Homeಅಂಕಣಗಳುಕಳೆದುಹೋದ ದಿನಗಳುಕಳೆದು ಹೋದ ದಿನಗಳು ಭಾಗ 2, ಅಧ್ಯಾಯ -1: ನಿಮಗೂ, ನನಗೂ ಸಂಬಳ ಕೊಡುವುದು ಈ...

ಕಳೆದು ಹೋದ ದಿನಗಳು ಭಾಗ 2, ಅಧ್ಯಾಯ -1: ನಿಮಗೂ, ನನಗೂ ಸಂಬಳ ಕೊಡುವುದು ಈ ಕಾಫಿ ಗಿಡ ಎನ್ನುತ್ತಿದ್ದ ರವೀಂದ್ರನಾಥರು

ಮ್ಯಾನೇಜ್‌ಮೆಂಟಿನ ವಿಚಾರ ಬಂದಾಗ ಅವರು ಯಾವಾಗಲೂ, ಯೋಜನೆ (Planning) ಆಯವ್ಯಯ (Budget) ಮತ್ತು ಐದು Mಗಳು ಬಹಳ ಮುಖ್ಯ ಎಂದು ವಿವರಿಸುವರು.

- Advertisement -
- Advertisement -

ಗಣಪಯ್ಯನವರ ನಂತರ ಹಾರ್ಲೆ ಗುಂಪಿನ ಎಲ್ಲ ವ್ಯವಹಾರಗಳನ್ನು ಸಹಜವಾಗಿಯೇ ರವೀಂದ್ರನಾಥರು ವಹಿಸಿಕೊಂಡರು. ಮೊದಲು ಹಾರ್ಲೆ ಗುಂಪಿನಲ್ಲಿದ್ದ ಬಾವಲಿಮೂಲೆ ಎಸ್ಟೇಟ್ ಗಣಪಯ್ಯನವರ ಕಾಲದಲ್ಲೇ ಮಾರಾಟವಾಗಿ ಹೋಗಿತ್ತು. ಆದರೆ ನಂತರದ ವರ್ಷಗಳಲ್ಲಿ ದೇವಾಲಕೆರೆಯ ಬೈರಳ್ಳಿ ಗ್ರಾಮದ ಆಶೀರ್ವಾದ್ ಎಸ್ಟೇಟ್ ಹಾಗೂ ಸಕಲೇಶಪುರದ ಪಕ್ಕದ ದೊಡ್ಡನಾಗರ ಎಸ್ಟೇಟ್ ಹಾರ್ಲೆ ಮ್ಯಾನೇಜ್ ಮೆಂಟಿಗೆ ಒಳಪಟ್ಟಿದ್ದವು. ಈ ಎರಡೂ ತೋಟಗಳ ಮಾಲಿಕರು ಉದ್ಯಮಿಗಳಾಗಿದ್ದು ಬೆಂಗಳೂರಿನಲ್ಲಿ ಇರುತ್ತಿದ್ದರು.

ಹಾರ್ಲೆ ಎಸ್ಟೇಟಿನಲ್ಲಿದ್ದ ಮಿಡ್ಲ್‌ಟನ್ ಕಟ್ಟಿಸಿದ ಬಂಗಲೆ ಶಿಥಿಲವಾಗಿದ್ದು ಗಣಪಯ್ಯನವರು ಇದ್ದಾಗಲೇ ಹಳೆಯ ಬಂಗಲೆಯ ಪಕ್ಕದಲ್ಲೇ ಹೊಸ ಮನೆಯೊಂದನ್ನು ಕಟ್ಟಿದ್ದರು. ಆದರೆ ಅವರು ಮಾತ್ರ ಹಳೆ ಮನೆಯಲ್ಲೇ ವಾಸವಿದ್ದರು. ಹೊಸ ಮನೆ ಅತಿಥಿಗೃಹದಂತೆ ಇತ್ತು. ರವೀಂದ್ರನಾಥರು ಹಾರ್ಲೆಯ ಹೊಸಮನೆಗೆ ವಾಸಕ್ಕೆ ಬಂದಿದ್ದರೂ, ಅವರ ತಾಯಿ ದೇವಮ್ಮನವರು ಕೊನೆಯವರೆಗೂ ಹಳೆಯ ಮನೆಯಲ್ಲೇ ಇದ್ದರು.

ಎಸ್ಟೇಟ್ ಆಫೀಸ್ ನಲ್ಲಿ ರವೀಂದ್ರನಾಥ್

ಆಗ ಹಾರ್ಲೆ ಗುಂಪಿನ ಎಲ್ಲ ಹಣಕಾಸು ವ್ಯವಹಾರವೂ ಮೈಸೂರು ಬ್ಯಾಂಕಿನಲ್ಲೇ ನಡೆಯುತ್ತಿತ್ತು. ಬ್ಯಾಂಕಿನ ಸಿಬ್ಬಂದಿಯೇ ಕೆಲವು ಸಲ “ಹಾರ್ಲೆ ವ್ಯವಹಾರಕ್ಕೇ ಒಂದು ಬ್ರಾಂಚ್ ಬೇಕು” ಎಂದು ಹೇಳುವಷ್ಟು ಅಲ್ಲಿ ಹಾರ್ಲೆ ಸಮೂಹದ ಹಣಕಾಸು ವ್ಯವಹಾರವಿತ್ತು. ಈ ಮಾತನ್ನು ಕೇಳಿದ ಗಣಪಯ್ಯ ಬ್ಯಾಂಕಿನ ಅಧಿಕಾರಿಗಳಲ್ಲಿ ಹಾಗಾದರೆ ನಮ್ಮಲ್ಲೇ ಒಂದು ಶಾಖೆ ಮಾಡಿ ಎಂದರು.

ಆಗ ಇದ್ದ ಬ್ಯಾಂಕ್ ಮ್ಯಾನೇಜರ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಒಂದು ಶಾಖೆ ಹಾರ್ಲೆಯಲ್ಲೇ ಪ್ರಾರಂಭಿಸಿದರೆ ಒಳ್ಳೆಯದೆಂದು ಯೋಚಿಸಿ ಗಣಪಯ್ಯನವರಲ್ಲಿ, ನೀವೊಂದು ಕಟ್ಟಡವನ್ನು ಕಟ್ಟಿಸಿ ಕೊಟ್ಟರೆ ಹಾರ್ಲೆಯಲ್ಲೇ ಬ್ಯಾಂಕಿನ ಶಾಖೆ ಪ್ರಾರಂಭಿಸುತ್ತೇವೆ ಎಂದರು. ಅದರಂತೆ ಗಣಪಯ್ಯನವರು ಹಾರ್ಲೆ ಬಂಗಲೆ ಗೇಟಿನ ಪಕ್ಕದಲ್ಲೇ ಬ್ಯಾಂಕಿನ ಶಾಖೆಯ ಅಗತ್ಯಗಳಿಗೆ ಅನುಕೂಲವಿರುವಂತಹ ಒಂದು ಕಟ್ಟಡವನ್ನು ಕಟ್ಟಿಸಿದರು. ಮೊದಲಿನ ಯೋಜನೆಯಂತೆ ಅಲ್ಲಿ ಬ್ಯಾಂಕಿನ ಶಾಖೆ ಪ್ರಾರಂಭವಾಗಬೇಕಿತ್ತು. ಅಲ್ಲಿ ಶಾಖೆ ತೆರೆದಿದ್ದರೆ ಹಾರ್ಲೆ ಎಸ್ಟೇಟಿನ ವ್ಯವಹಾರ ಮಾತ್ರವಲ್ಲದೆ ಸುತ್ತಲಿನ, ಕುಂಬರಡಿ, ನಡಹಳ್ಳಿ, ಮಲ್ಲೇಗದ್ದೆ ಸೇರಿದಂತೆ ಹಲವು ಗ್ರಾಮಗಳ ಜನರಿಗೆ ಅನುಕೂಲವಾಗುತ್ತಿತ್ತು. ಕಟ್ಟಡ ಪೂರ್ತಿಯಾಗುವುದರೊಳಗೆ ಸಕಲೇಶಪುರದ ಶಾಖೆಯ ಮ್ಯಾನೇಜರ್ ಅವರು ವರ್ಗವಾಗಿ ಹೊಸಬರು ಬಂದಿದ್ದರಿಂದ ಆ ಯೋಜನೆ ಮುಂದಕ್ಕೆ ಹೋಯಿತು. ಹೊಸ ಮ್ಯಾನೇಜರ್ ಕಾರಣಾಂತರದಿಂದ ಅದೇ ಶಾಖೆಯನ್ನು ಹಾರ್ಲೆಯ ಬದಲಿಗೆ ಕಾಡುಮನೆ ಟೀ ಎಸ್ಟೇಟಿನಲ್ಲಿ ಪ್ರಾರಂಭಿಸಿದರು. ಹಾರ್ಲೆಯ ಕಟ್ಟಡ ಹಾಗೇ ಉಳಿಯಿತು.

ಕಾಡುಮನೆ ಟೀ ಎಸ್ಟೇಟ್

ರವೀಂದ್ರನಾಥರು ಹಾರ್ಲೆ ತೋಟಗಳ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ, ಆಡಳಿತದಲ್ಲಿ ಆಧುನಿಕತೆಯನ್ನೂ ಜೊತೆಗೆ ಇನ್ನೂ ಹೆಚ್ಚು ಪಾರದರ್ಶಕತೆಯನ್ನೂ ತರಲು ಪ್ರಯತ್ನಿಸಿದರು. ಮುಖ್ಯವಾಗಿ ಎಲ್ಲ ಕೆಲಸಗಾರರಲ್ಲೂ ವಿಶ್ವಾಸವನ್ನು ಹೆಚ್ಚಿಸುವ ಮತ್ತು ಅವರು ಯಾವಾಗ ಕೇಳಿದರೂ ಅವರಿಗೆ ಸಂಬಂಧಪಟ್ಟ ಎಲ್ಲ ಲೆಕ್ಕ ಪತ್ರಗಳ ವಿವರವೂ ಸಂಪೂರ್ಣವಾಗಿ ಮತ್ತು ಸುಲಭವಾಗಿ ಸಿಗುವಂತೆ ಮಾಡಿದರು.

ಮೈಸೂರು ಬ್ಯಾಂಕ್ ಶಾಖೆಗಾಗಿ ಗಣಪಯ್ಯ ಕಟ್ಟಿಸಿದ ಕಟ್ಟಡ

ಬ್ಯಾಂಕಿಗೆಂದು ಕಟ್ಟಿದ್ದ ಕಟ್ಟಡದ ಮಹಡಿಯಲ್ಲಿ ಹಾರ್ಲೆ ಎಸ್ಟೇಟ್ ಮ್ಯಾನೇಜ್‌ಮೆಂಟ್‌ನ ಕಛೇರಿ ಪ್ರಾರಂಭವಾಯಿತು. ಎಲ್ಲ ನೌಕರರಿಗೂ ಅಲ್ಲೇ ಕುಳಿತು ಕೆಲಸಮಾಡಲು ಲೆಕ್ಕ ಪತ್ರ ವ್ಯವಹಾರಗಳನ್ನು ಇಡಲು ವಿಶಾಲವಾದ ವ್ಯವಸ್ಥೆ ಇತ್ತು.

1988ರ ವೇಳೆಗೆ ಹಾರ್ಲೆ ಎಸ್ಟೇಟಿಗೆ ಲೆಕ್ಕ ಪತ್ರಗಳ ವ್ಯವಸ್ಥೆಗೆಂದು ಕಂಪ್ಯೂಟರ್ ಬಂತು. ಇಂದಿನ ಕಂಪ್ಯೂಟರ್ ಗಳಿಗೆ ಹೋಲಿಸಿದರೆ ಅದು ಗಾತ್ರದಲ್ಲಿ ದೊಡ್ಡದು, ಆದರೆ ಕಾರ್ಯಕ್ಷಮತೆ ಬಹಳ ಕಡಿಮೆಯೆಂದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆಗ ಲೋಟಸ್ 123ಯಲ್ಲಿ ಎಸ್ಟೇಟಿನ ಎಲ್ಲ ಲೆಕ್ಕ ಪತ್ರಗಳನ್ನು ಅಳವಡಿಸಲಾಯಿತು. ತೋಟದಲ್ಲಿ ಯಾರಿಗೂ ಕಂಪ್ಯೂಟರಿನ ಯಾವ ಜ್ಞಾನವೂ ಇರಲಿಲ್ಲ. ಬೆಂಗಳೂರಿನಿಂದ ಕೆಲವರು ಬಂದು ನೌಕರರಿಗೆ ಮುಖ್ಯವಾಗಿ ಕಛೇರಿ ನಿರ್ವಹಣೆ ಮಾಡುತ್ತಿದ್ದ ಕಮಲಾ ಭಟ್ ಅವರಿಗೆ ಕಂಪ್ಯೂಟರ್ ಬಳಕೆಯನ್ನು ಹೇಳಿಕೊಡುತ್ತಿದ್ದರು. ಪ್ರಾರಂಭದಲ್ಲಿ ಅವರಿಗೂ ಬಹಳ ಕಷ್ಟವಾಗುತ್ತಿತ್ತು. ನಂತರ ಅಭ್ಯಾಸವಾಯಿತು.

ರವೀಂದ್ರನಾಥರೇ ಮೊದಲು ಎಲ್ಲವನ್ನೂ ಅಭ್ಯಾಸ ಮಾಡಿದರು. ಪುಸ್ತಕಗಳನ್ನಿಟ್ಟುಕೊಂಡು ಗಂಟೆಗಟ್ಟಲೆ ಕುಳಿತು ತಾವೇ ಅರ್ಥಮಾಡಿಕೊಂಡು ತೋಟದ ಲೆಕ್ಕ ಪತ್ರಗಳಿಗೆ ಬೇಕಾದ ರೀತಿಯಲ್ಲಿ ಎಲ್ಲವನ್ನೂ ರೂಪಿಸಿ ನಂತರ ಬೇರೆಯವರಿಗೆ ಹೇಳಿಕೊಡುತ್ತಾ ಬಂದರು. ಕೆಲವು ಸಮಯ ಕಳೆಯುವಷ್ಟರಲ್ಲಿ ಹಾರ್ಲೆ ಗುಂಪಿನ ಎಲ್ಲ ಲೆಕ್ಕಪತ್ರಗಳೂ ಕಂಪ್ಯೂಟರ್‌ನಲ್ಲಿ ನಡೆಯಲಾರಂಭಿಸಿದವು.

ಆಗಲೇ ತೋಟಕ್ಕೆ ಡಿಷ್ ಆಂಟೆನಾ ಬಂತು. ಆಗ ಸುಮಾರು ಹದಿನಾರು ಅಡಿ ಅಗಲದ ದೊಡ್ಡ ಡಿಷ್. ಆಗ ನಾಲ್ಕೈದು ಚಾನಲ್‌ಗಳು ಮಾತ್ರ ದೊರೆಯುತ್ತಿದ್ದವು. ಬಂಗಲೆಯ ಪಕ್ಕದ ವಿಶಾಲವಾದ ಸ್ಥಳದಲ್ಲಿ ಒಂದು ಟಿವಿಯನ್ನೂ ತಂದು ಸ್ಥಾಪಿಸಿದರು. ಅದು ತೋಟದ ಎಲ್ಲ ಕಾರ್ಮಿಕರ ವೀಕ್ಷಣೆಗೆ. ಪ್ರತಿದಿನ ಸಂಜೆ ಅಲ್ಲಿ ಜನರು ಕಿಕ್ಕಿರಿದು ಸೇರುತ್ತಿದ್ದರು. ಕ್ರಿಕೆಟ್ ಪಂದ್ಯಗಳಿದ್ದಾಗ ಕೆಲವು ಸಲ ರವೀಂದ್ರನಾಥರೂ ಬಂದು ಹುಡುಗರೊಡನೆ ಅಲ್ಲೇ ಕ್ರಿಕೆಟ್ ಪಂದ್ಯ ನೋಡುತ್ತ ಕೂರುವರು.

ರವೀಂದ್ರನಾಥರ ಭೇಟಿಯಾದಾಗಲೆಲ್ಲ ಹೊಸ ವಿಚಾರಗಳು ಚರ್ಚೆಗೆ ಬರುವುವು. ಅದು ವೇದ ಉಪನಿಷತ್ ಇರಲಿ, ಆಧುನಿಕ ವಿಜ್ಞಾನವಾಗಿರಲಿ, ಸಾಮಾಜಿಕ ವಿಷಯವಾಗಿರಲಿ ತಾಳ್ಮೆಯಿಂದ ತಿಳಿಸುವರು. ತಮಗೆ ತಿಳಿಯದ್ದನ್ನು ಯಾರು ಹೇಳಿದರೂ ಕೇಳಿಸಿಕೊಳ್ಳುವರು.

ಪರಸ್ಪರ ಮಾತುಕತೆಯಲ್ಲಿ ಅವರು ಅತ್ಯುತ್ತಮ ಬೋಧಕರು.

ಈ ಮುಂದಿನ ವಿಚಾರಗಳು ಅರ್ಥಶಾಸ್ತ್ರದ, ಅಥವಾ ಬಿಸಿನೆಸ್ ಮ್ಯಾನೇಜ್ಮೆಂಟಿನ ವಿದ್ಯಾರ್ಥಿಗಳಿಗೆ ತಿಳಿದ ವಿಷಯಗಳೇ ಆಗಿವೆ. ಆದರೆ ಇಂತಹ ವಿಚಾರಗಳೂ ಎಲ್ಲರಿಗೂ ತಿಳಿದಿರಬೇಕು ಆಗ ಕೃಷಿಯಾಗಲೀ, ಉದ್ಯಮವಾಗಲೀ ಎಲ್ಲವೂ ಸುಗಮವಾಗಿ ನಡೆಯಲು ಸಹಕಾರಿಯಾಗುತ್ತದೆ ಎಂದು ಹೇಳುವರು. ಇಂತಹ ವಿಷಯಗಳನ್ನು ತೋಟದ ನೌಕರರಿಗೂ ವಿವರಿಸುವರು.

ಮ್ಯಾನೇಜ್‌ಮೆಂಟಿನ ವಿಚಾರ ಬಂದಾಗ ಅವರು ಯಾವಾಗಲೂ, ಯೋಜನೆ (Planning) ಆಯವ್ಯಯ (Budget) ಮತ್ತು ಐದು Mಗಳು ಬಹಳ ಮುಖ್ಯ ಎಂದು ವಿವರಿಸುವರು.

ಒಂದು ತೋಟ ಮಾಡುವುದಿರಬಹುದು, ಇತರೆ ಯಾವುದೇ ಇರಬಹುದು. ಮೊದಲು ಯೋಜನೆ ಸರಿಯಾಗಿ ಮಾಡಬೇಕು, ನಂತರ ಆಯವ್ಯಯವನ್ನು ರೂಪಿಸಬೇಕು. ಇದರಿಂದ ನಮ್ಮ ಹಣಕಾಸಿನ ಅಗತ್ಯ ಮತ್ತು ನಮ್ಮ ಸಾಮರ್ಥ್ಯ ಅರಿವಾಗುತ್ತದೆ.

ನಂತರದ್ದೇ ಐದು Mಗಳು ಅವು ಯಾವುವೆಂದರೆ Money, Material, Machinery, Minute and Man.

ಇವುಗಳಲ್ಲಿ ಮೊದಲ ನಾಲ್ಕು Money, ಹಣಕಾಸು, Material, ಬೇಕಾಗುವ ವಸ್ತುಗಳು, Machinery-ಯಂತ್ರ ಮತ್ತು ಉಪಕರಣಗಳು ಮತ್ತು Minute – ನಿಮಿಷ, ಅಂದರೆ ಯಾವ ಸಮಯದಲ್ಲಿ? ಎಂದು. ಇವು ನಾಲ್ಕು  ಬಜೆಟ್‌ನಲ್ಲಿ ನಮಗೆ ತಿಳಿಯುತ್ತದೆ. ಮತ್ತು ಅದಕ್ಕೆ ತಕ್ಕಂತೆ ಯೋಜನೆ ರೂಪಿಸಬೇಕಾಗುತ್ತದೆ.

ಆದರೆ ನಂತರದ್ದು Man ಇದು ಮಾನವ ಸಂಪನ್ಮೂಲ, ಅಂದರೆ ಆಡಳಿತಗಾರರರು, ಕೆಲಸಗಾರರು ಮಾತ್ರವಲ್ಲ ಸುತ್ತಲಿನ ಸಮಾಜ ಕೂಡಾ ಆಗಿದೆ. ಇದು ಬಹಳ ಮುಖ್ಯವಾದ ಮತ್ತು ಅಷ್ಟೇ ಸಂಕೀರ್ಣವಾದ ವಿಚಾರ, ನೀನು ಈ ಮಾನವ ಸಂಪನ್ಮೂಲವನ್ನು ಗಳಿಸುವುದು ಮತ್ತು ನಿರ್ವಹಿಸುವುದು ಕಲಿತರೆ ಮಾತ್ರ ಯಾವುದೇ ಕೆಲಸದಲ್ಲಿ ಯಶಸ್ಸು ಕಾಣಲು ಸಾಧ್ಯ. ಇದೊಂದು ಕಲೆಯೂ ಹೌದು  ಮಾನವತೆಯೂ ಹೌದು ಎನ್ನುವರು.

ಇದಕ್ಕೆ ಬೇಕಾದಂತೆ ಕಂಪ್ಯೂಟರಿನಲ್ಲಿ ಹಲವು ಪ್ರೋಗ್ರಾಂಗಳನ್ನೂ ಅವರೇ ರೂಪಿಸಿದರು. ನಂತರದ ದಿನಗಳಲ್ಲಿ ನನ್ನ ಎಲ್ಲ ಕೆಲಸಗಳಲ್ಲಿಯೂ ಈ ಪಾಠಗಳು ನೆರವಿಗೆ ಬಂದವು.

ನೆಡಲು ಸಿದ್ಧವಾದ ಗಿಡಗಳು

ರವೀಂದ್ರನಾಥರು ತೋಟ ಕಾರ್ಮಿಕರ ಜೊತೆ ಮೊದಲಿನಿಂದಲೂ ಹೆಚ್ಚು ಒಡನಾಟ ಇದ್ದವರೇ. ಈಗ ಅದು ಇನ್ನೂ ಹೆಚ್ಚಾಯಿತು. ಪ್ರತಿದಿನ ಸಂಜೆ ಕೆಲಸದ ನಂತರ ಬಂಗಲೆಯ ಎದುರಿನ ಕಾಫಿ ಕಣದಲ್ಲೇ ಯವಕರೊಂದಿಗೆ ಸೇರಿ ಅವರೂ ವಾಲಿಬಾಲ್ ಆಡುವರು, ಇತರ ಆಟೋಟಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುವರು. ಹಿಂದಿನಿಂದಲೂ ನಡೆದು ಬಂದಿದ್ದ ಗಣಪತಿ ಉತ್ಸವ, ದೀಪಾವಳಿ ಮಾತ್ರವಲ್ಲ ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ,  ಗಣರಾಜ್ಯದಿನಗಳ ಆಚರಣೆಗಳೂ ಇನ್ನಷ್ಟು ವಿಜೃಂಬಣೆಯಿಂದ ಆಗತೊಡಗಿದವು. ಈ ಉತ್ಸವಗಳಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಟೋಟಗಳ ಸ್ಪರ್ಧೆ ಅವುಗಳಿಗೆ ಬಹುಮಾನ ಇದ್ದೇ ಇರುತ್ತಿತ್ತು. ಇವೆಲ್ಲದರ ಜೊತೆಯಲ್ಲಿ ವರ್ಷದಲ್ಲಿ ಅತಿ ಹೆಚ್ಚು ದಿನ ಕೆಲಸಮಾಡಿದ ಕೆಲಸಗಾರರಿಗೂ ಬಹುಮಾನ ನೀಡುವುದನ್ನು ಪ್ರಾರಂಭಿಸಿದರು. ಈ ಬಹುಮಾನಗಳಂತೂ ಹೆಚ್ಚಾಗಿ ಮಹಿಳೆಯರ ಪಾಲಾಗುತ್ತಿತ್ತು.

ಕೆಲಸದ ವೇಳೆ ತೋಟಕ್ಕೆ ಹೋದಾಗಲೂ ಕೆಲಸಗಾರರ ಜೊತೆ ಮಾತಾಡುತ್ತ,

“ನಿಮಗೆ ಸಂಬಳ ಕೊಡುವವರು ಯಾರು?” ಎಂದು ಕೇಳುತ್ತಿದ್ದರು.

ಆಗ ಕೆಲಸಗಾರರು ಸಹಜವಾಗಿಯೇ “ನೀವು” ಎನ್ನುತ್ತಿದ್ದರು.

ಆಗ ರವೀಂದ್ರನಾಥರು “ನಾನಲ್ಲ ನಾನು ಬ್ಯಾಂಕಿನಿಂದ ನೋಟು ತಂದು ನಿಮಗೆ ಕೊಡುತ್ತಿದ್ದೇನೆ ಅಷ್ಟೆ, ನಿಮಗೆ ಸಂಬಳ ಕೊಡುವುದು ಈ ಕಾಫಿ ಗಿಡ, ನಿಮಗೂ- ನನಗೂ ಇಲ್ಲಿರುವ ಎಲ್ಲರಿಗೂ ಅಷ್ಟೇ ಇದೇ ಸಂಬಳ ಕೊಡುವುದು” ಎನ್ನುವರು. ಆ ಮಾತನ್ನು ಆಗ ಬಹಳ ಜನರು ಹಗುರವಾಗಿ ಮತ್ತು ಏನೋ ಹೇಳುತ್ತಿದ್ದಾರೆ ಎನ್ನುವ ಭಾವನೆಯಲ್ಲಿ ತೆಗೆದುಕೊಂಡವರಿದ್ದರು. ಆದರೆ ನಮ್ಮ ಮಾತುಗಳು ಪ್ರಾಮಾಣಿಕತೆಯಿಂದ ಕೂಡಿದ್ದಲ್ಲಿ ಜನ ನಿಧಾನವಾಗಿ ಅದನ್ನು ಸ್ವೀಕರಿಸಬಲ್ಲರು ಎಂಬುದು ನಂತರದ ವರ್ಷಗಳಲ್ಲಿ ಅನುಭವಕ್ಕೆ ಬಂತು. ಅದನ್ನು ಮುಂದೆ ಬರೆಯುತ್ತೇನೆ.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದುಹೋದ ದಿನಗಳು 33 – ಬರವಣಿಗೆಯ ಹಿನ್ನೆಲೆ : ಪ್ರಸಾದ್ ರಕ್ಷಿದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...