Homeಕರ್ನಾಟಕದುಷ್ಟ ಜಿಂದಾಲ್ ಪಾದಕ್ಕೆ ಮತ್ತೆ 3667 ಎಕರೆ ಧಾರೆಯೆರೆಯುತ್ತಿರುವ ಭ್ರಷ್ಟ ಸರ್ಕಾರ.

ದುಷ್ಟ ಜಿಂದಾಲ್ ಪಾದಕ್ಕೆ ಮತ್ತೆ 3667 ಎಕರೆ ಧಾರೆಯೆರೆಯುತ್ತಿರುವ ಭ್ರಷ್ಟ ಸರ್ಕಾರ.

ಬಡವರಿಗೆ ವಸತಿ ವಿಚಾರ ಬಂದ ಕೂಡಲೇ ಎಲ್ಲಿದೆ ಭೂಮಿ? ಎನ್ನುವ ಸರ್ಕಾರ ಈಗ ಜಿಂದಾಲ್‍ನವರಿಗೆ ನೀಡುವಾಗ ಮಾತ್ರ ಎಲ್ಲಿದೆ ಭೂಮಿ ಎನ್ನುವುದಿಲ್ಲ. ಅಲ್ಲಿನ ರೈತರ ವಿರೋಧದ ನಡುವೆಯೂ ಭೂಮಿ ವಶಪಡಿಸಿಕೊಂಡು ಜಿಂದಾಲ್ ಪಾದಕ್ಕೆ ಅರ್ಪಿಸುವ ಗುಲಾಮಗಿರಿ ಕೆಲಸ ಮಾಡುತ್ತಿದ್ದಾರೆ.

- Advertisement -
- Advertisement -

| ಮುತ್ತುರಾಜು |

ಬಳ್ಳಾರಿ ಜಿಲ್ಲೆಯಲ್ಲಿ ಬಲಾಢ್ಯವಾಗಿ ಬೇರೂರಿರುವ ಜಿಂದಾಲ್ ಸ್ಟೀಲ್ ವಕ್ರ್ಸ್ ಕಂಪನಿಯ ಅಕ್ರಮ, ಅನೀತಿಗಳಿಗೆ ಕೊನೆಯಿಲ್ಲದಂತಾಗಿದೆ. ಅಧಿಕಾರ ದುರುಪಯೋಗ ಮತ್ತು ಕಾನೂನು ಬಾಹಿರ ಚಟುವಟಿಕೆಗಳಿಂದಲೇ ಕೊಬ್ಬಿರುವ ಈ ಕಂಪನಿಗೆ ಹೇಳೋರು ಕೇಳೋರು ಇಲ್ಲದ ಕಾರಣ ತನ್ನ ಇನ್ನಿಲ್ಲದ ಕರ್ಮಕಾಂಡಗಳನ್ನು ಅವ್ಯಾವತವಾಗಿ ಮುಂದುವರೆಸಿದೆ. ಅನಿಯಂತ್ರಿತ ಪರಿಸರ ನಾಶ, ಕಾರ್ಮಿಕರಿಗೆ ಕಿರುಕುಳ ಇತ್ಯಾದಿಗಳಿಂದ ಕುಖ್ಯಾತಿಗೆ ಒಳಗಾಗಿದ್ದ ಕಂಪನಿಯ ಪಾದಕ್ಕೆ ಇಂದು ಮತ್ತೆ 3667ಎಕರೆ ಭೂಮಿಯನ್ನು ಅರ್ಪಿಸುವ ಕೆಲಸಕ್ಕೆ ಭ್ರಷ್ಟ ರಾಜ್ಯ ಸರ್ಕಾರ ಮುಂದಾಗಿದೆ. ಅಲ್ಲಿ ಸ್ಥಳೀಯರ ವಿರೋಧದ ನಡುವೆಯೂ ಸರ್ಕಾರ ಭೂಮಿ ನೀಡಲು ಮುಂದಾಗಿರುವುದರಿಂದ ಜಿಲ್ಲೆಯ ಜನರ ಆಕ್ರೋಶಕ್ಕೆ ತುತ್ತಾಗಿದೆ.

ಬಳ್ಳಾರಿ-ಹೋಸಪೇಟೆ ಮಧ್ಯದಲ್ಲಿರುವ ತೋರಣಗಲ್ಲು ಎಂಬಲ್ಲಿರುವ ಜೆಎಸ್‍ಡಬ್ಲು ಕಂಪನಿಯು ಭಾರತದಲ್ಲಿ ಉಕ್ಕು ತಯಾರಿಸುವ 2ನೇ ಅತಿದೊಡ್ಡ ಖಾಸಗಿ ಕಂಪನಿ. ಸುಮಾರು 5 ಸಾವಿರ ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಇದು 1994 ರಲ್ಲಿ ಜಿಂದಾಲ್ ವಿಜಯನಗರ್ ಸ್ಟೀಲ್ ಲಿಮಿಟೆಡ್ ಹೆಸರಿನಲ್ಲಿ ಆರಂಭಗೊಂಡಿದೆ. ನಂತರ 2005 ರಲ್ಲಿ ಜಿಂದಾಲ್ ಐರನ್ ಅಂಡ್ ಸ್ಟೀಲ್ ಕಂಪನಿ ಜೊತೆ ವಿಲೀನವಾಗುವುದರೊಂದಿಗೆ ಹಾಲಿ ಜೆಎಸ್‍ಡಬ್ಲು ಲಿಮಿಟೆಡ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಸಜ್ಜನ್ ಜಿಂದಾಲ್

ಕಳ್ಳ ಮಾರ್ಗದಲ್ಲಿ ಆರಂಭ:
ಇದರ ಆರಂಭವೇ ಕಳ್ಳ ಮಾರ್ಗದಿಂದ ಶುರುವಾಗಿದೆ. ಬಳ್ಳಾರಿ ಸ್ಟೀಲ್ಸ್ ಅಂಡ್ ಅಲಾಯ್ಸ್ ಲಿಮಿಟೆಡ್ (ಬಿಎಸ್‍ಎಎಲ್) ಎಂಬ ಖಾಸಗಿ ಕಂಪನಿಗೆ ಹಲವು ವರ್ಷಗಳ ಹಿಂದೆ ಉಕ್ಕು ಕಾರ್ಖಾನೆ ಸ್ಥಾಪನೆಗೆಂದು ಅಂದಿನ ಸರ್ಕಾರ 1000 ಎಕರೆಗೂ ಹೆಚ್ಚು ಭೂಮಿಯನ್ನು ರೈತರಿಂದ ಬಲವಂತವಾಗಿ ಅಗ್ಗದ ಬೆಲೆಯಲ್ಲಿ ಕಸಿದು, ಮಂಜೂರು ಮಾಡಲಾಯಿತು. ಕೆಲಸ ಆರಂಭಿಸದೇ ಆ ಕಂಪನಿ ಅದರ ಮೇಲೆ 200 ಕೋಟಿ ರೂ. ಬ್ಯಾಂಕ್ ಸಾಲ ಎತ್ತಿಕೊಂಡು ನಂತರ ಅದೇ ಭೂಮಿಯನ್ನು ಜಿಂದಾಲ್ ಕಂಪನಿಗೆ ಹಸ್ತಾಂತರಿಸಿತು. ಇದು ನೂರಕ್ಕೆ ನೂರು ಕಾಯ್ದೆಬಾಹಿರ. ಆದರೆ ಯಾರು ಕೇಳುತ್ತಾರೆ? ಕಂಪನಿ ಮಾಲೀಕ ಸಜ್ಜನ್ ಜಿಂದಾಲ್‍ಗಾಗಿ ತನ್ನ ಕಡುವೈರಿ ಎಂದು ಭಾಷಣ ಬಿಗಿಯುವ ಪಾಕಿಸ್ತಾನಕ್ಕೆ ದೇಶದ ಪ್ರಧಾನಿಯೇ ಹೋಗಿ ಬರುತ್ತಿರುವಾಗ ಇದರ ಬಗ್ಗೆ ರಾಜ್ಯ ಸರ್ಕಾರವೆಲ್ಲಿ ತಲೆ ಕೆಡಿಸಿಕೊಳ್ಳುತ್ತದೆ ಹೇಳಿ?

ಈಗ ಜಿಂದಾಲ್ ಇಲ್ಲಿ ಉಕ್ಕು ಘಟಕ ಸ್ಥಾಪಿಸುವ ಬದಲು ಅದನ್ನು ಬ್ಯಾಂಕ್ ಸಾಲ ಎತ್ತುವ ಸಟ್ಟಾಬಾಜಿಗೆ ಬಳಸಲು ಯತ್ನಿಸುತ್ತಿದೆ, ಅದನ್ನು ಕಾಯ್ದೆ ಪ್ರಕಾರ ರೈತರಿಗೆ ಹಿಂದಿರುಗಿಸಬೇಕು ಎಂದು ಬಳ್ಳಾರಿಯ ಹಲವು ಸಂಘಟನೆಗಳು ಹೋರಾಟಕ್ಕಿಳಿದಿವೆ. ಇದಲ್ಲದೆ ಸ್ವತಃ ಜಿಂದಾಲ್‍ಗೇನೇ ಉಕ್ಕು ಕಾರ್ಖಾನೆ ಸ್ಥಾಪಿಸಲು 500 ಎಕರೆ ಸಾಕಾಗಿದ್ದ ಕಡೆ 4000 ಎಕರೆ ಮಂಜೂರು ಮಾಡಿಕೊಡಲಾಗಿದೆ. ಈ ರೀತಿ ಆರಂಭವಾಗಿರುವ ಕಾರ್ಖಾನೆ ನಿಯತ್ತಾಗಿ ಕೆಲಸ ಮಾಡುತ್ತಿದೆಯ ಅಂದರೆ ಅದೂ ಇಲ್ಲ. ಸ್ಥಳೀಯರಿಗೆ ಕೆಲಸ ಕೊಡದೆ ವಂಚಿಸಿರುವುದಲ್ಲದೇ ಇರುವ ಕಾರ್ಮಿಕರನ್ನು ಸಹ ಜೀತದಾಳುಗಳ ರೀತಿ ದುಡಿಸಿಕೊಳ್ಳುತ್ತಿದೆ.

ಕಾರ್ಮಿಕ ವಿರೋಧಿ ಕಂಪನಿ:
ಕಂಪನಿಯು ಹೈದರಾಬಾದ್ ಕರ್ನಾಟಕ ಪ್ರದೇಶವಾದ ಬಳ್ಳಾರಿ ಜಿಲ್ಲೆಯಲ್ಲಿರುವುದರಿಂದ ಈ ವ್ಯಾಪ್ತಿಯ ಕಾರ್ಮಿಕರಿಗೆ ಶೇ.80 ರಷ್ಟನ್ನು ಇನ್ನು ಸಿ ಮತ್ತು ಡಿ ವೃಂದದ ಉದ್ಯೋಗಗಳನ್ನು ಪೂರ್ತಿ ಕನ್ನಡಿಗರಿಗೆ ನೀಡಬೇಕೆಂದು ನಿಯಮ ಹೇಳುತ್ತದೆ. ಅದರೆ ಈಗ ಇಲ್ಲಿ ಕಾರ್ಯನಿರ್ವಹಿಸುವ ಸ್ಥಳೀಯ ಕಾರ್ಮಿಕ ಸಂಖ್ಯೆ ಶೇ.10 ರಷ್ಟು ಮಾತ್ರ. ಇಲ್ಲಿನ ಕಾರ್ಮಿಕರನ್ನು ತೆಗೆದುಕೊಂಡರೆ ತಮ್ಮ ಹಕ್ಕುಗಳಿಗಾಗಿ ಸಂಘಟಿತರಾಗುತ್ತಾರೆ, ನ್ಯಾಯಬದ್ಧ ಸೌಲಭ್ಯಗಳನ್ನು ಕೇಳುತ್ತಾರೆ ಮತ್ತು ತಮ್ಮ ಮನಸ್ಸೊಇಚ್ಛೆ ಬಂದಷ್ಟು ದುಡಿಸಲು ಆಗುವುದಿಲ್ಲ ಎಂಬ ಕುತಂತ್ರದಿಂದ ಹೊರ ರಾಜ್ಯದವರನ್ನೆ ಹೆಚ್ಚಾಗಿ ನೇಮಿಸಿಕೊಳ್ಳಲಾಗುತ್ತಿದೆ. ಎಲ್ಲವೂ ಗುತ್ತಿಗೆ ಕೆಲಸವಾದ್ದರಿಂದ ಕಾರ್ಮಿಕರ ಶ್ರಮವನ್ನು ತಮಗೆ ಬೇಕಾದಷ್ಟು ಹೀರಿಕೊಂಡು 40-45 ವರ್ಷ ದಾಟಿದ ಕಾರ್ಮಿಕರನ್ನು ಕಿತ್ತು ಬಿಸಾಡುವುದು ಇಲ್ಲಿನ ಪದ್ಧತಿ. ಇಂತಹ ಪರಿಸ್ಥಿತಿಯಲ್ಲಿ ಕಾರ್ಮಿಕ ಸಂಘಟನೆಯೊಂದು ಇಲ್ಲಿನ ಕಾರ್ಮಿಕರನ್ನು ಸಂಘಟಿಸಲು ಮುಂದಾದಾಗ ಪರಿಸ್ಥಿತಿ ವಿಕೋಪಕ್ಕೆ ತಲುಪಿ ಕಾರ್ಮಿಕರು ಮತ್ತು ಮಾಲೀಕರ ನಡುವಿನ ಸಂಘರ್ಷ ಆರಂಭವಾಗಿತ್ತು.

ಪರಿಸರ ವಿನಾಶ ಮತ್ತು ಜೆಎಸ್‍ಡಬ್ಲು ಡಾಂಬರ್ ಕಾರ್ಖಾನೆಯ ನಂತರ ಪೇಂಟ್ ಕಾರ್ಖಾನೆ
ಆದರೆ ಇದನ್ನು ಸರಿಪಡಿಸುವ ಗೋಜಿಗೆ ಹೋಗುವ ಬದಲು ಮತ್ತಷ್ಟು ಪರಿಸರ ನಾಶಕ್ಕೆ ಜೆಎಸ್‍ಡಬ್ಲು ಕೈಹಾಕಿತ್ತು. ಅದೇ ಜಿಂದಾಲ್ ಡಾಂಬಾರು ಕಾರ್ಖಾನೆ. ಸ್ಥಳೀಯರ ಸಾಕಷ್ಟು ವಿರೋಧದ ನಡುವೆ ಡಾಂಬಾರು ಕಾರ್ಖಾನೆ ಸ್ಥಾಪಿಸಿದ್ದ ಜಿಂದಾಲ್ ಈಗ ಪೇಂಟ್ ಕಾರ್ಖಾನೆ ಸ್ಥಾಪಿಸಲೆಂದು ಮತ್ತೆ 3667 ಎಕರೆ ಜಾಗಕ್ಕೆ ಕನ್ನ ಹಾಕಿದೆ. ತೋರಣಗಲ್ಲು ಗ್ರಾಮದ ಸರ್ವೇ ನಂಬರ್ 504, 505, 506, 515, 416 ಮತ್ತು ಮುಸಿನಾಯಕನಹಳ್ಳಿಯ ಸರ್ವೇ ನಂಬರ್ 17, 17, 19 ಮತ್ತು 21 ರಲ್ಲಿ ಹಾಲಿ ಪೇಂಟ್ ಕಂಪನಿ ಆರಂಭಿಸಲು ತಯಾರಿ ನಡೆಸಿದೆ. ವಾರ್ಷಿಕ 2 ಲಕ್ಷ ಲೀಟರ್ ನೀರು ಆಧಾರಿತ 40 ಸಾವಿರ ಟಿಆರ್‍ಪಿಎ ನೀರು ಆಧಾರಿತ ಎಮಲ್ಷನ್ ಕೋಪಾಲಿಮರ್ ಉತ್ಪಾದನೆ ಘಟಕ ಇದಾಗಿದೆ. ಪೇಂಟ್ ತಯಾರಿಕೆಯಲ್ಲಿ ಸಹಜವಾಗಿ ರಸಾಯನಿಕ ವಸ್ತುಗಳನ್ನು ಬಳಸುವುದರಿಂದ ಸುತ್ತಮುತ್ತಲಿನ ಪರಿಸರ ಮತ್ತಷ್ಟು ಹದಗೆಡಲಿದೆ ಎಂದು ಸ್ಥಳೀಯ ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ಕಾರ್ಮಿಕರ ಪತ್ರಿಭಟನೆ

ಈ ಕುರಿತು ನಡೆದ ಸಾರ್ವಜನಿಕ ಅಹವಾಲು ಸಭೆಯಲ್ಲಿ ಸಿಪಿಐ-ಎಂ, ರೈತ ಸಂಘ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಈ ಯೋಜನೆಗೆ ತೀವ್ರ ವಿರೋಧ ತೋರಿದ್ದಾರೆ. ಇದೇ ಜಿಂದಾಲ್ ಎಂಬ ಮಹಾಮಾರಿ ಕಂಪನಿಯಿಂದ ಸಾಕಷ್ಟು ಪರಿಸರ ಈಗಾಗಲೇ ಹಾಳಾಗಿದ್ದು ಹಲವಾರು ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಮುಂದಾದರು ಪರಿಸರಕ್ಕೆ ಅಪಾಯ ಒಡ್ಡುವ ಕಂಪನಿಗಳು ಬೇಡ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಇಂತಹ ವಿರೋಧವನ್ನು ಮೊದಲೇ ನಿರೀಕ್ಷಿಸಿದ್ದ ಕಂಪನಿಯು ತನ್ನ ನವರಂಗಿ ಆಟವನ್ನು ಇಲ್ಲಿಯೂ ಪ್ರದರ್ಶಿಸಿದೆ. ಮೊದಲೇ ಕೆಲವು ಗ್ರಾಮಸ್ಥರನ್ನು ಬುಕ್ ಮಾಡಿಕೊಂಡು ಹಣದ ಆಮಿಷ ತೋರಿಸಿ ಸಭೆಯಲ್ಲಿ ಕಂಪನಿ ಪರ ವಾದಿಸುವಂತೆ ಪುಸಲಾಯಿಸಿದ್ದಾರೆ. ಅಂತೆಯೇ ಸಭೆಯಲ್ಲಿ ಕೆಲವರು ಮಾತನಾಡಿ, ಕಾರ್ಖಾನೆಗಳ ಸ್ಥಾಪನೆಯಿಂದ ಈ ಭಾಗದ ನಿರುದ್ಯೋಗಿಗಳಿಗೆ ಕೆಲಸ ಸಿಗುವುದು ಅಲ್ಲದೇ ಕಂಪನಿಗಳು ಹೆಚ್ಚು ತೆರಿಗೆ ಕಟ್ಟುವುದರಿಂದ ಗ್ರಾಮದ ಅಭಿವೃದ್ದಿಯೂ ಸಹ ಆಗಲಿದೆ ಎಂದು ಕಂಪನಿಯವರು ಹೇಳಿದಂತೆ ಉರುಹೊಡೆದಿದ್ದನ್ನು ಸಭೆಯಲ್ಲಿ ಒಂದೇ ಸಮನೆ ಉಸುರಿದ್ದಾರೆ. ಅಲ್ಲಿಗೆ ಎಲ್ಲಾ ಮುಗಿಸಿ ಈಗ ಪೇಂಟ್ ಕಾರ್ಖಾನೆ ಕೂಡ ತಯಾರಾಗಿದೆ. ಇನ್ನು ಕಾರ್ಯಾರಂಭ ಮಾಡಿಲ್ಲ ಅಷ್ಟೇ. ಒಟ್ಟಿನಲ್ಲಿ ಅಲ್ಲಿನ ರೈತರು ಮತ್ತು ಸ್ಥಳೀಯರು ಈ ಕಾರ್ಖಾನೆಯ ವಿರುದ್ಧ ಕಳೆದ 10 ವರ್ಷಗಳಿಂದ ಬಂದರೂ ಇಲ್ಲಿನ ಎಂಪಿ ಎಮ್ಮೆಲ್ಲೆಗಳು ಜಿಂದಾಲ್‍ಗೆ ಬುಕ್ ಆಗಿರುವುದರಿಂದ ಯಾವುದೇ ಪ್ರಯೋಜವಾಗಿಲ್ಲ.

ಬಡವರಿಗಿಲ್ಲದ ಭೂಮಿ ಜಿಂದಾಲ್ ಹೇಗೆ?
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯು ಕಳೆದ ನಾಲ್ಕು ವರ್ಷಗಳಿಂದ ರಾಜ್ಯ ಸರ್ಕಾರಕ್ಕೆ ಬಡವರಿಗೆ ಭೂಮಿ ಮತ್ತು ವಸತಿ ನೀಡಬೇಕೆಂದು ಹೋರಾಡುತ್ತಾ ಬಂದಿದೆ. ಸಿದ್ದರಾಮನ್ಯನವರ ಸರ್ಕಾರ ಇದ್ದಾಗಿನಿಂದಲೂ ಕಾಗೋಡು ತಿಮ್ಮಪ್ಪನವರು ಸಚಿವರಾಗಿದ್ದಾಗಿನಿಂದಲೂ ಹೋರಾಟ ನಡೆಸಿದೆ. ಸ್ವತಂತ್ರ ಸೇನಾನಿ ದೊರೆಸ್ವಾಮಿಯವರು ಇದರ ನೇತೃತ್ವ ವಹಿಸಿದ್ದಾರೆ. ಇವರ ಹೋರಾಟದ ಫಲವಾಗಿ ರಾಜ್ಯಮಟ್ಟದ ಸರ್ಕಾರ ಮತ್ತು ಹೋರಾಟಗಾರರನ್ನೊಳಗೊಂಡ ಸಮಿತಿಯು ರಚನೆಯಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಆ ಸಭೆಗಳಲ್ಲಿ ಬಡವರಿಗೆ ವಸತಿ ವಿಚಾರ ಬಂದ ಕೂಡಲೇ ಎಲ್ಲಿದೆ ಭೂಮಿ? ಎನ್ನುವ ಸರ್ಕಾರ ಈಗ ಜಿಂದಾಲ್‍ನವರಿಗೆ ನೀಡುವಾಗ ಮಾತ್ರ ಎಲ್ಲಿದೆ ಭೂಮಿ ಎನ್ನುವುದಿಲ್ಲ. ಅಲ್ಲಿನ ರೈತರ ವಿರೋಧದ ನಡುವೆಯೂ ಭೂಮಿ ವಶಪಡಿಸಿಕೊಂಡು ಜಿಂದಾಲ್ ಪಾದಕ್ಕೆ ಅರ್ಪಿಸುವ ಗುಲಾಮಗಿರಿ ಕೆಲಸ ಮಾಡುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...