Homeಕರೋನಾ ತಲ್ಲಣಲಸಿಕೆ ಮೇಲಿನ ಪೇಟೆಂಟ್ ರದ್ದು: ಜೋ ಬೈಡನ್ ಯಾವ ನಿಲುವು ತೆಗೆದುಕೊಳ್ಳಲಿದ್ದಾರೆ?

ಲಸಿಕೆ ಮೇಲಿನ ಪೇಟೆಂಟ್ ರದ್ದು: ಜೋ ಬೈಡನ್ ಯಾವ ನಿಲುವು ತೆಗೆದುಕೊಳ್ಳಲಿದ್ದಾರೆ?

ನಾಳೆ ಡಬ್ಲ್ಯುಟಿಒ ಕೌನ್ಸಿಲ್ ಸಭೆ ಸೇರಲಿದೆ. ಆ ಸಮಯದಲ್ಲಿ ಟ್ರಿಪ್ಸ್ ನಿರ್ಬಂಧಗಳ ರದ್ಧು ಮಾಡಬೇಕೆಂಬ ಮನವಿಯನ್ನು ಕುರಿತು ಚರ್ಚೆ ನಡೆಯಲಿದೆ. ಬೈಡೆನ್ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಬೆಂಬಲಿಸುತ್ತಾರಾ ಅಥವಾ ಬಹುರಾಷ್ಟ್ರೀಯ ಶ್ರೀಮಂತ ಔಷಧಿ ಕಂಪೆನಿಗಳನ್ನು ಬೆಂಬಲಿಸುತ್ತಾರಾ ನೋಡಬೇಕು.

- Advertisement -
- Advertisement -

ಕೋವಿಡ್ ಲಸಿಕೆಯ ಮೊದಲ ಡೋಸ್ ತೆಗದುಕೊಂಡೆ. ಲಸಿಕೆಗಳ ಪೂರೈಕೆ ತುಂಬಾ ಕಡಿಮೆ ಇತ್ತು. ಕೆಲವೇ ಜನರಿಗೆ ಲಸಿಕೆ ಸಿಕ್ಕಿದೆ. ಆಸ್ಟ್ರಜೆನೆಕಾ ಲಸಿಕೆಗಳು ಅಭಿವೃದ್ದಿಶೀಲ ರಾಷ್ಟ್ರಗಳಿಗೆ ಕಾಲಿಡಲು ಪ್ರಾರಂಭಿಸಿವೆ. ನಾನೊಬ್ಬ ಹಿರಿಯ ನಾಗರಿಕ. ಹಾಗಾಗಿ ನನಗೆ ಆದ್ಯತೆಯಿತ್ತು. ಅಮೇರಿಕೆಯಲ್ಲಿ ಶೇಕಡ 32ರಷ್ಟು ಜನ ಪೂರ್ಣ ಲಸಿಕೆ ಪಡೆದಿದ್ದಾರೆ. ಫಿಲಿಫೈನ್ಸನಲ್ಲಿ ಹೆಚ್ಚೆಂದರೆ ಶೇಕಡ 0.3 ಜನರಿಗೆ ಲಸಿಕೆಯಾಗಿದೆ. ಆ ಅದೃಷ್ಟವಂತರಲ್ಲಿ ನಾನು ಒಬ್ಬ.

ಸೋಮವಾರದ ವೇಳೆಗೆ 1.16 ಮಿಲಿಯನಿಗಿಂತ ಹೆಚ್ಚು ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಅವರಲ್ಲಿ ಬಹುಪಾಲು ಜನ, ಅಂದರೆ ಶೇಕಡ 80ಕ್ಕಿಂತ ಹೆಚ್ಚು ಜನ ಮಧ್ಯಮ ಅಥವಾ ಶ್ರೀಮಂತ ದೇಶಗಳಿಗೆ ಸೇರಿದವರು. ಫಿಲಿಫೈನ್ಸ್ ಅಂತಹ ಬಡದೇಶಗಳಿಗೆ ಲಸಿಕೆಗಳು ತಲುಪಿರುವುದು ಕೇವಲ ಶೇಕಡ 0.2ರಷ್ಟು. ಭಾರತದಲ್ಲಿ ಈಗ ಕೋವಿಡ್ ಸೋಂಕು ಭೀಕರವಾಗಿ ಹರಡುತ್ತಿದೆ. ಈಚಿಗಿನ ಕೆಲವು ದಿನಗಳಲ್ಲಿ ದಿನಕ್ಕೆ 3,50,000 ಸೋಂಕುಗಳು, 3000 ಸಾವುಗಳು ದಾಖಲಾಗಿವೆ. ಭಾರತದಲ್ಲಿ ಕೇವಲ ಶೇಕಡ 2ರಷ್ಟು ಜನಕ್ಕೆ ಮಾತ್ರ ಲಸಿಕೆಗಳನ್ನು ನೀಡಲಾಗಿದೆ. ಅಮೇರಿಕೆಯ ಅಧ್ಯಕ್ಷ ಬೈಡೆನ್ ಇತ್ತೀಚೆಗೆ ಭಾರತಕ್ಕೆ ನೆರವು ನೀಡುವುದಾಗಿ ಹೇಳಿರುವುದು ಸ್ವಾಗತಾರ್ಹ. ಆದರೆ ಅದು ಸಮಸ್ಯೆಯನ್ನು ಪರಿಹರಿಸುವುದಿಲ್ಲ.

ಏಪ್ರಿಲ್ 23ರಂದು ಸಿಟಿಜನ್ ಟ್ರೇಡ್ ಕ್ಯಾಂಪೈನ್ ಮತ್ತು ಅಸೋಸಿಯೇಷನ್ ಆಫ್ ಫ್ಲೈಟ್ ಅಟೆಂಡೆಂಟ್ ಸೇರಿದಂತೆ 24 ಎನ್‌ಜಿಒಗಳು ಬೈಡೆನ್‌ಗೆ ಒಂದು ಮನವಿಯನ್ನು ಸಲ್ಲಿಸಿವೆ. ಸಮಸ್ಯೆಗೆ ನಿಜವಾದ ಪರಿಹಾರ ದೊರಕಿಸಿಕೊಡಬೇಕೆಂದು ಅವು ಮನವಿ ಮಾಡಿವೆ. ಪಾಶ್ವಿಮಾತ್ಯ ದೇಶಗಳಲ್ಲಿ ತಯಾರಾಗುತ್ತಿರುವ ಕೋವಿಡ್ ಲಸಿಕೆಗಳ ಮಾದರಿಯ ಲಸಿಕೆಗಳನ್ನು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲೇ ತಯಾರಾಗುವುದಕ್ಕೆ ಸಾಧ್ಯವಾಗಬೇಕು. ಅದಕ್ಕೆ ಬೇಕಾದ ತಂತ್ರಜ್ಞಾನ ಆ ದೇಶಗಳಿಗೆ ಸಿಗಬೇಕು. ಅದನ್ನು ಪಡೆದುಕೊಳ್ಳಲು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಇರುವ ಅಡ್ಡಿ ನಿವಾರಣೆಯಾಗಬೇಕು. ಈಗ ಚಾಲ್ತಿಯಿರುವ ಕೆಲವು ಭೌತಿಕ ಆಸ್ತಿಗಳ ಕಾಯ್ದೆಗಳು ಹೇರಿರುವ ನಿರ್ಬಂಧಗಳಿಂದ ಅದು ಸಾಧ್ಯವಾಗುತ್ತಿಲ್ಲ. ಈ ನಿರ್ಬಂಧಗಳನ್ನು ತಾತ್ಕಲಿಕವಾಗಿ ರದ್ದುಗೊಳಿಸಬೇಕೆಂಬ ಮನವಿಯನ್ನು ಅಮೇರಿಕೆ ಬೆಂಬಲಿಸಬೇಕೆಂದು ಅವು ಕೋರಿಕೊಂಡಿವೆ. ಹೀಗೆ ಮಾಡುವುದರಿಂದ ಅಭಿವೃದ್ಧಶೀಲ ರಾಷ್ಟ್ರಗಳಿಗೇ ಅವಶ್ಯಕ ಲಸಿಕೆಗಳನ್ನು ತ್ವರಿತವಾಗಿ ತಯಾರಿಸಿಕೊಳ್ಳಲು ಸಾಧ್ಯವಾಗುತ್ತದೆ.

ಟ್ರಿಪ್ಸ್ ಅಂದರೆ ವ್ಯಾಪಾರೀ ಸಂಬಂಧಿ ಭೌತಿಕ ಆಸ್ತಿ ಹಕ್ಕಿಗೆ ಸಂಬಂಧಿಸಿ ಕಾಯ್ದೆಯಲ್ಲಿ ಈ ನಿರ್ಬಂಧಗಳು ಅಡಕವಾಗಿವೆ. ಇದು ಡಬ್ಲ್ಯುಟಿಒ -ಜಾಗತಿಕ ವ್ಯಾಪಾರೀ ಸಂಘಟನೆಯ ಒಪ್ಪಂದದ ಭಾಗವಾಗಿದೆ. ಅದರ ಪ್ರಕಾರ ಪೇಟೆಂಟ್ ಆದ ವಸ್ತುಗಳಿಗೆ ಕನಿಷ್ಠ 20 ವರ್ಷಗಳು ಏಕಸ್ವಾಮ್ಯ ಇರುತ್ತದೆ. ಇದನ್ನು ಡಬ್ಲ್ಯುಟಿಒ ಕಟ್ಟುನಿಟ್ಟಾಗಿ ಪಾಲಿಸುತ್ತದೆ. ಈ ಬದಲಾವಣೆ ಒಂದು ತಾಂತ್ರಿಕ ಪಾರಿಭಾಷೆಯಾಗಿ ಕಾಣಬಹುದು. ಆದರೆ ಅದರ ಪರಿಣಾಮ ನೇರ. ತಾತ್ಕಾಲಿಕವಾಗಿ ಟ್ರಿಪ್ಸ್ ಏಕಸ್ವಾಮ್ಯವನ್ನು ರದ್ದುಗೊಳಿಸಿದರೆ, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಲಸಿಕೆ ಉತ್ಪಾದನೆಯನ್ನು ತ್ವರಿತವಾಗಿ ಹೆಚ್ಚಿಸಬಹುದು. ಬಡವರ ಜೀವವನ್ನು ಉಳಿಸಬಹುದು ಅದೂ ಕಡಿಮೆ ಖರ್ಚಿನಲ್ಲಿ.

ಈ ಮನವಿಗೆ ಡೆಮಾಕ್ರೆಟಿಕ್ ಸೆನೆಟರ್ ಬರ್ನಿ ಸ್ಯಾಂಡರ್ಸ್ ಮತ್ತು ಟಾಮಿ ಬಾಲ್ಡಿವಿನ್ ಸೇರಿದಂತೆ 2 ಮಿಲಿಯನ್ ಜನ ಸಹಿ ಹಾಕಿದ್ದಾರೆ. ಟ್ರಿಪ್ಸ್ ನಿರ್ಭಂಧವನ್ನು ಸಡಿಲಿಸುವುದನ್ನು ವಿರೋಧಿಸುವವರ ತಂಡ ತುಂಬಾ ಪ್ರಬಲವಾಗಿದೆ. ದೊಡ್ಡ ಔಷಧ ತಯಾರಕ ಕಂಪೆನಿಗಳು ಆ ತಂಡದ ಮುಂಚೂಣಿಯಲ್ಲಿವೆ. ಅವರ ಬೆಂಬಲಕ್ಕೆ ಅಮೇರಿಕೆಯ ಛೇಂಬರ್ ಆಫ್ ಕಾಮರ್ಸ್ ಮತ್ತು ಟೆಲಿ ಕಮ್ಯನಿಕೇಷನ್ ಇಂಡಸ್ಟ್ರಿ ಅಸೋಸಿಯೇಷನ್ ಮೊದಲಾದ ಕೈಗಾರಿಕಾ ಗುಂಪುಗಳಿವೆ. ಬೌದ್ಧಿಕ ಆಸ್ತಿ ಹಕ್ಕುಗಳ ಕಾನೂನನ್ನು ಸ್ವಲ್ಪ ಸಡಿಲಿಸಿದರೂ ಮುಂದೆ ಎಲ್ಲಾ ತುರ್ತು ಸ್ಥಿತಿಯಲ್ಲೂ ಇದನ್ನೇ ಉದಾಹರಣೆಯನ್ನಾಗಿ ಮಾಡಿಕೊಳ್ಳಬಹುದು ಎನ್ನುವ ಆತಂಕ ಅವರದ್ದು. ಟ್ರಿಪ್ಸ್‌ಗೆ ಏನಾದರೂ ತೊಂದರೆ ಆಗಿಬಿಟ್ಟರೆ, ತಮ್ಮ ಭವಿಷ್ಯದ ಶ್ರೀಮಂತಿಕೆಗೇ ಅಪಾಯ ಎಂದು ಅವರು ಭಾವಿಸಿಕೊಂಡಿದ್ದಾರೆ.

ಜಾಗತಿಕ ವ್ಯಾಪಾರೀ ಸಂಘಟನೆಯ ಸಾರ್ವತ್ರಿಕ ಕೌನ್ಸಿಲ್ ಬುಧವಾರ ಸಭೆ ಸೇರುತ್ತಿದೆ. ಆ ಸಮಯದಲ್ಲಿ ಬೈಡೆನ್ ಅವರ ಆಸೆಗೆ ಈಡಾಗಿಬಿಡಬಾರದು. ಅವರಿಗೆ ಸಂಘಟನೆಯ ಮೇಲೆ ತುಂಬಾ ಪ್ರಭಾವವಿದೆ. ಅದನ್ನು ಬಳಸಿಕೊಂಡು ಉಳಿದ ಶ್ರೀಮಂತ ದೇಶಗಳನ್ನು ಟ್ರಿಪ್ಸ್ನ ವಿನಾಯಿತಿಗೆ ಬೆಂಬಲಿಸುವಂತೆ ಮನವೊಲಿಸಬೇಕು.

ಭಾರತ ಮತ್ತು ಸೌತ್ ಆಫ್ರಿಕಾ ಕಳೆದ ಅಕ್ಟೋಬರಿನಲ್ಲಿ ಟ್ರಿಪ್ಸ್ ನಿರ್ಬಂಧವನ್ನು ಸಡಿಲಿಸುವ ಸಲಹೆಯನ್ನು ಮುಂದಿಟ್ಟಾಗ ಅದನ್ನು ಔಷಧಿ ಕೈಗಾರಿಕೆಗಳು ವಿರೋಧಿಸಿದವು. ಮಾರ್ಚ್ 31ರಂದು ಫೈಜರ್ ಕಂಪೆನಿಯ ಆಲ್ಬರ್ಟ್ ಬೌರಿಯಾ ಹಾಗೂ ಆಸ್ಟ್ರಜೆನಿಕಾ ಕಂಪೆನಿಯ ಪ್ಯಾಸ್ಕಲ್ ಸೋರಿಯಟ್ ಸೇರಿದಂತೆ ಔಷಧಿ ಕೈಗಾರಿಕೆಗಳ ನಿರ್ವಹಣಾ ಅಧಿಕಾರಿಗಳು ಬೈಡೆನ್‌ಗೆ ಪತ್ರ ಬರೆದು ಅದನ್ನು ವಿರೋಧಿಸುವಂತೆ ಕೇಳಿಕೊಂಡಿದ್ದಾರೆ. ಟ್ರಂಪ್ ಆಡಳಿತದಲ್ಲಿ ಟ್ರಿಪ್ಸ್ ರಿಯಾಯಿತಿ ನೀಡುವುದನ್ನು ವಿರೋಧಿಸಲಾಗಿತ್ತು.ಬೈಡೆನ್ ಕೂಡ ಅದೇ ನಿಲುವನ್ನು ಮುಂದುವರಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ. ಅವರ ಪ್ರಕಾರ ಈ ವರ್ಷದ ಕೊನೆಯ ವೇಳೆಗೆ 10 ಬಿಲಿಯನ್ ಕೋವಿಡ್-19 ಲಸಿಕೆಗಳು ತಯಾರಾಗುತ್ತವೆ. ಅದು “ಜಗತ್ತಿನಲ್ಲಿ ಲಸಿಕೆ ಬೇಕಾಗಿರುವ ಎಲ್ಲರಿಗೂ ಸಾಕಾಗುತ್ತದೆ”.

ಕೈಗಾರಿಕೆಗಳ ನಿಲುವಿನ ವಿರೋಧಿಗಳಾದ ಜೋಸೆಫ್ ಸ್ಟಿಗ್ಲಿಟ್ಜ್ ಮತ್ತು ಜಯತಿ ಘೋಷ್ ಇದನ್ನು ಒಪ್ಪುವುದಿಲ್ಲ. ಪಾಶ್ಚಿಮಾತ್ಯ ಕಂಪೆನಿಗಳು ತಯಾರಿಸುತ್ತಿರುವ ಲಸಿಕೆಗಳು ತುಂಬಾ ಕಡಿಮೆ. ಜಾಗತಿಕ ಮಟ್ಟದಲ್ಲಿ ಎಲ್ಲರಿಗೂ ಲಸಿಕೆಗಳನ್ನು ನೀಡಲಾಗದಿರುವುದಕ್ಕೆ ಅದೇ ನಿಜವಾದ ಕಾರಣ.
ಇಂದಿಗೂ ಆಸ್ಟ್ರಜೆನೆಕಾ, ಫೈಜರ್, ಮಾಡರ್ನ್ ಮೊದಲಾದ ಕಂಪೆನಿಗಳು ಅಮೇರಿಕೆಯಂತಹ ಶ್ರೀಮಂತ ರಾಷ್ಟ್ರಗ ಳಿಗೆ ತಾವು ಮಾಡಿಕೊಂಡಿರುವ ಒಪ್ಪಂದವನ್ನು ಪೂರೈಸಲು ಹೆಣಗಾಡುತ್ತಿವೆ. ಆ ದೇಶಗಳು ತಮಗೆ ಬೇಕಾದಕ್ಕಿಂತ ಹೆಚ್ಚಿನ ಪ್ರಮಾಣದ ಲಸಿಕೆಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಲು ಬಯಸುತ್ತಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಅಭೀವೃದ್ಧಿಶೀಲ ರಾಷ್ಟ್ರಗಳಿಗೆ 2024ರ ಕೊನೆಯ ವೇಳೆಗಷ್ಟೇ ಲಸಿಕೆಗಳು ಸಿಗುವುದಕ್ಕೆ ಸಾಧ್ಯ. ಪ್ರಕ್ರಿಯೆ ಹೀಗೆ ನಿಧಾನವಾಗಿಯೇ ಮುಂದುವರಿದರೆ ಇನ್ನೊಂದಿಷ್ಟು ಮಿಲಿಯನ್ ಜನ ಸೋಂಕಿಗೆ ಒಳಗಾಗುತ್ತಾರೆ ಹಾಗೂ ಸಾಯುತ್ತಾರೆ. ಈಗಾಗಲೇ 152 ಮಿಲಿಯನ್ ಜನ ಸೋಂಕಿಗೆ ಒಳಗಾಗಿದ್ದಾರೆ, 3.2 ಮಿಲಿಯನ್ ಜನ ಸತ್ತಿದ್ದಾರೆ.

ಈಗ ಟ್ರಿಪ್ಸ್ ಅನ್ನುವುದು ಬೃಹತ್ ಔಷಧಿ ಕಂಪನಿಗಳು ಹಾಗೂ ಜಾಗತಿಕ ಸಾರ್ವಜನಿಕ ಆರೋಗ್ಯ ಪ್ರತಿಪಾದಕರ ನಡುವಿನ ಯುದ್ಧಭೂಮಿಯಾಗಿದೆ. ಅದರಲ್ಲಿ ಆಶ್ಚರ್ಯವೇನಿಲ್ಲ. ಡಬ್ಲ್ಯುಟಿಒ 1995ರಲ್ಲಿ ಅಸ್ತಿತ್ವಕ್ಕೆ ಬಂದಾಗ ಅದರ ಒಪ್ಪಂದಗಳನ್ನು ರೂಪಿಸುವುದರಲ್ಲಿ ಈ ಬೃಹತ್ ಕೈಗಾರಿಕೆಗಳ ಪಾತ್ರ ಪ್ರಧಾನವಾಗಿತ್ತು. ಯಾವುದೇ ದೇಶ ಡಬ್ಲ್ಯುಟಿಒ ಸದಸ್ಯರಾಗುವುದಕ್ಕೆ 60 ಪ್ರತ್ಯೇಕ ಒಪ್ಪಂದಗಳಿಗೆ ಸಹಿ ಮಾಡಬೇಕಿತ್ತು. ಹಲವು ದೇಶಗಳು ಟ್ರಿಪ್ಸ್ ಬಗ್ಗೆ ಅನುಮಾನವಿದ್ದಾಗಲೂ ಬೇರೆ ದಾರಿ ಇಲ್ಲದೆ ಒಪ್ಪಿಗೆ ನೀಡಿದ್ದವು.

ರುವಾಂಡ ಅಥವಾ ಇಂಡೋನೆಷಿಯಾ ಅಂತಹ ದೇಶಗಳಿಗೆ ಡಬ್ಲ್ಯುಟಿಒನ ರಕ್ಷಣೆ ಬೇಕಿತ್ತು. ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಸಂದರ್ಭದಲ್ಲಿ ವಿವಾದವಾದಾಗ ಉಳಿದ ದೇಶಗಳು ಈ ದೇಶಗಳ ಮೇಲೆ ಸಿಕ್ಕಾಪಟ್ಟೆ ಸುಂಕ ಹೇರುವ, ವ್ಯಾಪಾರ ಬಹಿಷ್ಕರಿಸುವ ಇತ್ಯಾದಿ ದಂಡನಾ ಕ್ರಮಗಳನ್ನು ವಿಧಿಸುವ ಸಾಧ್ಯತೆಯಿತ್ತು.

ಡಬ್ಲ್ಯುಟಿಒ ಹಾಗೂ ಟ್ರ‍್ರಿಪ್ಸ್ ಅಸ್ತಿತ್ವಕ್ಕೆ ಬರುವ ಫೈಜರ್ ಮತ್ತು ಜಾನ್ಸನ್ ಅಂಡ್ ಜಾನ್ಸನ್ ಅಂತಹ ಕಂಪೆನಿಗಳಿಗೆ ನಿರ್ಬಂಧಕ ಬೌದ್ಧಿಕ ಆಸ್ತಿ ಹಕ್ಕುಗಳ ಕಾಯ್ದೆಯ ರಕ್ಷಣೆಯಿತ್ತು. ಟ್ರಿಪ್ಸ್ ಮೂಲಕ ಅವರು ಅದೇ ಮಾದರಿಯ ಮಿತಿಗಳನ್ನು ಅಭಿವೃದ್ಧೀಶೀಲ ರಾಷ್ಟ್ರಗಳ ಮೇಲೂ ವಿಧಿಸುವ ಪ್ರಯತ್ನ ಮಾಡಿದ್ದಾರೆ. ಆ ದೇಶಗಳಲ್ಲಿ ಕಾನೂನು ಹೆಚ್ಚು ಉದಾರವಾಗಿತ್ತು. ಈ ಬೃಹತ್ ಕಂಪೆನಿಗಳು ತಯಾರಿಸುವ ಔಷಧಿಗಳ ಮಾದರಿಯ ಔಷಧಿಗಳನ್ನು ತಾವೇ ತಯಾರಿಸಿಕೊಳ್ಳುವುದಕ್ಕೆ ಕಾನೂನಿನಲ್ಲಿ ಅವಕಾಶವಿತ್ತು. ಆಗ ಅದು ಹೆಚ್ಚು ಅಗ್ಗವಾಗಿ ಸಿಗುತ್ತಿತ್ತು.

ಟ್ರಿಪ್ಸ್ ಪರಿಸ್ಥಿತಿಯನ್ನು ತಿರುಗುಮುರುಗು ಮಾಡಿತು. ಅಭಿವೃದ್ಧೀಶೀಲ ರಾಷ್ಟ್ರಗಳಲ್ಲಿ ಈ ಕಂಪೆನಿಗಳ ಔಷಧಿಗಳ ತಯಾರಿಕೆ ವಿಧಾನ ಸಿಗುವ ಪ್ರಕ್ರಿಯೆ ನಿಧಾನವಾಯಿತು. ಈ ದೇಶಗಳಲ್ಲಿ ಅನ್ವೇಷಣೆ ನಿಂತಿತು. ಔಷಧಿಗಳ ಬೆಲೆ ಏರಿತು.

ಡಬ್ಲ್ಯುಟಿಒ ಸಭೆ ಸೇರುವ ದಿನ ಹತ್ತಿರವಾಗುತ್ತಿದ್ದಂತೆ, ಈ ಕೈಗಾರಿಕೆಗಳು ತಮ್ಮ ನಿಲುವನ್ನು ಹೆಚ್ಚು ತೀವ್ರಗೊಳಿಸಿವೆ. ಟ್ರಿಪ್ಸ್ ಕಾನೂನನ್ನು ಸಡಿಲಗೊಳಿಸುವುದನ್ನು ಬಲವಾಗಿ ವಿರೋಧಿಸುತ್ತಿವೆ. ಪ್ರಮುಖ ವ್ಯಾಪಾರೀ ಸಂಘಗಳಾದ ಬಯೋಟಕ್ನಾಲಜಿ ಇನ್ನೊವೇಷನ್ ಸಂಘಟನೆಯ ಅಧ್ಯಕ್ಷ ದಿ ಎಕಾನಮಿಸ್ಟ್ ಪತ್ರಿಕೆಯಲ್ಲಿ ಮೈಕೆಲ್ ಮಿಷೆಲ್ ಮ್ಯಾಕ್‌ಮರಿ ಹೀತ್, ಕಾನೂನನ್ನು ಸಡಿಲಗೊಳಿಸಿದರೆ, ಮುಂದೆ ಆರೋಗ್ಯಕ್ಕೆ ಸಂಬಂಧಿಸಿದಂತೆ ತುರ್ತುಪರಿಸ್ಥಿತಿ ಬಂದಾಗ ಪರಿಹಾರಗಳನ್ನು ಕಂಡುಕೊಳ್ಳುವುದಕ್ಕೆ ಯಾವುದೇ ಉತ್ತೇಜನವೂ ಇರುವುದಿಲ್ಲ ಎಂದಿದ್ದಾರೆ. ‘ಸ್ವ ಹಿತಾಸಕ್ತಿಯ’ ದೇಶಗಳು ಈ ಪಿಡುಗಿನ ಸಂದರ್ಭವನ್ನು ಬಳಸಿಕೊಂಡು ಅಮೇರಿಕ ಹಾಗೂ ಐರೋಪ್ಯ ದೇಶಗಳು ಕಂಡುಹಿಡಿದಿರುವ ತಂತ್ರಜ್ಞಾನವನ್ನು ಕಬಳಿಸಲು ಪ್ರಯತ್ನಿಸುತ್ತಿವೆ ಎಂಬುದು ಆಕೆಯ ಆರೋಪ. ಫೈಜರ್ ಹಾಗೂ ಮಾಡರ್ನ್ ಕಂಪೆನಿಗಳ ಎಂಆರ್‌ಎನ್‌ಎ ಆಧಾರಿತ ಲಸಿಕೆಗಳ ಜೈವಿಕ ಆಯುಧಗಳ ಸಾಧ್ಯತೆಯನ್ನು ಈ ದೇಶಗಳು ಬಳಸಿಕೊಳ್ಳಬಹುದು ಎಂದು ಸೂಚಿಸಿದ್ದಾರೆ. ಆದರೆ ಇವೆಲ್ಲಾ ಪೊಳ್ಳು ಹೇಳಿಕೆಗಳು ಎಂದು ಪರಿಣಿತರುಗಳು ಹೇಳಿದ್ದಾರೆ.

ದಾರಿತಪ್ಪಿಸುವ ಈ ವಾದಗಳು ಕೈಗಾರಿಕೆಯ ನಿಲುವನ್ನು ಸ್ಪಷ್ಟಪಡಿಸುತ್ತವೆ. ಈ ಕಂಪೆನಿಗಳಿಗೆ ದೀರ್ಘಕಾಲದಿಂದ ಪೇಟೆಂಟ್ ರಕ್ಷಣೆ ಸಿಕ್ಕಿದೆ. ಹೆಚ್ಚಿನ ಬೆಲೆಗೆ ಉತ್ಪನ್ನಗಳನ್ನು ಮಾರಿಕೊಂಡು ಬಹು ದೀರ್ಘಕಾಲದಿಂದ ಲಾಭ ಮಾಡಿಕೊಂಡು ಬಂದಿದ್ದಾರೆ. ಇದರಿಂದ ಅವರಿಗೆ ಪ್ರಬಲವಾದ ಏಕಸ್ವಾಮ್ಯ ಸಾಧ್ಯವಾಗಿದೆ. ಈ ಪ್ರವೃತ್ತಿ ಅನ್ವೇಷಣೆಯನ್ನು ಉತ್ತೇಜಿಸುವುದಿಲ್ಲ. ಹತ್ತಿಕ್ಕುತ್ತದೆ. ಮೊಟಕುಗೊಳಿಸುತ್ತವೆ.

ಒಂದೇ ಒಂದು ಉತ್ಪನ್ನಕ್ಕೆ ಅದೂ ತಾತ್ಕಾಲಿಕವಾಗಿ ಕಾನೂನನ್ನು ರದ್ದುಗೊಳಿಸುವುದರಿಂದ ದೊಡ್ಡ ಹಾನಿಯೇನೂ ಆಗುವುದಿಲ್ಲ ಅನ್ನುವುದನ್ನು ಒಪ್ಪಿಕೊಳ್ಳವುದಕ್ಕೆ ಔಷಧ ಕಂಪೆನಿಗಳು ತಯಾರಿಲ್ಲ. ಈ ವರ್ಷ ಫೈಜರ್ 15 ಬಿಲಿಯನ್ ಡಾಲರುಗಳ ಮೌಲ್ಯದ ಲಸಿಕೆಗಳನ್ನು ಮಾರುವ ನಿರೀಕ್ಷೆಯಿದೆ. ಅದರಿಂದ ಶೇಕಡ 25ರಿಂದ ಶೇಕಡ 30ರವರೆಗೆ ಲಾಭ ಸಿಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಕೋವಿಡ್-19 ಲಸಿಕೆಯೊಂದರಿಂದಲೇ 4 ಬಿಲಿಯನ್ ಡಾಲರ್ ಲಾಭವಾಗಬಹುದು. ಅಷ್ಟೊಂದು ಬೇಗ ಲಸಿಕೆಗಳನ್ನು ತಯಾರಿಸಿದ್ದಕ್ಕೆ ಕಂಪೆನಿಗಳನ್ನು ಶ್ಲಾಘಿಸಬೇಕು. ಆದರೆ ಸರ್ಕಾರಗಳು ಉದಾರವಾಗಿ ಸಬ್ಸಿಡಿ ನೀಡದಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ. ಅಮೇರಿಕೆಯೊಂದೇ 6 ಪ್ರಮುಖ ವ್ಯಾಕ್ಸಿನ್ ತಯಾರಕ ಕಂಪೆನಿಗಳಿಗೆ ಇದೇ ಉದ್ದೇಶಕ್ಕಾಗಿ 12 ಬಿಲಿಯನ್ ಡಾಲರುಗಳನ್ನು ನೀಡಿದೆ.

ಡಬ್ಲ್ಯುಟಿಒನಲ್ಲಿ ಒಮ್ಮತಕ್ಕೆ ಬರುವುದಕ್ಕೆ ಸಾಧ್ಯವಾಗದೆ ಹೋದರೆ, ನಿಯಮಗಳ ರದ್ದತಿಗೆ ಡಬ್ಲ್ಯುಟಿಒನ 164 ಸದಸ್ಯರಲ್ಲಿ ದೊಡ್ಡ ಬಹುಮತ ಬೇಕಾಗುತ್ತದೆ.
ಈಗ ಸಧ್ಯಕ್ಕೆ 100 ಜನ ಸದಸ್ಯರು ಮನವಿಯನ್ನು ಬೆಂಬಲಿಸುತ್ತಿದ್ದಾರೆ. ಅದರಲ್ಲಿ 60 ದೇಶಗಳು ಮನವಿಯ ಅಧಿಕೃತ ಪ್ರಾಯೋಜಕರು. ಸಂಸ್ಥೆಯ ಮೇಲೆ ವಾಷಿಂಗ್ಟನಿಗೆ ವಿಟೋ ಮಾಡುವ ಅಧಿಕಾರ ಇದೆ. ಹಾಗಾಗಿ ಬೈಡೆನ್ ಮನವಿಯನ್ನು ಬೆಂಬಲಿಸಿದರೆ ಅದರ ಶಕ್ತಿ ತುಂಬಾ ಹೆಚ್ಚುತ್ತದೆ.

ಮನವಿಯನ್ನು ಬೆಂಬಲಿಸಿದರೆ ರಾಜಕೀಯವಾಗಿ ತೊಂದರೆಯಾಗುತ್ತದೆ ಎಂದು ಬೈಡೆನ್ ಆತಂಕಪಡಬೇಕಾಗಿಲ್ಲ. ಇತ್ತೀಚಿನ ಸಮೀಕ್ಷೆಯ ಪ್ರಕಾರ ಅಮೇರಿಕೆಯ ಶೇಕಡ 60ರಷ್ಟು ಮತದಾರರು ಟ್ರಿಪ್ಸ್ ಕಾಯ್ದೆಯನ್ನು ರದ್ದುಮಾಡುವುದರ ಪರವಾಗಿದ್ದಾರೆ. ಕೇವಲ ಶೇಕಡ 28ರಷ್ಟು ಜನ ಮಾತ್ರ ಅದನ್ನು ವಿರೋಧಿಸಿದ್ದಾರೆ. ಜೊತೆಗೆ ಬೆಲೆ ಯಾವಾಗಲೂ ಹೆಚ್ಚಿಗೆ ಇರಬೇಕೆಂದು ಬಯಸುವ ಔಷಧಿ ಕಂಪೆನಿಗಳ ವಿಶ್ವಾಸಾರ್ಹತೆ ತುಂಬಾ ಕಡಿಮೆ. ಅದು ಅಮೇರಿಕೆಯ ಕೈಗಾರಿಕೆಗಳಲ್ಲಿ ಅತ್ಯಂತ ಕನಿಷ್ಠ ವಿಶ್ವಾಸಾರ್ಹ ವಲಯ. ಇದನ್ನು ಬೈಡೆನ್ ನೆನಪಿಟ್ಟುಕೊಳ್ಳಬೇಕು.

ಬೈಡೆನ್ ಮುಂದಿರುವ ಆಯ್ಕೆ ಸ್ಪಷ್ಟ. ಪ್ರಬಲವಾದ ಬಹುರಾಷ್ಟ್ರೀಯ ಕಾರ್ಪೋರೇಷನ್ನುಗಳ ಹಿತಾಸಕ್ತಿಯನ್ನು ಕಾಪಾಡುವ ಪೇಟೆಂಟ್ ರಾಜ್ಯವನ್ನು ರಕ್ಷಿಸುವುದು ಅಥವಾ ತಮ್ಮನ್ನು ರಕ್ಷಿಸಿಕೊಳ್ಳುವುದಕ್ಕೆ ಸಾಧ್ಯವಾಗುವಂತೆ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಸಬಲಗೊಳಿಸುವುದು. ಬುಧವಾರ ಬೈಡೆನ್ನಿಗೆ ಸೂಕ್ತ ನಿಲುವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಇದೆಯೋ ಇಲ್ಲವೋ ಎನ್ನುವುದು ಜಗತ್ತಿಗೆ ತಿಳಿಯಲಿದೆ.

* ವಾಲ್ಡನ್ ಬೆಲ್ಲೊ

ಕೃಪೆ: ಇಂಟರ್‌ನ್ಯಾಷನಲ್ ನ್ಯೂಯಾರ್ಕ್ ಟೈಮ್ಸ್

ಕನ್ನಡಕ್ಕೆ: ವೇಣುಗೋಪಾಲ್ ಟಿ.ಎಸ್


ಇದನ್ನೂ ಓದಿ: ನೀವು ಹೂಗಳನ್ನು ಕತ್ತರಿಸಬಹುದು, ವಸಂತವನ್ನು ತಡೆಯಲಾಗದು..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮಹಿಳೆಯನ್ನು ಗರ್ಭಧಾರಣೆ ಪೂರ್ಣಗೊಳಿಸುವಂತೆ ಒತ್ತಾಯಿಸಲು ಸಾಧ್ಯವಿಲ್ಲ’: ಅಪ್ರಾಪ್ತೆಗೆ 30 ವಾರಗಳ ಗರ್ಭಧಾರಣೆ ಅಂತ್ಯಗೊಳಿಸಲು ಸುಪ್ರೀಂ ಅನುಮತಿ

ನವದೆಹಲಿ: 17 ವರ್ಷದ ಬಾಲಕಿಯ 30 ವಾರಗಳ ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಮುಕ್ತಾಯಗೊಳಿಸುವಂತೆ ನಿರ್ದೇಶಿಸಿದ ಸುಪ್ರೀಂ ಕೋರ್ಟ್, ನ್ಯಾಯಾಲಯಗಳು ಮಹಿಳೆಯನ್ನು, ಅಪ್ರಾಪ್ತ ವಯಸ್ಕಳನ್ನು ಹೊರತುಪಡಿಸಿ, ಗರ್ಭಧಾರಣೆಯನ್ನು ಮುಂದುವರಿಸಲು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಶುಕ್ರವಾರ ಹೇಳಿದೆ. ನ್ಯಾಯಮೂರ್ತಿಗಳಾದ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಶಿಯಾ ಧಾರ್ಮಿಕ ಕೇಂದ್ರದಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಕನಿಷ್ಠ 30 ಸಾವು, 160 ಕ್ಕೂ ಹೆಚ್ಚು ಜನರಿಗೆ ಗಾಯ

ಇಸ್ಲಾಮಾಬಾದ್: ಶುಕ್ರವಾರ ಇಸ್ಲಾಮಾಬಾದ್‌ನ ಶಿಯಾ ಧಾರ್ಮಿಕ ಕೇಂದ್ರದಲ್ಲಿ ಪ್ರಾರ್ಥನೆ ವೇಳೆ ನಡೆದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 30 ಜನರು ಸಾವನ್ನಪ್ಪಿ, 160 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.  ಪಾಕಿಸ್ತಾನ ರಾಜಧಾನಿಯ ಶೆಹಜಾದ್ ಟೌನ್ ಪ್ರದೇಶದ...

ನಾಳೆ ದೊರೈರಾಜ್‌ ಅವರ ‘ನಮ್ಮ ಹಟ್ಟಿ’ ಆತ್ಮಕಥೆ ಬಿಡುಗಡೆ

ದಲಿತ ಚಳವಳಿಯ ಹಿರಿಯ ಮುಖಂಡರಾದ ತುಮಕೂರಿನ ಕೆ.ದೊರೈರಾಜ್‌ ಅವರ 'ನಮ್ಮಹಟ್ಟಿ' ಆತ್ಮಕಥೆ ಶನಿವಾರ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಬಿಡುಗಡೆಯಾಗಲಿದೆ. ಸರ್ಕಾರಿ ಅಧಿಕಾರಿಯಾಗಿದ್ದ ದೊರೈರಾಜ್‌ ಅವರು, ತಮ್ಮ ವಿದ್ಯಾರ್ಥಿ ಜೀವನದಿಂದಲೇ ದಲಿತ ಚಳವಳಿಯಲ್ಲಿ ಗುರುತಿಸಿಕೊಂಡವರು....

‘ತಿರುಪತಿ ಲಡ್ಡುಗಳಲ್ಲಿ ರಾಸಾಯನಿಕಗಳಿಂದ ಮಾಡಿದ ತುಪ್ಪ ಬಳಸಲಾಗುತ್ತಿತ್ತು’: ವೈಎಸ್ಆರ್ಸಿಪಿ ಸರ್ಕಾರದ ವಿರುದ್ಧ ಆಂಧ್ರ ಸಿಎಂ ಆರೋಪ

ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡುಗಳನ್ನು ತುಪ್ಪ ಬಳಸಿ ತಯಾರಿಸಲಾಗುತ್ತಿತ್ತು, ಅದರಲ್ಲಿ ಬಾತ್ ರೂಂ(ಸ್ನಾನಗೃಹಗಳನ್ನು) ಸ್ವಚ್ಛಗೊಳಿಸಲು ಬಳಸುವ ರಾಸಾಯನಿಕಗಳನ್ನು ಬೆರೆಸಲಾಗುತ್ತಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಶುಕ್ರವಾರ ಆರೋಪಿಸಿದ್ದಾರೆ. ಕರ್ನೂಲು...

ಜಲಂಧರ್‌ನ ಗುರುದ್ವಾರದ ಹೊರಗೆ ಎಎಪಿ ನಾಯಕ ಲಕ್ಕಿ ಒಬೆರಾಯ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ದುಷ್ಕರ್ಮಿಗಳು

ಪಂಜಾಬ್‌ನ ಜಲಂಧರ್‌ನಲ್ಲಿ ಶುಕ್ರವಾರ ಹಾಡಹಗಲೇ ಎಎಪಿ ನಾಯಕ ಲಕ್ಕಿ ಒಬೆರಾಯ್ ಅವರನ್ನು ಮಾಡೆಲ್ ಟೌನ್ ಪ್ರದೇಶದ ಗುರುದ್ವಾರದ ಬಳಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಮಾಡಿದ್ದಾರೆ.  ಈ ಘಟನೆ ಬೆಳಿಗ್ಗೆ ನಡೆದಿದ್ದು, ಗುಂಡೇಟಿನಿಂದ ಗಾಯಗೊಂಡಿದ್ದ ಅವರನ್ನು...

ದೆಹಲಿ: ಜಲ ಮಂಡಳಿ ತೋಡಿದ ಗುಂಡಿಗೆ ಬಿದ್ದು ಬೈಕ್ ಸವಾರ ಸಾವು; ತನಿಖೆಗೆ ಆದೇಶಿಸಿದ ಸರ್ಕಾರ 

ಪಶ್ಚಿಮ ದೆಹಲಿಯ ಜನಕಪುರಿ ಪ್ರದೇಶದಲ್ಲಿ ದೆಹಲಿ ಜಲ ಮಂಡಳಿ (ಡಿಜೆಬಿ) ನಿರ್ಮಾಣ ಕಾರ್ಯಕ್ಕಾಗಿ ಅಗೆದ ಹೊಂಡಕ್ಕೆ ಬೈಕ್ ಬಿದ್ದು ಸವಾರನೊಬ್ಬ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಘಟನೆಯ ಬಗ್ಗೆ ತನಿಖೆಗೆ ದೆಹಲಿ...

2025ರ ಬಿಹಾರ ವಿಧಾನಸಭಾ ಚುನಾವಣೆ ಪ್ರಶ್ನಿಸಿ ಜನ ಸುರಾಜ್ ಪಕ್ಷದಿಂದ ಅರ್ಜಿ: ವಿಚಾರಣೆ ನಿರಾಕರಿಸಿದ ಸುಪ್ರೀಂ ಕೋರ್ಟ್ 

2025 ರ ಬಿಹಾರ ವಿಧಾನಸಭಾ ಚುನಾವಣೆಯ ನಡವಳಿಕೆ ಮತ್ತು ಫಲಿತಾಂಶವನ್ನು ಪ್ರಶ್ನಿಸಿ ಪ್ರಶಾಂತ್ ಕಿಶೋರ್ ನೇತೃತ್ವದ ಜನ್ ಸುರಾಜ್ ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ರಾಜಕೀಯ...

ಗುಜರಾತ್‌| ನರ್ಸಿಂಗ್ ಓದುತ್ತಿದ್ದ ದಲಿತ ವಿದ್ಯಾರ್ಥಿ ಆತ್ಮಹತ್ಯೆಗೆ ಪ್ರಚೋದನೆ ಆರೋಪ; ಪ್ರಿನ್ಸಿಪಲ್ ಸೇರಿ ಐವರ ವಿರುದ್ಧ ಪ್ರಕರಣ ದಾಖಲು

ಗುಜರಾತ್‌ನ ಖೇಡಾ ಜಿಲ್ಲೆಯ ನರ್ಸಿಂಗ್ ಕಾಲೇಜಿನ 19 ವರ್ಷದ ದಲಿತ ವಿದ್ಯಾರ್ಥಿಯೊಬ್ಬ, "ಪುರಾವೆಗಳಿಲ್ಲದೆ ಮೇಡಂ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ" ಎಂದು ಚಿತ್ರಹಿಂಸೆ ಉಲ್ಲೇಖಿಸುವ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾದ...

1.50 ಕೋಟಿ ರೂ. ಐಟಿ ದಂಡ ಪ್ರಶ್ನಿಸಿ ಟಿವಿಕೆ ಮುಖ್ಯಸ್ಥ ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್ 

ಚೆನ್ನೈ: 2015–16ರ ಮೌಲ್ಯಮಾಪನ ವರ್ಷದಲ್ಲಿ ಆದಾಯ ಬಹಿರಂಗಪಡಿಸದಿದ್ದಕ್ಕಾಗಿ 1.50 ಕೋಟಿ ರೂ. ದಂಡ ವಿಧಿಸಿದ ಆದಾಯ ತೆರಿಗೆ ಇಲಾಖೆಯ ಆದೇಶವನ್ನು ಪ್ರಶ್ನಿಸಿ ನಟ-ರಾಜಕಾರಣಿ ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಆದಾಯ...

ಮೇಘಾಲಯ ಗಣಿ ಸ್ಫೋಟ: ಸಾವನ್ನಪ್ಪಿದ ಮೂವರು ಅಸ್ಸಾಂ ಮೂಲದ ಕಾರ್ಮಿಕರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ

ಗುವಾಹಟಿ: ಮೇಘಾಲಯದ ಪಕ್ಕದ ಕಲ್ಲಿದ್ದಲು ಗಣಿ ಸ್ಫೋಟದಲ್ಲಿ ಸಾವನ್ನಪ್ಪಿದ ಅಸ್ಸಾಂ ರಾಜ್ಯದ ಮೂವರು ಕಾರ್ಮಿಕರ ಕುಟುಂಬಗಳಿಗೆ  ಸರ್ಕಾರ ತಲಾ 5 ಲಕ್ಷ ರೂ.ಗಳ ಪರಿಹಾರ ಘೋಷಿಸಿದೆ.  ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುರುವಾರ, ಸಂತ್ರಸ್ತರು...