Homeಮುಖಪುಟ‘ಬೆಳಕಿನ ಬೆಳೆ’ ಮಾಲಿಕೆಯ ‘ಜಿ.ಎನ್. ದೇವಿ - ಆಯ್ದ ಬರಹಗಳು’ ಪುಸ್ತಕ ಬಿಡುಗಡೆ ನಾಳೆ

‘ಬೆಳಕಿನ ಬೆಳೆ’ ಮಾಲಿಕೆಯ ‘ಜಿ.ಎನ್. ದೇವಿ – ಆಯ್ದ ಬರಹಗಳು’ ಪುಸ್ತಕ ಬಿಡುಗಡೆ ನಾಳೆ

- Advertisement -
- Advertisement -

ಆಧುನಿಕ ಭಾರತೀಯ ಚಿಂತಕರ ಆಯ್ದ ಬರಹಗಳ ಮೂಲಕ ಅವರ ಚಿಂತನೆ ಪರಿಚಯ ಮಾಡುವ ನಿಟ್ಟಿನಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ‘ಬೆಳಕಿನ ಬೆಳೆ’  ಎಂಬ ಮಾಲಿಕೆಯಡಿ ಪ್ರಕಟಿಸಿದ 7 ಪುಸ್ತಕಗಳು ಗಮನ ಸೆಳೆದಿದ್ದವು. ಈ ಮಾಲಿಕೆಯ ಪ್ರಕಟಣೆಯನ್ನು ಡಾ.ಎಂ.ಜಿ. ಹೆಗಡೆ ಅವರ ಸಂಪಾದಕತ್ವದಲ್ಲಿ ಮುಂದುವರೆಸಿ ಪೂರ್ಣಗೊಳಿಸುವ ಜವಾಬ್ದಾರಿಯನ್ನು ಕ್ರಿಯಾ ಮಾಧ್ಯಮ ವಹಿಸಿಕೊಂಡಿದೆ.  ‘ಬೆಳಕಿನ ಬೆಳೆ’ ಮಾಲಿಕೆಯ ಎಂಟನೆಯ ಪುಸ್ತಕವಾಗಿ ಮತ್ತು ಈ ಮಾಲಿಕೆಯಲ್ಲಿ ಕ್ರಿಯಾ ಮಾಧ್ಯಮದ ಪ್ರಕಟಣೆಗಳಲ್ಲಿ ಮೊದಲನೆಯದಾಗಿ, ಪ್ರಸಿದ್ಧ ಚಿಂತಕ ”ಜಿ.ಎನ್. ದೇವಿ ಅವರ ಆಯ್ದ ಬರಹಗಳು’ ಕೃತಿಯು ಅಕ್ಟೋಬರ್ 29 ರಂದು ಉಡುಪಿಯ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬಿಡುಗಡೆಯಾಗುತ್ತಿದೆ.

ಕೃತಿ ವಾಚನದ ಮೂಲಕ ಡಾ.ಶ್ರೀಪಾದ ಭಟ್ ರವರು ಕೃತಿ ಬಿಡುಗಡೆ ಮಾಡಲಿದ್ದು,  ಡಾ.ಸಿರಾಜ್ ಅಹ್ಮದ್ ಮತ್ತು ಡಾ.ರಾಜೇಂದ್ರ ಚೆನ್ನಿಯವರು ಡಾ.ಜಿ.ಎನ್ ದೇವಿಯವರ ಬರಹಗಳ ಕುರಿತು ಮಾತನಾಡಲಿದ್ದಾರೆ. ಡಾ.ದೇವಿದಾಸ ನಾಯ್ಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಶುಕ್ರವಾರ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ.

ಒರ್ಫಿಯಸ್‌ನ ಹಾಡು, ಅಪೂರ್ಣ ರಕ್ತ ಕಣ, ಕಳ್ಳನೆನಿಸಿಕೊಂಡ ಅಲೆಮಾರಿ, ಹಿಂಸೆಯ ಪೂರ್ವಾಪರ, ಭಾಷೆಯ ಇರವು: ಜ್ಞಾನ, ಸಮಾಜ ಮತ್ತು ವಾಚೋಹೀನತೆ, ವಾಚೋಹೀನತೆ, ಸ್ಮೃತಿಯ ಭವಿಷ್ಯ – ದೇವಿ ಅವರ ಈ ಐದು ಪ್ರಸಿದ್ಧ ಲೇಖನಗಳು ಪುಸ್ತಕದಲ್ಲಿ ಇವೆ. ಈ ಪುಸ್ತಕದ ಆಯ್ದ ಭಾಗ ನಿಮ್ಮ ಓದಿಗಾಗಿ….

ಪರ್ಯಾಯದ ಹುಡುಕಾಟ

ಪ್ರಸ್ತುತ ಕೃತಿಯಲ್ಲಿ ಮೂರು ಬಹುಮುಖ್ಯ ವಿಷಯಗಳನ್ನು ಕುರಿತು ದೇವಿಯವರು ಧ್ಯಾನಿಸಿ ಬರೆದ ಬರಹಗಳ ಅನುವಾದಗಳಿವೆ. ಪಶ್ಚಿಮ ಹಾಗೂ ಪೂರ್ವಗಳ ವಿದ್ವತ್ತು, ಜಗತ್ತಿನ ಮಹಾನ್ ಕೃತಿಗಳ ಆಳವಾದ ಓದು, ಚರಿತ್ರೆಯ ದಾರ್ಶನಿಕವಾದ ತಿಳವಳಿಕೆ ಹಾಗೂ ಸಾಮಾಜಿಕ ಬದ್ಧತೆಗಳು ಮುಪ್ಪುರಿಗೊಂಡು ಸೃಷ್ಟಿಸಿದ ಜ್ಞಾನವು ಈ ಬರಹಗಳಲ್ಲಿದೆ. ಅಪ್ರಾಮಾಣಿಕವಾದ ಭಾಷಾಡಂಬರದ “ಜಾಗತಿಕ” ಚಿಂತನೆಯ ಹಗಲುವೇಷದ ಬದಲಾಗಿ ಇಪ್ಪತ್ತನೆಯ ಶತಮಾನದಿಂದ ಇತ್ತೀಚೆಗೆ ಮನುಷ್ಯ ಕುಲವು ಎದುರಿಸಿದ ಆತ್ಮ ಘಾತುಕವಾದ ಹಿಂಸೆಗಳು, ಅತಾರ್ಕಿಕವಾದ ಸ್ವವಿನಾಶ, ಸಿನಿಕತನವುಳ್ಳ ಹತಾಶೆ ಇವುಗಳ ಜೊತೆಗೆ ಇವೆಲ್ಲವನ್ನು ಬದಲಾಯಿಸಬೇಕು ಎನ್ನುವ, ‘ಇನ್ನೊಂದುಜಗತ್ತು ಸಾಧ್ಯವಿದೆ ಎನ್ನುವ ನೈತಿಕವಾದ ನಂಬಿಕೆ ಈ ಬರಹಗಳಲ್ಲಿದೆ. ಎಂ.ಜಿ. ಹೆಗಡೆಯವರ ಮಾಂತ್ರಿಕ ಅನುವಾದವು ದಟ್ಟವಾದ, ಸಂಕೀರ್ಣವಾದ ಅನುಭವಗಳನ್ನು ಕನ್ನಡದಲ್ಲಿಅದ್ಭುತವಾಗಿ ಹಿಡಿದುಕೊಡುತ್ತದೆ. ನನಗಂತೂ ಈ ಕೃತಿಯನ್ನುಓದಿದ್ದು ಇಳಿವಯಸ್ಸಿನಲ್ಲಿ ದೊರೆತ ಶಿಕ್ಷಣವಾಗಿದೆ.

– ಡಾ. ರಾಜೇಂದ್ರಚೆನ್ನಿ

ಒರ್ಫಿಯಸ್‌ನ ಹಾಡು

ಬಹಳ ಹಿಂದೆ–ಎಷ್ಟೆಂದರೆ ಐತಿಹಾಸಿಕ ಯುಗಗಳಲ್ಲಿಅಲ್ಲ, ಪೌರಾಣಿಕ ಕಲ್ಪಗಳಲ್ಲಿ- ಒರ್ಫಿಯಸ್‌ತನ್ನ ಪ್ರೀತಿಯ ಯುರಿಡಿಸಿಯನ್ನು ಮೃತ್ಯುಲೋಕದಿಂದ ಮರಳಿ ತರಲು ಹೋರಾಟ ನಡೆಸಿದ. ಮೃತ್ಯು ದೇವತೆಯು ಒರ್ಫಿಯಸ್‌ಗೆ ಯುರಿಡಿಸಿಯನ್ನು ಹಿಂತಿರುಗಿಸಲು ಒಪ್ಪಿದ. ಆದರೆ ಅವಳು ಅವನನ್ನು ಅನುಸರಿಸಿಕೊಂಡು ಹೋಗುತ್ತಿರುವಾಗ ನಿಜಕ್ಕೂ ಅವಳು ತನ್ನನ್ನು ಹಿಂಬಾಲಿಸುತ್ತಿರುವಳೆ ಎಂದು ಅವನು ಹಿಂತಿರುಗಿ ನೋಡುವಂತಿಲ್ಲಎಂದು ಷರತ್ತು ವಿಧಿಸಿದ. ಒರ್ಫಿಯಸ್‌ ಕತ್ತಲೆಯಚಿಂನ ಜಗತ್ತಿನಿಂದ ಹೊರಬಂದಾಗ ಯುರಿಡಿಸಿ ದಿಟವಾಗಿಯೂ ತನ್ನನ್ನು ಹಿಂಬಾಲಿಸಿ ಬರುತ್ತಿದ್ದಾಳೆ ಎಂಬ ನಂಬಿಕೆಯ ಬಲದ ಮೇಲೇ ಕವನಗಳನ್ನು ರಚಿಸಿ ಪಟ್ಟಿಯಾಗಿ ಹಾಡುತ್ತಿದ್ದ– ಯುರಿಡಿಸಿಗೆ ತನ್ನೆದೆಯ ತವಕ ತಲ್ಲಣಗಳ ನಿವೇದನೆ; ಪ್ರಿಯತಮೆಯನ್ನು ಮೃತ್ಯುಮುಖದಿಂದ ರಕ್ಷಿಸಿ ತಂದಯ ಶೋಕಗೀತೆಯಾಗಿ; ಅದೆಲ್ಲಕ್ಕಿಂತ, ಯುರಿಡಿಸಿ ವಾಸ್ತವವಾಗಿಯೂ ತನ್ನನ್ನು ಹಿಂಬಾಲಿಸುತ್ತಿರುವುದು ಹೌದೇ ಎಂಬ ಆಂತಕವನ್ನು ಗೆಲ್ಲುವ ಉಪಾಚಿಂತವಾಗಿ. ಅವನ ದೈವಿಕ ಸಂಗೀತಕ್ಕೆ ಮರುಳಾಗಿ ಲಕ್ಷಂತರ ಹಕ್ಕಿಗಳು ಯುರಿಡಿಸಿಯನ್ನು ಹಿಂಬಾಲಿಸಿದವೆಂದು ಹೇಳುತ್ತಾರೆ. ಅವುಗಳ ಕಿವಿಯಿಂಪದು ಸಂಗೀತ; ಅದರೆ ಒರ್ಫಿಯಸ್‌ಗೆ ಅದು ಯಾತನೆಗೀತೆ; ಹಾಗೆಯೇ ನಂಬಿಕೆಯಘೋಷಣೆ! ಒರ್ಫಿಯಸ್‌ನ ಆ ಹಾಡು ಪ್ರತಿಯೊಬ್ಬ ಪ್ರವರ್ತಕನ ಕ್ರಿಯೆಯಲ್ಲೂ ಪ್ರತಿಧ್ವನಿಸುತ್ತ…

– ಗಣೇಶ್‌ದೇವಿ (ಒರ್ಫಿಯಸ್‌ನ ಹಾಡು)


ಇದನ್ನೂ ಓದಿ: ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಬರೋಡ: ಪ್ರೊ. ಜಿ ಎನ್ ದೇವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026: ಅಪರೂಪದ ಭೂಮಿಯ ಕಾರಿಡಾರ್‌ನಿಂದ ಹೈಸ್ಪೀಡ್ ರೈಲಿನವರೆಗೆ: ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಕೇಂದ್ರ ಬಜೆಟ್ ನಲ್ಲಿ ಸಿಕ್ಕಿದ್ದೇನು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಲೋಕಸಭೆಯಲ್ಲಿ ತಮ್ಮ ಸತತ 9 ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂತಹ ಚುನಾವಣೆ...

ಬಲೂಚಿಸ್ತಾನ: ಭದ್ರತಾ ಕಾರ್ಯಾಚರಣೆಯಲ್ಲಿ 15 ಪಾಕ್ ಸೈನಿಕರು, 92 ಭಯೋತ್ಪಾದಕರು ಸಾವು

ಬಲೂಚಿಸ್ತಾನ ಪ್ರಾಂತ್ಯದ ಸುಮಾರು 12 ಸ್ಥಳಗಳಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಕನಿಷ್ಠ 15 ಪಾಕಿಸ್ತಾನಿ ಸೈನಿಕರು ಮತ್ತು 92 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿರುವುದಾಗಿ ಪಿಟಿಐ ವರದಿ...

ಕೇಂದ್ರ ಬಜೆಟ್ 2026 | ಯಾವುದು ಅಗ್ಗ ಮತ್ತು ಯಾವುದು ದುಬಾರಿ..? 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆಬ್ರವರಿ 1, 2026) ತಮ್ಮ ಒಂಬತ್ತನೇ ಬಜೆಟ್ ಮಂಡಿಸಿದ್ದಾರೆ. ಈ ವರ್ಷದ (2026-27 ಹಣಕಾಸು) ಬಜೆಟ್ ತೀವ್ರಗೊಳ್ಳುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆ, ರೂಪಾಯಿ ಮೌಲ್ಯದಲ್ಲಿ...

ಕೇಂದ್ರ ಬಜೆಟ್ 2026| ರಕ್ಷಣಾ ಇಲಾಖೆಗೆ 7.85 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರದ ಬಜೆಟ್ 2026 ರಲ್ಲಿ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವಲಯಕ್ಕೆ 7.85 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಕಳೆದ ವರ್ಷದ 6.81 ಲಕ್ಷ ಕೋಟಿ ರೂ.ಗಳಿಗಿಂತ ಗಮನಾರ್ಹ...

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...

ಆಕಸ್ಮಿಕವಾಗಿ ಗಡಿ ದಾಟಿದ್ದ 7 ಭಾರತೀಯರನ್ನು ಹಸ್ತಾಂತರಿಸಿದ ಪಾಕಿಸ್ತಾನ

2023 ರ ಪ್ರವಾಹದ ಸಮಯದಲ್ಲಿ ಅಜಾಗರೂಕತೆಯಿಂದ ಗಡಿ ದಾಟಿದ ನಂತರ ಬಂಧಿಸಲ್ಪಟ್ಟ ಏಳು ಭಾರತೀಯ ನಾಗರಿಕರನ್ನು ಪಾಕಿಸ್ತಾನ ಶನಿವಾರ ಸ್ವದೇಶಕ್ಕೆ ವಾಪಸ್ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನ ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನಲ್ಲಿ...