲ್ಲಿ ಇದೇ ಮಮತಾ ಅವರ ಕೈಯಲ್ಲಿ ಎಡರಂಗ ಘೋರ ಪರಾಭವ ಎದುರಿಸಿತು. ಹತ್ತು ವರ್ಷಗಳ ನಂತರವೂ ಮೇಲೆದ್ದಿಲ್ಲ. ಬದಲಾಗಿ ಮತ್ತಷ್ಟು ಹೊಸ ಆಳದ ಪಾತಾಳಕ್ಕೆ ಕುಸಿದಿದೆ. ಸಾವರಿಕೆಯ ಸೂಚನೆಗಳು ಈಗಲೂ ಇಲ್ಲ. ಈ ಇತಿಹಾಸದಿಂದ ಮಮತಾ ಕಲಿಯಬೇಕಿರುವ ಪಾಠಗಳು ಬಹಳಷ್ಟಿವೆ. ತಮ್ಮ ಪಕ್ಷವನ್ನು ದುರಹಂಕಾರ, ಭ್ರಷ್ಟಾಚಾರ, ಸ್ವಜನಪಕ್ಷಪಾತ, ಸರ್ವಾಧಿಕಾರಿ ಧೋರಣೆ, ಹಿಂಸಾಚಾರದಿಂದ ಹೊರಗೆಳೆಯಬೇಕಿದೆ. 2011ರ ನಂತರ ಎಡರಂಗವನ್ನು ಪ್ರತೀಕಾರದ ಕಿಚ್ಚಿನಲ್ಲಿ ಬೇಯಿಸಿದ ತಪ್ಪನ್ನು ಅವರು ಇದೀಗ ಬಿಜೆಪಿಯ ವಿರುದ್ಧ ಮಾಡಕೂಡದು. ಅದಕ್ಕೆ ಬದಲಾಗಿ ಬಿಜೆಪಿ ಗಳಿಸಿಕೊಂಡಿರುವ ಬೆಂಬಲ ನೆಲೆಯನ್ನು ತಮ್ಮತ್ತ ತಿರುಗಿಸಿಕೊಳ್ಳುವ ರಚನಾತ್ಮಕ ರಾಜಕಾರಣ ಮಾಡಬೇಕಿದೆ.

2003ರಲ್ಲಿ ನಡೆದಿದ್ದ ಪಂಚಾಯತಿ ಚುನಾವಣೆಗಳಲ್ಲಿ ಶೇ.11ರಷ್ಟು ಸೀಟುಗಳನ್ನು ಎದುರಾಳಿ ಹುರಿಯಾಳುಗಳೇ ಇಲ್ಲದೆ ಗೆದ್ದಿತ್ತು ಅಂದಿನ ಎಡರಂಗ. ಈ ದಾಖಲೆಯನ್ನು ಮಮತಾ ಬ್ಯಾನರ್ಜಿ 2018ರಲ್ಲಿ ಭರ್ಜರಿಯಾಗಿ ಮುರಿದರು. ಎದುರಾಳಿ ಅಭ್ಯರ್ಥಿಗಳೇ ಇಲ್ಲದೆ ಮಮತಾ ಅವರ ತೃಣಮೂಲ ಗೆದ್ದ ಪಂಚಾಯತಿ ಸೀಟುಗಳ ಪ್ರಮಾಣ ಶೇ.30!

ಇದು ಜನತಂತ್ರದ ಅಣಕವೇ ವಿನಾ ಸಾಧನೆಯಲ್ಲ. ಎಡರಂಗ ಶೇ.11ರಷ್ಟು ಸೀಟುಗಳನ್ನು ಎದುರಾಳಿಗಳಿಲ್ಲದೆ ಗೆದ್ದದ್ದಾಗಲಿ, ತೃಣಮೂಲ ಈ ದಾಖಲೆಯನ್ನು ಶೇ.30ಕ್ಕೆ ಮುಟ್ಟಿಸಿದ್ದಾಗಲಿ ತಲೆತಗ್ಗಿಸಬೇಕಾದ ವರ್ತನೆಗಳೇ ವಿನಾ ಎದೆ ತಟ್ಟಿ ಹೇಳಿಕೊಳ್ಳುವ ನಡೆಗಳಲ್ಲ. ಎದುರಾಳಿಗಳು ತಮ್ಮ ನಾಮಕರಣಗಳನ್ನು ಸಲ್ಲಿಸಲೂ ಹೆದರುವ ಭಯೋತ್ಪಾದಕ ಪರಿಸ್ಥಿತಿ ನೆಲೆಸಿದ್ದರ ದ್ಯೋತಕವಿದು. ಈ ಜನತಂತ್ರ ವಿರೋಧೀ ವಿಕೃತಿಯನ್ನು ತಮ್ಮ ಮೂರನೆಯ ಅವಧಿಯಲ್ಲಿ ಮಮತಾ ಅವರು ನಿವಾರಿಸಬೇಕು.

ಏಕವ್ಯಕ್ತಿ ಕೇಂದ್ರಿತ ರಾಜಕೀಯ ಪಕ್ಷಗಳ ನಿರ್ದಿಷ್ಟ ಆಧಾರಸ್ತಂಭ ಕುಸಿದರೆ ತಾವೂ ಕುಸಿದು ಹೋಗುತ್ತವೆ. ಜಯಲಲಿತಾ ಅವರ ಅಣ್ಣಾ ಡಿ.ಎಂ.ಕೆ. ಈ ಮಿತಿಯನ್ನು ದಾಟಿರುವುದು ಒಳ್ಳೆಯ ಸೂಚನೆ. ಆದರೆ ಮಮತಾ ಮತ್ತು ಮಾಯಾವತಿ ಅವರ ಪಕ್ಷಗಳೂ ಈ ನ್ಯೂನತೆಯನ್ನು ತಾವಾಗಿಯೇ ನಿವಾರಿಸಿಕೊಳ್ಳುತ್ತವೆ ಎಂದು ನಿರೀಕ್ಷಿಸಲು ಬರುವುದಿಲ್ಲ. ಮಮತಾ ಅವರು ತಮ್ಮ ಪಕ್ಷದಲ್ಲಿ ಎರಡನೆಯ ಪಂಕ್ತಿಯ ನಾಯಕತ್ವವನ್ನು ಬೆಳೆಸುವ ತುರ್ತು ಅಗತ್ಯವಿದೆ.

ವಿಧಾನಸಭಾ ಚುನಾವಣೆಗಳನ್ನು ಸತತ ಮೂರು ನಾಲ್ಕು ಬಾರಿ ಗೆದ್ದ ಮುಖ್ಯಮಂತ್ರಿಗಳಿಗೆ ಪ್ರಧಾನಿಯಾಗುವ ಹೆಬ್ಬಯಕೆ ಕಾಡುವುದು ಸ್ವಾಭಾವಿಕ. ಆದರೆ ಕಾಲ ಪಕ್ವವಾಗದೆ ಈ ದಿಸೆಯಲ್ಲಿ ಹೆಜ್ಜೆ ಇರಿಸುವುದು ಅನಾಹುತಕಾರಿ. ಬಂಗಾಳಕ್ಕೆ ಮಮತಾ ಅವರ ಅಗತ್ಯ ಇನ್ನೂ ಇದೆ. ಬಂಗಾಳವನ್ನು ಅವರು ಸಹಬಾಳುವೆಯ ಸಮೃದ್ಧಿಯ ಸೀಮೆಯಾಗಿ ಅರಳಿಸಿದ ನಂತರವೇ ಅವರು ದಿಲ್ಲಿ ಗದ್ದುಗೆಯ ಆಲೋಚನೆ ಮಾಡುವುದು ಉತ್ತಮ.

ಹೌದು. 1996ರಲ್ಲಿ ಪ್ರಧಾನಿ ಹುದ್ದೆ ಬಂಗಾಳದ ಕದ ಬಡಿದಿತ್ತು. ಅಂದಿನ ಎಡರಂಗದ ಮುಖ್ಯಮಂತ್ರಿ ಜ್ಯೋತಿಬಸು ಅವರಿಗೆ ಈ ಹುದ್ದೆ ಒಲಿದಿತ್ತು. ಆದರೆ ಸಿಪಿಐ (ಎಂ) ಈ ಆಹ್ವಾನವನ್ನು ದೂರ ತಳ್ಳಿತ್ತು. ಕಾಲಾನುಕ್ರಮದಲ್ಲಿ ಈ ತಪ್ಪಿನ ಅರಿವಾಗಿತ್ತು. ಜ್ಯೋತಿ ಬಸು ಅವರಿಗೆ ತಪ್ಪಿ ಹೋದ ಹುದ್ದೆ ಕನ್ನಡಿಗ ಎಚ್.ಡಿ.ದೇವೇಗೌಡ ಅವರ ಪಾಲಾಗಿತ್ತು. ದೇಶದ ಪ್ರತಿಪಕ್ಷಗಳು ಇದೀಗ ಮಮತಾ ಬ್ಯಾನರ್ಜಿ ಅವರನ್ನು ತಮ್ಮ ನಾಯಕಿಯಾಗಿ ಅಂಗೀಕರಿಸುವ ಸೂಚನೆಗಳಿವೆ. ಆದರೆ ಸಿಟ್ಟು ಸೆಡವು, ಸರ್ವಾಧಿಕಾರಿ ಪ್ರವೃತ್ತಿಯ ದೌರ್ಬಲ್ಯದಿಂದ ಮಮತಾ ಈಗಲೂ ಮುಕ್ತವಾಗಿಲ್ಲ. ರಾಜಕೀಯ ಪಕ್ಷಗಳ ಒಕ್ಕೂಟದ ನೇತೃತ್ವ ವಹಿಸುವ ನಾಯಕ-ನಾಯಕಿಗೆ ಒಂದು ಹಂತದ ಪ್ರಬುದ್ಧತೆ, ಪರಿಪಕ್ವತೆ ಇರಬೇಕಾಗುತ್ತದೆ. ಮಮತಾ ಇವುಗಳನ್ನು ಮೈಗೂಡಿಸಿಕೊಳ್ಳಬೇಕಿದೆ. ಮನಸು ಮಾಡಿದರೆ ಅವರಿಗೆ ಇದು ಅಸಾಧ್ಯ ಆಗಲಾರದು. ಆದರೆ ದುಡುಕಿಗೆ ಮತ್ತು ಅಪಕ್ವ ವಿಫಲ ಪ್ರಯೋಗಗಳಿಗೆ ಇದು ಸಮಯವಲ್ಲ.


ಇದನ್ನೂ ಓದಿ: ಬಹುಜನ ಭಾರತ: ಬಹುತ್ವ ಭಿನ್ನಮತ ಸಹನೆ ಸಹಬಾಳುವೆಯ ಆಮ್ಲಜನಕವೂ ಬಲು ವೇಗದಲ್ಲಿ ಬರಿದಾಗುತ್ತಿದೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...