Homeಅಂಕಣಗಳುಬಹುಜನ ಭಾರತ; ಈ ಜಾತಿ ದಾಂಧಲೆ ತೆಂಡೂಲ್ಕರ್ ಮನೆ ಮುಂದೆ ನಡೆದಿದ್ದರೆ!

ಬಹುಜನ ಭಾರತ; ಈ ಜಾತಿ ದಾಂಧಲೆ ತೆಂಡೂಲ್ಕರ್ ಮನೆ ಮುಂದೆ ನಡೆದಿದ್ದರೆ!

- Advertisement -
- Advertisement -

ಮಹಿಳಾ ಹಾಕಿ ಒಲಿಂಪಿಕ್ಸ್ ತಾರೆ ವಂದನಾ ಕಟಾರಿಯಾ ಮನೆ ಮುಂದೆ ದಲಿತವಿರೋಧಿ ದಾಂಧಲೆ ನಡೆಸಿದ ಜಾತಿವಾದಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ದೇಶದಲ್ಲಿ ದಲಿತ ದ್ವೇಷ ಮಾಡಿ ದಕ್ಕಿಸಿಕೊಳ್ಳುವುದು ಬಲಿಷ್ಠ ಜಾತಿಗಳಿಗೆ ಅದೆಷ್ಟು ಸಲೀಸು ಎಂಬ ಕಠೋರ ಸತ್ಯವನ್ನು ಈ ಪ್ರಕರಣ ಪ್ರತಿಫಲಿಸಿದೆ.

ಕಳಪೆ ಪ್ರದರ್ಶನ ನೀಡಿರುವ ಅದೆಷ್ಟು ಬಲಿಷ್ಠ ಜಾತಿಗಳ ಕ್ರೀಡಾ ತಾರೆಯರ ಮನೆಗಳ ಮುಂದೆ ಜಾತಿಯ ಹೆಸರು ಹಿಡಿದು ಹಳಿದ ಉದಾಹರಣೆ ಇದೆ? ಇಂತಹ ನಿರ್ದಿಷ್ಟ ಬಲಿಷ್ಠ ಜಾತಿಯವರು ತಂಡದಲ್ಲಿ ಬಹಳ ಮಂದಿ ಇದ್ದಾರೆ… ಹೀಗಾಗಿಯೇ ಭಾರತದ ತಂಡ ಸೋತಿತು ಎಂಬ ಪ್ರತಿಭಟನೆ ನಡೆದಿದೆಯೇ? ಆರೋಗ್ಯವಂತ ಸಮಾಜ ಬೇಕೆಂದು ಬಯಸುವವರು ಯಾರೂ ಇಂತಹ ಪ್ರತಿಭಟನೆ ನಡೆಯಬೇಕೆಂದು ಬಯಸುವುದಿಲ್ಲ.

ವಂದನಾ ಮನೆಯ ಮುಂದೆ ನಡೆದ ದಲಿತ ದ್ವೇಷದ ವಿಕೃತಿಯನ್ನು ಖಂಡಿಸಿರುವ ಮಹಾಮಹಿಮರು ಯಾರಾದರೂ ಇದ್ದಾರೆಯೇ? ಅವರ ಬಾಯಿಗಳು ಸಾರಾಸಗಟಾಗಿ ಹೊಲಿದುಕೊಂಡಿರುವುದು ಯಾಕೆ? ಮೌನ
ಧರಿಸಿರುವುದು ಸಮ್ಮತಿಯ ಅಥವಾ ನಿರ್ಲಕ್ಷ್ಯದ ಲಕ್ಷಣ ಅಲ್ಲವೇ?

ಟೋಕಿಯೋ ಒಲಿಂಪಿಕ್ಸ್‌ನ ಮಹಿಳಾ ಹಾಕಿ ಸೆಮಿಫೈನಲ್ಸ್ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಭಾರತದ ಸೋಲಿಗೆ ದಲಿತರನ್ನು ದೂರಿದ್ದು ನಾಚಿಕೆಗೇಡು. ತಂಡದ ಪ್ರಮುಖ ಆಟಗಾರ್ತಿ ವಂದನಾ ಕಟಾರಿಯ ದಲಿತ ಜನಾಂಗಕ್ಕೆ ಸೇರಿದವರು. ಹರಿದ್ವಾರದ ರೋಶನಾಬಾದ್ ಗ್ರಾಮದ ವಾಸಿ. ತಂಡದ ಸೋಲಿನ ಕೆಲವೇ ತಾಸುಗಳಲ್ಲಿ ಆಕೆಯ ಮನೆಯ ಮುಂದೆ ಆಕೆಯ ಜಾತಿ ಹಿಡಿದು ಬೈಗುಳಗಳ ಕಿರುಚಾಟ ಕೇಳಿತು.

ಬಲಿಷ್ಠ ಜಾತಿಯ ಮೂವರು ಯುವಕರು ವಂದನಾ ಕಟಾರಿಯ ಕುಟುಂಬವನ್ನು ಹಳಿದು ಅಣಕಿಸಿ ಪಟಾಕಿ ಸಿಡಿಸಿ ಕುಣಿದಾಡಿದ್ದಾರೆ. ತಂಡದಲ್ಲಿ ಬಹಳ ಮಂದಿ ದಲಿತ ಆಟಗಾರ್ತಿಯರಿದ್ದ ಕಾರಣದಿಂದಲೇ ಭಾರತ ತಂಡ ಸೋತಿತು. ಹಾಕಿಯಲ್ಲಿ ಮಾತ್ರವಲ್ಲ ಎಲ್ಲ ಕ್ರೀಡೆಗಳಿಂದಲೂ ದಲಿತರನ್ನು ದೂರ ಇರಿಸಬೇಕೆಂದು ಅವಹೇಳನ ಮಾಡಿದ್ದಾರೆ.

ಇದೇ ಒಲಿಂಪಿಕ್ಸ್‌ನಲ್ಲಿ ತಂಡವನ್ನು ಕ್ವಾರ್ಟರ್ ಫೈನಲ್‌ಗೆ ತಲುಪಿಸಿದ್ದೇ ವಂದನಾ ಅವರ ಅದ್ಭುತ ಆಟ. ದಕ್ಷಿಣ ಆಫ್ರಿಕಾ ವಿರುದ್ಧದ ಆ ಪಂದ್ಯದಲ್ಲಿ ವಂದನಾ ಸತತ ಮೂರು ಗೋಲು ಬಾರಿಸಿದ್ದರು. ಭಾರತ ನಾಲ್ಕು ಗೋಲುಗಳನ್ನು ಮತ್ತು ದಕ್ಷಿಣ ಆಫ್ರಿಕಾ ಮೂರು ಗೋಲುಗಳನ್ನು ಗಳಿಸಿತ್ತು. ಒಲಿಂಪಿಕ್ಸ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಪ್ರಥಮ ಭಾರತೀಯಳೆಂಬ ದಾಖಲೆಯನ್ನು ವಂದನಾ ನಿರ್ಮಿಸಿದ್ದರು.

ಅರ್ಜೆಂಟೀನಾ ವಿರುದ್ಧ ಸೋತ ಪಂದ್ಯ ತೀವ್ರ ಸೆಣಸಿನದಾಗಿತ್ತು. ಭಾರತದ ತಂಡ ಸೋತದ್ದು ಒಂದು ಗೋಲಿನ ಅಂತರದಿಂದ. ಕಂಚಿನ ಪದಕಕ್ಕಾಗಿ ನಡೆದ ಮುಂದಿನ ಪಂದ್ಯದಲ್ಲಿ ಭಾರತದ ಈ ತಂಡ ಬ್ರಿಟನ್ ವಿರುದ್ಧ ವಿರೋಚಿತವಾಗಿ ಸೋತಿತು. ಈ ಪಂದ್ಯದಲ್ಲೂ ಮೂರನೆಯ ಗೋಲು ವಂದನಾ ಅವರದಾಗಿತ್ತು. ಆಕೆ ಭಾರತ ತಂಡದ ಸಾರ್ವಕಾಲಿಕ ಶ್ರೇಷ್ಠ ಫಾರ್ವರ್ಡ್ ಆಟಗಾರ್ತಿಯರಲ್ಲೊಬ್ಬರು.

ದೆಹಲಿಯ ಸ್ಮಶಾನವೊಂದರಲ್ಲಿ ಒಂಬತ್ತು ವರ್ಷದ ಹಾಲುಗಲ್ಲದ ದಲಿತ ಹೆಣ್ಣುಮಗುವನ್ನು ರೇಪ್ ಮಾಡಿ ಕೊಂದು ಸುಟ್ಟುಹಾಕಿದ ವಿಕೃತಿಯ ಬೆನ್ನಿಗೇ ವಂದನಾ ಕಟಾರಿಯ ಪ್ರಕರಣ ವರದಿಯಾಗಿದೆ. ಇಂತಹ ಸಾವಿರಾರು ಪ್ರಕರಣಗಳನ್ನು ಸದ್ದಿಲ್ಲದೆ ಹೂತುಹಾಕಲಾಗುತ್ತಿದೆ.

ದಲಿತ ದ್ವೇಷದ ಅಪರಾಧಗಳು, ದಮನ ದೌರ್ಜನ್ಯ ತಾರತಮ್ಯಗಳು ನಿತ್ಯ ಬದುಕಿನ ರಿವಾಜುಗಳಾಗಿ ಹೋಗಿವೆ. ಗ್ರಾಮಗಳಲ್ಲಿ ಅವರನ್ನು ಊರಹೊರಗಿನ ಹೊಲಗೇರಿಗಳಲ್ಲಿ ಇಡಲಾಗಿದೆ. ಪೇಟೆ ಪಟ್ಟಣ ನಗರಗಳಲ್ಲಿ ಅವರನ್ನು ಮನೋನಿರ್ಮಿತ ಹೊಲಗೇರಿಗಳಿಗೆ ಅಟ್ಟಲಾಗಿದೆ. ಮುಖ್ಯಧಾರೆಯ ಸಮಾಜವೆಂಬುದು ಅವರ ಪಾಲಿನ ಅಗೋಚರ ಕಾರಾಗೃಹ. ಎತ್ತರೆತ್ತರಕ್ಕೆ ಎದ್ದುನಿಂತಿರುವ ಬಗೆಬಗೆಯ ಅಸ್ಪೃಶ್ಯತೆಯ ತಡೆಗೋಡೆಗಳ ನಡುವೆ ಅವರು ವಿನಾಕಾರಣ ಕಳಂಕಿತ ಕೈದಿಗಳು.

ಈ ಅಮಾನುಷ ನಡವಳಿಕೆಯು ಭಾರತದ ಆತ್ಮವನ್ನು ಗಾಯಗೊಳಿಸಿದೆ. ಶತಮಾನಗಳ ಕೀವು ಮಡುಗಟ್ಟಿದೆ. ಈ ಗಾಯವನ್ನು ತೊಳೆದು ಮದ್ದು ತುಂಬಿ ಪಟ್ಟಿಕಟ್ಟುವುದು ಪೆಟ್ಟು ನೀಡುತ್ತಿರುವವರ ಕರ್ತವ್ಯ. ಆದರೆ ನಿರಾಕರಣೆ ನಿರ್ಲಕ್ಷ್ಯಗಳಲ್ಲಿ ಮುಳುಗಿಬಿಟ್ಟಿದ್ದಾರೆ ಅವರು. ಮದ್ದು ಅರೆಯುವ ಬದಲಿಗೆ ನಂಜು ಕಾರತೊಡಗಿದ್ದಾರೆ. ಉಪ್ಪು ಉಜ್ಜತೊಡಗಿದ್ದಾರೆ. ಭಾರತದ ಆತ್ಮದ ಗಾಯವು ತಮ್ಮ ಆತ್ಮಕ್ಕೆ ಅಂಟಿರುವ ವ್ಯಾಧಿ ಎಂಬುದನ್ನು ಕಾಣದೆ ಹೋಗಿದ್ದಾರೆ. ಖುದ್ದು ದಲಿತ ಮತ್ತು ಸ್ತ್ರೀದ್ವೇಷದ ಕೈದಿಗಳಾಗಿದ್ದಾರೆ. ದಲಿತ ಜನಕೋಟಿಯ ವಿಮೋಚನೆಯಲ್ಲಿ ತಮ್ಮ ಬಿಡುಗಡೆಯೂ ಆಡಗಿದೆ ಎಂಬ ನಿಜವನ್ನು ನಿರಾಕರಿಸತೊಡಗಿದ್ದಾರೆ.

ವಿನೋದ್ ಕಾಂಬ್ಳಿಯಂತಹ ಕ್ರಿಕೆಟಿಗನ ಪ್ರತಿಭೆ ಚಮ್ಮಾರನೆಂದು ಮೂದಲಿಕೆಗಳಲ್ಲಿ ಕಮರಿ ಹೋಯಿತು. ಕಾಂಬ್ಳಿ ಕಡಿಮೆ ರನ್ ಗಳಿಸಿದಾಗ ಜಾತಿ ಹಿಡಿದು ಹಂಗಿಸಿದ ಮನಸುಗಳು, ಬಲಿಷ್ಠ ಜಾತಿಗಳ ಆಟಗಾರರು ರನ್ ಗಳಿಗೆಯಲ್ಲಿ ಪರದಾಡಿ ಔಟ್ ಆದಾಗ ಅವರ ಜಾತಿಗಳನ್ನು ಹಿಡಿದು ಬೈದ ಉದಾಹರಣೆ ಹುಡುಕಿದರೂ ಕಾಣದು.

ಸುರೇಶ್ ರೈನಾ ಇತ್ತೀಚೆಗಷ್ಟೇ ಬ್ರಾಹ್ಮಣ್ಯದ ಗರಿಮೆ ಮೆರೆದರು. ’ಭಾರತ ರತ್ನ’ವೆನಿಸಿದ ಸಚಿನ್ ತೆಂಡೂಲ್ಕರ್ ತಾವು ಜನಿವಾರ ಧರಿಸಿದ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹೆಮ್ಮೆಯಿಂದ ಹಂಚಿಕೊಳ್ಳುತ್ತಾರೆ. ತೆಂಡೂಲ್ಕರ್ ಅವರನ್ನು ದೈವವೆಂದು ಆರಾಧಿಸಲಾಗುತ್ತದೆ. ಹ್ಯಾಟ್ರಿಕ್ ಗೋಲು ದಾಖಲೆ ಸ್ಥಾಪಿಸಿದ ವಂದನಾ ಅವರ ದಲಿತ ಜಾತಿ ಮೂಲವನ್ನು ಹಿಡಿದು ಹಳಿಯಲಾಗುತ್ತದೆ. ಖಡ್ಗಗಳನ್ನು ಹಿರಿದು ಝಳಪಿಸಿ ತಾನು ರಜಪೂತನೆಂದು ಮೆರೆಯುತ್ತಾರೆ ರವೀಂದ್ರ ಜಡೇಜ. ಈ ಹಿಂದೆ ತಮ್ಮೊಂದಿಗೆ ಆಡಿದ ಯಜುವೇಂದ್ರ ಚಹಲ್ ಎಂಬ ದಲಿತ ಕ್ರಿಕೆಟಿಗನನ್ನು ’ಭಂಗಿ’ (ಮಾನವ ಮಲ ಬಾಚಿ ಹೊತ್ತು ಸಾಗಿಸುವ ಕೆಲಸ ಮಾಡುವ ದಲಿತ ಜಾತಿ) ಎಂದು ಕರೆಯುತ್ತಾರೆ ಮತ್ತೊಬ್ಬ ಕ್ರಿಕೆಟ್ ತಾರೆ ಯುವರಾಜ್ ಸಿಂಗ್. ಟೀಕೆ ಎದುರಾದಾಗ ಈ ಜಾತಿಸೂಚಕದ ಸಾಧಕ ಬಾಧಕಗಳು ತನಗೆ ತಿಳಿದೇ ಇರಲಿಲ್ಲ ಎಂದು ವಾದಿಸುತ್ತಾರೆ.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಭಾರತ ತಂಡ ಸೇರಿ ಕ್ರಿಕೆಟ್ ಆಡಿದ ದಲಿತರು ಮತ್ತು ಹಿಂದುಳಿದವರು ಬೆರಳೆಣಿಕೆಯವರು-ಏಕನಾಥ ಸೋಲ್ಕರ್, ಕರ್ಸನ್ ಘಾವ್ರಿ, ವಿನೋದ್ ಕಾಂಬ್ಳಿ, ಭುವನೇಶ್ವರ ಕುಮಾರ್, ದೊಡ್ಡನರಸಯ್ಯ ಗಣೇಶ್, ವಿಜಯಕೃಷ್ಣ…

ತುಳಸಿ ಹೆಲೆನ್ ಎಂಬ ಬಾಕ್ಸರ್ ತನ್ನ ದಲಿತ ಹಿನ್ನೆಲೆಯ ಕುರಿತು ಮುಕ್ತವಾಗಿ ಮಾತಾಡಿ ಮೂಲೆಗುಂಪಾದಳು. ಲೇಡಿ ಮಹಮ್ಮದ್ ಆಲಿ ಎಂದು ಕರೆಸಿಕೊಂಡಿದ್ದ ಈಕೆ ಹೊಟ್ಟೆ ಹೊರೆಯಲು ಆಟೋ ಓಡಿಸಿದಳು. ಪೀಜ್ಜಾ ಡೆಲಿವರಿ ಮಾಡಿದಳು. ದಲಿತಳಾಗಿ ಹುಟ್ಟಿದ್ದಕ್ಕೆ ತಳದಿಂದ ಮೇಲೇಳುವ ಅವಕಾಶವೇ ನನಗಿಲ್ಲ ಎಂದು ಹಲುಬುವುದಷ್ಟೇ ಆಕೆಗೆ ಉಳಿದದ್ದು.

ದೆಹಲಿಯ ಬ್ಯಾಂಕ್ ಜವಾನನ ಮಗಳಾಗಿ ಹುಟ್ಟಿದ ದಲಿತೆ ಕುಸ್ತಿಪಟು ಜ್ಯೋತಿ. ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಮೂರು ಬಾರಿ ಕಂಚು ಪದಕ ವಿಜೇತೆ. ’ಡೊಮೆಸ್ಟಿಕ್ ಟೂರ್ನಿಯೊಂದರ ಸೆಮಿಫೈನಲ್‌ನಲ್ಲಿ ನಿಚ್ಚಳ ಗೆಲುವು ನನ್ನದಾಗಿದ್ದರೂ, ಸೋತಿದ್ದೇನೆಂದು ಸಾರಲಾಯಿತು. ಈ ಸೆಮಿಫೈನಲ್ ಮರುದಿನ ನಡೆಯುವುದೆಂದು ನಿರ್ಧರಿಸಲಾಗಿತ್ತು. ಆದರೆ ನನಗೆ ಹೆಚ್ಚು ವಿಶ್ರಾಂತಿ ಸಿಗಬಾರದೆಂದೂ, ಕಂಚಿನ ಪದಕ ನನಗೆ ದಕ್ಕಬಾರದೆಂದೂ ಸಂಚು ಮಾಡಿ ಅದೇ ದಿನ ಪಂದ್ಯ ನಡೆಸಲಾಯಿತು. ನನ್ನ ದಲಿತ ಹುಟ್ಟೇ ಈ ಅನ್ಯಾಯದ ಮೂಲ’ ಎಂಬುದು ಆಕೆಯ ಅಳಲು.

ಸಾಂತಿ ಸೌಂದರ ರಾಜನ್ ಎಂಬ ದಲಿತ ಅಥ್ಲೆಟ್ ಆತ್ಮಹತ್ಯೆಯ ವಿಫಲ ಪ್ರಯತ್ನ ನಡೆಸಿದ್ದಳು. ಪಾದಗಳಲ್ಲಿ ಆರು ಬೆರಳುಗಳುಳ್ಳ ಸ್ವಪ್ನಾ ಬರ್ಮನ್ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗಳಿಸಿದ್ದ ದಲಿತ ಹೆಣ್ಣುಮಗಳು. ಏಷ್ಯನ್ ಕ್ರೀಡೆಗಳ ಅತಿ ಕಠಿಣ ಹೆಪ್ಟತ್ಲಾನ್‌ನಲ್ಲಿ ಪಾದಗಳ ನೋವಿನ ನಡುವೆಯೂ ಛಲ ತೊಟ್ಟು ಚಿನ್ನದ ಪದಕ ಗಳಿಸಿದಳು. ಆರು ಬೆರಳುಗಳು ಹಿಡಿಯುವ ವಿಶೇಷ ಶೂಗಳ ಖರೀದಿಸಲು ಅಸಮರ್ಥಳು. ಭಾರತದ ಧ್ವಜವನ್ನು ಅಂತಾರಾಷ್ಟ್ರೀಯ ಕ್ರೀಡಾವೇದಿಕೆಗಳಲ್ಲಿ ಹಾರಿಸಿರುವ ಹಿಮಾ ದಾಸ್ ಎಂಬ ದಲಿತ ಓಟಗಾರ್ತಿಯ ಜಾತಿ ಯಾವುದೆಂದು ತಿಳಿಯಲು ದಾಖಲೆ ಸಂಖ್ಯೆಯ ಗೂಗಲ್ ಸರ್ಚ್ ಮಾಡಲಾಗಿದೆ. ನಿವೃತ್ತಿ ಹೊಂದಿದ ನಂತರವೂ ಪಿ.ಟಿ. ಉಷಾ ಎಂಬ ಮತ್ತೊಬ್ಬ ದಲಿತ ದಂತಕತೆಯ ಕುಲವನ್ನು ಹೀಗೆಯೇ ಹುಡುಕಿದ ದಾಖಲೆಗಳಿವೆ.

‘1979-80ರಲ್ಲಿ ನಾನು ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿಯಾಗಿದ್ದೆ. ಹಿಂದುಳಿದ ಜಾತಿಯ ಹಣೆಪಟ್ಟಿ ಬೇಟೆಯಾಡಿತು. ಆಸೆಗಳೆಲ್ಲ ನುಚ್ಚುನೂರಾಗಿ ಅಕೆಡಮಿಕ್ಸ್ ಹಾದಿ ಹಿಡಿದೆ. ಆಧುನಿಕ ದ್ರೋಣಾಚಾರ್ಯರು ಅರ್ಜುನರಿಗೆ ತರಬೇತಿ ನೀಡುತ್ತಾರೆಯೇ ವಿನಾ ಏಕಲವ್ಯರಿಗೆ ಅಲ್ಲ. ಹಲವು ಅಥ್ಲೀಟ್‌ಗಳ ಬದುಕು ನಾಶವಾದದ್ದನ್ನು ಕಣ್ಣಾರೆ ಕಂಡಿದ್ದೇನೆ. ಮಹಿಳಾ ದಲಿತ ಅಥ್ಲೀಟ್‌ಗಳ ಸ್ಥಿತಿ ಮತ್ತಷ್ಟು ಶೋಚನೀಯ’ ಎಂದಿರುವವರು ಪ್ರೊಫೆಸರ್ ವೈ. ಸ್ವರೂಪಾ ಆರ್. ಶಂಕರ್ ಹೈದರಾಬಾದ್ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕಿ.


ಇದನ್ನೂ ಓದಿ: ಕೆಲವು ಕ್ರೀಡೆಗಳು ಸೃಷ್ಟಿಸುವ ಹೈಪರ್ ನ್ಯಾಷನಲಿಸಂ ಮತ್ತು ಕ್ರೀಡಾಪಟುಗಳ ಜಾತಿನಿಂದನೆ – ಇವುಗಳ ನಡುವೆ ಸಂಭ್ರಮಿಸುವುದಾದರೂ ಹೇಗೆ?

ಇದನ್ನೂ ಓದಿ: ಒಲಿಂಪಿಕ್ಸ್ ಪದಕ ಗೆಲುವಿಗೆ ನಾಂದಿ ಹಾಡಿದ ನಾರಿಯರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...