Homeಫ್ಯಾಕ್ಟ್‌ಚೆಕ್ಫ್ಯಾಕ್ಟ್‌ಚೆಕ್‌: ರಾಯಚೂರಿನಲ್ಲಿ ಮಸೀದಿ ಕೆಡವಿದಾಗ ದೇವಾಲಯ ಪತ್ತೆಯಾಯಿತೆ?

ಫ್ಯಾಕ್ಟ್‌ಚೆಕ್‌: ರಾಯಚೂರಿನಲ್ಲಿ ಮಸೀದಿ ಕೆಡವಿದಾಗ ದೇವಾಲಯ ಪತ್ತೆಯಾಯಿತೆ?

- Advertisement -
- Advertisement -

ರಾಯಚೂರಿನಲ್ಲಿ ಮಸೀದಿಯನ್ನು ಕೆಡವಿದಾಗ ದೇವಾಲಯ ಪತ್ತೆಯಾಗಿದೆ ಎಂದು ಫೋಟೋವೊಂದು ವೈರಲ್‌ ಆಗಿದೆ. ಅನೇಕರು ಇದೇ ಅಭಿಪ್ರಾಯದೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ.

“ಭಾರತದಲ್ಲಿನ ನೀವು ಹಳೆಯ ಮಸೀದಿಗಳನ್ನು ಕೆಡವಿದರೆ ಒಳಗೆ ನೀವು ಐತಿಹಾಸಿಕ, ಪುರಾಣಪ್ರಸಿದ್ಧ ದೇವಾಲಯಗಳನ್ನು ಕಾಣಬಹುದು. ಈ ಮೊಘಲ್‌ ಭಯೋತ್ಪಾದಕರು ಖಾಲಿ ಜಾಗದಲ್ಲಿ ಮಸೀದಿಗಳನ್ನು ಕಟ್ಟಿಲ್ಲ. ನಮ್ಮ ಪವಿತ್ರ ದೇವಾಲಯಗಳನ್ನು ಕೆಡವಿ ಅದರ ಮೇಲೆ ಮಸೀದಿ ನಿರ್ಮಿಸಿದ್ದಾರೆ” ಎಂದು ಮತೀಯ ಗಲಭೆ ಸೃಷ್ಟಿಸಲು ಯತ್ನಿಸಲಾಗಿದೆ.

ರಾಯಚೂರಿನಲ್ಲಿ ದೇವಾಲಯ ಪತ್ತೆಯಾಗಿರುವ ಸತ್ಯಸತ್ಯತೆಯನ್ನು ಪರಿಶೀಲಿಸುವಂತೆ ಆಲ್ಟ್‌ ನ್ಯೂಸ್‌‌ ವಾಟ್ಸ್‌ಆಪ್‌ ಸಹಾಯವಾಣಿಯಲ್ಲಿ (91 76000 11160) ಓದುಗರು ಕೇಳಿಕೊಂಡಿದ್ದು, ನಿಜಾಂಶವನ್ನು ಆಲ್ಟ್‌ನ್ಯೂಸ್ ನೀಡಿದೆ.

ನಿಜವೇನು?

ಈ ಚಿತ್ರವು ಕಲಾವಿದನಿಂದ ಸೃಷ್ಟಿಯಾದ ಒಂದು ಕಲಾಕೃತಿಯಾಗಿರುವುದು ವಾಸ್ತವವಾಗಿದೆ. ಚಿತ್ರದ ಕೆಳಗೆ ‘chandra colourist’ ಎಂಬ ಲೋಗೋ ಇದೆ. chandra colourist ಹೆಸರಿನ ಖಾತೆಯಲ್ಲಿ ಮೇ 8, 2016ರಲ್ಲಿ ಇದೇ ರೀತಿಯ ಫೋಟೋವನ್ನು ಪೋಸ್ಟ್‌ ಮಾಡಲಾಗಿದೆ. ‘ಇದು ಎಲ್ಲಿಯ ಫೋಟೋ’ ಎಂದು ಬಂದಿರುವ ಕಮೆಂಟ್‌ಗೆ ‘ಇದು ನನ್ನ ಡಿಜಿಟಲ್‌ ಕಲಾಕೃತಿ’ ಎಂದು ಕಲಾವಿದ ಪ್ರತಿಕ್ರಿಯೆ ನೀಡಿರುವುದನ್ನು ಕಾಣಬಹುದು.

ಮತ್ತಷ್ಟು ಹುಡುಕಾಡಿದಾಗ ಫೋಟೋಗ್ರಾಫರ್‌ Meiqianbao ಅವರು ಕ್ಲಿಕ್ಕಿಸಿರುವ ಫೋಟೋವೊಂದು ಗೂಗಲ್‌ನಲ್ಲಿ ಸಿಕ್ಕಿದ್ದು, ಅದು ಚಂದ್ರು ಅವರ ಕಲಾಕೃತಿಗೆ ಪ್ರೇರಣೆಯಾಗಿರುವ ಫೋಟೋವಾಗಿರಬಹುದು. ಎರಡು ಚಿತ್ರಗಳನ್ನು ಎಚ್ಚರಿಕೆಯಿಂದ ಗಮನಿಸಿದರೆ ಎರಡೂ ಫೋಟೋಗಳಲ್ಲಿನ ಹೋಲಿಕೆಯನ್ನು ಗುರುತಿಸಬಹುದು ಎಂದು ಆಲ್ಟ್‌ ನ್ಯೂಸ್‌ ಹೇಳಿದೆ.

ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್‌: 2014 ರ ಬೀದಿ ನಾಟಕದ ದೃಶ್ಯ ‘ತಾಲಿಬಾನ್ ಮಹಿಳೆಯನ್ನು ಮಾರುತ್ತಿದೆ’ ಎಂದು ವೈರಲ್‌!

ಅಮೆರಿಕ ಮೂಲದ ಫೋಟೋ ಶೇಖರಣಾ ಏಜೆನ್ಸಿಯಾದ ‘ಶಟ್ಟರ್‌ಸ್ಟಾಕ್‌’ ಪ್ರಕಾರ, ಚೀನಾದ ಹೆನಾನ್‌‌ನ ಲುವೊಯಾಂಗ್ನಲ್ಲಿರುವ ಲಾಂಗ್‌ಮೆನ್ ಗ್ರೊಟ್ಟೋಸ್ -ಫೆಂಗ್‌ಕ್ಸಿಯಾಂಗ್ ದೇವಾಲಯದ ಕಲ್ಲಿನ ಬುದ್ಧ ವಿಗ್ರಹ ಇದಾಗಿದೆ.

ಆದರೆ ಈ ಫೋಟೋ ರಾಯಚೂರಿನಲ್ಲಿ ಮಸೀದಿಯನ್ನು ದ್ವಂಸ ಮಾಡಿದಾಗ ಸಿಕ್ಕ ದೇವಾಲಯದ ಫೋಟೋವೆಂದು ಹಬ್ಬಿಸಲಾಗುತ್ತಿದೆ.  “ಇದು ನಮ್ಮನ್ನು ಮತ್ತೊಂದು ಪ್ರಶ್ನೆಗೆ ಹಚ್ಚಿತು- ರಾಯಚೂರಿನಲ್ಲಿ ಮಸೀದಿಯನ್ನು ಕೆಡವಿದಾಗ ದೇವಾಲಯ ಪತ್ತೆಯಾಯಿತೇ” ಎಂದು ಪರಿಶೀಲನೆ ಮುಂದುವರಿಸಿರುವ ಆಲ್ಟ್‌ ನ್ಯೂಸ್‌ನವರು, ಫೇಕ್‌ ನ್ಯೂಸ್‌ ಕಾರ್ಖಾನೆಗಳನ್ನು ಶೋಧಿಸಿದ್ದಾರೆ.

2016ರಿಂದಲೂ ಇದೇ ಡಿಜಿಟಲ್‌ ಕಲೆಯನ್ನು ಹಂಚಿಕೊಂಡಿರುವುದು ತಿಳಿದುಬಂದಿದೆ. ಉಮಾ ಗಾರ್ಗಿ ಎಂಬವವರು ಮೂರು ವರ್ಷದ ಹಿಂದೆಯೇ ಈ ಫೋಟೋವನ್ನು ಹಂಚಿಕೊಂಡಿದ್ದಾರೆ.

ಇದೇ ರೀತಿಯಲ್ಲಿ ಅನೇಕರು ಟ್ವೀಟ್‌ ಮಾಡಿದ್ದಾರೆ. ಫೇಸ್‌ಬುಕ್‌ನಲ್ಲಿ ರಮಣಿ ಪರಶುರಾಮನ್‌ ಅವರು ಮೊದಲು ಹಂಚಿಕೊಂಡಿದ್ದಾರೆ.

2016ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಬಹುತೇಕ ಒಂದೇ ರೀತಿಯ ಪಠ್ಯವನ್ನು ಹೊಂದಿರುವ ವಿಭಿನ್ನ ಚಿತ್ರಗಳನ್ನು ನಾವು ಕಂಡುಕೊಂಡಿದ್ದೇವೆ ಎಂದು ಆಲ್ಟ್‌ ನ್ಯೂಸ್ ಹೇಳಿದೆ.

ಫೇಕ್‌ನ್ಯೂಸ್‌ ವೆಬ್‌ಸೈಟ್ ಆಗಿರುವ ‘ಪೋಸ್ಟ್‌ಕಾರ್ಡ್‌’ ಸಂಸ್ಥಾಪಕ ಮಹೇಶ್‌ ವಿಕ್ರಮ್‌ ಹೆಗ್ಡೆ ಹಾಗೂ ಕೆ.ಪಿ.ಗಣೇಶ್‌ (ಪ್ರಧಾನಿ ಮೋದಿಯವರು ಟ್ವಿಟ್ಟರ್‌‌ನಲ್ಲಿ ಅನುಸರಿಸುತ್ತಿರುವವರು), ರಸ್ತೆ ಅಗಲೀಕರಣಕ್ಕಾಗಿ ಮಸೀದಿ ದ್ವಂಸ ಮಾಡಿದಾಗ ರಾಯಚೂರಿನಲ್ಲಿ ದೇವಾಲಯ ಪತ್ತೆಯಾಗಿದೆ ಎಂದು  ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕಾಂಗ್ರೆಸ್‌ಮುಕ್ತ್‌ಭಾರತ್‌ ಟ್ವಿಟರ್‌‌ ಖಾತೆಯಲ್ಲಿ ಇದೇ ಒಕ್ಕಣೆಯೊಂದಿಗೆ ಏಪ್ರಿಲ್‌ 11, 2016ರಂದು ಫೋಟೋವನ್ನು ಟ್ವೀಟ್‌ ಮಾಡಲಾಗಿದೆ.  ಇದು 150ಕ್ಕೂ ಹೆಚ್ಚು ಬಾರಿ ರೀ ಟ್ವೀಟ್ ಆಗಿದೆ. ‘Struggle for Hindu Existence’ ಎಂಬ ವೆಬ್‌ಸೈಟ್‌ನಲ್ಲಿ ಲೇಖನವನ್ನೂ ಇದೇ ಅಭಿಪ್ರಾಯ ಮೂಡುವಂತೆ ಬರೆಯಲಾಗಿದೆ.

2016ರಲ್ಲಿ ರಸ್ತೆ ಅಗಲೀಕರಣ ಮಾಡಲು ಆದೇಶಿಸಿದ್ದ ಹಿಂದಿನ ಜಿಲ್ಲಾಧಿಕಾರಿಯನ್ನು ಆಲ್ಟ್‌ ನ್ಯೂಸ್ ಸಂಪರ್ಕಿಸಿದ್ದು ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

“ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿರುವ ಮಾಹಿತಿಯು ಸುಳ್ಳಾಗಿದೆ. ತೆರವು ಕಾರ್ಯಾಚರಣೆಯಲ್ಲಿ ಕೆಲವು ಸಾಂಪ್ರದಾಯಿಕ ಕಟ್ಟಡಗಳೂ ಇದ್ದವು. ಅತ್ಯಂತ ಹಳೆಯ ಮಾದರಿಯಲ್ಲಿದ್ದ ಎಕ್‌ಮಿನಾರ್‌ ಅನ್ನು ತೆರೆವುಗೊಳಿಸಲಾಯಿತು. ಅಂತಹ ಹಳೆಯ ರಚನೆಗಳು ವಿವಿಧ ಕೆತ್ತನೆಗಳನ್ನು ಹೊಂದಿವೆ. ಕೇವಲ ಒಂದು ಕಂಬದಿಂದಾಗಿ ಇದು ಹಿಂದೆ ದೇವಾಲಯವಾಗಿದೆ ಎಂದು ತೀರ್ಮಾನಿಸಲು ಸಾಧ್ಯವಿಲ್ಲ. ಕೆಲವು ಗುಂಪುಗಳು ಈ ರೀತಿ ಬಿಂಬಿಸಲು ಯತ್ನಿಸಿದವು. ಪ್ರತಿಕ್ರಿಯೆಗಳು ಬಂದಾಗ ಅವರು ತಮ್ಮ ಪ್ರತಿಪಾದನೆಯನ್ನು ನಿಲ್ಲಿಸಿದರು” ಎಂದು ಆಲ್ಟ್‌ ನ್ಯೂಸ್‌ಗೆ ಅಂದಿನ ಜಿಲ್ಲಾಧಿಕಾರಿ ತಿಳಿಸಿದ್ದಾರೆ.


ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್‌: ಇದು ಅಯೋಧ್ಯೆ ರೈಲು ನಿಲ್ದಾಣವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...