Homeಬಹುಜನ ಭಾರತಬಹುಜನ ಭಾರತ: ನಾಯಕತ್ವದ ಪರೀಕ್ಷೆಯಲ್ಲಿ ನಪಾಸು-ಇಳಿ ಎಣಿಕೆಯ ಆರಂಭವೇ?

ಬಹುಜನ ಭಾರತ: ನಾಯಕತ್ವದ ಪರೀಕ್ಷೆಯಲ್ಲಿ ನಪಾಸು-ಇಳಿ ಎಣಿಕೆಯ ಆರಂಭವೇ?

- Advertisement -
- Advertisement -

ದೇಶಕ್ಕೆ ದೇಶವೇ ಒಂದು ಸಾಮೂಹಿಕ ಸ್ಮಶಾನದ ರೂಪ ತಳೆದಿದೆಯೇನೋ ಎಂಬ ಭೀಭತ್ಸ, ಭಾರತದ ಉದ್ದಗಲಕ್ಕೆ ಕವಿದಿದೆ. ಸಾವು ಕೇಕೆಯೇ ಕಿವಿಯ ಮೇಲೆ ಅಪ್ಪಳಿಸಿದೆ. ಮಸಣಮೌನದ ಸದ್ದು ಜನಜೀವನವನ್ನು ದಿಕ್ಕೆಡಿಸಿದೆ. ಹೆಗಲ ಮೇಲೆ ಕೈ ಇರಿಸಿ ಸಾಂತ್ವನ ಹೇಳುವ, ಸಂಕಟ ಹಂಚಿಕೊಳ್ಳುವ ನಾಯಕತ್ವ ನಾಪತ್ತೆಯಾಗಿದೆ. ದೈತ್ಯ ಸಂಕಟದ ಈ ಸನ್ನಿವೇಶದಲ್ಲಿ ’ಸೂಪರ್ ಮ್ಯಾನ್’ ವರ್ಚಸ್ಸಿನ ಪ್ರಧಾನಿಯವರ ನಿಷ್ಕ್ರಿಯತೆ, ಸಂವೇದನಾಶೂನ್ಯತೆ ಕಣ್ಣಿಗೆ, ಕರುಳಿಗೆ ರಾಚುವಂತಿದೆ. ಕೋವಿಡ್ ಒಡ್ಡಿರುವ ನಾಯಕತ್ವದ ಅಗ್ನಿಪರೀಕ್ಷೆಯಲ್ಲಿ ಅವರು ಶೋಚನೀಯವಾಗಿ ಸೋತಿದ್ದಾರೆ. ಕೋವಿಡ್ ಸೋಲು ಮತ್ತು ಪಶ್ಚಿಮ ಬಂಗಾಳದ ಚುನಾವಣಾ ಸೋಲು ಒಂದರೊಡನೊಂದು ಬೆರೆತಿವೆ. ಪ್ರಚಂಡ ನಾಯಕನ ಪ್ರಭಾವಳಿಯನ್ನು ಬಲುವೇಗವಾಗಿ ಅಳಿಸಿ ಹಾಕತೊಡಗಿವೆ. ಅಂತಾರಾಷ್ಟ್ರೀಯವಾಗಿಯೂ ಅವರು ತೀವ್ರ ಟೀಕೆ ಎದುರಿಸತೊಡಗಿದ್ದಾರೆ. ದೇಶದೊಳಗೆ ಅವರ ಕುರಿತು ಭುಗಿಲೆದ್ದು ಕವಿದಿದ್ದ ಕುರುಡು ಅಭಿಮಾನದ ಪೊರೆಯೂ ಸರಿಯುವ ಸೂಚನೆಗಳು ದೂರ ದಿಗಂತದಲ್ಲಿ ಗೋಚರಿಸತೊಡಗಿವೆ. ಮೂರನೆಯ ಅವಧಿಗೆ ಮತ್ತೆ ಗೆದ್ದು ಬರುತ್ತಾರೆ ಎಂಬ ಭಾವನೆ ಕರಗತೊಡಗಿದೆ. ಮುಂಬರುವ ಚುನಾವಣೆಗಳು ಅವರ ಪಾಲಿಗೆ ಏರು ಹಾದಿಯ ಪಯಣ ಆಗಲಿವೆ. ಈ ಸವಾಲನ್ನು ಮೋದಿ-ಶಾ ಜೋಡಿ ಹೇಗೆ ಎದುರಿಸೀತು ಎಂದು ಕಾದು ನೋಡಬೇಕಿದೆ.

ಪ್ರತಿಪಕ್ಷಗಳನ್ನು ಸಮಾಧಿ ಮಾಡಿ ಏಕಚಕ್ರಾಧಿಪತ್ಯ ಕಟ್ಟುವ ಬಿಜೆಪಿ ಕನಸು ಭಗ್ನಗೊಂಡಿದೆ. ಜನಸಮುದಾಯಗಳನ್ನು ಕೋಮು ಧೃವೀಕರಣದ ದಳ್ಳುರಿಗೆ ನೂಕಿ ಕೈಕಾಯಿಸಿಕೊಳ್ಳುವ ಪ್ರಯತ್ನಗಳು ಪ್ರತಿ ಸಲವೂ ಫಲ ನೀಡುವುದಿಲ್ಲ ಎಂಬ ವಾಸ್ತವ ರುಜುವಾತಾಗಿದೆ. ದುರಹಂಕಾರದಿಂದ ವರ್ತಿಸಿದ ದಾದಾ ಮೋದಿ ಪಕ್ಷದ ದವಡೆಯನ್ನೇ ಜಜ್ಜಿದ್ದಾರೆ ಮಮತಾ ದೀದಿ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಸೋಲನ್ನು ಜನತಂತ್ರದ ಘನ ಗೆಲುವು ಎಂದೇ ಗುರುತಿಸಬೇಕಿದೆ.

ದೇಶ ಮತ್ತೊಂದು ಅಘೋಷಿತ ಸರ್ವಾಧಿಕಾರದ ಅಂಚಿಗೆ ಬಂದು ನಿಂತಿರುವಾಗ, ಜನತಾಂತ್ರಿಕ ಮೌಲ್ಯಗಳು ಮತ್ತು ವ್ಯಕ್ತಿಸ್ವಾತಂತ್ರ್ಯಗಳು ಇಳಿಜಾರಿನ ಹಾದಿ ಹಿಡಿದಿರುವಾಗ, ಮುಂಬರುವ ದಿನಗಳು ಮತ್ತಷ್ಟು ದುರ್ಭರ ಆಗುವ ಸೂಚನೆಗಳು ಗೋಚರಿಸಿರುವಾಗ ಬಂಗಾಳ ಚಿಮ್ಮಿಸಿರುವ ಈ ಫಲಿತಾಂಶ ಜನತಾಂತ್ರಿಕ ಮೌಲ್ಯಗಳ ಪಾಲಿಗೆ ಅತ್ಯಂತ ಆಶಾದಾಯಕ.

ಪಶ್ಚಿಮ ಬಂಗಾಳದ ಗಡಿಗಳನ್ನು ಜಿಗಿದು ಭಾರತದ ಉದ್ದಗಲಕ್ಕೆ ಸದ್ದು ಮಾಡಿರುವ ಗೆಲುವು ಇದು. ಮೋದಿ ಮತ್ತು ಅಮಿತ್ ಶಾ ಅವರನ್ನು ಸೋಲಿಸುವುದು ಸಾಧ್ಯ ಎಂಬುದನ್ನು ತೋರಿರುವ ಗೆಲುವು.
ಬಂಗಾಳವನ್ನು ಗೆಲ್ಲಲು ಮೋದಿ-ಅಮಿತ್ ಶಾ ಅವರು ಹೆಣೆಯದಿರುವ ತಂತ್ರಗಳಿಲ್ಲ, ಹೂಡದಿರುವ ವ್ಯೂಹಗಳಿಲ್ಲ. ಆದರೂ ಈ ದೈತ್ಯಶಕ್ತಿಯ ಘಾತಕ ದಾಳಿಯನ್ನು ಎದುರಿಸಿದ ಮಮತಾ ಗಟ್ಟಿ ಗುಂಡಿಗೆಯ ಹೆಣ್ಣುಮಗಳು. ಎರಡು ಅವಧಿಗಳಿಂದ ಮುಖ್ಯಮಂತ್ರಿ. ಮೂರನೆಯ ಅವಧಿಗೆ ಆಡಳಿತವಿರೋಧಿ ಭಾವನೆಯನ್ನು ಮೆಟ್ಟಿ ಗೆಲ್ಲುವುದು ಸುಲಭವಿರಲಿಲ್ಲ. 34ವರ್ಷಗಳ ಕಾಲ ಸತತವಾಗಿ ಅಧಿಕಾರ ಹಿಡಿದಿಟಿದ್ದ ಎಡರಂಗ ಸರ್ಕಾರವನ್ನು ಅವರು 2011ರಲ್ಲಿ ಸೋಲಿಸಿದ್ದು ಐತಿಹಾಸಿಕ ಹೌದು. ಅದನ್ನೂ ಮೀರಿಸಿದ ಚರಿತ್ರಾರ್ಹ ವಿಜಯ ಈಗಿನದು. ಈ ಗೆಲುವಿನಲ್ಲಿ ಕಾಂಗ್ರೆಸ್ ಮತ್ತು ಎಡರಂಗದ ಘೋರ ಸೋಲೂ ಅಡಗಿದೆ.

ಸತತ ಮೂರನೆಯ ಗೆಲುವು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವ ಅವಕಾಶವನ್ನೂ ಮಮತಾ ಅವರಿಗೆ ಒದಗಿಸಿದೆ.

2011ರಲ್ಲಿ ಇದೇ ಮಮತಾ ಅವರ ಕೈಯಲ್ಲಿ ಎಡರಂಗ ಘೋರ ಪರಾಭವ ಎದುರಿಸಿತು. ಹತ್ತು ವರ್ಷಗಳ ನಂತರವೂ ಮೇಲೆದ್ದಿಲ್ಲ. ಬದಲಾಗಿ ಮತ್ತಷ್ಟು ಹೊಸ ಆಳದ ಪಾತಾಳಕ್ಕೆ ಕುಸಿದಿದೆ. ಸಾವರಿಕೆಯ ಸೂಚನೆಗಳು ಈಗಲೂ ಇಲ್ಲ. ಈ ಇತಿಹಾಸದಿಂದ ಮಮತಾ ಕಲಿಯಬೇಕಿರುವ ಪಾಠಗಳು ಬಹಳಷ್ಟಿವೆ. ತಮ್ಮ ಪಕ್ಷವನ್ನು ದುರಹಂಕಾರ, ಭ್ರಷ್ಟಾಚಾರ, ಸ್ವಜನಪಕ್ಷಪಾತ, ಸರ್ವಾಧಿಕಾರಿ ಧೋರಣೆ, ಹಿಂಸಾಚಾರದಿಂದ ಹೊರಗೆಳೆಯಬೇಕಿದೆ. 2011ರ ನಂತರ ಎಡರಂಗವನ್ನು ಪ್ರತೀಕಾರದ ಕಿಚ್ಚಿನಲ್ಲಿ ಬೇಯಿಸಿದ ತಪ್ಪನ್ನು ಅವರು ಇದೀಗ ಬಿಜೆಪಿಯ ವಿರುದ್ಧ ಮಾಡಕೂಡದು. ಅದಕ್ಕೆ ಬದಲಾಗಿ ಬಿಜೆಪಿ ಗಳಿಸಿಕೊಂಡಿರುವ ಬೆಂಬಲ ನೆಲೆಯನ್ನು ತಮ್ಮತ್ತ ತಿರುಗಿಸಿಕೊಳ್ಳುವ ರಚನಾತ್ಮಕ ರಾಜಕಾರಣ ಮಾಡಬೇಕಿದೆ.

2003ರಲ್ಲಿ ನಡೆದಿದ್ದ ಪಂಚಾಯತಿ ಚುನಾವಣೆಗಳಲ್ಲಿ ಶೇ.11ರಷ್ಟು ಸೀಟುಗಳನ್ನು ಎದುರಾಳಿ ಹುರಿಯಾಳುಗಳೇ ಇಲ್ಲದೆ ಗೆದ್ದಿತ್ತು ಅಂದಿನ ಎಡರಂಗ. ಈ ದಾಖಲೆಯನ್ನು ಮಮತಾ ಬ್ಯಾನರ್ಜಿ 2018ರಲ್ಲಿ ಭರ್ಜರಿಯಾಗಿ ಮುರಿದರು. ಎದುರಾಳಿ ಅಭ್ಯರ್ಥಿಗಳೇ ಇಲ್ಲದೆ ಮಮತಾ ಅವರ ತೃಣಮೂಲ ಗೆದ್ದ ಪಂಚಾಯತಿ ಸೀಟುಗಳ ಪ್ರಮಾಣ ಶೇ.30!

ಇದು ಜನತಂತ್ರದ ಅಣಕವೇ ವಿನಾ ಸಾಧನೆಯಲ್ಲ. ಎಡರಂಗ ಶೇ.11ರಷ್ಟು ಸೀಟುಗಳನ್ನು ಎದುರಾಳಿಗಳಿಲ್ಲದೆ ಗೆದ್ದದ್ದಾಗಲಿ, ತೃಣಮೂಲ ಈ ದಾಖಲೆಯನ್ನು ಶೇ.30ಕ್ಕೆ ಮುಟ್ಟಿಸಿದ್ದಾಗಲಿ ತಲೆತಗ್ಗಿಸಬೇಕಾದ ವರ್ತನೆಗಳೇ ವಿನಾ ಎದೆ ತಟ್ಟಿ ಹೇಳಿಕೊಳ್ಳುವ ನಡೆಗಳಲ್ಲ. ಎದುರಾಳಿಗಳು ತಮ್ಮ ನಾಮಕರಣಗಳನ್ನು ಸಲ್ಲಿಸಲೂ ಹೆದರುವ ಭಯೋತ್ಪಾದಕ ಪರಿಸ್ಥಿತಿ ನೆಲೆಸಿದ್ದರ ದ್ಯೋತಕವಿದು. ಈ ಜನತಂತ್ರ ವಿರೋಧೀ ವಿಕೃತಿಯನ್ನು ತಮ್ಮ ಮೂರನೆಯ ಅವಧಿಯಲ್ಲಿ ಮಮತಾ ಅವರು ನಿವಾರಿಸಬೇಕು.

ಏಕವ್ಯಕ್ತಿ ಕೇಂದ್ರಿತ ರಾಜಕೀಯ ಪಕ್ಷಗಳ ನಿರ್ದಿಷ್ಟ ಆಧಾರಸ್ತಂಭ ಕುಸಿದರೆ ತಾವೂ ಕುಸಿದು ಹೋಗುತ್ತವೆ. ಜಯಲಲಿತಾ ಅವರ ಅಣ್ಣಾ ಡಿ.ಎಂ.ಕೆ. ಈ ಮಿತಿಯನ್ನು ದಾಟಿರುವುದು ಒಳ್ಳೆಯ ಸೂಚನೆ. ಆದರೆ ಮಮತಾ ಮತ್ತು ಮಾಯಾವತಿ ಅವರ ಪಕ್ಷಗಳೂ ಈ ನ್ಯೂನತೆಯನ್ನು ತಾವಾಗಿಯೇ ನಿವಾರಿಸಿಕೊಳ್ಳುತ್ತವೆ ಎಂದು ನಿರೀಕ್ಷಿಸಲು ಬರುವುದಿಲ್ಲ. ಮಮತಾ ಅವರು ತಮ್ಮ ಪಕ್ಷದಲ್ಲಿ ಎರಡನೆಯ ಪಂಕ್ತಿಯ ನಾಯಕತ್ವವನ್ನು ಬೆಳೆಸುವ ತುರ್ತು ಅಗತ್ಯವಿದೆ.

ವಿಧಾನಸಭಾ ಚುನಾವಣೆಗಳನ್ನು ಸತತ ಮೂರು ನಾಲ್ಕು ಬಾರಿ ಗೆದ್ದ ಮುಖ್ಯಮಂತ್ರಿಗಳಿಗೆ ಪ್ರಧಾನಿಯಾಗುವ ಹೆಬ್ಬಯಕೆ ಕಾಡುವುದು ಸ್ವಾಭಾವಿಕ. ಆದರೆ ಕಾಲ ಪಕ್ವವಾಗದೆ ಈ ದಿಸೆಯಲ್ಲಿ ಹೆಜ್ಜೆ ಇರಿಸುವುದು ಅನಾಹುತಕಾರಿ. ಬಂಗಾಳಕ್ಕೆ ಮಮತಾ ಅವರ ಅಗತ್ಯ ಇನ್ನೂ ಇದೆ. ಬಂಗಾಳವನ್ನು ಅವರು ಸಹಬಾಳುವೆಯ ಸಮೃದ್ಧಿಯ ಸೀಮೆಯಾಗಿ ಅರಳಿಸಿದ ನಂತರವೇ ಅವರು ದಿಲ್ಲಿ ಗದ್ದುಗೆಯ ಆಲೋಚನೆ ಮಾಡುವುದು ಉತ್ತಮ.

ಹೌದು. 1996ರಲ್ಲಿ ಪ್ರಧಾನಿ ಹುದ್ದೆ ಬಂಗಾಳದ ಕದ ಬಡಿದಿತ್ತು. ಅಂದಿನ ಎಡರಂಗದ ಮುಖ್ಯಮಂತ್ರಿ ಜ್ಯೋತಿಬಸು ಅವರಿಗೆ ಈ ಹುದ್ದೆ ಒಲಿದಿತ್ತು. ಆದರೆ ಸಿಪಿಐ (ಎಂ) ಈ ಆಹ್ವಾನವನ್ನು ದೂರ ತಳ್ಳಿತ್ತು. ಕಾಲಾನುಕ್ರಮದಲ್ಲಿ ಈ ತಪ್ಪಿನ ಅರಿವಾಗಿತ್ತು. ಜ್ಯೋತಿ ಬಸು ಅವರಿಗೆ ತಪ್ಪಿ ಹೋದ ಹುದ್ದೆ ಕನ್ನಡಿಗ ಎಚ್.ಡಿ.ದೇವೇಗೌಡ ಅವರ ಪಾಲಾಗಿತ್ತು. ದೇಶದ ಪ್ರತಿಪಕ್ಷಗಳು ಇದೀಗ ಮಮತಾ ಬ್ಯಾನರ್ಜಿ ಅವರನ್ನು ತಮ್ಮ ನಾಯಕಿಯಾಗಿ ಅಂಗೀಕರಿಸುವ ಸೂಚನೆಗಳಿವೆ. ಆದರೆ ಸಿಟ್ಟು ಸೆಡವು, ಸರ್ವಾಧಿಕಾರಿ ಪ್ರವೃತ್ತಿಯ ದೌರ್ಬಲ್ಯದಿಂದ ಮಮತಾ ಈಗಲೂ ಮುಕ್ತವಾಗಿಲ್ಲ. ರಾಜಕೀಯ ಪಕ್ಷಗಳ ಒಕ್ಕೂಟದ ನೇತೃತ್ವ ವಹಿಸುವ ನಾಯಕ-ನಾಯಕಿಗೆ ಒಂದು ಹಂತದ ಪ್ರಬುದ್ಧತೆ, ಪರಿಪಕ್ವತೆ ಇರಬೇಕಾಗುತ್ತದೆ. ಮಮತಾ ಇವುಗಳನ್ನು ಮೈಗೂಡಿಸಿಕೊಳ್ಳಬೇಕಿದೆ. ಮನಸು ಮಾಡಿದರೆ ಅವರಿಗೆ ಇದು ಅಸಾಧ್ಯ ಆಗಲಾರದು. ಆದರೆ ದುಡುಕಿಗೆ ಮತ್ತು ಅಪಕ್ವ ವಿಫಲ ಪ್ರಯೋಗಗಳಿಗೆ ಇದು ಸಮಯವಲ್ಲ.


ಇದನ್ನೂ ಓದಿ: ಬಹುಜನ ಭಾರತ: ಬಹುತ್ವ ಭಿನ್ನಮತ ಸಹನೆ ಸಹಬಾಳುವೆಯ ಆಮ್ಲಜನಕವೂ ಬಲು ವೇಗದಲ್ಲಿ ಬರಿದಾಗುತ್ತಿದೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...