Homeಮುಖಪುಟಈಶ್ವರಚಂದ್ರ ವಿದ್ಯಾಸಾಗರ್ ಯಾರು? ಅವರ ಪ್ರತಿಮೆ ಧ್ವಂಸದ ಸುತ್ತಾ ತಿಳಿದಿರಬೇಕಾದ ವಿಷಯಗಳು

ಈಶ್ವರಚಂದ್ರ ವಿದ್ಯಾಸಾಗರ್ ಯಾರು? ಅವರ ಪ್ರತಿಮೆ ಧ್ವಂಸದ ಸುತ್ತಾ ತಿಳಿದಿರಬೇಕಾದ ವಿಷಯಗಳು

- Advertisement -
- Advertisement -

| ಡಾ. ಮಂಜುನಾಥ್. ಬಿ.ಆರ್ |

ಇತ್ತೀಚೆಗೆ ಕಲ್ಕತ್ತಾದಲ್ಲಿ ಪಂಡಿತ ಈಶ್ವರಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಭಗ್ನಗೊಳಿಸಿರುವುದು ವರದಿಯಾಗಿದೆ.ಇದಕ್ಕೆ ಸಾರ್ವತ್ರಿಕ ಖಂಡನೆಯೂ ಬಂದಿದೆ. ಇದು ಬಂಗಾಳದಲ್ಲಿ ಊಹಿಸಿಕೊಳ್ಳಲು ಕಷ್ಟವಾದ ಸಂಗತಿ. ಏಕೆಂದರೆ ಬಂಗಾಳದ ಜನಮಾನಸದಲ್ಲಿ ಅವರು ಗಳಿಸಿಕೊಂಡಿರುವ ಸ್ಥಾನ ಅಂಥದ್ದು.

ಆದರೆ ಮುಂದಿನ ತಲೆಮಾರಿಗೆ ಮಹಾಪುರುಷರ ಧ್ಯೇಯ ಆದರ್ಶಗಳನ್ನು ನೆನಪಿಸಲೆಂದು ನಿಲ್ಲಿಸಿದ ಪ್ರತಿಮೆಗಳು ದಾಂಧಲೆಗೆ, ಗಲಭೆಗೆ,ರಾಜಕೀಯ ಮೇಲಾಟಕ್ಕೆ ತುತ್ತಾಗುತ್ತಿವೆ ಎಂಬುದು ನಮ್ಮ ಕಾಲದ ದುರಂತಗಳಲ್ಲೊಂದು.

ಇದನ್ನು ಯಾರು ಮಾಡಿರಬಹುದು ಎಂಬುದರ ಬಗ್ಗೆ ಸಾಕಷ್ಟು ಊಹಾಪೋಹ, ಚರ್ಚೆಗಳು ನಡೆಯುತ್ತಿವೆ.ಸಂಶಯದ ಬೊಟ್ಟು ಮಾತ್ರ ಬಿಜೆಪಿಯ ಕಡೆಗೆ ತಿರುಗಿದೆ.ಬಿಜೆಪಿಗೆ ತ್ರಿಪುರ ದಲ್ಲಿ ಲೆನಿನ್ ರವರ ಪ್ರತಿಮೆ ಉರುಳಿಸಿದ ಕುಖ್ಯಾತಿ ಇದೆ.ಅವರು ತಮ್ಮ ಸಿದ್ಧಾಂತಕ್ಕೆ ವಿರುದ್ಧವಾದ ಯಾರನ್ನೂ ಸಹಿಸುವುದಿಲ್ಲ!

ಬಂಗಾಳದಲ್ಲಿ ವಿದ್ಯಾಸಾಗರರು ವಿವಾದಾತೀತ ಮಹಾಪುರುಷ . ಅವರ ಪ್ರತಿಮೆಯನ್ನು ಮುಟ್ಟಲು ಗೂಂಡಾಗಳೂ ಹಿಂಜರೆಯುತ್ತಾರೆ. ಹೀಗಾಗಿ ಬಿಜೆಪಿ ಹೊರ ರಾಜ್ಯದಿಂದ ಪುಂಡರನ್ನು ಕರೆ ತಂದಿದ್ದರು, ಅವರೇ ಈ ದುಷ್ಕೃತ್ಯವನ್ನು ಮಾಡಿದ್ದಾರೆ ಎಂಬ ಆಪಾದನೆಯಲ್ಲಿ ಸತ್ಯ ಇರಬಹುದು ಎನಿಸುತ್ತದೆ!ಮತ್ತೆ ಯಾವುದೇ ರಾಜ್ಯದಲ್ಲಿ ಗಲಭೆ ಆರಂಭಿಸುತ್ತಾ, ಭಾವನಾತ್ಮಕ ವಿಷಯಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಾ ಒಳಪ್ರವೇಶಮಾಡಲು ಹವಣಿಸುವುದು ಬಿಜೆಪಿ ಯ ಹಳೆಯ ರಣನೀತಿ. ಈ ಬಾರಿ ಅಂದುಕೊಂಡದ್ದಕ್ಕಿಂತ ಕೊಂಚ ಹೆಚ್ಚಾಗಿ ಎಡವಟ್ಟಾಗಿದೆ ಅಷ್ಟೇ!

ಸಂಘ ಪರಿವಾರಕ್ಕೆ , ಅದರಲ್ಲೂ ಬಂಗಾಳಿ ‘ಚಿಂತಕ’ರಿಗೆ ವಿದ್ಯಾಸಾಗರ್ ರ ಮೇಲೆ ವಿಶೇಷ ಸಿಟ್ಟಿರಲು ಕಾರಣಗಳಂತೂ ಇವೆ. ವಿದ್ಯಾಸಾಗರ್ ಎಲ್ಲ ಪುರಾತನ ಗೊಡ್ಡು ವಿಚಾರಗಳನ್ನು ಖಂಡಿಸಿದ್ದರು, ಪುರುಷಪ್ರಧಾನ ಮೌಲ್ಯಗಳನ್ನು ವಿರೋಧಿಸಿದ್ದರು, ಜಾತಿ ಕಟ್ಟುಪಾಡುಗಳನ್ನು ಸಡಿಲಿಸಿದ್ದರು, ಉದಾರವಾದಿ ನಿಲುವುಗಳನ್ನು ಹೊಂದಿದ್ದರು,ಬ್ರಿಟಿಷರ ವಿರುದ್ಧ ಸ್ವಾಭಿಮಾನಿಯಾಗಿ ಸೆಟೆದು ನಿಂತಿದ್ದರು. ಭೌತವಾದಿ ನಿಲುವುಗಳನ್ನು ಸಾರ್ವಜನಿಕವಾಗಿ ಪ್ರತಿಪಾದಿಸಿದ್ದರು.

ಇದೆಲ್ಲಾ ಪರಿವಾರದವರಿಗೆ ನುಂಗಲಾರದ ತುತ್ತೇ ಸರಿ.ಅಮಿತ್ ಶಾ ರೋಡ್ ಶೋ ಗಲಭೆಯ ಸಮಯದಲ್ಲಿ ಪೂರ್ವಯೋಜಿತವೋ ಅಲ್ಲವೋ ವಿದ್ಯಾಸಾಗರ್ ರ ಪ್ರತಿಮೆಯಂತೂ ಗಲಭೆಕೋರರ ಆಕ್ರೋಶಕ್ಕೆ ಬಲಿಯಾಯಿತು.

ತೃಣಮೂಲ ಕಾಂಗ್ರೆಸ್ ನ ವಿದ್ಯಾರ್ಥಿಗಳು ಆ ಸಮಯದಲ್ಲಿ ಕಪ್ಪು ಬಾವುಟ ಹಿಡಿದು ಪ್ರತಿಭಟಿಸಿದ್ದಾರೆ.ಅವರು ಒಂದಿಷ್ಟು ಪ್ರಚೋದನೆಯನ್ನೂ ಮಾಡಿರಬಹುದು. ಟಿ ಎಮ್ ಸಿ ಪಕ್ಷವು ಈ ಘಟನೆಯಿಂದ ಚುನಾವಣೆಯಲ್ಲಿ ಲಾಭ ಪಡೆಯಲೂ ಯತ್ನಿಸಬಹುದು. ಆದರೆ ಈಗ ಅದನ್ನು ಟೀಕೆಗೆ ಮುಖ್ಯ ಗುರಿ ಮಾಡಿಕೊಳ್ಳಬಾರದೆಂಬ ವಿವೇಕವನ್ನು ಎಡಪಕ್ಷಗಳು ಮತ್ತು ಕಾಂಗ್ರೆಸ್ ತೋರಿಸಬೇಕು.ಏಕೆಂದರೆ ಫ್ಯಾಸಿಸ್ಟ್ ಶಕ್ತಿಗಳು ಒಮ್ಮೆ ಬಂಗಾಳದ ನೆಲದಲ್ಲಿ ಬೇರೂರಿದರೆ ಅದು ಇಡೀ ದೇಶದಲ್ಲಿ ಧರ್ಮನಿರಪೇಕ್ಷ, ಜನ ತಾಂತ್ರಿಕ ಆಂದೋಲನಕ್ಕೆ ದೊಡ್ಡ ಪೆಟ್ಟಾಗುತ್ತದೆ.

ಅದೇನೇ ಇರಲಿ ಇದು ವಿದ್ಯಾಸಾಗರ್ ರ ಇನ್ನೂರನೆಯ ಜನ್ಮವಾರ್ಷಿಕ.ಅವರನ್ನು ನೆನಪಿಸಿಕೊಳ್ಳುವುದೂ ಸಹ ಈ ವಿಧ್ವಂಸಕ ಕೃತ್ಯಕ್ಕೆ ಸೂಕ್ತ ಪ್ರತಿಕ್ರಿಯೆಯೇ. ಎಲ್ಲ ದೀನ- ದುಃಖಿಗಳ ಬಗ್ಗೆ ಕಳಕಳಿ ಹೊಂದಿದ್ದ ಅವರನ್ನು ಗುರುದೇವ ರವೀಂದ್ರನಾಥ ಟಾಗೋರ್ ರು ಕರುಣಾಸಾಗರ ಎಂದೇ ಕರೆದಿದ್ದರು.

ಕಡುಬಡತನವನ್ನು ಕಂಡ ವಿದ್ಯಾಸಾಗರರ ಮೂಲ ಹೆಸರು ಈಶ್ವರಚಂದ್ರ ಬಂದೋಪಾಧ್ಯಾಯ.ತಂದೆಯೊಂದಿಗೆ ಊರಿನಿಂದ ನಡೆಯುತ್ತಾ ಕಲ್ಕತ್ತೆಗೆ ಬಂದ ಬಾಲಕ ಮೈಲಿಗಲ್ಲು ಎಣಿಸುತ್ತಾ ರಾಜಧಾನಿ ತಲುಪುವ ವೇಳೆಗೆ ಸಂಖ್ಯೆ ಬರೆಯಲು ಕಲಿತ ಎಂಬುದು ಒಂದು ದಂತಕತೆ. ಸಂಸ್ಕೃತ ಪಂಡಿತರಾದಾಗ ಬಂದ ವಿದ್ಯಾಸಾಗರ ಎಂಬ ಬಿರುದೇ ಹೆಸರಾಯಿತು

ಅವರು ಓದಿದ್ದು ಸಂಸ್ಕೃತ ಕಾಲೇಜಿನಲ್ಲಿ. ಆದರೆ ತನ್ನ ಪ್ರಚಂಡ ಪಾಂಡಿತ್ಯ, ಕೆಲಸದಲ್ಲಿನ ಶ್ರದ್ಧೆಯಿಂದಾಗಿ ಶೈಕ್ಷಣಿಕ ಇಲಾಖೆಯಲ್ಲಿ ದೊಡ್ಡ ಹುದ್ದೆಗಳನ್ನು ಅಲಂಕರಿಸಿದರು.ಭಾರತಕ್ಕೆ ಹೊಸ ಶಿಕ್ಷಣದ ಮಾದರಿಯನ್ನು ರೂಪಿಸುವ ಸಂದರ್ಭದಲ್ಲಿ ಈ ಜುಟ್ಟು ಬಿಟ್ಟಿದ್ದ, ಸಾಂಪ್ರದಾಯಿಕ ಉಡುಗೆಯ ಸಂಸ್ಕೃತ ಪಂಡಿತರು ‘ ನಮ್ಮ ಮಕ್ಕಳಿಗೆ ಬೇಕಾದದ್ದು ವೇದಾಂತವಲ್ಲ, ಅವರಿಗೆ ಅಗತ್ಯವಾದದ್ದು ಆಧುನಿಕ ವಿಜ್ಞಾನ, ಗಣಿತ,ಇಂಗ್ಲಿಷ್ ಭಾಷೆ. ಅವರಿಗೆ ಹಳೆಯ ತರ್ಕಶಾಸ್ತ್ರ ಕಲಿಸಬೇಡಿ, ಜೆ.ಎಸ್.ಮಿಲ್ ರ ‘ಲಾಜಿಕ್’, ನೀತಿಶಾಸ್ತ್ರ, ಉದಾರ ಮಾನವತಾವಾದವನ್ನು ಕಲಿಸೋಣ’ ಎಂದು ಹೋರಾಡಿ ಗೆದ್ದರು. ಅವರ ನಿಲುವು ಆ ಕಾಲಕ್ಕೆ ಆಶ್ಚರ್ಯಕರ!

ಬ್ರಿಟಿಷರ ಕೆಳಗೆ ಕೆಲಸ ಮಾಡುತ್ತಲೇ ಈ ಮನುಷ್ಯ ತನ್ನ ಆತ್ಮ ಗೌರವವನ್ನು ಕಾಪಾಡಿಕೊಂಡ ರೀತಿ ಅನನ್ಯವಾದದ್ದು. ಮೇಲಾಧಿಕಾರಿಯನ್ನು ನೋಡಲು ಹೋಗಿದ್ದಾಗ ಆತ ಇವರೆದುರಿನಲ್ಲಿ ಮೇಜಿನ ಮೇಲೆ ಕಾಲಿರಿಸಿಕೊಂಡಿದ್ದದ್ದು ಅವರಿಗೆ ಸಿಟ್ಟು ತರಿಸಿತು.ಇನ್ನೊಮ್ಮೆ ಆತ ಇವರ ಕಛೇರಿಗೆ ಬಂದಾಗ ವಿದ್ಯಾಸಾಗರ್ ಅವನ ಹಾಗೆಯೇ ಕೂತಿದ್ದರು.ಅವನು ಉರಿದುಹೋದ. ವಿದ್ಯಾಸಾಗರ್, “ಇದು ಬ್ರಿಟಿಷ್ ಸಭ್ಯತೆಯ ಅತ್ಯುತ್ತಮ ಮಾದರಿ ಎಂದುಕೊಂಡಿದ್ದೆ” ಎಂದು ತಣ್ಣಗೆ ಹೇಳಿ ಬಿಟ್ಟರು. ಅನೇಕ ಬಾರಿ ಇಂತಹ ಪ್ರತಿಭಟನೆಗಳನ್ನು ಮಾಡಿದ ಈಶ್ವರಚಂದ್ರರು ತಮ್ಮ ಪ್ರತಿಭೆ,ನೈತಿಕ ಸ್ಥೈರ್ಯಗಳಿಂದಾಗಿ ಗೆಲ್ಲುತ್ತಾಹೋದರು.

ಭಾರತದಾದ್ಯಂತ ಮಹಿಳೆಯರ ಪರಿಸ್ಥಿತಿ ಆಗ ತೀರ ಕೆಟ್ಟದಾಗಿತ್ತು. ಬಂಗಾಳದಲ್ಲಂತೂ ಬಾಲ್ಯವಿವಾಹ, ಬಹುಪತ್ನಿತ್ವ ವಿಪರೀತ. ನೂರೆಂಭತ್ತೆಂಟು ಮಡದಿಯರಿದ್ದ ಪುರುಷಪುಂಗವರು ಮೆರೆಯುತ್ತಿದ್ದ ಕಾಲ ಅದು! ವಿದ್ಯಾಸಾಗರ್ ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸಿ ಎಂದರೆ ಯಾರೂ ಒಪ್ಪಲಿಲ್ಲ.ಆದರೆ ವಿದ್ಯಾಸಾಗರ್ ಸ್ವಂತ ಖರ್ಚಿನಲ್ಲಿ ಮೂವತ್ತೆರಡು ಶಾಲೆ ತೆರೆದರು. ಈ ವಿಷಯದಲ್ಲಿ ಅವರು ಸಾವಿತ್ರಿ ಬಾಯಿ ಫುಲೆ ಅವರಂತೆಯೇ ಹರಿಕಾರರು. ಆಮೇಲೆ ಅವರು ವಿಧವಾ ವಿವಾಹಕ್ಕೆ ಕೈ ಇಟ್ಟರು. ಅದಕ್ಕಾಗಿ ಕಾನೂನು ಜಾರಿಯಾಗಬೇಕೆಂದು ಹೋರಾಡಿ ಗೆದ್ದರು. ಆಗ ಸಂಪ್ರದಾಯವಾದಿಗಳಿಂದ ದೈಹಿಕ ಹಲ್ಲೆಯನ್ಮೂ ಎದುರಿಸಿದರು.ಮುದಿ ಪಂಡಿತ ದೊಣ್ಣೆ ಹಿಡಿದು ತಲೆ ಎತ್ತಿ ಕಲ್ಕತ್ತೆಯ ಬೀದಿಗಳಲ್ಲಿ ಓಡಾಡಿದ್ದು ಅಸಾಧಾರಣ ಘಟನೆ ಆದ್ದರಿಂದಲೇ ಗುರುದೇವರು ಇವರನ್ನು “ನಮ್ಮ ಮಧ್ಯದ ಮೊದಲ ಪುರುಷ ಸಿಂಹ” ಎಂದದ್ದು.

ವಿದ್ಯಾಸಾಗರ್ ರಿಗೆ ಆದರ್ಶ ಎಂಬುದು ಪರೋಪದೇಶಕ್ಕೆ ಮಾತ್ರ ಇದ್ದದ್ದಲ್ಲ. ಅವರ ಮಗ ವಿಧವಾ ವಿವಾಹಕ್ಕೆ ಮುಂದಾದಾಗ ಅವರು ಬಂಧುಗಳಿಂದ ಬಹಿಷ್ಕೃತರಾದರೂ ಲಗ್ನ ಮಾಡಿಸಲು ಹಿಂಜರೆಯಲಿಲ್ಲ. ಇದೇ ಮಗ ಮುಂದೆ ಸೊಸೆಗೆ ಕೈ ಕೊಟ್ಟ. ಆಗ ಪಂಡಿತರು ಅವನನ್ನು ತೊರೆದು, ಉಯಿಲಿನಲ್ಲಿ ಅವನಿಗಾಗಿ ಏನೂ ಬರೆಯದೆ ಸೊಸೆಗೆ ಮಾನ್ಯತೆ ನೀಡಿದರು. ಯಾವುದೇ ಗುಡಿ ಗುಂಡಾರಗಳತ್ತ ತಲೆ ಹಾಕದ ಈ ಮಾನವತಾವಾದಿ, ಕಡೆಗಾಲದಲ್ಲೂ ಮಗಳು ಬಲವಂತ ಮಾಡಿದರೂ ಪೂಜಾಗೃಹದೊಳಗೆ ಹೋಗಲಿಲ್ಲ. “ನನಗೆ ಕರ್ಪೂರ ಊದುಬತ್ತಿಗಳಿಂದ ಉಸಿರು ಕಟ್ಟುತ್ತೆ, ನನ್ನ ಪಾಡಿಗೆ ನನ್ನ ನ್ನು ಬಿಟ್ಟು ಬಿಡಿ” ಎಂದು ತಮಾಷೆ ಮಾಡಿ ದೇವರ ಪೂಜೆಯಿಂದ ದೂರ ಉಳಿದರು.

ಇದನ್ನು ಓದಿ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವುದು ಚುನಾವಣೆಗಳೋ? ಭಯೋತ್ಪಾದನೆಯೋ?

ಕೆಳ ಜಾತಿಯ ಜನರಿಗೂ ಶಿಕ್ಷಣದಲ್ಲಿ ಪ್ರವೇಶ ಸಿಗಬೇಕೆಂದು ಛಲದಿಂದ ಹೋರಾಡಿದ ಈಶ್ವರಚಂದ್ರರು ಹಿಂದೂಗಳಲ್ಲಿದ್ದ ಬಹುಪತ್ನಿತ್ವದ ವಿರುದ್ಧದ ಹೋರಾಟದಲ್ಲಿ ಗೆಲ್ಲಲಾಗದೆ ನೊಂದರು.ತಮ್ಮ ಕೊನೆಗಾಲವನ್ನು ಕಾಡಿನಲ್ಲಿ ಸಂತಾಲರು ಎಂಬ ಬುಡಕಟ್ಟು ಜನರ ಸೇವೆಯಲ್ಲಿ ಕಳೆದರು.ಆಧುನಿಕ ಬಂಗಾಲಿ ಭಾಷೆಗೆ, ಸರಳ ಗದ್ಯಕ್ಕೆ ಬುನಾದಿ ಹಾಕಿದರು.

ಕರ್ನಾಟಕದ ಅಂದಿನ ಒ್ರಗತಿಶೀಲ ಜನ ವಿಧವಾ ವಿವಾಹ ಕ್ಜೆ ಅವರಿಂದ ಪ್ರೇರಣೆ ಪಡೆದರು.ಇನ್ನೂ ಒಂದು ವಿಷಯವನ್ನು ನಾವು ಕೃತಜ್ಞತೆಯಿಂದ ನೆನಪಿದಿಕೊಳ್ಳಬೇಕು.ಅದೆಂದರೆ, ಕನ್ನಡದಲ್ಲಿ ಕಾದಂಬರಿ ಪ್ರಕಾರವನ್ನು ಪರಿಚಯಿಸಲು ಬಿ.ವೆಂಕಟಾಚಾರ್ಯರು ಬಂಗಾಳಿಯಿಂದ ಬಂಕಿಮಚಂದ್ರರ ಕಾದಂಬರಿಗಳನ್ನು ತರ್ಜುಮೆ ಮಾಡಲು ಯತ್ನಿಸಿದರು. ಆಗ ಈ ಉತ್ಸಾಹಿಯನ್ನು ಪ್ರೋತ್ಸಾಹಿಸಿ ವಿದ್ಯಾಸಾಗರ್ ರು ನಿಯತವಾಗಿ ಪೋಸ್ಟ್ ಕಾರ್ಡ್ ಮೂಲಕ ಬಂಗಾಳಿ ಯನ್ನು ಕಲಿಸಿದರು.

ವಿದ್ಯಾಸಾಗರ್ ರ ಅನೇಕ ನಿಲುವುಗಳು ಸಂಪ್ರದಾಯವಾದಿಗಳನ್ನು ಕೆರಳಿಸುತ್ತಿತ್ತು.ಒಮ್ಮೆ ಅವರು ತಮ್ಮ ಲೋಕೋಪಕಾರಿ ಕೆಲಸಕ್ಕೆ ಧನಸಂಗ್ರಹ ಮಾಡಿಟ್ಟುಕೊಂಡಿದ್ದರು. ಅದೇ ಸಮಯದಲ್ಲಿ ವಿದೇಶದಲ್ಲಿದ್ದ ಕವಿ ಮೈಖೆಲ್ ಮಧುಸೂದನ್ ದತ್ತರು( ಟೆನಿಸ್ ತಾರೆ ಲಿಯಾಂಡರ್ ಪೇಸ್ ರವರ ಮುತ್ತಾತನ ತಂದೆ) ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ದ್ದರು.ಅವರ ಸ್ಥಿತಿ ಕೇಳಿ ಕರುಣಾಸಾಗರರಾದ ನಮ್ಮ ಈಶ್ವರಚಂದ್ರರು ಎಲ್ಲ ಹಣವನ್ನು ಅವರಿಗೆ ಕಳಿಸಿಬಿಟ್ಟರು. ಸನಾತನವಾದಿಗಳು ” ವಿಧವೆಯರ ಪ್ರೇಮಿಯು ಹೆಂಡಕುಡುಕನಿಗೆ ಹಣ ಕಳಿಸಿದ ” ಎಂದು ಜರೆದರು. ವಿದ್ಯಾಸಾಗರ್ ರು ಈ ಕುಡುಕನ ಬಾಯಲ್ಲಿ ಸರಸ್ವತಿ ಕುಳಿತಿದ್ದಾಳೆ.ನೋಡುತ್ತಿರಿ ಈತ ಬಂಗಾಳಿ ಗೆ ಹೊಸ ಜನ್ಮ ಕೊಡುತ್ತಾನೆ ಎಂದರು. ರಾವಣ ಇಂದ್ರಜಿತು ಅವರನ್ನು ದೇಶಾಭಿಮಾನಿ ಹೋರಾಟಗಾರರು ಎಂದು ಬಣ್ಣಿಸಿದ ಮೈಖೇಲ್ ಮಧುಸೂದನ್ ದತ್ ರ ” ಮೇಘನಾದ ವಧಾ” ಮಹಾ ಕಾವ್ಯವು ಆಧುನಿಕ ಬಂಗಾಳಿ ಸಾಹಿತ್ಯದ ನಾಂದಿ ಹಾಡಿತು.

ಭಾರತದ ನವೋದಯದ ಇಂತಹ ಮೇರುವ್ಯಕ್ತಿತ್ವಗಳ ಪ್ರತಿಮೆ ಒಡೆದರೆ, ಭಗ್ನವಾಗುವುದು ಕಲ್ಲಿನ, ಲೋಹದ ವಿಗ್ರಹ ಅಲ್ಲ. ಅದು ಒಂದು ಆದರ್ಶ, ಒಂದು ಬದುಕಿನ ಕುರಿತಾದ ಶ್ರೇಷ್ಠ ಪರಿಕಲ್ಪನೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...